tag:blogger.com,1999:blog-43202596250629030492024-03-13T23:54:06.612+05:30ಅನುರಾಗಅನುರಾಗhttp://www.blogger.com/profile/13411740540409360931noreply@blogger.comBlogger99125tag:blogger.com,1999:blog-4320259625062903049.post-31066087598004353872023-12-11T04:23:00.002+05:302023-12-11T04:27:09.225+05:30ಕಾಡುವ ನೆನಪುಗಳಿಗೂ ಇದೆ ಘಮ<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiqsVTpGz4Wvea_ev2RFYPJ6XbCX7xEcY-6WNG_VWKyZPDLvQOkGUcnNh_75v5nDmS_prmOu_JnQZyhBvVREHWSe9Ye-OcjvZJolZsFJfx0nmQfJFsThLP3b4jSzdg_8R8FyMVjDTgyhmrtxrPyYtXPV5AjZBv1DDodOTlnbNPTUi1cdfCMQjY-0T1zFQWL/s1280/perfume.jpeg" style="margin-left: 1em; margin-right: 1em;"><img border="0" data-original-height="1280" data-original-width="960" height="412" src="https://blogger.googleusercontent.com/img/b/R29vZ2xl/AVvXsEiqsVTpGz4Wvea_ev2RFYPJ6XbCX7xEcY-6WNG_VWKyZPDLvQOkGUcnNh_75v5nDmS_prmOu_JnQZyhBvVREHWSe9Ye-OcjvZJolZsFJfx0nmQfJFsThLP3b4jSzdg_8R8FyMVjDTgyhmrtxrPyYtXPV5AjZBv1DDodOTlnbNPTUi1cdfCMQjY-0T1zFQWL/w309-h412/perfume.jpeg" width="309" /></a></div><br /><p></p><p><br /></p><p><b>ರಜೆ</b> ಇದ್ದಾಗಲೆಲ್ಲ ಹೀಗೆಯೇ..ಅದೆಷ್ಟು ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಆಫೀಸಿಗೆ ಹೋಗದೇ ಇರುವ ದಿನ ಬೇಡವೆಂದರೂ ಬೇಗ ಎಚ್ಚರವಾಗುತ್ತದೆ. ನಾಳೆ ಆಫೀಸು ಇದೆ, ಬೆಳಗ್ಗೆ ಬೇಗ ಏಳಲೇ ಬೇಕು ಎಂದು ಮೊಬೈಲ್ ದೂರ ಇರಿಸಿ ಮಲಗಿಕೊಂಡು ಇನ್ನೇನು ನಿದ್ದೆ ಬಂತು ಅನ್ನುವಾಗ ಮೂಗಿಗೆ ಅಡರಿದ್ದು ಲ್ಯಾವೆಂಡರ್ ಘಮ. ನಿಶ್ಶಬ್ದವಾದ ರಾತ್ರಿಯಲ್ಲಿ ಮೆಲ್ಲನೆ ತಿರುಗುವ ಫ್ಯಾನ್. ಒಂದು ಕಣ್ಣು ಮಿಟುಕಿಸಿದಂತೆ ಉರಿಯುತ್ತಿರುವ ಗುಡ್ ನೈಟು ಅದರ ನಡುವೆ ಈ ಲ್ಯಾವೆಂಡರ್ ಸುವಾಸನೆ. ಇದೆಲ್ಲಿಂದ ಘಂ ಅನ್ನಿಸಿತು ಎಂದು ನೋಡಿದಾಗ ರೂಂ ಫ್ರೆಶ್ನರ್ ಪಾಕೆಟ್, ಬೆಡ್ ಪಕ್ಕ ಬಿದ್ದಿತ್ತು. ಅದೆನ್ನೆತ್ತಿ ಅದಿಡುವ ಸ್ಥಳದಲ್ಲಿ ನೇತು ಹಾಕಿ ಮತ್ತೆ ಮಲಗಲು ಪ್ರಯತ್ನಿಸಿದೆ. ಊಹೂಂ ಎಲ್ಲಿ ಬರುತ್ತೆ ನಿದ್ದೆ?</p><p>ಅಂದ ಹಾಗೆ ಪರಿಮಳಕ್ಕೂ ನನಗೂ ಬಾರೀ ನಂಟು. ಪಿಜಿಯಲ್ಲಿದ್ದಾಗ ನಾಲ್ಕನೇ ಫ್ಲೋರಿನ ರೂಮಿನಿಂದಲೇ ಬೆಳಗ್ಗಿನ ತಿಂಡಿ ಏನು ಎಂಬುದನ್ನು ಅರಿಯುತ್ತಿದ್ದ ಚುರುಕು ಮೂಗು. ನಮ್ಮಮ್ಮನಿಗೂ ಹಾಗೆಯೇ ಮೂಗಿಗೆ ಸ್ಮೆಲ್ ಬಡಿಯುವುದು ಬಾರೀ ಬೇಗ. ಅಮ್ಮ ಸ್ಮೆಲ್ ನೋಡಿಯೇ ಅಡುಗೆ ಚೆನ್ನಾಗಿದೆಯೋ ಇಲ್ಲವೋ, ಯಾವ ಪದಾರ್ಥ ಜಾಸ್ತಿ ಆಗಿದೆ ಎಂಬುದನ್ನು ಹೇಳಿ ಬಿಡುತ್ತಿದ್ದರು. ಅಡುಗೆಯಲ್ಲಿ ಏನು ಹೆಚ್ಚು ಕಮ್ಮಿ ಆಗಿದೆ ಎಂದು ರುಚಿ ನೋಡದೇ ಬರೀ ಸ್ಮೆಲ್ ನಿಂದಲೇ ಪತ್ತೆ ಹಚ್ಚುವಂಥಾ ಸಾಮರ್ಥ್ಯ ನನ್ನ ಮೂಗಿಗೆ ಇಲ್ಲವಾದರೂ ಪರಿಮಳದ ವಿಷಯದಲ್ಲಿ ತುಸು ಪ್ರೀತಿ ಜಾಸ್ತಿ ನನಗೆ. ಡಿಸೆಂಬರ್ ತಿಂಗಳಲ್ಲಿ ದೂರದಿಂದ ಕೇಳಿಬರುವ ಭಕ್ತಿ ಗೀತೆಯೊಂದಿಗೆ ಮೂಗಿದೆ ಅಡರುವ ನಮ್ಮೂರಿನ ಘಮ ಅಂದರೆ ಅಯ್ಯಪ್ಪ ಸ್ವಾಮಿಯ ಭಸ್ಮ, ಅರವಣ ಪಾಯಸ. ಊರು ಬಿಟ್ಟು ದೂರದೂರಲ್ಲಿರುವಾಗ ಇಂಥಾ ಸ್ಮೆಲ್ ಗಳು ಮೂಗಿಗೆ ಬಡಿದರೆ ಊರು ಕಾಡುತ್ತದೆ. ತವರು ಮನೆಯಲ್ಲಿ ಬೆಳಗ್ಗೆ ನೀರು ದೋಸೆ ,ತೆಂಗಿನಕಾಯಿ ಚಟ್ನಿಯ ಪರಿಮಳ, ಇಂಗು ಒಗ್ಗರಣೆ, ಮೀನು ಫ್ರೈ ಮಾಡುವಾಗ ಬರುವ ಸ್ಮೆಲ್ , ಕೊಟ್ಟಿಗೆಯಿಂದ ಬರುವ ಸೆಗಣಿ ವಾಸನೆ, ಅಪ್ಪನ ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಲೋಶನ್ ಪರಿಮಳ, ಅಣ್ಣನ ಆಟೋ ಸ್ಟಾರ್ಟ್ ಆಗುವಾಗ ಘಂ ಅನ್ನುವ ಪೆಟ್ರೋಲ್ ವಾಸನೆ ಎಲ್ಲವೂ ನಾಸ್ಟಾಲ್ಜಿಯಾ. </p><p>ಬಾಲ್ಯದ ನೆನಪುಗಳ ಪುಟ ತಿರುವಿದರೆ ಆ ಪುಟಗಳಲ್ಲಿಯೂ ಗಂಧವಿದೆ. ಊರಿನ ಮಳೆ, ಮನೆಯಲ್ಲೇ ಅರೆಯುವ ಶ್ರೀಗಂಧ, ಅಜ್ಜಿ ಮನೆಯ ಹಮಾಮ್ ಸೋಪಿನ ಪರಿಮಳ, ಸಂಬಂಧಿಕರು ಗಲ್ಫ್ ನಿಂದ ತಂದು ಕೊಟ್ಟ ಅತ್ತರ್, ಹೊಸ ಬಟ್ಟೆ, ಹೊಸ ಪುಸ್ತಕದ ಸುಗಂಧ,ಪಟಾಕಿಯ ಘಂ ಅನ್ನೋ ವಾಸನೆ, ಕೋಳಿ, ನಾಯಿ ಗೂಡಿನ ವಾಸನೆ. ಹಾಗೆಯೇ ಮಳೆಗಾಲದಲ್ಲಿನ ಕೆಸರು ವಾಸನೆ, ಒದ್ದೆ ಬಟ್ಟೆಯ ವಾಸನೆ, ಗೊಬ್ಬರದ ವಾಸನೆ ಹೀಗೆ ಅದೆಷ್ಟು ಸ್ಮೆಲ್ ಗಳನ್ನು ಈ ಮೂಗು ನೆನಪಿಸಿಕೊಳ್ಳುತ್ತದೆ ಅಲ್ವಾ..</p><p>ಅಪ್ಪನ ಸಿಗರೇಟಿನ ವಾಸನೆ..ನಾನು ಚಿಕ್ಕವಳಿದ್ದಾಗ ಅಪ್ಪನ ಜತೆ ಅಂಟಿಕೊಂಡಿದ್ದು ಸಿಗರೇಟಿನ ವಾಸನೆ ಆಗಿತ್ತು. ನನಗೆ 10-11ರ ಹರೆಯ, ಅಷ್ಟೊತ್ತಿಗೆ ಅಪ್ಪ ಸಿಗರೇಟು ಬಿಟ್ಟಿದ್ದರು. ಆದರೆ ಆ ಸಿಗರೇಟಿನ ವಾಸನೆ ನನ್ನ ಮೂಗಲ್ಲಿ ಇನ್ನೂ ಇದೆ ಎಂದು ಅನಿಸುತ್ತಿರುತ್ತದೆ. ಸೀಗೆಕಾಯಿಯ ಘಮವಿತ್ತು ಅಮ್ಮನ ಕೂದಲಿಗೆ. ಆ ಮುಡಿಯಲ್ಲಿ ಹೂವು ತಪ್ಪುತ್ತಿರಲಿಲ್ಲ, ಒಂದೇ ಒಂದು ಮಲ್ಲಿಗೆಯಾದರೂ ಆ ತುರುಬಿನಲ್ಲಿರುತ್ತಿತ್ತು. ಆ ಮಲ್ಲಿಗೆಯ ಘಮದಲ್ಲಿ ಅಮ್ಮ ನೆನಪಾಗಿ ಉಳಿದು ಬಿಟ್ಟರು. </p><p>ನಾನು ಮೊದಲು ಕೆಲಸಕ್ಕೆ ಸೇರಿದಾಗ ಇಂಟರ್ ವ್ಯೂಗೆ ಕುಳಿತ ರೂಮಿನಲ್ಲಿ ಒಂದು ಘಮವಿತ್ತು. ಅದೂ ಲ್ಯಾವೆಂಡರ್ ಘಮ. ಹೀಗೆ ಒಂದೊಂದು ಕಡೆ ಹೋದಾಗ ತಕ್ಷಣಕ್ಕೆ ಮೂಗಿಗೆ ಅಡರುವ ಪರಿಮಳ/ವಾಸನೆ ಹಲವು ನೆನಪುಗಳೊಂದಿಗೆ ನನ್ನ ಜತೆ ಇರುತ್ತವೆ. ಇಂಥಾ ನೆನಪುಗಳಲ್ಲಿ ಹೆಚ್ಚಿನದ್ದು ಹೃದಯಕ್ಕೆ ಹತ್ತಿರವಾದವುಗಳು. ಕೆಲವು ಮೊದಲ ಅನುಭವಗಳನ್ನು ಮತ್ತಷ್ಟು ಮಧುರವಾಗಿಸಿದ್ದೂ ಕೂಡಾ ಇಂಥಾ ಪರಿಮಳಗಳೇ. </p><p>ತಮಾಷೆಯ ಸಂಗತಿ ಏನು ಗೊತ್ತಾ.ಇಂಥಾ ಪರಿಮಳ ಕಾಡಿದಾಗ ಅದು ಇಂಥಾ ಘಮ ಎಂದು ಇನ್ನೊಬ್ಬರಿಗೆ ವಿವರಿಸಿ ಹೇಳುವುದು ಕಷ್ಟ. ಪ್ರತಿಯೊಂದು ಪರಿಮಳವೂ Unique ಆಗಿರುತ್ತದೆ. ಅದು ಮೈಗೆ ಹಚ್ಚುವ ಕ್ರೀಮ್ ಅಥವಾ ಪರ್ಫ್ಯೂಮ್, ಸೋಪ್ ಅಥವಾ ಬೆವರೇ ಆಗಿರಲಿ ಅದು ಒಂದು ಐಡೆಂಟಿಟಿ, ಅದು ಆ ವ್ಯಕ್ತಿಯ ಜತೆಗಿನ ನೆನಪು ಕೂಡ. ನಮಗೆ ಆಪ್ತರಾಗಿರುವವರ ಪರ್ಫ್ಯೂಮ್ ಸ್ಮೆಲ್ ನಿಂದಲೇ ನಾವು ಅವರು ಇರುವಿಕೆಯನ್ನು ಫೀಲ್ ಮಾಡಿಕೊಳ್ಳಬಹುದು. ಪರಿಮಳ, ಘಮ, ಸ್ಮೆಲ್, ವಾಸನೆ ಏನೇ ಅನ್ನಿ..ಇವೆಲ್ಲವೂ ನನ್ನ ನೆನಪು, ಅನುಭವಗಳೊಂದಿಗೆ ಮಿಳಿತವಾಗಿರುವಂಥದ್ದು. ಹಾಗಾಗಿ ಬದುಕಿನ ಮಧುರ ಘಟನೆಗಳನ್ನು ನಾನು ಸ್ಮೆಲ್ ಜತೆ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ. ಹೌದು..ನಾನು ಕಾಪಿಟ್ಟ ನೆನಪುಗಳಿಗೆ ಘಮವಿದೆ.</p><div><br /></div>ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-59776654786579583572023-12-02T16:13:00.005+05:302023-12-02T16:15:43.009+05:30ಮತ್ತೆ ಬ್ಲಾಗ್ ಬಾಗಿಲು ತೆರೆದಿದ್ದೇನೆ...<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgTuO7lGd49oxy6lKNemSdKdgYRdZ18nF14fg_VzHRsX1ZqyezRKKjW9uMC3eUxIy0hCWuaFP3FS1yA9u-sLxYBdbHaXwOF5bjUEyXBAnZI3y4st0s5L6bwmbuAeP2LxxzVDzuqxKJuifmKuoEccHyMuPFCM2dJ2NdmzhWVvRAcJwFip_hmzONLV4Xb7CgS/s1280/Flower.jpeg" style="margin-left: 1em; margin-right: 1em;"><img border="0" data-original-height="1280" data-original-width="960" height="400" src="https://blogger.googleusercontent.com/img/b/R29vZ2xl/AVvXsEgTuO7lGd49oxy6lKNemSdKdgYRdZ18nF14fg_VzHRsX1ZqyezRKKjW9uMC3eUxIy0hCWuaFP3FS1yA9u-sLxYBdbHaXwOF5bjUEyXBAnZI3y4st0s5L6bwmbuAeP2LxxzVDzuqxKJuifmKuoEccHyMuPFCM2dJ2NdmzhWVvRAcJwFip_hmzONLV4Xb7CgS/w300-h400/Flower.jpeg" width="300" /></a></div><br /><div><br /></div><div><br /></div><b>ಬದುಕು</b> ಆ ಕ್ಷಣಕ್ಕೆ ಖಾಲಿ ಖಾಲಿ ಅನಿಸಿಬಿಡುತ್ತದೆ.ಗುರುವೋ ಗುರಿಯೋ ಇಲ್ಲದಂತೆ ಕಾಣುತ್ತದೆ.ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂಬ ಯಾವುದೇ ನಿರ್ಧಾರವಿಲ್ಲದೆ ಅದೊಂದು ಪಯಣ.ಕುಟುಂಬದಲ್ಲಿನ ಆಪ್ತರ ಅಗಲಿಕೆ ಬದುಕನ್ನು ನಲುಗಿಸಿ ಬಿಟ್ಟಿತ್ತು. ಒಂದಷ್ಟು ದಿನ ಅತ್ತು ಮತ್ತೆ ಕಣ್ಣೀರು ಒರೆಸಿ ನಿತ್ಯ ಕಾಯಕಕ್ಕೆ. ಎಲ್ಲ ನೋವುಗಳನ್ನು ನುಂಗಿ ನಗುವುದೆಷ್ಟ ಕಷ್ಚ. ಮನೆಯಲ್ಲಿ ಸೂತಕದ ಛಾಯೆ. ಎಲ್ಲರ ಮುಖದಲ್ಲೂ ದುಃಖ ,ಅವರಲ್ಲಿ ನನ್ನ ದುಃಖವನ್ನು ತೋಡಿಕೊಳ್ಳುವುದಾದರೂ ಹೇಗೆ? ಈ ಬದುಕು ನಶ್ವರ, ಹುಟ್ಟಿದವರು ಒಂದು ದಿನ ಸಾಯಲೇ ಬೇಕು ಎಂಬುದು ನಿತ್ಯ ಸತ್ಯ. ಆದರೆ ಸಾವು ಅದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ಕೆಲಸದಲ್ಲಿ ತಲ್ಲೀನರಾಗಿದ್ದು ಬಿಟ್ಟರೆ ನೋವು ಗೊತ್ತಾಗುವುದಿಲ್ಲ. ಆದರೆ ಅದರ ನಡುವೆ ಸಿಕ್ಕ ಗ್ಯಾಪ್ ನಲ್ಲಿ ಆ ಸಾವು-ನೋವು ಚುಚ್ಚಿ ಬಿಡುತ್ತದೆ. ಇವತ್ತು ನಮ್ಮ ಜತೆ ಇದ್ದವರು ಮತ್ತೆ ಇಲ್ಲ, ಅವರು ತಿರುಗಿ ಬರುವುದೇ ಇಲ್ಲ ಎಂದು ಮನಸ್ಸಿಗೆ ಹೇಳುತ್ತಾ ಇದ್ದರೂ ಕಾಯುವಿಕೆ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ. <div><br /></div><div> ಈ ಜಗತ್ತೇ ಬೇಡ ಎಂದು ಕಿರುಚಿ ಹೇಳುವುದೋ, ಈ ಬದುಕು ಸಾಕಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುವುದೋ...ಇದನ್ನು ಗೊಂದಲವೆನ್ನಲೋ ಮನಸ್ಸಿನ ನೋವು ಎನ್ನಲೋ. ಕತ್ತಲೆ ಕೋಣೆಯೊಂದರಲ್ಲಿ ನನ್ನನ್ನು ಬಂಧಿಸಿಟ್ಟ ಸ್ಥಿತಿ. ಕಿರುಚಿದ್ದು, ಅತ್ತಿದ್ದು ಕೂಗಿದ್ದು ಯಾರಿಗೂ ಕೇಳಿಸುವುದೇ ಇಲ್ಲ.. ಯಾಕೆಂದರೆ ಈ ಎಲ್ಲ ನೋವುಗಳು ಹೊರಗಿನ ಜಗತ್ತಿಗೆ ತೋರಿಸಿಕೊಂಡೇ ಇಲ್ಲ. ಮನಸ್ಸನ್ನು ಬೇರೆಡೆಗೆ ಕೇಂದ್ರೀಕರಿಸಲು ಅದೆಷ್ಟು ಕಸರತ್ತು. ಕಿವಿಗೆ ಹೆಡ್ ಫೋನ್ ಸಿಕ್ಕಿಸಿ ಹಾಡು ಕೇಳಿದ್ದಾಯ್ತು, ಪುಸ್ತಕಗಳನ್ನು ತಿರುವಿ ಹಾಕಿದ್ದು,ಸಿನಿಮಾ ನೋಡಿದ್ದು ಯಾವುದೂ ಮನಸ್ಸಿಗೆ ಸಮಾಧಾನ ಕೊಡುತ್ತಿಲ್ಲ. </div><div><br /></div><div><div class="separator" style="clear: both; text-align: center;"><br /></div>ಒಂದಷ್ಟು ಹೊತ್ತು ಮನಸ್ಸು ತೆರೆದು ಮಾತಾಡಬೇಕು. ಯಾರಲ್ಲಿ ಮಾತನಾಡಲಿ? ಅಲ್ಲೀಯೂ ಖಾಲಿತನ, ಕಾಡುವ ಒಂಟಿತನ
ಹೇಳಬೇಕಾದ ಮಾತುಗಳನ್ನು ನಾನೇ ತಡೆದು ನಿಲ್ಲಿಸಿದ್ದೇನೆ. ಒಂದು ಹೊತ್ತು ಮಾತನಾಡಲು ಹಂಬಿಲಿಸದ ಮನಸ್ಸು ಇನ್ನೊಂದು ಹೊತ್ತು ಮೌನವೇ ಸಾಕು ಎಂದು ರಚ್ಚೆ ಹಿಡಿದು ಕೂರುತ್ತದೆ. ಯಾರ ಸಾಮಿಪ್ಯ, ಸಾಂಗತ್ಯವೂ ಸಮಾಧಾನ ಕೊಡುವುದಿಲ್ಲ.<br /><br />ಒತ್ತರಿಸಿ ಬರುವ ನೆನಪುಗಳು ಕಣ್ಣೊದ್ದೆ ಮಾಡುವಾಗ ನನ್ನ ಮೇಲೆಯೇ ಸಿಟ್ಟು ಬರುತ್ತದೆ.ಯಾಕೆ ನಾನು ಹೀಗೆ ಎಂದು ಬಹಳಷ್ಟು ಬಾರಿ ಅನಿಸಿದ್ದು ಇದೆ. This too shall pass ಎಂದು ನನಗೇ ನಾನು ಹೇಳಿಕೊಳ್ಳುತ್ತೇನೆ. ಎದೆ ಮೇಲೆ ಕೈಯಿಟ್ಟು ಆಲ್ ಈಸ್ ವೆಲ್ ಎಂದು ಹೇಳುವಾಗಲೂ ಆ ಕಾನ್ಫಿಡೆನ್ಸ್ ಬರುತ್ತಿಲ್ಲ. ಎಲ್ಲವೂ ಶೂನ್ಯ ಎಂದು ಮುದುಡಿ ಕೂತು ಕಣ್ಣೀರು ಹಾಕಿ ಸುಸ್ತಾದಾಗ ನಾನೇ ಎದ್ದೇಳುತ್ತೇನೆ, 0 ಹತ್ತಿರ 1 ಎಂದು ಬರೆದು 10 ಎಂದು ಓದುತ್ತೇನೆ. ಬದುಕು ಪಾಠ ಕಲಿಸುತ್ತಲೇ ಇರುತ್ತದೆ.ಎಡವಿ ಬೀಳುತ್ತಾ ಕಲಿಕೆ ಮುಂದುವರಿದಿದೆ.ಎಷ್ಟೋ ವರ್ಷಗಳಿಂದ ತಿರುಗಿಯೂ ನೋಡದ ಬ್ಲಾಗ್ ಮತ್ತೆ ಜೀವಂತವಾಗುತ್ತಿದೆ.ಮತ್ತೆ ಬರೆಯಬೇಕು ಎಂದು ಮನಸ್ಸು ಬಯಸಿದಾಗ...ಮತ್ತೆ ಇಲ್ಲಿ ಬಂದು ಬಾಗಿಲು ತೆರೆದಿದ್ದೇನೆ.
</div>ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-44106971225126940432015-12-12T16:22:00.001+05:302015-12-12T16:23:56.565+05:30ನಾನೆಂಬ ಸ್ತ್ರೀ<div class="separator" style="clear: both; text-align: center;"><a href="http://2.bp.blogspot.com/-feNvAtpHVlo/Vmv68-blHzI/AAAAAAAABYU/UD_JvzZWzLk/s1600/151027kpn80.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://2.bp.blogspot.com/-feNvAtpHVlo/Vmv68-blHzI/AAAAAAAABYU/UD_JvzZWzLk/s320/151027kpn80.jpg" /></a></div>
<b>ನಾ</b>ನೆಂಬ ಸ್ತ್ರೀ</br>
<br>ನನ್ನೊಳಗಿನ ಅಗ್ನಿಕುಂಡದಲ್ಲುರಿದು</br>
<br>ಆಹುತಿಯಾಗಲಾರೆ</br>
<br>ಜ್ವಲಂತ ವಿಚಾರಗಳನ್ನೆಲ್ಲಾ</br>
<br>ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ</br>
<br>ಜೋಡಿಸಿಟ್ಟಿದ್ದೀನಿ</br>
<br>ಬಿಕ್ಕಳಿಸುತ್ತಾ ವಿಕಸಿತವಾಗುವ </br>
</br>ಮಣ್ಣಲ್ಲಿ</br>
</br>ನಿದಿರೆಗೆ ಜಾರುವಾಗಲೂ </br>
</br>ಬೆಳಕೆಂಬ ಅಮ್ಮ</br>
</br>ನಂದಾದೀಪವಾಗಿ ಉರಿಯುತಿರಲು</br>
<br>ಹುತ್ತರಿ ತೆನೆ ಗದ್ದೆಗಳ</br>
<br>ಪುಣ್ಯ ಭೂಮಿಯಲಿ</br>
<br>ಬೆಳೆಯುವ ಕ್ರಾಂತಿ ಬೀಜವನು</br>
<br>ಅವಳು ಬಿತ್ತುತ್ತಿದ್ದಾಳೆ</br>
<br>
</br>
<br>ನೀನಿನ್ನು ಮೈಕೊಡವಿ</br>
<br>ಎದ್ದು ಬಾ</br>
<br>ಅಂಧಕಾರದ ಆತ್ಮವೊಂದು ಕರೆಯುತ್ತಿದೆ</br>
<br>
</br>
<br>ಬಂಧನದ ಸರಪಳಿ</br>
<br>ನೋವಿನ ವೇಷಗಳನ್ನು ಕಿತ್ತೆಸೆದು</br>
</br>ಅವಳು ಮುಗುಳ್ನಕ್ಕಳು</br>
<br>
</br>
<br>ದೀರ್ಘ ಶಾಂತ ನಿಗೂಢ</br>
<br>ಜೋಕಾಲಿಯಲಿ ನಿದ್ರಿಸಿದ್ದ</br>
<br>ಬೆಳಗು ಕಿರಣಗಳು ಎಚ್ಚೆತ್ತು</br>
<br>ಮೌನಿ ಮುಕ್ತಿ ಕುಟೀರದ </br>
<br>ನೆತ್ತಿಯಲ್ಲುರಿದು ಕರಗಿ</br>
<br>ಅಗ್ನಿ ಜ್ವಾಲೆಯಾಗಿ</br>
<br>ಧಗಧಗಿಸಿದವು...</br>
<br>
</br>
(ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ)
(ಚಿತ್ರ ಕೃಪೆ: ಕೆಪಿಎನ್)ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-8820622870263213232015-05-14T15:26:00.000+05:302015-05-14T15:26:01.662+05:30ಮರಳಲ್ಲಿ ಬರೆದ ಸಾಲುಗಳು<div class="separator" style="clear: both; text-align: center;"><a href="http://3.bp.blogspot.com/-eRX7fmZnsHg/VVRwbP-bzuI/AAAAAAAABSg/AMyqiJoS-rw/s1600/sad.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://3.bp.blogspot.com/-eRX7fmZnsHg/VVRwbP-bzuI/AAAAAAAABSg/AMyqiJoS-rw/s320/sad.jpg" /></a></div><b>ನೀ</b>ನು ಅಂತರಾತ್ಮದ ಕರೆಗೆ
<br>ಓಗೊಟ್ಟು ಹೊರ ನಡೆದಾಗ</br>
<br>ಕಡಲತಡಿಯಲ್ಲಿ ಏಕಾಂತದ</br>
ನಿಟ್ಟುಸಿರು
<br>
</br>
<br>ಪ್ರೀತಿಯ ಆಲಿಂಗನವ ಬಯಸಿದ</br>
<br>ಎಳೆ ಮೈಗೆ ಉಪ್ಪು ನೀರಿನ ಸಿಂಚನ</br>
<br>ತನ್ನೊಳಗಿರುವ ಚಿಪ್ಪಿನೆಡೆಯಲಿ</br>
<br>ಅಡಗಿ ಕುಳಿತಿರುವ ಮುತ್ತು</br>
<br>ಹೊರಬರಲು ಕಾಯುವ ವೇಳೆ</br>
<br>ಏಕಾಂತದಲೊಂದು ಬಯಕೆ</br>
<br>
</br>
ನಿನ್ನೊಡಲಿಗೆ ಬರಲೆ?
<br>
</br>
<br>ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ</br>
<br>ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು</br>
<br>
</br>
<br>ಅಮ್ಮನಂತಿರುವ ಕಡಲು</br>
<br>ಬೇಡವೆನ್ನುವುದಿಲ್ಲ ನನ್ನನ್ನೂ</br>
<br>
</br>
<br>ಈ ಬಂಧನವ ಕಳಚಿ</br>
<br>ಸಾಧಿಸುವುದೇನು ಬಂತು?</br>
<br>
</br>
<br>ಒಂದೊಂದು ಹೆಜ್ಜೆಯಲೂ</br>
<br>ಕಂಬನಿಯ ಕತೆಗಳ ಅಳಿದುಳಿದ ಸಾಲು</br>
<br>ಹರಿದು ಹಾಕಿದ ಪುಟಗಳಲಿ</br>
<br>ನೆನಪುಗಳ ಕುರುಹು</br>
<br>
</br>
<br>ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು</br>
<br>ಪ್ರೀತಿಯನು ಚಿಮ್ಮಿಸಿ</br>
<br>ಮುಳುಗಿ ಹೋಗುತಿದೆ</br>
<br>
</br>
<br>ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ</br>
<br>ಅಲೆಗಳಲಿ ಒಂದಾಗುತ್ತಾ ಮಾಯವಾದಾಗ</br>
<br>
</br>
<br>ಏಕಾಂತದ ಕೋಟೆಯಲಿ</br>
<br>ನಾನು ಸ್ವತಂತ್ರಳಾಗುತ್ತಿದ್ದೆ</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-27854952439749793122015-03-11T12:59:00.000+05:302015-03-11T12:59:22.817+05:30ಹಸಿವು<div class="separator" style="clear: both; text-align: center;"><a href="http://1.bp.blogspot.com/-a0DXdmORiTE/VP_uB-iBceI/AAAAAAAABQ8/dUNwvOgeoUk/s1600/hunger_hands.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://1.bp.blogspot.com/-a0DXdmORiTE/VP_uB-iBceI/AAAAAAAABQ8/dUNwvOgeoUk/s320/hunger_hands.jpg" /></a></div>
<br>ಹಸಿವಿನ ಸುಖ, ಪ್ರಣಯದ ನೋವು</br>
<br>ಅಸ್ತಮಿಸಿದ ಹೊತ್ತು</br>
<br>ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು</br>
<br>ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು</br>
<br>ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ</br>
<br>
</br>
<br>ನನಗೇನೂ ಕೊಡಲು ಬಯಸದವರು</br>
<br>ನನ್ನಿಂದ ಪಡೆಯಲಿಚ್ಛಿಸದವರು</br>
<br>ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ</br>
<br>ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು</br>
<br>
</br>
<br>ಎಲ್ಲವನ್ನೂ ಕೂಡಿಸಿ, ಕಳೆದು</br>
<br>ಗುಣಿಸಿ, ಭಾಗಿಸಿದ ದೇಹಗಳು</br>
<br>ನನ್ನ ಹಾದು ಹೋದವು</br>
<br>ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ </br>
<br>ನೋಡಿ ನನಗೆ ಅಚ್ಚರಿ!</br>
<br>ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ</br>
<br>
</br>
<br>ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ
<br>ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ</br>
<br>ನಾನಾರೆಂದು ಕೇಳಲು </br>
<br>ಯಾರೂ ಇಲ್ಲದ ಬೀದಿಯಲಿ</br>
<br>ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು</br>
<br>
</br>
<br>ಗಹಗಹಿಸಿ ನಕ್ಕು ನನ್ನ ಸೋಕಿದ</br>
<br>ಬರಡು ಭೂಮಿಯ ಉಷ್ಣ ಗಾಳಿ</br>
<br>ದೇಹವನು ಗೀರಿ ರಕ್ತ ಹರಿಸಿದಾಗ</br>
<br>ಆ ರಕ್ತಕ್ಕೆ ಗಂಧವಿರಲಿಲ್ಲ..</br>
<br>ಹೀಗೂ ಇರಬಹುದೆ?</br>
<br>
</br>
<br>ದೇಹ ದಣಿದಿತ್ತು, </br>
<br>ನಿದ್ರಿಸಲು ರಾತ್ರಿಯನ್ನರಸಿದೆ</br>
<br>ಬೆಳಕಿನ ಕಿರಣಗಳು ವಕ್ರೀಭವನಗೊಂಡ </br>
<br>ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ </br>
<br>
</br>
<br>ನೆರಳು ಬಯಸಿ, ಓಡುವ ಮರಗಳ ಹಿಂದೆ</br>
<br>ಓಡಿ ಹೋಗುತ್ತಿರುವ ನೆರಳುಗಳ ಹಿಂದೆ</br>
<br>ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ!</br>
<br>
</br>
<br>ಕುಸಿದು ಬಿದ್ದ ನನ್ನ ದೇಹ</br>
<br>ಆ ಭೂಮಿಗೂ ಬೇಡವಾಗಿತ್ತು</br>
<br>ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು</br>
<br>ಮತ್ತೆ ಹೊರಟು ನಿಂತಿದ್ದೇನೆ</br>
<br>ಗಮ್ಯದ ಅರಿವಿಲ್ಲದೆ..ದೂರ..ದೂರ</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-76752397761809735792014-12-03T10:59:00.000+05:302014-12-03T10:59:19.216+05:30 ಸ್ಟೇಟಸ್ ? 35 ಸಿಂಗಲ್
<a href="http://2.bp.blogspot.com/-XLpJ_QpQ648/VH6enHpdJdI/AAAAAAAABOo/mgqrgNA3NK0/s1600/single.jpg" imageanchor="1" ><img border="0" src="http://2.bp.blogspot.com/-XLpJ_QpQ648/VH6enHpdJdI/AAAAAAAABOo/mgqrgNA3NK0/s320/single.jpg" /></a><br>ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ?</br>
<br>ಹೇಳಿ...</br>
<br>ನಿಮಗೆ ಬಾಯ್ ಫ್ರೆಂಡ್ ಇಲ್ವಾ?</br>
<br>ಯಾಕೆ?</br>
<br>ಸುಮ್ನೆ...ಕೇಳಿದ್ದು ಅಷ್ಚೇ...</br>
<br>ಹ್ಮ್...</br>
<br>ನಿಮ್ದು ಲವ್ ಫೈಲ್ಯೂರಾ?</br>
<br>ಯಾಕೆ?</br>
<br>ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ..</br>
<br>ಹಾಗೇನಿಲ್ಲ...</br>
<br>ಓಕೆ</br>
<br>ಇಂಥಾ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಇನ್ ಬಾಕ್ಸಲ್ಲಿ ಒಕ್ಕರಿಸಿ ಬಿಡುತ್ತವೆ. ಫೇಸ್ ಬುಕ್ ನಲ್ಲಿರೋ ಕೆಲವರಿಗೆ ರಿಲೇಷನ್ ಶಿಪ್ ಸ್ಟೇಟಸ್ ನಲ್ಲಿ ಸಿಂಗಲ್ ಅನ್ನೋ ಪದದ ಮೇಲೆಯೇ ಕಣ್ಣು. ಕೆಲವರಂತೂ ನಿಮಗೆ ಅಫೇರ್ ಏನೂ ಇಲ್ವಾ? ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಬರೀ ಫೇಸ್ ಬುಕ್ನಲ್ಲಷ್ಟೇ ಪರಿಚಯವಿರುವ ವ್ಯಕ್ತಿ ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಕಿರಿ ಕಿರಿ ಅನಿಸಿದರೆ ಏನು ಮಾಡುವುದು? ಉತ್ತರ ಸಿಂಪಲ್ ..ಬ್ಲಾಕ್!</br>
<br>ಅಂದ ಹಾಗೆ ಹುಡುಗಿಯರ ರಿಲೇಷನ್ ಶಿಪ್ ಸ್ಟೇಟಸ್ ಗಳಲ್ಲಿ ಈ ಸಿಂಗಲ್' ಅನ್ನೋದು ಕುತೂಹಲದ ಮೂಟೆ. ಮದ್ವೆ ಆಗದೇ ಸಿಂಗಲ್ ಆಗಿರೋ ಹುಡುಗಿ ಒಂದೆಡೆಯಾದರೆ, ಸಂಬಂಧದಿಂದ ಹೊರ ಬಂದವಳು ಇನ್ನೊಂದೆಡೆ. ಇಲ್ಲಿ ಇಬ್ಬರೂ ಸಿಂಗಲ್ ಹುಡ್ಗೀರೇ. ಇಬ್ಬರ ಜೀವನಾನುಭವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.ಆದಾಗ್ಯೂ, ಒಬ್ಬ ಹುಡುಗನನ್ನು ನೋಡಿದಾಗ ಇವರಿಬ್ಬರ ಮನಸ್ಸಿನಲ್ಲಿ ಮೂಡುವ ಪ್ರೇಮದ ಭಾವನೆಗಳು ಒಂದೇ ರೀತಿಯದ್ದಾಗಿದ್ದರೂ, ಅದನ್ನು ಸ್ವೀಕರಿಸುವ ವ್ಯಕ್ತಿ ಇದ್ದಾನಲ್ಲಾ...ಅವನ ಭಾವನೆ ಇಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಅವನೊಳಗಿನ ಪೋಲಿ ಮನಸ್ಸು ಒಂದು ಫ್ರೆಶ್ ಇನ್ನೊಂದು....ಎಂಬ ಲೆಕ್ಕಾಚಾರದಲ್ಲೇ ಆಕೆಯೊಂದಿಗೆ ಬೆರೆಯಲು ಹವಣಿಸುತ್ತಾನೆ. </br>
<br>ಪ್ರೀತಿಯ ವಿಷಯ ಬಂದಾಗ ಮದ್ವೆಯಾಗಿರದ ಹುಡುಗಿಯ ಪ್ರೇಮ ಒಂದು ರೀತಿಯದ್ದಾಗಿದ್ದರೆ, ಮದ್ವೆಯಾಗಿ ಅದರಿಂದ ಹೊರಬಂದವಳ ಪ್ರೇಮ ಇನ್ನೊಂದು ರೀತಿಯದ್ದಾಗಿರುತ್ತದೆ ಎಂದಿದ್ದ ಗೆಳೆಯ. ಪ್ರೀತಿಯಲ್ಲಿಯೂ ಅಂಥಾ ವ್ಯತ್ಯಾಸವುಂಟಾ? ಎಂದು ಕೇಳಿದ್ದೆ. ಹೂಂ ಮದ್ವೆಗೆ ಮೊದಲು ಹುಟ್ಟುವ ಪ್ರೀತಿಯೂ, ಮದ್ವೆಯ ನಂತರ ಹುಟ್ಟುವ ಪ್ರೀತಿಯಲ್ಲಿಯೂ ವ್ಯತ್ಯಾಸವಿರುತ್ತದೆ. ಮೊದಲನೆಯ ಕೇಸ್ ನಲ್ಲಿ ಹುಡುಗಿಯ ಕೈಯಲ್ಲಿ ಬಣ್ಣ ತುಂಬದ ಚಿತ್ರ ಮಾತ್ರ ಇರುತ್ತದೆ. ಅದಕ್ಕೆ ಯಾವ ಬಣ್ಣ ತುಂಬಲಿ ಎಂದು ಆಕೆ ಯೋಚಿಸುತ್ತಾಳೆ. ತನಗಿಷ್ಟವಾದ ಬಣ್ಣವನ್ನು ತುಂಬಿ ಖುಷಿ ಪಡುತ್ತಾಳೆ . ಆದರೆ ಎರಡನೇ ಕೇಸ್ ನಲ್ಲಿ ಚಿತ್ರಕ್ಕೆ ಬಣ್ಣ ತುಂಬಿದ ನಂತರ ಆ ಚಿತ್ರಕ್ಕೆ ಈ ಬಣ್ಣ ಒಪ್ಪುತ್ತಿಲ್ಲ ಎಂಬ ಅಸಮಾಧಾನದಿಂದ ಆ ಬಣ್ಣವನ್ನು ಅಳಿಸಿ ಇನ್ನೊಂದು ಬಣ್ಣವನ್ನು ತುಂಬುವ ಪ್ರಯತ್ನ ಮಾಡುವ ಹುಡುಗಿ ಇರುತ್ತಾಳೆ. ಈವಾಗ ಆಕೆಗೆ ಗೊತ್ತಿದೆ ಯಾವ ಬಣ್ಣ ತುಂಬಬೇಕೆಂಬುದು! ಯಾವ ಬಣ್ಣವನ್ನು ಎಲ್ಲೆಲ್ಲಿಗೆ ಹಚ್ಚಿದರೆ ಸುಂದರ ಚಿತ್ರವಾಗಬಹುದೆಂದು ಆಕೆ ಮೊದಲನೇ ಅನುಭವದಿಂದ ಕಲಿತಿರುತ್ತಾಳೆ.</br>
<br>ಒಂದು ವೇಳೆ ಆಕೆ ಜಾಗರೂಕತೆಯಿಂದ ಬಣ್ಣ ತುಂಬಿದ್ದರೂ ಅದು ಸರಿ ಹೋಗದೇ ಇದ್ದರೆ?</br>
<br>ಏನಿಲ್ಲ, ಎಲ್ಲ ಬಣ್ಣಗಳು ಸೇರಿ ಮಾಡನ್೯ ಆಟ್೯ ನಂತಾಗಿ ಬಿಡುತ್ತದೆ... ಅವ ನಕ್ಕ. </br>
<br>ಏಳು ಬಣ್ಣಗಳು ಸೇರಿದರೆ ಬಿಳಿ ಬಣ್ಣವಾಗುತ್ತದೆ. ಅಲ್ಲಿಗೆ ಎಲ್ಲವೂ ಶಾಂತ...ನಿಶ್ಶಬ್ದ </br>
<br>ಪ್ರೀತಿಗೆ ಎಷ್ಟೊಂದು ಬಣ್ಣಗಳು!!!</br>
<br>ಸಂಬಂಧಗಳಿಗೆ ಎಷ್ಟೊಂದು ಮುಖಗಳು!!</br>
<br>ಹಾಂ..ಸಿಂಗಲ್ ಸ್ಟೇಟಸ್ ಬಗ್ಗೆ ಹೇಳ್ತಾ ಇದ್ದೆ ಅಲ್ವಾ? ಕೆಲವರು ಸಿಂಗಲ್ ಎಂಬ ಸ್ಟೇಟಸ್ ನೋಡಿದ ಕೂಡಲೇ (ಮದ್ವೆ ವಯಸ್ಸು ಆಗಿದ್ದರೆ) ನೀವಿನ್ನೂ ಯಾಕೆ ಮದ್ವೆ ಆಗಿಲ್ಲ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ನೀವು ಲವ್ ಕೂಡಾ ಮಾಡಿಲ್ವಾ? ಎಂದು ಹುಬ್ಬೇರಿಸುವವರೂ ಇರ್ತಾರೆ. ಒಂದು ಹೇಳಲಾ.. ಸಿಂಗಲ್ ಎಂದು ಸ್ಟೇಟಸ್ ಹಾಕಿದ್ದರೂ, ಐ ಆ್ಯಮ್ ಸಿಂಗಲ್ ಎಂದು ಹೇಳಿದ ಮಾತ್ರಕ್ಕೆ ನಾವು ಯಾರನ್ನೂ ಲವ್ ಮಾಡಿಲ್ಲ ಎಂಬಥ೯ವಲ್ಲ. ಸದ್ಯ ನಾವು ಯಾವುದೇ ರಿಲೇಷನ್ ಶಿಪ್ನಲ್ಲಿ ಇಲ್ಲ ಎಂದಷ್ಟೇ. ಹಾಗಂತ ರಿಲೇಷನ್ ಶಿಪ್ ನಲ್ಲಿ ಇದ್ದರೂ ಅದನ್ನು ಎಲ್ಲರಲ್ಲೂ ಹೇಳಿಕೊಳ್ಳಬೇಕಾದ ಅಗತ್ಯವೇನಿದೆ? ಸಿಂಗಲ್ ಅಂತ ಎಲ್ಲರ ಜತೆ ಬೆರೆಯಲೂ ನಮಗಿಷ್ಟವಿಲ್ಲ.</br>
<br>ಒಂದ್ಸಾರಿ ಫಾಮ್೯ ತುಂಬುವಾಗ ವಯಸ್ಸು 35 ಎಂದು ನಮೂದಿಸಿ ಸಿಂಗಲ್ ಎಂಬ ಕೋಷ್ಟಕಕ್ಕೆ ರೈಟ್ ಮಾಕ್೯ ಹಾಕಿದೆ. ಕೌಂಟರ್ನಲ್ಲಿ ಆ ಫಾಮ್೯ ಕೊಟ್ಟಾಗ ಅದನ್ನು ಸ್ವೀಕರಿಸಿದ ವ್ಯಕ್ತಿ ನನ್ನ ಮುಖವನ್ನೊಮ್ಮೆ ದಿಟ್ಟಿಸಿದ. ಡಾಕ್ಟರ್ ಬಳಿ ಹೋದಾಗಲೂ ಅಷ್ಟೇ..ಸಿಂಗಲ್ ಎಂದು ಹೇಳುವಾಗ ಎಲ್ಲರೂ ನನ್ನ ಮುಖ ನೋಡುತ್ತಾರೆ. ನನಗೆ ವಯಸ್ಸು ಇಷ್ಟಾಗಿದೆ, ಸಿಂಗಲ್ ಎಂದು ಹೇಳುವಾಗ ಅಚ್ಚರಿ
ಪಡುವಂತದ್ದೇನಿದೆ? ಪುರುಷ 60 ವಷ೯ ದವನಾಗಿದ್ದರೂ ಆತ ಸಿಂಗಲ್ ಎಂದು ನಮೂದಿಸಿದರೆ ಆತ ಬ್ರಹ್ಮಚಾರಿ. ಸಂಸಾರದ ಜಂಜಾಟ ಯಾವುದೂ ಬೇಡ ಎಂದು ಆತ ಸಿಂಗಲ್ ಆಗಿದ್ದು ಲೈಫ್ ಎಂಜಾಯ್ ಮಾಡ್ತಾನೆ ಅಂತ ಹೇಳ್ತೀವಿ. ಅದೇ ಜಾಗದಲ್ಲಿ ಹೆಣ್ಣಿದ್ದರೆ? ಆಕೆಗೆ ಏನೋ ಸಮಸ್ಯೆ ಇದೆ ಅನ್ನೋ ರೀತಿಯಲ್ಲಿ ಮಾತುಗಳು ಹುಟ್ಟಿಕೊಳ್ಳುತ್ತವೆ.</br>
<br>ಗಂಡಾಗಲೀ ಹೆಣ್ಣಾಗಲೀ ಅವರವರ ಜೀವನ ಹೇಗೆ ಇರಬೇಕೋ ಅದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ ಸಮಾಜದಲ್ಲಿ ಹೆಣ್ಣೊಬ್ಬಳು ಒಂಟಿಯಾಗಿ ಬದುಕು ಸಾಗಿಸುತ್ತಾಳೆ ಎನ್ನುವಾಗ ಸಮಾಜ
ಆಕೆಯನ್ನು ಹರಿದಾಡುವ ಬಳ್ಳಿಗೆ ಹೋಲಿಸುತ್ತದೆ. ಯಾವುದೇ ಕಾಂಡ ಅಥವಾ ಮರ ಸಿಕ್ಕಿದರೂ ಆ ಬಳ್ಳಿ ಅದರ ಆಶ್ರಯವನ್ನು ಪಡೆದುಕೊಳ್ಳುತ್ತದೆ ಎಂಬ ಕೊಂಕು ಮಾತುಗಳು ಅಲ್ಲಿ ಮಾದ೯ನಿಸುತ್ತವೆ. </br>
<br>ಆದರೆ ಒಂಟಿಯಾಗಿ ಬದುಕುವ ಹೆಣ್ಣು ಒಂಟಿಯಾಗಿದ್ದುಕೊಂಡೇ ಸ್ಟ್ರಾಂಗ್ ಆಗುತ್ತಾಳೆ. ತನ್ನ ಕೆಲಸಗಳನ್ನು ತಾನೇ ನಿಭಾಯಿಸುವಷ್ಟು ಸಾಮಥ್ಯ೯ವನ್ನು, ಖುಷಿಯನ್ನೂ ಆಕೆ ಗಳಿಸುತ್ತಾ ಹೋಗುತ್ತಾಳೆ.
ಪ್ರತಿಯೊಂದು ಕ್ಷಣದಲ್ಲಿಯೂ ತಾನು ಹೇಗಿರಬೇಕು, ಹೇಗೆ ಖುಷಿಯನ್ನು ಕಂಡುಕೊಳ್ಳಬೇಕೆಂಬುದನ್ನು ಆಕೆಗೆ ಬದುಕು ಕಲಿಸಿರುತ್ತದೆ. ಈಗ ಹಾಗೇನಿಲ್ಲ, ಸಮಾಜ ಮುಂದುವರಿದಿದೆ ಎಂದು ನಾವೇ ಎಷ್ಟೇ
ಹೇಳಿಕೊಂಡರೂ, ಯಾರ ಹಂಗಿಲ್ಲದೆ ಒಂಟಿಯಾಗಿ ಬದುಕ ಹೊರಟಿರುವ, ಬದುಕುತ್ತಿರುವ ಹೆಣ್ಣು ಮಕ್ಕಳಲ್ಲಿ ಕೇಳಿ ನೋಡಿ...ಅವರೆಷ್ಟು ನೋವು ನುಂಗಿದ್ದಾರೆ ಎಂದು!
ಮುಖಸ್ತುತಿ ಮಾಡುತ್ತಾ ಆಕೆ ದಿಟ್ಟೆ ಎಂದು ಹೊಗಳಿದರೂ ಬೆನ್ನ ಹಿಂದೆ ಆಕೆಗೆ ಗಂಡು ದಿಕ್ಕಿಲ್ಲ ಎಂದು ಕಣ್ಣಗಲಿಸಿ ನೋಡುವವರೇ ಜಾಸ್ತಿ ಇರುತ್ತಾರೆ ಇಲ್ಲಿ . ರಿಲೇಷನ್ ಶಿಪ್ ನಲ್ಲಿದ್ದೇನೆ ಅಂತ ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಸಿಂಗಲ್ ಆಗಿರುವುದು ಕೂಡಾ ಹಾಗೆಯೇ..ಅದೊಂದು ಸ್ಟೇಟಸ್ ಮಾತ್ರವಲ್ಲ, ಅದು ಅವರವರ ಆಯ್ಕೆಯೂ ಹೌದು.</br>
ಅನುರಾಗhttp://www.blogger.com/profile/13411740540409360931noreply@blogger.com3tag:blogger.com,1999:blog-4320259625062903049.post-54475072976553048812014-10-29T12:57:00.001+05:302014-10-29T12:58:32.629+05:30ಬಸ್ ಪಯಣದ ಸುಖ<div class="separator" style="clear: both; text-align: center;"><a href="http://3.bp.blogspot.com/-zhEZNCPplDQ/VFCWMvCT9jI/AAAAAAAABOI/xOUOuvMcxCY/s1600/bus.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-zhEZNCPplDQ/VFCWMvCT9jI/AAAAAAAABOI/xOUOuvMcxCY/s320/bus.jpg" /></a></div> <b>ಮೊನ್ನೆ</b> ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್ವೀನ್. ಐ ಯೆಸ್ಟರ್ಡೇ ಟೋಲ್ಡ್ ನಾ..ಅಂಡರ್ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್ಗೆ ಅನುವಾದ ಮಾಡಿ ಆಕೆ ಜೈ ಅಂದಿದ್ದಳು!.
<br>
</br>
<br>ನಿಜ ಹೇಳಲಾ ...ನನಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತದೆ ಬಿಟ್ರೆ ಮಾತನಾಡಲು ಬರುವುದು ಅಷ್ಟಕಷ್ಟೇ. ಇಂಗ್ಲಿಷ್ ಮಾತನಾಡಲು ಹೋದಾಗಲೆಲ್ಲಾ ಹಾಳಾದ ಗ್ರಾಮರ್ ನನ್ನ ನಾಲಗೆಗೆ ಅಡ್ಡ ಬಂದು ನಿಲ್ಲುತ್ತೆ. ವಾಸ್ ಬಳಸ್ಬೇಕೋ? ಈಸ್ ಬಳಸ್ಬೇಕೋ? ಡೋಂಟ್, ಕಾಂಟ್, ವೋಂಟ್, ವಿಲ್ ಎಲ್ಲವೂ ಸೇರಿ ನನ್ನನ್ನು ಕನ್ಫ್ಯೂಸ್ ಮಾಡಿಸಿ, ಇಂಗ್ಲಿಷ್ನ್ನು ನನ್ನ ಗಂಟಲಲ್ಲೇ ಸ್ಟಾಪ್ ಆಗುವಂತೆ ಮಾಡುತ್ತಿದ್ದವು. ಕೆಲಮೊಮ್ಮೆ ಯಾರಾದರೂ ಇಂಗ್ಲಿಷ್ನಲ್ಲಿ ಮಾತನಾಡಿದರೆ ತಕ್ಷಣ ನಾನು ಉತ್ತರ ಕೊಟ್ಟು ಬಿಡುತ್ತಿದ್ದೆ. ಅಲ್ಲಿ ಯಾವ ತಪ್ಪುಗಳು ನುಸುಳುತ್ತಿರಲಿಲ್ಲ. ಮಾತನಾಡಿದ ನಂತರ ಅರೇ... ನಾನೇ ಇಂಗ್ಲಿಷ್ ಮಾತಾಡಿದೆನಾ? ಎಂದು ಅಚ್ಚರಿಯಾಗಿ ಬಿಡುತ್ತಿತ್ತು. ಅಂದ ಹಾಗೆ ಬಸ್ಸಲ್ಲಿರುವಾಗ ಯಾರಾದ್ರೂ ಫೋನ್ ಮಾಡಿ ಇಂಗ್ಲಿಷ್ನಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಬಂದರೆ ಐ ವಿಲ್ ಕಾಲ್ ಯು ಲೇಟರ್ ಎಂಬುದೇ ನನ್ನ ಉತ್ತರ. ಇನ್ನು ಕೆಲವರು ಬಸ್ಸಲ್ಲಿ ಕುಳಿತು ನಾಲ್ಕು ಮಂದಿಗೆ ಕೇಳುವಂತೆ ಟುಸ್ಸು ಪುಸ್ಸು ಇಂಗ್ಲಿಷ್ ಮಾತನಾಡುತ್ತಿರುತ್ತಾರೆ. ಕೆಲವರು ಮಾತನಾಡಿದ ಮೇಲೆ ಎಷ್ಟು ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಕಣ್ಣಲ್ಲೇ ಲೆಕ್ಕ ಹಾಕುತ್ತಿರುತ್ತಾರೆ. ಇಂಥಾ ದೃಶ್ಯಗಳೆಲ್ಲ ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಲೇ ಬೇಕು.</br>
<br>ನಾನು ಹೇಳೋಕೆ ಹೋಗ್ತಿರುವುದು ಕೂಡಾ ಬಸ್ಸಿನ ಬಗ್ಗೆಯೇ. ಯಾಕೆ ಗೊತ್ತಾ? ಈ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳೇ ಬೇರೆ. ಎಷ್ಟೊಂದ್ ಇಲ್ಲಿ ಯಾರು ನನ್ನವರು? ಎಂಬ ತಳಮಳದಿಂದಲೇ ಬಸ್ಸಿಗೆ ಹತ್ತಿದರೆ, ಇಲ್ಲಿ ಎಲ್ಲ ನನ್ನವರು ಅನ್ನೋ ಭಾವನೆ ಮೂಡಿಸುವಂತೆ ಮಾಡುವುದೇ ಈ ಬಸ್ಸುಗಳು. ಇಲ್ಲಿ ಯಾರು ಮೇಲೂ ಅಲ್ಲ ಕೀಳು ಅಲ್ಲ. ಬಡವ ಶ್ರೀಮಂತನೆಂಬ ಅಂತರವಾಗಲೀ, ಜಾತಿ ಭೇದದ ಗೋಡೆಯಿಲ್ಲದೆ ಎಲ್ಲರನ್ನು ಒಂದೇ ರೀತಿ ಉಪಚರಿಸುವ ವಾಹನವೆಂದರೆ ಅದು ಬಸ್ಸು. ನನಗೆ ಬೇಗ ಹೋಗ್ಬೇಕು ಎಂಬ ಅವಸರವಿರುವವರೂ, ನನಗೆ ನಿಧಾನ ಹೋದರೆ ಸಾಕು ಎಂಬ ಎರಡೂ ಮನಸ್ಥಿತಿಯಿರುವವರು ಇಲ್ಲಿ ಒಂದೇ ರೀತಿ ವರ್ತಿಸುತ್ತಾರೆ. </br>
<br>ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಹೇಳುವಂತೆ</br>
<br>ಇಲ್ಲಿ</br>
<br>ಯಾರೂ ಮುಖ್ಯರಲ್ಲ</br>
<br>ಯಾರೂ ಅಮುಖ್ಯರಲ್ಲ</br>
<br>ಯಾವುದೂ ಯಃಕಶ್ಚಿತವಲ್ಲ </br>
<br>ಇಲ್ಲಿ </br>
<br>ಯಾವುದಕ್ಕೂ ಮೊದಲಿಲ್ಲ </br>
<br>ಯಾವುದಕ್ಕೂ ತುದಿಯಿಲ್ಲ</br>
<br>ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ</br>
<br>ಕೊನೆ ಮುಟ್ಟುವುದೂ ಇಲ್ಲ!</br>
<br>ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! </br>
<br>ಎಂಬಂತಿರುತ್ತದೆ ಬಸ್ಸಲ್ಲಿನ ಈ ಪ್ರಯಾಣಗಳು.</br>
<br>ನೀವು ಯಾವ ಊರಿನವರೇ ಆಗಿರಲಿ ಅವರವರಿಗೆ ಅವರವರ ಊರಿನ ಬಸ್ಸಿನೊಂದಿಗೆ ಒಂಥರಾ ಸೆಂಟಿಮೆಂಟು ಇದ್ದೇ ಇರುತ್ತದೆ. ದೂರದ ಊರಲ್ಲಿರುವಾಗ ನಮ್ಮೂರಿಗೆ ಹೋಗುವ ಬಸ್ಸುಗಳು ಕಾಣಸಿಕ್ಕರೆ ನಮ್ಮೂರಿನ ಬಸ್ಸು...ಆ ಕ್ಷಣಕ್ಕೆ ಊರಿನ ನೆನಪು ಬಿಡದೆ ಕಾಡುತ್ತದೆ. ಈಗಲೇ ಊರಿಗೆ ಹೋಗಿ ಬಿಡಲೇನೋ ಎಂದು ಅನಿಸಿಬಿಡುವುದೂ ಉಂಟು. ಅಷ್ಟೊಂದು ಸೆಳೆತವಿರುತ್ತೆ ಈ ಬಸ್ಸುಗಳಲ್ಲಿ. ಬಸ್ಸಿನ ಹೆಸರು, ನಮ್ಮೂರಿನ ಹೆಸರು ಬರೆದಿರುವ ಬೋರ್ಡ್ಗಳನ್ನೋದಿದ ನಂತರ ಅದು ಕಣ್ಣ ಮುಂದೆ ಹಾದು ಹೋದಾಗ ಹಿಂಬದಿಯಲ್ಲಿ 'ನಡುವೆ ಅಂತರವಿರಲಿ' ಎಂದು ಬರೆದ ವಾಕ್ಯಗಳನ್ನು ಕೂಡಾ ಮತ್ತೆ ಮತ್ತೆ ಓದಿ ಕಣ್ತುಂಬಿಕೊಳ್ಳುತ್ತೇವೆ. ಆ ಕ್ಷಣದಲ್ಲಿ ಬಸ್ಸು ನಮ್ಮ ಪಾಲಿಗೆ ನೆನಪಿನ ಬಂಡಿಯಾಗುತ್ತದೆ.</br>
<br>ಅಮ್ಮ ಹೇಳ್ತಾರೆ, ನಮ್ಮೂರಲ್ಲಿ ಕೆಎಂಎಸ್ ಎಂಬ ಹೆಸರಿನ ಬಸ್ಸೊಂದಿತ್ತಂತೆ. ಹಳ್ಳಿಯಿಂದ ನಗರಕ್ಕೆ ಸಂಪರ್ಕ ಸಾಧಿಸುವ ಏಕೈಕ ಬಸ್ಸೆಂದರೆ ಅದು ಕೆಎಂಎಸ್. ಬೆಳಗ್ಗೆ 7.00 ಗಂಟೆಗೆ ಸರಿಯಾಗಿ ಅದು ನಮ್ಮ ಹಳ್ಳಿಗೆ ತಲುಪುತ್ತಿತ್ತು. ಆವಾಗ ನಮ್ಮ ಹಳ್ಳಿಯ ಜನರಿಗೆಲ್ಲಾ 7 ಗಂಟೆ ಅಂದರೆ ಕೆಎಂಎಸ್ ಬರುವ ಹೊತ್ತು. ಗಂಟೆ ಎಷ್ಟಾಯಿತು? ಎಂದು ಕೇಳಿದರೆ ಕೆಎಂಎಸ್ ಇನ್ನೂ ಬಂದಿಲ್ಲ ಅಂದ್ರೆ ಗಂಟೆ ಏಳು ಆಗಿಲ್ಲವೆಂದೇ ಲೆಕ್ಕ. ಆ ಬಸ್ಸು ಯಾವತ್ತೂ ಲೇಟಾಗಿ ಬರುತ್ತಿರಲಿಲ್ಲ. ಮೂವತ್ತೈದು ವರುಷಗಳ ಹಿಂದೆ ಪಟ್ಟಣಕ್ಕೆ ಹೋಗುವ ಹಳ್ಳಿಯ ಜನರೆಲ್ಲರೂ ಒಂದಾಗಿ ಸೇರುವಂತೆ ಮಾಡಿದ್ದೇ ಆ ಬಸ್ಸು. ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಗಾರೆ, ಗದ್ದೆ ಕೆಲ್ಸಕ್ಕೆ ಹೋಗುವ ಎಲ್ಲರೂ ಪರಸ್ಪರ ಬೆರೆಯುವಂತೆ ಮಾಡಿದ ಕೀರ್ತಿಯೂ ಆ ಬಸ್ಸಿನದ್ದೇ.</br>
<br>ಅಲ್ಲಿವರೆಗೆ ಮನೆ ಪಕ್ಕದಲ್ಲೇ ಇದ್ದ ಶಾಲೆಯಲ್ಲಿ ಓದುತ್ತಿದ್ದ ನನಗೆ ಹೈಸ್ಕೂಲ್ಗೆ ಸೇರಿದಾಗ ಬಸ್ಸಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಮಣ ಭಾರದ ಬ್ಯಾಗನ್ನು ಹೊತ್ತು ಬಸ್ಸಿನಲ್ಲಿ ಬ್ಯಾಲೆನ್ಸ್ ಮಾಡುವುದು,
ಶಾಲಾ ಮಕ್ಕಳನ್ನು ನಿರ್ಲಕ್ಷಿಸುವ ಸಲುವಾಗಿ ಬಸ್ಸ್ಟಾಪಿನಿಂದ ದೂರ ನಿಲ್ಲಿಸಿದರೆ ಅದರ ಹಿಂದೆಯೇ ಓಡುತ್ತಾ ಹೋಗಿ ಹತ್ತುವುದು ಎಲ್ಲವನ್ನೂ ಮಾಡಲೇಬೇಕಾಗಿತ್ತು.</br>
<br>ಅಪ್ಪಿ ತಪ್ಪಿ ಸೀಟು ಸಿಕ್ಕಿತು ಅಂತ ಕುಳಿತುಕೊಂಡರೆ ವಿದ್ಯಾರ್ಥಿಗಳು ಯಾರೂ ಸೀಟಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಕಂಡೆಕ್ಟರ್ ಗದರಿಸುತ್ತಿದ್ದ. ನಮ್ಮ ಬೆನ್ನಲ್ಲಿರುವ ಬ್ಯಾಗ್ನ್ನು ಸಂಭಾಳಿಸಿಕೊಂಡು ಕಂಬಿ ಹಿಡಿದು ನೇತಾಡುತ್ತಾ, ಕಂಡೆಕ್ಟರ್ ಬೈಗುಳಕ್ಕೆ ಗುರಿಯಾಗುತ್ತಾ ಶಾಲೆಗೆ ಹೋಗಿ ಬರುವುದು ಸಾಹಸವೇ ಆಗಿ ಬಿಡುತ್ತಿತ್ತು. ಅದರಲ್ಲಿಯೂ ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋದರೆ, ಕಂಡೆಕ್ಟರ್ ಏನಾದರೂ ಕಿರಿಕ್ ಮಾಡಿದರೆ ಇಲ್ಲವೇ ಸರ್ಕಾರದ ವಿರುದ್ಧ ಏನೇ ಕೋಪವಿದ್ದರೂ ನಮ್ಮೂರಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗುವುದು ಮಾತ್ರ ಬಸ್ಸುಗಳೇ ಆಗಿದ್ದವು. ಬಸ್ಸಿಗೆ ಕಲ್ಲು ಹೊಡೆದು ಗಾಜು ಒಡೆಯುವುದು ಪ್ರತಿಭಟನೆಯ ಸಂಕೇತವಾಗುತ್ತಿತ್ತು. ಹಾಗೆಯೇ ಹತ್ತು ಮುಖಗಳ ಹುಚ್ಚು ಮನಸ್ಸುಗಳು ಹೇಗೆ ಇರುತ್ತವೆ ಎಂಬ ಅನುಭವವೂ ಇಲ್ಲಿ ಸಿಗುತ್ತಿತ್ತು.</br>
<br>ಬಸ್ಸು ಕೇವಲ ವಾಹನವಲ್ಲ ಅದೊಂದು ಸ್ನೇಹಸೇತುವೆ. ಬೆಳಗ್ಗಿನ ಹೊತ್ತು ಏದುಸಿರು ಬಿಡುತ್ತಾ ಓಡೋಡಿ ಬರುವ ಬೀಡಿ ಕಾರ್ಖಾನೆಯ ಹೆಂಗೆಳೆಯರು, ಟೈಲರಿಂಗ್ ಕಲಿಯಲು ಹೋಗುವ ಹುಡ್ಗೀರು, ಕಾಲೇಜು ಕನ್ಯೆಯರು, ಟಿಪ್ ಟಾಪ್ ಆಗಿ ಕೈಯಲ್ಲಿ ಎರಡು ಪುಸ್ತಕ ಹಿಡಿದು ನಿನ್ನೆ ನಡೆದ ಕ್ರಿಕೆಟ್ ಮ್ಯಾಚ್ ಬಗ್ಗೆ ಚರ್ಚಿಸುವ ಜವ್ವನಿಗರು, ಸರ್ಕಾರಿ ಉದ್ಯೋಗಸ್ಥರು, ಕೂಲಿ ಕೆಲಸದ ಗಂಡಸರು ಎಲ್ಲರೂ ಒಂದೇ ಸೂರಿನಡಿ ಮಾತಿಗಿಳಿಯುವುದು, ಸ್ನೇಹಿತರಾಗುವುದು ಕೂಡಾ ಈ ಬಸ್ಸಿನಲ್ಲೇ. ಬಸ್ಸು ಪ್ರಯಾಣದ ವೇಳೆ ಎಲ್ಲರನ್ನೂ ಸುಮ್ನೆ ಗಮನಿಸುತ್ತಾ ಹೋಗಿ, ಅವರ ಮುಖದಲ್ಲಿನ ಮೌನಗಳೆಲ್ಲವೂ ಮಾತಾಗುತ್ತಾ ಹೋಗುತ್ತವೆ. ಹಾಗೆ ಹೇಳುವಾಗ ನಮ್ಮೂರಲ್ಲಿನ ಬೀಡಿ ಕಟ್ಟುವ ಹೆಂಗಸರ ಬಗ್ಗೆ ಇಲ್ಲಿ ಹೇಳಲೇ ಬೇಕು. ಆಗ ತಾನೇ ಸ್ನಾನ ಮುಗಿಸಿ ಗಡಿಬಡಿಯಲ್ಲಿಯೂ ಒಪ್ಪವಾಗಿ ಸೀರೆಯುಟ್ಟು ಓಡುತ್ತಾ ಬರುವ ಇವರ ನೀಳ ಕೂದಲಿನಿಂದ ನೀರ ಹನಿ ಜಿನುಗುತ್ತಾ ಇರುತ್ತದೆ. ಆ ಹೆಂಗಸರು ಬಸ್ ಸ್ಟಾಪ್ಗೆ ಬಂದು ಸೇರಲು ಇದ್ದ ಅಡ್ಡ ದಾರಿಗಳು, ತಡಮೆ ಬೇಲಿಗಳನ್ನೆಲ್ಲಾ ದಾಟಿ ಬಿರಬಿರನೆ ಬರುತ್ತಿದ್ದರೆ ಕಂಕುಳ ಬೆವರು ಕುಪ್ಪಸದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಒದ್ದೆ ಕಲೆ ಮೂಡಿಸುತ್ತಿರುತ್ತದೆ. ಬಸ್ಸಲ್ಲಿ ನಿಂತರೆ ವ್ಯಾನಿಟಿ ಬ್ಯಾಗ್ನಲ್ಲಿರಿಸಿದ ಅವರ ಊಟದ ಬುತ್ತಿ ಪಕ್ಕದಲ್ಲಿ ನಿಂತಿರುವವರಿಗೆ ತಾಕುತ್ತಾ ಆಗಾಗ್ಗೆ ಬಿಸಿ ಮುಟ್ಟಿಸುತ್ತಿರುತ್ತದೆ.
ಇತ್ತ ಕಾಲೇಜು ಕನ್ಯೆಯರ ಕಿಲ ಕಿಲ ಸದ್ದು. ಹುಡ್ಗೀರನ್ನು ಇಂಪ್ರೆಸ್ ಮಾಡೋಕೆ ಟ್ರೈ ಮಾಡುತ್ತಿರುವ ಹುಡುಗರು ಒಂದೆಡೆಯಾದರೆ ಹುಡುಗಿರ ಮಧ್ಯೆ ನುಸುಳುತ್ತಾ ಟಿಕೆಟ್ ಟಿಕೆಟ್ ಎಂದು ಬೊಬ್ಬೆ ಹಾಕುತ್ತಾ ಮೈ ಸವರುವ ಕಿಲಾಡಿ ಕಂಡೆಕ್ಟರ್. ತನ್ನ ಸೀಟಿನ ಹಿಂದೆ ನಿಂತ ಹುಡುಗಿಯರನ್ನು ಕನ್ನಡಿ ಮೂಲಕವೇ ನೋಡಿ ಕಣ್ತುಂಬಿಕೊಳ್ಳುವ ಡ್ರೈವರ್. ರೈಟ್ ಪೋಯೀ... ಎಂದು ಕೂಗುವ ಕ್ಲೀನರ್...ಆಗ ತಾನೇ ಕಾಲೇಜಿಗೆ ಕಾಲಿಟ್ಟ ಟೀನೇಜ್ ಹುಡ್ಗೀರಿಗೆ ಕ್ರಷ್ ಆಗುವುದು ಕೂಡಾ ಈ ಕಂಡೆಕ್ಟರ್, ಡ್ರೈವರ್ಗಳ ಮೇಲೆಯೇ ಎಂಬುದನ್ನು ನೀವು ಒಪ್ಪಲೇ ಬೇಕು. ಸಂಜೆ ಹೊತ್ತಿನ ಪಯಣವಾಗಿದ್ದರೆ ಸುಸ್ತಾಗಿ ಬಾಡಿದ ಮುಖಗಳು, ಮನೆ ಸೇರುವ ತವಕದಲ್ಲಿರುವ ಜೀವಗಳು, ಕತ್ತಲೆಯ ಅಂಜಿಕೆಯಿಂದಲೇ ಸಪ್ಪಗಾದವರು ಹೀಗೆ ಎಲ್ಲರ ಬೆವರಿನ ವಾಸನೆ ಗಾಳಿಯಲ್ಲಿ ಬೆರೆತು ಬೇರೆಯದ್ದೇ ಆದ ಅನುಭವವನ್ನು ನೀಡುತ್ತಿರುತ್ತದೆ.</br>
<br>ಅಂತೂ ಬಸ್ಸಲ್ಲಿ ಸೀಟು ಸಿಕ್ಕಿತು ಅಂತಾ ಅಂದ್ಕೊಳ್ಳಿ, ಅಲ್ಲಿ ಕುಳಿತು ಪಟ್ಟಾಂಗ ಹೊಡೆಯುವಾಗ ಚರ್ಚಿತವಾಗುವ ವಿಷಯಗಳು ಕೂಡಾ ಇಂಟರೆಸ್ಟಿಂಗ್ ಆಗಿರುತ್ತವೆ. ಊರಿಗೆ ಯಾರಾದರೂ ಹೊಸಬರು ಬಂದರೆ, ಅವರ್ಯಾರು? ಎಂದು ಕುತೂಹಲದಿಂದ ನೋಡುವ ಪ್ರಯಾಣಿಕರು ಆಮೇಲೆ ಅವರ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಬಿಡುತ್ತಾರೆ. ಉಡುಗೆ ತೊಡುಗೆಗಳಿಂದ ಹಿಡಿದು ದೇವಸ್ಥಾನದ ಬ್ರಹ್ಮಕಲಶ, ಪಕ್ಕದ್ಮನೆ ಹುಡುಗಿ ಓಡಿ ಹೋಗಿದ್ದು, ರಾಜಕಾರಣ, ಮುಂದಿನ ಮುಷ್ಕರ, ಧರಣಿ ಎಲ್ಲ ವಿಷಯಗಳು ಇಲ್ಲಿ ಚರ್ಚೆಗೀಡಾಗುತ್ತವೆ. ಪ್ರಯಾಣದ ನಡುವೆ ಆಪ್ತರಾಗುವವರು ಕೆಲವರಾದರೆ ಪ್ರಯಾಣ ಮಧ್ಯೆಯೇ ಪ್ರೀತಿಯಂಕುರಿಸಿ ಮದುವೆಯಾದವರೇನೂ ಕಮ್ಮಿಯೇನಿಲ್ಲ. ಸೀಟಲ್ಲಿ ಕುಳಿತ ಕೂಡಲೇ ನಿದ್ದೆಗೆ ಜಾರುವ ನಿದ್ರಾಧಿಪತಿಗಳು ಒಂದೆಡೆಯಾದರೆ ಸೀಟಿಗಾಗಿ ಜಗಳವಾಡುವ ಮಂದಿಯೂ ಇಲ್ಲಿರುತ್ತಾರೆ. ಪೇಪರ್, ಕರ್ಚೀಫ್ ಅಥವಾ ಇನ್ಯಾವುದೋ ವಸ್ತುಗಳನ್ನಿಟ್ಟು ಕಾಯ್ದಿರಿಸಿದ ಸೀಟಿನಲ್ಲಿ ಯಾರದ್ರೂ ಕುಳಿತುಕೊಂಡರೆ ಅಷ್ಟೇ... ಅಲ್ಲೊಂದು ಜಗಳ ಗ್ಯಾರಂಟಿ!. ಇನ್ಯಾರೋ ದೂಡಿದ್ರೂ, ಹೈ ಹೀಲ್ಡ್ ಚಪ್ಪಲಿ ಹಾಕಿ ತುಳಿದು ಬಿಟ್ರು ಅನ್ನೋ ವಿಷಯದಿಂದ ಹಿಡಿದು ಮಹಿಳೆಯರ ಹಿಂದೆ ನಿಂತ ಗಂಡಸರ ಕಿತಾಪತಿ, ಚೇಷ್ಟೆ ಮಾಡಿದಾಗ ಅನುಭವಿಸುವ ನೋವು, ಸಂಕಟ, ಆಕ್ರೋಶ, ಕಣ್ಣೀರು , ಬೈಗುಳ ಎಲ್ಲವೂ ಬಸ್ಸೆಂಬ ಈ ವಾಹನದೊಳಗೆ ಮಾಮೂಲಿ.</br>
<br>ಹಳ್ಳಿಯ ಬಸ್ಸು ಪ್ರಯಾಣದ ಅನುಭವ ಒಂದು ರೀತಿಯದ್ದಾಗಿದ್ದರೆ ಬೆಂಗಳೂರಿನ ಬಸ್ಸು ಪ್ರಯಾಣದ ಅನುಭವ ಇನ್ನೊಂದು ರೀತಿಯದ್ದಾಗಿರುತ್ತದೆ. ಮಹಾನಗರಗಳಲ್ಲಿ ಬಸ್ಸುಗಳ ಸಂಖ್ಯೆಯೂ ಜಾಸ್ತಿಯಿರುವುದರಿಂದ ಸಹ ಪ್ರಯಾಣಿಕರ ನಡುವೆ ಸಂಬಂಧಗಳು ಬೆಳೆಯುವುದು ಕಷ್ಟ. ವಿಧ ವಿಧದ ಉಡುಗೆ ತೊಟ್ಟು ಹತ್ತು ಹಲವು ಭಾಷೆಗಳಲ್ಲಿ ಮಾತನಾಡುವ ವಲಸಿಗರು ಒಂದೆಡೆಯಾದರೆ, ಸ್ಟೈಲಿಷ್ ಡ್ರೆಸ್ ತೊಟ್ಟು ಕಂಗ್ಲೀಷ್ನಲ್ಲಿ ಮಾತನಾಡುವ ಬೆಂಗಳೂರಿಗರು ಎಲ್ಲರೂ ಬಿಎಂಟಿಸಿ ಬಸ್ಸಿನ ಪ್ರಯಾಣಿಕರಾಗುತ್ತಾರೆ. ಅವರವರ ಲೆವೆಲ್ಗೆ ತಕ್ಕಂತೆ ಇಲ್ಲಿ ಯಾವ ಬಸ್ಸಿನಲ್ಲಿ ಬೇಕಾದರೂ ಪ್ರಯಾಣಿಸಬಹುದಾದರೂ ಬಿಎಂಟಿಸಿ ಬಸ್ಸುಗಳು ನೀಡುವ ಅನುಭವ ಬೇರ್ಯಾವ ಬಸ್ಸಿನಲ್ಲಿಯೂ ಸಿಗುವುದಿಲ್ಲ. ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖಗಳನ್ನು ಹುಡುಕಾಡುತ್ತಾ ಎಫ್ ಎಂನಲ್ಲಿ ಹಾಡುಕೇಳುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುವ ಮಂದಿಯೇ ಇಲ್ಲಿ ನಿಮ್ಮ ಸಹಪ್ರಯಾಣಿಕರು.</br>
<br>ಒಂದ್ಸಾರಿ ನಾನು ಜಯನಗರಕ್ಕೆ ಹೋಗುತ್ತಿರುವಾಗ ಲೇಡೀಸ್ ಸೀಟಿನಲ್ಲಿ ಕಾಲೇಜಿನ ಯುವ ಜೋಡಿಯೊಂದು ಕುಳಿತಿತ್ತು. ಆ ಜೋಡಿ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದಾಗ ಲೇಡೀಸ್ ಸೀಟು ಎದ್ದೇಳಿ ಎಂಬ ಆಂಟಿಯೊಬ್ಬರ ದನಿ ಅವರನ್ನು ವಾಸ್ತವಕ್ಕೆ ಮರಳುವಂತೆ ಮಾಡಿತು. ಆಂಟಿಯ ಮಾತು ಕೇಳಿ ಹುಡುಗ ಸೀಟು ಬಿಟ್ಟುಕೊಡಲು ನೋಡಿದರೂ, ಹುಡುಗಿ ಅವನ ಕೈ ಹಿಡಿದು ಜಗ್ಗುತ್ತಾ ಕೂತ್ಕೊಳೋ ಏನಾಗಲ್ಲ ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿಗೆ ಸಿಟ್ಟು ಬಂದು ಇದು ಲೇಡೀಸ್ ಸೀಟು ನೀನು ಎದ್ದೇಳು ಎಂದು ಕಿರುಚಾಡಿದ್ರು. ಇಷ್ಟಕ್ಕೆ ನಿಲ್ಲಿಸದ ಆಕೆ ಈ ಹುಡುಗ್ರಿಗೆಲ್ಲಾ ಬಸ್ಸಲ್ಲಿ ಜತೆ ಜತೆಯಾಗಿಯೇ ಕುಳಿತುಕೊಳ್ಳಬೇಕು. ಜತೆಯಾಗಿಯೇ ಕುಳಿತುಕೊಳ್ಳಬೇಕಾದ್ರೆ ಪಾರ್ಕ್ ಬೆಂಚಲ್ಲಿ ಹೋಗಿ ಕುಳಿತುಕೊಳ್ಳಲಿ ಎಂದು ಬೈಯೋಕೆ ಶುರು ಮಾಡಿಬಿಟ್ರು. ಪಾರ್ಕ್ ಬೆಂಚಲ್ಲಿ ಕುಳಿತುಕೊಂಡರೆ ಬಸ್ಸಿನಲ್ಲಿ ಸಿಗುವ ಮೂವಿಂಗ್, ಜಂಪಿಂಗ್ ಎಫೆಕ್ಟ್ ಸಿಗಲ್ವೇ?ಎಂದು ಮನಸ್ಸಿನಲ್ಲೇ ಹೇಳಿಕೊಂಡು ನಕ್ಕೆ. ಆಗಲೇ ಆ ಯುವ ಜೋಡಿ ಸೀಟು ಬಿಟ್ಟು ಹಿಂದೆ ಹೋಗಿ ನಿಂತು ಬಿಟ್ಟಿದ್ದರು.
ಇಂಥಾ ಮನರಂಜನೆಗಳ ನಡುವೆ ಹುಡುಗಿಯೊಬ್ಬಳ ವ್ಯಾಕ್ಸಿಂಗ್ ಮಾಡಿಸಿದ ನೀಳ ತೋಳುಗಳು, ನೇಲ್ ಪಾಲಿಶ್ ಹಚ್ಚಿದ ಆಕೆಯ ಕೈಬೆರಳುಗಳು, ಪರ್ಫ್ಯೂಮಿನ ಘಮ,ವಿಧ ವಿಧದ ರಿಂಗ್ ಟೋನ್ಗಳ ಸದ್ದುಗಳು, ವಿವಿಧ ಭಾಷೆಯಲ್ಲಿನ ಸಂಭಾಷಣೆಗಳು ಎಲ್ಲವನ್ನೂ ಒಂದೇ ಕಡೆಯಲ್ಲಿ ನೋಡಿ, ಕೇಳಿ ಅನುಭವಿಸಬೇಕಾದರೆ ಬಿಎಂಟಿಸಿ ಬಸ್ಸಲ್ಲಿ ಓಡಾಡಲೇ ಬೇಕು. ಜನರಿಂದ ತುಂಬಿ ತುಳುಕುವ ಬಸ್ಸು ಪಯಣದ ಮಧ್ಯೆ ಆಗ್ಗಾಗ್ಗೆ ನಮ್ಮ ಫೋನ್, ವ್ಯಾಲೆಟ್ ಗಳು ಚೋರಿಯಾಗಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳುತ್ತಾ, ಇಳಿಯುವ ನಿಲ್ದಾಣ ಬಂತಾ? ಎಂದು ಇಣುಕುತ್ತಾ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಹೋಗುವುದೇ ಮಾಯಾನಗರಿಯ ಬಸ್ ಪಯಣದ ಗಮ್ಮತ್ತು. ಹಿಂದೆ ಹೋಗ್ರಿ ಎನ್ನುತ್ತಾ ಗಂಡಸರನ್ನು ಹಿಂದೆ ನೂಕುವ ಕಂಡೆಕ್ಟರ್ ಅಂಕಲ್, ಕಂಬ ಬಟ್ಟು ಹಿಂದೆ ಹೋಗಮ್ಮಾ..ಪಾಸ್ ತೋರ್ಸಿ... ಮುಂದೆ ಚೆಕಿಂಗ್ ಇದೆ ಟಿಕೆಟ್ ತೆಗೆದುಕೊಳ್ಳಿ ಎನ್ನುವ ಕಂಡೆಕ್ಟರ್ನ ಮಾತಿನ ನಡುವೆ ಎಕ್ಸ್ಕ್ಯೂಸ್ಮೀ, ಸೈಡ್ ಪ್ಲೀಸ್ ಅನ್ನೋ ಪುಟ್ ಪುಟ್ ಇಂಗ್ಲೀಷ್ ವಾಕ್ಯಗಳು ಜನರ ಮಧ್ಯೆ ಕೇಳಿಬರುವುದು ಈ ಬೆಂದಕಾಳೂರಿನಲ್ಲೇ.</br>
<br>ಇದೆಲ್ಲಾ ದಿನ ನಿತ್ಯದ ಪ್ರಯಾಣ ಅನುಭವಗಳಾದರೆ ದೂರದೂರಿಗೆ ಹೋಗುವ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳನ್ನಾಧರಿಸಿಯೇ ಒಂದು ಸಿನಿಮಾ ತಯಾರಿಸಬಹುದು ಎಂದು ಅನಿಸುತ್ತಿದೆ. ಪರವೂರಿಗೆ ಹೋಗುವ ಖುಷಿ, ಇನ್ಯಾವುದೋ ದುಃಖದಿಂದ ಬಳಲಿದ ಮುಖಗಳೇ ಇಲ್ಲಿ ಕತೆ ಹೇಳುತ್ತಿರುತ್ತವೆ. ತನ್ನ ಊರಿಗೆ ಮರಳುತ್ತಿರುವ ವ್ಯಕ್ತಿಯ ಮುಖದಲ್ಲಿ ಕಾಣುವ ಸಂತಸ, ಊರು ಬಿಡುವ ಹೊತ್ತಲ್ಲಿನ ಸಂಕಟ, ಇನ್ಯಾವುದೋ ಖುಷಿಯ ಸಮಾರಂಭಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಮಂದಿ, ಇನ್ಯಾರದೋ ವ್ಯಕ್ತಿಯ ಅಂತಿಮ ದರ್ಶನಕ್ಕಾಗಿ ತೆರಳುವ ಜನರು ಎಲ್ಲರೂ ಇಲ್ಲಿ ಮುಖಾ ಮುಖಿಯಾಗುತ್ತಾರೆ. ಎಲ್ಲರಿಗೂ ಹೇಳಲು ಅವರದ್ದೇ ಆದ ಕಥೆಗಳಿರುತ್ತವೆ, ದುಗುಡ, ದುಮ್ಮಾನ ಮತ್ತು ಖುಷಿಗಳಿರುತ್ತವೆ. ಆದರೆ ದೂರದ ಊರಿಗೆ ಹೋಗುತ್ತಿದ್ದೇವೆ. ಜತೆಯಲ್ಲಿರುವ ಪ್ರಯಾಣಿಕರು ಹೇಗೆ ಏನೋ ಅಂಥ ಗೊತ್ತಿಲ್ಲ. ಅಪರಿಚಿತರಲ್ಲಿ ಮಾತನಾಡಿ ಪೇಚಿಗೆ ಸಿಲುಕುವುದು ಬೇಡ ಎಂದು ಎಲ್ಲರೂ ಅವರವರ ಪಾಡಿಗೆ ಇದ್ದು ಬಿಡುತ್ತಾರೆ . ಕ್ರಮಿಸಬೇಕಾದ ಹಾದಿ ದಿನಗಟ್ಟಲೆ ಇದ್ದರೂ ಸಹ ಪ್ರಯಾಣಿಕರೊಂದಿಗೆ ಮಾತನಾಡಲು ಹಿಂಜರಿಕೆ. ಒಬ್ಬರೇ ಪ್ರಯಾಣ ಮಾಡುತ್ತಿದ್ದರಂತೂ ಇನ್ನಿಲ್ಲದ ಚಡಪಡಿಕೆ. ಪಕ್ಕದಲ್ಲಿ ಕುಳಿತವರು ಏನಾದರೂ ತಿನ್ನೋಕೆ , ಕುಡಿಯೋಕೆ ಕೊಟ್ಟರೆ ಸಂಶಯದಿಂದಲೇ ಅದನ್ನು ನೋಡಿ 'ನೋ ಥ್ಯಾಂಕ್ಸ್, ಇಲ್ಲ ನನಗೇನೂ ಬೇಡ 'ಎಂದು ಹೇಳಿ ಸುಮ್ಮನಾಗುತ್ತೇವೆ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೆ ಗೊತ್ತು? ಎಂಬ ಭಾವನೆಯಿಂದಲೇ ಅಷ್ಟೊಂದು ಪ್ರಯಾಣಿಕರಿರುವ ಬಸ್ಸಿನಲ್ಲಿ ನಾವು ಏಕಾಂತ ಬಯಸುತ್ತೇವೆ.
ಕೆಲವೊಂದ್ಸಾರಿ ನಾವೇ ಸಹಪ್ರಯಾಣಿಕರ ಜತೆ ಮಾತಿಗಿಳಿದು ಏಕಾಂತದ ಚಿಪ್ಪಿನಿಂದ ಹೊರಬರಲು ಹವಣಿಸುತ್ತೇವೆ. ಹೀಗೆ ಪ್ರತಿಯೊಂದು ಸ್ಟಾಪಿನಲ್ಲಿಯೂ ಸಿಗುವ ಹೊಸ ಮುಖಗಳು, ಇಳಿದು ಹೋಗುವ ಪರಿಚಿತ ಮುಖಗಳು ಅವರ ಜತೆ ಒಡನಾಡಿದ ಅನುಭವಗಳ ಮೂಟೆ ಹೊತ್ತು ನಮ್ಮ ಪ್ರಯಾಣ ಮುಂದುವರಿಯುತ್ತಿರುತ್ತದೆ. ಇಲ್ಲಿ ಪ್ರತಿಯೊಂದು ಪಯಣವೂ ನಮಗೆ ಹೊಸತೊಂದು ಅನುಭವವನ್ನು ನೀಡುತ್ತಾ ಹೋಗುತ್ತದೆ. ಅದು ಖುಷಿಯ ಕ್ಷಣಗಳಾಗಿರಬಹುದು, ನೋವಿನ ಸಂಗತಿಗಳಾಗಿರಬಹುದು, ಮುಜುಗರಕ್ಕೊಳಗಾದ, ಅವಮಾನಕ್ಕೊಳಗಾದ ಘಟನೆಗಳೇ ಆಗಿರಬಹುದು, ಎಲ್ಲ ನಿನ್ನೆಗಳಲ್ಲಿ ಒಂದೊಂದು ರೀತಿಯ ಅನುಭವವನ್ನು ಇಂಥಾ ಪ್ರಯಾಣಗಳು ನಮಗೆ ನೀಡಿರುತ್ತವೆ.
ಊರು- ಪರವೂರು ಯಾವುದೇ ಇರಲಿ ಅಲ್ಲಿನ ಬಸ್ಸು ಪ್ರಯಾಣಗಳು ನಮ್ಮ ಅನುಭವದ ಪುಟಗಳಲ್ಲಿ ಪ್ರತ್ಯೇಕ ಸ್ಥಾನವನ್ನು ಗಳಿಸಿಕೊಂಡಿರುತ್ತವೆ. ಒಂದಷ್ಟು ಸಿಹಿ, ಮತ್ತೊಂದಿಷ್ಟು ಕಹಿ ಎನ್ನುವ ಜೀವನದ ಎಲ್ಲ ಕ್ಷಣಗಳನ್ನು ಪ್ರಯಾಣದೊಂದಿಗೆ ಅನುಭವಿಸಬೇಕಾದರೆ ಬಸ್ಸಲ್ಲಿ ಪ್ರಯಾಣಿಸಲೇ ಬೇಕು.
ಪ್ರತಿಯೊಬ್ಬ ವ್ಯಕ್ತಿಗೂ ಈ ರೀತಿಯ ಪ್ರಯಾಣಗಳು ನೆನಪಿನ ಸುರುಳಿ ಬಿಚ್ಚುವಂತೆ ಮಾಡುತ್ತದೆ. ನೆನಪಿನ ಪುಸ್ತಕದ ಹಾಳೆಯಲ್ಲಿ ಬಸ್ಸು ಓಡಾಟ ಆರಂಭಿಸಿಯಾಗಿದೆ. ಪ್ರತೀ ನಿಲ್ದಾಣವೂ ಕಥೆ ಹೇಳುತ್ತಿದೆ, ಅನುಭವಗಳು ಹಾರ್ನ್ ಹೊಡೆಯುತ್ತಾ ಬದುಕಿನ ದಾರಿಯನ್ನು ಕ್ರಮಿಸುತ್ತಾ ಮುನ್ನುಗ್ಗುತ್ತಿದೆ.</br>
<br>
</br>
<b>ಅಕ್ಕ ಸಮ್ಮೇಳನ 2014-'ಹರಟೆಕಟ್ಟೆ' ಲಲಿತ ಪ್ರಬಂಧ ಸಂಕಲನದಲ್ಲಿ ಪ್ರಕಟಿತ ಬರಹ </b>
ಅನುರಾಗhttp://www.blogger.com/profile/13411740540409360931noreply@blogger.com1tag:blogger.com,1999:blog-4320259625062903049.post-17002096176835935042014-09-05T16:42:00.000+05:302014-09-05T16:42:36.128+05:30ಮಹಾಬಲಿಗೊಂದು ಪತ್ರ
<a href="http://2.bp.blogspot.com/-NzxnzPlW1nc/VAmW6ZqQO7I/AAAAAAAABM8/8l-sNeGZB4o/s1600/maveli.jpg" imageanchor="1" ><img border="0" src="http://2.bp.blogspot.com/-NzxnzPlW1nc/VAmW6ZqQO7I/AAAAAAAABM8/8l-sNeGZB4o/s320/maveli.jpg" /></a>
<b>ಪ್ರೀತಿಯ</b> ಮಾವೇಲಿ ಅಲಿಯಾಸ್ ಮಹಾಬಲಿ,
<br>
</br>
<br>ಓಣಂ ಹಬ್ಬದ ಪ್ರಯುಕ್ತ ದೇವರ ಸ್ವಂತ ಊರಿಗೆ ಭೇಟಿ ನೀಡುವ ನಿನಗೆ ಸ್ವಾಗತ. ನಮ್ಮೂರಿಗೆ ಭೇಟಿ ನೀಡುವ ಮುನ್ನ ನಿನಗೆ ಹಲವಾರು ವಿಷಯಗಳ ಬಗ್ಗೆ ಹೇಳಬೇಕಾಗಿದೆ. ಅದಕ್ಕೆ ಈ ಪತ್ರ.
ಕಾಸರಗೋಡಿಗೆ ದೀಪಾವಳಿ ಹಬ್ಬದ ವೇಳೆ ಬಲೀಂದ್ರನಾಗಿಯೂ, ಓಣಂ ಹಬ್ಬದಂದು ಮಹಾಬಲಿಯಾಗಿ ಬರುವ ನಿನಗೆ ಗಡಿನಾಡ ಕನ್ನಡಿಗರಂತೆ ಮಲಯಾಳಂ, ಕನ್ನಡ, ತುಳು ಹೀಗೆ ಐದಾರು ಭಾಷೆ ಗೊತ್ತಿರುತ್ತದೆ ಅಲ್ವಾ. ಆದ್ದರಿಂದ ಕನ್ನಡದಲ್ಲಿ ಬರೆದ ಈ ಪತ್ರ ಓದಲು ನಿನಗೆ ಸಮಸ್ಯೆ ಆಗಲ್ಲ ಅಂದುಕೊಂಡಿದ್ದೀನಿ. </br>
<br>ಊರಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಮಳೆಯೊಂದಿಗೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯಲ್ಲಿರುವ ಗುಂಡಿಯಲ್ಲೆಲ್ಲಾ ನೀರು ತುಂಬಿ ಪುಟ್ಟ ಕೊಳದಂತಾಗಿದೆ. ಅಲ್ಲೇ ಬೇಕಾದರೆ ಮೀನು ಕೖಷಿ ಕೂಡಾ ಮಾಡಬಹುದು. ಬಸ್ಸಲ್ಲಿ ಪ್ರಯಾಣ ಮಾಡುವಾಗ ಒಂಟೆ ಸವಾರಿ ಅನುಭವ ನಿನಗಾಗಬಹುದು. ಒಂದಷ್ಟು ದಿನ ನೀನು ನಮ್ಮೂರಲ್ಲಿ ಓಡಾಡಿದರೆ ಸಾಕು, ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಕ್ಕಿ,
ನಿನ್ನ ಡೊಳ್ಳು ಹೊಟ್ಟೆ ಕರಗಬಹುದು. ಬರುವ ಮುನ್ನ ಯಾವ ಜಿಲ್ಲೆಯಲ್ಲೂ ಬಂದ್ ಆಚರಣೆ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೋ. ಕೋಮುಗಲಭೆ, ರಾಜಕೀಯ ಕೊಲೆಗಳು ಇಲ್ಲಿ ಮಾಮೂಲಿ
ಆಗಿ ಬಿಟ್ಟಿವೆ. ಕೆಂಪು, ಹಸಿರು, ಕೇಸರಿ ಧ್ವಜಗಳ ಕೆಳಗೆ ಯಾರ್ಯಾರದೋ ನೆತ್ತರು ಹರಿಯುತ್ತಿದೆ. ಜನರು ರಕ್ತದಾಹಿಗಳಂತೆ ಹೊಡೆದಾಡುತ್ತಿದ್ದಾರೆ. ಯಾವ ಮೂಲೆಯಿಂದ ಗುಂಡು ಹಾರುತ್ತದೋ, ಬಾಂಬ್ ಸಿಡಿಯುತ್ತದೋ ಎಂದು ಬಲ್ಲವರಾರು? ಆದ್ದರಿಂದ ನೀನು ಹುಷಾರು!</br>
<br>ಹಾಂ...ನೀನು ಬರುವಾಗ ಜಾಸ್ತಿ ಆಭರಣ ಹಾಕೊಂಡು ಬರ್ಬೇಡಪ್ಪಾ..ಬೈಕ್ ನಲ್ಲಿ ಸರ ಕಳ್ಳತನ ಮಾಡುವ ಹೈಟೆಕ್ ಕಳ್ಳರು ಜಾಸ್ತಿಯಾಗಿದ್ದಾರೆ. ಯಾವುದಕ್ಕೂ ನಿನ್ನ ಕೈಯಲ್ಲಿ ಒಂದು ಸ್ಮಾಟ್೯ ಫೋನ್
ಇಟ್ಟುಕೋ. ಯಾಕೆ ಗೊತ್ತಾ? ನಿನಗೇನಾದರೂ ಸಮಸ್ಯೆ ಆದರೆ ಜನರಲ್ಲಿ ಅದನ್ನು ಹೇಳುವ ಬದಲು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡು. ಆಮೇಲೆ ಎಷ್ಟು ಲೈಕ್, ಕಾಮೆಂಟ್ ಬರುತ್ತೆ ಅಂತ
ನೋಡ್ತಾ ಇರು...</br>
<br>ನನ್ನ ಸ್ವಂತ ಊರು ಅಲ್ವಾ ಇಲ್ಲಿನ ಮಕ್ಕಳಲ್ಲಿ ಮಾತನಾಡಿಸೋಣ ಅಂತ ಹೋಗುವಾಗ ಹುಷಾರಪ್ಪಾ..ಸ್ವಲ್ಪ ಇಂಗ್ಲೀಷ್ ಕಲಿತುಕೊಂಡು ಹೋಗು, ಇಲ್ಲಾಂದ್ರೆ ನಿನಗೆ ಅವರಲ್ಲಿ ಮಾತನಾಡಲು ಕಷ್ಟ
ಆಗುತ್ತೆ. ಮಲಯಾಳಂಗಿಂತ ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯುವ ಮಕ್ಕಳು ಇಲ್ಲಿ ಜಾಸ್ತಿ. ಅಷ್ಟೇ ಯಾಕೆ ಇಲ್ಲಿನ ಯುವಜನರು ಕೂಡಾ ಮಂಗ್ಲೀಷ್ ನಲ್ಲೇ ಮಾತನಾಡುವುದರಿಂದ ನಿನಗೆ ಅದನ್ನು ಅಥ೯ ಮಾಡಿಕೊಳ್ಳಲು ಕಷ್ಟವಾಗಬಹುದು. ನಮ್ಮೂರಿನ ಅಧ೯ಕ್ಕಧ೯ ಜನ ಬೆಂಗಳೂರು, ಚೆನ್ನೈ, ದುಬೈನಲ್ಲಿ ನೆಲೆಸಿರುವುದರಿಂದ ಮಲಯಾಳಿಗಳ ಸಂಖ್ಯೆಯೂ ಇಲ್ಲಿ ಕಡಿಮೆಯೇ. ಕೆಲಸಕ್ಕೆ ಬಂದ ಆಂಧ್ರದವರೂ, ಬಂಗಾಳಿಗಳು, ತಮಿಳರು ನಿನಗೆ ಅಲ್ಲಲ್ಲಿ ಸಿಗಬಹುದು. ಸ್ವಲ್ಪ ಸ್ವಲ್ಪ ಹಿಂದಿ,ತಮಿಳಲ್ಲಿ ಮಾತನಾಡಿ ಅವರನ್ನೆಲ್ಲಾ ಹ್ಯಾಂಡಲ್ ಮಾಡಬೇಕಾಗುತ್ತದೆ.</br>
<br>ನಿನ್ನ ಡ್ರೆಸ್ ಬಗ್ಗೆ ಹೇಳಲೇ ಬೇಕು. ಸಾಂಪ್ರದಾಯಿಕ ವೇಷ ತೊಟ್ಟು ಬಂದ ನಿನ್ನನ್ನು ನೋಡಿ ಜನ, ರಿಯಾಲಿಟಿ ಶೋ ಅಥವಾ ಇನ್ಯಾವುದೋ ಕಾರ್ಯಕ್ರಮದ ನಟ ಎಂದೇ ಗುರುತಿಸ್ತಾರೆ ವಿನಾ
ಮಾವೇಲಿ ಅಂತ ಗುರುತಿಸಲ್ಲ ನೋಡು. ಒಂದು ವೇಳೆ ಅವರು ನಿನ್ನನ್ನು ಗುರುತಿಸಿದರೂ, ಅವರು ನಿನ್ನ ಜತೆ ಮಾತನಾಡುವುದನ್ನು ಬಿಟ್ಟು ನಿನ್ನ ಜತೆ ಸೆಲ್ಫೀ ತೆಗೆದು ಫೋಟೋ ಅಪ್ಲೋಡ್ ಮಾಡ್ತಾರೆ
ಅಷ್ಟೇ. ಇನ್ನು ನೀನು ಮನೆಗಳಿಗೆ ಭೇಟಿ ಕೊಡುವುದಾದರೆ ಮನೆ ಮಂದಿಯೆಲ್ಲಾ ಟೀವಿ ಮುಂದೆಯೇ ಓಣಂ ಆಚರಿಸುವುದನ್ನು ನೋಡಬಹುದು. ಈ ಓಣಂಗೆ ಅದೆಷ್ಟು ಹೊಸ ಸಿನಿಮಾ, ಕಾರ್ಯಕ್ರಮಗಳನ್ನು ನಮ್ಮ ಚಾನೆಲ್ ಗಳು ಉಣಬಡಿಸುತ್ತವೆ ಗೊತ್ತಾ? ಅಂಗಳದಲ್ಲಿ ಹಾಕಿದ ರಂಗೋಲಿಯಲ್ಲಿ ಪ್ಲಾಸ್ಟಿಕ್ ಹೂ ಕಂಡರೆ ಅಚ್ಚರಿ ಬೇಡ, ಕಾಂಕ್ರೀಟ್ ನಾಡಲ್ಲಿ ಹೂವಿಗೂ ಬರ ಬಂದು ಬಿಟ್ಟಿದೆ. ಉಯ್ಯಾಲೆ ಎಲ್ಲಿದೆ ಅಂತ ಹುಡುಕ್ತಾ ಇದ್ದೀಯಾ? ಮರಗಳೇ ಇಲ್ಲದಿದ್ದರೆ ಉಯ್ಯಾಲೆ ಎಲ್ಲಿ ಕಟ್ತಾರೆ ಹೇಳು? ಹಾಗೆ ಈಗಿನವರಿಗೆ ಉಯ್ಯಾಲೆ ತೂಗುವುದೆಂದರೆ ಔಟ್ ಆಫ್ ಫ್ಯಾಷನ್ ಬಿಡು.</br>
<br>ಮನೆಯಲ್ಲಿ ಭಜ೯ರಿ ಓಣಂ ಸದ್ಯ (ಔತಣ) ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡೂ ಹೋಗ್ಬೇಡ. ಈ ಟೈಮಲ್ಲಿ ಎಲ್ಲ ಹೋಟೆಲ್ ನಲ್ಲಿ ಗಡದ್ದಾಗಿ ಓಣಂ ಸದ್ಯ ಸ್ಪೆಷಲ್ ಊಟ ಇದ್ದೇ ಇರುತ್ತದೆ.
ಅಲ್ಲೇ ಹೋಗಿ ಊಟ ಮಾಡಿದ್ರೆ ಆಯ್ತು. ಗಲ್ಲಿ ಗಲ್ಲಿಗಳಲ್ಲಿ ರಾಜಕೀಯ ಪಕ್ಷಗಳ, ಸಿನಿಮಾ ಜಾಹೀರಾತು ಜತೆಗೆ ಬೆಳ್ಳಗಾಗುವಂತೆ ಮಾಡುವ ಸೋಪು, ಉದ್ದ ಕೂದಲು ಬೆಳೆಯಲು ಎಣ್ಣೆ, ಹೇರ್ ಫಿಕ್ಸಿಂಗ್ ಇಂಥಾ ಜಾಹೀರಾತುಗಳ ದೊಡ್ಡ ದೊಡ್ಡ Hoardings ಗಳನ್ನೂ ನೀನು ಕಾಣಬಹುದು. ಹೌದು, ನಾವು ಬದಲಾಗುತ್ತಿದ್ದೇವೆ. ಸೋಪು, ಕ್ರೀಮ್, ಎಣ್ಣೆ ತಿಕ್ಕಿ ತಿಕ್ಕಿ ನಮ್ಮ ಎಣ್ಣೆಕಪ್ಪು ಚಮ೯ವನ್ನು ಬೆಳ್ಳಗಾಗಿಸುವುದರಲ್ಲಿ
ನಾವು ಬ್ಯುಸಿಯಾಗಿದ್ದೇವೆ. ಏತನ್ಮಧ್ಯೆ, ಓಣಂ ಹಾಡುಗಳನ್ನು ಕೇಳ್ಬೇಕು ಅಂತ ಹಠ ಮಾಡ್ಬಾದು೯. ಎಲ್ಲ ಹಾಡುಗಳು ರಿಮಿಕ್ಸ್ ಆಗಿರುವುದರಿಂದ ಓಣಂ ಪಾಟ್ಟು ಕೂಡಾ ರಿಮಿಕ್ಸ್ ಆಗಿ ಕೇಳುವುದು ನಮಗಿಷ್ಟ.
ಮನೆಯ ಹೆಂಗಸರೆಲ್ಲಾ ಸೇರಿ ತಿರುವಾದಿರಕ್ಕಳಿ ಆಡ್ತಾರೆ, ಮಕ್ಕಳು ತೆಂಗಿನ ಗರಿಯಿಂದ ಮಾಡಿದ ಚೆಂಡಾಟ ಆಡ್ತಾರೆ ಅದನ್ನು ನೋಡ್ಬೇಕು ಎಂಬ ಆಸೆಯಿದ್ದರೆ I am SORRY...ಅದಕ್ಕೆಲ್ಲಾ ಟೈಮ್ ಎಲ್ಲಿದೆ ಹೇಳು? ಇನ್ನು ಹಗ್ಗ ಜಗ್ಗಾಟ? ಮಡಕೆ ಒಡೆತ ? ಆಟಗಳು ಊಹೂಂ....ಆಡಳಿತಾರೂಢ ಪಕ್ಷ ಮತ್ತು ವಿಪಕ್ಷದ ನಡುವೆ ದಿನಾ ನಡೆಯುತ್ತಿರುವುದು ಅದೇ ಅಲ್ವಾ?</br>
<br>ಇಲ್ಲಿ ಕೇಳು, ಇದೀಗ ಕೇರಳದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂದು ಸಕಾ೯ರ ತೀಮಾ೯ನಿಸಿದೆ. ಆದ್ದರಿಂದ ಬಾರ್ ಗಳ ಮುಂದೆ ನಮ್ಮ ಗಂಡಸರನ್ನು ಹುಡುಕಬೇಡ, ಅವರೆಲ್ಲಾ ಕಳ್ಳಭಟ್ಟಿ ತಯಾರಿಸುವ ಅಡ್ಡಾದಲ್ಲಿ ಕದ್ದು ಮುಚ್ಚಿ ಕುಡಿದು ಇಸ್ಪೇಟ್ ಆಡಿ ಜಗಳ ಮಾಡ್ತಿರಬಹುದು. ಮಕ್ಕಳು, ಯುವಕರು ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ. ನನ್ನದೇ ಊರು ಅಂತಾ ಸುಮ್ನೇ ಅಲ್ಲಿ ಇಲ್ಲಿ ಅಡ್ಡಾಡಬೇಡ, ಬೇಹುಗಾರನಿರಬಹುದು ಎಂದು ನಿನ್ನನ್ನು ಬಂಧಿಸಬಹುದು. ಹುಷಾರು!</br>
<br>ಇನ್ನೊಂದು ಮುಖ್ಯ ವಿಷಯ. ಅಂಗಡಿಯಲ್ಲಿ ಏನಾದರೂ ವಸ್ತು ಖರೀದಿ ಮಾಡಿದ ನಂತರ ಸಿಗುವ ಬಾಕಿ ದುಡ್ಡನ್ನು ಸರಿಯಾಗಿ ಪರಿಶೀಲಿಸಿಕೋ. ಎಟಿಎಂ ಬಳಸುವಾಗಲೂ ಅಷ್ಟೇ... ಇಲ್ಲೆಲ್ಲಾ ಕಳ್ಳನೋಟುಗಳು ಜಾಸ್ತಿ ಹರಿದಾಡುತ್ತಿದೆ. ಈಗ ಓಣಂ ಕೈನೀಟ್ಟಂ ಸಿಕ್ಕಿದ ನೋಟುಗಳನ್ನು ಕೂಡಾ ಒರಿಜಿನಲ್ಲು ಹೌದೋ ಅಲ್ವೋ ಅಂತ ನೋಡ್ಬೇಕಾಗುತ್ತೆ.
ರಾತ್ರಿ ವೇಳೆ ಜಾಗ್ರತೆ! ಗದ್ದೆ ನಡುವೆ ನಿಂತಿರುವ ಬೆಚ೯ಪ್ಪನನ್ನೂ ಬಿಡದೆ ರೇಪ್ ಮಾಡುವ ಕಾಮಾಂಧರು ಇದ್ದಾರೆ ಇಲ್ಲಿ. ಹೇಗಾಗಿದೆ ಅಂದ್ರೆ ದೇವರ ಸ್ವಂತ ಊರಿನಲ್ಲೀಗ ದೆವ್ವಗಳದ್ದೇ ಕಾರುಬಾರು!
ಬೆಲೆ ಏರಿಕೆಯಿಂದ ಕೈ ಸುಟ್ಟುಕೊಂಡಿರುವ ಕಾಮಿ೯ಕರಿಗೆ ಇಲ್ಲಿ ಸರಿಯಾಗಿ ಕೆಲಸ ಇಲ್ಲ. ಅಷ್ಟೇ ಯಾಕೆ ಮುಕ್ಕಾಲು ಭಾಗ ಸಮುದ್ರದಿಂದ ಕೂಡಿರುವ ನಮ್ಮೂರಲ್ಲಿ ಮರಳು ದಂಧೆಯಿಂದಾಗಿ ಸಮುದ್ರದಡದಲ್ಲಿ ಮರುಳು ಕೂಡಾ ಖಾಲಿಯಾಗಿದೆ. ಇದನ್ನೆಲ್ಲಾ ಕೇಳಿದ ನಂತರ ನೀನು ಬರದೇ ಇರ್ಬೇಡಪ್ಪಾ...ಜನರ ನಂಬಿಕೆ ಹುಸಿ ಮಾಡ್ಬೇಡ</br>
<br>ನಾನಂತೂ ಅಂಗಳದಲ್ಲಿ ರಂಗೋಲಿ ಹಾಕಿ, ಪಾಯಸ ಮಾಡಿಟ್ಟು ನಿನ್ನ ಕಾಯ್ತಾ ಇರ್ತೀನಿ... ನೀ ಬರಲೇ ಬೇಕು....</br>
<br>
</br>
<br>ಇಂತಿ ನಿನ್ನ,</br>
<b>ಪೊನ್ನು ಮೋಳ್</b>
<br>
</br>
ಚಿತ್ರ ಕೖಪೆ: http://www.maveli.co.uk/
ಅನುರಾಗhttp://www.blogger.com/profile/13411740540409360931noreply@blogger.com1tag:blogger.com,1999:blog-4320259625062903049.post-18505363594438393192014-08-02T01:45:00.000+05:302014-08-02T01:45:14.532+05:30ಅಳಿದುಳಿದ ಕನವರಿಕೆ<div class="separator" style="clear: both; text-align: center;"><a href="http://3.bp.blogspot.com/-DfSQ688UVHE/U9v1FFGl2xI/AAAAAAAAA-U/b6IJf39hYOw/s1600/art1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://3.bp.blogspot.com/-DfSQ688UVHE/U9v1FFGl2xI/AAAAAAAAA-U/b6IJf39hYOw/s320/art1.jpg" /></a></div>
<br>ಲೇಖನಿಯ ತುದಿಯ</br>
<br>ಜ್ವಾಲೆ ನಂದಿ ಹೋದ ಮೇಲೆ</br>
<br>ಮನಸ್ಸಿನ ಭಾವನೆಗಳು</br>
<br>ಪದಗಳಿಗೆ ನಿಲುಕುವುದಿಲ್ಲ</br>
<br>
</br>
<br>ಮೌನಿ ನಾನು- ನೀನೂ</br>
<br>
</br>
<br>ಈ ಬಿಗು ಮೌನದಲ್ಲಿ ಸಿಕ್ಕಿ</br>
<br>ನಿಟ್ಟುಸಿರು ಬಿಟ್ಟಾಗ ದಕ್ಕಿದ್ದು</br>
<br>ನಿನ್ನದಲ್ಲವೆಂಬ ಅವ್ಯಕ್ತಭಾವ</br>
<br>
</br>
<br>ಓ ಮೌನವೇ...ಮಾತಾಗಬೇಡ</br>
<br>ಕ್ಷಣ ಮಾತ್ರಕ್ಕಾದರೂ</br>
<br>ಇನಿಯನಾಗಿಬಿಡು</br>
<br>
</br>
<br>ರಕುತದ ಕಲೆಯಲ್ಲಿ ಚಿತ್ತಾರ </br>
<br>ಬಿಡಿಸಿ ಸುಮ್ಮನಾದಾಗ</br>
<br>ದೂರ ದಿಗಂತದಲ್ಲಿನ ಚುಕ್ಕಿ</br>
<br>ಕಣ್ಣು ಮಿಟುಕಿಸಿ ಹೋದಂತೆ</br>
<br>ಹೇಳದೇ ಹೋದ ಮಾತುಗಳನು</br>
<br>ಅಪ್ಪಿ ಮುದ್ದಾಡಿ ಚುಂಬಿಸುವಾಗ</br>
<br>ನಾನು ನಿನ್ನವಳಾಗಿ ಬಿಡಬೇಕು</br>
<br>
</br>
<br>ಕಣ್ಣೀರು ಮೂಡಿಸಿದ ಕಾಮನಬಿಲ್ಲಿನಲಿ</br>
<br>ಬಣ್ಣಗಳ ಎಣಿಸುವಾಗ</br>
<br>ನೀನು ಮಾತಾಗಬೇಕು</br>
<br>ನಿನ್ನ ಮಾತಿನಲ್ಲಡಗಿದ ಮೌನ</br>
<br>ನಾನಾಗಬೇಕು</br>
ಅನುರಾಗhttp://www.blogger.com/profile/13411740540409360931noreply@blogger.com3Bangalore, Karnataka, India12.9715987 77.59456269999998312.4764182 76.949115699999979 13.4667792 78.240009699999987tag:blogger.com,1999:blog-4320259625062903049.post-23769904991747249762014-06-15T03:22:00.004+05:302014-06-15T03:22:46.866+05:30ಅಪ್ಪನ ಡೈರಿಯಿಂದ ಕದ್ದ ಪುಟ...
<div class="separator" style="clear: both; text-align: center;"><a href="http://3.bp.blogspot.com/-R_qLG7VSq8g/U5zCK6tat1I/AAAAAAAAA9w/qTE0KjT5EJE/s1600/appa.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-R_qLG7VSq8g/U5zCK6tat1I/AAAAAAAAA9w/qTE0KjT5EJE/s320/appa.jpg" /></a></div>
<br>ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ?</br>
<br>ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು.
ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ.
ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ!</br>
<br> ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆಗೆ ಸಮಾಧಾನ. ಇವತ್ತು ನಾನೂ ಇದೇ ಪ್ರಯೋಗ ಮಾಡೋಕೆ ಹೊರಟಿದ್ದೇನೆ. ನನ್ನ ಮನಸ್ಸಲ್ಲಿರೋದನ್ನು ಬರೆಯಬೇಕು.
ಎಲ್ಲಿಂದ ಶುರು ಮಾಡಲಿ? ನಾನು ಜಾಸ್ತಿ ಮಾತಾಡುವುದಿಲ್ಲ, ಸಿಟ್ಟು ಬಂದರೆ, ಬೇಜಾರಾದಾಗಲೆಲ್ಲಾ ನಾನು ಮೌನದ ಮೊರೆ ಹೋಗುತ್ತೇನೆ. ಅದೆಷ್ಟೋ ಸಾರಿ ನನ್ನವಳ ಜತೆ ಜಗಳವಾಡುವಾಗ ನಾನು ಮೌನವಾಗಿಯೇ ಇದ್ದು ಬಿಡುತ್ತೇನೆ. ಏನಾದ್ರೂ ಮಾತಾಡಿ, ನಾನು ಹೇಳೋದು ಕೇಳಿಸ್ತಾ ? ಎಂದು ಬೊಬ್ಬೆ ಹಾಕಿ ಅವಳು ಸುಮ್ಮನಾಗುತ್ತಾಳೆ. ಹೀಗೆ ನಮ್ಮ ದಾಂಪತ್ಯದಲ್ಲಿ ನನ್ನ ಮೌನ ಅದೆಷ್ಟೋ ಜಗಳಗಳನ್ನು, ಅದೆಷ್ಟೋ ನೋವುಗಳನ್ನು ನುಂಗಿ ಅನಾಹುತಗಳನ್ನು ತಪ್ಪಿಸಿದೆ. ಕೋಪ ಬಂದಾಗ ಅವಳು ಪ್ರವಾಹದಂತೆ ಧುಮ್ಮಿಕ್ಕಿ
ಹರಿಯುತ್ತಾಳೆ. ಅವಳ ಕೋಪದ ಮುಂದೆ ನಾನು ಶಾಂತ ಸಾಗರವಾಗುತ್ತೇನೆ. ನಮ್ಮಿಬ್ಬರ ಜೀವನದ ಭರತ ಇಳಿತಗಳಲ್ಲಿ ಕೆಲವೊಮ್ಮೆ ನಮ್ಮ ಮಾತುಗಳು ಮೌನವಾಗುತ್ತವೆ, ಮೌನ ಮಾತಾಗುತ್ತದೆ. ಈ ಮೌನವೇ ನಮ್ಮಿಬ್ಬರನ್ನು ಒಂದಾಗಿ ಬಾಳುವಂತೆ ಮಾಡಿದ್ದು.</br>
<br>ಮಾತಿನೆಡೆಯಲ್ಲಿ ಕಾಡಿಸುವ ಮೌನಕ್ಕೆ ಎಷ್ಟೊಂದು ಅರ್ಥಗಳು!. ಸಿಟ್ಟು, ಅಸಹನೆ, ಅಸೂಯೆ, ದ್ವೇಷ ಎಲ್ಲವನ್ನೂ ಮೌನ ನುಂಗಿ ಬಿಡುತ್ತೆ ನಿಜ. ಆದರೆ ಪ್ರೀತಿ? ಅದು ಮೌನದಲ್ಲೇ ಹುಟ್ಟುತ್ತದೆ, ಕೆಲವೊಮ್ಮೆ ಮೌನದಲ್ಲೇ ಇಲ್ಲವಾಗುತ್ತದೆ. ಮಾತುಗಳಲ್ಲಿ ಹೇಳಲಾರದೇ ಇರುವ ವಿಷಯಗಳು ಮೌನದಲ್ಲಡಗಿರುತ್ತವೆ ಅಲ್ವಾ. ನನ್ನ ಹೆಂಡ್ತಿ ವಿಷ್ಯದಲ್ಲಿ ಮಾತ್ರ ಅಲ್ಲ, ಮಕ್ಕಳ ವಿಷ್ಯದಲ್ಲೂ ಅಷ್ಟೇ. ಅವರ ಮೌನಗಳು ಸಾವಿರ ಮಾತುಗಳನ್ನು ಹೇಳುತ್ತವೆ. ಪುಟ್ಟ ಮಗು ಅಳುತ್ತಾ ತನಗೇನು ಬೇಕು ಎಂಬುದನ್ನು ಹೇಳುತ್ತೆ, ಆದರೆ ಮಕ್ಕಳು ಟೀನೇಜ್ಗೆ ಕಾಲಿರಿಸಿದಾಗ ಎಲ್ಲವನ್ನೂ ನೇರಾನೇರವಾಗಿ ಹೇಳತೊಡಗುತ್ತಾರೆ. ಟೀನೇಜ್ ದಾಟಿದ ನಂತರ ಮಾತಿಗಿಂತ ಅವರ ಮೌನಗಳೇ ಬೇಕು ಬೇಡಗಳನ್ನು ಹೇಳುತ್ತಿರುತ್ತವೆ. ನಾನೀಗ ನನ್ನ ಮಕ್ಕಳ ಮೌನವನ್ನು ಆಲಿಸುತ್ತಿದ್ದೇನೆ.</br>
<br>ಮಗ ಮೌನವಾಗಿದ್ದರೆ, ಕುಡಿದಿದ್ದಾನೋ ಅನ್ನೋ ಡೌಟು. ಮಗಳು ಮೌನವಾಗಿದ್ದರೆ ಅವಳಿಗೆ ಏನೋ ಹೇಳೋಕೆ ಇದೆ ಅಂತಾನೇ ಅರ್ಥ. ಅವರು ಮೌನವಾಗಿ ಕುಳಿತಿರೋದನ್ನು ನೋಡಿದರೆ ಅವರಿಗಿಬ್ಬರಿಗೂ ಏನೋ ಹೇಳೋಕೆ ಇದೆ ಎಂಬುದಂತೂ ಸತ್ಯ. ಮಗನ ಮನಸ್ಸಲ್ಲಿ ಏನಿದೆ? ಅಂತಾ ಅವನ ಅಮ್ಮ ಚೆನ್ನಾಗಿ ಅರ್ಥ ಮಾಡಿಕೊಳ್ತಾಳೆ. ಆದ್ರೆ ಮಗಳ ಮನಸ್ಸಲ್ಲಿರೋದು ಅಪ್ಪನಿಗೆ ಬೇಗ ಅರ್ಥವಾಗುತ್ತದೆ. ಯಾವತ್ತೂ ಚಾಟರ್ ಬಾಕ್ಸ್ನಂತೆ ಮಾತನಾಡುತ್ತಿದ್ದ ಮಗಳು ಮೌನವಾಗಿದ್ದಾಳೆ ಅಂದ್ರೆ? ಅವಳ ಮನಸ್ಸಲ್ಲಿ ಏನೋ ಇದೆ, ಹೇಳಬೇಕೆಂಬ ಬಯಕೆ ಇದ್ದರೂ ಹೇಳಲಾರದ ಚಡಪಡಿಕೆ. ಅವತ್ತು ಅವಳು ಬಂದು ನನ್ನ ಎದೆಗೊರಗಿ ಕಣ್ಣೀರಿಟ್ಟ ಕ್ಷಣದಲ್ಲೇ ಅರ್ಥವಾಗಿತ್ತು. </br>
<br>"ನನಗೆ 'ಅವನು' ಇಷ್ಟ ಆಗ್ತಾನೆ. ಆದ್ರೆ ನೀವು ಹೇಳಿದ ಹುಡುಗನನ್ನೇ ಮದ್ವೆ ಆಗ್ತೀನಿ ಅಪ್ಪಾ. ನಾನು ಬೇರೆ ಹುಡುಗನನ್ನ ಇಷ್ಟ ಪಡುತ್ತಿದ್ದೀನಿ ಅಂತಾ ಬೇಜಾರಾಗ್ಬೇಡಿ. ನಾನು ಪ್ರೀತಿಸುತ್ತಿರುವ ಬಗ್ಗೆ ಅವನಿಗೆ ಗೊತ್ತಿಲ್ಲ, ನಾನು ಹೇಳುವುದೂ ಇಲ್ಲ. ನಾವಿಬ್ಬರೂ ಸಮಾನಾಂತರ ರೇಖೆಗಳು. ಅವು ಎಂದೂ ಒಂದಾಗಲ್ಲ ಎಂದು ಗೊತ್ತಿರುವುದರಿಂದಲೇ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಮುಚ್ಚಿಟ್ಟಿದ್ದೀನಿ. ಜೀವನದಲ್ಲಿ ನಾನೂ ಒಬ್ಬನನ್ನು ಪ್ರೀತಿಸಿದ್ದೆ ಎಂದು ಅಂದುಕೊಳ್ಳುವಾಗ ಪುಳಕ ಅನುಭವಿಸೋಕೆ ಈ ಮೌನ ಪ್ರೀತಿಯ ಅನುಭವಗಳಷ್ಟೇ ಸಾಕು. ಯಾರ ಮನಸ್ಸನ್ನು ನೋಯಿಸುವುದು ನನಗೆ ಇಷ್ಟವಿಲ್ಲ. ಅವನು ನನ್ನನ್ನು ಇಷ್ಟ ಪಡ್ತಾನೋ ಇಲ್ವೋ ಅನ್ನೋದು ನನಗೆ ಬೇಕಿಲ್ಲ. ಅವನೆಂದರೆ ನನಗಿಷ್ಟ. ಈ ನನ್ನ ಪ್ರೀತಿ ಮನಸ್ಸಲ್ಲೇ ಇದ್ದರೆ ಚೆಂದ ಅಲ್ವಾ..."</br>
<br>"ನನ್ನ ಈ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗಲ್ಲ ಅಂತ ಗೊತ್ತಿದೆ. ಅಮ್ಮ ಅಳುತ್ತಾ, ಬೈದು ಕಿರುಚಾಡಿದ್ರೂ ಅಪ್ಪ ಮೌನವಾಗಿರ್ತಾರೆ. ಎಷ್ಟು ದಿನ ಹಾಗೆ ಇರೋಕೆ ಸಾಧ್ಯ? ನಾನು ಪ್ರೀತಿಸುತ್ತಿರುವ ಹುಡುಗಿಯನ್ನು ನಾನು ಮದುವೆಯಾಗಲೇ ಬೇಕು. ಅಪ್ಪ ಅಮ್ಮನ ಮನವೊಲಿಸಿ ಅವಳನ್ನೇ ನನ್ನ ಬಾಳಸಂಗಾತಿಯನ್ನಾಗಿ ಮಾಡಬೇಕು. ಆದರೆ ಈ ವಿಷ್ಯವನ್ನು ಅಪ್ಪನಲ್ಲಿ ಹೇಳುವುದಾದರೂ ಹೇಗೆ? ಧೈರ್ಯ ಬರಲಿ ಅಂತಾ ಕುಡಿದದ್ದೂ ಆಯ್ತು, ಈಗ ಮಾತೇ ಹೊರಡುತ್ತಿಲ್ಲ."</br>
<br>ನನ್ನ ಮಗ-ಮಗಳು, ಇವರಿಬ್ಬರ ಮೌನಕ್ಕೆ ಕಾರಣ ಇದಾಗಿರಬಹುದಾ? ಇದೆಲ್ಲವೂ ಆಕೆಗೆ ಗೊತ್ತಿದ್ದರೂ ಹಾಗೆ ಸುಮ್ಮನಾಗಿದ್ದಾಳಾ ? ಅವಳೂ ಈ ಬಗ್ಗೆ ತನಗೆ ಹೇಳಲಾಗದೆ ಬರೆದಿಟ್ಟಿರಬಹುದಾ? ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನೀಗ ಗೀಚಿದ್ದೇನೆ. ಅವಳು ಹೇಳಿದ್ದು ನಿಜ, ಮನಸ್ಸು ನಿರಾಳವಾಗಿದೆ. ನನ್ನೊಳಗಿನ ಹಾಗು ನನ್ನವರ ಮೌನಗಳ ಅರ್ಥ ಹುಡುಕುತ್ತಾ ಏನೇನೋ ಬರೆಯುತ್ತಾ ಹೋದೆ. ನನ್ನೊಳಗಿನ ಮೌನವೇ ಇಲ್ಲಿ ಮಾತಾಗಿದೆ. ಮುಂದೊಂದು ದಿನ ಈ ಹಾಳೆಯನ್ನು ತಿರುವಿ ಹಾಕುವಾಗ ಈ ಅಕ್ಷರಗಳು ನನ್ನೊಡನೆ ಮಾತಿಗಿಳಿಯುತ್ತವೆ. ಆವಾಗ ನಾನು ಮೌನವಾಗಿದ್ದು ಅವುಗಳ ಮಾತನ್ನು ಆಲಿಸುತ್ತೇನೆ. ಯಾರಿಗೆ ಗೊತ್ತು? ಆ ಕ್ಷಣದಲ್ಲಿ ಈ ಮೌನಕ್ಕೆ ಇನ್ನೊಂದು ಅರ್ಥ ಹೊಳೆದರೂ ಹೊಳೆಯಬಹುದು! ಅಲ್ವಾ?</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-55650807682096715202014-06-08T21:44:00.003+05:302014-06-08T21:46:09.708+05:30ಈ ಕ್ಷಣದ ಮೌನ
<a href="http://4.bp.blogspot.com/-1cCQBCWdUag/U5SK6TJkKmI/AAAAAAAAA9g/grSjd1KZ8Mk/s1600/love.jpg" imageanchor="1" ><img border="0" src="http://4.bp.blogspot.com/-1cCQBCWdUag/U5SK6TJkKmI/AAAAAAAAA9g/grSjd1KZ8Mk/s320/love.jpg" /></a><br>ನೀ ನನ್ನೊಂದಿಗೆ</br>
<br>ಮಾತು ಬಿಟ್ಟ ಕ್ಷಣ</br>
<br>ಮೌನದಲಿ ಮಾತು ಮೊಳಕೆಯೊಡೆದಿತ್ತು</br>
<br>
</br>
<br>ನಾವಿಬ್ಬರೂ ಹೆಚ್ಚು ಮಾತನಾಡಿದ್ದೂ</br>
<br>ಈ ಮೌನದಲ್ಲೇ...</br>
<br>
</br>
<br>ಆರೋಹಣ ಅವರೋಹಣದ</br>
<br>ನಿಟ್ಟುಸಿರ ಸಂಜೆಗಳಲಿ</br>
<br>ಬಯ್ಯ ಮಲ್ಲಿಗೆ ಬಿರಿಯುವಾಗ</br>
<br>ನೀನದನ್ನು ವಸಂತವೆಂದು ಕರೆದೆ</br>
<br>
</br>
<br>ನನ್ನ ಪ್ರೀತಿಯ ಸೆಳೆತವನ್ನು</br>
<br>ನದಿಗೆ</br>
<br>ಹೋಲಿಸುವಾಗ</br>
<br>ನೀನು ಪ್ರಶಾಂತ ಸಾಗರವಾಗಿದ್ದೆ...</br>
<br>
</br>
<br>ದಿಗಂತದಲಿ ಹಾರಾಡುವ </br>
<br>ಹಕ್ಕಿಗೂ</br>
<br>ನೀರಲ್ಲಿ ತೇಲುವ ಮೀನಿಗೂ </br>
<br>ಇದೆ</br>
<br>ಬಂಧನದ ಭಯ!</br>
<br>
</br>
<br>ಪ್ರೀತಿಯ ಬಾಹುಗಳಲ್ಲಿ</br>
<br>ಕಣ್ಮುಚ್ಚಿ</br>
<br>ಬಂಧಿಯಾಗುವ ಹೊತ್ತು</br>
<br>ಸೇರಿಕೊಳ್ಳುವ ತವಕದ</br>
<br>ಹಿಂದೆ</br>
<br>ಕಳೆದುಕೊಳ್ಳುವ ಭೀತಿ</br>
<br>ಮುಖವಾಡ ಧರಿಸಿ</br>
<br>ನಕ್ಕಾಗ</br>
<br>
</br>
<br>ಮಾತು-ಮೌನದ</br>
<br>ನಡುವೆ ಪ್ರೀತಿ</br>
<br>ಬಿಕ್ಕಳಿಸಿದ್ದು</br>
<br>ಕೊನೆಗೂ ಕೇಳಲೇ ಇಲ್ಲ</br>
ಅನುರಾಗhttp://www.blogger.com/profile/13411740540409360931noreply@blogger.com2tag:blogger.com,1999:blog-4320259625062903049.post-7501889687376554642014-02-14T10:26:00.001+05:302014-02-14T10:26:23.878+05:30ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ
<div class="separator" style="clear: both; text-align: center;"><a href="http://3.bp.blogspot.com/-03HsvgeuzeU/Uv2gxWVOE6I/AAAAAAAAA4M/CfDv903Qo08/s1600/love.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-03HsvgeuzeU/Uv2gxWVOE6I/AAAAAAAAA4M/CfDv903Qo08/s320/love.jpg" /></a></div>
<br>ಪ್ರೀತಿ ಎಂದರೆ?</br>
<br>After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ.</br>
<br>ಅವನನ್ನೇ ದುರುಗುಟ್ಟಿ ನೋಡಿದೆ.</br>
<br>ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು.</br>
<br>ನಾನು ಸೀರಿಯಸ್ಸಾಗಿ ಕೇಳಿದ್ದು ...
<br>ನಾನು ಸೀರಿಯಸ್ಸಾಗಿಯೇ ಹೇಳಿದ್ದು...</br>
<br>ನಿನ್ನ ಜತೆ ವಾದ ಮಾಡಲ್ಲ</br>
<br>ಪೆದ್ದಿ ನೀನು...</br>
<br>ಹೌದು...</br>
<br>ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ </br>
<br>ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ?</br>
<br>ಛೇ...ಬೇಡ...</br>
<br>ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ...</br>
<br>ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ...</br>
<br>ಯೇ ತೋ ಪಾಗಲ್ ಹೋಗಯಿ! ನನ್ನ ಮಾತಿಗೆ ಗೆಳತಿಯರ ಪ್ರತಿಕ್ರಿಯೆ.</br>
<br>ಅರೇ, ಕವನ, ಕಥೆ ಬರೀತಾನೆ ಅನ್ನೋ ಕಾರಣಕ್ಕೆ ಅವನನ್ನು ಲವ್ ಮಾಡೋದಾ? ಈ ಕಾಲದಲ್ಲಿ ಎಲ್ಲರೂ ಪ್ಯಾಕೇಜ್ ನೋಡ್ಕೊಂಡು ಲವ್ ಮಾಡೋಕೆ ನೋಡ್ತಾರೆ. ಹೀಗಿರುವಾಗ ಅವನ ಬರವಣಿಗೆ ಮೆಚ್ಚಿ ಕೊಂಡು ಲವ್ ಮಾಡೋಕೆ ಹೊರಟಿದ್ಯಾ? ಅನ್ನೋ ಉಪದೇಶಗಳ ಸುರಿಮಳೆ.</br>
<br>ಸರಿ, ನಿನಗವನು ಇಷ್ಟ ಆಗಿದ್ದಾನೆ ಅಂದ್ರೆ ನೇರಾನೇರ ಅವನಿಗೆ ಹೇಳಿ ಬಿಡು. ಅವನೇನಂತಾನೆ ನೋಡಿಯೇ ಬಿಡೋಣ..</br>
<br>ನಾ ಹೇಳಲ್ಲ! ಭಯ ಆಗ್ತಿದೆ.</br>
<br>ಪುಕ್ಕಲು ನೀನು...ವಾಟ್ಸಪ್ನಲ್ಲೊಂದು ಮೆಸೇಜ್ ಕಳಿಸಿದ್ರೆ ಮುಗೀತು. </br>
<br>ಬೇಡ..</br>
<br>ಈ ಪ್ರೀತಿ ಹಾಗೇ ಮನಸ್ಸಲ್ಲೇ ಇರಲಿ. ನನ್ನ ನಿವೇದನೆ ಅವನು ಸ್ವೀಕರಿಸದೇ ಇದ್ದರೆ ಬೇಜಾರಾಗುತ್ತೆ. ತಿರಸ್ಕಾರದ ನೋವು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಅವನಿಗರಿವಿಲ್ಲದಂತೆ ಪ್ರೀತಿಸುವುದರಲ್ಲೂ ಒಂಥರಾ ಖುಷಿಯಿದೆ. ಅಲ್ಲಿ ಮಾತುಗಳೂ ಇಲ್ಲ, ಪ್ರಾಮಿಸ್ಗಳೂ ಇರಲ್ಲ. ನನಗನಿಸಿದಂತೆ ಪ್ರೀತಿಯ ಲೋಕದಲ್ಲಿ ವಿಹರಿಸಬಹುದು. ಯಾರೂ ಏನೂ ಹೇಳುವಂತಿಲ್ಲ. ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಬೇಕೆಂದರೆ ಏನಾದರೂ ಗೀಚಿದರೆ ಮುಗಿಯಿತು. ಅಕ್ಷರಗಳಲ್ಲೇ ಅವನ ಪ್ರೀತಿಯನ್ನು ಪೋಣಿಸುವಾಗ ಸಿಗುವ ಖುಷಿ ಇದೆಯಲ್ಲಾ ಅದು ಹೇಳಿದರೆ ಅರ್ಥವಾಗಲ್ಲ.</br>
<br>ವರ್ಷಗಳು ಕಳೆದ ಮೇಲೆ ಇದನ್ನೆಲ್ಲಾ ಓದುವಾಗ ನಗು ಬರಬಹುದು. ನಾಳೆ ನನ್ನ ಗಂಡ, ಮಗು ಸಂಸಾರ ಎಂದು ಕಳೆದುಹೋಗಿರುತ್ತೇನೆ. ಆದರೆ ಈ ವಯಸ್ಸಿನಲ್ಲಿ ಮನಸ್ಸಲ್ಲೇ ಮೂಡಿದ ಮೌನ ಪ್ರೀತಿಯ ಅನುಭವಗಳು ಇದೆಯಲ್ಲಾ..ಅದು ಈ ಕ್ಷಣಕ್ಕೆ ಸಿಕ್ಕ ಸಂಜೀವಿನಿಯಂತೆ. ನಾಳೆ ಏನಾಗುತ್ತೋ ಎಂಬುದನ್ನು ಯಾರು ಬಲ್ಲರು? ಈ ಕ್ಷಣವನ್ನು ಮಧುರವಾಗಿಯೇ ಕಳೆಯಬೇಕು. ಆದಾಗ್ಯೂ, ಬದುಕಿನ ತಳಹದಿಯೇ ಪ್ರೀತಿಯಲ್ಲವೇ? ಈ ಪ್ರೀತಿಯ ನೆಪದಲ್ಲಿ ಬದುಕು ಸುಂದರವಾಗಿ ಇರಬೇಕು. ಪ್ರಾರ್ಥನೆ, ಕನಸು, ಸಾಧನೆ ಎಲ್ಲವೂ ನಮ್ಮ ನಂಬಿಕೆಯಿಂದಲೇ ಸಾಧ್ಯವಾಗಿರುವಾಗ ಅವನ ಪ್ರೀತಿಯೂ ನಂಬಿಕೆಯೇ ಆಗಿರಲಿ. </br>
<br>ಅವನ ಮನಸ್ಸಿನಲ್ಲಿ ಯಾರಿದ್ದಾರೆ ? ಅನ್ನೋ ಕುತೂಹಲವೂ ನನಗಿಲ್ಲ. ಇದು ನಾನು ಪ್ರೀತಿ ಮಾಡುವ ಪರಿ. ನನ್ನದು ಮಾತ್ರವಾಗಿರಲಿ...ಮನಸ್ಸನ್ನು ಖುಷಿಯಾಗಿರಿಸಲು ಇಷ್ಟು ಸಾಕು! </br>
<br>ಇಷ್ಟು ಬರೆದು ಡೈರಿ ಮುಚ್ಚಿದೆ..</br>
ಅನುರಾಗhttp://www.blogger.com/profile/13411740540409360931noreply@blogger.com1tag:blogger.com,1999:blog-4320259625062903049.post-51514911005034234972013-10-12T01:21:00.000+05:302013-10-12T01:21:07.085+05:30ದೇವರಿದ್ದಾನೆ!<div class="separator" style="clear: both; text-align: center;"><a href="http://1.bp.blogspot.com/-7vGtgaU4de4/UlhWWa8mQHI/AAAAAAAAA0U/UpM8tU8lSbI/s1600/god1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://1.bp.blogspot.com/-7vGtgaU4de4/UlhWWa8mQHI/AAAAAAAAA0U/UpM8tU8lSbI/s320/god1.jpg" /></a></div>
<br>ಅಮ್ಮಾ ಈ ಎಳನೀರಲ್ಲಿ</br>
<br>ನೀರು ಹೇಗೆ ಬಂತು </br>
<br>ಎಂದು ಕೇಳುವ ಕೂಸು</br>
<br>ಅಗರಬತ್ತಿಯ ಪರಿಮಳದಲ್ಲಿ</br>
<br>ಉತ್ತರ ಕಂಡು ಕೊಂಡಿತ್ತು...</br>
<br>
</br>
<br>ದೇವರಿದ್ದಾನೆ!</br>
<br>
</br>
<br>ನೀ ನೋಡಿದ್ದೀಯಾ?</br>
<br>ಕೇಳಿದ್ದಳು ಗೆಳತಿ.. </br>
<br>ಹೂಂ ನೋಡಿದ್ದೇನೆ ಕಣೇ..</br>
<br>
</br>
<br>ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ</br>
<br>ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ</br>
<br>ಜೇಬು ಖಾಲಿಯಾಗಿರುವಾಗ</br>
<br>ಪ್ರತಿಫಲ ಬಯಸದೆ</br>
<br>ಯಾರೋ ಕೊಟ್ಟ ದುಡ್ಡಲ್ಲಿ</br>
<br>ನಾನವನ ಕಂಡಿದ್ದೆ</br>
<br>
</br>
<br>ಮೊನ್ನೆ ಮತ್ತೆ ಸಿಕ್ಕಿದ ಕಣೇ</br>
<br>ಕಣ್ಣೀರು ಸುರಿಸಿ ನಡೆಯುವಾಗ</br>
<br>ನೋಡಿ ನಕ್ಕಿದ್ದ</br>
<br>ದುರುಗುಟ್ಟಿ ನೋಡಿದೆ</br>
<br>ನಾನಿದ್ದೀನಿ ಎಂದು ಹೇಳಿದ</br>
<br>
</br>
<br>ಎಲ್ಲಿ ಎಂದು ಕೇಳಿಯೇ ಬಿಟ್ಟೆ</br>
<br>ನಿನ್ನಲ್ಲಿ ಎಂದು ಬಿಡುವುದೆ?</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-63154553513053947932013-10-02T02:52:00.000+05:302013-10-02T02:52:20.605+05:30ಗಾಂಧಿ ಬಾ...<a href="http://1.bp.blogspot.com/-XGlUl3cw14E/Uks74f5h3zI/AAAAAAAAA0A/JjLBG5MuzUQ/s1600/gandhi.jpg" imageanchor="1" ><img border="0" src="http://1.bp.blogspot.com/-XGlUl3cw14E/Uks74f5h3zI/AAAAAAAAA0A/JjLBG5MuzUQ/s320/gandhi.jpg" /></a>
<br>ಮೂರು ದಾರಿ ಸೇರುವ ಜಂಕ್ಷನ್ನಲ್ಲಿ</br>
<br>ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ</br>
<br>ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ</br>
<br>ಮೌನ ಸಾಕ್ಷಿಯಾಗಿ</br>
<br>ನಿಂತಿರುವ ಭೈರಾಗಿ</br>
<br>
</br>
<br>ಸರ್ಕಾರಿ ಕಚೇರಿಗಳ ಗೋಡೆಗೆ</br>
<br>ತೂಗು ಹಾಕಿದ ಫೋಟೋಗಳಲಿ</br>
<br>ಭ್ರಷ್ಟಾಚಾರಿಗಳ ನೋಡಿ </br>
<br>ಮರುಗುತ್ತಾ</br>
<br>ಲಂಚದ ನೋಟಿನ ಕಂತೆಗಳಲಿ</br>
<br>ನಗುತಿಹನು ಗಾಂಧಿ</br>
<br>
</br>
<br>ನೀ ಮಹಾತ್ಮ...ಅಹುದಹುದು</br>
<br>ರಾಷ್ಟ್ರಪಿತ ಎಂದು ಕರೆದಿದ್ದರೂ</br>
<br>ಸಂವಿಧಾನದ 18 (1) ಪರಿಚ್ಛೇದ ಪ್ರಕಾರ</br>
<br>ಇದು ಅಸಂವಿಧಾನಿಕವಂತೆ!</br>
<br>
</br>
<br>ನಿನ್ನ ಆತ್ಮಕತೆಯನ್ನೋದಿ</br>
<br>ಮನದಲ್ಲೇ ಧ್ಯಾನಿಸಿದೆ </br>
<br>ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ</br>
<br>ಕಣ್ಮುಂದೆ ಬಂದಾಗ</br>
<br>ಕಣ್ಣು ತೆರೆದೆ...</br>
<br>ನೀನು ಕಣ್ಮುಚ್ಚಿ ನಕ್ಕಿರಬಹುದೆ?</br>
<br>
</br>
<br>ನಿನ್ನ ಮೇಲೆ ಆರೋಪಗಳನ್ನು</br>
<br>ಹೊರಿಸಿ ಪತ್ರಿಕೆ,</br>
<br>ಫೇಸುಬುಕ್, ಟ್ವೀಟರ್ ಗಳಲ್ಲಿ</br>
<br>ಗಾಂಧಿ ಹೀಗಿದ್ದರು ಎಂದು ಜರೆಯುವಾಗ</br>
<br>ಮನದಲ್ಲಿ ಕಸಿವಿಸಿ</br>
<br>ನೀನದಕೆ ಉತ್ತರ ನೀಡುವಂತಿದ್ದರೆ...</br>
<br>
</br>
<br>ಅಹಿಂಸೆಯೇ ಧರ್ಮ</br>
<br>ಸತ್ಯವೇ ಬಲವೆಂದು</br>
<br>ಬಾಳಿ ಬದುಕಿದ </br>
<br>ನೀನು</br>
<br>ಸ್ವಾತಂತ್ರ್ಯ ಸಿಕ್ಕಿದಾಗಲೂ </br>
<br>ದೇಶ ವಿಭಜನೆಯ ನೋವಲ್ಲಿ</br>
<br>ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ</br>
<br>
</br>
<br>ಕೊನೆಗೆ ಗೋಡ್ಸೆಯ ಗುಂಡೊಂದು</br>
<br>ನಿನ್ನೆದೆಯ ಸೀಳಿದಾಗ</br>
<br>ಹೇ ರಾಮ್ ಎಂಬ ಕೊನೆಯ </br>
<br>ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ!</br>
<br>
</br>
<br>ಹೇ...ಸಬರ್ಮತಿಯ ಸಂತ</br>
<br>ಮತ್ತೊಮ್ಮೆ ಹುಟ್ಟಿ ಬರುವಿಯಾದರೆ</br>
<br>ಬೇಗ ಬಾ...</br>
<br>ಆದರೆ ಒಂದು ಕಂಡೀಷನ್</br>
<br>ಈ ನೆಲದಲ್ಲಿ ಕಾಲಿಡದೆ</br>
<br>ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...</br>
ಅನುರಾಗhttp://www.blogger.com/profile/13411740540409360931noreply@blogger.com3tag:blogger.com,1999:blog-4320259625062903049.post-8946235741167310462013-09-04T20:33:00.000+05:302013-09-04T20:33:23.461+05:30ಜಾಹೀರಾತು<div class="separator" style="clear: both; text-align: center;"><a href="http://3.bp.blogspot.com/-sw6HzXZtcng/UidLgtJwxsI/AAAAAAAAAyg/zjTVXQsVgSs/s1600/bath.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://3.bp.blogspot.com/-sw6HzXZtcng/UidLgtJwxsI/AAAAAAAAAyg/zjTVXQsVgSs/s320/bath.jpg" /></a></div>
<br>ಸುಗಂಧ ಭರಿತ </br>
<br>ಸೋಪುಗಳನ್ನು</br>
<br>ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ</br>
<br>ನೊರೆಗಳನ್ನೊಮ್ಮೆ ಊದಿ</br>
<br>ಗುಳ್ಳೆಗಳನ್ನು ಕಂಡು ನಕ್ಕು...</br>
<br>
</br>
<br>ಅರ್ಧ ದೇಹವನ್ನು ತುಂಡು</br>
<br>ಬಟ್ಟೆಯಲ್ಲಡಗಿಸಿ</br>
<br>ತನಗಾಗಿ ಕಾದು ನಿಂತ</br>
<br>ಪ್ರಿಯಕರನ ತೆಕ್ಕೆಗೆ ಬಿದ್ದು</br>
<br>
</br>
<br>ಅವನು ಅವಳ ದೇಹ</br>
<br>ಗಂಧದಲ್ಲಿ ತಲ್ಲೀನವಾಗುವ</br>
<br>2 ನಿಮಿಷದ ಜಾಹೀರಾತು</br>
<br>
</br>
<br>ಹಸಿದ ಹೊಟ್ಟೆಯಲ್ಲಿ ನಗುವುದನ್ನೂ</br>
<br>ಸೌಂದರ್ಯವೆಂದರೆ ದೇಹ </br>
<br>ಮಾತ್ರವಲ್ಲ ಎಂಬುದನ್ನು</br>
<br>ಬದುಕು ಆಕೆಗೆ ಕಲಿಸಿದಾಗ</br>
<br>ಅವಳು ಕ್ಯಾಮೆರಾ ಮುಂದೆ</br>
<br>ಮೀಯಲಿಲ್ಲ...</br>
<br>ಅವಳ ದೇಹಗಂಧವನ್ನರಸಿ</br>
<br>ಯಾರೂ ಬರಲಿಲ್ಲ!</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-17265849767052863212013-08-28T18:50:00.000+05:302013-08-28T19:07:20.254+05:30ನದಿ<div class="separator" style="clear: both; text-align: center;"><a href="http://2.bp.blogspot.com/-UZOmCUyWWc8/Uh349nti0tI/AAAAAAAAAyM/GkNqg2OW8oM/s1600/3.jpg" imageanchor="1" style="margin-left: 1em; margin-right: 1em;"><img border="0" src="http://2.bp.blogspot.com/-UZOmCUyWWc8/Uh349nti0tI/AAAAAAAAAyM/GkNqg2OW8oM/s320/3.jpg" /></a></div>
<br>ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ</br>
<br>ಸಿಕ್ಕು</br>
<br>ಪುಟ್ಟ ಪಾದಗಳಿಗೆ ಮುತ್ತಿಕ್ಕಿ</br>
<br>ಕಿಲಕಿಲ ನಗುವಿಗೆ</br>
<br>ಸಾಥಿಯಾಗಿದ್ದು,</br>
<br>ಇಂದು ಊದಿಕೊಂಡ ಅವಳ</br>
<br>ಶವವನ್ನು ಹೊತ್ತು</br>
<br>
</br>
<br>ದಡದಲ್ಲಿ, ಮಳೆಯಂತೆ ಕಣ್ಣೀರು</br>
<br>ಸುರಿಸುವ ಅಮ್ಮನನ್ನೂ</br>
<br>ಲೆಕ್ಕಿಸದೆ ಹರಿಯುತ್ತಿದೆ</br>
<br>ನದಿ...</br>
<br>
</br>
<br>ಇವಳು ನಾವಂದು ಕೊಂಡಂತೆ</br>
<br>ಇಲ್ಲ</br>
<br>ಎಂದು ಜನರಾಡಿಕೊಳ್ತಾರೆ</br>
<br>
</br>
<br>ಆಷಾಢದಲ್ಲಿ ರಭಸವಾಗಿ</br>
<br>ಹರಿವ ಕೋಪಿಷ್ಠೆ</br>
<br>ಮಕರ ಮಾಸದ ಮಂಜು ಮುಸುಕಿದ </br>
<br>ಮುಂಜಾವಿನಲಿ</br>
<br>ಹುಸಿಕೋಪ ತರಿಸುವ ಪ್ರೇಯಸಿ</br>
<br>
</br>
<br>ಒಡಲೊಳಗೆ ಪ್ರೇಮದ ತಾಪ</br>
<br>ಹೊರಗೆ ತಂಪಾದ ಮೈ</br>
<br>ಮೆಲುನಗೆಯ ಮೋನಾಲಿಸಾಳಂತೆ</br>
<br>ಚಿತ್ರ ವಿಚಿತ್ರ ಛಾಯೆ...</br>
<br>
</br>
<br>ಚಂದಿರನ ಬೆಳಕಲ್ಲಿ</br>
<br>ಹಾಲುಕ್ಕಿದಂತೆ ಹರಿವ</br>
<br>ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ</br>
<br>ಯಕ್ಷಿಯಂತೆ ಭಯಾನಕ ರೂಪ</br>
<br>
</br>
<br>ಮನದೊಳಗಿರುವ ದುಃಖಗಳನ್ನು</br>
<br>ಬದಿಗೊತ್ತಿ</br>
<br>ಏರಿಳಿದು ಹರಿವಳು</br>
<br>
</br>
<br>ಮೈ ಮುರಿದು ಕೈ ಚಾಚಿ</br>
<br>ನಡುವ ಬಳುಕಿಸಿ</br>
<br>ಲಜ್ಜೆ ಹೆಜ್ಜೆಯನ್ನಿಟ್ಟು </br>
<br>ಸನಿಹದಲ್ಲಿದ್ದರೂ</br>
<br>ಅದು ನನ್ನದಲ್ಲ ಎಂಬಂತೆ</br>
<br>ಅಳುವ ದಂಡೆಯ ಮೈಗೆ </br>
<br>ಗುದ್ದಿ, ಮುದ್ದಿಸಿ</br>
<br>
</br>
<br>ಯಾರಿಗೂ ಅರಿವಾಗದಂತೆ</br>
<br>ನೋವ ನುಂಗಿ</br>
<br>ಯಾರಲ್ಲೂ ಕೋಪಿಸದೆ</br>
<br>ಕಾಮುಕ ಹೃದಯೀ ಸಮುದ್ರದ</br>
<br>ಸೆಳೆತಕ್ಕೆ ಸೋತು</br>
<br>ತನ್ನನ್ನೇ ಅರ್ಪಿಸಲು ಹೊರಟು</br>
<br>ನಿಂತಾಗ</br>
<br>ಅವಳಲ್ಲಿ ಪ್ರೇಮವಿತ್ತು,</br>
<br>ಪ್ರೇಮಿಯ ಸೇರುವ ತವಕ</br>
<br>ಸವತಿಯಾಗುವೆನೆಂಬ ನೋವೂ...</br>
ಅನುರಾಗhttp://www.blogger.com/profile/13411740540409360931noreply@blogger.com2tag:blogger.com,1999:blog-4320259625062903049.post-75639720760297414942013-08-27T17:22:00.000+05:302013-08-27T17:22:39.493+05:30ನಡೆ ಪಾಡು<a href="http://4.bp.blogspot.com/-liNiAZuQnCY/UhySpXieDNI/AAAAAAAAAx8/sDLQBjTwh7Q/s1600/images1.jpg" imageanchor="1" ><img border="0" src="http://4.bp.blogspot.com/-liNiAZuQnCY/UhySpXieDNI/AAAAAAAAAx8/sDLQBjTwh7Q/s320/images1.jpg" /></a>
<br>ಹಸಿವಿನ ಸಂಪತ್ತು</br>
<br>ಪ್ರೇಮದ ನೋವೂ</br>
<br>ಅಸ್ತಮವಾದಾಗ</br>
<br>ಕತ್ತಲೆಯಲ್ಲಿ ಬೆಂದ ನಾನು</br>
<br>ಬಡತನದ ಮೂಟೆ ಹೊತ್ತು ಹೊರಟಿದ್ದೇನೆ</br>
<br>
</br>
<br>ಏನೂ ಕೊಡಲಿಚ್ಛಿಸದವರೂ</br>
<br>ಏನೂ ಬಯಸದವರೂ</br>
<br>ತಮ್ಮ ಲೆಕ್ಕಪತ್ರದಲ್ಲಿ</br>
<br>ನನ್ನ ಹಸಿವಿನ ಬಗ್ಗೆ ಬರೆದಿಟ್ಟಿಲ್ಲ</br>
<br>
</br>
<br>ಕೂಡಿಸುವುದು, ಕಳೆಯುವುದು</br>
<br>ಗುಣಾಕಾರ, ಭಾಗಾಕಾರದಲ್ಲಿ</br>
<br>ವಿಕೃತವಾಗಿರುವ ಶರೀರಗಳು</br>
<br>ನನ್ನನ್ನು ಹಾದು ಹೋದುವು</br>
<br>
</br>
<br>ರಕ್ತಗಳಿಲ್ಲದ ಆ ದೇಹ ಸೊರಗಿತ್ತು</br>
<br>ಆಶ್ಚರ್ಯ!</br>
<br>ನಾನೂ ಅವರ</br>
<br>ದಾರಿಯಲ್ಲೇ ಸಾಗುತ್ತಿದ್ದೇನೆ</br>
<br>
</br>
<br>ನನಗೇ ಗೊತ್ತಿಲ್ಲದ</br>
<br>ನನ್ನನ್ನು ಗೊತ್ತಿಲ್ಲದ ದಾರಿಯಲ್ಲಿ</br>
<br>ಯಾರು ಯಾರೊಬ್ಬರಿಗೂ ಗೊತ್ತಿಲ್ಲವೆಂಬಂತೆ</br>
<br>ಒಬ್ಬಂಟಿಯಾಗುತ್ತಾರೆ</br>
<br>
</br>
<br>ನಾನು ಯಾರೆಂದು ಕೇಳಲು </br>
<br>ಇನ್ಯಾರೂ ಇಲ್ಲದಿದ್ದರೂ</br>
<br>ಎಲ್ಲರೂ ನಾನು ಯಾರೆಂದು</br>
<br>ಗುರುತು ಹಿಡಿದಿದ್ದರು</br>
<br>
</br>
<br>ಅಟ್ಟಹಾಸಗೈದು ಹಾದು ಹೋದ</br>
<br>ಗಬ್ಬು ನಾತದ ಶುಷ್ಕ ಗಾಳಿ</br>
<br>ನನ್ನನ್ನು ಗಾಯಗೊಳಿಸಿದರೂ</br>
<br>ಸುರಿದ ರಕ್ತಕ್ಕೆ ಗಂಧವಿರಲಿಲ್ಲ</br>
<br>
</br>
<br>ಸುಸ್ತಾದಾಗ ಮಲಗಲು</br>
<br>ಜಾಗ ಹುಡುಕಿದರೂ</br>
<br>ಹಲವಾರು ಬೆಳಕುಗಳ ನಡುವೆ</br>
<br>ಕಪ್ಪು ಬೆಳಕಿಗೆ ಜಾಗವಿಲ್ಲದೇ ಹೋಯ್ತು</br>
<br>
</br>
<br>ನೆರಳಿಗಾಗಿ ಬಯಸಿ</br>
<br>ಓಡುವ ಮರಗಳ</br>
<br>ಓಡುತ್ತಿರುವ ನೆರಳನ್ನು ಹಿಡಿಯಲಾಗದೆ</br>
<br>ಸುಸ್ತು ಬಿದ್ದೆ</br>
<br>
</br>
<br>ಈಗ ನಾನು ಭೂಮಿಗೂ ಬೇಡವಾದೆ</br>
<br>
</br>
<br>ಅಸ್ತಿತ್ವವಿಲ್ಲದೆ ಅಲೆಯುತ್ತಾ</br>
<br>ಭಾರವಾದ ದೇಹವನ್ನು ಹೊತ್ತು</br>
<br>ಲಕ್ಷ್ಯಗಳಿಲ್ಲದೆ</br>
<br>ನಿಂತೆ!.</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-28843600921291303732013-08-14T23:23:00.003+05:302013-08-14T23:24:39.055+05:30ಪ್ರಣಯ ಕಾಲ<div class="separator" style="clear: both; text-align: center;"><a href="http://4.bp.blogspot.com/-fWBlCUpOCds/UgvECpgfXMI/AAAAAAAAAxc/BV6doMQdvu0/s1600/307639_10151421220006057_1926577450_n.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="http://4.bp.blogspot.com/-fWBlCUpOCds/UgvECpgfXMI/AAAAAAAAAxc/BV6doMQdvu0/s320/307639_10151421220006057_1926577450_n.jpg" /></a></div>
<br>ಕನ್ನಡಿಯ ಮುಂದೆ</br>
<br>ನಿಂತು ಸಿಂಗರಿಸುವಾಗ</br>
<br>ಅವನ </br>
<br>ನೆನಪು ಕಾಡುತ್ತೆ</br>
<br>
</br>
<br>ನನ್ನ ಬೆರಳುಗಳನ್ನು </br>
<br>ಮೆಲ್ಲನೆ ಹಿಚುಕಿ</br>
<br>ಕಾಲುಗಳ ಸೌಂದರ್ಯ ವರ್ಣಿಸುತ್ತಾ</br>
<br>ಪಿಸುಗುಡುವಂತೆ ಕಿವಿ ಪಕ್ಕ ಬಂದು</br>
<br>ಕೆನ್ನೆಗೆ ಮುತ್ತಿಟ್ಟ</br>
<br>ಆ ಕ್ಷಣಗಳು...</br>
<br>
</br>
<br>ಹುಡುಗ ಹುಡುಗಿಯೆಂಬ</br>
<br>ಜೀವಶಾಸ್ತ್ರದ ಸಿದ್ಧಾಂತವೂ</br>
<br>ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್ಗಳು</br>
<br>ನನ್ನಲ್ಲಿ ಜಾಗೃತವಾದಾಗ</br>
<br>ಆಂಡ್ರಾಜನ್ನ ಏರಿಳಿತ</br>
<br>ಅವನಲ್ಲಿ...</br>
<br>
</br>
<br>+ve -ve</br>
<br>ಧ್ರುವಗಳು ಆಕರ್ಷಿಸುತ್ತವೆ</br>
<br>ಎಂಬ ರಸಾಯನ ಶಾಸ್ತ್ರವೂ</br>
<br>ಮೈನೆಸ್ ಮೈನೆಸ್ ಪ್ಲಸ್ ಆಗುವ</br>
<br>ಗಣಿತವೂ ನಮ್ಮೊಡಲಲ್ಲಿ</br>
<br>ಸಮೀಕರಣಗೊಂಡಾಗ</br>
<br>
</br>
<br>XX, XY</br>
<br>ಕ್ರೋಮೋಸೋಮ್ಗಳ</br>
<br>ಬಯಾಲಜಿಯೂ, ಕೆಮೆಸ್ಟ್ರಿಯೂ </br>
<br>ಸೇರಿ ಕೂಡಿ ಕಳೆದು</br>
<br>ಗುಣಿಸಿ, ಭಾಗಿಸಿ ಸಿಕ್ಕ</br>
<br>ಲೆಕ್ಕಚಾರದ ಕನಸುಗಳು</br>
<br>
</br>
<br>ಹೃದಯವೆಂಬುದು ಬರೀ</br>
<br>ಅಂಗವೆಂದುಕೊಂಡಿದ್ದನೇ ಅವನು?</br>
<br>ಪ್ರಾಕ್ಟಿಕಲ್ ಮನುಷ್ಯ!</br>
<br>
</br>
<br>ಪ್ರೀತಿ ಹುಟ್ಟುವುದು ಕಣ್ಣಿಂದ</br>
<br>ಎಂದು ಅಂದುಕೊಂಡಿದ್ದ</br>
<br>ಶತ ದಡ್ಡಿ ನಾನು</br>
<br>
</br>
<br>ಕಣ್ಣು ಮುಚ್ಚಿ ಕುಳಿತರೆ</br>
<br>ಮನುಷ್ಯ-ಮನುಷ್ಯನ</br>
<br>ನಡುವಿನ ಅಂತರವನ್ನು ನೆನೆದು</br>
<br>ನಗು ಬರುತ್ತದೆ...</br>
<br>ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ?</br>
<br>
</br>
<br>ನಾನು ಕಣ್ಣು ಮುಚ್ಚಿದ್ದೇನೆ...</br>
ಅನುರಾಗhttp://www.blogger.com/profile/13411740540409360931noreply@blogger.com5tag:blogger.com,1999:blog-4320259625062903049.post-14381314174672386492013-08-13T22:21:00.000+05:302013-08-13T22:31:21.657+05:30ಮರಣ<div class="separator" style="clear: both; text-align: center;"><a href="http://4.bp.blogspot.com/-aMwkh5MMl4M/UgpmS4ecA1I/AAAAAAAAAxE/I431Q1HePDk/s1600/death.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-aMwkh5MMl4M/UgpmS4ecA1I/AAAAAAAAAxE/I431Q1HePDk/s320/death.jpg" /></a></div>
<b>ಕನಸು</b>
<br>ಗಳನ್ನು ಹೆಣೆದು</br>
<br>ಕಾಲವನ್ನು ಹಿಂದಿಕ್ಕಿ</br>
<br>ವರ್ತಮಾನದ ಗಾಲಿಯಲ್ಲಿ</br>
<br>ಸುತ್ತುತ್ತಾ</br>
<br>ಮುಂದೆ ಸಾಗುವ</br>
<br>ಹೊತ್ತು</br>
<br>
</br>
<b>ಕತ್ತಲೆ</b>
<br>ಜೀವನದ ಹೊದಿಕೆಯಂತೆ</br>
<br>ನಮ್ಮ ಅನುಮತಿಗೆ ಕಾಯದೆ</br>
<br>ಬಂದು</br>
<br>ಮುಂದೆ ನಿಲ್ಲುವಾಗ</br>
<br>
</br>
<b>ಹೃದಯ</b>
<br>ನನ್ನಲ್ಲಿ ಮುನಿಸಿಕೊಂಡಿದೆ</br>
<br>ಎನ್ನುವ ಹಾಗೆ</br>
<br>ಬಡಿತ ನಿಲ್ಲಿಸಿದಾಗ</br>
<br>
</br>
<b>ಕಣ್ಣುಗಳು</b>
<br>ಬಣ್ಣಗಳನ್ನು ಧಿಕ್ಕರಿಸಿ</br>
<br>ಕತ್ತಲೆಯನ್ನೇ </br>
<br>ಬಯಸಿದಾಗ</br>
<br>
</br>
<b>ದೇಹ</b>
<br>ಮಣ್ಣನ್ನಪ್ಪಿ ಪವಡಿಸುವಾಗ</br>
<br>ಒಬ್ಬಂಟಿ</br>
<br>ಪ್ರಶಾಂತ ಗಳಿಗೆ...</br>
<br>
</br>
<b>ಯಾವುದೇ </b>
<br>ಭಾವನೆಗಳಿಲ್ಲದೆ</br>
<br>ಶೂನ್ಯ ಬಿಂದುವಿನಲ್ಲಿ</br>
<br>ನಾನು</br>
<br>ನಾನು ಮಾತ್ರವಾಗುತ್ತೇನೆ</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-66740942901658754912013-07-06T13:21:00.001+05:302013-07-06T13:21:52.598+05:30ಬದುಕಿನ ಕಹಿ ಸತ್ಯಗಳು
<br>ಮನಸ್ಸಲ್ಲಿ ಎಂದೋ ಅದುಮಿಟ್ಟ ಭಾವನೆಗಳು</br>
<br>ಸ್ವಯಂ </br>
<br>ವಿಧಿಯ ಬರಹದಲ್ಲಿನ ಅಕ್ಷರಗಳಾಗಿ</br>
<br>ಹುಣ್ಣಿಮೆಗೊಮ್ಮೆ ಚಿಮ್ಮುವ ಕಡಲಿನ ಅಲೆಗಳಿಗೆ</br>
<br>ಸಿಕ್ಕಿ, ಮಾಸಿ ಹೋದಾಗ</br>
<br>ಸ್ವರ್ಗಸ್ಥ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ</br>
<br>ಕೂಳಿಗಾಗಿ ಕಾದಾಡುವ ಕಾಗೆಗಳ </br>
<br>ಸ್ವಾರ್ಥತೆ ಅಣಕಿಸುತ್ತಿತ್ತು...</br>
<br>
</br>
<br>ಮುಂದೆ ಬಯಲ ದಾರಿಯಲಿ ಸಾಗಿದರೆ</br>
<br>ಕಿತ್ತೋಗಿರುವ ಚಪ್ಪಲಿ </br>
<br>ದುಸ್ಥಿತಿಯಲ್ಲಿರುವ ಬದುಕನ್ನು</br>
<br>ಪರಿಹಾಸ್ಯ ಮಾಡುತ್ತಾ</br>
<br>ದಾರಿ ಮಧ್ಯೆಯಿರುವ ಗಾಂಧಿ</br>
<br>ಪ್ರತಿಮೆಯನ್ನು ಆಲಂಗಿಸಿ ಬಿಕ್ಕಳಿಸಿದೆ</br>
<br>
</br>
<br>ಜೀವನದ ಪುಸ್ತಕದ </br>
<br>ಒಣಗಿದ ಹಾಳೆಗಳಲ್ಲಿ</br>
<br>ಅಂಧಕಾರ ವ್ಯಾಪಿಸಿದಾಗ</br>
<br>ಅಳುವುದನ್ನು ಮಾತ್ರ ಕಲಿಸಿದ ಜೀವ</br>
<br>'ಮರುಭೂಮಿಯ ಹೂ'</br>
<br>ವನ್ನು ನೋಡಿ ಸಂತಾಪ ಸೂಚಿಸಿ</br>
<br>ಇನ್ನರಳಲಿರುವ ಮೊಗ್ಗುಗಳಿಗೆ</br>
<br>ಶುಭಾಶಯ ಕೋರಿ ಮುಂದೆ ಸಾಗಿದೆ</br>
<br>
</br>
<br>ತಿರುಗುವ ಕಾಲ ಚಕ್ರವು</br>
<br>ದೂರವನ್ನು ಕ್ರಮಿಸುತ್ತಾ</br>
<br>ನೆನಪುಗಳನ್ನು ಗಾಳಿಯಲ್ಲಿ </br>
<br>ತೇಲಿಸಿ ಹಾರಿ ಹೋಗುವುದು</br>
<br>
</br>
<br>ಗೆದ್ದಲು ಹಿಡಿದ ನೆನಪುಗಳು</br>
<br>ಫಂಗಸ್ ಹಿಡಿದ ಕನಸುಗಳು</br>
<br>ಗೋರಿಯೊಳಗೆ ನಿದ್ರಿಸುತ್ತಿರೆ</br>
<br>ಗಿಳಿಗಳು, ಹೂಗಳೂ ನವ </br>
<br>ವಸಂತಕ್ಕಾಗಿ ಕಾದು ಕುಳಿತಿವೆ.</br>
<br>
</br>
(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-44182417979770938142013-06-24T21:30:00.000+05:302013-06-24T21:30:37.569+05:30ಮಾಯಾನಗರಿ<div class="separator" style="clear: both; text-align: center;"><a href="http://3.bp.blogspot.com/-0w6augYdTHk/Uchs6siqjaI/AAAAAAAAAs0/Rb5M0rTLDtA/s1600/flower.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-0w6augYdTHk/Uchs6siqjaI/AAAAAAAAAs0/Rb5M0rTLDtA/s320/flower.jpg" /></a></div>
<p>ಸುತ್ತಲೂ ಪಸರಿದ</br>
<br>ಈ ಗಾಳಿಯಲ್ಲಿ ಯಾವುದೋ</br>
<br>ಗಂಧವಿದೆ</br>
<br>ಮೈಗೆ ಪೂಸಿದ </br>
<br>ಸುಗಂಧ ದ್ರವ್ಯ,</br>
<br>ಬೆವರ ಹನಿಗಳ ನೋವಿನ</br>
<br>ವಾಸನೆ</br></p>
<p>
</p>
<br>ಯಾರೋ ಬಿಟ್ಟು ಹೋದ</br>
<br>ಚೀಲ, ಪೆಟ್ಟಿಗೆ, ಚಪ್ಪಲಿ,</br>
<br>ವಾಹನಗಳು ಇಲ್ಲಿ</br>
<br>ಹರಾಜಿಗಿವೆ ಎಂಬ ಬೋರ್ಡುಗಳು</br>
<br>ಮಾಯಾನಗರಿಯ ದುಃಖಗಳನ್ನು</br>
<br>ಗೀಚಿಟ್ಟ ಕಿರುಪತ್ರದಂತಿವೆ</br>
<p>
</p>
<br>ಭಗ್ನವಾದ ಕನಸುಗಳ ಚೂರು</br>
<br>ಗಳು ಒಂದಕ್ಕೊಂದು ಗುದ್ದಿ</br>
<br>ಸದ್ದು ಮಾಡುತ್ತಿವೆ</br>
<br>ಮುಷ್ಟಿ ಮಣ್ಣಲ್ಲೂ ಅವಿತಿದೆ</br>
<br>ಯಾರೋ ಸವೆದ ಹಾದಿಯ</br>
<br>ಹೆಜ್ಜೆ ಗುರುತು</br>
<p>
</p>
<br>ನಷ್ಟಗಳ ಲೆಕ್ಕ ಭರಿಸಲಾಗದೆ</br>
<br>ದುರಂತಗಳ ನಡುವೆ ಸಿಕ್ಕ </br>
<br>ಮಧ್ಯಂತರ</br>
<br>ಎಲ್ಲಿಂದಲೋ ಆರಂಭವಾಗುವುದು</br>
<br>ಇನ್ನೇನೋ ನಡೆಯಲಿದೆ</br>
<br>ಎಂದರಿಯುವ ಹಪಾಹಪಿಯಲ್ಲಿ</br>
<br>ಸಮಯ ದಾಟಿದೆ</br>
<p>
</p>
<br>ಈ ಜಂಜಾಟದ ನಡುವೆ</br>
<br>ಸಿಕ್ಕ ಒಂದಷ್ಟು ನಿಮಿಷ</br>
<br>ಮತ್ತೆ ಬದುಕು ಹಳಿಗೆ ಬಂದಂತೆ</br>
<br>ಆಸೆ ಹುಟ್ಟಿಸಿ</br>
<br>ಇನ್ನೊಂದು ಮಧ್ಯಂತರಕ್ಕೆ ಕಾಲಿಡುವಾಗ</br>
<br>ಕಾಡುವುದು ಅನಿಶ್ಚಿತತೆ!</br>
<p>
</p>
<br>ಬೀದಿ ನಾಯಿಗಳ ಓಡಾಟದ </br>
<br>ನಡುವೆ</br>
<br>ಹರೆಯದ ಹುಡುಗಿಯೊಬ್ಬಳು</br>
<br>ಹೂ ಮಾರುತ್ತಿದ್ದಾಳೆ</br>
<p>
</p>
<br>ಅವಳ ಜೀವನ ಲೆಕ್ಕಾಚಾರದಲ್ಲಿ</br>
<br>ಹೆಣೆಯುವ ಆ ಮೊಗ್ಗು</br>
<br>ನಲುಗಿ ಹೋಗಿದೆಯೆ?</br>
<p>
</p>
<br>ನಾನು ಬಯಸಿದ ಹೂವು</br>
<br>ಕಣ್ಣಿಗೆ ತಂಪು</br>
<br>ಬಿಸಿಯೇರಿದೆ ಮೈ</br>
<p>
</p>
<br>ಮತ್ತೊಮ್ಮೆ ಯೋಚಿಸಿದೆ</br>
<br>ಆ ತಂಪು</br>
<br>ನನ್ನನ್ನು ಬಿಸಿಯಾಗಿರಿಸಿತೆ?</br>
ಅನುರಾಗhttp://www.blogger.com/profile/13411740540409360931noreply@blogger.com0tag:blogger.com,1999:blog-4320259625062903049.post-169965805758582912013-06-23T02:36:00.002+05:302013-06-23T19:59:56.573+05:30ಶಿಲ್ಪಿ<a href="http://2.bp.blogspot.com/-NP0QuPm7Q2E/UccGR3QplkI/AAAAAAAAAsc/PUqjLrBC39k/s1600/sculpture.jpg" imageanchor="1" ><img border="0" src="http://2.bp.blogspot.com/-NP0QuPm7Q2E/UccGR3QplkI/AAAAAAAAAsc/PUqjLrBC39k/s320/sculpture.jpg" /></a>
<br>ಸ್ವಪ್ನ ಶಿಲ್ಪಿ ನಾನು</br>
<br>ಸುಂದರ ಶಿಲ್ಪಗಳನ್ನು </br>
<br>ಕೆತ್ತುವುದೇ ನನ್ನ ಕಸುಬು</br>
<br>ಕೈ ತುಂಬಾ ಕೆಲಸಗಳಿವೆ</br>
<br>ಸಂತೃಪ್ತಿಯೇ ನನ್ನ</br>
<br>ಆದಾಯ</br>
<br>
</br>
<br>ನನ್ನ ಶಿಲ್ಪ ಶಾಲೆಗೆ </br>
<br>ಬಂದಿದ್ದರು ಹಲವು ಜನ</br>
<br>ನನ್ನ ಕೆಲಸದ</br>
<br>ಹರುಕು ಗುಡಿಸಲಿಗೂ</br>
<br>ನಾನೆಲ್ಲಿದ್ದೇನೋ ಅಲ್ಲಿಗೆಲ್ಲಾ</br>
<br>ಬಂದಿದ್ದರು</br>
<br>
</br>
<br>ಎಲ್ಲರೂ ನನ್ನನ್ನು ಬಯಸಿದರು</br>
<br>ನನ್ನನ್ನು ಪ್ರೀತಿಸಿದರು</br>
<br>ಅವರವರಿಗೆ ಒಪ್ಪುವಂತೆ</br>
<br>ಸ್ವೇಚ್ಛೆಯಿಂದ</br>
<br>
</br>
<br>ನಾನು</br>
<br>ಸಾಕಷ್ಟು ಕನಸುಗಳನು</br>
<br>ಮೊಗೆ ಮೊಗೆದು ಕೊಟ್ಟೆ</br>
<br>ಕೊನೆಗೆ ಅವರು ಹೇಳಿದ್ದು...</br>
<br>ನಿನ್ನ ಮನಸ್ಸು </br>
<br>ಬರೀ ಕಲ್ಲು!</br>
<br>
</br>
<br>ಅದು ನಿಜ</br>
<br>ನನ್ನ ಮನಸ್ಸು ಕಲ್ಲೇ</br>
<br>
</br>
<br>ಬಯಸದೇ ಬಂದ ಪ್ರೀತಿಯಲ್ಲಿ</br>
<br>ಅದು ಮುಳುಗಿ ಹೋಗಿತ್ತು<br>
<br>ಆ ಕಲ್ಲಿನ ಮೇಲಿರುವ ಗುಳಿಗಳೂ</br>
<br>ಪ್ರೀತಿಯಿಂದಲೇ ತುಂಬಿದ್ದವು</br>
<br>
</br>
<br>ಪ್ರೀತಿಯ 'ಉಳಿ'ಯಲ್ಲಿ</br>
<br>ಕೆತ್ತುವ ಕೆಲಸ ಬಿರುಸಾಗಿ</br>
<br>ನಡೆದಾಗ</br>
<br>ಕಲ್ಲು ರೂಪಾಂತರಗೊಳ್ಳುತ್ತಿತ್ತು</br>
<br>ಇನ್ನೂ ಕೆತ್ತಿದರೆ </br>
<br>ಅದು</br>
<br>ಒಡೆದು ಹೋಗುತ್ತಿತ್ತೇನೋ!</br>
<br>
</br>
<br>ಅವರು ಹೇಳಿದ್ದೇ ನಿಜ</br>
<br>ನನ್ನ ಹೃದಯ ಕಲ್ಲಾಗಿತ್ತು</br>
<br>
</br>
<br>ಒಂದು ಚಿಕ್ಕ ಪೆಟ್ಟು ಸಾಕು</br>
<br>ಅದಿನ್ನು ಒಡೆದು ಹೋಗಲು</br>
<br>ಆದರೆ ಅವರಿಗೇನು ಗೊತ್ತಿತ್ತು</br>
<br>ಕಲ್ಲಿನ ಸ್ಥಿತಿ?</br>
<br>ಸುಂದರ ಶಿಲ್ಪಕ್ಕಾಗಿ</br>
<br>ಅವರು ಬಯಸಿದ್ದರಲ್ಲವೇ?</br>
<br>
</br>
<br>ಸಾಕು</br>
<br>ನಿಲ್ಲಿಸಿ....</br>
<br>
</br>
<br>ಹೇಳಬೇಡಿ ಇನ್ನೊಂದು</br>
<br>ಶಿಲ್ಪದ ರಚನೆಗೆ</br>
<br>
</br>
<br>ನಿಮ್ಮ ಸ್ವಪ್ನಗಳನ್ನು ಕೆತ್ತಿ</br>
<br>ಬೊಬ್ಬೆ ಎದ್ದಿರುವುದು</br>
<br>ನನ್ನ ಕೈಗಳಲ್ಲ...ಮನಸ್ಸಿನಲ್ಲಿ</br>
<br>
</br>
<br>ಯಾವುದೇ ಕನಸು</br>
<br>ಗಳಿಲ್ಲದ</br>
<br>ಮುಗ್ದ ಹೃದಯದಲ್ಲಿ...</br>
ಅನುರಾಗhttp://www.blogger.com/profile/13411740540409360931noreply@blogger.com2tag:blogger.com,1999:blog-4320259625062903049.post-87136732239974075492013-06-16T02:19:00.001+05:302013-06-16T02:25:03.800+05:30ಪಪ್ಪನೂ...ನನ್ನ ನಿದ್ದೆಯೂ
<a href="http://1.bp.blogspot.com/-xb27t6OPhls/UbzUj4G1QVI/AAAAAAAAAms/YFEYg4E3ibo/s1600/baby.jpg" imageanchor="1" ><img border="0" src="http://1.bp.blogspot.com/-xb27t6OPhls/UbzUj4G1QVI/AAAAAAAAAms/YFEYg4E3ibo/s320/baby.jpg" /></a>
<br>ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ.
ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ !</br>
<br>ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ್ದಿ ನೋಡುತ್ತಾರೆ.</br>
<br>ಅಂದಹಾಗೆ, ಸುದ್ದಿ ಬಗ್ಗೆ ಹೇಳುವಾಗಲೇ ನೆನಪಿಗೆ ಬಂದದ್ದು...ಚಿಕ್ಕಂದಿನಲ್ಲಿ ದಿನಪತ್ರಿಕೆಗಳ ಬಗ್ಗೆ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದೇ ಅಪ್ಪ. ಮನೆಯಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಪತ್ರಿಕೆಗಳಂತೂ ಯಾವತ್ತೂ ಇರುತ್ತಿದ್ದವು. ಭಾನುವಾರದ ಪತ್ರಿಕೆಗಳಂತೂ ಯಾವತ್ತೂ ಮಿಸ್ ಆಗುತ್ತಿರಲಿಲ್ಲ. ಸಾಪ್ತಾಹಿಕದಲ್ಲಿ ಓದೋಕೆ ಸಾಕಷ್ಟು ಇರುತ್ತೆ ಎಂದು ಹೇಳಿ ಬೆಳಗ್ಗೆಯೇ ಪೇಟೆಗೆ ಹೋಗಿ ಪತ್ರಿಕೆ ಖರೀದಿಸುತ್ತಿದ್ದರು ಅಪ್ಪ. ಚಿಕ್ಕವಳಿರುವಾಗ ನನಗೆ ಮಲಯಾಳಂ ಓದೋಕೆ ಬರುತ್ತಿರಲಿಲ್ಲ. ಆವಾಗ ಅಪ್ಪನೇ ಮಲಯಾಳಂ ಪತ್ರಿಕೆಗಳನ್ನು ಓದಿ ಹೇಳುತ್ತಿದ್ದರು. ಸಂಜೆ ಹೊತ್ತು ನಮ್ಮ ಮನೆಯಲ್ಲಿ ಸುದ್ದಿವಾಚನವೇ ಜೋರಾಗಿ ಇರುತ್ತಿತ್ತು. ಟೀ ಕುಡಿಯುವ ಹೊತ್ತಲ್ಲಿ ಸುದ್ದಿ ಬಗ್ಗೆಯೇ ಚರ್ಚೆಯಾಗುತ್ತಿದ್ದು, ಅದೊಂದು ಪೇನಲ್ ಡಿಸ್ಕಶನ್ ತರಾನೇ ಇರುತ್ತಿತ್ತು.</br>
<br>ಹಾಂ...ನಾನು ಹೇಳೋಕೆ ಹೋಗಿದ್ದು ನಿದ್ದೆ ಬಗ್ಗೆ ತಾನೇ?.ಹೇಳ್ತೀನಿ ಕೇಳಿ... ಶಾಲಾ ಕಾಲೇಜು ದಿನಗಳಲ್ಲಿ ನಿದ್ರಾಪ್ರಿಯೆ ನಾನು. ಕ್ಲಾಸಿನಲ್ಲಿ ತೂಕಡಿಸುತ್ತಾ ಇದ್ದು, ಅದೆಷ್ಟೋ ಬಾರಿ ಟೀಚರ್ ಬಿಸಾಡಿದ ಚಾಕ್ ಪೀಸ್ಗಳು ನನ್ನ ನಿದ್ದೆಗೆ ಭಂಗ ತಂದಿವೆ. ಹಾಗಂತ ಸುಮ್ ಸುಮ್ನೆ ಏನೂ ನಿದ್ದೆ ಮಾಡಲ್ಲ.. ಪ್ರತಿಯೊಂದು ನಿದ್ದೆಯಲ್ಲೂ ಒಂದೊಂದು ಕನಸು. ಕಣ್ಣು ಮುಚ್ಚಿದರೆ ಸಾಕು ಕನಸು ಕಾಣುವ ಜೀವಿ ನಾನು. "ಕ್ಲಾಸಿನಲ್ಲಿ ನಿದ್ದೆ ಮಾಡುವವರು ಪುಣ್ಯವಂತರು ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ಹೇಳಿದ್ದು ನಮ್ಮಂಥವರನ್ನು ಉದ್ದೇಶಿಸಿಯೇ. ಹೋಗಲಿ ಬಿಡಿ, ಬೆಳಗ್ಗೆ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರುವ ಕಾರಣ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆವಾಗೆಲ್ಲಾ ಪುಸ್ತಕಗಳನ್ನು ಓದುತ್ತಾ ಕೂರುತ್ತಿದ್ದೆ. ಆದರೆ ಪಠ್ಯಪುಸ್ತಕಗಳನ್ನು ಹಿಡಿದರೆ ಸಾಕು ಕ್ಷಣಮಾತ್ರಕ್ಕೆ ನಿದ್ರಾದೇವಿ ನನ್ನನ್ನು ಆವರಿಸಿಬಿಡುತ್ತಿದ್ದಳು. ಇನ್ನು ಪರೀಕ್ಷಾ ಸಮಯದಲ್ಲಂತೂ ಹೇಳುವುದೇ ಬೇಡ. ಕೊನೇಕ್ಷಣದಲ್ಲಿ ಪರೀಕ್ಷಾ ಸಿದ್ಧತೆ ನಡೆಸುವ ಸ್ವಭಾವ ನನ್ನದಾಗಿದ್ದರಿಂದ ಪರೀಕ್ಷೆ ಬಂತೆಂದರೆ ಚಡಪಡಿಕೆ. ಅದರೆಡೆಯಲ್ಲಿ ಹಾಳಾದ ನಿದ್ದೆ ಬೇರೆ. ಪರೀಕ್ಷೆಗೆ ಮುನ್ನಾದಿನವಂತೂ ವಿಪರೀತ ನಿದ್ದೆ. ಪುಸ್ತಕ ತೆರೆದಿಟ್ಟು ಅಲ್ಲೇ ನಿದ್ದೆ ಹೋದರೆ ಅಮ್ಮ ಬಂದು ಎಬ್ಬಿಸಿ ಮತ್ತೆ ಓದುವಂತೆ ಒತ್ತಾಯಿಸುತ್ತಿದ್ದರು. ಆದರೆ ಅಪ್ಪ ಹಾಗಲ್ಲ...ನಿನಗೆ ತುಂಬಾ ಸುಸ್ತಾಗಿದೆ.. ಹೋಗಿ ಮಲಗು..ಬೆಳಗ್ಗೆ 4 ಗಂಟೆಗೆ ಬೇಗ ಎದ್ದು ಓದುವಿಯಂತೆ ಎಂದು ಹೇಳಿ ಮಲಗಿಸುತ್ತಿದ್ದರು. ಆದರೆ ಬೆಳಗ್ಗೆ ಏಳುವಾಗ ಗಂಟೆ 7.30! ಸಮಯ ನೋಡಿ ಅಪ್ಪ ಯಾಕೆ ನನ್ನನ್ನು ಎಬ್ಬಿಸಿಲ್ಲ? ಎಂಬ ರಂಪಾಟ ಶುರು ಮಾಡುತ್ತಿದ್ದೆ. ಆವಾಗ ಅಪ್ಪ..ನೀನು ತುಂಬಾ ಗಾಢ ನಿದ್ದೆಯಲ್ಲಿದ್ದೆ..ಆ ನಿದ್ದೆಯಿಂದ ನಿನ್ನನ್ನು ಎಬ್ಬಿಸೋಕೆ ಮನಸು ಬರಲ್ಲ ಎನ್ನುತ್ತಿದ್ದರು.
ನಾನು ಸ್ವಲ್ಪ ಆಕಳಿಸಿದರೆ ಸಾಕು..ನಿದ್ದೆ ಬರ್ತಿದೆಯಾ ಹೋಗಿ ಮಲಗು ಅಂತಿದ್ದರು. ಅಮ್ಮ ಮಧ್ಯಾಹ್ನ ಹೊತ್ತು ಹೆಣ್ಮಕ್ಕಳು ನಿದ್ದೆ ಮಾಡಬಾರದು ಎಂದು ಗದರಿಸುತ್ತಿದ್ದರೂ, ಪಾಪ..ಮಕ್ಕಳು ನಿದ್ದೆ ಬಂದಾಗ ನಿದ್ದೆ ಮಾಡ್ಬೇಕು, ಎಲ್ಲರಿಗೂ ಎಲ್ಲ ಸಮಯದಲ್ಲೂ ನಿದ್ದೆ ಬರುವುದಿಲ್ಲ ಎಂದು ಹೇಳುವ ಮೂಲಕ ಅಪ್ಪ ನಿದ್ದೆ ಬಗ್ಗೆ ತಮ್ಮ ವಾದ ಮಂಡಿಸುತ್ತಿದ್ದರು.</br>
<br>ನಾವು ಎಲ್ಲಿಗಾದರೂ ದೂರ ಯಾತ್ರೆ ಹೋದರೂ ಅಷ್ಟೇ..ಸುಸ್ತಾದರೆ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗೋಕೆ ನನಗಿಷ್ಟ. ಮನೆಯಲ್ಲಿ ಅಪ್ಪ ಗೋಡೆಗೊರಗಿ ಕುಳಿತುಕೊಂಡರೆ ಸಾಕು, ಅಪ್ಪನ ಮಡಿಲಲ್ಲಿ ಸುಖ ನಿದ್ದೆ. ಆದ್ರೆ ಒಬ್ಬಳೇ ಯಾತ್ರೆ ಮಾಡುವಾಗ ಎಷ್ಟೇ ಸುಸ್ತಾಗಿರಲಿ, ಒಂಚೂರು ಕಣ್ಣುಮುಚ್ಚದೆ ಎಚ್ಚರದಿಂದಲೇ ಇರುವ ಜಾಯಮಾನ ನನ್ನದು.
ದಿನಾ ಮನೆಗೆ ಫೋನ್ ಮಾಡಿದರೆ, ಅಮ್ಮ ಏನಾದರೂ ಬರೆದಿದ್ದೀಯಾ? ಏನೆಲ್ಲಾ ಓದಿದೆ ಎಂಬ ಪ್ರಶ್ನೆ ಕೇಳ್ತಾರೆ. ಆದ್ರೆ ಅಪ್ಪ ಹಾಗಲ್ಲ...ಪುಟ್ಟಾ... ಚೆನ್ನಾಗಿ ನಿದ್ದೆ ಮಾಡುತ್ತೀಯಾ? ಚೆನ್ನಾಗಿ ನಿದ್ದೆ ಮಾಡ್ಬೇಕು, ನಿದ್ದೆ ಬಿಟ್ಟು ಓದೋದು ಬರೆಯೋದು ಮಾಡ್ಬೇಡ...ಆರೋಗ್ಯ ಹಾಳಾಗುತ್ತೆ ಅಂತಾರೆ.
ಬೆಂಗಳೂರಿನಿಂದ ಊರಿಗೆ ಹೋಗುವುದಾದರೆ ರಾತ್ರಿಯಿಡೀ ಪ್ರಯಾಣ ಮಾಡಿ ಬೆಳ್ಳಂಬೆಳಗ್ಗೆ ಮನೆಗೆ ತಲುಪುತ್ತೇನೆ. ಮನೆ ತಲುಪಿದ ಕೂಡಲೇ ಸ್ನಾನ ಮುಗಿಸಿ ಅಪ್ಪನ ಪಕ್ಕ ಹೋಗಿ ಮಲಗಿದರೆ, ಅದೆಂಥಾ ಗಾಢ ನಿದ್ರೆ! ಅಲ್ಲಿಯವರೆಗಿದ್ದ ಕೆಲಸದ ಒತ್ತಡ, ಪ್ರಯಾಣದ ಆಯಾಸವೆಲ್ಲಾ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗಿದರೆ ಮಾಯವಾಗಿ ಬಿಡುತ್ತದೆ.</br>
<br>ಕಚೇರಿಯಲ್ಲಿ ನೈಟ್ಶಿಫ್ಟ್ ಮಾಡುವುದರಿಂದ ಬೆಳಗ್ಗಿನ ಹೊತ್ತು ನಿದ್ದೆ ಮಾಡುವುದು ಕೂಡಾ ಕಷ್ಟವಾಗಿದೆ. ಅದರಲ್ಲೂ ರೂಮ್ಮೇಟ್ಸ್ಗಳ ಗಲಾಟೆ, ಫೋನ್ ಮಾತುಕತೆ ಎಲ್ಲವನ್ನೂ ಸಹಿಸಿಕೊಂಡು ಅಸಮಯದಲ್ಲಿ ನಿದ್ದೆಗೆ ಜಾರಲು ಹರಸಾಹಸ ಪಡಬೇಕಾಗುತ್ತದೆ. ಇಲ್ಲಿಯವರೆಗೆ ಅಪ್ಪ ನಿದ್ದೆಯ ಬಗ್ಗೆ ಲೆಕ್ಚರ್ ಕೊಡುವಾಗ ನಕ್ಕು ತಮಾಷೆಯಾಗಿ ಪರಿಗಣಿಸುತ್ತಿದ್ದ ನನಗೆ ಇದೀಗ ನಿದ್ದೆ ಎಷ್ಟು ಅಮೂಲ್ಯ ಎಂಬುದು ಅರ್ಥವಾಗುತ್ತಿದ್ದೆ. ರಾತ್ರಿಪಾಳಿ ಮುಗಿಸಿ ಬೆಳಗ್ಗಿನ ಜಾವ 4 ಗಂಟೆಗೆ ಮನೆ ಸೇರಿದರೂ ಆಮೇಲೆ ನಿದ್ದೆ ಬರಬೇಕಾದರೆ ಅಷ್ಟೇ ಒದ್ದಾಡಬೇಕು. ಏತನ್ಮಧ್ಯೆ, ಭಾನುವಾರ ಲೇಟಾಗಿ ಹೋದರೆ ಅಂಗಡಿಯಲ್ಲಿ ಪೇಪರ್ ಖಾಲಿಯಾಗುತ್ತದೆ ಎಂದು 6 ಗಂಟೆಗೇ ಎದ್ದು ರೂಮಿನಿಂದ ಹೊರಬರುವಾಗ ಹಾಸ್ಟೆಲ್ನ ಹುಡುಗಿಯರೆಲ್ಲಾ ರಜಾ ದಿನದ ನಿದ್ದೆ ಎಂಜಾಯ್ ಮಾಡುತ್ತಿರುತ್ತಾರೆ. ಬೆಳಗ್ಗೆದ್ದು ಪೇಪರ್ ಓದಿ ಮುಗಿಸಿ, ಮನೆಗೆ ಫೋನ್ ಮಾಡಿದರೆ ನೀನ್ಯಾಕೆ ಇಷ್ಟು ಬೇಗ ಎದ್ದೆ? ಹೋಗಿ ತಿಂಡಿ ತಿಂದು ನಿದ್ದೆ ಮಾಡು ಅಂತಾರೆ ಅಪ್ಪ. ಫೋನ್ ಡಿಸ್ಕನೆಕ್ಟ್ ಮಾಡಿದ ಕೂಡಲೇ ನಾನು ನಿದ್ದೆಗೆ ಜಾರಿರುತ್ತೇನೆ ಎಂದು ಅಪ್ಪ ಅಂದುಕೊಂಡಿರುತ್ತಾರೆ. ಹಾಸ್ಟೆಲ್ನ ಗೌಜಿ ಗದ್ದಲಗಳ ನಡುವೆ ಚಡಪಡಿಸುತ್ತಾ ನಾನು ಕಣ್ಮುಚ್ಚಿ ನಿದ್ದೆಗಾಗಿ ಕಾಯುತ್ತಿರುತ್ತೇನೆ. ಅರೆಬರೆ ನಿದ್ದೆ ಮುಗಿಸಿ ಮತ್ತೆ ಸುದ್ದಿ ಮನೆ ಸೇರಿದರೆ ಮತ್ತೆ ಕೆಲಸ ಮುಗಿಯುವವರೆಗೆ ನಿದ್ದೆ ನನ್ನ ಪಕ್ಕ ಸುಳಿಯುವುದೇ ಇಲ್ಲ.
ಅಲ್ಲಿ... ಮನೆಯಲ್ಲಿ ಅಪ್ಪ ಸುದ್ದಿ ನೋಡುತ್ತಾ ತೂಕಡಿಸುತ್ತಿರುತ್ತಾರೆ. </br>
<br>ಇವತ್ತು ಅಪ್ಪಂದಿರ ದಿನ ಅಲ್ವಾ...ಆದ್ದರಿಂದ ಅಪ್ಪನ ಬಗ್ಗೆ ಇಷ್ಟೆಲ್ಲಾ ಬರೆಯಬೇಕಾಗಿ ಬಂತು ನೋಡ್ರಿ...</br>
<br>ಹ್ಯಾಪಿ ಫಾದರ್ಸ್ ಡೇ...</br>
<br><i>ಫೋಟೋ ಕೃಪೆ: ಅಂತರ್ಜಾಲ ಚಿತ್ರ</i></Úßbr>
ಅನುರಾಗhttp://www.blogger.com/profile/13411740540409360931noreply@blogger.com2Bangalore, Karnataka, India12.9715987 77.59456269999998312.4764182 76.949115699999979 13.4667792 78.240009699999987tag:blogger.com,1999:blog-4320259625062903049.post-48192394868295475372013-01-14T02:40:00.000+05:302013-01-14T02:46:19.157+05:30ಮದರಂಗಿ ಪುರಾಣ
<div class="separator" style="clear: both; text-align: center;">
<a href="http://1.bp.blogspot.com/-9kklzzAuqwQ/UPMim4pElpI/AAAAAAAAAgE/-8t45qei4Ys/s1600/mehndi.jpg" imageanchor="1" style="clear:left; float:left;margin-right:1em; margin-bottom:1em"><img border="0" height="232" width="320" src="http://1.bp.blogspot.com/-9kklzzAuqwQ/UPMim4pElpI/AAAAAAAAAgE/-8t45qei4Ys/s320/mehndi.jpg" /></a></div>
<br><b>ಕೈ</b>ಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು..</br>
<br>ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನ್ನ ಕೈಗೆ ಮದರಂಗಿ ಹಚ್ಚುತ್ತಿದ್ದುದ್ದು ಅಮ್ಮನೇ. ಸಂಜೆ ಹೊತ್ತು ಮದರಂಗಿಯನ್ನು ಅರೆದು ತೆಂಗಿನ ಗೆರಟೆಯಲ್ಲಿರಿಸುತ್ತಿದ್ದರು ಅಮ್ಮ. ನಾನಂತೂ ಅದನ್ನು ಹತ್ತಾರು ಬಾರಿ ಹೋಗಿ ನೋಡಿ ಗೆರಟೆ ಕೆಂಪಾಗಿದೆಯೋ ಎಂದು ಪರೀಕ್ಷಿಸುತ್ತಿದ್ದೆ. ರಾತ್ರಿ ಊಟ ಮಾಡಿದ ಮೇಲೆ ಮದರಂಗಿ ಹಾಕ್ತೀನಿ ಅಂತಾ ಅಮ್ಮ...ನಮ್ಮ ಊಟ ಮುಗಿದ ಮೇಲೆ ಅಮ್ಮ ಅಡುಗೆಮನೆಯ ಕೆಲಸ ಮುಗಿಸಿ ಬಂದಳೆಂದರೆ ಖುಷಿಯೋ ಖುಷಿ. ಅಮ್ಮನ ಮಡಿಲಲ್ಲಿ ಅಂಗೈಯನ್ನಿಟ್ಟು ಕುಳಿತರೆ, ಅಮ್ಮ ಅಂಗೈಯಲ್ಲೆಲ್ಲಾ ಚಿಕ್ಕ ಚಿಕ್ಕ ಚುಕ್ಕಿಯನ್ನಿಡುತ್ತಿದ್ದರು. ಕೈ ಅಲ್ಲಾಡಿಸಿದರೆ ದೊಡ್ಡ ಚುಕ್ಕಿಯಾಗಿ ಬಿಡುತ್ತಿತ್ತು. ಮದರಂಗಿ ಚೆಂದ ಕಾಣಬೇಕೆಂಬ ಆಸೆಯಿಂದ ನಿದ್ದೆ ಬಂದರೂ ಅದನ್ನು ಹಿಡಿದಿಟ್ಟು ಕೈ ಅಲುಗಾಡಿಸದೆ ಕೂತಿರುತ್ತಿದ್ದೆ.</br>
<br>ನನಗೆ ಒಂದು ಕೈಗೆ ಮದರಂಗಿ ಇಟ್ಟರೆ ಸಾಲದು ಇನ್ನೊಂದು ಕೈಗೂ ಇಡಬೇಕಾಲ್ವಾ? ಇನ್ನೊಂದು ಕೈಯಲ್ಲಿ ಬೇರೆ ಡಿಸೈನ್..ಅದೇನು ಗೊತ್ತಾ? ಅಂಗೈ ಮಧ್ಯೆ ಒಂದು ದೊಡ್ಡ ಬೊಟ್ಟು. ಅದರ ಸುತ್ತಲೂ ನಾಲ್ಕು ಚಿಕ್ಕ ಬೊಟ್ಟು..ಬೆರಳಿನುದ್ದಕ್ಕೂ ಒಂದು ಗೆರೆ ಎಳೆದು ಅದಕ್ಕೆ ಹತ್ತಾರು ಕವಲುಗಳು...ಬೆರಳ ತುದಿಗೆ ಸ್ವಲ್ಪ ಮದರಂಗಿ ಮೆತ್ತಿದರೆ ಮುಗೀತು. ಇನ್ನೂ ಸ್ಲಲ್ಪ ದೊಡ್ಡವಳಾದ ಕೂಡಲೇ ಅಮ್ಮ ಇಡುತ್ತಿದ್ದ ಡಿಸೈನ್ "ಡಬ್ಬಾ" ಅಂತಾ ಅನಿಸಿ ಬಿಡ್ತು. ಆವಾಗ ಶುರುವಾಯ್ತು ನೋಡಿ ಹುಡುಕಾಟ. ಅದೇ ಮನೆಯ ಮುಂದಿನ ತೋಡಿನ ಬದಿಯಲ್ಲಿ ಬೆಳೆಯುವ ಯಾವುದೋ ಡಿಸೈನ್್ನಂತೆ ಕಾಣುವ ಎಲೆಯನ್ನು ತಂದು ಅಂಗೈ ಮೇಲಿಟ್ಟು ಅದರ ಮೇಲೆ ಮದರಂಗಿ ಸುರಿದದ್ದಾಯ್ತು. ಸ್ವಲ್ಪ ಹೊತ್ತು ಕಳೆದ ಮೇಲೆ ನೋಡಿದರೆ ಕೈಯೆಲ್ಲಾ ಕೆಂಪಾಯಿತೇ ವಿನಾ ಡಿಸೈನ್ ಬಂದಿರಲಿಲ್ಲ. ಹೋಗಲಿ ಬಿಡಿ ಇನ್ನೇನು ಮಾಡುವುದು ಎಂದು ಕೈಯಲ್ಲಿನ ಮದರಂಗಿ ಹೋಗಲು ಬಟ್ಟೆ ಒಗೆಯುವ ಕಲ್ಲಿಗೆ ಉಜ್ಜಿದ್ದೂ ಆಯ್ತು. ಇಷ್ಟೆಲ್ಲಾ ಆದ್ರೂ ಡಿಸೈನ್ ಬಿಡಿಸಬೇಕೆಂಬ ಹಠ ಮಾತ್ರ ಕಡಿಮೆಯಾಗಿರಲಿಲ್ಲ. ನನ್ನ ಗೆಳತಿಯರ ಕೈಯಲ್ಲಿ ವಿಧವಿಧದ ಡಿಸೈನ್ ಅದೂ ಮುಸ್ಲಿಂ ಮಕ್ಕಳ ಕೈಯಲ್ಲಿ ಡಿಸೈನ್ ನೋಡುವಾಗ ಆಸೆಯಾಗುತ್ತಿತ್ತು. ನನ್ನ ಕಾಟ ತಡೆಯಲಾರದೆ ಅಮ್ಮ ಒಂದು ದಿನ ಪ್ರಯೋಗ ಮಾಡಲು ಮುಂದಾದರು. ಆವಾಗ ನಾನು 3 ನೇ ಕ್ಲಾಸಿನಲ್ಲಿದ್ದೆ. ಅದೇನು ಗೊತ್ತಾ...ಹಲಸಿನ ಕಾಯಿಯ ಅಂಟು (ಒಣಗಿರುವುದು) ಅದನ್ನು ಸ್ವಲ್ಪ ಬಿಸಿ ಮಾಡಿ ಕೈಗೆ ಹನಿ ಹನಿಯಾಗಿ ಸುರಿದಿದ್ದರು. ಕಾದ ಅಂಟು ಕೈಗೆ ಬಿದ್ದು ಜುಂ ಅನಿಸಿದ್ದರೂ ಚೆನ್ನಾಗಿ ಡಿಸೈನ್ ಮೂಡುತ್ತದಲ್ವಾ ಎಂಬ ಆಸೆ. ಹಾಗೆ ಅಂಟಿನಲ್ಲಿ ಚಿಕ್ಕ ಚಿಕ್ಕ ಬೊಟ್ಟು ಇಟ್ಟು ಅದರ ಮೇಲೆ ಮದರಂಗಿ ಮೆತ್ತಿದರು ಅಮ್ಮ. ಅಂಟು ಇದ್ದ ಜಾಗ ಖಾಲಿ ಖಾಲಿಯಾಗಿದ್ದು ಬಾಕಿ ಜಾಗದಲ್ಲಿ ಕೆಂಪಾದ ಮದರಂಗಿ ಗೋಚರಿಸಿದರೆ ಅದೂ ಒಂದು ಡಿಸೈನ್!. ಆದರೇನು ಮಾಡುವುದು ಆ ಅಂಟು ಒಣಗಿ ಕೈಯಿಂದ ಎದ್ದು ಹೋಗಿ ಡಿಸೈನ್್ನ್ನು ಮದರಂಗಿ ನುಂಗಿತ್ತು. ಅಮ್ಮ ಈ ಪ್ರಯೋಗದ ನಂತರ ಇನ್ನೊಂದು ಪ್ರಯೋಗ ಮಾಡಿದರು. ಅದೇನೆಂದರೆ ಸುಣ್ಣದಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳನ್ನಿಟ್ಟು ಅದು ಒಣಗಿದ ಮೇಲೆ ಅದರ ಮೇಲೆ ಮದರಂಗಿ ಮೆತ್ತುವುದು. ಕೊನೆಗೂ ಇದು ಸ್ಲಲ್ಪ ವರ್ಕೌಟ್ ಆಯ್ತು. ಅಂತೂ ಅಮ್ಮ ನನ್ನ ಕೈಯಲ್ಲಿ ಹೊಸತೊಂದು ಡಿಸೈನ್ ಮಾಡಿಯೇ ಬಿಟ್ಟರು.</br>
<br>ಇನ್ನೂ ಸ್ವಲ್ಪ ದೊಡ್ಡವಳಾದ ಮೇಲೆ ಅಪ್ಪ ಪ್ಲಾಸ್ಟಿಕ್ ಡಿಸೈನ್ ತಂದು ಕೊಟ್ಟರು. ಆ ಡಿಸೈನ್ ತುಂಬಾ ದೊಡ್ಡದಾಗಿದ್ದುದರಿಂದ ನನ್ನ ಪುಟ್ಟ ಅಂಗೈಯಲ್ಲಿ ಸರಿಯಾಗಿ ಮೂಡುತ್ತಲೇ ಇರಲಿಲ್ಲ. ಹೈಸ್ಕೂಲ್್ಗೆ ಕಾಲಿಟ್ಟ ಮೇಲೆ ಮನೆಯಲ್ಲೇ ಅರೆದು ಮದರಂಗಿ ಇಡುವುದನ್ನು ಬಿಟ್ಟು cone ತೆಗೆದುಕೊಳ್ಳ ತೊಡಗಿದೆ. ಯಾವುದೇ ಹಬ್ಬ ಇರಲಿ, ವಿಶೇಷ ದಿನವಿರಲಿ ನನ್ನ ಕೈಯಲ್ಲಿ ಮದರಂಗಿ ರಾರಾಜಿಸುತ್ತಿತ್ತು. ಆವಾಗ ಡಿಸೈನ್ ಅಂದರೆ ಯಾವುದೋ ಒಂದು ಹೂವಿನ ಚಿತ್ರ..ಇಲ್ಲದೇ ಇದ್ದರೆ ಇಂಗ್ಲಿಷ್್ನಲ್ಲಿ ಆರ್ ಮತ್ತು ಎಸ್ (ಸಚಿನ್ ತೆಂಡೂಲ್ಕರ್ ಮೇಲಿನ ಪ್ರೀತಿಯಿಂದ) ಎಂದು ಬರೆಯುವುದು. ಕಾಲೇಜಿಗೆ ತಲುಪಿದಾಗ ಕೈಯಲ್ಲಿ ಹಾರ್ಟ್ (ಲವ್) ಚಿಹ್ನೆ. ಯಾರಿಗೂ ಗೊತ್ತಾಗದಂತೆ ಡಿಸೈನ್ ಮಧ್ಯೆ ಆವಾಗಿದ್ದ ಕ್ರಷ್್ನ ಮೊದಲಕ್ಷರ ಮೂಡುತ್ತಿತ್ತು. ಕಾಲೇಜಿನ ಗೆಳತಿಯರಲ್ಲಿ ಹೆಚ್ಚಿನವರಿಗೆ ಮೆಹಂದಿ ಡಿಸೈನ್ ಚೆನ್ನಾಗಿ ಗೊತ್ತಿತ್ತು, ಕೆಲವೊಮ್ಮೆ ಅವರೂ ನನ್ನ ಕೈಯಲ್ಲಿ ಡಿಸೈನ್ ಬಿಡಿಸುತ್ತಿದ್ದರು. ಹೀಗೆ ಅರೇಬಿಕ್, ಪರ್ಷಿಯನ್, ಇನ್ನೂ ಮತ್ತೇನೋ ಎಲ್ಲವೂ ನನ್ನ ಕೈಯಲ್ಲಿ ಇರುತ್ತಿತ್ತು. ಕಾಲೇಜು ಮುಗಿಸಿ ವೃತ್ತಿ ಜೀವನ ಆರಂಭಿಸಿದ ನಂತರ ಮೆಹಂದಿ ಹುಚ್ಚಿಗೆ ಸ್ವಲ್ಪ ಬ್ರೇಕ್ ಬಿತ್ತು. ಕೆಲಸ ನಿಮಿತ್ತ ದೂರದೂರಲ್ಲಿ ಪಿಜಿಯಲ್ಲಿರಬೇಕಾದ ಪರಿಸ್ಥಿತಿ. ಅಲ್ಲಿ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕಲ್ವಾ? ಮೆಹಂದಿ ಇಟ್ಟು ಕುಳಿತುಕೊಂಡರೆ ತಿನಿಸುವ, ಹಾಸಿಗೆ ಹಾಸಿಕೊಡುವ ಅಮ್ಮ ಅಲ್ಲಿಲ್ವಲ್ಲಾ? ಇನ್ನೊಂದು ಕೈಗೆ ಮೆಹಂದಿ ಹಚ್ಚಿದ ಕೂಡಲೇ ತಲೆ ತುರಿಕೆ ಇಲ್ಲದಿದ್ದರೆ ಬೆನ್ನು ತುರಿಕೆ ಆರಂಭವಾಗುತ್ತದೆ. ಆವಾಗೇನು ಮಾಡಲಿ? ಆ ಹೊತ್ತಲ್ಲೇ ಫೋನ್ ಬಂದರೆ? ಅದೂ ಕಷ್ಟವೇ...</br>
<br>ನನ್ನ ಅಮ್ಮನಿಗೆ ಡಿಸೈನ್ ಮಾಡೋಕೆ ಬರಲ್ಲ ಎಂದು ಮೊದಲೇ ಹೇಳಿದ್ದೆನಲ್ಲಾ..ಅದಕ್ಕೆ ನಾನೇ ಡಿಸೈನ್ ಬಿಡಿಸಲು ಪ್ರಯತ್ನವನ್ನೂ ಮಾಡಿದ್ದೇನೆ. ಅದೂ ನನ್ನ ಅಪ್ಪನ ಕೈಯಲ್ಲಿ. ರಾತ್ರಿ ವೇಳೆ ಅಪ್ಪ ಸುಮ್ಮನೆ ಕುಳಿತಿರುತ್ತಾರಲ್ಲಾ ಎಂಬ ಕಾರಣದಿಂದ ಅಪ್ಪನ ಕೈಯಲ್ಲಿ ಚಿತ್ತಾರ ಬಿಡಿಸುತ್ತಿದ್ದೆ. ಅದು ಕೆಟ್ಟದಾಗಿದ್ದರೂ ಅಪ್ಪ ಏನೂ ಅನ್ನುತ್ತಿರಲಿಲ್ಲ. ಅಪ್ಪನ ಮಗಳು ನಾನು, ಅದಕ್ಕೆ ಚಿಕ್ಕಂದಿನಲ್ಲಿ ಅಪ್ಪನ ಜತೆಗೇ ಮಲಗುತ್ತಿದ್ದೆ. ಮದರಂಗಿ ಕೈಗಿಟ್ಟು ಮಲಗಿದರೆ ಬೆಳಗೆದ್ದಾಗ ಅಪ್ಪನ ಮುಖ, ಎದೆಯಲ್ಲೆಲ್ಲಾ ಮದರಂಗಿ. ಕೈ ಅಲುಗಾಡಿಸದೆ ಮಲಗಬೇಕು ಎಂದು ಅಮ್ಮ ತಾಕೀತು ಮಾಡಿದ್ದರೂ, ರಾತ್ರಿ ನಿದ್ದೆಯಲ್ಲಿ ಅಪ್ಪನ ಎದೆಗೊರಗಿಯೇ ನಿದ್ದೆ ಮಾಡುವ ಬುದ್ದಿ ನನ್ನದು. ಹೀಗಿರುವಾಗ ಅಪ್ಪನಿಗೂ ಮದರಂಗಿಯ ಕೆಂಪು ತಾಗದೇ ಇರುತ್ತದೆಯೇ?</br>
<br>ಈಗಲೂ ನನಗೆ ಯಾವುದಾದರೂ ಹಬ್ಬ ಬಂದರೆ ಮದರಂಗಿ ಹಚ್ಚಿಕೊಂಡು ಸಿಂಗಾರ ಮಾಡಬೇಕೆಂಬ ತುಡಿತವಿರುತ್ತದೆ. ಕೆಲವೊಮ್ಮೆ ಇದು ಸಾಧ್ಯವಾಗುವುದೂ ಇಲ್ಲ. ಮೊನ್ನೆ ಹೊಸ ವರುಷಕ್ಕೆ ನನ್ನ ರೂಂಮೇಟ್ ನನ್ನ ಕೈಯಲ್ಲಿ ಮದರಂಗಿ ಡಿಸೈನ್ ಬಿಡಿಸಿದ್ಳು...ನನಗೆ ಡಿಸೈನ್ ಬರಲ್ಲ ಕಣೇ ಎಂದು ಅವಳು ಹೇಳಿದರೂ ಪರ್ವಾಗಿಲ್ಲ..ಅದೊಂದು ಹೊಸ ಡಿಸೈನ್ ಆಗಬಹುದು ಎಂದು ಎರಡೂ ಕೈಗಳಲ್ಲಿ ಡಿಸೈನ್ ಮಾಡಿಸಿದ್ದೆ. ನಿಜವಾಗಿಯೂ ಅದೊಂದು ಹೊಸ ಡಿಸೈನ್ ಆಗಿತ್ತು...ಸಾದಾ ಡಿಸೈನ್ ಎಂದು ಅನಿಸಿದರೂ ಅದರಲ್ಲಿ ಗೆಳತಿಯ ಪ್ರೀತಿಯಿತ್ತು. ಈ ಡಿಸೈನ್್ನಲ್ಲೂ ಪುಟ್ಟದಾದ ಲವ್ ಸಿಂಬಲ್್ನ್ನು ಹಾಕಲು ನಾನು ಮರೆತಿಲ್ಲ. ಇವತ್ತು ಕೈಯಲ್ಲಿನ ಮದರಂಗಿ ಮಾಸಿ ಹೋಗುತ್ತಿದ್ದುದನ್ನು ನೋಡಿ ಇದೆಲ್ಲಾ ನೆನಪಾಯ್ತು...</br>
<i><b>ಚಿತ್ರ -ಸಾಂದರ್ಭಿಕ ಚಿತ್ರ</b> </i>
ಅನುರಾಗhttp://www.blogger.com/profile/13411740540409360931noreply@blogger.com5tag:blogger.com,1999:blog-4320259625062903049.post-80680760951664261502012-12-07T22:20:00.000+05:302012-12-07T22:21:30.434+05:30ಅವಳು ಮತ್ತೊಬ್ಬಳು!- ಕೃತಿ ಬಿಡುಗಡೆಗೆ ಆಮಂತ್ರಣ
<div class="separator" style="clear: both; text-align: center;">
<a href="http://3.bp.blogspot.com/-gSRYhfktYN4/UMIePSSlLZI/AAAAAAAAAfs/Jeu0teMYI8M/s1600/rashmi.JPG" imageanchor="1" style="clear:left; float:left;margin-right:1em; margin-bottom:1em"><img border="0" height="400" width="264" src="http://3.bp.blogspot.com/-gSRYhfktYN4/UMIePSSlLZI/AAAAAAAAAfs/Jeu0teMYI8M/s400/rashmi.JPG" /></a></div>
<br>ಪ್ರಿಯರೇ,</br>
<br>2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ.</br>
<br>ಕೃತಿ ಹೆಸರು ಅವಳು ಮತ್ತೊಬ್ಬಳು!.</br>
<br>ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ "ನೆನಪಿನ ಮಳೆಯಲ್ಲಿ" ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ.</br>
<br>ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ.</br>
<br>ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು...ನಿಮ್ಮ ಹಾರೈಕೆ ನನ್ನೊಂದಿಗಿರಲಿ...</br>
<br>ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ...ನೀವು ಬರಲೇಬೇಕು...</br>
ರಶ್ಮಿ ಕಾಸರಗೋಡು.
ಅನುರಾಗhttp://www.blogger.com/profile/13411740540409360931noreply@blogger.com2