<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4320259625062903049</id><updated>2012-01-29T08:41:40.446-08:00</updated><category term='ಹೆಸರು'/><category term='ಆಮಂತ್ರಣ'/><category term='ಮಲಯಾಳ ಮನೋರಮಾ'/><category term='ಬರವಣಿಗೆ'/><category term='ಕನಾ೯ಟಕ ಪೊಲೀಸರು'/><category term='ಕರ್ನಾಟಕ ಸರ್ಕಾರ'/><category term='ನನ್ನ ಗ್ರಾಮ'/><category term='ಅನುರಾಗ'/><category term='poem'/><category term='ನನ್ನೂರಿನ ನೆನಪು'/><category term='ಕವನ ನೆನಪು ಯಾತ್ರೆ'/><category term='ಮಳೆ'/><category term='ಅನುಭವ'/><category term='ಜಲಕ್ಷಾಮ'/><category term='ಸುಮ್ಮನೆ ತರ್ಲೆ'/><category term='ಅಪ್ಪಂದಿರ ದಿನಾಚರಣೆ'/><category term='ನಿದ್ದೆ'/><category term='ಪ್ರೀತಿ'/><category term='ಮೊಬೈಲ್'/><category term='ಉದಯೋನ್ಮುಖ ಬರಹಗಾರರು'/><category term='ಹಾಸ್ಯ'/><category term='ರಶ್ಮಿ'/><category term='ಕನಾ೯ಟಕ'/><category term='ಮಹಿಳಾ ದಿನಾಚರಣೆ'/><category term='ನೆನಪು'/><category term='ಬ್ಲಾಗ್'/><category term='ಸಲ್ಲಾಪ'/><category term='ಸರ್ಕಾರಿ ಬಾವಿ'/><category term='ಲಾಸ್ಟ್ ಬೆಂಚ್'/><category term='ಹನಿಗವನ'/><category term='ಲೇಖನ'/><category term='ಸಣ್ಣಕಥೆ'/><category term='ರಜೆ'/><category term='ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನ'/><category term='ಶೋಷಣೆ'/><category term='ಪೃಥ್ವೀರಾಜ್'/><category term='ವೇಶ್ಯೆ'/><category term='ಹಾಗೇ ಸುಮ್ಮನೆ'/><category term='ಮಧುರ ನೆನಪು'/><category term='ನನ್ನ ಕಾಲೇಜು ದಿನಗಳು'/><category term='ಕಾಸರಗೋಡು'/><category term='ಅಪ್ಪಂದಿರ ದಿನ'/><category term='ಇರೋಂ ಚಾನು ಶರ್ಮಿಳಾ'/><category term='ವಧೂ ಪರೀಕ್ಷೆ'/><category term='ಪ್ರೇಮ'/><category term='ಕವಿತೆ'/><category term='ಎಂಡೋಸಲ್ಫಾನ್'/><category term='ನವಂಬರ್'/><category term='ನಮ್ಮೂರು'/><category term='ಸ್ಪರ್ಶ'/><category term='ಜೀವನ'/><category term='ಮಳೆ ನೀರು ಸಂಗ್ರಹ'/><category term='ಭಾಷಾನುವಾದ ಸಣ್ಣ ಕಥೆ'/><category term='ಮಹಿಳೆ'/><category term='ಅನಿಸಿಕೆ'/><category term='ಕೇರಳ'/><category term='ನೆನಪಿನ ಮಳೆಯಲ್ಲಿ ಕವನ ಸಂಕಲನ ಬಿಡುಗಡೆ'/><category term='ದೂರದರ್ಶನ'/><category term='ಸಣ್ಣ ಕಥೆ'/><category term='ರೆಸಲ್ಯೂಷನ್'/><category term='ಬ್ಲಾಗ್ ಬರಹ'/><category term='ವಿದ್ಯುತ್'/><category term='ಹೃದಯ'/><category term='ಸಾಹಿತ್ಯ'/><category term='ಪ್ರಚಲಿತ'/><category term='ಸ್ಲಟ್ ವಾಕ್'/><category term='ಅಮ್ಮನ ಪತ್ರ'/><category term='ಕವನ'/><category term='ಮಗಳು'/><category term='ಚೆಕ್ ಪೋಸ್ಟ್'/><category term='ವೇಶ್ಯಾವಾಟಿಕೆ'/><category term='ಶೂನ್ಯ'/><category term='ಮರೀನಾ'/><category term='ಅನುಭವ ಕಥನ'/><category term='ಕಥೆ'/><category term='ಲಂಚ'/><category term='ಮುಷ್ಕರ'/><category term='ಪ್ರೀತಿ ಹನಿ'/><category term='ಆರ್ಥಿಕ ಮತ್ತು ಲಿಂಗ ಸಮಾನತೆ'/><category term='ಬದುಕು'/><category term='ನಗೀನಾಳ ಡೈರಿ'/><category term='ವಿರಹ'/><category term='ಐಶ್ವರ್ಯಾ ರೈ'/><category term='ಹೊಸ ವರುಷ'/><category term='ತರ್ಲೆ'/><category term='ಶರದ್ ಪವಾರ್'/><category term='ಗಂಡಸರ ದಿನಾಚರಣೆ'/><category term='ನೀರು'/><category term='ಕಾವ್ಯ ಮತ್ತು ಕವನ'/><category term='ಅಮರಣ ಉಪವಾಸ ಸತ್ಯಾಗ್ರಹ'/><category term='ಅಪ್ಪ'/><category term='love'/><title type='text'>ಅನುರಾಗ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://anuraaga.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4320259625062903049/posts/default?max-results=100'/><link rel='alternate' type='text/html' href='http://anuraaga.blogspot.com/'/><link rel='hub' href='http://pubsubhubbub.appspot.com/'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>65</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4320259625062903049.post-3194175343833586538</id><published>2012-01-29T08:41:00.000-08:00</published><updated>2012-01-29T08:41:40.460-08:00</updated><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><title type='text'>ಅತ್ತು ಬಿಡು ನೀನೊಮ್ಮೆ...</title><content type='html'>&lt;b&gt;ಅ&lt;/b&gt;ತ್ತು ಬಿಡು ನೀನೊಮ್ಮೆ&lt;br /&gt;ಕಣ್ಣೀರು ಹರಿದು ಬಿಡಲಿ&lt;br /&gt;ಮುಗ್ದ ಕೆನ್ನೆಯನು ಸೋಕಿ&lt;br /&gt;ಮೌನಿ ನಾನು ನಿನ್ನೊಲುಮೆಗೆ...&lt;br /&gt;&lt;br /&gt;ಅತ್ತು ಬಿಡು ನೀನೊಮ್ಮೆ&lt;br /&gt;ಚೂರಾದ ಹೃದಯವು&lt;br /&gt;ಮತ್ತೊಮ್ಮೆ ಮಿಡಿಯಲಿ&lt;br /&gt;ಮೌನಿ ನಾನು ನಿನ್ನ ಎದೆಬಡಿತಕೆ..&lt;br /&gt;&lt;br /&gt;ಅತ್ತು ಬಿಡು ನೀನೊಮ್ಮೆ&lt;br /&gt;ನಿನ್ನ ಕರಗಳ ಬೆಚ್ಚನೆಯ &lt;br /&gt;ಸ್ಪರ್ಶದಲಿ ಬೆರೆವಾಗ&lt;br /&gt;ಮೌನಿ ನಾನು ಬಿಸಿ ಅಪ್ಪುಗೆಯಲಿ&lt;br /&gt;&lt;br /&gt;&lt;br /&gt;ಅತ್ತು ಬಿಡು ನೀನೊಮ್ಮೆ&lt;br /&gt;ಮತ್ತದೇ ಪಿಸುಮಾತು&lt;br /&gt;ಕಿವಿಯಲ್ಲಿ ಗುನುಗಲಿ&lt;br /&gt;ಮೌನಿ ನಾನು ನಿನ್ನ ದನಿಗೆ...&lt;br /&gt;&lt;br /&gt;&lt;br /&gt;ಅತ್ತು ಬಿಡು ನೀನೊಮ್ಮೆ&lt;br /&gt;ಸದ್ದು ಮಾಡದೆ ನನ್ನ ಕಣ್ಗಳಲಿ&lt;br /&gt;ಓ ನನ್ನ ಇನಿಯಾ...&lt;br /&gt;ಮೌನಿ ನಾನು...ಅತ್ತು ಬಿಡಲೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3194175343833586538?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3194175343833586538/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3194175343833586538' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3194175343833586538'/><link rel='self' type='application/atom+xml' href='http://www.blogger.com/feeds/4320259625062903049/posts/default/3194175343833586538'/><link rel='alternate' type='text/html' href='http://anuraaga.blogspot.com/2012/01/blog-post.html' title='ಅತ್ತು ಬಿಡು ನೀನೊಮ್ಮೆ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-4054047073597240953</id><published>2011-12-30T06:27:00.000-08:00</published><updated>2011-12-30T06:27:20.887-08:00</updated><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><title type='text'>ಮಣ್ಣು</title><content type='html'>&lt;b&gt;ನಾ&lt;/b&gt;ನು ಸತ್ತ ಮೇಲೆ&lt;br /&gt;ನಿಮ್ಮ ಅಪ್ಪನ ಗೋರಿ ಪಕ್ಕದಲ್ಲೇ&lt;br /&gt;ನನ್ನನ್ನು ಮಣ್ಣು ಮಾಡಿ ಬಿಡಿ&lt;br /&gt;ಎಂದಳಾ ಅಮ್ಮ...&lt;br /&gt;&lt;br /&gt;ಅಮ್ಮನ ಇಚ್ಛೆ ನೆರವೇರಿಸಿದರು&lt;br /&gt;ಮಕ್ಕಳು...&lt;br /&gt;ಅಪ್ಪ ಅಮ್ಮ ಒಂದೇ ಕಡೆ&lt;br /&gt;ನಿಶ್ಚಿಂತರಾಗಿ ಮಲಗಿದ್ದರು&lt;br /&gt;ತಮ್ಮ ಗೋರಿಯೊಳಗೆ&lt;br /&gt;&lt;br /&gt;ಕಾಲ ಉರುಳಿತು&lt;br /&gt;ಕೊನೆಗೊಂದು ದಿನ&lt;br /&gt;ಮಣ್ಣು ಮಾರಾಟವಾದಾಗ&lt;br /&gt;ಅಮ್ಮ ಮಲಗಿದ್ದ ಮಣ್ಣು ಮಂಗಳೂರಿಗೂ&lt;br /&gt;ಅಪ್ಪ ಮಲಗಿದ್ದ ಮಣ್ಣು ಕಣ್ಣೂರಿಗೂ&lt;br /&gt;ಟಿಪ್ಪರ್ ಲಾರಿ ಮೂಲಕ ಸಾಗಿತ್ತು&lt;br /&gt;&lt;br /&gt;ಗೋರಿಗಳು ಹೋಳಾಗಿ&lt;br /&gt;ಕಲ್ಲು ಕೋರೆಯಲ್ಲಿ ಧೂಳು ಹಾರಿತ್ತು&lt;br /&gt;ಕೆಂಪು ಕಲ್ಲುಗಳು&lt;br /&gt;ಒಂದರ ಮೇಲೊಂದು ಏರುತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4054047073597240953?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4054047073597240953/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4054047073597240953' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4054047073597240953'/><link rel='self' type='application/atom+xml' href='http://www.blogger.com/feeds/4320259625062903049/posts/default/4054047073597240953'/><link rel='alternate' type='text/html' href='http://anuraaga.blogspot.com/2011/12/blog-post.html' title='ಮಣ್ಣು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-1045764449315433626</id><published>2011-11-08T14:41:00.000-08:00</published><updated>2011-11-08T14:41:34.096-08:00</updated><category scheme='http://www.blogger.com/atom/ns#' term='ಪ್ರಚಲಿತ'/><category scheme='http://www.blogger.com/atom/ns#' term='ಮಹಿಳೆ'/><category scheme='http://www.blogger.com/atom/ns#' term='ಸ್ಲಟ್ ವಾಕ್'/><title type='text'>ಬೆಂಗ್ಳೂರಲ್ಲಿ 'ಸ್ಲಟ್ ವಾಕ್' ಆವಶ್ಯಕತೆಯಿದೆಯಾ?</title><content type='html'>&lt;b&gt;ಸ&lt;/b&gt;ಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್  ಬಗ್ಗೆ ಕೇಳಿದಾಗಲೇ.&lt;br /&gt;&lt;br /&gt;'ಸ್ಲಟ್ ವಾಕ್ ' (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು "ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದು" ಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. 'ಸ್ಲಟ್ ' ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.&lt;br /&gt;ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-3Z7WQ5nmfVU/Trmt9F14alI/AAAAAAAAAZY/CJ9d6tEjT1g/s1600/slutwalk1.gif" imageanchor="1" style="clear:left; float:left;margin-right:1em; margin-bottom:1em"&gt;&lt;img border="0" height="214" width="320" src="http://4.bp.blogspot.com/-3Z7WQ5nmfVU/Trmt9F14alI/AAAAAAAAAZY/CJ9d6tEjT1g/s320/slutwalk1.gif" /&gt;&lt;/a&gt;&lt;/div&gt;ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್  (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.&lt;br /&gt;&lt;br /&gt;ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಎಲ್ಲಾ ಪ್ರಕರಣಗಳಿಗಿಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಮಹಿಳೆಯ ಪರಿಚಿತರೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ಮಾಹಿತಿಯಲ್ಲಿದೆ. ಅಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಮಹಿಳೆಯರು ತೊಡುವ ಉಡುಗೆ ಮಾತ್ರ ಕಾರಣವೆ?. ಯಾಕೆಂದರೆ ಮೈ ತುಂಬಾ ಬಟ್ಟೆ ಹಾಕಿದ ಹುಡುಗಿಯೂ ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಗುವಿನಿಂದ ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತದೆ. ಪ್ರಾಣಿಗಳನ್ನೂ ಬಿಡದ 'ಕಾಮುಕ' ಮನುಷ್ಯರ ಬಗ್ಗೆ ನಾವು ಕೇಳಿದ್ದೇವೆ. ಹೀಗಿರುವ ಅತ್ಯಾಚಾರಕ್ಕೆ ಇಂತದ್ದೇ ಕಾರಣ ಎಂದು ಹೇಳುವುದಾದರೂ ಹೇಗೆ?&lt;br /&gt;&lt;br /&gt;ಇರಲಿ ಬಿಡಿ, ಬೀದಿಯಲ್ಲಿ ಅರ್ಧಂಬರ್ಧ ಡ್ರೆಸ್ ತೊಟ್ಟು ಹುಡುಗಿಯೊಬ್ಬಳು ನಡೆದರೆ ಹುಡುಗರು ನೋಡದೆಯೆ ಇರುತ್ತಾರೆಯೇ? 'ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ' ಎನ್ನುತ್ತಾ ಕೆಲವೊಮ್ಮೆ ಶಿಳ್ಳೆ ಹೊಡೆಯಬಹುದು, ಕಾಮೆಂಟ್ ಮಾಡಬಹುದು ಇನ್ನು ಏನೇನೋ ಅಸಭ್ಯ ವರ್ತನೆ ತೋರಬಹುದು. ಹುಡುಗರ ಈ ವರ್ತನೆಯನ್ನು ಆ ಹೆಣ್ಮಗಳು ಪ್ರಶ್ನಿಸುತ್ತಾಳೆ ಅಂದಿಟ್ಟುಕೊಳ್ಳಿ. ಅದಕ್ಕೆ ಹುಡುಗ ನಿನ್ನನ್ನು ನೋಡುವ ಹಕ್ಕು ನನಗಿದೆ ಅಂತಾ ಉತ್ತರ ಕೊಟ್ಟರೆ ಏನಾಗುತ್ತೆ ಹೇಳಿ?. ಹುಡುಗಿ ಮೈ ತೋರಿಸಿ ನಡೆವ ಹಕ್ಕನ್ನು ಹೊಂದಿದ್ದಾಳೆ ಎಂದಾದರೆ ಹುಡುಗನಿಗೆ ಆಕೆಯನ್ನು ನೋಡುವ ಹಕ್ಕು ಇರುವುದಿಲ್ಲವೇ?&lt;br /&gt;ಇನ್ನು, ಗಂಡಸರು ತನಗೂ ಸ್ವಾತಂತ್ಯವಿದೆ ಎಂದು ಹೇಳಿ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ಓಡಾಡಲಿ. ಮಹಿಳೆಯರ ಗುಂಪಿನ ನಡುವೆ ಬಂದು ಅಂಗಿ ಬಿಚ್ಚಿ ಕುಳಿತುಕೊಳ್ಳಲಿ "ಛೀ..ಯಾವನು ಇವನು ಮಂಡೆ ಸಮ ಇಲ್ಲದವನು" ಎಂದು ಹೆಣ್ಮಕ್ಕಳು ಬೈಯ್ಯದೆ ಇರುತ್ತಾರೆಯೇ? ಆವಾಗ ಗಂಡು ತನಗೆ ಹೇಗೆ ಬೇಕಾದರು ಡ್ರೆಸ್ ಮಾಡುವ, ಬಿಚ್ಚುವ ಅಧಿಕಾರವಿದೆ ಎಂದು ಹೇಳಲಿ ನೋಡೋಣ. ಹೆಣ್ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ? ಒಟ್ಟಿನಲ್ಲಿ ಮಹಿಳೆಯರು ತಮಗಿಚ್ಛೆ ಬಂದಂತೆ ವರ್ತಿಸಲು ಹಕ್ಕುಳ್ಳವರು ಎಂದಾದರೆ ಅದೇ ಹಕ್ಕು ಗಂಡಸಿಗೂ ಅನ್ವಯಿಸುತ್ತದೆ ಅಲ್ಲವೇ?&lt;br /&gt;&lt;br /&gt;ಇಂತಿರ್ಪ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಬೇಕಾದರೆ ಮಹಿಳೆಯರು ಅರ್ಧಬಂರ್ಧ ಡ್ರೆಸ್ ಹಾಕಿಕೊಂಡು ಸ್ತ್ರೀವಾದದ ಬಗ್ಗೆ ಬೊಬ್ಬೆ ಹಾಕುವುದು ಬೇಕಾ? ಅದೂ ಬೆಂಗಳೂರಲ್ಲಿ? ಆದಾಗ್ಯೂ, ಈ ಸ್ಲಟ್್ವಾಕ್್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸ್ವೇಚಾಚಾರ ಬಯಸುವ ಮಂದಿ ಅಲ್ಲವೇ? ಶ್ರೀಮಂತ ಕುಟಂಬದ ಇಲ್ಲವೇ ಫ್ಯಾಷನ್ ಲೋಕವನ್ನೇ ಮೆಚ್ಚಿಕೊಂಡಿರುವ ಹೈಫೈ ಎನ್ನುವಂತ ಮಂದಿ ಇಲ್ಲಿ ಹೆಜ್ಜೆ ಹಾಕಬಹುದು. ಸ್ತ್ರೀವಾದವನ್ನು ಪ್ರತಿಪಾದಿಸುವ ಇವರ ಈ ಹೆಜ್ಜೆ ಭಾರತದಲ್ಲಿರುವ ಸಾಮಾನ್ಯ ಹೆಣ್ಣು ಮಗಳ ಸಂಕಷ್ಟವನ್ನು ದೂರ ಮಾಡಬಲ್ಲುದೆ?&lt;br /&gt;&lt;br /&gt;ನಮ್ಮ ದೇಶದಲ್ಲಿ ಅತ್ಯಾಚಾರವೊಂದನ್ನು ಬಿಟ್ಟರೆ ಇನ್ನಿತರ ಶೋಷಣೆ, ದೌರ್ಜನ್ಯಗಳು ಕಡಿಮೆ ಅಂತಾ ಹೇಳುವಂತಿಲ್ಲ. ಯಾಕೆಂದರೆ ಮನೆಯಿಂದ ಹಿಡಿದು ಆಫೀಸಿನವರೆಗೂ ಶಾರೀರಿಕ, ಮಾನಸಿಕ ದೌರ್ಜನ್ಯವನ್ನು ಮಹಿಳೆಯೊಬ್ಬಳು ಎದುರಿಸಲೇಬೇಕಾಗುತ್ತದೆ. ವಿಪರ್ಯಾಸ ಎಂದರೆ ಇದರಲ್ಲಿ ಬಹುತೇಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಮನಸ್ಸಲ್ಲೇ ನೊಂದುಕೊಂಡು ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿರುವ ಹೆಣ್ಮಗಳು ಒಂದೆಡೆಯಾದರೆ ಇದರ ವಿರುದ್ಧ ದನಿಯೆತ್ತುವ ಹೆಣ್ಮಕ್ಕಳು ಕಡಿಮೆಯೇ ಎಂದು ಹೇಳಬಹುದು. ಕೆಲವೊಮ್ಮೆ ಹೆಣ್ಮಗಳೊಬ್ಬಳು ಈ ಬಗ್ಗೆ ದನಿಯೆತ್ತಿದ್ದಾಳೆ ಅಂತಾನೆ ಇಟ್ಕೊಳ್ಳಿ, ಅವಳಿಗೆ ಯಾರೂ ಬೆಂಬಲ ನೀಡಲು ಮುಂದಾಗದಿದ್ದರೆ ಆ ಹುಡುಗಿ ಮಾಡುವುದಾದರೂ ಏನು? ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯವೆಸಗುವ ಪ್ರಕರಣಗಳ ಬಗ್ಗೆ ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಒಟ್ಟಿನಲ್ಲಿ ಲಿಂಗಭೇದವಿಲ್ಲದೆ ದೌರ್ಜನ್ಯಗಳು ನಡೆಯುತ್ತಲೇ ಇದೆ.&lt;br /&gt;&lt;br /&gt;ಇದಕ್ಕೆಲ್ಲಾ ಕಡಿವಾಣ ಹಾಕಲು ಬಟ್ಟೆ ಬಿಚ್ಚಿ 'ಸ್ಲಟ್ ವಾಕ್' ಮಾಡಬೇಕಾ? ಜಾಗತೀಕರಣದ ಪ್ರಭಾವದಿಂದಾಗಿ ವಿದೇಶೀಯರು ಮಾಡಿದ್ದೆಲ್ಲಾ ನಾವು ನಕಲು ಹೊಡೆಯುತ್ತೇವೆಯೇ ಹೊರತು ಅದು ಭಾರತದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಲಟ್ ವಾಕ್  ಆಯೋಜಕರು ಚಿಂತಿಸಿದ್ದಾರೆಯೇ?&lt;br /&gt;&lt;br /&gt;ಓರ್ವ ಹೆಣ್ಣು ಮಗಳಾಗಿಯೇ ಹೇಳುತ್ತಿದ್ದೇನೆ, ಪ್ರಜಾಪ್ರಭುತ್ವವಿರುವ ನಮ್ಮ ನಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಉಡುಗೆ ತೊಟ್ಟು, ಮನಸೋಇಚ್ಛೆ ವರ್ತಿಸಲಿ. ಈ ಸ್ವಾತಂತ್ರ್ಯದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಆದರೆ ಪ್ರಚೋದನಾಕಾರಿಯಾದಂತಹ ಉಡುಗೆಗಳನ್ನು ತೊಟ್ಟು ಕಾಮುಕ ಕಣ್ಣಿಗೆ ಗುರಿಯಾದೆವು ಎಂದು ಅವಲತ್ತುಕೊಳ್ಳಬಾರದು ಅಷ್ಟೇ. ಹೆಣ್ಣು ಯಾವುದೇ ಉಡುಗೆ ಧರಿಸಿದರು ಅದನ್ನು ಚೆನ್ನಾಗಿ ನಿರ್ವಹಿಸಿಕೊಳ್ಳಲು ಆಕೆಗೆ ಗೊತ್ತಿರಬೇಕು. ಮಾತ್ರವಲ್ಲದೆ ತೊಡುವ ಉಡುಗೆ ಸಂದರ್ಭಕ್ಕನುಸಾರವಾಗಿ ಇದ್ದರೇನೆ ಚೆನ್ನ. ಒಂದು ವೇಳೆ ಪುರುಷರನ್ನು ತನ್ನೆಡೆಗೆ ಆಕರ್ಷಿಸಲು ಬಯಸುವಂತಹ ಉಡುಗೆಯನ್ನೇ ಆಕೆ ತೊಡುತ್ತಿದ್ದರೆ, ಆ ಆಕರ್ಷಣೆಯನ್ನು ಎದುರಿಸಲು ಆಕೆ ಸಿದ್ಧಳಾಗಿರಬೇಕು. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎಂಬುದಕ್ಕೂ ಎಲ್ಲೆಯಿದೆ, ಅದು ನಮ್ಮ ಹೊಣೆಗಾರಿಕೆಯೂ ಹೌದು ಎಂಬುದನ್ನು ಮರೆಯಬಾರದು ಅಲ್ವಾ?.&lt;br /&gt;&lt;br /&gt;ಚಿತ್ರ ಕೃಪೆ: ಅಂತರ್ಜಾಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1045764449315433626?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1045764449315433626/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1045764449315433626' title='3 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1045764449315433626'/><link rel='self' type='application/atom+xml' href='http://www.blogger.com/feeds/4320259625062903049/posts/default/1045764449315433626'/><link rel='alternate' type='text/html' href='http://anuraaga.blogspot.com/2011/11/blog-post_08.html' title='ಬೆಂಗ್ಳೂರಲ್ಲಿ &apos;ಸ್ಲಟ್ ವಾಕ್&apos; ಆವಶ್ಯಕತೆಯಿದೆಯಾ?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-3Z7WQ5nmfVU/Trmt9F14alI/AAAAAAAAAZY/CJ9d6tEjT1g/s72-c/slutwalk1.gif' height='72' width='72'/><thr:total>3</thr:total></entry><entry><id>tag:blogger.com,1999:blog-4320259625062903049.post-5102683987807531274</id><published>2011-10-23T14:34:00.000-07:00</published><updated>2011-10-23T14:34:06.138-07:00</updated><category scheme='http://www.blogger.com/atom/ns#' term='ನವಂಬರ್'/><category scheme='http://www.blogger.com/atom/ns#' term='ಅಮರಣ ಉಪವಾಸ ಸತ್ಯಾಗ್ರಹ'/><category scheme='http://www.blogger.com/atom/ns#' term='ಇರೋಂ ಚಾನು ಶರ್ಮಿಳಾ'/><category scheme='http://www.blogger.com/atom/ns#' term='ಐಶ್ವರ್ಯಾ ರೈ'/><title type='text'>ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?</title><content type='html'>&lt;b&gt;ಐ&lt;/b&gt;ಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ ಓರ್ವ ಹೆಣ್ಣು ಮಗಳು. ಮಿಸ್್ವರ್ಲ್ಡ್ ಪಟ್ಟ ಧರಿಸಿ, ಬಾಲಿವುಡ್್ನಲ್ಲಿ ಮಿಂಚಿ, ಹಾಲಿವುಡ್್ಗೂ ಹಾರಿ, ಬಿಗ್ ಬಿ ಬಚ್ಚನ್್ನ ಪುತ್ರ ಅಭಿಷೇಕ್ ಬಚ್ಚನ್್ರನ್ನು ವರಿಸಿದ ಕರುನಾಡ ಕುವರಿ.  ಆಕೆ ಸೀನಿದ್ದು, ಕೆಮ್ಮಿದ್ದು, ನಕ್ಕಿದ್ದು ಎಲ್ಲವೂ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್! ಯಾಕೆಂದರೆ ಆಕೆ ಸೆಲೆಬ್ರಿಟಿ. ಅದೇ ವೇಳೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಹೆರಿಗೆಯ ವೇಳೆ ಸಾವನ್ನಪ್ಪುತ್ತಿದ್ದರೂ, ಅದೊಂದು ಚಿಕ್ಕ ಸುದ್ದಿಯಾಗಿ ಮಾರನೇ ದಿನಕ್ಕೆ ರದ್ದಿಯಾಗಿ ಬಿಡುತ್ತದೆ.&lt;br /&gt;&lt;br /&gt;ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್್ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್್ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. &lt;br /&gt;&lt;br /&gt;ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ  ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-kjt2NsaXwE0/TqSHeB1eoPI/AAAAAAAAAYs/9vJ3ckjKrUA/s1600/iromchanusharmila.jpg" imageanchor="1" style="clear:left; float:left;margin-right:1em; margin-bottom:1em"&gt;&lt;img border="0" height="320" width="270" src="http://1.bp.blogspot.com/-kjt2NsaXwE0/TqSHeB1eoPI/AAAAAAAAAYs/9vJ3ckjKrUA/s320/iromchanusharmila.jpg" /&gt;&lt;/a&gt;&lt;/div&gt;&lt;br /&gt;ಅಂದು ನವಂಬರ್ 2, 2000 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬ ಸಾಮಾಜಿಕ ಕಾರ್ಯಕರ್ತೆ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕರ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.&lt;br /&gt;&lt;br /&gt;ನವಂಬರ್ 2 ನೇ ತಾರೀಖು ಗುರುವಾರ. ಚಿಕ್ಕಂದಿನಿಂದಲೂ ಪ್ರತೀ ಗುರುವಾರ ಉಪವಾಸ ಕೈಗೊಳ್ಳುತ್ತಿದ್ದ ಶರ್ಮಿಳಾ ಮಾರನೇ ದಿನ ಶುಕ್ರವಾರ ರಾತ್ರಿ ಭೋಜನ ಮುಗಿಸಿ 2000 ನವಂಬರ್ 4ರಂದು ಉಪವಾಸ ಸತ್ಯಾಗ್ರಹ ಆರಂಭಿದ್ದರು. ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಅಂದಿನಿಂದ ಇಂದಿನ ವರೆಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಇಡೀ ಮಣಿಪುರ ಆಕೆಯ ಬೆಂಬಲಕ್ಕಿದೆ. ಹಲವಾರು ಪ್ರಶಸ್ತಿಗಳು ದಕ್ಕಿವೆ. ಏತನ್ಮಧ್ಯೆ,  11 ವರ್ಷಗಳ ಉಪವಾಸದಿಂದ ಶರ್ಮಿಳಾರ ದೇಹ ಸೊರಗಿದೆ, ಆದರೆ ನಿರ್ಧಾರ ಇನ್ನೂ ಅಚಲವಾಗಿದೆ.&lt;br /&gt;&lt;br /&gt;ತನಗೆ ನ್ಯಾಯ ಸಿಗುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶರ್ಮಿಳಾ ತನ್ನ ಗಟ್ಟಿ ನಿಲುವು ತೆಗೆದು ಕೊಂಡಾಗ ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈಕೆಗೆ ಆಸ್ಪತ್ರೆಯೇ ಸೆರೆಮನೆ. ಪ್ರತೀ ಹದಿನೈದು ದಿನಕ್ಕೊಮ್ಮೆ ಶರ್ಮಿಳಾರನ್ನು ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಮೂಗಿಗೆ ನಳಿಕೆ ಸಿಕ್ಕಿಸಿಕೊಂಡು 'ನ್ಯಾಯ ಬೇಕೇ ಬೇಕು' ಎಂದು ಹಠ ಹಿಡಿದು ಕುಳಿತಿರುವ ಈ ಹೆಣ್ಮಗಳ ಧೈರ್ಯ ಮೆಚ್ಚಲೇಬೇಕು.&lt;br /&gt;&lt;br /&gt;ಮಣಿಪುರದ 'ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಶರ್ಮಿಳಾ ದೀರ್ಘಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಪಂಚದ ಏಕೈಕ ವ್ಯಕ್ತಿ. ಸೆರೆಮನೆಯಲ್ಲಿ ಯೋಗಾಭ್ಯಾಸ, ಓದು ಹಾಗೂ ಕವಿತೆ ರಚನೆ ಮೂಲಕ ದಿನದೂಡುತ್ತಿರುವ ಶರ್ಮಿಳಾರಿಗೆ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲೂ ನಿರಾಕರಿಸಲಾಗಿದೆ. ತನ್ನ ಹೋರಾಟಕ್ಕೆ ಜಯ ಲಭಿಸಿದ ನಂತರವೇ ಪ್ರಿಯತಮ ಡೆಸ್ಮಂಡ್ ಕುಟ್ಹಿನೋ ಜತೆ ವಿವಾಹವಾಗುವ ನಿರ್ಧಾರ ಈಕೆಯದ್ದು. ಶರ್ಮಿಳಾ ತನ್ನ ಪ್ರಿಯತಮನನ್ನು ಭೇಟಿಯಾದದ್ದು ಕೇವಲ ಒಂದೇ ಒಂದು ಬಾರಿ. ಇವರ ನಡುವೆ ಇರುವುದು ಕೇವಲ ಪತ್ರ ವ್ಯವಹಾರವಷ್ಟೇ. ಅಭಿಮಾನಿಗಳು ಕಳುಹಿಸಿಕೊಡುವ ಪುಸ್ತಕವೇ ಬಂಧೀಖಾನೆಯಲ್ಲಿ ಈಕೆಯ ಸಂಗಾತಿ. &lt;br /&gt;&lt;br /&gt;"ಮರಣಕ್ಕೆ ನಾನು ಅಂಜಲಾರೆ. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಾನು. ನನ್ನ ಹೋರಾಟಕ್ಕೆ ಉಪವಾಸ ಸತ್ಯಾಗ್ರಹವಲ್ಲದೆ ಬೇರೆ ಮಾರ್ಗವೇ ಇಲ್ಲ. ನನಗೂ ಇತರರಂತೆ ಬದುಕುವ ಹಂಬಲವಿದೆ" ಎಂದು ಹೇಳುವ ಶರ್ಮಿಳಾರ ಅಂತರಂಗದ ಮಾತಿನಲ್ಲಿ ನೋವಿದೆ. ದೇವರು ನನ್ನ ಹೋರಾಟಕ್ಕೆ ಶಕ್ತಿ ನೀಡುತ್ತಾನೆ. ಒಂದಲ್ಲ ಒಂದು ದಿನ ನನ್ನ ಜೀವನದಲ್ಲೂ ಸಂತೋಷದ ದಿನಗಳು ಬರಬಹುದು ಎಂಬ ಆಶಾವಾದ, ಗಾಂಧೀಜಿಯವರ ತತ್ವದಲ್ಲಿರುವ ಬಲವಾದ ನಂಬಿಕೆ ಈಕೆಯನ್ನು ಧೃತಿಗೆಡದಂತೆ ಕಾಪಾಡಿಕೊಂಡು ಬಂದಿದೆ. &lt;br /&gt;&lt;br /&gt;ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು 11 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣುಮಗಳ ಯೌವನ, ಹೋರಾಟದಲ್ಲೇ ಸವೆದು ಹೋಗುತ್ತಿದೆ. ಆಕೆಗೂ ಒಂದು ಸುಂದರವಾದ ಬದುಕು ಇದೆ. ಎಲ್ಲಾ ಹೆಣ್ಮಕ್ಕಳಂತೆ ಮದುವೆಯಾಗಿ, ಸಂಸಾರ ನಡೆಸಿ ಬಾಳಬೇಕು ಎಂಬ ಕನಸಿದೆ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಜಯಗಳಿಸಲೇ ಬೇಕು ಎಂದು ಮರಣಕ್ಕೂ ಅಂಜದೆ, ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರ ದನಿ ಯಾರಿಗೂ ಕೇಳಿಸುತ್ತಿಲ್ಲವೇ? ಅಧಿಕಾರ ಮದದಿಂದ ಕಣ್ಣು ಮಂಜಾಗಿರುವ ನಮ್ಮ ರಾಜಕೀಯ ನಾಯಕರಿಗೆ ಈಕೆಯ ಹೋರಾಟ ಕಾಣಿಸುತ್ತಿಲ್ಲವೇ? &lt;br /&gt;&lt;br /&gt;ಮುಂಬರುವ ನವಂಬರ್ 4ನೇ ತಾರೀಖಿಗೆ ಶರ್ಮಿಳಾರ ಅಮರಣ ಉಪವಾಸ ಸತ್ಯಾಗ್ರಹಕ್ಕೆ 11 ವರ್ಷ ಪೂರ್ತಿಯಾಗುತ್ತದೆ. ಕಳೆದ 11 ವರ್ಷಗಳಿಂದ ಶರ್ಮಿಳಾ ಅನುಭವಿಸಿದ ನೋವು ಯಾರಿಗಾದರೂ ಅರ್ಥವಾಗುವುದೇ? ಶರ್ಮಿಳಾರ ಉಪವಾಸ ಸುಖಾಂತ್ಯ ಕಾಣುವುದೇ? ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5102683987807531274?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5102683987807531274/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5102683987807531274' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5102683987807531274'/><link rel='self' type='application/atom+xml' href='http://www.blogger.com/feeds/4320259625062903049/posts/default/5102683987807531274'/><link rel='alternate' type='text/html' href='http://anuraaga.blogspot.com/2011/10/blog-post.html' title='ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-kjt2NsaXwE0/TqSHeB1eoPI/AAAAAAAAAYs/9vJ3ckjKrUA/s72-c/iromchanusharmila.jpg' height='72' width='72'/><thr:total>0</thr:total></entry><entry><id>tag:blogger.com,1999:blog-4320259625062903049.post-3634764739759315396</id><published>2011-09-23T17:21:00.000-07:00</published><updated>2011-09-23T17:21:16.061-07:00</updated><category scheme='http://www.blogger.com/atom/ns#' term='ಕನಾ೯ಟಕ ಪೊಲೀಸರು'/><category scheme='http://www.blogger.com/atom/ns#' term='ಪೃಥ್ವೀರಾಜ್'/><category scheme='http://www.blogger.com/atom/ns#' term='ಮಲಯಾಳ ಮನೋರಮಾ'/><category scheme='http://www.blogger.com/atom/ns#' term='ಚೆಕ್ ಪೋಸ್ಟ್'/><category scheme='http://www.blogger.com/atom/ns#' term='ಕನಾ೯ಟಕ'/><category scheme='http://www.blogger.com/atom/ns#' term='ಲಂಚ'/><title type='text'>"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ</title><content type='html'>&lt;b&gt;ಚೆ&lt;/b&gt;ಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ &lt;a href="http://www.manoramaonline.com/cgi-bin/MMOnline.dll/portal/ep/malayalamContentView.do?contentId=10110695&amp;tabId=3&amp;BV_ID=@@@"&gt;ಮಲಯಾಳ ಮನೋರಮಾ&lt;/a&gt; ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ  ಈ ಬ್ಲಾಗ್ ಬರೆಯುತ್ತಿದ್ದೇನೆ.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-PEYN0EKlOFo/Tn0iKCelJLI/AAAAAAAAAYE/7bt88zvgXQY/s1600/prithviraj.jpg" imageanchor="1" style="clear:left; float:left;margin-right:1em; margin-bottom:1em"&gt;&lt;img border="0" height="300" width="300" src="http://1.bp.blogspot.com/-PEYN0EKlOFo/Tn0iKCelJLI/AAAAAAAAAYE/7bt88zvgXQY/s320/prithviraj.jpg" /&gt;&lt;/a&gt;&lt;/div&gt;&lt;br /&gt;&lt;i&gt;ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ&lt;/i&gt;.&lt;br /&gt;&lt;br /&gt;"ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್  ಮತ್ತು ಪೊಲೀಸ್  ಏಯ್ಡ್  ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡುವೆ 'ಹಣ' ನೀಡಲೇ ಬೇಕಾಗಿ ಬಂದ ಪರಿಸ್ಥಿತಿ ನಮ್ಮದಾದರೆ ಇಲ್ಲಿ 'ಅವರನ್ನು' ಕೇಳುವವರೇ ಇಲ್ಲ!&lt;br /&gt;&lt;br /&gt;ಬತ್ತೇರಿಯಿಂದ ಒಂದೂವರೆ ಗಂಟೆ ಪ್ರಯಾಣಿಸಿದರೆ ಗುಂಡ್ಲುಪೇಟೆಗೆ ತಲುಪಬಹುದು. ಗಡಿ ಪ್ರದೇಶದಲ್ಲಿ ಮೊದಲು ಸಿಗುವುದೇ ಕೇರಳ ಚೆಕ್ ಪೋಸ್ಟ್. ನಂತರ ಆರ್ ಟಿ ಓ ಚೆಕ್ ಪೋಸ್ಟ್. ಇದಾದ ನಂತರ ಸಿಗುವ ಕನಾ೯ಟಕ ಚೆಕ್ ಪೋಸ್ಟ್ ದಾಟಬೇಕಾದರೆ 'ಮಾಮೂಲು' ನೀಡಲೇಬೇಕು.&lt;br /&gt;&lt;br /&gt;ಲೊಕೇಶನ್  ನಿಂದ ಕಾರಿನಲ್ಲಿ ಮರಳುತ್ತಿದ್ದರೆ ನನ್ನಲ್ಲಿ ಅವರು ಹಣ ಕೇಳಲಿಲ್ಲ. ಆದರೆ ಇನ್ನಿತರ ವಾಹನ ಚಾಲಕರಲ್ಲಿ ಅವರು ದುಡ್ಡು ಇಸ್ಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ದಿನ ನಾವು ಹಣ ನೀಡಲು ನಿರಾಕರಿಸಿದಾಗ ಶೂಟಿಂಗ್ ಗಾಗಿ ನಾವು ಒಯ್ಯುತ್ತಿದ್ದ ಪೊಲೀಸ್ ಯುನಿಫಾಮ್೯, ಲಾಠಿ, ಟೋಪಿ ಎಲ್ಲವನ್ನೂ ತೆಗೆದುಕೊಂಡು ಹೋದರು. ಹಣ ಕೊಟ್ಟ ನಂತರವೇ ಅವರು ನಮಗದನ್ನು ಹಿಂತಿರುಗಿಸಿದ್ದು.&lt;br /&gt;&lt;br /&gt; ಈ ರೀತಿ ಮಾಮೂಲು ಕೇಳುವ ಕನಾ೯ಟಕ ಪೊಲೀಸರ 'ಧನದಾಹ'ಕ್ಕೆ ಬಲಿಯುವಾಗುವವರಲ್ಲಿ ಕೇರಳಿಗರೇ ಹೆಚ್ಚು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಿಳಿಯದಾಗಿದೆ.&lt;br /&gt;&lt;br /&gt;ಈ ಬಗ್ಗೆ ಕೇರಳ ಮತ್ತು ಕನಾ೯ಟಕ ಸಕಾ೯ರಗಳು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ, ಕೇರಳ ಸಕಾ೯ರ ಇದನ್ನು ಕನಾ೯ಟಕ ಸಕಾ೯ರದ ಗಮನಕ್ಕೆ ತರಬೇಕು. ದೆಹಲಿಯಲ್ಲಿ ಅಣ್ಣಾ  ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವಾಗ ನಮ್ಮ ಸಿನಿಮಾ ಟ್ರೂಪ್  'ಮಾಮೂಲು' ನೀಡಿ ಗಡಿ ದಾಟುತ್ತಿರುವುದು ಖೇದಕರ.&lt;br /&gt;&lt;br /&gt;ಪ್ರಿಯ ಓದುಗ, ಇದಿಷ್ಟು  ಪೃಥ್ವಿರಾಜ್ ರ ಅನುಭವದ ಮಾತುಗಳು. &lt;br /&gt;ಇದೇ ರೀತಿ ನೀವೂ ರಾಜ್ಯದ ಗಡಿ ದಾಟುವಾಗ ಚೆಕ್ ಪೋಸ್ಟ್ ಗಳಲ್ಲಿ 'ಮಾಮೂಲು' ಕೊಟ್ಟಿರುತ್ತೀರಿ ಅಲ್ಲವೇ? ನಿಮಗೂ ಈ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ಈ ಅನ್ಯಾಯದ ಬಗ್ಗೆ ದನಿಯೆತ್ತಿ. ಈ ಮೂಲಕ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು ನೀವೂ ಸಹಕರಿಸಿ.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-GYt93G3_x04/Tn0bT7fdDFI/AAAAAAAAAX8/9cChLHprZvA/s1600/bribe.gif" imageanchor="1" style="margin-left:1em; margin-right:1em"&gt;&lt;img border="0" height="161" width="320" src="http://4.bp.blogspot.com/-GYt93G3_x04/Tn0bT7fdDFI/AAAAAAAAAX8/9cChLHprZvA/s320/bribe.gif" /&gt;&lt;/a&gt;&lt;/div&gt;&lt;br /&gt;ಗುಂಡ್ಲುಪೇಟೆಯಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಿನಿಮಾ ಟ್ರೂಪ್  ಸೆರೆಹಿಡಿದಿದೆ.  ಈ ಸುದ್ದಿ ಕನಾ೯ಟಕ ಸಕಾ೯ರದ ಗಮನಕ್ಕೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಶಿಸೋಣ.&lt;br /&gt;&lt;br /&gt;ಕೃಪೆ : ಮನೋರಮಾ ಆನ್ಲೈನ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3634764739759315396?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3634764739759315396/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3634764739759315396' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3634764739759315396'/><link rel='self' type='application/atom+xml' href='http://www.blogger.com/feeds/4320259625062903049/posts/default/3634764739759315396'/><link rel='alternate' type='text/html' href='http://anuraaga.blogspot.com/2011/09/blog-post.html' title='&quot;ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು&quot;- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-PEYN0EKlOFo/Tn0iKCelJLI/AAAAAAAAAYE/7bt88zvgXQY/s72-c/prithviraj.jpg' height='72' width='72'/><thr:total>0</thr:total></entry><entry><id>tag:blogger.com,1999:blog-4320259625062903049.post-1424705748516843176</id><published>2011-07-29T09:17:00.000-07:00</published><updated>2011-07-29T09:17:01.809-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಬದುಕು'/><title type='text'>ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...</title><content type='html'>&lt;b&gt;ಇಂ&lt;/b&gt;ಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ  ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.&lt;br /&gt;&lt;br /&gt;ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.&lt;br /&gt;&lt;br /&gt;ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ &lt;br /&gt;ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.&lt;br /&gt;&lt;br /&gt;ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.&lt;br /&gt;&lt;br /&gt;ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು.  ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.&lt;br /&gt;&lt;br /&gt;ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...&lt;br /&gt;&lt;br /&gt;ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ  ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1424705748516843176?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1424705748516843176/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1424705748516843176' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1424705748516843176'/><link rel='self' type='application/atom+xml' href='http://www.blogger.com/feeds/4320259625062903049/posts/default/1424705748516843176'/><link rel='alternate' type='text/html' href='http://anuraaga.blogspot.com/2011/07/blog-post_29.html' title='ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-7937399689335429552</id><published>2011-07-16T05:10:00.000-07:00</published><updated>2011-07-16T05:10:35.531-07:00</updated><category scheme='http://www.blogger.com/atom/ns#' term='ಕವಿತೆ'/><title type='text'>ನನ್ನದೂ ಒಂದು</title><content type='html'>&lt;b&gt;ನೂ&lt;/b&gt;ರು ರುಪಾಯಿಗೆ ಸಿಕ್ಕ&lt;br /&gt;ಫ್ಯಾಷನ್ ಚಪ್ಪಲಿ ಮೆಟ್ಟಿ,&lt;br /&gt;ಅದೇ ಜೀನ್ಸು, ಮೇಲೊಂದು ಟೀ ಶರ್ಟು&lt;br /&gt;ಮತ್ತೊಂದು ಬ್ಯಾಗು, ಪರ್ಸ್...&lt;br /&gt;&lt;br /&gt;ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ&lt;br /&gt;ತುಳಿತಕ್ಕೆ ಚೀರಿ,&lt;br /&gt;ನೂಕು ನುಗ್ಗಲಲ್ಲಿ ಚಡಪಡಿಸಿ&lt;br /&gt;ಬಿದ್ದು ಏಳುತಿದೆ ಬದುಕು...&lt;br /&gt;&lt;br /&gt;ಅವಸರದಲ್ಲಿ ಅರ್ಧಂಬರ್ಧ ತಿಂದ &lt;br /&gt;ತಿಂಡಿ ಬಸ್ಸಲ್ಲೇ ಜೀರ್ಣವಾಗಿ&lt;br /&gt;ಹೊಸ ಕನಸುಗಳು ಮತ್ತೆ&lt;br /&gt;ಚಿಗುರುತ್ತಿವೆ ಮನಸ್ಸಲ್ಲಿ&lt;br /&gt;ದಾರಿಯಂಗಡಿಗಳಲ್ಲಿ ತೂಗು ಹಾಕಿದ&lt;br /&gt;ಟೀ ಶರ್ಟು, ಸಲ್ವಾರುಗಳು&lt;br /&gt;ಕೈ ಬೀಸಿ ಕರೆಯುತ್ತಿವೆ...&lt;br /&gt;&lt;br /&gt;ನೂರು ರುಪಾಯಿ ಇಡಿ ನೋಟು&lt;br /&gt;ಬಸ್ ಪಾಸು, ಐಡಿ ಕಾರ್ಡಿನ ನಡುವೆ&lt;br /&gt;ಬೆಚ್ಚನೆ ಕುಳಿತಿರಲು&lt;br /&gt;ಹಳೇ ರಸೀದಿ ತುಂಡುಗಳು ನಡುಗ&lt;br /&gt;ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ!&lt;br /&gt;&lt;br /&gt;ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ&lt;br /&gt;ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ&lt;br /&gt;ಮನೆ ಬಾಡಿಗೆ, ಕ್ರೀಮು, ಪೌಡರು&lt;br /&gt;ಒಂದಷ್ಟು ಮ್ಯಾರಿ ಬಿಸ್ಕತ್ತು!&lt;br /&gt;&lt;br /&gt;ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ&lt;br /&gt;ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು&lt;br /&gt;ಕಳೆದು, ಉಳಿದದ್ದನ್ನು ಕೂಡಿಸಿ&lt;br /&gt;ಹೇಗೋ 'ಅಡ್ಜೆಸ್ಟ್' ಮಾಡಿ&lt;br /&gt;ಮುಂದಿನ ಪಗಾರಕ್ಕಾಗಿ ದಿನ ಎಣಿಕೆ&lt;br /&gt;ಶುರುವಾಗಿದೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-7937399689335429552?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/7937399689335429552/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=7937399689335429552' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/7937399689335429552'/><link rel='self' type='application/atom+xml' href='http://www.blogger.com/feeds/4320259625062903049/posts/default/7937399689335429552'/><link rel='alternate' type='text/html' href='http://anuraaga.blogspot.com/2011/07/blog-post_16.html' title='ನನ್ನದೂ ಒಂದು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-372528318998080520</id><published>2011-07-08T16:22:00.000-07:00</published><updated>2011-07-08T16:22:42.748-07:00</updated><category scheme='http://www.blogger.com/atom/ns#' term='ಬ್ಲಾಗ್ ಬರಹ'/><category scheme='http://www.blogger.com/atom/ns#' term='ಸರ್ಕಾರಿ ಬಾವಿ'/><category scheme='http://www.blogger.com/atom/ns#' term='ನಮ್ಮೂರು'/><title type='text'>ನಮ್ಮೂರ ಗೋರ್ಮೆಂಟು ಬಾವಿ</title><content type='html'>"&lt;b&gt;ಊ&lt;/b&gt;ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು  ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು.&lt;br /&gt;&lt;br /&gt;ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ .&lt;br /&gt;&lt;br /&gt;ಸಂಜೆ ವೇಳೆಗೆ ನೋಡ್ಬೇಕಪ್ಪಾ...ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ...ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ 'ಗಂಡ' ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದು ಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ.&lt;br /&gt;&lt;br /&gt;ಇತ್ತ, ತಲೆಯಲ್ಲೊಂದು ಪಾತ್ರೆ, ಸೊಂಟದಲ್ಲೊಂದು ಕೊಡ ಸಿಕ್ಕಿಸಿ ನಡೆಯುವಾಗ ಒದ್ದೆ ಲಂಗ ಕಾಲೆಡೆಯಲ್ಲಿ ಸಿಕ್ಕಿ ಬ್ಯಾಲೆನ್ಸ್ ಮಾಡುವ ಅಮ್ಮಂದಿರು...ನೈಟಿ ಹಾಕಿದ ಆಂಟಿಯರು, ಚೂಡಿದಾರದ ಹುಡ್ಗೀರು ಎಲ್ಲರೂ ಉಸ್ಸಪ್ಪಾ...ಎಂದು ನೀರು ಸೇದುತ್ತಿರುವುದು ಸಾಮಾನ್ಯ ದೃಶ್ಯ. ಸಂಜೆ ನಾಲ್ಕು ಗಂಟೆ ಆಯ್ತು ಎಂದರೆ ಇಲ್ಲಿ ಗೌಜಿಯೋ ಗೌಜಿ. ಸಂಜೆ ಕಾಫಿ ಆಯ್ತಾ? ರಾತ್ರಿ ಊಟಕ್ಕೆ ಮೀನು ಸಿಕ್ಕಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಂದ ಆರಂಭವಾಗಿ ಮೀನು ಮಾರುವ ಮೊಮ್ಮದ್ ಇಂದು ಬಂದಿಲ್ಲ ಯಾಕೆ? ಕಂತಿಗೆ ಬಟ್ಟೆ ಕೊಡುವ ಅಣ್ಣಾಚಿಯಿಂದ ಖರೀದಿಸಿದ ಹೊಸ ಸೀರೆ, ಧಾರವಾಹಿ, ಸಿನೆಮಾಗಳೂ ಇಲ್ಲಿ ಚರ್ಚೆಯಾಗುವುದುಂಟು.&lt;br /&gt;&lt;br /&gt;ಇನ್ನು ಕೆಲವೊಮ್ಮೆ ಯಾವುದೋ ಮನೆಯ ಸಂಭ್ರಮದ ಬಗ್ಗೆ, ಕಳೆದ ರಾತ್ರಿ ಪಕ್ಕದ ಮನೆಯಲ್ಲಿ ಕೇಳಿಬಂದ ಬೆಕ್ಕಿನ ಸದ್ದಿನ ಬಗ್ಗೆ, ಯಾವುದೊ ಮುರಿದ ಸಂಬಂಧಗಳು, ಹೊಸ ಸಂಬಂಧಗಳು, ಓಡಿ ಹೋದವರ ಕಥೆ ಎಲ್ಲವೂ ಮಸಾಲೆ ಮಿಶ್ರಿತವಾಗಿ ಅವರಿವರ ಬಾಯಲ್ಲಿ ಸೇರಿ ಮೆಗಾ ಧಾರವಾಹಿಗಳಾಗಿ ಬಿಡುತ್ತವೆ.. ಕೆಲವರಂತೂ ಈ ಗಾಸಿಪ್್ಗಳನ್ನು ಕೇ(ಹೇ)ಳುವ ಸಲುವಾಗಿಯೇ ನೀರಿಗೆ ಬಂದಿರುತ್ತಾರೆ. ಅಮ್ಮನ ಜತೆ ಬಂದ ಮಗಳನ್ನು ಕಣ್ಣಲ್ಲೇ ಅಳೆದು ನೋಡಿ 'ದೊಡ್ಡವಳಾಗಿದ್ದಾಳಾ?' ಎಂದು ಕೇಳುವುದು ಮಾಮೂಲಿ. ಅಮ್ಮ ಹೇಳುತ್ತಿರುತ್ತಾರೆ, ಮೊದಲೆಲ್ಲಾ ಮೈಲಿಗೆಯಾದ ಹೆಂಗಸರು ಆ ನೀರು ಮುಟ್ಟವಂತಿರಲಿಲ್ಲವಂತೆ. ಆದ್ರೆ ಈವಾಗ ಮಡಿ ಮೈಲಿಗೆ ಅಂತಾ ಯಾರೂ ಹೇಳಿಕೊಳ್ಳೋದಕ್ಕೆ ಹೋಗಲ್ಲ...ಯಾರಿಗೂ ಈ ಬಗ್ಗೆ ತಕರಾರು ಇಲ್ಲ. &lt;br /&gt;&lt;br /&gt;ಅದಿರಲಿ ಬಿಡಿ, ಊರಿಗೆ ಬಂದವಳು ನೀರಿಗೆ ಬಾರದಿರುವಳೇ? ಎಂಬಂತೆ ಮದುವೆಯಾಗಿ ಹೊಸ ಹೆಣ್ಣೊಂದು ಊರಿಗೆ ಬಂದರೆ ಬಾವಿ ಕಟ್ಟೆ ಬಳಿಯೇ ಅವಳ ಬಯೋಡಾಟಾ ಕೇಳಲಾಗುತ್ತದೆ. ಈ ಹುಡುಗಿಯಂತೂ ಎಲ್ಲರ ಪ್ರಶ್ನೆಗೆ ಉತ್ತರಿಸಲೇ ಬೇಕು. ಇಲ್ಲದಿದ್ದರೆ ಅವಳ ಅತ್ತೆಯಲ್ಲಿ ನಿಮ್ಮ ಸೊಸೆಗೆ ಅದೆಷ್ಟು ಸೊಕ್ಕು ಎಂದು ಯಾರಾದ್ರೂ ಹೇಳಿ ಬಿಟ್ಟರೆ!. ಅತ್ತೆಯ ಬಗೆಗಿನ ಗುಟ್ಟುಗಳನ್ನು ರಟ್ಟು ಮಾಡಲು ಸೊಸೆಯನ್ನೇ ಏಜೆಂಟ್ ಆಗಿ ಇಟ್ಟು ಕೊಳ್ಳುವ 'ಅತ್ತೆ ವಿರೋಧಿ' ಪಕ್ಷದವರೂ ಸುಮ್ಮನಿರುತ್ತಾರೆಯೇ?&lt;br /&gt;&lt;br /&gt;ನೀರಿಗೆ ಬರುವ ನೀರೆಯರ ವಿಷಯಗಳ ಜತೆಗೆ ಗಂಡಸರ ವಿಷಯ ಹೇಳದಿದ್ದರೆ ಹೇಗಪ್ಪಾ? ಕೂಲಿ ಮಾಡುವ ಗಂಡಸರೇ ಜಾಸ್ತಿ ಇರುವ ಈ ಊರಲ್ಲಿ ಸಂಜೆ ವೇಳೆಗೆ ಮಾತ್ರ ಗಂಡಸರು ನೀರಿಗಾಗಿ, ಸ್ನಾನಕ್ಕಾಗಿ ಬಂದಿರುತ್ತಾರೆ. ಬಾವಿ ಕಟ್ಟೆಯ ಪಕ್ಕದಲ್ಲೇ ಪರಿಮಳಭರಿತವಾದ ಸೋಪುಗಳಿಂದ ನೊರೆ ಬರಿಸಿ, ಕೊಡಪಾನದಲ್ಲಿನ ನೀರನ್ನು 'ಧೋ' ಎಂದು ಸುರಿದು ಸ್ನಾನ ಮಾಡುವ ಜವ್ವನಿಗರೇ ಜಾಸ್ತಿ. ಬಾವಿಕಟ್ಟೆಯ ಮೇಲೇ ಸೋಪು ಇರಿಸಿ ಅದು ಜಾರಿ (ಕೆಲವೊಮ್ಮೆ ಒಳಚಡ್ಡಿ) ಬಾವಿಗೆ ಬಿದ್ದದ್ದೂ ಉಂಟು. ಆದ್ರೂ ಅವರ ಸ್ನಾನಕ್ಕಾಗಲೀ, ಬಾವಿ ನೀರಿಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ. ಸುಮಾರು 26 ಅಡಿಯಿರುವ ಈ ಬಾವಿಯ ತಳದಲ್ಲಿ ಅದೆಷ್ಟು ಕೊಡಪಾನಗಳು, ಚಡ್ಡಿಗಳು, ಸೋಪುಗಳು ಬಿದ್ದು ಮೀನು ಕಪ್ಪೆಯ ಜತೆಗೆ ಗುದ್ದಾಟ ನಡೆಸುತ್ತಿವೆಯೋ ಎಂಬುದನ್ನು ದೇವರೇ ಬಲ್ಲ!.&lt;br /&gt;&lt;br /&gt;ಇರಲಿ, ಇಷ್ಟೊಂದು ಎಂಟರ್್ಟೈನ್್ಮೆಂಟ್ ಜತೆಗೆ ಫೈಟಿಂಗ್ ಇರದಿದ್ದರೆ ಬೋರ್ ಅನಿಸಲ್ವಾ? ಅದೂ ಇರುತ್ತೆ ಕಣ್ರೀ..ನಮಗೆ ಆಗದವರು (ಕುಟುಂಬದ ಜತೆ ಕೋಪ ಇದ್ದವರು) ನಮ್ಮ ಹಗ್ಗ ಮುಟ್ಟಿದರೆ ಇಲ್ಲಿ ಜಗಳ ಗ್ಯಾರೆಂಟಿ. ಇನ್ನು ನನ್ನ ಮಗಳನ್ನು ನಿನ್ನ ಮಗ ನೋಡಿದ, ನಿನ್ನ ಮಗಳು ಅವನತ್ತ ನೋಡ್ತಾನೆ ಇದ್ಳು, ಮಕ್ಕಳ ಜಗಳ, ಅವರಿವರ ಚಾಡಿ ಮಾತು ಕೇಳಿ ರಂಪಾಟ ಮಾಡಿ 'ಧುಮ್ಮಿಕ್ಕುವ ನೀರೆ'ಯರೂ ಈ ಬಾವಿಕಟ್ಟೆಯನ್ನೇ ರಣರಂಗವಾಗಿಸಿದ್ದೂ ಇದೆ. ಅದ್ರೂ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ? ಮತ್ತೆ ಅದೇ ಬಾವಿ... ಅದೇ ನೀರು... ಅವರಿಗೆ ಆಸರೆಯಾಗುತ್ತೆ. ಅಲ್ಲಿಗೆ ಬರುವ ಜನರು ಪರಸ್ಪರ ಕಚ್ಚಾದಿದ್ದರೂ ಎಲ್ಲರೂ ಕುಡಿಯುವ ನೀರೊಂದೇ ಎಂಬಂತೆ  ಸಾಮರಸ್ಯ ಹಾಡುವ ನಮ್ಮೂರ ಗೋರ್ಮೆಂಟ್  ಬಾವಿ ಈವರೆಗೆ ಬತ್ತಿ ಹೋಗಿಲ್ಲ ಎಂಬುದೇ ನಮ್ಮ ಪಾಲಿಗೆ ಸಮಾಧಾನಕರ ಸಂಗತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-372528318998080520?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/372528318998080520/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=372528318998080520' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/372528318998080520'/><link rel='self' type='application/atom+xml' href='http://www.blogger.com/feeds/4320259625062903049/posts/default/372528318998080520'/><link rel='alternate' type='text/html' href='http://anuraaga.blogspot.com/2011/07/blog-post.html' title='ನಮ್ಮೂರ ಗೋರ್ಮೆಂಟು ಬಾವಿ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-2789227551687745908</id><published>2011-06-18T18:00:00.000-07:00</published><updated>2011-06-18T23:16:00.026-07:00</updated><category scheme='http://www.blogger.com/atom/ns#' term='ಅಪ್ಪ'/><category scheme='http://www.blogger.com/atom/ns#' term='ಮಗಳು'/><category scheme='http://www.blogger.com/atom/ns#' term='ಅಪ್ಪಂದಿರ ದಿನಾಚರಣೆ'/><title type='text'>ಅಪ್ಪನಿಗೊಂದು ಪತ್ರ</title><content type='html'>ಪ್ರೀತಿಯ ಪಪ್ಪಾ,&lt;br /&gt;&lt;br /&gt;ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ...&lt;br /&gt;&lt;br /&gt;ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು.&lt;br /&gt;&lt;br /&gt;ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್  ಪಾಲಿಶ್  ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ  ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ್ಡೋಳು ಅವಳಿಗೆ ನೀನು ಏನೂ ಅನ್ಬಾದು೯' ಅಂತಿದ್ದಿರಿ. ಪುಟ್ಟ ತಮ್ಮ ಕಿತಾಪತಿ ಮಾಡಿದ್ರೆ 'ಅವನು ಚಿಕ್ಕವನಲ್ವಾ ಕ್ಷಮಿಸಿ ಬಿಡು' ಅಂತಾ ಹೇಳುತ್ತಿದ್ದಿರಿ. ನಿನಗೆ ಕೆಟ್ಟದ್ದು ಬಗೆದವರನ್ನೂ ಪ್ರೀತಿಸು, ದ್ವೇಷದಿಂದ ಏನನ್ನೂ ಗೆಲ್ಲೋಕೆ ಆಗಲ್ಲ ಎಂದು ನೀವು ಹೇಳುತ್ತಾ ನನ್ನ ಜೀವನದುದ್ದಕ್ಕೂ ಮಾಗ೯ದಶಿ೯ಯಾದಿರಿ.&lt;br /&gt;&lt;br /&gt;ನಿಜ ಹೇಳಲಾ ಪಪ್ಪಾ..ಮನೆಯಿಂದ ಹೊರಬಂದನಂತರವೇ ಈ ಜಗತ್ತು ಹೇಗಿದೆ ಅಂತಾ ನನಗೆ ಗೊತ್ತಾದದ್ದು. ಇಲ್ಲಿ ಹೆಚ್ಚಿನವರೂ ಸ್ವಾಥಿ೯ಗಳು. ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರೇ ಜಾಸ್ತಿ. ಇಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲ. ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಧ್ವನಿಯೆತ್ತಲೂ ಕೂಡಾ ಅಂಜುವ ಅಂಜುಬುರುಕರು ಇವರು. ಹಣದಾಸೆಗಾಗಿ ಏನು ಬೇಕಾದರು ಮಾಡ ಬಲ್ಲ ಧನದಾಹಿಗಳು. ಪರಸ್ಪರ ಹಗೆ ಸಾಧಿಸುತ್ತಾ, ಗುದ್ದಾಡುತ್ತಾ ನಾನೇ ಮೇಲು ಎಂದು ತೋರಿಸಿಕೊಳ್ಳಲು ಇಲ್ಲಿ ಪೈಪೋಟಿ ನಡೆಯುತ್ತಿದೆ. ಮನುಷ್ಯ ಬುದ್ದಿ ಜೀವಿ...ಏನು ಬೇಕಾದರೂ ಸಾಧಿಸಬಲ್ಲ ತಾಕತ್ತು ಅವನಲ್ಲಿದೆ. ಕೆಲಸವನ್ನು ಸುಲಭಗೊಳಿಸುವ ಸಲುವಾಗಿ ಯಂತ್ರಗಳನ್ನು ಕಂಡು ಹಿಡಿದ. ಹುಟ್ಟು ಸಾವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಸಂಶೋಧನೆ ನಡೆಸಿ ಸಫಲನಾದ. ಅತೀ ಚಿಕ್ಕ ಪರಮಾಣುಗಳನ್ನೇ ಛಿದ್ರಗೊಳಿಸಿ ಜಗತ್ತನ್ನೇ ಜಯಿಸುವ ಶಕ್ತಿಯನ್ನು ಗಳಿಸಿದ... ಆದರೆ ತನ್ನ ಅಹಂ ಅನ್ನು ಛಿದ್ರಗೊಳಿಸುವಲ್ಲಿ ವಿಫಲನಾದ!.&lt;br /&gt;&lt;br /&gt;ಮಗಳು ಅಂದರೆ ಅವಳು ಅಮ್ಮನ ಇನ್ನೊಂದು ರೂಪ ಅಂತಿದ್ದಿರಿ ನೀವು. ಎಲ್ಲಾ ಅಪ್ಪಂದಿರೂ ನಿಮ್ಮಂತೆಯೇ ಮಗಳನ್ನು ತುಂಬಾ ಪ್ರೀತಿಸುತ್ತಿರುತ್ತಾರೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ ಅದೆಲ್ಲಾ ನನ್ನ ತಪ್ಪು ಕಲ್ಪನೆಯಾಗಿತ್ತು ಎಂದು ಅರಿವಾದುದು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದಾಗಲೇ. "ಅಪ್ಪನೇ ಮಗಳನ್ನು ಅತ್ಯಾಚಾರವೆಸಗಿದ" ಎಂಬ ಸುದ್ದಿ ಓದಿದಾಗೆಲ್ಲಾ ಮೈ ಉರಿಯುತ್ತದೆ. "ಥೂ...ಇಂತಾ ಕಾಮುಕರು 'ಅಪ್ಪ' ಎಂಬ ಸಂಬಂಧಕ್ಕೇ ದ್ರೋಹವೆಸಗಿದರಲ್ಲಾ ಎಂದು ಸಿಡಿಮಿಡಿಗೊಳ್ಳುತ್ತೇನೆ. ಆ ಮಗಳು ಎಷ್ಟು ನೊಂದಿರಬಹುದಲ್ವಾಪ್ಪಾ?&lt;br /&gt;&lt;br /&gt;ಇನ್ನು, ಮನೆ ಬಿಟ್ಟು ಪ್ರಿಯಕರನ ಜತೆ ಓಡಿ ಬಂದ ಅದೆಷ್ಟೋ ಹೆಣ್ಮಕ್ಕಳನ್ನು ನಾನಿಲ್ಲಿ ನೋಡಿದ್ದೇನೆ. ಅಂದೊಂದು ದಿನ ಒಬ್ಬಳು ಹುಡುಗಿ ತನ್ನ ಪ್ರೇಮಕ್ಕೆ 'ಅಪ್ಪ' ಅಡ್ಡಿಯಾಗುತ್ತಾನೆ ಎಂಬ ಭಯದಿಂದಲೇ ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಳು. ನೀವೇ ಹೇಳಿ ಪಪ್ಪಾ...ಮಗಳು ಚೆನ್ನಾಗಿರಬೇಕೆಂದು ತಾನೆ ಎಲ್ಲಾ ಅಪ್ಪಂದಿರ ಆಸೆ. ಅವರಿಗೆ ಹುಡುಗರ ಸ್ವಭಾವ ಚೆನ್ನಾಗಿ ಗೊತ್ತು. ಯಾವುದೋ ಗೊತ್ತು ಗುರಿಯಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿ ಮಗಳು ಜೀವನ ಹಾಳು ಮಾಡಿಕೊಳ್ಳುವುದು ಬೇಡ ಎಂದೇ ಅಪ್ಪ ಗದರಿಸುತ್ತಾರೆ. ಅಷ್ಟು ಮಾತ್ರಕ್ಕೆ ಅಪ್ಪನಿಗೆ 'ವಿಲನ್' ಪಟ್ಟ ಕಟ್ಟುವುದೇ? ಹಾಗಂತ ಎಲ್ಲಾ ಹುಡುಗರು ಕೆಟ್ಟವರೇನೂ ಅಲ್ಲ. ಒಂದು ವೇಳೆ ಪ್ರೀತಿಸಿದವ ಕೈಕೊಟ್ಟ ಅಂದ್ಕೊಳ್ಳಿ...ಮಗಳು ಮತ್ತೆ ತವರು ಮನೆಗೆ ಬರುತ್ತಾಳೆ. ಅವಳು ಆತನ ಪತ್ನಿಯಾಗಿರುವುದಿಲ್ಲ..ಆದರೆ ಆಕೆ ಸಾಯುವವರೆಗೂ ಮಗಳಾಗಿರುತ್ತಾಳೆ. ಅಪ್ಪನ ಕೈಯಲ್ಲಿ ಆಕೆಯ ಜೀವನ ಮತ್ತೆ ಅರಳುತ್ತದೆ. ನಾವು ಹುಡ್ಗೀರು ಇದನ್ನೆಲ್ಲಾ ಯಾಕೆ ಯೋಚಿಸುವುದಿಲ್ಲ?&lt;br /&gt;&lt;br /&gt;ಜೀವನದ ಗತಿ ಯಾವ ರೀತಿ ಯಾವ ದಿಶೆಯಲ್ಲಿ ಸಾಗುತ್ತದೆ ಅಂತಾ ಯಾರಿಗೂ ಗೊತ್ತಿರಲ್ಲ. ಆದರೆ ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು ಎಂದು ಹೇಳಿದ ನಿಮ್ಮ ಮಾತು ನಿಜ. ಜೀವನದಲ್ಲಿ ಕಷ್ಟ ಬಂದಾಗಲೇ ಜೀವನ ಏನು ಎಂಬುದು ಅಥ೯ವಾಗುವುದು. ಒಂಟಿತನ ನಮ್ಮನ್ನು ನಾವೇ ಅರಿಯುವಂತೆ ಮಾಡುತ್ತದೆ. ಹೀಗಿರುವಾಗ ಜೀವನವನ್ನು ಹೇಗೆ ನಿಭಾಯಿಸಿ ಮುನ್ನಡೆಸಬೇಕೆಂಬುದನ್ನು ನೀವು ಹೇಳಿಕೊಟ್ಟಿದ್ದೀರಿ. ಈ ಜಗತ್ತಿನ ಜಂಜಾಟಗಳನ್ನೆಲ್ಲಾ ನೋಡುವಾಗ ಬದುಕಲ್ಲಿ ನೊಂದವರಿಗಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಮಾತ್ರ ಮನಸ್ಸನ್ನು ಕಾಡುತ್ತಿರುತ್ತದೆ. &lt;br /&gt;&lt;br /&gt;ಕೆಲವೊಮ್ಮೆ ಸೋತು ಕಣ್ಣೀರಿಡುವಾಗ ನಿಮ್ಮ ಮಾತು, ನಿಮ್ಮ ನಗು, ಧೈರ್ಯ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಸೋತ ಕೈಗಳು ಮತ್ತೆ ಲೇಖನಿ ಹಿಡಿದು ಭಾವನೆಗಳೇ ಅಕ್ಷರಗಳಾಗುತ್ತವೆ. ಆಫ್ಟರ್ ಆಲ್ ನಾನು ಪಪ್ಪನ ಮಗಳಲ್ವಾ...ಕಣ್ಣೀರು ಹಾಕುತ್ತಾ ಸುಮ್ನೇ ಕೂರಲ್ಲ ಅಂತಾ ಗೊತ್ತು ತಾನೇ...&lt;br /&gt;&lt;br /&gt;ಸ್ಮೈಲ್ ಪ್ಲೀಸ್....&lt;br /&gt;ನೀವು ನಕ್ಕಾಗ ತುಂಬಾ ಕ್ಯೂಟ್ ಕಾಣಿಸ್ತೀರಿ ಎಂಬುದು ನನಗೊಬ್ಬಳಿಗೇ ಗೊತ್ತು. ;)&lt;br /&gt;&lt;br /&gt;ಪಪ್ಪಾ...ಮೊನ್ನೆ ಅಮ್ಮ ಏನೋ ಹೇಳ್ತಿದ್ರಲ್ವಾ  ಹೊಸ ಪ್ರೊಪೋಸಲ್ ಬಗ್ಗೆ...ಆ ಹುಡುಗನಿಗೆ ನಿಮ್ಮಂತದ್ದೇ ಗುಣವಿದ್ದರೇ ಫಿಕ್ಸ್ ಮಾಡಿ ಬಿಡಿ...ನಿಮ್ಮ ಸೆಲೆಕ್ಷನ್ 100%ಚೆನ್ನಾಗಿಯೇ ಇರುತ್ತೆ ಎಂಬ ವಿಶ್ವಾಸ ನನಗಿದೆ.&lt;br /&gt;ಬಾಕಿ ಉಳಿದ ವಿಷಯ ಎಲ್ಲಾ ಮನೆಗೆ ಬಂದ ನಂತರ ಹೇಳ್ತೇನೆ. &lt;br /&gt;&lt;br /&gt;ಹ್ಯಾಪಿ ಫಾದರ್ಸ್ ಡೇ...&lt;br /&gt;LOVE YOU ಪಪ್ಪಾ...&lt;br /&gt;&lt;br /&gt;ಇತೀ ನಿಮ್ಮ&lt;br /&gt;ಕಣ್ಮಣಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-2789227551687745908?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/2789227551687745908/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=2789227551687745908' title='6 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/2789227551687745908'/><link rel='self' type='application/atom+xml' href='http://www.blogger.com/feeds/4320259625062903049/posts/default/2789227551687745908'/><link rel='alternate' type='text/html' href='http://anuraaga.blogspot.com/2011/06/blog-post_18.html' title='ಅಪ್ಪನಿಗೊಂದು ಪತ್ರ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4320259625062903049.post-8604256099179333444</id><published>2011-06-14T05:08:00.000-07:00</published><updated>2011-06-14T05:08:22.132-07:00</updated><category scheme='http://www.blogger.com/atom/ns#' term='ಅನುರಾಗ'/><title type='text'>ಹ್ಯಾಪಿ ಬರ್ತ್ ಡೇ ಟು ಮೀ...</title><content type='html'>&lt;div class="separator" style="clear: both; text-align: center;"&gt;&lt;a href="http://1.bp.blogspot.com/-hgagMUqj4sw/TfdO-D-DIjI/AAAAAAAAAW0/_H8gXicbVgc/s1600/anuraaga1.jpg" imageanchor="1" style="margin-left:1em; margin-right:1em"&gt;&lt;img border="0" height="257" width="320" src="http://1.bp.blogspot.com/-hgagMUqj4sw/TfdO-D-DIjI/AAAAAAAAAW0/_H8gXicbVgc/s320/anuraaga1.jpg" /&gt;&lt;/a&gt;&lt;/div&gt;&lt;br /&gt;&lt;br /&gt;&lt;b&gt;ಇ&lt;/b&gt;ವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್  ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ  ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ  ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು.  ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ.&lt;br /&gt;&lt;br /&gt;ನಿಮ್ಮೆಲ್ಲರ  ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ  ಸಾಗುತ್ತಿದೆ...ಅನುರಾಗದೊಂದಿಗೆ...&lt;br /&gt;&lt;br /&gt;ಎಲ್ಲರಿಗೂ ನನ್ನಿ,&lt;br /&gt;ರಶ್ಮಿ ಕಾಸರಗೋಡು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8604256099179333444?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8604256099179333444/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8604256099179333444' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8604256099179333444'/><link rel='self' type='application/atom+xml' href='http://www.blogger.com/feeds/4320259625062903049/posts/default/8604256099179333444'/><link rel='alternate' type='text/html' href='http://anuraaga.blogspot.com/2011/06/blog-post_14.html' title='ಹ್ಯಾಪಿ ಬರ್ತ್ ಡೇ ಟು ಮೀ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-hgagMUqj4sw/TfdO-D-DIjI/AAAAAAAAAW0/_H8gXicbVgc/s72-c/anuraaga1.jpg' height='72' width='72'/><thr:total>0</thr:total></entry><entry><id>tag:blogger.com,1999:blog-4320259625062903049.post-1445722103529211171</id><published>2011-06-08T05:26:00.000-07:00</published><updated>2011-06-08T05:26:42.326-07:00</updated><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><title type='text'>ಇಲ್ಲ..ನನಗೆ ನಿನ್ನಲ್ಲಿ ಮುನಿಸು</title><content type='html'>&lt;b&gt;ನಾ&lt;/b&gt; ನಡೆವ ದಾರಿಯಲಿ&lt;br /&gt;ನಿನ್ನ ಪಾದದ ಗುರುತು&lt;br /&gt;ಇರದೇ ಇರಬಹುದು ನಿನ್ನ ನೆರಳು&lt;br /&gt;ನಿನ್ನ ಕನಸಿನಲಿ ನಾ &lt;br /&gt;ಇಲ್ಲದಿರಬಹುದು ಗೆಳೆಯಾ...&lt;br /&gt;&lt;br /&gt;&lt;br /&gt;ನೀ ಸುರಿವ ಮಳೆಯಾದರೇನು?&lt;br /&gt;ಇಂಗಲು ನನ್ನೊಡಲ ತಳವಿದೆ&lt;br /&gt;ನೀ ಸುಡುವ ಬಿಸಿಲಾದರೇನು?&lt;br /&gt;ನನ್ನ ಹೃದಯದ ಗುಡಿಸಲೊಳಗೆ&lt;br /&gt;ತಣ್ಣನೆಯ ನೆರಳಿದೆ....&lt;br /&gt;&lt;br /&gt;ನಿನ್ನ ಹೃದಯ ಬಾನಂತಿದ್ದರೇನು?&lt;br /&gt;ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ&lt;br /&gt;ನೀನು ಭುವಿಯಂತೆ ಮಲಗಿದ್ದರೇನು?&lt;br /&gt;ಹನಿ ಹನಿಯಾಗಿ ಬಿದ್ದು&lt;br /&gt;ಪನ್ನೀರ ಚಿಮುಕಿಸುವೆ!&lt;br /&gt;&lt;br /&gt;&lt;br /&gt;ಸಮಾಂತರ ರೇಖೆಗಳು ನಾವು&lt;br /&gt;ಬಾಳ ಪಯಣಯದಲ್ಲಿ&lt;br /&gt;ಬೆಳಗು ರಜನಿಯಂತಿದೆ ನಮ್ಮ ಮಿಲನ&lt;br /&gt;ಜತೆಯಾಗಿದ್ದರೂ ಸೇರಲ್ಲ&lt;br /&gt;ಸೇರಿದರೂ ಬೆರೆಯಲ್ಲ&lt;br /&gt;&lt;br /&gt;ನಿನ್ನ ಪುಟ್ಟ ಹೃದಯದಲ್ಲಿ&lt;br /&gt;ನಾನಾಗಲಾರೆ ನಿನ್ನ 'ಕೆಟ್ಟ' ನೆನಪು&lt;br /&gt;ನಿನ್ನ ಹೃದಯವ ಕದ್ದೊಯ್ಯಲಾರೆ&lt;br /&gt;ನನ್ನಾಣೆಗೂ,&lt;br /&gt;ಇಲ್ಲ..ನನಗೆ ನಿನ್ನಲ್ಲಿ ಮುನಿಸು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1445722103529211171?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1445722103529211171/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1445722103529211171' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1445722103529211171'/><link rel='self' type='application/atom+xml' href='http://www.blogger.com/feeds/4320259625062903049/posts/default/1445722103529211171'/><link rel='alternate' type='text/html' href='http://anuraaga.blogspot.com/2011/06/blog-post_08.html' title='ಇಲ್ಲ..ನನಗೆ ನಿನ್ನಲ್ಲಿ ಮುನಿಸು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-7409694618173146739</id><published>2011-06-07T07:30:00.000-07:00</published><updated>2011-06-07T07:30:29.948-07:00</updated><category scheme='http://www.blogger.com/atom/ns#' term='ಮಳೆ'/><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><title type='text'>ಏಕಾಂತತೆ ಮತ್ತು ನಾನು...</title><content type='html'>&lt;b&gt;'ಎಂ&lt;/b&gt;ಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು.&lt;br /&gt;&lt;br /&gt;ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ.&lt;br /&gt;&lt;br /&gt;ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್  ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ. &lt;br /&gt;&lt;br /&gt;ರೂಮ್ ಮೇಟ್  ಲ್ಯಾಪ್ ಟಾಪ್  ಹಿಡಿದು ಧ್ಯಾನದಲ್ಲಿ  ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ್ನಲ್ ಸಿಕ್ತು ಎಂದು ಫೇಸ್ ಬುಕ್ ನಲ್ಲಿ ಆಕೆ  'ಲೈಕ್'  ಮಾಡುತ್ತಾ ಕಾಮೆಂಟಿಸುತ್ತಿದ್ದಾಳೆ.&lt;br /&gt;&lt;br /&gt;ಎಲ್ಲವೂ ಬದಲಾಗಿದೆ. ನಾವು ಜನರು....ಎಲ್ಲರೂ...ಆದರೆ ಮಳೆ...ನಿನ್ನೆಯೂ ಹೀಗೆ ಸುರಿಯುತ್ತಿತ್ತು. ಇವತ್ತೂ ಹಾಗೆಯೇ ಸುರಿಯುತ್ತಿದೆ. ಮೊನ್ನೆ ಮೊನ್ನೆಯವರೆಗೆ  ಅಂಗಳದ ಮೂಲೆಯಲ್ಲಿ ಗುಟರ್ ಗುಟರ್ ಎನ್ನುತ್ತಿದ್ದ ಆ ಗೋಂಕುರು ಕಪ್ಪೆಗಳು ಎಲ್ಲಿ ಹೋದವು? ಮಳೆ ಬಂದ ಕೂಡಲೇ ಕಾಣಿಸಿಕೊಳ್ಳುತ್ತಿದ್ದ  ವೆಲ್ವೆಟ್ ಹುಳ ಈಗ ಕಾಣಿಸುವುದೇ ಇಲ್ಲ. ಪ್ರೈಮರಿ ಕ್ಲಾಸಿನಲ್ಲಿರುವಾಗ ಸ್ಲೇಟ್ ಒರೆಸುತ್ತಿದ್ದ ಆ ನೀರಕಡ್ಡಿ ಎಲ್ಲಿ ಹೋಯ್ತ?&lt;br /&gt;&lt;br /&gt;ವತ೯ಮಾನದ ಅರಿವೇ ಇಲ್ಲ ಎಂಬಂತೆ ಮನಸ್ಸು ಬಾಲ್ಯದ ದಿನಗಳತ್ತ ಮತ್ತೆ ವಾಲುತ್ತಿದೆ. ಮಳೆಯೊಂದಿಗೆ ನೆನಪುಗಳು ಮರುಕಳಿಸುತ್ತವೆ. ನಾನು ಮತ್ತು  ನನ್ನ ಏಕಾಂತತೆ ಸುರಿವ ಮಳೆಯಲ್ಲಿ ತೊಯ್ದು ಸುಮ್ಮನಾಗಿದ್ದೇವೆ.&lt;br /&gt;&lt;br /&gt;"ಇನ್ಮುಂದೆ ನಿನ್ನ ಯಾವುದೇ ವಿಷಯಕ್ಕೆ ತಲೆ ಹಾಕಲ್ಲ" ಎಂದು ಅವ ಹೇಳಿ ಹೋಗಿದ್ದಾನೆ. ಅವನ ಎಸ್ಸೆಮ್ಮೆಸ್, ಕಾಲ್ ...ಯಾವುದೂ ಇಲ್ಲ. ನೆಟ್ವಕ್೯ ಸಿಗದೇ ಇದ್ದರೆ?&lt;br /&gt;&lt;br /&gt;ಅವನಿಗೆ ನನ್ನಲ್ಲಿ ದ್ವೇಷವಿರಬಹುದಾ? ಇದ್ಯಾವುದೂ ನನಗೊತ್ತಿಲ್ಲ. ಆದರೆ ನಾನು ಪ್ರೀತಿಸಿದ್ದೇನೆ. ಅವನೊಂದಿಗೆ ಅವನ ಕನಸುಗಳನ್ನು, ಅವನ ಪೆದ್ದುತನವನ್ನು...ಅವನ ಸಿಟ್ಟನ್ನು...ಅವನ ಜೀವನವನ್ನು..&lt;br /&gt;&lt;br /&gt;ಈ ಮಳೆ ನನ್ನನ್ನು ಒದ್ದೆಯಾಗಿಸಿದೆ. ಕಂಬನಿಯೂ ಮಳೆ ನೀರ ಸೇರಿ ಮೋಡವಾಗಿದೆ. ಆದರೆ ನನ್ನ ಒಡಲಾಳದಲ್ಲಿರುವ'ಪ್ರೀತಿ'ನಂಬಿಕೆಯ ಹೊದಿಕೆ ಹೊದ್ದು ಬೆಚ್ಚನೆ ಮಲಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-7409694618173146739?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/7409694618173146739/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=7409694618173146739' title='5 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/7409694618173146739'/><link rel='self' type='application/atom+xml' href='http://www.blogger.com/feeds/4320259625062903049/posts/default/7409694618173146739'/><link rel='alternate' type='text/html' href='http://anuraaga.blogspot.com/2011/06/blog-post_07.html' title='ಏಕಾಂತತೆ ಮತ್ತು ನಾನು...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4320259625062903049.post-8124211258944999275</id><published>2011-06-04T12:46:00.000-07:00</published><updated>2011-06-04T12:46:27.153-07:00</updated><category scheme='http://www.blogger.com/atom/ns#' term='ದೂರದರ್ಶನ'/><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಅನುಭವ'/><title type='text'>ನೈಂಟಿ ಜತೆಗಿನ ನಂಟು!!!</title><content type='html'>&lt;b&gt;ನೈಂ&lt;/b&gt;ಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ 'ಬಾಟಲಿ' ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು...ಎಲ್ಲ ತಿಳಿಯೋಕೆ, ಕಲಿಯೋಕೆ.  ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ....ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ 'ಮಹಾ' ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. "ಟಿವಿ ಬಂತಾ...ಇನ್ನು ಮಕ್ಕಳು ಓದಲ್ಲ ಬಿಡಿ" ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.&lt;br /&gt;&lt;br /&gt;ಭಾನುವಾರ ಬಂತೆಂದರೆ ಊಟ ತಿಂಡಿ ಎಲ್ಲವೂ ಟಿವಿ ಮುಂದೆಯೇ. ರಂಗೋಲಿ ಆರಂಭವಾಗುವ ಮುನ್ನವೇ ಅಂಗಳ ಗುಡಿಸಿ, ಪಾತ್ರ ತೊಳೆದು, ಸ್ನಾನ ಮಾಡಿ ಕುಳಿತುಕೊಳ್ಳುತ್ತಿದ್ದೆ. 'ಚಾರ್ಲಿ ಚಾಪ್ಲಿನ್' ಮುಗಿದ ನಂತರ ಬ್ರೇಕ್್ನ ಸಮಯದಲ್ಲಿ ಬೆಳಗ್ಗಿನ ತಿಂಡಿಯಾಗುತ್ತಿತ್ತು. ಇನ್ನು ಜಂಗಲ್ ಬುಕ್ ನ ಮೋಗ್ಲಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಟಾಮ್ ಆ್ಯಂಡ್ ಜೆರ್ರಿ, ಪೋಟಲಿ ಬಾಬಾ, ಆಲೀಸ್ ಇನ್ ವಂಡರ್ ಲ್ಯಾಂಡ್, ಡಕ್ ಟೇಲ್ಸ್ , ಸಿಂದಾಬಾದ್ ದ ಸೈಲರ್ ಮೊದಲಾದ ಮಕ್ಕಳ ಧಾರವಾಹಿಗಳು,  9 ಗಂಟೆಯ ವೇಳೆಗೆ  'ಚಂದ್ರಕಾಂತ ಕಿ ಕಹಾನಿ ಯೇ ಮಾನಾ ಹೆ ಪುರಾನಿ...' ಎಂಬ ಟೈಟಲ್  ಸಾಂಗ್್ನೊಂದಿಗೆ ಆರಂಭವಾಗುವ ಚಂದ್ರಕಾಂತ ಸೀರಿಯಲ್ ನಲ್ಲಿ ಯಕ್ಕ್...ಎಂದು ಹೇಳುವ ವಿಲನ್ ಕ್ರೂರ್ ಸಿಂಗ್, ಶಿವ್್ದತ್ ಕೋ ಕೋಯಿ ಶಕ್ ನಹೀ ಎನ್ನುವ ಪಂಕಜ್ ಧೀರ್ ನ ಅಭಿನಯ ಇನ್ನೂ ಮನಸ್ಸಿನಿಂದ ಮಾಸಿಲ್ಲ.  ಅದೇ ವೇಳೆ  ಚಾಣಕ್ಯ, ಶ್ರೀಕೃಷ್ಣ ಮೊದಲಾದ ಪುರಾಣ ಕಥೆಗಳ ಜತೆಗೆ ಚುಟ್ಟಿ ಚುಟ್ಟಿ, ತರಂಗ್, ಸ್ಕೂಲ್ ಡೇಸ್ ಕೂಡಾ ಪ್ರಿಯವಾದುದೇ. ನನ್ನ ನೆನಪಿನ ಪ್ರಕಾರ 11 ಗಂಟೆಗೆ 'ದ ನ್ಯಾಷನಲ್ ಪ್ರೋಗ್ರಾಂ ಆಫ್ ಡ್ಯಾನ್ಸ್ 'ಎಂಬ ಕಾರ್ಯಕ್ರಮವೂ ಪ್ರಸಾರವಾಗುತ್ತಿತ್ತು.  ಹನ್ನೆರಡು ಗಂಟೆಯ ಹೊತ್ತಿಗೆ 'ಶಕ್ತಿಮಾನ್ ' ಪ್ರತ್ಯಕ್ಷವಾಗುತ್ತಿದ್ದ. ಮಧ್ಯಾಹ್ನ ಮೂಕರಿಗಾಗಿರುವ ವಾರ್ತೆ, ಸಂಸ್ಕೃತ ವಾರ್ತೆ, ಹಿಂದಿ, ಇಂಗ್ಲಿಷ್ ಎಲ್ಲ ವಾರ್ತೆಯನ್ನೂ ನಾನು ನೋಡುತ್ತಿದ್ದೆ. &lt;br /&gt;&lt;br /&gt;ಕೃಷಿ ದರ್ಶನ್, ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ, ಟಿವಿ ಕಾರ್ಯಕ್ರಮಕ್ಕೆ ಬಂದ ಪತ್ರಗಳನ್ನು ಓದುವುದು, ಪ್ರಾಯೋಜಿತ ಕಾರ್ಯಕ್ರಮ ಏನೇ ಬರಲಿ ಟಿವಿ ಮುಂದೆಯಿಂದ ಕದಲುತ್ತಿರಲಿಲ್ಲ ನಾನು.&lt;br /&gt;&lt;br /&gt;ಇನ್ನು ಸೀರಿಯಲ್್ಗಳ ಸರದಿ. ವಿಕ್ರಮ್ ಬೇತಾಳ್ ಕಥೆಗಳನ್ನು ಚಂದಮಾಮದಲ್ಲಿ ಓದಿದ್ದರೂ, ಟಿವಿ ಮೂಲಕ  ಬೇತಾಳ ಹೇಗಿರುತ್ತಾನೆ? ಎಂಬುದು ಗೊತ್ತಾಯ್ತು. ಅಪರಾಹ್ನ ಸೀರಿಯಲ್ ಗಳದ್ದೇ ಕಾರುಬಾರು. ಹಮ್್ಲೋಗ್ ಎಂಬ ಸೋಪ್ ಅದೆಷ್ಟು ಕಂತು ಓಡಿತ್ತೋ ನೆನಪಿಲ್ಲ. ಆದರೆ ಅಪರಾಜಿತ, ಔರತ್, ಸಮುಂದರ್, ಯುಗ್, ಜುನೂನ್, ಶಾಂತಿ, ಸ್ವಾಭಿಮಾನ್ ಮೊದಲಾದ ಸೀರಿಯಲ್ ಗಳು ಒಂದರ ನಂತರ ಒಂದರಂತೆ ಪ್ರಸಾರವಾಗುತ್ತಿತ್ತು. ಸಂಜೆಯ ವೇಳೆಗೆ ಬುಧವಾರ ಚಿತ್ರಹಾರ್, ಶುಕ್ರವಾರ ಚಿತ್ರಗೀತ್ ಯಾವುದೂ ಮಿಸ್ ಮಾಡಲ್ಲ.&lt;br /&gt;&lt;br /&gt;ರಾತ್ರಿ ವೇಳೆ  ಸರಳಾ ಮಹೇಶ್ವರಿ, ಶಮ್ಮೀ ನಾರಂಗ್ ಓದುವ ಹಿಂದೀ ವಾರ್ತೆ, ರಿನ್ನಿ ಕಣ್ಣನ್್ನ ಇಂಗ್ಲೀಷ್ ವಾರ್ತೆ ಅದೂ ಇಷ್ಟಾನೇ.  ಇದಾದ ನಂತರ ರಾತ್ರಿ ವೇಳೆ ಸೀರಿಯಲ್್ಗಳ ಸುರಿಮಳೆ.. ಉಡಾನ್, ಅಲೀಫ್ ಲೈಲಾ, ಹಮ್್ರಾಹಿ, ಕಕ್ಕಾಜಿ ಕಹಿಯೆ, ಸಂಸಾರ್, ಅಮರಾವತಿ ಕಿ ಕಹಾನಿಯಾ, ಆನಂದಿ ಗೋಪಾಲ್, ಫುಲ್್ವಂತೀ, ರಿಪೋರ್ಟರ್,ಕಶೀಶ್, ಕೋಶಿಶ್, ಉಪಾಸನಾ, ವಿಲಾಯ್ತಿ ಬಾಬು, ಮುಂಗೇರಿ ಕೆ ಭಾಯಿ ನೌರಂಗಿ, ಪರಖ್,ಓಂ ನಮಃ ಶಿವಾಯ್, ಜೈ ಹನುಮಾನ್,  ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, ಕಯರ್, ಓಶಿಯಾನಾ ಮೊದಲಾದ ಸೀರಿಯಲ್್ಗಳು. ಅದರಲ್ಲಿಯೂ ಬ್ಯೋಮ್ ಕೇಶ್ ಭಕ್ಷಿ, ಸುರಾಗ್, ತೆಹೆತಿಕಾತ್ ಮೊದಲಾದ ಪತ್ತೆದಾರಿ ಧಾರವಾಹಿಗಳು ಇನ್ನೂ ಥ್ರಿಲ್ಲಿಂಗ್ ಆಗಿರುತ್ತಿತ್ತು. ಇದೆಲ್ಲದರ ಜತೆಗೆ ಭಾರತ್ ಏಕ್ ಕೋಜ್, ತಾನಾ ಬಾನಾ, ಸುರಭಿ, ದ ವರ್ಲ್ಡ್ ದಿಸ್ ವೀಕ್ ಮೊದಲಾದವುಗಳು ಜ್ಞಾನ ವರ್ಧನೆಯ ಕ್ಯಾಪ್ಸೂಲ್ ಗಳಂತಿದ್ದವು.&lt;br /&gt;ವರ್ಲ್ಡ್ ಆಫ್ ಸ್ಪೋಟ್ಸ್ ಮೂಲಕ ಕ್ರೀಡೆ, ಆವಾಗಿನ ಕ್ರಿಕೆಟ್ ಟೆಸ್ಟ್ ಮ್ಯಾಚ್ ಗಳು...ಬಾಕ್ಸಿಂಗ್ ಗುದ್ದಾಟ ನೋಡುತ್ತಿದ್ದರೆ ಮೈ ನಡುಗುತ್ತಿತ್ತು!!&lt;br /&gt;&lt;br /&gt;ಮೇರಿ ಆವಾಜ್ ಸುನೋ ಎಂಬ ರಿಯಾಲಿಟಿ ಶೋ, ಏಕ್ ಸೆ ಬಡ್ಕರ್ ಏಕ್ ಎಂಬ ಕಾಮಿಡಿ ಸೀರಿಯಲ್ ನಡುವೆ ಬರುವ ಟಾಪ್ 10 ಹಿಂದಿ ಚಿತ್ರಗೀತೆಗಳು, ಸುನೆಹರೇ ಪಲ್,  ಪಾರ್ವತಿ ಖಾನ್ ನಡೆಸಿಕೊಡುತ್ತಿದ್ದ ಹಾಟ್ ಸ್ಪಾಟ್ ಮೊದಲಾದವುಗಳು ಬಾಲಿವುಡ್ ನ ಬಗ್ಗೆ ಹೆಚ್ಚು ಒಲವನ್ನುಂಟು ಮಾಡುವಂತಿತ್ತು. &lt;br /&gt;&lt;br /&gt;ಮೂವಿಗಳ ಬಗ್ಗೆ ಹೇಳುವುದೇ ಬೇಡ. ಅಮಿತಾಬ್ ಬಚ್ಚನ್, ಜಿತೇಂದ್ರ, ಮಿಥುನ್ ಚಕ್ರವರ್ತಿ, ರಿಷಿ ಕಪೂರ್, ಅನಿಲ್ ಕಪೂರ್, ಸಲ್ಮಾನ್, ಜಯಾ ಬಚ್ಚನ್, ಮೀನಾಕ್ಷಿ ಶೇಷಾದ್ರಿ, ಶ್ರೀದೇವಿ, ಮಾಧುರಿ ಹೀಗೆ ಭಾಷೆ ಅರ್ಥವಾಗದಿದ್ದರೂ ಅವರ ನಟನೆಗೆ ಮನಸ್ಸು ಮಾರು ಹೋಗಿತ್ತು. ಹಿಂದಿ ಚಿತ್ರಗಳನ್ನು ನೋಡುವಾಗ ನನ್ನ ಅಪ್ಪ ಆ ಚಿತ್ರವನ್ನು ಎಲ್ಲಿ ನೋಡಿದ್ದರು? ನೋಡಬೇಕಾದರೆ ಏನೆಲ್ಲಾ ಸಾಹಸ ಮಾಡುತ್ತಿದ್ದರು ಎಂದೆಲ್ಲಾ ವಿವರಿಸುತ್ತಿದ್ದರು.  ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಸಾರವಾಗುತ್ತಿದ್ದು, ಕನ್ನಡ, ಮಲಯಾಳಂ ಚಿತ್ರಗಳು ಬಂದರಂತೂ ಹಬ್ಬವೇ. ಕನ್ನಡ ಮೂವಿಯಲ್ಲಿನ ನಟರ ಬಗ್ಗೆ ಅಮ್ಮ ಹೇಳುತ್ತಿದ್ದರೆ, ಮಲಯಾಳಂ ನಟರ ಬಗ್ಗೆ ಅಪ್ಪ ವಿವರಿಸುತ್ತಿದ್ದರು. ;) ಯಾವತ್ತೋ ಒಂದ್ಸಾರಿ ತುಳು ಚಿತ್ರ 'ಬಂಗಾರ್ ಪಟ್ಲೇರ್ ' ನೋಡಿದ ನೆನಪು.&lt;br /&gt;&lt;br /&gt;ಇಷ್ಟೆಲ್ಲಾ ಹೇಳಿದ ಮೇಲೆ ಕಮರ್ಷಿಯಲ್ ಬ್ರೇಕ್ ಇಲ್ಲದಿದ್ದರೆ ಹೇಗೆ? ಐ ಲವ್ ಯೂ ರಸ್ನಾ...ಐ ಆ್ಯಮ್ ಎ ಕಾಂಪ್ಲಾನ್ ಬಾಯ್, ಲಿಜ್ಜತ್ ಪಾಪ್ಪಡ್, ಘಡೀ ಡಿಟರ್ಜಂಟ್, ಎಂಡಿಚ್...ಎಂಡಿಚ್ ಎನ್ನುವ ಎಂಡಿಚ್ ಮಸಾಲೆ...ಸಿರ್ಫ್ ಏಕ್ ಸಾರಿಡಾನ್...ಸರ್ದದ್ ಸೆ ಆರಾಮ್ (ಸಾರಿಡಾನ್), ಉಹ್..ಆ..ಔಚ್ (ಐಯೋಡೆಕ್ಸ್), ಓಯೇ..ಓಯೇ  ಕುಜಲೀ ಕರ್್ನೇ ವಾಲೇ (ಬೀಟೆಕ್ಸ್), ಗುಂಡು ಹಾರಿಸಿ 'ಗೋಲಿಯೋಂಕಾ ಬಿ ಅಸರ್ ನಹೀ' ಎನ್ನುವಾಗ ಸಾಧು 'ಇಸ್್ಕಾ ಇಲಾಜ್ ಕಾಯಮ್ ಚೂರ್ಣ್ 'ಅಂತಾನೆ.. &lt;br /&gt;"ಯೇ ಜಮೀ..ಯೇ ಆಸ್ ಮಾನ್...ಹಮಾರಾ ಕಲ್, ಹಮಾರಾ ಆಜ್...ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್.." (ಹಮಾರಾ ಬಜಾಜ್), ಯೇ ರಿಶ್ತೇ ಯೇ ನಾಥೆ...ಕಿತ್ ನೇ ಅಪ್ ನೇ ಅಪ್ ನೇ (ಎಸ್ ಕುಮಾರ್ಸ್), ಜಲೇಬಿ.... ಎಂದು ಕಣ್ಣರಳಿಸುವ ಬಾಲಕ (ಧಾರಾ ಎಣ್ಣೆ), ಸಂತೂರ್ ಸಂತೂರ್..., ಜಬ್ ಘರ್ ಕಿ ರೋನಕ್ ಬಡಾನಿ ಹೋ...(ಮ್ಯಾರೋಲಾಕ್ ಪೈಂಟ್ಸ್), ಡೂಂಡ್ ತೇ ರೆಹಜಾವೋಗೆ (ಸರ್ಫ್), ಸಬ್ ಕಿ ಪಸಂದ್ 'ನಿರ್ಮಾ', ಚುಪ್ಕೆ ಚುಪ್ಕೆ ಬೈಟಿ ಹೋ ಜೂರ್ ಕೋಯಿ ಬಾತ್ ಹೈ (ಕೇರ್ ಫ್ರೀ ), ಯೇ ಹೇ ಹಮಾರಾ ಸುರಕ್ಷಾ ಚಕ್ಕರ್ (ಕೋಲ್ಗೇಟ್), ಡಾಬರ್ ಲಾಲ್ ದಂತ್ ಮಂಜನ್, ವಿಕೋ ಟರ್ಮರಿಕ್ ಹೀಗೆ ನೆನಪಿನಲ್ಲಿ ಉಳಿಯುವ ಅದೆಷ್ಟು ಜಾಹೀರಾತುಗಳು!!&lt;br /&gt;&lt;br /&gt;ಬ್ರೇಕ್ ನ ನಂತರ ಕಾರ್ಯಕ್ರಮ ಮುಂದುವರಿಯುತ್ತದೆ...&lt;br /&gt;&lt;br /&gt;'ಬಜೇ ಸರ್ ಗಂ ಹರ್ ತರಫ್ ಸೇ ಗೂಂಜ್ ಬನ್ ಕರ್ ದೇಶ್ ರಾಗ್' ...ಮೇಣದ ದೀಪಗಳನ್ನು ಉರಿಸುವ ಮಕ್ಕಳು...'ಸುನ್ ಸುನ್ ಸುನ್ ಮೇರೆ ಮುನ್ನೆ ಸುನ್' ಎಂಬ ಹಾಡಿನಲ್ಲಿ  ಬರುವ ಎಲ್ಲಾ ಪ್ರಮುಖ ನಟರು (ನಮ್ಮ ಮಮ್ಮುಟ್ಟಿಯೂ ಇರ್ತಿದ್ರು)...'ಭಾರತ್ ಭಾರತ್ ಹಮ್ ಇಸ್ ಕಿ ಸಂತಾನ್ '..., 'ಹಮ್  ಹೋಂಗೆ ಕಾಮ್ ಯಾಬ್', 'ವಿಜಯಿ ವಿಶ್ವ ತಿರಂಗಾ ಪ್ಯಾರಾ' ಮೊದಲಾದ ಭಾವೈಕ್ಯತೆಯ ಗೀತೆಗಳು.. 'ಮಿಲೇ ಸುರ್ ಮೇರಾ ತುಮ್ಹಾರಾ ....' ಈ ಹಾಡಿನ ಮೋಡಿಗೊಳಗಾಗದ ಜನರಿದ್ದಾರೆಯೇ?&lt;br /&gt;&lt;br /&gt;ಡಿಡಿ ನ್ಯಾಷನಲ್ ನಲ್ಲಿ ಯಾವಾಗ ಡಿಡಿ ಮಲಯಾಳಂ ಕೂಡಾ ಲಭಿಸಿತೋ ಟಿವಿ ನೋಡುತ್ತಾ ಮಲಯಾಳಂ ಓದೋಕೆ ಕಲಿಯುವುದರ ಜತೆ ಶುದ್ಧ ಮಲಯಾಳಂನಲ್ಲಿ ಮಾತನಾಡಲು ಕೂಡಾ ಕಲಿತು ಬಿಟ್ಟೆ.&lt;br /&gt;ಅಬ್ಬಾ ದೂರದರ್ಶನದ ಬಗ್ಗೆ ಹೇಳೋಕೆ ಹೋದರೆ ಅದೂ ಮೆಗಾ ಸೀರಿಯಲ್ ಆಗ್ಬಹುದು. ಸದ್ಯ ಇಷ್ಟು ಸಾಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8124211258944999275?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8124211258944999275/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8124211258944999275' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8124211258944999275'/><link rel='self' type='application/atom+xml' href='http://www.blogger.com/feeds/4320259625062903049/posts/default/8124211258944999275'/><link rel='alternate' type='text/html' href='http://anuraaga.blogspot.com/2011/06/blog-post.html' title='ನೈಂಟಿ ಜತೆಗಿನ ನಂಟು!!!'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-1770742256408521154</id><published>2011-04-22T09:14:00.000-07:00</published><updated>2011-04-22T09:18:06.550-07:00</updated><category scheme='http://www.blogger.com/atom/ns#' term='ಕಾಸರಗೋಡು'/><category scheme='http://www.blogger.com/atom/ns#' term='ಶರದ್ ಪವಾರ್'/><category scheme='http://www.blogger.com/atom/ns#' term='ಎಂಡೋಸಲ್ಫಾನ್'/><title type='text'>'ಎಂಡೋ ನಿಷೇಧಿಸಿ' - ಶರದ್ ಪವಾರ್ ಗೊಂದು ಬಹಿರಂಗ ಪತ್ರ</title><content type='html'>ಶರದ್ ಪವಾರ್ ಜೀ,&lt;br /&gt;ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ  ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?&lt;br /&gt;&lt;br /&gt;ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ?  'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು 'ಕಲ್ಲು ಹೃದಯ' ಅಂತಾ ಅಂದುಕೊಳ್ಳುತ್ತೀನಿ.&lt;br /&gt;&lt;br /&gt;ಪ್ರಸ್ತುತ ಪ್ರದೇಶದಲ್ಲಿನ ಅಮ್ಮಂದಿರ ಬವಣೆ ನಿಮಗೆ ಗೊತ್ತೇನು? ಇಲ್ಲಿನ ಮಕ್ಕಳಿಗೆ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಇದ್ದ ಬದ್ದ ಸರ್ವರೋಗಗಳೂ ಇವೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೂಲಿನಾಲಿ ಮಾಡಿ ಜೀವಿಸುವ ಅಪ್ಪ ಅಮ್ಮ ಮನೆಯಲ್ಲೇ ಕೂರುತ್ತಾರೆ. ಮಕ್ಕಳ ಭವಿಷ್ಯ ಚಿವುಟಿ ಹೋಗಿದೆ. ಇಂತಹಾ ಅಂಗ ವೈಕಲ್ಯತೆಯಿರುವ ಮಕ್ಕಳ ಕಷ್ಟದ ಬದುಕನ್ನು ನೋಡಿ ಕೊರಗುವ ಬದಲು ಮಕ್ಕಳೇ ಬೇಡ ಎಂಬ ನಿರ್ಧಾರವನ್ನು ಈ ಅಮ್ಮಂದಿರು ಕೈಗೊಂಡಿದ್ದಾರೆ. ತನ್ನ ಗರ್ಭದಲ್ಲಿರುವ ಶಿಶುವಿಗೆ ವೈಕಲ್ಯತೆಯಿದೆ ಎಂದು ತಿಳಿದ ಕೂಡಲೇ ಅಬಾರ್ಶನ್ ಮಾಡಿಸುವ ಅಮ್ಮಂದಿರ ನೋವು ಕೇಳುವವರಾರು? ನಾಳಿನ ಭವಿಷ್ಯವೇ ಇಲ್ಲದಂತೆ ಮಾಡಿದ 'ಎಂಡೋ' ಪೀಡೆಯಿಂದ ಈ ಕುಟುಂಬಗಳಿಗೆ ಮುಕ್ತಿಯಿಲ್ಲವೇ? ಸಾವು ನೋವುಗಳಿಂದ ಕಂಗೆಟ್ಟ ಈ ಜನತೆಗೆ ಸಾಂತ್ವನ ಹೇಳುವವರು ಯಾರು? ಈ ಮೊದಲು ಗೇರು ಬೀಜದ ಮರಗಳಿದ್ದ ಪ್ರದೇಶಗಳಲ್ಲಿ ಅದನ್ನು ಕಡಿದು ರಬ್ಬರ್ ಕೃಷಿ ಆರಂಭಿಸಿದ ಪ್ಲಾಂಟೇಷನ್ ಕಾರ್ಪರೇಶನ್್ನ ಕೆಟ್ಟ ಚಿಂತನೆಗೆ ಏನೆನ್ನಬೇಕೋ ತಿಳಿಯದಾಗಿದೆ. ಸಮಸ್ತ ಜನತೆ ಎಂಡೋಸಲ್ಫಾನ್ ನಿಷೇಧಿಸಿ ಎಂದು ಕೂಗುತ್ತಿದ್ದರೂ ಅದನ್ನು ಕೇಳದಂತೆ ನಟಿಸುವ ನೀವೊಬ್ಬ ಮನುಷ್ಯ ಎಂದು ಹೇಳಲೂ ಲಜ್ಜೆಯಾಗುತ್ತಿದೆ. ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಕೋಟಿ ಕೋಟಿ ಜನರನ್ನು ಮೋಸ ಮಾಡಿದ ನಿಮಗೆ ಸಾಮಾನ್ಯ ಜನರ ಕಣ್ಣೀರ ಶಾಪವಿದೆ. ದೇವರ ಸ್ವಂತ ಊರು ಎಂದು ಹೇಳುವ ಕೇರಳದಲ್ಲಿನ ಎಂಡೋ ಪೀಡಿತರ ನರಕ ಯಾತನೆ ನಿಮಗೆ ಅರ್ಥವಾಗುವುದಿಲ್ಲವೇ? ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಒದಗಿಬಂದರೆ ಏನ್ಮಾಡುತ್ತೀರಿ? ಶರದ್ ಪವಾರ್ ಜೀ, ಪ್ಲೀಸ್...ಎಂಡೋಸಲ್ಫಾನ್ ನಿಷೇಧಿಸಿ, ಭವಿಷ್ಯದ ಮಕ್ಕಳಿಗೆ ಬದುಕಲು ಅನುಮತಿಸಿ.&lt;br /&gt;&lt;br /&gt;ಇಂತೀ,&lt;br /&gt;ರಶ್ಮಿ. ಕಾಸರಗೋಡು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1770742256408521154?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1770742256408521154/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1770742256408521154' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1770742256408521154'/><link rel='self' type='application/atom+xml' href='http://www.blogger.com/feeds/4320259625062903049/posts/default/1770742256408521154'/><link rel='alternate' type='text/html' href='http://anuraaga.blogspot.com/2011/04/blog-post_22.html' title='&apos;ಎಂಡೋ ನಿಷೇಧಿಸಿ&apos; - ಶರದ್ ಪವಾರ್ ಗೊಂದು ಬಹಿರಂಗ ಪತ್ರ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-8450400685864808298</id><published>2011-04-19T08:41:00.001-07:00</published><updated>2011-04-19T08:41:55.429-07:00</updated><category scheme='http://www.blogger.com/atom/ns#' term='ಮಳೆ'/><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಕವನ'/><title type='text'>ಈ ಮಳೆಯೇ ಹಾಗೆ...</title><content type='html'>ಈ ಮಳೆಯೇ ಹಾಗೆ...&lt;br /&gt;ನಮ್ಮೂರಿನ ಮಳೆಯಂತಿಲ್ಲ ಇದು&lt;br /&gt;ಮಳೆ ಬಂದ ಕೂಡಲೇ ಮಣ್ಣಿನ ವಾಸನೆ &lt;br /&gt;ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ...&lt;br /&gt;&lt;br /&gt;ಈ ಮಳೆಯೇ ಹಾಗೆ...&lt;br /&gt;ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ&lt;br /&gt;ಚರಂಡಿ ನೀರು ರೋಡಲ್ಲಿ ಹರಿದರೂ&lt;br /&gt;ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ&lt;br /&gt;&lt;br /&gt;ಈ ಮಳೆಯೇ ಹಾಗೆ...&lt;br /&gt;ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ&lt;br /&gt;ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ ಕಣ್ಣುಗಳು&lt;br /&gt;ಲಿಫ್ಟ್ ಕೇಳಿದರೂ ಕೊಡುವುದಿಲ್ಲ&lt;br /&gt;&lt;br /&gt;ಈ ಮಳೆಯೇ ಹಾಗೆ...&lt;br /&gt;ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ&lt;br /&gt;ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ&lt;br /&gt;ಗಾಲಿಗಳು ಮುಂದೆ ಚಲಿಸುವುದೇ ಇಲ್ಲ&lt;br /&gt;&lt;br /&gt;ಈ ಮಳೆಯೇ ಹಾಗೆ...&lt;br /&gt;ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ&lt;br /&gt;ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು&lt;br /&gt;ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8450400685864808298?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8450400685864808298/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8450400685864808298' title='6 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8450400685864808298'/><link rel='self' type='application/atom+xml' href='http://www.blogger.com/feeds/4320259625062903049/posts/default/8450400685864808298'/><link rel='alternate' type='text/html' href='http://anuraaga.blogspot.com/2011/04/blog-post_19.html' title='ಈ ಮಳೆಯೇ ಹಾಗೆ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4320259625062903049.post-3598923805844690135</id><published>2011-04-08T03:10:00.000-07:00</published><updated>2011-04-08T03:10:09.888-07:00</updated><category scheme='http://www.blogger.com/atom/ns#' term='ಕವನ'/><title type='text'>ಯುರೇಕಾ...ಯುರೇಕಾ</title><content type='html'>ನೋಡು..ಮಗು ಅಲ್ಲಿದೆ ಅಜ್ಜಿಮನೆ&lt;br /&gt;ಇನ್ನೊಂದು ಹೆಜ್ಜೆ ಅಷ್ಟೇ..&lt;br /&gt;ಈಗ ನಡೆದದ್ದು 2 ಮೈಲಿಯಷ್ಟಾಗಿತ್ತು&lt;br /&gt;ಇನ್ನೂ ಸ್ವಲ್ಪ ದೂರ..&lt;br /&gt;ಅಪ್ಪ ಮಗನನ್ನು ಪುಸಲಾಯಿಸಿ&lt;br /&gt;ಹೆಜ್ಜೆ ಹಾಕುತ್ತಿದ್ದ ಅಪ್ಪ....&lt;br /&gt;&lt;br /&gt;ವರುಷ ಸರಿದಾಗ ಮನೆಯ ಮುಂದಿನ&lt;br /&gt;ಡಾಂಬರು ರೋಡಿನಲ್ಲಿ ಮಗ ಓಡಾಡಿದ&lt;br /&gt;ಮಗು ಓಡು, ಇನ್ನೂ ಜೋರಾಗಿ ಓಡು&lt;br /&gt;ಅಪ್ಪ ಹುರಿದುಂಬಿಸಿದ &lt;br /&gt;ಮಗ ಓಡುತ್ತಲೇ ಇದ್ದ&lt;br /&gt;&lt;br /&gt;ಇದು ಮ್ಯಾರಥಾನ್ ಅಲ್ಲ, ಕ್ರಾಸ್್ಕಂಟ್ರಿ ರೇಸ್ ಅಲ್ಲ...&lt;br /&gt;ಬದುಕ ಬಂಡಿಯನ್ನೆಳೆಯಲು ಅವ ಓಡುತ್ತಿದ್ದ&lt;br /&gt;ಮುದ್ದು ಗಲ್ಲದಲ್ಲಿ ಕಾಣಿಸಿತ್ತು ಗಡ್ಡ&lt;br /&gt;ಹೆಗಲ ಮೇಲಿತ್ತು ಕನಸುಗಳ ಭಾರ&lt;br /&gt;&lt;br /&gt;ಓಡು ಮಗು ಓಡು ಇನ್ನೂ ಓಡಬೇಕೆಂದ&lt;br /&gt;ಮುದಿ ಕೂದಲಿನ ಅಪ್ಪ... &lt;br /&gt;ಗಮ್ಯ ಸ್ಥಾನವೆಲ್ಲೋ ಯಾರಿಗೇನು ಗೊತ್ತು?&lt;br /&gt;&lt;br /&gt;ನಿನ್ನ ಮುಂದಿರುವ ಜನರ ಕಾಲೆಳೆದು ಹೊರದಬ್ಬು&lt;br /&gt;ಹಿಂದಿರುವ ಮಂದಿಯನ್ನು ಒದೆಕೊಟ್ಟು ತಳ್ಳು&lt;br /&gt;ಇಷ್ಟು ಸಾಕಾಗದಿದ್ದರೆ ಅವರ ಮನ ಚಿವುಟು &lt;br /&gt;ಅವರ ಕಣ್ಣೀರಲಿ ತೇಲುತ್ತಾ ನೀ ದಡವ ಸೇರು&lt;br /&gt;&lt;br /&gt;ಮಗ ಓಡುತ್ತಲೇ ಇದ್ದ ಪಿತೃ ವಾಕ್ಯ ಪಾಲಕನಂತೆ&lt;br /&gt;ಲಜ್ಜೆ ಬಿಡು ನೀನು...ಎಲ್ಲರಿಂದ ಮುಂದೆ ಸಾಗು&lt;br /&gt;ಕಿವಿ ಕೇಳಿಸದು, ಕಣ್ಣು ಕಾಣಿಸದು...&lt;br /&gt;ಲಜ್ಜೆ ಬಿಟ್ಟು ವಿವಸ್ತ್ರನಾಗಿ ಮಗ ಓಡುತ್ತಿದ್ದ&lt;br /&gt;ಜನ ನಕ್ಕಾಗ ಅಪ್ಪ ಹೇಳಿದ&lt;br /&gt;ಯುರೇಕಾ....ಯುರೇಕಾ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3598923805844690135?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3598923805844690135/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3598923805844690135' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3598923805844690135'/><link rel='self' type='application/atom+xml' href='http://www.blogger.com/feeds/4320259625062903049/posts/default/3598923805844690135'/><link rel='alternate' type='text/html' href='http://anuraaga.blogspot.com/2011/04/blog-post_08.html' title='ಯುರೇಕಾ...ಯುರೇಕಾ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-4296148888100686595</id><published>2011-04-06T00:48:00.000-07:00</published><updated>2011-04-06T00:48:23.266-07:00</updated><category scheme='http://www.blogger.com/atom/ns#' term='ಸಾಹಿತ್ಯ'/><category scheme='http://www.blogger.com/atom/ns#' term='ಉದಯೋನ್ಮುಖ ಬರಹಗಾರರು'/><category scheme='http://www.blogger.com/atom/ns#' term='ಆಮಂತ್ರಣ'/><title type='text'>ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ</title><content type='html'>ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ..&lt;br /&gt;&lt;br /&gt;ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ:&lt;br /&gt;1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ&lt;br /&gt;1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ&lt;br /&gt;2. ಕನ್ನಡಕ್ಕಾಗಿ ತುಡಿಯುವ ಮನಸ್ಸು&lt;br /&gt;3. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು&lt;br /&gt;5. ಭಾಗವಹಿಸಲಿಚ್ಛಿಸುವವರು ಈ ಕೆಳಗಿನ ಪ್ರಶ್ನೆಗೆ 100 ಪದಗಳಿಗೆ ಮೀರದಂತೆ ಉತ್ತರಿಸಬೇಕು.&lt;br /&gt;&lt;br /&gt;ಪ್ರಶ್ನೆ: ಸಾಹಿತ್ಯಕ್ಕೆ ಓದು ಅಗತ್ಯವೇ? ಸಾಹಿತಿ ಆದವನಿಗೆ ಸಾಮಾಜಿಕ ಬದ್ಧತೆಗಳಿರಬೇಕೆ?&lt;br /&gt;&lt;br /&gt;ನಿಮ್ಮ ಉತ್ತರವನ್ನು ಏಪ್ರಿಲ್ 25ರ ಮೊದಲು sanakabrahma@gmail.com ಈ ವಿಳಾಸಕ್ಕೆ ಕಳುಹಿಸಿ.&lt;br /&gt;ನಿಮ್ಮ ಮಿಂಚಂಚೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಮರೆಯದಿರಿ. ಈ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಆಹ್ವಾನವನ್ನು ಕಳುಹಿಸಲಾಗುವುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4296148888100686595?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4296148888100686595/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4296148888100686595' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4296148888100686595'/><link rel='self' type='application/atom+xml' href='http://www.blogger.com/feeds/4320259625062903049/posts/default/4296148888100686595'/><link rel='alternate' type='text/html' href='http://anuraaga.blogspot.com/2011/04/blog-post.html' title='ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-5855586003669879351</id><published>2011-03-25T10:35:00.001-07:00</published><updated>2011-03-25T10:35:40.307-07:00</updated><category scheme='http://www.blogger.com/atom/ns#' term='ಬ್ಲಾಗ್ ಬರಹ'/><category scheme='http://www.blogger.com/atom/ns#' term='ಅಪ್ಪ'/><category scheme='http://www.blogger.com/atom/ns#' term='ನೆನಪು'/><title type='text'>ಅಪ್ಪನ ಮನದಲ್ಲೊಮ್ಮೆ ಇಣುಕಿ...</title><content type='html'>&lt;b&gt;ಮ&lt;/b&gt;ಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ. &lt;br /&gt;&lt;br /&gt;ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್ಪನಿಗೆ ನಿದ್ದೆ ಬಂದಿದೆ. ಮಗಳು ನಿದ್ದೆಯಿರದ ರಾತ್ರಿಗಳಲ್ಲಿ ಬದುಕಿನ ಕನಸುಗಳಿಗೆ ಬಣ್ಣ ಮೆತ್ತುತ್ತಾಳೆ...&lt;br /&gt;&lt;br /&gt;'ಅಪ್ಪ' ಮೊದಲಿನಂತಿಲ್ಲ. ಅವ ಡ್ಯಾಡಿಯಾಗಿದ್ದಾನೆ. ಮಗಳಿಗೆ ಉಪದೇಶ ಕೊಡುವ ಹಕ್ಕು ಅವನಿಗಿಲ್ಲ. ತನ್ನ ಬದುಕಿನ ಹಳೆಯ ಪುಟಗಳನ್ನು ತಿರುವಿ ನೋಡಿದರೆ ಎಲ್ಲವೂ ಎಷ್ಟು ಬೇಗ ಕಳೆದು ಹೋಯಿತಲ್ಲಾ ಎಂದು ಅನಿಸುತ್ತದೆ. ಡೆಲಿವರಿ ರೂಮ್್ನ ಮುಂದಿರುವ ಬೆಂಚಲ್ಲಿ ಕಾದು ಕುಳಿತ ಆ ಸಂಜೆ. ಆಸ್ಪತ್ರೆಯಲ್ಲಿನ ಫಿನಾಯಿಲ್ ವಾಸನೆಗೆ ಜಿಡ್ಡು ಕಟ್ಟಿದ ಮೂಗು...ರಾತ್ರಿ ಒಂದೂವರೆ ಗಂಟೆಯ ಹೊತ್ತಿಗೆ ನಿದ್ದೆ ತೂಕಡಿಸುತ್ತಿದ್ದಂತೆ ಮಗುವಿನ ಅಳು.. .ನಾನು ಅಪ್ಪನಾಗಿ ಬಿಟ್ಟೆ! ಆಸ್ಪತ್ರೆಯ ಕೆಟ್ಟ ವಾಸನೆಗೆ ಒಣಗಿದ ಮೂಗಿಗೆ ಬೇಬಿ ಪೌಡರ್್ನ ಘಮಘಮ. ಮುದ್ದಾದ ಹೆಣ್ಮಗು ನನ್ನಾಕೆಯ ಬಳಿ ಮಲಗಿದ್ದಳು. ಮುದ್ದು ಮುದ್ದಾಗಿದ್ದ ಅವಳ ಪುಟ್ಟ ಕೆನ್ನೆಗೆ ಚುಂಬಿಸುತ್ತಾ ಅಮ್ಮೀ ಅಂತಾ ಕರೆದಿದ್ದೆ. ಅವಳ ಬಾಲ್ಯದೊಂದಿಗೆ ನನ್ನ ಯೌವನ ಕರಗಿತು. ರಾತ್ರಿಯೆಲ್ಲಾ ಕಥೆ ಹೇಳುವಂತೆ ಕಾಡಿಸಿ ನನ್ನೆದೆಯಲ್ಲಿ ಬೆಚ್ಚನೆ ಮಲಗಿ ನಿದ್ದೆ ಮಾಡಿದ್ದು, ಮಡಿಲಲ್ಲಿ ಕುಳಿತು ಉಚ್ಚೆ ಹೊಯ್ದಾಗ ನನಗಾದ ಬೆಚ್ಚನೆಯ ಅನುಭವ...ಮಾತಿಗೆ ನಿಲುಕದ್ದು. ನಾನು ಏನು ಹೇಳಿದರೂ ಹೂಂ ಅನ್ನುವ ನನ್ನ ಹುಡುಗಿ ಬೆಳೆಯುತ್ತಾ ಬಂದಂತೆ ಆಕೆಯ ಆಸೆಗಳ ಪಟ್ಟಿಯೂ ಬೆಳೆಯುತ್ತಾ ಹೋಯಿತು. ಎಲ್ಲದಕ್ಕೂ ನಾನು ಹೂಂ ಅಂದೆ. ಅವಳು ಹಾರುವ ಚಿಟ್ಟೆಯಾದಳು. ಅವಳನ್ನು ಹಿಡಿಯ ಹೊರಟರೆ ನನಗೆ ದಕ್ಕಿದ್ದು ಅದರ ಪುಟ್ಟ ರೆಕ್ಕೆಯ ಬಣ್ಣ ಮಾತ್ರ...&lt;br /&gt;&lt;br /&gt;ಅವಳ ಬಣ್ಣದ ಲೋಕದಲ್ಲಿ ನಾನು ಬರೀ ಕುಂಚ ಅದ್ದಿ ತೆಗೆಯುವ ನೀರು. ವಿವಿಧ ಬಣ್ಣಗಳು ನನ್ನೊಡಲನ್ನು ಸೇರಿದ ನಾನು ರಂಗೀಲ. ಕಾಮನ ಬಿಲ್ಲು ಯಾಕೆ ಬಾಗುತ್ತೆ ಅಂತಾ ಪ್ರಶ್ನೆ ಕೇಳುತ್ತಿದ್ದವಳು ಕಾಮನ ಬಿಲ್ಲನ್ನು ಹಿಡಿಯ ಹೊರಟಿದ್ದಳು. ಅಪ್ಪಾ...ನಾನೂ ನಿನ್ನೊಂದಿಗೆ ಬರುತ್ತೇನೆ ಎಂದು ರಚ್ಚೆ ಹಿಡಿಯುತ್ತಿದ್ದ ಬಾಲೆ, ನಾನೇ ಹೋಗಿ ಬರ್ತೀನಿ ಅಂತಾಳೆ. ನನ್ನ ಕಿರುಬೆರಳು ಹಿಡಿಯುತ್ತಿದ್ದ ಅವಳ ಕೈಗಳ ಮದರಂಗಿ ಕೆಂಪಾಗಿದೆ. ಬೈತಲೆ ತೆಗೆದು ಬಾಚಿ ಎರಡು ಜಡೆ ಹಾಕಿ ಕಣ್ಣಿಗೆ ಕಾಡಿಗೆ ತೀಡುತ್ತಿದ್ದ ಅವಳ ಮುದ್ದು ಕಂಗಳಲ್ಲಿ ನೀರು ಜಿನುಗುತ್ತಿದ್ದೆ. ಡ್ಯಾಡಿ...ಎಂದು ನನ್ನ ಎದೆಗೊರಗಿ ಅಳುವಾಗ, ನನ್ನ ಅಳುವನ್ನು ನುಂಗಿದ್ದೇನೆ. ಅವಳು ಕೈಯನ್ನು ಗಟ್ಟಿಯಾಗಿ ಹಿಡಿದು ಕೊಂಡು ಅವ ಹೆಜ್ಜೆ ಹಾಕುವಾಗ ಅವಳ ಗೆಜ್ಜೆಯ ನಾದಕ್ಕೆ ನನ್ನೆದೆಯು ಕಂಪಿಸುತ್ತದೆ. ಸಪ್ತಪದಿ ತುಳಿದು ಆಕೆ ಹೊರಟು ನಿಂತಿದ್ದಾಳೆ. ಮುಂದಿನ ಆಷಾಡ ಬರುವ ವರೆಗೆ ನನ್ನ ಜೀವ ಬಿಗಿಹಿಡಿದಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5855586003669879351?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5855586003669879351/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5855586003669879351' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5855586003669879351'/><link rel='self' type='application/atom+xml' href='http://www.blogger.com/feeds/4320259625062903049/posts/default/5855586003669879351'/><link rel='alternate' type='text/html' href='http://anuraaga.blogspot.com/2011/03/blog-post_25.html' title='ಅಪ್ಪನ ಮನದಲ್ಲೊಮ್ಮೆ ಇಣುಕಿ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-9076049064166450736</id><published>2011-03-23T08:44:00.000-07:00</published><updated>2011-03-23T08:44:18.162-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ನಿದ್ದೆ'/><title type='text'>ಹಳೇ ನಿದ್ರೆ ಪುರಾಣ...</title><content type='html'>&lt;b&gt;ಇ&lt;/b&gt;ತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ!&lt;br /&gt;&lt;br /&gt;ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇವೇಗೌಡ್ರನ್ನು ನೋಡಿ...ಇನ್ನು ವಿಧಾನಸಭೆ, ಲೋಕ ಸಭಾ ಕಲಾಪದ ನಡುವೆ ಗಡದ್ದಾಗಿ ನಿದ್ದೆ ಹೋಗುವ ಮಂದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ನಿದ್ದೆ ಅದೊಂದು ಸುಖ, ಭಾಗ್ಯ...ಅದು ಎಲ್ಲರಿಗೂ ಒಲಿಯುವುದಿಲ್ಲ. ನನಗಂತೂ ನಿದ್ದೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಕಣ್ರೀ..ನಾನು ಪಾಪುವಾಗಿದ್ದಾಗ ನಿದ್ದೆ ಮಾಡ್ತಾನೇ ಇರ್ತಿಲ್ವಂತೆ. ಹಾಗಂತ ರಾತ್ರಿ ವೇಳೆ ರಂಪಾಟ ಮಾಡಿ ಅಮ್ಮನ ನಿದ್ದೆಯನ್ನೂ ಕೆಡಿಸುತ್ತಿರಲಿಲ್ಲ. ಸುಮ್ಮನೆ ಕಣ್ಣು ಬಿಟ್ಟು ನೋಡ್ತಾ ಇರ್ತಿದ್ದೆ ಅಂತಾ ಅಮ್ಮ ಹೇಳ್ತಿದ್ರು. ಪಾಪುವಾಗಿರುವಾಗ ನಾನು ತುಂಬಾ ಪಾಪ, ಕೋಪನೇ ಬರ್ತಿರ್ಲಿಲ್ಲ ಅಮ್ಮ ಹೇಳ್ತಾರೆ.(ಈವಾಗ ನಾನು ಹಾಗಿಲ್ಲ :)) &lt;br /&gt;&lt;br /&gt;ಶಾಲೆಗೆ ಹೋಗುವ ಸಮಯಲ್ಲೂ ಹಾಗೆ, ಬೆಳಗ್ಗೆ ಬೇಗನೆ ಏಳ್ತಾ ಇದ್ದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ನನಗಿತ್ತು. ಆದ್ರೆ ಕ್ಲಾಸಿನಲ್ಲಿ ಬೋರ್ ಹೊಡೆಯೋಕೆ ಶುರುವಾದರೆ ಸಾಕು ನಾನು ನಿದ್ರಾದೇವಿಯ ಧ್ಯಾನದಲ್ಲಿ ಮುಳುಗುತ್ತಿತ್ತೆ. ಸಾಮಾಜಿಕ ಅಧ್ಯಯನ ಪಾಠ ಮಾಡುತ್ತಿದ್ದರೆ ನನಗೆ ಜೋರು ನಿದ್ದೆ, ಆದ್ರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುತ್ತಿದ್ದೆ ಎಂಬ ಕಾರಣಕ್ಕೆ ನಿದ್ದೆ ಮಾಡಿದ್ರೂ ಟೀಚರ್ ಏನೂ ಹೇಳ್ತಿರಲಿಲ್ಲ. ಮನೆಯಲ್ಲಿಯೂ ಹಾಗೇನೇ..ಟಿವಿ ನೋಡ್ತಿದ್ರೆ ನಿದ್ದೆ ಹತ್ತಿರ ಸುಳಿಯಲ್ಲ, ಹೋಗಿ ಪಾಠ ಪುಸ್ತಕ ತೆರೆದರೆ ಸಾಕು ನಿದ್ದೆ ಹಾಜರ್. ನಾನು ಪರೀಕ್ಷೆ ಬಂದಾಗ ಮಾತ್ರ ಓದುವ ವಿದ್ಯಾರ್ಥಿಯಾಗಿದ್ದರಿಂದ ಅದಕ್ಕಿಂತ ಮುಂಚೆ ಎಷ್ಟೇ ಓದಿದರೂ ತಲೆಗೆ ಹತ್ತುತ್ತಿರಲಿಲ್ಲ. ಟೀವಿಯಲ್ಲಿರುವ ಎಲ್ಲಾ ಜಾಹೀರಾತುಗಳು ಬಾಯಿಪಾಠ ಬರುತ್ತಿತ್ತು. ಅದೇ ವೇಳೆ ಪದ್ಯವನ್ನು ಬಾಯಿಪಾಠ ಮಾಡಲು ಕಷ್ಟಪಡುತ್ತಿದ್ದೆ. &lt;br /&gt;&lt;br /&gt;ದಿನ ದಿನದ ಪಾಠವನ್ನು ಓದಿಕೋ, ಟೈಂ ಟೇಬಲ್ ಮಾಡಿ ಓದು ಅಂತಾ ಅಕ್ಕ ಉಪದೇಶ ಕೊಡುತ್ತಿದ್ದರೂ ಟೈಂ ಟೇಬಲ್ ಮಾತ್ರ ಸಿದ್ಧವಾಗುತ್ತಿತ್ತೇ ಹೊರತು ಬೇರೇನೂ ಬೆಳವಣಿಗೆ ಕಾಣುತ್ತಿರಲಿಲ್ಲ. ಪರೀಕ್ಷೆಯ ಮುನ್ನಾ ದಿನ ಕಣ್ಣಿಗೆ ನೀರು ಹಾಕಿ, ಟಬ್್ನಲ್ಲಿ ನೀರಿಟ್ಟು ಅದರಲ್ಲಿ ಕಾಲು ಮುಳುಗಿಸಿ ನಿದ್ದೆ ಬಾರದಂತೆ ಕಸರತ್ತು ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ತಮಾಷೆಯೆಂದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬ ಲೇಖನವನ್ನು ನಾನು ಆವಾಗ ನಮ್ಮೂರಿನ ಪತ್ರಿಕೆಗೆ ಬರೆಯುತ್ತಿದ್ದೆ. ಅಕ್ಕ, ಪರೀಕ್ಷೆಯ ಮುನ್ನಾ ದಿನ ಗಡದ್ದಾಗಿ ನಿದ್ದೆ ಹೋಗುತ್ತಿರುವುದನ್ನು ಕಂಡರೆ ನನಗೆ ಹೊಟ್ಟೆಉರಿಯುತ್ತಿತ್ತು. ಹೇಗೋ ಹೈಸ್ಕೂಲ್ ಮುಗಿಸಿ ಪ್ಲಸ್ ಟು ಕ್ಲಾಸಿನಲ್ಲಾದರೂ ನಿದ್ದೆ ಮಾಡಬಾರದೆಂದು ನಿರ್ಧರಿಸಿದೆ. ಆದರೆ, ಅಲ್ಲಿಯೂ ನಿದ್ರಾ ದೇವಿ ನನ್ನನ್ನು ಬಿಡಲಿಲ್ಲ. ಫಿಸಿಕ್ಸ್ ಪಿರಿಯಡ್್ನಲ್ಲಿ ನನಗೆ ಜೋರು ನಿದ್ದೆ ಬರುತ್ತಿತ್ತು. ಹಿಟ್ಲರ್ ಎಂದು ಕರೆಯಲ್ಪಡುವ ನಮ್ಮ ಫಿಸಿಕ್ಸ್ ಸರ್್ಗೆ ನಾನು ನಿದ್ದೆ ಮಾಡುವುದನ್ನು ನೋಡಿದ್ರೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಅವರು ಚಾಕ್ ಪೀಸ್ ಬಿಸಾಡುತ್ತಿದ್ದರು. ಅದು ಹೆಚ್ಚಾಗಿ ನನ್ನ ಹಿಂದಿನ ಬೆಂಚಲ್ಲಿ ಕುಳಿತಿರುವ ಹುಡುಗಿಯ ತಲೆಗೇ ಬೀಳುತ್ತಿತ್ತು. ನಾನು ಶತಾಯಗತಾಯ ಪ್ರಯತ್ನಿಸಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗ್ತಿರಲಿಲ್ಲ. ಅದಕ್ಕಾಗಿ ನನ್ನ ಪಕ್ಕ ಕುಳಿತುಕೊಳ್ಳುವ ಗೆಳತಿಯಲ್ಲಿ ಹೇಳಿದ್ದೆ, ನನಗೆ ನಿದ್ದೆ ಬಂದಾಗ ಜೋರಾಗಿ ಪಿಂಚ್ ಮಾಡು ಎಂದು. ಅವಳು ಪಿಂಚ್ ಮಾಡಿದಾಗ ಮಾತ್ರ ನಿದ್ದೆ ಮಾಯ, ಮತ್ತೆ ಅದು ಪ್ರತ್ಯಕ್ಷವಾಗಿ ನನ್ನನ್ನು ಕನಸಿನ ಲೋಕದಲ್ಲಿ ತೇಲಿಸುತ್ತಿತ್ತು.  ಕಣ್ಮುಚ್ಚಿದರೆ ಸಾಕು ಕನಸು ಕಾಣುವ ವ್ಯಕ್ತಿ ನಾನಾಗಿದ್ದರಿಂದ ಪಾಠದ ವೇಳೆಯಲ್ಲೂ  ನನ್ನ ಕನಸುಗಳಿಗೆ ತೊಂದರೆಯಾಗಿರಲಿಲ್ಲ. ಕ್ಲಾಸಿನಲ್ಲಿ ಗಡದ್ದಾಗಿ ನಿದ್ದೆ ಮಾಡಿರುವ ಕಾರಣ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.&lt;br /&gt;&lt;br /&gt;ಮತ್ತೆ ನಿದ್ದೆ ಕಾಟ ಕೊಟ್ಟದ್ದು ಕಾಲೇಜಿನಲ್ಲಿ. ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ ಸಾಕು, ನಾನು ಆರಾಮವಾಗಿ ನಿದ್ದೆ ಮಾಡುತ್ತಿದ್ದೆ. ಶಾಲಾ ದಿನಗಳಲ್ಲಿ ಪಾಠ ಮಾಡುವಾಗ ನಿದ್ದೆ ಮಾಡಿ ಸುಮಾರು 12 ವರ್ಷಗಳ ಅನುಭವವಿದ್ದ ನನಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಣ್ಣು ಮುಚ್ಚದೆಯೇ ನಿದ್ದೆ ಮಾಡುವುದು ಹೇಗೆ ಎಂಬ ವಿದ್ಯೆ ಕರಗತವಾಗಿತ್ತು. ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಿದ್ದರೆ ನಾನಿಲ್ಲಿ ಕನಸು ಕಾಣುತ್ತಿದ್ದೆ. ಅದೂ ಅಂತಾ ಇಂತಾ ಕನಸು ಅಲ್ಲಾರೀ...ಮಹಾನ್ ವ್ಯಕ್ತಿಗಳನ್ನು ಇಂಟರ್್ವ್ಯೂ ಮಾಡುವುದು, ಮಿಸೈಲ್ ತಯಾರಿಕೆ, ಬಾಹ್ಯಾಕಾಶ ಯಾನ ಹೀಗೆ ದೊಡ್ಡ ದೊಡ್ಡ ಕನಸುಗಳೇ ನನಗೆ ಬೀಳುತ್ತಿತ್ತು. ಯಾವುದಾದರೂ ಕಥೆ, ಸಿನಿಮಾ, ಕ್ರಿಕೆಟ್ ನೋಡಿದರೆ ಅದರಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಕನಸಿನಲ್ಲೇ ಮಾತಾಡಿ ಬರುತ್ತಿದ್ದೆ. ಕನಸಿನಿಂದ ಎಚ್ಚರವಾದಾಗ ಅದೇ ಹಳೇ ಬೋರ್ಡು, ಅದೇ ಟೀಚರ್...&lt;br /&gt;ಪಾಠದೊಂದಿಗೆ ನೋಟ್ಸ್ ಕೊಟ್ಟರೆ ಬರೆಯುತ್ತಾ ಬರೆಯುತ್ತಾ ಅಕ್ಷರಗಳು ಎಲ್ಲೋ ಹೋಗಿ ಬಿಡುತ್ತಿದ್ದವು. ಕೆಲವೊಮ್ಮೆ ನೋಟ್ಸ್್ನ ಪೇಜ್ ದಾಟಿ ಡೆಸ್ಕ್ ಮೇಲೂ ಬರೆದದ್ದು ಇದೆ. ಮರುದಿನ ಆ ಪುಟ ನೋಡಿದರೆ ಇದನ್ನು ಬರೆದದ್ದು ನಾನೇನಾ? ಅಂತಾ ಗಾಬರಿಯಾಗುತ್ತಿತ್ತು. ಇಂಜಿನಿಯರಿಂಗ್ ಅಲ್ವಾ ಹೇಗಾದರೂ ಪಾಸ್ ಆಗ್ಬೇಕು ಅಂತಾ ಓದಲು ಕುಳಿತರೆ ಮತ್ತೆ ಅದೇ ನಿದ್ದೆ. ಅಪ್ಪ ನನ್ನನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಬೇಕು ಅಂತಾ ಹೇಳಿ ಮಲಗಿದರೆ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಅಪ್ಪ ರಾಗ ಎಳೆಯಬೇಕು. ಅಲರಾಂ ಇಟ್ಟು ಮಲಗಿ ಕೊಂಡರೂ ಅದೇ ಕಥೆ. ಅದು ಕಿರುಚ ತೊಡಗಿದೊಡನೆ ಅದರ ತಲೆಗೆ ಬಡಿದು ಮತ್ತೆ ಗಡದ್ದಾಗಿ ನಿದ್ದೆ ಹೋಗುತ್ತಿದ್ದೆ. ನಿಜ ಹೇಳಲಾ...ಅಲರಾಂ ಆಫ್ ಆದ್ಮೇಲೆ ಚೆನ್ನಾಗಿ ನಿದ್ದೆ ಬರುತ್ತಿತ್ತು. ಆಮೇಲೆ ಎದ್ದು ಪುಸ್ತಕ ಹಿಡಿದು ಕೂತರೆ ನಾಲ್ಕು ಪೇಜ್ ಓದುವಷ್ಟರೊಳಗೆ ನಿದ್ದೆ ಬಂದು ಬಿಡ್ತಿತ್ತು. ನಾನು ಒಂದು ಗಂಟೆಯ ಮೊದಲು ನೋಡಿದಾಗಲೂ ಇದೇ ಪೇಜ್ ಇತ್ತು ಅಂತಾ ಅಪ್ಪ ಹೇಳಿದಾಗಲೇ ಎಚ್ಚರವಾಗುತ್ತಿತ್ತು. ಟೇಬಲ್ ಮೇಲೆ ಬಿಡಿಸಿಟ್ಟ ಪುಸ್ತಕವೇ ತಲೆದಿಂಬು ಆದದ್ದೂ ಇದೆ. ಇಂಜಿನಿಯರಿಂಗ್ ಕಲಿಯುವಾಗ ಅನ್್ಲೀಶ್್ಡ್ ಜಾವಾ ಎಂಬ ಪಠ್ಯ ಪುಸ್ತಕ ನನ್ನ ಫೇವರಿಟ್. ಅದು ತುಂಬಾ ದಪ್ಪವಿದ್ದ ಕಾರಣ ಅದರ ಮೇಲೆ ತಲೆಯಿಟ್ಟರೆ ಬೇಗ ನಿದ್ದೆ ಬರುತ್ತಿತ್ತು. ನಿದ್ದೆಯನ್ನೋಡಿಸಲು ತಲೆಗೆ ಸ್ನಾನ ಮಾಡಿದ್ದಾಯ್ತು, ಕಾಫಿ ಕುಡಿದದ್ದೂ ಆಯ್ತು..ಏನೆಲ್ಲಾ ಕಸರತ್ತು ಮಾಡಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಕೆಲವೊಮ್ಮೆ ಎಕ್ಸಾಂ ಹಾಲ್್ನಲ್ಲಿಯೂ ನಿದ್ದೆ ಬರುತ್ತಿತ್ತು. ಅಂತೂ ಇಂತೂ ನೀನಿಲ್ಲದೆ ನಾನಿಲ್ಲ ಎಂದು ಹೇಳುವ ನಿದ್ದೆಯನ್ನು ಸ್ವಲ್ಪ ದೂರ ಮಾಡಿ ಇಂಜಿನಿಯರಿಂಗ್ ಮುಗಿಸಿದ್ದಾಯ್ತು.&lt;br /&gt;&lt;br /&gt;&lt;br /&gt;ಇನ್ನು ಕೆಲಸ. ಯಾವಾಗ ನಾನು ಕೆಲಸಕ್ಕೆ ಸೇರಿದನೋ ನಿದ್ರಾದೇವಿ ನನ್ನಿಂದ ದೂರವಾಗತೊಡಗಿದಳು. ಚೆನ್ನೈಯಿಂದ ಊರಿಗೆ ಬರಬೇಕಾದರೆ ರಾತ್ರಿ ಹೊತ್ತಿನಲ್ಲಿ ಯಾತ್ರೆ. ಟ್ರೈನ್್ನಲ್ಲಿ ನಿದ್ದೆ ಮಾಡದೆಯೇ ಸುರಕ್ಷಿತವಾಗಿ ಮನೆಗೆ ತಲುಪಿತ್ತಿದ್ದೆ. ಟ್ರೈನ್್ನಲ್ಲಿ ನಿದ್ದೆ ಮಾಡ್ಬಾದ್ರು...ಎಂಬ ಅಮ್ಮನ ಆಜ್ಞೆ, ಆದ್ದರಿಂದ ಸ್ಲೀಪರ್್ನಲ್ಲಿ ಮಲಗಿದ್ರೂ ಕಣ್ಣು ತೆರೆದೇ ಮಗಲುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ರಾತ್ರಿ ಪಾಳಿ ಬೇರೆ. ಆದ್ರೂ ಬೆಳಗ್ಗಿನ ಹೊತ್ತು ನಿದ್ದೆ ಸ್ಕಿಪ್ ಮಾಡಿ ಡೆಡ್್ಲೈನ್್ಗೆ ಲೇಖನ ಸಬ್್ಮಿಟ್ ಮಾಡುವ ಗಡಿಬಿಡಿ. ಕೆಲವೊಮ್ಮೆ ಡೆಡ್್ಲೈನ್ ಮೀಟ್ ಮಾಡಲಿರುವ ಒತ್ತಡದಿಂದ ನಿದ್ದೆ ಹತ್ತಿರ ಸುಳಿಯುವುದೇ ಇಲ್ಲ. ಹೇಗಾದರೂ ನಿದ್ದೆ ಮಾಡಬೇಕಲ್ವಾ..ಅದಕ್ಕೆ ಯಾವುದಾದರೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತೇನೆ. ಅದೂ ಥ್ರಿಲ್ಲಿಂಗ್ ಆಗಿದ್ದರೆ, ನಿದ್ದೆಯೂ ದೂರ ದೂರ...&lt;br /&gt;&lt;br /&gt;ಅಬ್ಬಾ..ಈವಾಗ ನಿದ್ದೆ ಬೇಕು, ನಿದ್ದೆ ಬರ್ತಿಲ್ಲಾ..ಈ ಮೊದಲು ನಿದ್ದೆಯೇ ದೂರ ಹೋಗು ಎಂದಾಗ ಅದು ನನ್ನಗಂಟಿಕೊಂಡಿತ್ತು. ಎಂಥಾ ವಿಪರ್ಯಾಸ ಅಲ್ವಾ. ಆ ಶಾಲಾ ದಿನಗಳಲ್ಲಿ ನಾನು ಮಾಡಿದ ನಿದ್ದೆಯ ಗಮ್ಮತ್ತನ್ನು ನೆನೆಸಿಕೊಂಡಾಗ ಏನೋ ಒಂಥರಾ ಸುಖ. "ತರಗತಿಯಲ್ಲಿ ನಿದ್ದೆ ಹೋಗುವವರು ನಿಜವಾಗಿಯೂ ಭಾಗ್ಯವಂತರು, ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ನನ್ನಂತವರನ್ನು ಉದ್ದೇಶಿಸಿಯೇ ಹೇಳಿದ್ದು ಅಂತಾ ಅನಿಸುತ್ತಿದೆ.ಆ ನಿದ್ದೆಯ ಗಮ್ಮತ್ತೇ ಅಂತದ್ದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-9076049064166450736?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/9076049064166450736/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=9076049064166450736' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/9076049064166450736'/><link rel='self' type='application/atom+xml' href='http://www.blogger.com/feeds/4320259625062903049/posts/default/9076049064166450736'/><link rel='alternate' type='text/html' href='http://anuraaga.blogspot.com/2011/03/blog-post_23.html' title='ಹಳೇ ನಿದ್ರೆ ಪುರಾಣ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-4257347772904832818</id><published>2011-03-07T20:40:00.000-08:00</published><updated>2011-03-07T20:40:13.801-08:00</updated><category scheme='http://www.blogger.com/atom/ns#' term='ಲೇಖನ'/><category scheme='http://www.blogger.com/atom/ns#' term='ಮಹಿಳಾ ದಿನಾಚರಣೆ'/><title type='text'>ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ...</title><content type='html'>&lt;b&gt;ದಿ&lt;/b&gt;ನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ.  ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಇದು. &lt;br /&gt;&lt;br /&gt;ಮಹಿಳಾ ದಿನಾಚರಣೆ ಎಂದ ಕೂಡಲೇ ಮಹಿಳೆಯ ಬಗ್ಗೆ ಬರೆಯಬೇಕಲ್ವಾ. ಇರಲಿ, ಮಹಿಳೆಯ ಬಗ್ಗೆ ಓದುವಾಗ ನಾನು ಗಮನಿಸಿದ್ದು ಅದರಲ್ಲಿ ಹೆಚ್ಚಾಗಿ ಸ್ತ್ರೀ ಶೋಷಣೆಯ ಬಗ್ಗೆಯೇ ಪುಟಗಟ್ಟಲೆ ವಿವರಣೆ ನೀಡಲಾಗುತ್ತದೆ. ಯಾವುದೇ ಮಹಿಳಾ ವಿಚಾರಗೋಷ್ಠಿಗೆ ಹೋಗಿ, ಅಲ್ಲಿ ಕೇಳುವುದೇ ಅಂದಿನ ಕಾಲದಿಂದ ಇಂದಿನ ಕಾಲದ ವರೆಗೆ ಪುರುಷರು ದಬ್ಬಾಳಿಕೆ ನಡೆಸುತ್ತಾ ಇದ್ದಾರೆ. ಪುರುಷರು ಹಾಗೆ ಮಾಡಿದ್ರು, ಹೀಗೆ ಮಾಡಿದ್ರು... ಸ್ತ್ರೀ ಶೋಷಣೆ!...&lt;br /&gt;ಸ್ತ್ರೀ ಎಂಬ ಪದ ಹೆಡ್್ಲೈನ್ ಆಗಿದ್ದರೆ ಅಲ್ಲಿ ಶೋಷಣೆ ಕಿಕ್ಕರ್. ಹಾಗಂತ ಇಂದಿನ ಕಾಲದಲ್ಲಿ ಸ್ತ್ರೀ ಶೋಷಣೆ ನಡೆಯುತ್ತಿಲ್ಲ ಎಂದು ನಾನು ಹೇಳಲ್ಲ. ಶೋಷಣೆ, ದಬ್ಬಾಳಿಕೆಗಳಿಗೆ ಎಂದೂ ಬ್ರೇಕ್ ಬಿದ್ದಿಲ್ಲ. ಆದರೆ ಬೇಜಾರಿನ ವಿಷ್ಯ ಏನಪ್ಪಾ ಅಂದ್ರೆ ಇಂತಹಾ ಕಥೆಗಳನ್ನು ಹೇಳುತ್ತಾ ಕೆಲವರು ತಮ್ಮನ್ನು ತಾವೇ ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಿಜ ಹೇಳಬೇಕಾದ್ರೆ ಓರ್ವ 'ಸ್ತ್ರೀವಾದಿ' ಎಂದರೆ ಪುರುಷರನ್ನು ದೂರುವ ಮೂಲಕ, ಆತನನ್ನು ಜರೆಯುವ ಮೂಲಕ ಸ್ತ್ರೀಯನ್ನೇ ಹೊಗಳುವ ಮೂಲಕ ಪಟ್ಟಗಿಟ್ಟಿಸಿಕೊಳ್ಳುವುದಲ್ಲ. ದಬ್ಬಾಳಿಕೆ ಮಹಿಳೆಯಿಂದಲೂ ಆಗಲ್ವಾ? ವರದಕ್ಷಿಣೆ ವಿಷಯದಲ್ಲಿ ಸೊಸೆ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸಾಯುತ್ತಾಳೆ. ಅದು ಆಕೆಯ ದುರ್ವಿಧಿ. ಇಂತಹ ಸುದ್ದಿಯನ್ನೋದುವಾಗ ನನ್ನ ಮನಸ್ಸಲ್ಲಿ ಕಾಡಿದ ಪ್ರಶ್ನೆ .ಯಾವತ್ತೂ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸೊಸೆ ಮಾತ್ರ ಯಾಕೆ ಸಾಯ್ತಾಳೆ? ಅತ್ತೆ ಅಡುಗೆ ಮನೆಗೆ ಹೋದಾಗ ಸಿಡಿಯದ ಸ್ಟೌ, ಸೊಸೆ ಬಂದಾಕ್ಷಣ ಯಾಕೆ ಸಿಡಿಯುತ್ತೆ? &lt;br /&gt;&lt;br /&gt;ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸನ್ನು ಕಾಡುವುದು ಸಾಮಾನ್ಯ. ಆದಾಗ್ಯೂ, ಸಮಾಜದಲ್ಲಿ ಸ್ತ್ರೀ ಪುರಷರು ಸಮಾನರು. ಇಬ್ಬರಿಗೂ ಬದುಕುವ ಸಮಾನ ಹಕ್ಕಿದೆ, ಮಾಡಬೇಕಾದ ಕರ್ತವ್ಯಗಳ ಪಟ್ಟಿ ಒಂದೇ ರೀತಿ ಇದೆ. ಹೀಗಿರುವಾಗ ಸ್ತ್ರೀ ಪುರುಷರ ನಡುವೆ ಕಂದಕ ಯಾಕೆ? ಕೇವಲ ಹೆಣ್ಣೊಬ್ಬಳು ಸ್ತ್ರೀವಾದಿಯಾಗಬೇಕಿಂದಿಲ್ಲ. ಪುರುಷರು ಸ್ತ್ರೀ ವಾದಿಗಳಾಗಬಹುದು. ಮಹಿಳೆಯನ್ನು ಗೌರವಿಸುವ, ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿ, ಸಮಾನ ಅವಕಾಶಗಳನ್ನು ಕಲ್ಪಿಸುವವರೇ ನಿಜವಾದ ಸ್ತ್ರೀವಾದಿಗಳು. ಬಾಕಿ ಉಳಿದವರೆಲ್ಲ ಸ್ತ್ರೀ ವ್ಯಾಧಿಗಳು ಅಷ್ಟೇ...&lt;br /&gt;&lt;br /&gt;ಎಲ್ಲಾ ಶೋಷಣೆ ದಬ್ಬಾಳಿಕೆಯಿಂದ ಮುಕ್ತವಾಗಲು ಮಹಿಳೆಯರು ಮೊದಲು ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಜನೆಯಿಂದಲೇ ಇದು ಸಾಧ್ಯವಾಗಿದ್ದರೂ, ಕೆಲವೊಂದು ಮಹಿಳೆಯರು  ತನ್ನನ್ನು ತಾನೇ ಬಂಧಿಯಾಗಿರಿಸುವ ಮೂಲಕ ಮೂಲೆ ಗುಂಪಾಗುತ್ತಾರೆ.  ಇದು ಕೇವಲ ಸಾಧನೆ ಮಾಡಬೇಕೆಂದಿರುವ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದು. 'ಸ್ವಬಂಧನ 'ಕ್ಕೊಳಗಾದ ಮಹಿಳೆಯರು ಅದೆಲ್ಲಾ ನನ್ನ ಕೈಯಿಂದ ಆಗಲ್ಲ ಎಂದು ತಮ್ಮ ಮುಂದೆಯೇ ಲಕ್ಷ್ಮಣರೇಖೆ ಎಳೆದು ಕೊಂಡು ಕೂರುತ್ತಾರೆ. ಅವರು ಏನಂತಾರಪ್ಪಾ, ಇವರು ಏನಂತಾರಪ್ಪಾ ಎಂದು ಆಕೆಯ ಮನಸ್ಸಲ್ಲಿ ಭಯ. ಇಂತಹಾ ಭಯಗಳು ಸಾಮಾನ್ಯ ಇದ್ದೇ ಇರುತ್ತದೆ. ಯಾಕೆಂದರೆ ಇದು ಭಾರತ. ಇಲ್ಲಿ ಸಂಸ್ಕೃತಿಗೆ ಬೆಲೆ ಇದೆ. ಇದರರ್ಥ ಹೆಣ್ಣು ಮನಸೋಇಚ್ಛೆ ವರ್ತಿಸಬೇಕೆಂದಲ್ಲ. ಉದಾಹರಣೆಗೆ ಮಹಾನಗರದಲ್ಲಿ ಟೀಶರ್ಟ್ ಜೀನ್ಸ್ ಹಾಕಿ ಓಡಾಡುವ ಹುಡುಗಿ, ತನ್ನ ಊರಲ್ಲಿ ಸಲ್ವಾರ್ ಹಾಕಿ ಲಜ್ಜೆಯಿಂದ ನಡೆಯುತ್ತಾಳೆ. ಇದು ಭಯವಲ್ಲ, ಆಕೆ ಈ ಮೂಲಕ ಸಮಾಜವನ್ನು ಆಕೆ ಗೌರವಿಸುತ್ತಾಳೆ.  ಸಮಾಜದಲ್ಲಿ ಒಳಿತು ಕೆಡುಕು ಇದ್ದೇ ಇರುತ್ತೆ.  ಹೀಗಿರುವಾಗ ಸಾಧನೆ ಮಾಡಬೇಕೆಂದು ಹೊರಟ ಮಹಿಳೆ ಯಾವುದನ್ನೂ ಲೆಕ್ಕಿಸಬಾರದು. ನನ್ನ ವೃತ್ತಿ ಜೀವನದಲ್ಲಿ ಈವರೆಗೆ ನಾನು ಸುಮಾರು 30 ರಷ್ಟು ಸಾಧಕಿಯರನ್ನು ನಾನು ಭೇಟಿ ಮಾಡಿದ್ದೇನೆ. ಸಾಧನೆಗೆ ಅಡ್ಡಿ ಆತಂಕಗಳು ಇದ್ದೇ ಇರುತ್ತೆ, ಆದರೆ ಅದನ್ನು ನಿಭಾಯಿಸಿ ಮುಂದೆ ಬರುವುದೇ ಜೀವನ ಅಲ್ವಾ ಎಂದು ಹೇಳುವ ಅವರ ಮಾತು ಎಷ್ಟೊಂದು ಸ್ಪೂರ್ತಿದಾಯಕ ಅಲ್ವಾ? ಏನೇ ಮಾಡಿದರೂ ಸಮಾಜದಲ್ಲಿ ಕಾಲೆಳೆಯುವ ಜನ ಇದ್ದೇ ಇರುತ್ತಾರೆ. ಹಾಗಂತ ಅಂಜಿಕೆಯಿಂದಲೇ ಜೀವನ ಸಾಗಿಸಲು ಸಾಧ್ಯನಾ? ನಾವು ಸತ್ಯ, ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೆ ಅಂಜಿಕೆ ಏತಕ್ಕೆ? ಆದ್ದರಿಂದ, ಹಳೆಯದನ್ನೆಲ್ಲಾ ಮರೆತು, ಹೊಸ ದಾರಿಯಲ್ಲಿ ಚಲಿಸುವ ಪ್ರಯತ್ನ ಆಕೆಯಿಂದ ಆಗಬೇಕು, ಜತೆಗೆ ನಮ್ಮೆಲ್ಲರ ಪ್ರೋತ್ಸಾಹ ಆಕೆಗೆ ಸಿಗಬೇಕು. ಏನಂತೀರಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4257347772904832818?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4257347772904832818/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4257347772904832818' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4257347772904832818'/><link rel='self' type='application/atom+xml' href='http://www.blogger.com/feeds/4320259625062903049/posts/default/4257347772904832818'/><link rel='alternate' type='text/html' href='http://anuraaga.blogspot.com/2011/03/blog-post.html' title='ಆಕೆ &apos;ಸ್ವಬಂಧನ&apos;ದಿಂದ ಮುಕ್ತವಾಗಲಿ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-5434809124833244339</id><published>2011-02-18T07:44:00.001-08:00</published><updated>2011-02-18T07:44:35.096-08:00</updated><category scheme='http://www.blogger.com/atom/ns#' term='ಕವನ'/><title type='text'>ಬಚ್ಚಿಡಲು ಬರುವುದಿಲ್ಲ...</title><content type='html'>&lt;b&gt;ಬ&lt;/b&gt;ಚ್ಚಿಡಲು ಬರುವುದಿಲ್ಲ ನನಗೆ&lt;br /&gt;ಹಳೆಯ ಕಹಿ ನೆನಪುಗಳ&lt;br /&gt;ಮನದ ಕೋಣೆಗೆ ಸದ್ದಿಲ್ಲದೆ&lt;br /&gt;ಬರುವ ಆ ಕೆಟ್ಟ ಕನಸುಗಳ...&lt;br /&gt;&lt;br /&gt;ಮುಚ್ಚಿಡಲು ಬರುವುದಿಲ್ಲ&lt;br /&gt;ಒತ್ತರಿಸುವ ಕಂಬನಿಯ&lt;br /&gt;ಕಷ್ಟಗಳ ಸರಮಾಲೆಗಳ ನಡುವೆ&lt;br /&gt;ಬರುವ ಇಷ್ಟಗಳ ಸಿಂಚನವ....&lt;br /&gt;&lt;br /&gt;ಸುಮ್ಮನಿರುವುದಿಲ್ಲ ಮನಸು&lt;br /&gt;ಇಂದು ನಾಳಿನ ಚಿಂತೆಯಲಿ&lt;br /&gt;ವರ್ತಮಾನದ ಬೇಗುದಿಯಿದೆ&lt;br /&gt;ಉಸಿರಾಡುವ ಜೀವದಲಿ&lt;br /&gt;&lt;br /&gt;&lt;br /&gt;ಮರೆಯಲಾಗುವುದಿಲ್ಲ ಅತ್ತರೂ &lt;br /&gt;ನೋವು ನಲಿವಿನ ದಿನಗಳ&lt;br /&gt;ತೊರೆದು ಹೋಗಲಾರೆನು ಬದುಕು&lt;br /&gt;ನಾನಷ್ಟು ಹೇಡಿಯಲ್ಲ!&lt;br /&gt;&lt;br /&gt;ಸೋಲುವುದಿಲ್ಲ...ದೂರುವುದಿಲ್ಲ&lt;br /&gt;ಯಾರು ಏನೇ ಬಗೆದರೂ&lt;br /&gt;ಈ ಕ್ಷಣವು ಕ್ಷಣಿಕ ಎನ್ನುತಿರೆ ಮನ&lt;br /&gt;ಮತ್ತೆ ನಡೆವೆನು ಹೊಸ ಛಲದಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5434809124833244339?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5434809124833244339/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5434809124833244339' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5434809124833244339'/><link rel='self' type='application/atom+xml' href='http://www.blogger.com/feeds/4320259625062903049/posts/default/5434809124833244339'/><link rel='alternate' type='text/html' href='http://anuraaga.blogspot.com/2011/02/blog-post.html' title='ಬಚ್ಚಿಡಲು ಬರುವುದಿಲ್ಲ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-4995468224638109146</id><published>2011-01-20T07:20:00.000-08:00</published><updated>2011-01-20T07:20:28.666-08:00</updated><category scheme='http://www.blogger.com/atom/ns#' term='ಮಳೆ ನೀರು ಸಂಗ್ರಹ'/><category scheme='http://www.blogger.com/atom/ns#' term='ಕರ್ನಾಟಕ ಸರ್ಕಾರ'/><category scheme='http://www.blogger.com/atom/ns#' term='ಅನಿಸಿಕೆ'/><category scheme='http://www.blogger.com/atom/ns#' term='ವಿದ್ಯುತ್'/><title type='text'>ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?</title><content type='html'>&lt;b&gt;ಕ&lt;/b&gt;ರ್ನಾಟಕದಲ್ಲಿ 'ಪವರ್' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ ಆಯ್ತು. ಅದೂ ಬುರುಡೆ ಬಿಟ್ಟದ್ದೋ ಅಂತಾ ಗೊತ್ತಿಲ್ಲ :)&lt;br /&gt;ಅಲ್ಲಾ ಮಾರಾಯ್ರೆ ... ಏನೇ ಹೇಳಿ ಬುರುಡೆ ಅಥವಾ ಇನ್ಯಾವುದೇ ಬಲ್ಬ್ ಉರಿಯಲು ವಿದ್ಯುತ್ ಬೇಕಲ್ವಾ? ವಿದ್ಯುತ್ ಇಲ್ಲದಿದ್ದರೆ ಬಲ್ಬ್ ವಿಷ್ಯ ಯಾಕೆ ಬೇಕು?&lt;br /&gt;ಕರ್ನಾಟಕದಲ್ಲಿ ವಿದ್ಯುತ್್ನ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾಕೆ ವಿಫಲವಾಗುತ್ತಿದೆ? (ರಾಜ್ಯದ ರಾಜಕೀಯ ಡೊಂಬರಾಟ ವಿದ್ಯುತ್ತಿಗೇ 'ಶಾಕ್್' ನೀಡಿದೆಯೇ ಎಂಬುದು ನನ್ನ ಅನುಮಾನ)&lt;br /&gt;&lt;br /&gt;ಸದ್ಯ ಈ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೌರಶಕ್ತಿಯ ಮೊರೆ ಯಾಕೆ ಹೋಗಬಾರದು? ಇಲ್ಲಿ ಲಭ್ಯವಾಗುವಂತಹ ಸೌರಶಕ್ತಿಯನ್ನು ಸದುಪಯೋಗಿಸಿಕೊಂಡರೆ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ತನ್ನು ಪಡೆಯಬಹುದು ಎಂಬ ಯೋಚನೆ ಸರ್ಕಾರಕ್ಕೆ ಹೊಳೆದಿಲ್ಲವೇ? ಇಲ್ಲಿರುವ ಕಟ್ಟಡಗಳ ಮೇಲೆ ಸೋಲಾರ್ ಪೇನಲ್ ಹಾಕಿಸಿದ್ರೆ ಕನಿಷ್ಠ ನಿತ್ಯೋಪಯೋಗಿ ವಿದ್ಯುತ್ ಪಡೆಯಬಹುದು ಎಂಬುದರ ಬಗ್ಗೆ ಜನರು ಯಾಕೆ ಯೋಚನೆ ಮಾಡಲ್ಲ?&lt;br /&gt;&lt;br /&gt;ಇನ್ನು ನೀರಿನ ಸಮಸ್ಯೆ, ಮಳೆ ನೀರು ಅದೆಷ್ಟು ಪೋಲಾಗುತ್ತಿದೆ? ಇಲ್ಲಿ ಯಾರು ಮಳೆ ನೀರು ಸಂಗ್ರಹದತ್ತ ಗಮನ ಕೊಡುತ್ತಿಲ್ಲ ಎಂಬುದೇ ಸತ್ಯ. ಮನೆ ಅಥವಾ ಯಾವುದೇ ಕಟ್ಟಡ ನಿರ್ಮಿಸುವಾಗ ಮಳೆ ನೀರು ಸಂಗ್ರಹ ಯೋಗ್ಯವಾಗುವಂತೆ ಟ್ಯಾಂಕ್ ನಿರ್ಮಿಸಿದರೆ ಮನೆಗೆ ಬೇಕಾದ ನೀರನ್ನು ಪಡೆಯಬಹುದು ಎಂಬ ಸಾಮಾನ್ಯಜ್ಞಾನ ಜನರಿಗೆ ಇಲ್ಲವಾಯಿತೇ?. ಮಳೆ ನೀರು ಸಂಗ್ರಹದ ಬಗ್ಗೆ ಪುಟಗಟ್ಟಲೆ ಬರೆದದನ್ನು ಓದಿ, ಅದನ್ನು ಅನುಷ್ಠಾನಕ್ಕೆ ತರಲು ಜನರು ಯಾಕೆ ಹಿಂದೇಟು ಹಾಕುತ್ತಾರೆ?&lt;br /&gt;&lt;br /&gt;ನಮ್ಮೂರಲ್ಲಿ (ಕೇರಳದ ಕಾಸರಗೋಡು ಜಿಲ್ಲೆ) ನೀರು ಬೇಕಾದಷ್ಟು ಇದೆ, ಕಾಲಕ್ಕೆ ತಕ್ಕಂತೆ ಮಳೆಯೂ ಬರುತ್ತಿದೆ. ಆದರೂ ಜನರು ಇಂಗು ಗುಂಡಿಗಳನ್ನು ತೋಡಿ ಭೂಜಲ ಬತ್ತಿ ಹೋಗದಂತೆ ಕಾಪಾಡುತ್ತಾರೆ. ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಮಾಡಲಾಗುತ್ತದೆ. ನಮ್ಮ ನೆರೆಹೊರೆಯಲ್ಲೇ ಈ ತರಹ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಯವರು ಮಲ್ಟಿ ನ್ಯಾಷನಲ್ ಕಂಪೆನಿಯ ಉದ್ಯೋಗಿಗಳೋ, ಸಾಫ್ಟ್್ವೇರ್ ಇಂಜಿನಿಯರ್್ಗಳೋ ಅಲ್ಲ. ಅಬ್ಬಬ್ಬಾ ಅಂದ್ರೆ ಹತ್ತನೇ ತರಗತಿಯ ವರೆಗೆ ಓದಿದ ಸಾಮಾನ್ಯ ಕೂಲಿ ಕಾರ್ಮಿಕರು. ಇವರ ಮನೆಯಲ್ಲಿ ಮಳೆನೀರು ಸಂಗ್ರಹ ಟ್ಯಾಂಕ್್ಗಳಿವೆ, ಸೌರಶಕ್ತಿಯಿಂದ ವಿದ್ಯುತ್ ಪಡೆಯಲಾಗುತ್ತದೆ.&lt;br /&gt;&lt;br /&gt;ನಮ್ಮ ನೆರೆ ರಾಜ್ಯಗಳನ್ನೇ ನೋಡಿ...ಕೇರಳ ಮತ್ತು ತಮಿಳುನಾಡಿನಲ್ಲಿ ಮಳೆನೀರು ಸಂಗ್ರಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದೀಗ ಚೆನ್ನೈಯಲ್ಲಿ ಮಳೆ ನೀರು ಸಂಗ್ರಹ ಮಾಡುವ ಕಟ್ಟಡಗಳು ಸಾಕಷ್ಟು ಇವೆ. ಆದರೆ ಕರ್ನಾಟಕ ಇಂಥಹ ವ್ಯವಸ್ಥೆಗಳಿಗೆ ಕೈ ಹಾಕುವುದಿಲ್ಲ ಯಾಕೆ? ಎಂಬುದು ನನ್ನ ಪ್ರಶ್ನೆ.&lt;br /&gt;&lt;br /&gt;ಅದೇ ವೇಳೆ ಗುಜರಾತ್್ನಲ್ಲಿ ಮೋದಿ ಸರ್ಕಾರ ಸಾಗರದ ಅಲೆಯಿಂದ ವಿದ್ಯುತ್ ಉತ್ಪಾದಿಸಲು ಹೊರಟು ನಿಂತಿದೆ. ಇಂಥಹ ವಿಚಾರಗಳು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾಕೆ ಹೊಳೆಯುವುದಿಲ್ಲ? ಇಲ್ಲಿನ ಜನತೆಯೇ ಉತ್ತರಿಸಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4995468224638109146?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4995468224638109146/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4995468224638109146' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4995468224638109146'/><link rel='self' type='application/atom+xml' href='http://www.blogger.com/feeds/4320259625062903049/posts/default/4995468224638109146'/><link rel='alternate' type='text/html' href='http://anuraaga.blogspot.com/2011/01/blog-post.html' title='ಕರ್ನಾಟಕ ಸರ್ಕಾರ ಯಾಕೆ &apos;ಥಿಂಕ್&apos; ಮಾಡಲ್ಲ?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-1712417306353473984</id><published>2010-12-30T04:19:00.000-08:00</published><updated>2010-12-30T04:19:24.259-08:00</updated><category scheme='http://www.blogger.com/atom/ns#' term='ಹೊಸ ವರುಷ'/><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ರೆಸಲ್ಯೂಷನ್'/><category scheme='http://www.blogger.com/atom/ns#' term='ನೆನಪು'/><title type='text'>ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....</title><content type='html'>&lt;b&gt;ಮ&lt;/b&gt;ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು.&lt;br /&gt;ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು. &lt;br /&gt;ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ.&lt;br /&gt;&lt;br /&gt;ಅವುಗಳು...&lt;br /&gt;1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ)&lt;br /&gt;2. ಟ್ರಾಫಿಕ್ ಜಾಮ್್ನಲ್ಲಿ ಒದ್ದಾಡಿ ಸುಸ್ತಾದಾಗ ಫ್ಲ್ಲಾಟ್್ಫಾರಂನಲ್ಲಿ ಗಾಡಿ ಓಡಿಸಿಕೊಂಡು ಬಂದದ್ದು (ಇನ್ಯಾರೋ ಫ್ಲಾಟ್್ಫಾರಂ ಮೇಲೆ ಗಾಡಿ ಓಡಿಸಿದ್ರೆ ನಂಗೆ ಕೋಪ ಬರುತ್ತೆ)&lt;br /&gt;3. ನಂದಿಬೆಟ್ಟದ 'ಡೇಂಜರ್್' ಎಂದು ಬರೆದಿರುವ ಪ್ರದೇಶದಲ್ಲಿ ಹೋಗಿ ಫೋಟೋ ತೆಗೆಸಿಕೊಂಡದ್ದು ( ಭಯ ಆದ್ರೂ ಚಾಲೆಂಜ್ ಹಾಕಿದ ಕಾರಣ ಮಾತ್ರ ಅಲ್ಲಿಗೆ ಹೋದದ್ದು)&lt;br /&gt;4. ನಮ್ಮ ರೂಮಿಗೆ ಇಲಿ ಬಂದಾಗ ಪಕ್ಕದ ರೂಮ್್ಗೆ ಇಲಿಯನ್ನು ಓಡಿಸಿ ಗಡದ್ದಾಗಿ ನಿದ್ದೆ ಮಾಡಿದ್ದು.&lt;br /&gt;5. ನೀರು ಕಂಡರೆ ಭಯ. ಅಂತದರಲ್ಲಿ ಪೆಡಲ್ ತುಳಿಯುತ್ತಾ ಬೋಟಿಂಗ್ ಮಾಡಿದ್ದು.&lt;br /&gt;6.ಮೊದಲ ಬಾರಿ ನೂಡಲ್ಸ್  (ರುಚಿಕರವಾಗಿ) ತಯಾರಿಸಿದ್ದು. &lt;br /&gt;7. ಫ್ರೆಂಡ್್ನಿಂದ ಮ್ಯೂಸಿಕಲ್ ಕಾರ್ (ಆಟಿಕೆ) ಗಿಫ್ಟ್ ಪಡೆದುಕೊಂಡದ್ದು.&lt;br /&gt;8. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ನನ್ನ ಕನ್ನಡ ಜ್ಞಾನ ಹೆಚ್ಚಿಸಿಕೊಂಡದ್ದು.&lt;br /&gt;9. ಹಲವಾರು ಮಹಿಳೆಯರ ಸಂದರ್ಶನ ನಡೆಸುವ ಮೂಲಕ ಅನುಭವ ಹೆಚ್ಚಿಸಿಕೊಂಡದ್ದು.&lt;br /&gt;10. ಜಾರಿ ಬಿದ್ದು ಕಾಲು ಗಾಯ ಮಾಡಿಕೊಂಡಾಗ, ಕಷ್ಟ ಎನಿಸಿದರೂ ರೂಮ್್ಮೇಟ್ಸ್ ಜೊತೆಗೆ ಸೇರಿ ನಕ್ಕಿದ್ದು.&lt;br /&gt;11.ಸಿಕ್ಕಾಪಟ್ಟೆ ಖರ್ಚು ಮಾಡಿ ಕೊನೆಗೆ ನನ್ನನ್ನು ನಾನೇ ಬೈದುಕೊಂಡದ್ದು.&lt;br /&gt;&lt;br /&gt;ಮುಂದಿನ ವರ್ಷದ ರೆಸಲ್ಯೂಷನ್...&lt;br /&gt;1. ಚಾಕ್ಲೇಟ್್ಗೆ ಗುಡ್ ಬೈ ಹೇಳ್ಬೇಕು.&lt;br /&gt;2. ಜಾಸ್ತಿ ಪುಸ್ತಕ ಓದ್ಬೇಕು, ಇನ್ನೂ ಚೆನ್ನಾಗಿ ಬರೆಯಲು ಕಲಿಬೇಕು.&lt;br /&gt;3.ಸಿಟ್ಟು ಕಡಿಮೆ ಮಾಡಿಕೊಳ್ಬೇಕು.&lt;br /&gt;4.ಖರ್ಚು ಕಡಿಮೆ ಮಾಡ್ಬೇಕು.&lt;br /&gt;5. ಮಕ್ಕಳಾಟಿಕೆ ನಿಲ್ಲಿಸಿ ಲೈಫ್್ನಲ್ಲಿ ಸೀರಿಯಸ್ಸ್ ಆಗ್ಬೇಕು. (ಆಗ್ತೇನೋ ಇಲ್ವೋ ಎಂಬುದು ಸಂಶಯ)&lt;br /&gt;&lt;br /&gt;ಸದ್ಯಕ್ಕೆ ಇಷ್ಟೇನೆ....ಇದರಲ್ಲಿ ಯಾವುದೆಲ್ಲಾ ಕಾರ್ಯ ನೆರವೇರಿದೆ ಎಂಬುದನ್ನು ಮುಂದಿನ ವರ್ಷ ಡಿಸೆಂಬರ್್ನಲ್ಲಿ ಹೇಳುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1712417306353473984?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1712417306353473984/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1712417306353473984' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1712417306353473984'/><link rel='self' type='application/atom+xml' href='http://www.blogger.com/feeds/4320259625062903049/posts/default/1712417306353473984'/><link rel='alternate' type='text/html' href='http://anuraaga.blogspot.com/2010/12/blog-post.html' title='ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-5260987066076849404</id><published>2010-11-18T20:44:00.000-08:00</published><updated>2010-11-18T20:44:25.405-08:00</updated><category scheme='http://www.blogger.com/atom/ns#' term='ಗಂಡಸರ ದಿನಾಚರಣೆ'/><title type='text'>ಇವತ್ತು 'ಗಂಡಸರ ದಿನ' ಗೊತ್ತಾ?</title><content type='html'>&lt;b&gt;ದೃಶ್ಯ 1&lt;/b&gt;&lt;br /&gt;&lt;br /&gt;ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು&lt;br /&gt;&lt;br /&gt;ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ...&lt;br /&gt;&lt;br /&gt;&lt;b&gt;ದೃಶ್ಯ -2&lt;/b&gt;&lt;br /&gt; ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ.&lt;br /&gt;&lt;br /&gt;&lt;b&gt;ದೃಶ್ಯ-3&lt;/b&gt;&lt;br /&gt;&lt;br /&gt;ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ....&lt;br /&gt;&lt;br /&gt;ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ತರ್ಜುಮೆ ಇದು)&lt;br /&gt;&lt;br /&gt;&lt;b&gt;ದೃಶ್ಯ-4&lt;/b&gt;&lt;br /&gt;&lt;br /&gt;ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ...&lt;br /&gt;ಈ ದೃಶ್ಯ ಮಿಂಚಿ ಮರೆಯಾಗುತ್ತದೆ.&lt;br /&gt;&lt;br /&gt;ಅಪ್ಪನ ಬಳಿಗೆ ಹಿಂತಿರುಗಿ ಬಂದ ಮಗಳು ವಿಶ್ವಾಸ ಉಳಿಸಿಕೊಂಡಳಲ್ವಾ ಎಂದು ನಿಟ್ಟುಸಿರು ಬಿಟ್ಟು, ಜಾಹೀರಾತು ತಂತ್ರಕ್ಕೆ ಭೇಷ್ ಎನ್ನುವಾಗ ಕೊನೆಯ ದೃಶ್ಯದಲ್ಲಿ ಕಂಡು ಬರುವ ಆ ಹುಡುಗನನ್ನು ಯಾರೂ ಕ್ಯಾರೇ ಅನ್ನಲ್ಲ ಅಲ್ವಾ? ಆಕೆ ಆತನೊಂದಿಗೆ ಮಾಡಿದದ್ದು 'ವಿಶ್ವಾಸ ವಂಚನೆ' ಅಲ್ವಾ ಎಂಬುದು ಹುಡುಗರ ಪ್ರಶ್ನೆ!&lt;br /&gt;&lt;br /&gt;ಇದೊಂದು ಉದಾಹರಣೆಯಷ್ಟೇ. ಜಾಹೀರಾತು ವಿಷಯ ಬಿಟ್ಹಾಕಿ....&lt;br /&gt; ಇವತ್ತು ಗಂಡಸರ ದಿನ ಅಂತೆ. ಅಂದ್ರೆ ವರುಷದಲ್ಲಿ ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ ಬಂದಂತೆ ಗಂಡಸರಿಗೂ ಒಂದು ದಿನ ಇದೇರಿ. ಮಹಿಳಾ ದಿನಾಚರಣೆ ಅಂದ ಕೂಡಲೇ ಮಹಿಳಾ ಮಣಿಗಳಲ್ಲಾ ಹೋರಾಟದ ನೆನಪುಗಳನ್ನು ಸವಿಯುತ್ತಾ, ದೌರ್ಜನ್ಯಗಳ ವಿರುದ್ದ ಕೂಗುತ್ತಾ, ಚರ್ಚಾಗೋಷ್ಠಿಗಳನ್ನು ಮಾಡುತ್ತಿರುವುದು ಸಾಮಾನ್ಯ. ಹಾಗಾದ್ರೆ ಗಂಡಸರು ಯಾವ ರೀತಿ ತಮ್ಮ ದಿನವನ್ನು ಆಚರಿಸುತ್ತಾರೆ? &lt;br /&gt;&lt;br /&gt;ಹೇಳೋಕೆ ಹೋದ್ರೆ ಗಂಡಸರೂ ಮಹಿಳೆಯರಿಂದ ಶೋಷಣೆಗೊಳಗಾಗುತ್ತಾರೆ. ಮನೆಯಲ್ಲಿ ಹೆಂಡತಿಯ ಕಿರಿಕಿರಿ, ಕೈಕೊಟ್ಟು ಹೋದ ಹುಡುಗಿ, ಗಾಸಿಪ್ ಹಬ್ಬಿಸಿದ ವಾಚಾಳಿ ಹೆಂಗಸರಿಂದ ಮನೆ ಮುರಿದವರು, ಮನ ಮುರಿದವರು ಎಷ್ಟಿಲ್ಲ ಹೇಳಿ? ಆದ್ರೆ ಗಂಡಸರು ಯಾರೂ ಇದನ್ನು ಬಾಯ್ಬಿಟ್ಟು ಹೇಳಲ್ಲ. ಹೇಳಿದ್ರೂ ಯಾರೂ ನಂಬಲ್ಲ ಅಂತಾ ಅವರಿಗೆ ಗೊತ್ತು. &lt;br /&gt;&lt;br /&gt;ಇನ್ನೊಂದು ವಿಷ್ಯ, ಯಾವುದೇ ಮಹಿಳೆ ಪುರುಷನ ಬಗ್ಗೆ ಹೇಳುವುದಾದರೆ ಆಕೆ ಅವನ ಕೆಟ್ಟ ಗುಣಗಳನ್ನೇ ಮೊದಲು ಬೊಟ್ಟು ಮಾಡುತ್ತಾಳೆ. ಪುರುಷ ಎಷ್ಟು ಒಳ್ಳೆಯವನೇ ಇರಲಿ, ಏನಾದರೂ ಚಿಕ್ಕ ತಪ್ಪೆಸಗಿದರೂ ಸಾಕು, ಆಲ್ ಮೆನ್ ಆರ್ ಸೇಮ್ ಎಂದು ಆಕೆ ನಿರ್ಧಾರ ಮಾಡಿಬಿಡುತ್ತಾಳೆ. ಈ ನಿಲುವು ಬದಲಾಗಬೇಕು. ಎಲ್ಲರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಎಂದು ಗೊತ್ತಿದೆಯಲ್ವಾ ಮತ್ಯಾಕೆ ಈ ಹೋಲಿಕೆ? ಇವತ್ತು ಗಂಡಸರ ದಿನಾಚರಣೆ ಅಲ್ವಾ... ಈ ದಿನವಾದರೂ ಗಂಡು ಹೆಣ್ಣೆಂಬ ತಾರತಮ್ಯವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಜೀವನದಲ್ಲಿ ಅಪ್ಪನಾಗಿ, ಗಂಡನಾಗಿ, ಮಗನಾಗಿ, ಪತಿಯಾಗಿ ಆಫ್್ಕೋರ್ಸ್ ಬಾಯ್್ಫ್ರೆಂಡ್ ಆಗಿ ಪ್ರೀತಿಯನ್ನು ನೀಡುವ ಗಂಡಸರಿಗೊಂದು ಹ್ಯಾಟ್ಸ್ ಆಫ್ ಹೇಳೋಣವೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5260987066076849404?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5260987066076849404/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5260987066076849404' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5260987066076849404'/><link rel='self' type='application/atom+xml' href='http://www.blogger.com/feeds/4320259625062903049/posts/default/5260987066076849404'/><link rel='alternate' type='text/html' href='http://anuraaga.blogspot.com/2010/11/blog-post.html' title='ಇವತ್ತು &apos;ಗಂಡಸರ ದಿನ&apos; ಗೊತ್ತಾ?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-8585398681833384233</id><published>2010-10-17T08:39:00.000-07:00</published><updated>2010-10-17T08:39:39.898-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಬರವಣಿಗೆ'/><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><title type='text'>'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...</title><content type='html'>ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ  ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ. &lt;br /&gt;ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ.&lt;br /&gt;&lt;br /&gt;ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತಹ ವಿಷಯದ ಬಗ್ಗೆ ಬರೆಯಿರಿ ಅಂತಾ ಹೇಳಿದ್ರೆ, ಆ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಇಷ್ಟಾದ ಮೇಲೆ  ಅದನ್ನು ಬರೆಯುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ, ಅದೇ ಸ್ಟಾರ್ಟಿಂಗ್ ಪ್ಲಾಬ್ಲಂ. ಏನಂತಾ ಶುರು ಮಾಡಲಿ? ಎಂದು ಹತ್ತಾರು ಬಾರಿ ತಲೆಕೆರೆದು, ಕೀಬೋರ್ಡ್ ಕುಟ್ಟಿ ಸದ್ದು ಮಾಡಿ ಹಾಗೇ ಹೀಗೆ ಹೇಗೋ ಮೊದಲ ಪ್ಯಾರಾ ಪೂರ್ತಿಯಾದರೆ ಒಂದಿಷ್ಟು ಸಮಾಧಾನ. ಮತ್ತೆ ಅದು ಇದು ಅಂತಾ ಬರೆಯುತ್ತಾ ಹೋದರೆ ಲೇಖನ ಪೂರ್ಣವಾಗುತ್ತದೆ. ಏನೋ ಹುರುಪಿನಿಂದ ಸುದೀರ್ಘವಾಗಿ ಬರೆಯುತ್ತಲೇ ಹೋದಾಗ ಮತ್ತೊಂದು ಅಡಚಣೆ. ಅದೇ ಬೈಟ್ಸ್. ಲೇಖನದಲ್ಲಿ ಇಂತಿಷ್ಟು ಪದಗಳಿರಬೇಕು ಎಂದು ಮೊದಲೇ ಹೇಳಿರುತ್ತಾರೆ. 3000 ಪದಗಳ ಲೇಖನ ಹೇಳಿದರೆ ನಾವು ಬರೆದಾಗ ಅದು 4000ದ ಗಡಿ ದಾಟಿರುತ್ತದೆ. ಆವಾಗ ಮತ್ತೆ ಲೇಖನಕ್ಕೆ ಕತ್ತರಿ ಹಾಕಬೇಕು. ಪದಗಳ ಜೋಡಣೆಯನ್ನು ಬದಲಿಸಬೇಕು. ಕತ್ತರಿ ಹಾಕುವ ಲೇಖನಗಳು ಒಂದೆಡೆಯಾದರೆ ಇನ್ನು ಕೆಲವು ಲೇಖನಗಳಿಗೆ ನೀರು ಸೇರಿಸಬೇಕಾಗಿ ಬರುತ್ತದೆ. ನಾವು ಆಯ್ದು ಕೊಂಡ ವಿಷಯದ ಬಗ್ಗೆ ಹೆಚ್ಚೇನು ಹೇಳಲಿರುವುದಿಲ್ಲ ಆದರೆ ಅದನ್ನು ದೊಡ್ಡದಾಗಿ ಹೇಳಬೇಕು. ಆವಾಗ ಸಾರಿಗೆ ನೀರು ಸೇರಿಸಿದಂತೆ ಲೇಖನಕ್ಕೆ ಅದು ಇದು ಅಂತಾ ಸೇರಿಸಿ ಅದನ್ನು ಚ್ಯೂಯಿಂಗ್ ಗಂ ನಂತೆ ಎಳೆಯಬೇಕು. ಲೇಖನವೊಂದನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವ ಕಾರ್ಯ ಇದೆಯಲ್ವಾ ಅದು ಲೇಖನ ಬರೆಯುವುದಕ್ಕಿಂತಲೂ ಕಠಿಣವಾದುದು!&lt;br /&gt;&lt;br /&gt;&lt;br /&gt;ಲೇಖನ ಬರೆಯಲು ಕುಳಿತರೆ ಕೆಲವೊಮ್ಮೆ ಮಾಹಿತಿಗಳಿಗಾಗಿ ತುಂಬಾ ತಡಕಾಡಬೇಕಾಗುತ್ತದೆ. ಇದ್ದ ಸರ್ಚ್ ಇಂಜಿನ್್ಗಳಲ್ಲೆಲ್ಲಾ ವಿವಿಧ ಕೀವರ್ಡ್ಸ್ ಕೊಟ್ಟು ಹುಡುಕಿ ಮಾಹಿತಿ ಕಲೆ ಹಾಕಬೇಕು. ಇಂಗ್ಲಿಷಿನಲ್ಲಿ ಸಿಕ್ಕ ಮಾಹಿತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಇಲ್ಲವೇ ಒಂದಿಷ್ಟು ಅನುಭವದಿಂದ ಸಿಕ್ಕ ಪಾಠಗಳನ್ನು ಗುಡ್ಡೆ ಹಾಕಿ ಹೇಗೋ ಲೇಖನ ಸಿದ್ಧವಾಗಿತ್ತದೆ. ಆಮೇಲೆ ಲೇಖನ ಪ್ರಕಟವಾದಾಗ ಒಂದಿಷ್ಟು ಜನರು ತುಂಬಾ ಚೆನ್ನಾಗಿ ಬರೆದಿದ್ದಿ ಅಂತಾ ಹೊಗಳ್ತಾರೆ. ಇಷ್ಟೆಲ್ಲಾ ಹೇಳಿದ್ರೂ ಮನಸ್ಸಲ್ಲಿ ಏನೋ ಅತೃಪ್ತ ಭಾವ. ನಾನು ಹೇಳಬೇಕೆಂದಿದ್ದನ್ನು ಅಲ್ಲಿ ಹೇಳಲಾಗಿಲ್ಲ...ನಾನು ಮುಕ್ತವಾಗಿಯೇ ಬರೆದಿದ್ದೆ ಪ್ರಕಟಣೆಗೆ ಹೋಗುವ ಮುನ್ನ ಅದಕ್ಕೆ ಕತ್ತರಿ ಪ್ರಯೋಗ ನಡೆದಿದೆ. ಭಾಷೆ ನನ್ನದು ಆದರೆ ವಿಷಯ ಎಲ್ಲಿಂದಲೋ ಭಟ್ಟಿಇಳಿಸಿದ್ದು, ಇನ್ನೊಂದಿಷ್ಟು ಕಾಲಾವಕಾಶ ಸಿಕ್ಕಿದ್ದರೆ ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ಅನಿಸುತ್ತದೆ. ಪ್ರಕಟಗೊಂಡ ನಂತರವಂತೂ ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದರೆ ಚೆನ್ನಾಗಿತ್ತು, ವಾಕ್ಯ ರಚನೆ ಏನೋ ಸರಿಹೋಗಿಲ್ಲ ನನಗೆ ನಾನೇ ಅಂದು ಕೊಳ್ಳುತ್ತೇನೆ. ಅದೇ ವೇಳೆ ನನ್ನದೇ ಅನುಭವವನ್ನು ಬರೆದು ಪ್ರಕಟಿಸಿದರೆ ಅದರಲ್ಲೇನೋ ತೃಪ್ತಭಾವ. ನನ್ನ ಅನುಭವ ನನ್ನದು...ಕಾಪಿರೈಟ್ ಸಮಸ್ಯೆಯಿಲ್ಲ...ಇದಕ್ಕಿಂತ ಮಿಗಿಲಾಗಿ ಆ ಲೇಖನದಲ್ಲಿ ಸ್ವಂತಿಕೆ ಇರುತ್ತದೆ. ಇಂತಹಾ ಸ್ವಂತಿಕೆಯಿರುವ ಲೇಖನಗಳು ಬರೆದಾಗ ಮನಸ್ಸು ಹಗುರವಾಗುತ್ತದೆ. 'ಇದು ನನ್ನದು' ಎಂದು ಎದೆಮುಟ್ಟಿ ಹೇಳುವಾಗ ಅನುಭವಿಸುವ ಆನಂದವಿದೆಯಲ್ವಾ ಅದನ್ನು ಅನುಭವಿಸಿದವನೇ ಬಲ್ಲ!.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8585398681833384233?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8585398681833384233/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8585398681833384233' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8585398681833384233'/><link rel='self' type='application/atom+xml' href='http://www.blogger.com/feeds/4320259625062903049/posts/default/8585398681833384233'/><link rel='alternate' type='text/html' href='http://anuraaga.blogspot.com/2010/10/blog-post.html' title='&apos;ಸ್ವಂತಿಕೆ&apos;ಯ ಅನುಭವ ಅನುಭವಿಸಿದವನೇ ಬಲ್ಲ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-4699056959647343016</id><published>2010-09-09T09:18:00.000-07:00</published><updated>2010-09-09T09:34:53.776-07:00</updated><category scheme='http://www.blogger.com/atom/ns#' term='ಜೀವನ'/><category scheme='http://www.blogger.com/atom/ns#' term='ಬ್ಲಾಗ್ ಬರಹ'/><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><title type='text'>ದೊಡ್ಡವರಾಗುವುದೆಂದರೆ....?</title><content type='html'>"&lt;b&gt;ಮಗಳು &lt;/b&gt;ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ  ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ. ಆವಾಗ ನನ್ನ ಇನ್ನೊಬ್ಬಳು ಕಸಿನ್, ನಾವೂ ದೊಡ್ಡವರಾದ್ರೆ ಇಷ್ಟೆಲ್ಲಾ ಗೌಜಿ ಮಾಡ್ತಾರಂತೆ, ತುಂಬಾ ಸ್ವೀಟ್ಸ್ ತಿನ್ಬಹುದಲ್ವಾ ಅಂದಿದ್ಳು. ಅದಕ್ಕೆ ಇನ್ನೊಬ್ಬಳು ನಿನ್ನ ಅಕ್ಕ ಮೊದಲು ದೊಡ್ಡವಳಗ್ತಾಳೆ ಮತ್ತೆ ನೀನು ಅಂದಾಗ ನನ್ನ ಅಕ್ಕ ಬೇಗ ದೊಡ್ಡವಳಾಗಲಿ ಆವಾಗ ನನಗೂ ತುಂಬಾ ಸ್ವೀಟ್ಸ್ ತಿನ್ನೋಕೆ ಸಿಗುತ್ತೆ ಅಂತಾ ಪುಟ್ಟ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದೆ.&lt;br /&gt;&lt;br /&gt;ಅದಿರಲಿ ಬಿಡಿ, ಮನೆಯಲ್ಲಿ ನಾನು ಏನು ಹೇಳಿದ್ರೂ 'ನೀನು ಚಿಕ್ಕವಳು' ಎಂಬ ಮಾತು by Default ಆಗಿ ಎಲ್ಲರ ಬಾಯಿಂದ ಬರುತ್ತಿತ್ತು. ಅದು ಮಾಡಿಕೊಡಲಾ? ಇದು ಮಾಡಬಹುದಾ? ಅಂತಾ ಕೇಳಿದರೂ ಇದೇ ಉತ್ತರ. ಏಳನೇ ಕ್ಲಾಸಿಗೆ ತಲುಪಿದ್ರೂ 'ಚಿಕ್ಕವಳು' ಎಂಬ ಪಟ್ಟ ನಂಗೇನೇ. ಅಕ್ಕ ಹಾಸ್ಟೆಲ್್ನಲ್ಲಿದ್ದುದರಿಂದ ಮನೆಯಲ್ಲಿ ನಾನೊಬ್ಬಳೇ ಹೆಣ್ಮಗಳು. ಕೆಲವೊಮ್ಮೆ ಅಮ್ಮ 'ನೀನು ಚಿಕ್ಕ ಹುಡುಗಿಯೇನಲ್ಲ' ಅಂತಾ ಹೇಳಿದ್ರೆ ಅದೇ ಹೊತ್ತಿಗೆ ಪಪ್ಪ, ಅವಳು ಇನ್ನೂ ಚಿಕ್ಕವಳು ಯಾಕೆ ಬೈತಿದ್ದೀಯಾ ಅಂತಾ ಅಮ್ಮನಿಗೆ ಕೇಳ್ತಿದ್ರು. ಶಾಲೆ ಮುಗಿಸಿ ಹೈಸ್ಕೂಲ್ ಸೇರಬೇಕಾದಾಗ ಗೆಳತಿಯರೆಲ್ಲರೂ ಅವರವರ ಇಷ್ಟದ ಹೈಸ್ಕೂಲ್್ನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ನನ್ನ ಇಷ್ಟದ ಹೈಸ್ಕೂಲ್ ಹೇಳಿದಾಗ ನಿಂಗೇನು ಗೊತ್ತು ನೀನು ಚಿಕ್ಕವಳು... ನಾವು ಹೇಳಿದ ಹೈಸ್ಕೂಲ್್ಗೆ ಸೇರಬೇಕು. ಅಲ್ಲಿಯ ಬಗ್ಗೆ ಎಲ್ಲಾ ವಿಚಾರಿಸಿ ಆಗಿದೆ ಅಂತಾ ಪಪ್ಪ ಹೇಳಿದ್ದರು. &lt;br /&gt;&lt;br /&gt;ಸರಿ, ಹೈಸ್ಕೂಲ್ ಹತ್ತಿದಾಗ ನಾನಿನ್ನು 'ದೊಡ್ಡವಳು' ಎಂಬ ಭಾವನೆ ಬರತೊಡಗಿತ್ತು. ಯಾಕೆಂದರೆ ಕ್ಲಾಸಿನಲ್ಲಿ ಟೀಚರ್ ಇನ್ನೇನು ನೀವು ಚಿಕ್ಕ ಮಕ್ಕಳಲ್ಲ, ಹೈಸ್ಕೂಲ್ ಹುಡುಗೀರು ಅಂತಾ ಹೇಳುವಾಗ ಮುಖದಲ್ಲಿ ಗಂಭೀರತೆ ಬರುತ್ತಿತ್ತು. ಇಂತಿರ್ಪ, ಮನೆಗೆ ಬಂದ್ರೆ ಪುಟ್ಟ ಹುಡುಗಿಯೇ ಆಗಬೇಕಾಗಿತ್ತು. ಅಷ್ಟೊತ್ತಿಗೆ ನನ್ನಕ್ಕಿಂತ ಎರಡು ವರ್ಷ ಚಿಕ್ಕವನಾಗಿದ್ದ ತಮ್ಮನೂ ಅಣ್ಣನಂತೆ  ವರ್ತಿಸುತ್ತಿದ್ದ. ಅವನೂ ಕೂಡಾ ನೀನು ಇನ್ನೂ ಚಿಕ್ಕವಳು ಅಂತಾ ಅಪ್ಪ ಅಮ್ಮನ ಜೊತೆ ರಾಗ ಎಳೆಯುತ್ತಿದ್ದರೆ ಸಿಟ್ಟು ಬರುತ್ತಿತ್ತು. ಅಂತೂ ಇಂತೂ ಹೈಸ್ಕೂಲ್ ಅವಧಿಯಲ್ಲಿ 'ದೊಡ್ಡವಳಾದರೂ' ಯಾವುದೇ ಫಂಕ್ಷನ್ ಮಾಡಿಲ್ಲ. ಆ ಸಂಭ್ರಮಾಚರಣೆ ಬೇಕಿತ್ತು, ಸ್ವೀಟ್ಸ್ ತಿನ್ಬೇಕು ಎಂಬ ಆಶೆ ಆವಾಗ ಉಳಿದಿರಲೂ ಇಲ್ಲ. ನಾನಿನ್ನು ಚಿಕ್ಕವಳಲ್ಲ ಎಂದು ಮನಸ್ಸಲ್ಲೇ ಬೀಗುತ್ತಿದ್ದರೂ, ಯಾಕಪ್ಪ ದೊಡ್ಡವಳಾದೆ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿತ್ತು. ಯಾಕೆಂದರೆ ಹುಡುಗಿ ದೊಡ್ಡವಳಾದಳು ಅಂದ ಮೇಲೆ ಎಷ್ಟೊಂದು ನಿರ್ಬಂಧಗಳು. ಅಲ್ಲಿಯ ವರೆಗೆ ಮಾವನ ಮಕ್ಕಳ (ಅಣ್ಣಂದಿರು) ಜೊತೆ ಸ್ವಚ್ಛಂದವಾಗಿ ಆಡುತ್ತಿದ್ದ ನನಗೆ ಇನ್ಮುಂದೆ ಅವರ ಜೊತೆ ಅಷ್ಟೊಂದು ಆಪ್ತವಾಗಿರಬೇಡ ಎಂಬ ಅಮ್ಮನ ಸಲಹೆ. ಇಂತಿಂತ ಡ್ರೆಸ್ ಹಾಕ್ಬೇಕು, ಅದನ್ನು ಹಾಗೆ ಹಾಕ್ಬೇಕು, ಹೀಗೆ ಹಾಕ್ಬಾರ್ದು ಎಂಬ ಸಲಹೆ ಒಂದೆಡೆಯಾದರೆ 'ಆ ದಿನಗಳಲ್ಲಿ' ದೂರವಿರಬೇಕು. ಅದು ಮುಟ್ಟುವಂತಿಲ್ಲ, ಅಪ್ಪನ ಜೊತೆಯೂ ಸಲುಗೆಯಿಂದ ಇರುವಂತಿಲ್ಲ. ಅಪ್ಪನಿಂದ ದೂರವಿರಬೇಕಾಗಿ ಬಂದಾಗ ಹಿಂಸೆ ಅನಿಸ್ತಾ ಇತ್ತು. ಆವಾಗ ಯಾಕೆ ಹೆಣ್ಣಾಗಿ ಹುಟ್ಟಿದೆನೋ, ಹುಡುಗ ಆಗಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲವಲ್ಲಾ ಅಂತಾ ಯೋಚಿಸ್ತಿದ್ದೆ. ಹೈಸ್ಕೂಲ್ ಮುಗಿದು ಪ್ಲಸ್ ಟು, ನಂತರ ಇಂಜಿನಿಯರಿಂಗ್ ಕಾಲೇಜು, ಕೋರ್ಸು ಎಲ್ಲವೂ ಮನೆಯವರದ್ದೇ ಚಾಯ್ಸ್. ಆವಾಗ ಅಕ್ಕ ಕೂಡಾ ನಿಂಗೇನು ಗೊತ್ತು? ಸ್ಕೋಪ್ ಇರುವ ಕೋರ್ಸಿಗೇ ಸೇರ್ಬೇಕು ಎಂದು, Information Technology ಆಯ್ಕೆ ಮಾಡಿಕೊಂಡದ್ದು ಆಯ್ತು.&lt;br /&gt;&lt;br /&gt;ಇಂಜಿನಿಯರಿಂಗ್ ಸೇರಿದ ಮೊದಮೊದಲಿಗೆ ಕಷ್ಟವಾದರೂ ಆಮೇಲೆ ಇಷ್ಟವಾಗತೊಡಗಿತು. ಕಾಲೇಜಿನಲ್ಲಿ ಮೊದಲ ದಿನ ನಮ್ಮ ಟೀಚರೊಬ್ಬರು ಐಟಿ ಕೋರ್ಸಿಗೆ ಇಷ್ಟಪಟ್ಟು  ಸೇರಿದವರ್ಯಾರು ಕೈ ಎತ್ತಿ ಎಂದಾಗ ಬೆರಳೆಣಿಕೆಯ ಮಂದಿಯಷ್ಟೇ 'ಹೂಂ' ಅಂದಿದ್ದರು. ಬಾಕಿ ಉಳಿದವರೆಲ್ಲಾ ಅಮ್ಮ, ಅಪ್ಪ ಹೇಳಿದ್ರು, ಬೇರೆ ಬ್ರಾಂಚ್್ನಲ್ಲಿ ಸೀಟು ಸಿಕ್ಕಿಲ್ಲ, ಹೈಯರ್ ಆಪ್್ಶನ್ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆಮೇಲೆ 'ನೀವು ಇಂಜಿನಿಯರಿಂಗ್ ಮುಗಿಸಿ ಏನಾಗ್ಬೇಕು ಅಂತಿದ್ದೀರಾ?' ಎಂದು ಕೇಳಿದಾಗ ಹೆಚ್ಚಿನವರ ಉತ್ತರ ಬೆಂಗಳೂರು ಹೋಗಿ ಸಾಫ್ಟ್್ವೇರ್ ಕಂಪೆನಿಯಲ್ಲಿ ಕೆಲಸ ಮಾಡ್ಬೇಕು. ಕೆಲವು ಹುಡುಗರು ಗಲ್ಫ್ ಅಂತಲೂ, ಹುಡುಗಿಯರು ಕೋರ್ಸ್ ಮುಗಿದ ನಂತರ ನೋಡ್ಬೇಕು ಅಂತಾ ಉತ್ತರಿಸಿದ್ದರು. ನನ್ನದು ಲಾಸ್ಟ್್ಬೆಂಚ್ ಆದ ಕಾರಣ, ಕೊನೆಗೆ ನಮ್ಮಲ್ಲಿ ನೀವು? ಅಂತಾ ಕೇಳಿದಾಗ ನನ್ನ ಗೆಳತಿಯರಿಬ್ಬರು ಈವಾಗ ಯಾವುದೇ ನಿರ್ಧಾರ ತೆಗೊಂಡಿಲ್ಲ ಅಂತಾ ಜೊತೆಯಾಗಿ ಹೇಳುವುದೇ? ಮತ್ತೆ ನನ್ನ ನಂಬರ್, 'YOU?' ಅಂತಾ ಪ್ರಶ್ನಾರ್ಥಕವಾಗಿ ಟೀಚರ್ ಕೇಳಿದಾಗ ನಂಗೆ ಏನು ಹೇಳಬೇಕೆಂದು ತೋಚದೆ ಒಂದು ನಿಮಿಷ ಮೌನವಾಗಿಯೇ ಇದ್ದೆ. ಕ್ಲಾಸು ನಿಶ್ಶಬ್ದವಾಗಿತ್ತು. Yes, Tell me ಅಂದಾಗ i want to become a writer ಅಂದು ಬಿಟ್ಟೆ. ಕ್ಲಾಸಿಗೆ ಕ್ಲಾಸೇ ನನ್ನತ್ತ ನೋಡುತ್ತಿದ್ದೆ. ಆ ಮೌನವನ್ನು ಸೀಳಿಕೊಂಡು ಮೇಡಂ " ಮತ್ಯಾಕೆ ನೀನಿಲ್ಲಿಗೆ ಬಂದೆ. ಯಾವುದಾದರೂ ಆರ್ಟ್ಸ್ ಕಾಲೇಜಿಗೆ ಸೇರಬಹುದಿತ್ತಲ್ವಾ, ಅದೂ ಅಲ್ಲದೆ ನೀನು ಕನ್ನಡ ಮೀಡಿಯಂನಲ್ಲಿ ಓದಿದ ಹುಡುಗಿ, ಸರಕಾರಿ ಕಾಲೇಜಿಗೆ ಸೇರಿದ್ದರೆ ರ್ಯಾಂಕ್ ಬರುತ್ತಿದ್ದಿ" ಎಂದರು. ನಂಗೂ ಆ ಆಸೆಯಿತ್ತು ಆದರೆ ಎಲ್ಲವೂ ನಾನು ಅಂದುಕೊಂಡಾಗೆ ಆಗಲ್ವಲ್ಲಾ?&lt;br /&gt;&lt;br /&gt;ಹೇಗೋ ಕಾಲೇಜು ಮುಗಿಯಿತು. ನಂತರ ಕೆಲಸ ಹುಡುಕ್ಬೇಕು. ಒಂದೆರಡು ತಿಂಗಳು NIIT instituteನಲ್ಲಿಯೂ, ಸರಕಾರಿ ಐಟಿಐನಲ್ಲಿ ನನ್ನಕ್ಕಿಂತ ದೊಡ್ಡವರಿಗೆ ಪಾಠ ಹೇಳಿಕೊಟ್ಟು ನಾನೂ 'ಮೇಡಂ' ಅಂತಾ ಕರೆಸಿಕೊಂಡೆ. ಬಿಡುವು ಸಿಕ್ಕಾಗೆಲ್ಲಾ ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಜರ್ನಲಿಸಂನತ್ತ ಮನಸ್ಸು ವಾಲತೊಡಗಿತ್ತು.  ಅದೇ ವೇಳೆ ಚೆನ್ನೈ ವೆಬ್್ದುನಿಯಾದಲ್ಲಿ ಆನ್್ಲೈನ್ ಜರ್ನಲಿಸ್ಟ್್ಗೆ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿತ್ತು. ಇದೇ ಛಾನ್ಸು, ಜರ್ನಲಿಸ್ಟ್ ಆಗಲು ಎಂದು ಮನೆಯವರನ್ನೆಲ್ಲಾ ಒಲಿಸಿ, ಅಪ್ಪನನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ, ಇದು ಕೈ ಬಿಟ್ಟು ಹೋದ್ರೆ ನಾನು ಯಾವುದೋ ಇನ್ಸಿಟ್ಯೂಟ್್ನಲ್ಲಿ ಪ್ರೋಗ್ರಾಮಿಂಗ್ ಲಾಂಗ್ವೇಜ್ ಹೇಳಿಕೊಡ್ಬೇಕು, ಇಲ್ಲದಿದ್ರೆ ಗೆಸ್ಟ್ ಲೆಕ್ಚರ್ ಆಗ್ಬೇಕು ಅಂತಾ ಚೆನ್ನೈಗೆ ಹೋದೆ. ಅಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿತು. ಲೋಕಲೈಸೇಷನ್ ಟೀಮ್್ನಲ್ಲಿ ಕೆಲಸ ಮಾಡುವುದರ ಜೊತೆಗೆ ನನ್ನ ಬರವಣಿಗೆ ಕಾಗದದಿಂದ ಇಂಟರ್ನೆಟ್್ಗೆ ಬರತೊಡಗಿತು. ಕೆಲಸದ ಜೊತೆ ಬ್ಲಾಗ್್ಲೋಕ ಪರಿಚಯವಾಗುವ ಮೂಲಕ ಹಲವಾರು ಬ್ಲಾಗ್ ಗೆಳೆಯರನ್ನೂ ಸಂಪಾದಿಸಿಕೊಂಡೆ.&lt;br /&gt;&lt;br /&gt;ಚೆನ್ನೈಯಲ್ಲಿ ಒಬ್ಬಳೇ ಇರಬೇಕಾದಾಗ ನನ್ನಷ್ಟಕ್ಕೇ ನಾನು ಪ್ರಬುದ್ಧಳಾಗುತ್ತಿದ್ದೆ. ಮನೆಯಲ್ಲಿ ಎಲ್ಲ ಕಾರ್ಯವೂ ಅಪ್ಪ ಅಮ್ಮನ ಸಹಾಯದಿಂದ ಮಾಡುತ್ತಿದ್ದ ದಿನಗಳು ಮುಗಿದವು. ನನ್ನ ಕೆಲಸ ನಾನೇ ಮಾಡ್ಬೇಕು, ಬಿದ್ದರೂ, ಎದ್ದರೂ ನೋವು ನಗು ಎಲ್ಲವೂ ನನಗೆ ಮಾತ್ರ. ಜೀವನಕ್ಕೆ ಹೊಸ ತಿರುವು ಲಭಿಸಿದ್ದು ಅಲ್ಲಿ. ಅಲ್ಲಿಯವರೆಗೆ ಮಕ್ಕಳಾಟವಾಡುತ್ತಿದ್ದ ನಾನು ಜೀವನದ ಬಗ್ಗೆ ಕೆಲಸದ ಬಗ್ಗೆ ಗಂಭೀರವಾಗಿ ಚಿಂತಿಸತೊಡಗಿದೆ. ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ತೀವ್ರವಾಗುತ್ತಿದ್ದಂತೆ 'ಕನ್ನಡ ಪ್ರಭ'ದಲ್ಲಿ ಕೆಲಸ ಸಿಕ್ಕಿ ಬೆಂಗಳೂರಿಗೆ ಬಂದೆ.  ಚಿಕ್ಕಂದಿನಲ್ಲಿ ಉದಯವಾಣಿ ಓದಿ, ಹೈಸ್ಕೂಲ್್ನಲ್ಲಿ ಪ್ರಜಾವಣಿಯತ್ತ ಆಕರ್ಷಿತಳಾಗಿ, ಕಾಲೇಜು ದಿನಗಳಲ್ಲಿ ವಿಜಯಕರ್ನಾಟಕದ 'ಸುದ್ದಿಮನೆ ಕತೆ' 'ನೂರೆಂಟು ಮಾತು', 'ಬೆತ್ತಲೆ ಜಗತ್ತು' ಅಂಕಣದ ಫ್ಯಾನ್ ಆಗಿ 'ಕನ್ನಡಪ್ರಭ' ಪತ್ರಕರ್ತೆಯಾದೆ. ಈವಾಗ ಬೆಂಗಳೂರು ಬಂದು ಎರಡು ವರ್ಷಗಳಾಯಿತು. ಈ ಎರಡು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಹುಚ್ಚು ಪ್ರೀತಿಯಲ್ಲಿ ಬಿದ್ದು ಇನ್ನು ಜೀವನವೇ ಬೇಡ ಎಂದು ಅತ್ತು, ಆಮೇಲೆ ಸಾವರಿಸಿ 'ನೀನಿಲ್ಲದಿದ್ದರೂ ನಾನು ಬದುಕ್ತೇನೆ ನೋಡು' ಎಂದು ಧೈರ್ಯದಿಂದ ನಿಂತ ಆ ಹುಡುಗಿ ನಾನೇನಾ? ಅಂತಾ ನನಗೆ ಅಚ್ಚರಿಯಾಗುತ್ತಿದ್ದೆ. ಅಲ್ಲಿಯವರೆಗೆ ವಿಶ್ವಾಸರ್ಹರಾಗಿದ್ದ್ದ ಫ್ರೆಂಡ್ಸ್ ಏನೋ ನೆಪ ಹೇಳಿ ದೂರ ಸರಿದಾಗ, ಅಲ್ಲಿಯವರೆಗೆ ಪರಿಚಯವೇ ಇಲ್ಲದ ಬ್ಲಾಗಿಗರು, ಸಹೋದ್ಯೋಗಿಗಳು ಸಾಂತ್ವನದ ಮಾತುಗಳನ್ನಾಡಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟ ಆ ಅಳುಮುಂಜಿ ಹುಡುಗಿ ನಾನೇನಾ? ಸರಿದು ಹೋದ ದಿನಗಳು ನನಗೆ ಜೀವನವೇನೆಂಬುದನ್ನು ಕಲಿಸಿದೆ. ಈವಾಗ ನನ್ನ ಅಪ್ಪ ಅಮ್ಮ ನೀನು ಚಿಕ್ಕವಳು ಅಂದ್ರೂ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಜವಾಬ್ದಾರಿ ಬಂದಿದೆ ಎನ್ನುವಾಗ ಸಂತೋಷ ಆಗ್ತಿದೆ. ಕೆಲವೊಮ್ಮೆ ಮಕ್ಕಳಂತೆಯೇ ಚಿಕ್ಕವಳಾಗಿದ್ದರೆ ಒಳ್ಳೆಯದೂ ಅಂತಾ ಅನಿಸಿದರೂ ಇದು ಜೀವನ....ALL IS WELL ಅಂತಾ ನಮ್ಮ ಎದೆಯನ್ನು ನಾವೇ ತಟ್ಟಿಕೊಂಡು ಮುಂದೆ ಸಾಗಬೇಕಾಗಿದೆ. ಜೀವನದ ಏಳು ಬೀಳುಗಳಿಂದ ಕಲಿಯುತ್ತಾ ನಾವು ದೊಡ್ಡವರಾಗ್ತೇವೆ ಎಂದು ಪಪ್ಪ ಹೇಳಿದ್ದು ಈಗ ನಿಜ ಅಂತಾ ಅನಿಸ ತೊಡಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4699056959647343016?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4699056959647343016/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4699056959647343016' title='4 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4699056959647343016'/><link rel='self' type='application/atom+xml' href='http://www.blogger.com/feeds/4320259625062903049/posts/default/4699056959647343016'/><link rel='alternate' type='text/html' href='http://anuraaga.blogspot.com/2010/09/blog-post.html' title='ದೊಡ್ಡವರಾಗುವುದೆಂದರೆ....?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4320259625062903049.post-3064490103722831487</id><published>2010-07-09T03:34:00.001-07:00</published><updated>2010-07-09T03:34:45.558-07:00</updated><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><title type='text'>ದೇವರು ಕಾಣೆಯಾಗಿದ್ದಾನೆ...</title><content type='html'>&lt;b&gt;ಬ್ರೇಕಿಂಗ್ ನ್ಯೂಸ್...&lt;/b&gt;&lt;br /&gt;ದೇವರು ಕಾಣೆಯಾಗಿದ್ದಾನೆ.&lt;br /&gt;ಹೌದಾ? &lt;br /&gt;ಹೂಂ...&lt;br /&gt;ನಮ್ಮದ್ದಾ ಅವರದ್ದಾ?&lt;br /&gt;ಅವರದ್ದಾದರೆ ಬಿಡಿ, ನಮ್ಮದ್ದಾದರೆ ಕಷ್ಟ!!&lt;br /&gt;ಟೀವಿ ಪರದೆ ಮುಂದೆ ಕಣ್ಣಿಟ್ಟು&lt;br /&gt;ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ&lt;br /&gt;ತಡಕಾಡುತ್ತಾರೆ...&lt;br /&gt;ಸಿಕ್ಕಿದ್ರಾ?&lt;br /&gt;&lt;br /&gt;&lt;br /&gt;ಮೈಕ್, ಕ್ಯಾಮೆರ ರೆಡಿ...&lt;br /&gt;'ದೇವರು ಕಾಣೆಯಾಗಿದ್ದಾರೆ...'&lt;br /&gt;ಯಾವಾಗ? &lt;br /&gt;ಬನ್ನಿ ನಮ್ಮ ಪ್ರತಿನಿಧಿಯಲ್ಲಿ ಕೇಳೋಣ..&lt;br /&gt;ದೇವರು ಈವರೆಗೆ ಪತ್ತೆಯಾಗಿಲ್ಲ!!&lt;br /&gt;ಅವರಿಗಾಗಿ ಶೋಧ ನಡೆಯುತ್ತಿದ್ದೆ...&lt;br /&gt;ಅವರು ಸಿಗುವ ಸಾಧ್ಯತೆ ಇದೆಯೇ? &lt;br /&gt;ಬನ್ನಿ ನೋಡೋಣ...&lt;br /&gt;ಒಂದು ಪುಟ್ಟ ವಿರಾಮದ ನಂತರ...&lt;br /&gt;ದೇವರು ಕೊನೆ ಬಾರಿ ಕಂಡದ್ದು ಯಾರಿಗೆ?...&lt;br /&gt;&lt;br /&gt;&lt;br /&gt;ದೇವರು ಈಗ ಎಲ್ಲಿದ್ದಾರೆ?&lt;br /&gt;ನಮ್ಮ ಆಪ್ತರಾಗಿದ್ದರು ಅವರು...ಜನ ಹೇಳುತ್ತಾರೆ&lt;br /&gt;ಪುಟಗಟ್ಟಲೆ ಬರೆಯಿರಿ, ಅವರ ಆಪ್ತರ ಯಾರು?&lt;br /&gt;ಸಂದರ್ಶನ ನಡೆಸಿ, ಹಳೇ ಫೋಟೋ&lt;br /&gt;ಹುಡುಕಿ ಫೋಟೋ ಗ್ಯಾಲರಿ ಮಾಡಿ...ಕ್ಲಿಕ್&lt;br /&gt;&lt;br /&gt;&lt;br /&gt;ಕಣ್ಣೀರು ಸುರಿಸಿದರು,&lt;br /&gt;ದೇವರು ಮುನಿಸಿಕೊಂಡಿದ್ದಾನೆ ಎಂದು&lt;br /&gt;ಬಗೆ ಬಗೆಯಾಗಿ ಅವನಲ್ಲಿ ಕ್ಷಮೆ ಕೇಳಿದರು&lt;br /&gt;ಅಡ್ಡ ಬಿದ್ದರು, ಸುತ್ತು ಬಂದರು...&lt;br /&gt;ಈ ಎಲ್ಲಾ ಕರಾಮತ್ತು ನೋಡಿ &lt;br /&gt;"ನಿನ್ನಲ್ಲಿಯೇ ನಾನಿರುವಾಗ ನನ್ನನ್ನು&lt;br /&gt;ಹುಡುಕುತ್ತಿಯಲಾ.್ಲ..." ಎಂದು&lt;br /&gt;ದೇವರು ನಗುತ್ತಾ ಸುಮ್ಮನಾದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3064490103722831487?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3064490103722831487/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3064490103722831487' title='5 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3064490103722831487'/><link rel='self' type='application/atom+xml' href='http://www.blogger.com/feeds/4320259625062903049/posts/default/3064490103722831487'/><link rel='alternate' type='text/html' href='http://anuraaga.blogspot.com/2010/07/blog-post.html' title='ದೇವರು ಕಾಣೆಯಾಗಿದ್ದಾನೆ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4320259625062903049.post-3890071480337808686</id><published>2010-06-19T08:53:00.001-07:00</published><updated>2010-06-19T08:53:41.187-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಅಪ್ಪಂದಿರ ದಿನ'/><title type='text'>ನಾನೂ ನನ್ನ ಸ್ವಂತ ಕನಸು...</title><content type='html'>ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್. ಪಪ್ಪನ ಮುದ್ದಿನ ಮಗಳು ನಾನು. ತನ್ನ ತಮ್ಮ ಅಮ್ಮನ ಸೀರೆ ಸೆರಗು ಹಿಡಿದು ಓಡಾಡುತ್ತಿದ್ದರೆ, ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್. ನನಗೆ ಎರಡು ವರ್ಷವಿರುವಾಗಲೇ ನಾನು ಅಪ್ಪನ ಎದೆಗೆ ಅಂಟಿಕೊಂಡು ನಿದ್ದೆಹೋಗುತ್ತಿದ್ದೆ. ಅಮ್ಮನ ಗೊಡವೆಯೇ ಇಲ್ಲ, ಅವಳಿಗೆ ಅಪ್ಪ ಮಾತ್ರ ಸಾಕಿತ್ತು ಎಂದು ಅಮ್ಮ ಈಗಲೂ ನನ್ನ ಬಾಲ್ಯವನ್ನು ನೆನಪಿಸುತ್ತಾರೆ. ಆ ಬಾಲ್ಯವೇ ಅಂತದ್ದು, ಎಲ್ಲದಕ್ಕೂ ನಂಗೆ ಪಪ್ಪ ಬೇಕು. ಸ್ನಾನ ಮಾಡಿಸುವುದು, ತಿಂಡಿ ತಿನಿಸುವುದು, ಶಾಲೆಗೆ ರೆಡಿ ಮಾಡಿಸುವಾಗ ಜಡೆ ಹಾಕಲು ಮಾತ್ರ ಅಮ್ಮ (ಅದು ಅಪ್ಪನಿಗೆ ಗೊತ್ತಿಲ್ಲದ ಕಾರಣ)ನನ್ನು ಕರೆಯುತ್ತಿದ್ದೆ. ನಾನು ಚಿಕ್ಕವಳಿರುವಾಗ ಅಮ್ಮ ಅಂದ್ರೆ ನಂಗೆ ತುಂಬಾ ಭಯ. ಅಣ್ಣನ ತುಂಟಾಟಿಕೆಗೆ ಬೈಯ್ಯುವ ಅಮ್ಮನನ್ನು ನೋಡಿದರೆ ನನಗೆ ನಡುಕ. ಅಪ್ಪ ನಮ್ಮನ್ಯಾರನ್ನು ಬೈಯ್ಯಲ್ಲ. ತುಂಬಾ ಪ್ರೀತಿಯಿಂದಲೇ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಅದು ಮಾಡಬಾರದು ಇದು ಮಾಡಬಾರದು ಎಂದು ಯಾವತ್ತಿಗೂ ಒತ್ತಡ ಹಾಕುತ್ತಿರಲಿಲ್ಲ ಮಾತ್ರವಲ್ಲದೆ ಮಾಡಬಾರದು ಎಂದು ಹೇಳಿದರೆ ಅದ್ಯಾಕೆ ಮಾಡಬಾರದು? ಎಂದು ನಮಗೆ ವಿವರಿಸಿ ಹೇಳುತ್ತಿದ್ದರು. ಆಟವಾಡುವಾಗಲೂ ಪಪ್ಪನೇ ನನ್ನ ಸಂಗಾತಿ. ನಾನು ನಾಲ್ಕನೇ ಕ್ಲಾಸು ಕಲಿಯುತ್ತಿರಬೇಕಾದರೆ ಸ್ಕಾಲರ್ ಶಿಪ್ ಪರೀಕ್ಷೆ ಇತ್ತು. ಅದಕ್ಕಿರುವ ಗೈಡ್ ಕನ್ನಡದಲ್ಲಿ ಸಿಗುತ್ತಿರಲಿಲ್ಲ, ಆವಾಗ ಅಪ್ಪ ಮಲಯಾಳಂ ಗೈಡ್ ತೆಗೆದುಕೊಂಡು ಬಂದು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನಂಗೆ ಹೇಳಿಕೊಟ್ಟಿದ್ದರು. &lt;br /&gt;ಹೀಗೆ ಅಪ್ಪನ ಸಹಾಯದಿಂದಲೇ ಮಲಯಾಳಂನಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಯಿತು. ಆಮೇಲೆ ನಾನು ಹೈಸ್ಕೂಲ್ ತಲುಪಿದಾಗ ನನ್ನ ತಮ್ಮನಿಗೆ ಮಲಯಾಳಂನಲ್ಲಿ ಸಿಗುವ ಗೈಡ್್ಗಳನ್ನೆಲ್ಲಾ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿಕೊಡುತ್ತಿದ್ದೆ. ಯಾಕೆಂದರೆ ಕಾಸರಗೋಡಿನವರಾದ ಕಾರಣ ಕನ್ನಡ ಬಿಟ್ಟು ಬಾಕಿ ಉಳಿದ ಪಠ್ಯ ವಿಷಯಗಳೆಲ್ಲಾ ಕನ್ನಡ ಮಾಧ್ಯಮದವರಿಗೂ, ಮಲಯಾಳ ಮಾಧ್ಯಮದವರಿಗೂ ಒಂದೇ ಆಗಿತ್ತು. ಆವಾಗ ಮಾತೃಭೂಮಿ ವಾರ್ತಾಪತ್ರಿಕೆಯು 'ವಿದ್ಯಾರಂಗ' ಎಂಬ ಮಲಯಾಳ ಮಾಸಿಕ (ಪಠ್ಯಕ್ಕೆ ಸಂಬಂಧಿಸಿದ್ದು) ಹೊರತರುತ್ತಿತ್ತು. ಅದರಲ್ಲಿರುವ ಬಹುತೇಕ ಪ್ರಶ್ನೆಗಳೇ ಪ್ರಶ್ನೆ ಪತ್ರಿಕೆಯಲ್ಲಿ ಅಚ್ಚಾಗುತ್ತಿತ್ತು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನಗೆ ಮನೆಯಲ್ಲಿ ಹೇಳಿ ಕೊಡುವವರು ಇರಲಿಲ್ಲ. ಅಪ್ಪ ಹತ್ತನೇ ತರಗತಿಯಷ್ಟೇ ಓದಿದ್ದರೂ 'ವಿದ್ಯಾರಂಗ'ವನ್ನು ಅನುವಾದಿಸಿ ನನಗೆ ಹೇಳಿಕೊಡುತ್ತಿದ್ದರು. ನಂಗೆ ಯಾವ ವಿಷಯ ಕಷ್ಟ ಆಗುತ್ತಿದೆಯೋ ಆ ಬಗ್ಗೆ ಪಪ್ಪನ ಸ್ನೇಹಿತರೊಂದಿಗೆ (ಹೆಚ್ಚಿನವರು ಅಧ್ಯಾಪಕರೇ) ಚರ್ಚಿಸಲು ಹೇಳುತ್ತಿದ್ದರು.&lt;br /&gt;&lt;br /&gt;ಹೀಗೆ ನನ್ನ ಪ್ರತಿಯೊಂದು ಹೆಜ್ಜೆಯೊಂದಿಗೂ ಪಪ್ಪ ಸಾಥ್ ನೀಡಿದ್ದರು. ಗ್ರಾಮದಲ್ಲಿ ನಡೆದ ಯಾವುದೋ ಸಮಾರಂಭದಲ್ಲಿ ಪಪ್ಪ ಭಾಷಣ ಮಾಡಲು ನಿಂತು ತಡವರಿಸಿದಾಗ ನನ್ನ ಮುಂದೆ ಕೂತಿದ್ದ ಹುಡುಗರು ನಕ್ಕಿದ್ದು ನನಗೆ ತುಂಬಾ ಅವಮಾನವಾಗಿತ್ತು. ನಿನ್ನ ಪಪ್ಪನಿಗೆ ಭಾಷಣ ಮಾಡಲು ಗೊತ್ತಿಲ್ಲ ಅಂತಾ ಹೇಳಿದ್ದು ನನಗೆ ಬಾರೀ ನೋವನ್ನುಂಟು ಮಾಡಿತ್ತು. ಈ ವಿಷ್ಯ ಪಪ್ಪನಲ್ಲಿ ಹೇಳಿದಾಗ, ನೀನು ಚೆನ್ನಾಗಿ ಭಾಷಣ ಮಾಡು, ಅದೇ ನನಗೆ ಹೆಮ್ಮೆ ಎಂದಿದ್ದರು. ಹಾಗೇ ನಾನು ಭಾಷಣ ಮಾಡುವುದನ್ನು ಕಲಿತೆ, ಪಪ್ಪನ ಸ್ನೇಹಿತರೊಬ್ಬರು ಭಾಷಣ ಮಾಡುವುದು ಹೇಗೆ ಎಂದು ಹೇಳಿಕೊಟ್ಟರು. ಹಾಗೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯದಿನದಂದು ನಾನು ಮಾಡಿದ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ನಾನು ಡಿಗ್ರಿ ಮುಗಿಸುವವರೆಗೆ ಹೆಚ್ಚಿನ ಭಾಷಣ ಸ್ಪರ್ಧೆಗಳಲ್ಲಿ ನಾನೇ ಫಸ್ಟ್. ನಾನು ಭಾಗವಹಿಸುವ ಯಾವುದೇ ಚಟುವಟಿಕೆಯಿರಲಿ ಅಲ್ಲಿ ಪಪ್ಪ ಇರಲೇ ಬೇಕೆಂಬುದು ನನ್ನ ಹಠ ಹಿಡಿಯುತ್ತಿದ್ದೆ. ಪಪ್ಪನ ಸಾನಿಧ್ಯ ನನಗೆ ಪ್ರೋತ್ಸಾಹ ,ಧೈರ್ಯ ತಂದುಕೊಡುತ್ತಿತ್ತು.&lt;br /&gt;&lt;br /&gt;ಹಳೆಯ ನೆನಪುಗಳನ್ನು ತಿರುವಿದಾಗ...&lt;br /&gt;ಮೊದಲ ಬಾರಿಗೆ ಟೀ ಮಾಡಿದಾಗ ಟೀಗೆ ಸಕ್ಕರೆ ಜಾಸ್ತಿಯಾಗಿದೆ ನಿನಗೆ ಟೀ ಮಾಡೋಕೆ ಬರಲ್ಲ ಎಂದು ಮನೆಯ ಇತರ ಸದಸ್ಯರು ನಕ್ಕಾಗ, ನಂಗೆ ಸಿಹಿ ತುಂಬಾ ಇಷ್ಟ ಎಂದು ಪಪ್ಪ ಎರಡು ಕಪ್ ಟೀ ಕುಡಿದು ನನ್ನನ್ನು ಸಮಾಧಾನಿಸಿದ್ದರು. ಅನ್ನ ಜಾಸ್ತಿ ಬೆಂದಾಗಲಂತೂ ನಿನಗೆ ಅನ್ನ ಮಾಡಲು ಬರಲ್ಲ ಗಂಜಿ ಮಾತ್ರ ಗೊತ್ತು ಎಂದು ಹೇಳಿದ ಅಮ್ಮನ ಮಾತಿಗೆ ಪ್ರತಿಯಾಗಿ ಕುಚ್ಚಿಲಕ್ಕಿ ಗಟ್ಟಿಯಾಗಿದ್ದು ನುಂಗಲು ಆಗ್ತಾ ಇಲ್ಲ, ನನ್ನ ಮಗಳು ತುಂಬಾ ಬೇಯಿಸಿದ ಕಾರಣ ಇವತ್ತು ಜಗಿಯದೆ ನುಂಗಬಹುದು ಎಂದು ಪಪ್ಪ ಹೇಳಿದ್ದು ನೆನಪಿಸಿ ಕೊಂಡರೆ ಹಳೆ ನೆನಪುಗಳು ಹೀಗೆ ಮತ್ತೆ ಮತ್ತೆ ಕೆದಕುತ್ತವೆ. ಹೈಸ್ಕೂಲ್ ಓದುತ್ತಿರುವಾಗ ನನಗೆ ಬಹುಮಾನವಾಗಿ ಸಿಕ್ಕಿದ ಒಂದಿಷ್ಟು ಹಣದಿಂದ ಪಪ್ಪನಿಗೆ ಏನಾದರೂ ಗಿಫ್ಟ್ ಕೊಡಬೇಕೆಂಬ ಬಯಕೆಯಿಂದ ಬನಿಯನ್ ಖರೀದಿಸಿದ್ದೆ. ಪಪ್ಪನ ಸೈಜ್ ಗೊತ್ತಿಲ್ಲದ ಕಾರಣ ಅದು ದೊಗಳೆಯಾಗಿತ್ತು. ಅದನ್ನು ಅಪ್ಪ ಹಾಕಿಕೊಂಡಾಗ ಎಲ್ಲರ ಮುಖದಲ್ಲೂ ನಗು. ಆದ್ರೆ ಪಪ್ಪ ಮಾತ್ರ, ಸೆಖೆ ಜಾಸ್ತಿ ಇದೆ ಅಂತಾ ನನ್ನ ಮಗಳು ಸ್ವಲ್ಪ ಲೂಸ್ ಬನಿಯನ್ ತಂದಿದ್ದಾಳೆ ಎಂದು ಎಲ್ಲರ ಬಾಯ್ಮುಚ್ಚಿಸಿದ್ದರು. ಉದ್ದ ಲಂಗ ರವಿಕೆ, ಇಲ್ಲಿಕೆಟ್ಟ್ ಕಟ್ಟಿ ಕೂದಲು ಹರಡಿ ಬಿಟ್ಟು ಮಲ್ಲಿಗೆ ಮುಡಿದು, ಗಂಧದ ಬೊಟ್ಟು ಇಟ್ಟು ಪಕ್ಕಾ ಮಲಯಾಳಿ ಕುಟ್ಟಿ ತರಹ ನನ್ನನ್ನು ಕಾಣಲು ಪಪ್ಪ ಇಷ್ಟಪಡುತ್ತಾರೆ. ಈವಾಗಲೂ ಪಕ್ಕಾ ಸಾಂಪ್ರದಾಯಿಕ ಡ್ರೆಸ್ ಪಪ್ಪನಿಗೆ ಇಷ್ಟವಾದರೂ ಜೀನ್ಸ್ ,ಟೀಷರ್ಟ್ ಹಾಕಬೇಡ ಎಂದು ಹೇಳಲ್ಲ. ನನ್ನ ಪಪ್ಪ ಸಮಯದ ಜೊತೆಗೆ ಬೆಳೆದಿದ್ದಾರೆ, ನನ್ನನ್ನು ಬೆಳೆಸಿದ್ದಾರೆ.&lt;br /&gt;&lt;br /&gt;ಪಪ್ಪ ನನ್ನ ಜೊತೆಗಿದ್ದರೆ ಏನೋ ಒಂದು ಧೈರ್ಯ. ರಸ್ತೆ ದಾಟುವಾಗ ಅಪ್ಪನ ಕಿರುಬೆರಳು ಬೇಕು, ಜ್ವರ ಬಂದು ನಡುಗುವಾಗ ಅಪ್ಪಿ ಹಿಡಿದು ಮಲಗುವುದು, ಓದುವುದಕ್ಕಾಗಿ ಬೆಳ್ಳಂಬೆಳಗ್ಗೆ ಎಬ್ಬಿಸುವುದು, ಓದುತ್ತಿದ್ದಂತೆ ನಿದ್ದೆ ಹೋದರೆ ಪುಸ್ತಕವನ್ನೆಲ್ಲಾ ತೆಗೆದಿಟ್ಟು, ಪುಟ್ಟ ಮಗುವನ್ನು ಎತ್ತಿಕೊಂಡು ಹೋಗುವಂತೆ ಎತ್ತಿ ಮಲಗಿಸುತ್ತಿದ್ದರು. ನನ್ನ ಕಿವಿ ಚುಚ್ಚಿದಾಗ ನನಗಿಂತ ಅಪ್ಪನೇ ಹೆಚ್ಚು ನೋವು ಅನುಭವಿಸಿದ್ದರು ಎಂದು ಅಮ್ಮ ತಮಾಷೆ ಮಾಡ್ತಾರೆ. ಈಗಲೂ ನನಗೆ ಒಂದಿಷ್ಟು ಬೇಜಾರಾದರೆ ,ನೋವಾದರೆ ನನ್ನ ಪಪ್ಪ ದೂರದಲ್ಲಿದ್ದರೂ ಅದನ್ನು ಫೀಲ್ ಮಾಡ್ತಾರೆ. ಹತ್ತನೇ ತರಗತಿಯ ನಂತರವೇ ಅಮ್ಮನ ಜೊತೆ ನಾನು ಹೆಚ್ಚು ಆಪ್ತಳಾದದ್ದು.  ಆದಾಗ್ಯೂ ಅಮ್ಮನ ಆಸಕ್ತಿಗೆ ಮಣಿದು ಇಂಜಿನಿಯರಿಂಗ್ ಓದಿದರೂ ನಂತರ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪಪ್ಪ ನನಗೇ ಬಿಟ್ಟಿದ್ದರು. ಹಾಗೇ ಓದಿದ ವಿಷಯಕ್ಕೂ ನಾನು ಆಯ್ಕೆ ಮಾಡುವ ವೃತ್ತಿಗೂ ಸಂಬಂಧವೇ ಇಲ್ಲದ ಉದ್ಯೋಗವನ್ನು ನಾನು ಆಯ್ಕೆ ಮಾಡಿಕೊಂಡಾಗ ಅಮ್ಮ ಬೇಸರಿಸಿದ್ದರೂ ಪಪ್ಪ ಫುಲ್್ಖುಷ್ ಆಗಿದ್ದರು. ಯಾಕೆಂದರೆ ಒಲ್ಲದ ಮನಸ್ಸಿನಿಂದ ಇಂಜಿನಿಯರಿಂಗ್ ಸೇರಿದಾಗ, ಅಮ್ಮನಿಗೆ ಇದರಿಂದ ತುಂಬಾ  ಸಂತೋಷವಾಗುತ್ತೆ, ಹೇಗಾದರೂ ನಾಲ್ಕು ವರ್ಷ ಮುಗಿಸು ಆಮೇಲೆ ನಿನ್ನ ವಿಷ್ ಎಂದು ಪಪ್ಪ ಹೇಳಿದ್ದರು. ಆ ನಾಲ್ಕು ವರ್ಷ ಮುಗಿಸಿದಾಗ ಪಪ್ಪ ತನ್ನ ಮಾತು ಉಳಿಸಿಕೊಂಡರು ಆದ್ದರಿಂದಲೇ ನನ್ನ ವೃತ್ತಿಯಲ್ಲಿ ನಾನು ಸಂತೃಪ್ತಳಾಗಿದ್ದೇನೆ, ನನ್ನ ಅಮ್ಮ, ಪಪ್ಪನೂ. ನಾಳೆ ಅಪ್ಪಂದಿರ ದಿನ. ಎಲ್ಲರಿಗೂ ಅವರವರ ಅಪ್ಪನ ಬಗ್ಗೆ ವಿಶೇಷವಾದ ಪ್ರೀತಿ ಕಾಳಜಿ ಇದ್ದೇ ಇರುತ್ತದೆ. ಪ್ರೀತಿಯನ್ನು ವ್ಯಕ್ತ ಪಡಿಸದೇ ಇರುವ ಅಪ್ಪಂದಿರೂ ಇರಬಹುದು ಆದರೆ ಅಪ್ಪನ ಪ್ರೀತಿ ಬೆಳಂದಿಂಗಳಂತೆ ಹಿತವಾಗಿರುತ್ತದೆ, ಬೀಸುವ ತಂಗಾಳಿಯಂತೆ ಸೊಗಸಾಗಿರುತ್ತದೆ. ಹ್ಯಾಪಿ ಫಾದರ್ಸ್ ಡೇ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3890071480337808686?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3890071480337808686/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3890071480337808686' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3890071480337808686'/><link rel='self' type='application/atom+xml' href='http://www.blogger.com/feeds/4320259625062903049/posts/default/3890071480337808686'/><link rel='alternate' type='text/html' href='http://anuraaga.blogspot.com/2010/06/blog-post.html' title='ನಾನೂ ನನ್ನ ಸ್ವಂತ ಕನಸು...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-7278875082501357294</id><published>2010-05-28T04:18:00.000-07:00</published><updated>2010-05-28T04:18:49.410-07:00</updated><category scheme='http://www.blogger.com/atom/ns#' term='ವಧೂ ಪರೀಕ್ಷೆ'/><category scheme='http://www.blogger.com/atom/ns#' term='ಸಣ್ಣಕಥೆ'/><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><title type='text'>ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?</title><content type='html'>&lt;b&gt;ನ&lt;/b&gt;ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ. &lt;br /&gt;&lt;br /&gt;ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು,  ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾಗದು" ಎಂದು ಬ್ರೋಕರ್ ಕೂಡಾ ಆನಂದನಿಂದ ದೂರ ಓಡಿ ಹೋಗಿದ್ದ. &lt;br /&gt;&lt;br /&gt;ಸುಮಾರು 30 ಹುಡುಗಿಯನ್ನು ನೋಡಿದ ನಂತರ ಅಂತೂ ಕೊನೆಗೆ  ಹೆ.ನೋ(ಹೆಣ್ಣು ನೋಡೋ) ಆನಂದನಿಗೆ ಒಬ್ಬಳು ಹುಡುಗಿ ಇಷ್ಟವಾದ್ಲು. ಬ್ರೋಕರ್ ಫುಲ್್ಖುಷ್.&lt;br /&gt;&lt;br /&gt;ಅಂತೂ ಇಂತು ನಮ್ಮ ಆನಂದನಿಗೆ ಹುಡುಗಿ ಸಿಕ್ಕಿದ್ದಾಳೆ ಎಂದು ಮನೆಯವರೂ ಸಂತಸಪಟ್ಟರು. ಇನ್ನೇನು ನಿಶ್ಚಿತಾರ್ಥ ನಡೆಸಲು ತೀರ್ಮಾನಿಸಿದಾಗ, ಆ ಹುಡುಗಿಯಿಂದ ಆನಂದನಿಗೊಂದು ಲೆಟರ್. &lt;br /&gt;&lt;br /&gt;&lt;br /&gt;"ಡಿಯರ್ ಆನಂದ್, ನೀವು ನನ್ನನ್ಯಾಕೆ ಆಯ್ಕೆ ಮಾಡಿದ್ದೀರಿ ಅಂತಾ ನಂಗೊತ್ತಿಲ್ಲ. ಆದ್ರೆ ನಿಮಗೆ ಸುದೀಪ್್ನಷ್ಟು ಹೈಟ್, ಹೃತಿಕ್್ನಂತಾ ಸ್ಮೈಲ್, ಶಾರುಖ್್ನಂತಾ ಹೈರ್ ಸ್ಟೈಲಾದ್ರೂ ಬೇಡವೇ? ಇದೆಲ್ಲಾ ಹೋಗಲಿ ಬಿಡಿ, ಜಾನ್ ಅಬ್ರಹಾಂ ಬಾಡಿ, ಸೂರ್ಯನ ಕಣ್ಣು, ಮಹೇಶ್ ಬಾಬುನ ತರಹಾ ಉದ್ದ ಮೂಗು...ಅದೂ ಇಲ್ಲ. ಇದೆಲ್ಲಾ ಓದಿದ ಮೇಲೆ ನಿಮಗೆ ನನ್ನ ಮೇಲೆ ಸಿಟ್ಟು ಬಂದಿದ್ರೆ ಆ ಸಿಟ್ಟಿಗೆ ಮಮ್ಮುಟ್ಟಿಯ ಕೋಪದಷ್ಟು ಪವರ್ ಇರಕ್ಕಿಲ್ಲ, ಅಥವಾ ಪೆಚ್ಚಾಗಿದ್ರೆ ಅದೂ ಕೂಡಾ ಮೋಹನ್್ಲಾಲ್್ನ 'ಪೆಚ್ಚಾಗುವ' ಆ್ಯಕ್ಟಿಂಗ್್ನ ಒಂದಶದಷ್ಟೂ ಇರುತ್ತಾ? ಇದ್ಯಾವುದೇ ಯೋಗ್ಯತೆಗಳಿಲ್ಲದ ನಿಮ್ಮನ್ನು ಪತಿಯಾಗಿ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಗುಡ್ ಬೈ".&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-7278875082501357294?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/7278875082501357294/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=7278875082501357294' title='5 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/7278875082501357294'/><link rel='self' type='application/atom+xml' href='http://www.blogger.com/feeds/4320259625062903049/posts/default/7278875082501357294'/><link rel='alternate' type='text/html' href='http://anuraaga.blogspot.com/2010/05/blog-post_28.html' title='ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4320259625062903049.post-6184695918530597887</id><published>2010-05-04T06:09:00.000-07:00</published><updated>2010-05-04T06:09:51.160-07:00</updated><category scheme='http://www.blogger.com/atom/ns#' term='ಕವನ'/><title type='text'>ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...</title><content type='html'>ಬಚ್ಚಲು ಕೋಣೆಯೊಳಗೊಮ್ಮೆಇಣುಕಿ &lt;br /&gt;ನೋಡಿ...&lt;br /&gt;ಪುಟ್ಟ ಬಾಲೆಯು ಕದ್ದು ತಿಂದು&lt;br /&gt;ಗೊತ್ತಾಗಬಾರದೆಂಬಂತೆ&lt;br /&gt;ಬಾಯಿ ಮುಕ್ಕಳಿಸುತ್ತಿರಬಹುದು..&lt;br /&gt;&lt;br /&gt;ಹದಿಹರೆಯದ ನಿಮ್ಮ ಮಗಳು ಕದ್ದು &lt;br /&gt;ಮುಚ್ಚಿ ಪ್ರೇಮಪತ್ರವನ್ನೋದುತಿರಬಹುದು&lt;br /&gt;ಬಹುಷಃ ಮೊಬೈಲ್  ಹಿಡಿದು&lt;br /&gt;'ಅವನಲ್ಲಿ' ಪಿಸುಗುಟ್ಟುತ್ತಿರಬಹುದು&lt;br /&gt;&lt;br /&gt;ದುಃಖವನ್ನು ಅದುಮಿಟ್ಟ ಮಡದಿ&lt;br /&gt;ಯಾರೂ ಅರಿಯದಂತೆ&lt;br /&gt;ಕಣ್ಣೀರು ಹಾಕುತ್ತಿರಬಹುದು...&lt;br /&gt;ಬಹಿರ್ದೆಸೆಗೆ ಹೋದ ನಿಮ್ಮಮ್ಮ&lt;br /&gt;ಕಾಲು ಜಾರಿ ಬಿದ್ದು&lt;br /&gt;ಗೋಳಾಡುತ್ತಿರಲೂ ಬಹುದು...&lt;br /&gt;&lt;br /&gt;ಎಂದಾದರೊಂದು ದಿನ ನೀವೂ&lt;br /&gt;ಅತ್ತಿರಬಹುದು, ಬಿದ್ದಿರಬಹುದು&lt;br /&gt;ಕೋಪ ತಣಿಸಿಕೊಂಡಿರಬಹುದು&lt;br /&gt;ಇದೇ ಬಚ್ಚಲು ಕೋಣೆಯಲ್ಲಿ&lt;br /&gt;ಹೀಗೆ ಬಚ್ಚಲು ಮನೆ 'ರಹಸ್ಯ'&lt;br /&gt;ಮುಗಿಯುವುದೇ ಇಲ್ಲ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-6184695918530597887?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/6184695918530597887/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=6184695918530597887' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/6184695918530597887'/><link rel='self' type='application/atom+xml' href='http://www.blogger.com/feeds/4320259625062903049/posts/default/6184695918530597887'/><link rel='alternate' type='text/html' href='http://anuraaga.blogspot.com/2010/05/blog-post.html' title='ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-1587916605794274524</id><published>2010-01-08T03:51:00.000-08:00</published><updated>2010-01-08T03:58:53.389-08:00</updated><category scheme='http://www.blogger.com/atom/ns#' term='ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನ'/><category scheme='http://www.blogger.com/atom/ns#' term='ಆಮಂತ್ರಣ'/><category scheme='http://www.blogger.com/atom/ns#' term='ನೆನಪಿನ ಮಳೆಯಲ್ಲಿ ಕವನ ಸಂಕಲನ ಬಿಡುಗಡೆ'/><title type='text'>ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....</title><content type='html'>ಅಂತೂ ಮಳೆ ಬಂದಿದೆ,&lt;br /&gt;ನಿರೀಕ್ಷೆಯೂ ಮುಗಿದಿದೆ...&lt;br /&gt;ಕಾವ್ಯ ಕೃಷಿಯ ಮೊದಲ ಬೆಳೆ&lt;br /&gt;&lt;br /&gt;&lt;strong&gt;ನೆನಪಿನ ಮಳೆಯಲ್ಲಿ &lt;/strong&gt;&lt;br /&gt;ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ.&lt;br /&gt;&lt;br /&gt;ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್್ನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಹೂರ್ತ ಇಟ್ಟಾಗಿದೆ. &lt;br /&gt;&lt;br /&gt;ನೀವು ಬರುವುದೊಂದು ಬಾಕಿ&lt;br /&gt;ಮತ್ತೆಲ್ಲಾ ಕಾಲ ಮತ್ತು ನಿರೀಕ್ಷೆ....&lt;br /&gt;&lt;br /&gt;ನಿಮ್ಮದೇ ನೆನವರಿಕೆಯಲ್ಲಿ,&lt;br /&gt;ರಶ್ಮಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1587916605794274524?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1587916605794274524/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1587916605794274524' title='5 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1587916605794274524'/><link rel='self' type='application/atom+xml' href='http://www.blogger.com/feeds/4320259625062903049/posts/default/1587916605794274524'/><link rel='alternate' type='text/html' href='http://anuraaga.blogspot.com/2010/01/blog-post.html' title='ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4320259625062903049.post-5478609624820909513</id><published>2009-11-29T03:59:00.000-08:00</published><updated>2009-11-29T04:02:09.515-08:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತರ್ಲೆ'/><category scheme='http://www.blogger.com/atom/ns#' term='ಲಾಸ್ಟ್ ಬೆಂಚ್'/><category scheme='http://www.blogger.com/atom/ns#' term='ನನ್ನ ಕಾಲೇಜು ದಿನಗಳು'/><title type='text'>ಲಾಸ್ಟ್ ಬೆಂಚ್ ಲೀಲೆ...</title><content type='html'>ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.&lt;br /&gt;&lt;br /&gt;ನಾನೇನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಆದ್ರೆ ಪ್ಲಸ್ ಟು ವರೆಗೆ ಫಸ್ಟ್ ಬೆಂಚ್್ನಲ್ಲಿ ಕುಳಿತು ಪಾಠ ಕೇಳುವುದು ಬೋರು ಬೋರು ಎನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ಏನೋ ಸಮಾಧಾನ. ಇನ್ಮುಂದೆ ಯಾರು ನೀನು ಈ ಬೆಂಚ್್ನಲ್ಲೇ ಕುಳಿತುಕೊಳ್ಳಬೇಕೆಂದು ಹೇಳಲ್ಲ. ನಮ್ಮದು ಇಂಜಿನಿಯರಿಂಗ್ ಕಾಲೇಜು, 40 ಮಂದಿಯಿರುವ ಒಂದು ಕ್ಲಾಸು ರೂಮಿನಲ್ಲಿ ಹಿಂದಿನ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಅದರ ಮಜವೇ ಬೇರೆ. ಆವಾಗಲೇ ಗೊತ್ತಾದದ್ದು ಲಾಸ್ಟ್ ಬೆಂಚ್ ಫ್ರೀಡಂ ಅಂದ್ರೆ ಏನೂಂತ. ಈ ವರೆಗೆ ಅಚ್ಚರಿಯ ಕೂಪವಾಗಿದ್ದ ಲಾಸ್ಟ್ ಬೆಂಚ್್ನಲ್ಲಿ ನಾನು ನನ್ನ ಗೆಳತಿಯರಾದ ಶಿಮ್, ಶಾಮ್ (ಶಿಮ್ನಾ ಮತ್ತು ಶಮೀಮಾ ಹೆಸರನ್ನು ಶಾರ್ಟ್ ಮಾಡಿ) ಜೊತೆಯಾಗಿ ಕುಳಿತು ಮಾಡಿದ ತರ್ಲೆಗಳಿಗೆ ಲೆಕ್ಕವೇ ಇರಲ್ಲ. ನಮ್ಮ ಕ್ಲಾಸಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳಬಹುದಾಗಿತ್ತು ಮಾತ್ರವಲ್ಲದೆ ಒಂದೊಂದು ದಿನ, ಅಲ್ಲದಿದ್ದರೆ ಒಂದೊಂದು ಪಿರಿಯಡ್್ನಲ್ಲಿ ತಮ್ಮ ಜಾಗ ಬದಲಿಸಿ ಎಲ್ಲಿ ಬೇಕಾದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿರುತ್ತಿತ್ತು. ಆದರೆ ನಾವು ಮೂವರು ಎಂದೂ ಆ ಲಾಸ್ಟ್ ಬೆಂಚ್ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ. ಲಾಸ್ಟ್ ಬೆಂಚ್ ಅಂದರೆ ಶಿಮ್, ಶಾಮ್, ರ್ಯಾಶ್ (ನನ್ನ ಹೆಸರು)ರ ಅಪ್ಪನ ಸೊತ್ತು ಅದಕ್ಕೆ ಅವರು ಅದನ್ನು ಬಿಟ್ಟು ಕದಲಲ್ಲ ಎಂದು ಇತರ ವಿದ್ಯಾರ್ಥಿಗಳು ನಮ್ಮನ್ನು ತಮಾಷೆ ಮಾಡುತ್ತಿದ್ದರು. &lt;br /&gt;&lt;br /&gt;ಲಾಸ್ಟ್ ಬೆಂಚ್್ಗೆ ಒಂದು ಅಸಾಧಾರಣ ಶಕ್ತಿಯಿದೆ ಎಂದು ಅರಿವಾದದ್ದು ಅಲ್ಲಿ ಕುಳಿತಾಗಲೇ. ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಮುಖ ಗಂಟಿಕ್ಕಿ ಕುಳಿತುಕೊಳ್ಳಬೇಕಾಗಿಲ್ಲ. ಏನಾದರೂ ಸೈಡ್ ಬ್ಯುಸಿನೆಸ್ (ಏನೂಂತಾ ಮಾತ್ರ ಕೇಳ್ಬೇಡಿ) ಮಾಡಬೇಕಾದರೆ ಭಯ ಪಡಬೇಕಾಗಿಲ್ಲ. ಪಾಠ ಬೋರು ಎಂದೆನಿಸಿದರೆ ನೋಟ್ ಬುಕ್್ನ ಕೊನೆಯ ಪೇಜಲ್ಲಿ ಏನಾದರೂ ಗೀಚ ಬಹುದು. ನೋಟ್ ಬುಕ್ ಸಿಕ್ಕದಿದ್ದರೆ ಡೆಸ್ಕೇ ನಮ್ಮ ಡ್ರಾಯಿಂಗ್ ಬೋರ್ಡು. ನಿದ್ದೆ ಬಂದರೂ ಆರಾಮವಾಗಿ ನಿದ್ದೆ ಮಾಡಬಹುದು. ಆದರೂ ಕೆಲವು ಟೀಚರ್್ಗಳು ಲಾಸ್ಟ್ ಬೆಂಚಿನ ಮೇಲೆ ಕಣ್ಣು ನೆಟ್ಟಿರುತ್ತಾರೆ. ನಮ್ಮೊಬ್ಬರು ಇಕಾನಾಮಿಕ್ಸ್ ಟೀಚರ್ ಇದ್ರು, ಅವರಂತೂ ನಮ್ಮ ಲಾಸ್ಟ್ ಬೆಂಚ್್ನಲ್ಲಿರುವ (ನಾವು)ತ್ರಿಮೂರ್ತಿಗಳನ್ನೇ ನೋಡಿಕೊಂಡು ಪಾಠ ಮಾಡುತ್ತಿದ್ದರು. ಅವರ ಕಣ್ಣು ತಪ್ಪಿಸಿ ನಮ್ಮಲ್ಲಿ ಯಾರಾದರೂ ಒಬ್ಬರು ಏನಾದರೂ ತರ್ಲೆ ಮಾಡಿದ್ರೆ ಸಾಕು, 'ಲಾಸ್ಟ್ ಬೆಂಚ್ ಗರ್ಲ್ಸ್ ಸ್ಟಾಂಡಪ್್' ಅಂತಾ ಹೇಳ್ತಿದ್ರು. ಆವಾಗ ನಾವು ತ್ರಿಮೂರ್ತಿಗಳು ಎದ್ದು ನಿಲ್ಲುತ್ತಿದ್ದೆವು. ಮತ್ತೆ ನಾವು ಎದ್ದು ನಿಂತುಕೊಂಡಿರುವುದನ್ನು ನೋಡಿ ಅವರಿಗೂ ಕಿರಿಕಿರಿ ಆದಾಗ 'ಯು ಕ್ಯಾನ್ ಸಿಟ್್' ಅಂತಾ ಹೇಳುತ್ತಿದ್ದರು. ಇನ್ನು ಕೆಲವು ಟೀಚರ್್ಗಳು ಮೆಲ್ಲ ಮಾತಾಡುವವರು. ಅದಕ್ಕಾಗಿ ಕಿವಿಯರಳಿಸಿ ಪಾಠ ಕೇಳ್ಬೇಕು ಎಂಬ ಒಂದು ವಿಷ್ಯ ಬಿಟ್ರೆ ಬೇರೇನೂ ತೊಂದರೆಯಿರಲ್ಲ. ಮಾತ್ರವಲ್ಲದೆ ಟೀಚರ್ ಬೋರ್ಡಿನತ್ತ ತಿರುಗಿದರೆ ಕಿಸಕ್ಕನೆ ನಗುವ, ಕಿಟಿಕಿಯ ಮೂಲಕ ಹೊರಗೆ ಏನೆಲ್ಲಾ ನಡೆಯುತ್ತಿದೆ ಎಂಬೆಲ್ಲಾ ವಿಷಯಗಳನ್ನು ನೋಡುವ ಭಾಗ್ಯ ದಕ್ಕಿರುವುದೇ ನಮಗೆ. ಇನ್ನೂ ಕೆಲವು ಟೀಚರ್್ಗಳು ತರ್ಲೆ ಮಾಡಿದರೆ ಹುಡುಗರ ಜೊತೆ ಅವರ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅಲ್ಲಿ ಕುಳಿತರೇನು? ಇಲ್ಲಿ ಕುಳಿತರೇನು? ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡದು ಎಂಬಂತೆ ಅಲ್ಲಿ ಡೀಸೆಂಟಾಗಿ ಕುಳಿತಿರುವ ಹುಡುಗರನ್ನೂ ತರ್ಲೆ ಮಾಡಿ ಅವರಿಗೂ ತರ್ಲೆ ಎಂಬ ಬಿರುದು ಬರುವಂತೆ ಮಾಡುತ್ತಿದ್ದೆವು. ಆಮೇಲೆ ಇನ್ನು ಈ ತ್ರಿಮೂರ್ತಿಗಳಿಂದಾಗಿ ಇಡೀ ಕ್ಲಾಸೇ ತರ್ಲೆ ಆಗುವುದು ಬೇಡ ಎಂದು ತದನಂತರ ಯಾವ ಟೀಚರ್ ಕೂಡಾ ಈ ಪ್ರಯೋಗಕ್ಕೆ ಮುಂದಾಗಿಲ್ಲ.&lt;br /&gt;&lt;br /&gt;&lt;br /&gt;ಕ್ಲಾಸಿನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದರೂ ನಾವು ಕಲಿಕೆಯಲ್ಲಿ ದಡ್ಡರೆನಿಸಿಕೊಂಡಿಲ್ಲ. ಈ ಕಾಲೇಜು ಲೈಫ್ ಮತ್ತೆಂದೂ ಸಿಗಲ್ಲ ಅದನ್ನು ಆದಷ್ಟು ಎಂಜಾಯ್ ಮಾಡಬೇಕು ಜೊತೆಗೆ ಕಲಿಕೆಯೂ ಮುಖ್ಯ ಆದ ಕಾರಣ ಎರಡನ್ನೂ ಸರಿತೂಗಿಸಿಕೊಂಡು ಹೋಗಬೇಕು ಎಂಬುದು ನಮ್ಮ ಯೋಜನೆಯಾಗಿತ್ತು. ನಾನಂತೂ ನನಗೆ ಬೋರು ಎಂದೆನಿಸಿದ ವಿಷಯಗಳನ್ನು ಪಾಠ ಮಾಡುತ್ತಿದ್ದರೆ ಕವಿತೆ ಕವನ ಏನಾದರೂ ಗೀಚುತ್ತಲೇ ಇರುತ್ತಿದ್ದೆ. ಇಲ್ಲವಾದರೆ ಕಣ್ಣು ತೆರೆದೇ ಯಾವುದೋ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೆ. ಹಾಗೆ ಬರೆದ ಕವನಗಳೆಷ್ಟೋ ನಂತರ ಉತ್ತಮ ಪಡಿಸಿ ಕಾಲೇಜು ಭಿತ್ತಿಪತ್ರಿಕೆಯಲ್ಲಿ ಸ್ಥಾನ ಕಂಡುಕೊಂಡಿತ್ತು. ಆನಿಮೇಷನ್ ಕ್ಲಾಸಿನಲ್ಲಿ ಕನಸು ಕಾಣುತ್ತಾ ಬರೆದ ಆ ಕಥೆ ವರ್ಷ ಕಳೆದು ಪ್ರಕಟವಾದಾಗ ಜನರ ಮೆಚ್ಚುಗೆಯನ್ನು ಗಳಿಸಿತ್ತು. ಅದಿರಲಿ ಬಿಡಿ, ಇನ್ನು ಕ್ಲಾಸಿಗೆ ಟೀಚರ್ ಬರದೇ ಇರುವ ಸಂದರ್ಭ ಬಂದರೆ ಹೆಚ್ಚಿನ ವಿದ್ಯಾರ್ಥಿಗಳು ಆ ಸಬ್ಜೆಕ್ಟ್್ನ ಬಗ್ಗೆ ಚರ್ಚೆ ನಡೆಸುವುದೋ, ಓದುವುದೋ ಮಾಡುತ್ತಿದ್ದರು. ಆದರೆ ನಾವುಗಳು ಅಂತಾಕ್ಷರಿ ಆಡುತ್ತಾ ಇಲ್ಲವಾದರೆ ಸಿನಿಮಾ ಕಥೆಯೊಂದನ್ನು ಹೆಣೆಯುತ್ತಿದ್ದೆವು. ಅದು ಅಂತಿಂಥಾ ಡಬ್ಬಾ ಸಿನಿಮಾ ಕಥೆಯಲ್ಲ, ನಮ್ಮ ಚಿತ್ರದಲ್ಲಿ ಶಾರುಖ್, ಹೃತಿಕ್, ಮಮ್ಮುಟ್ಟಿ, ಮೋಹನ್್ಲಾಲ್ ಮೊದಲಾದವರೇ ಹೀರೋಗಳು, ನಾವೇ ಹೀರೋಯಿನ್್ಗಳು. ನಾವೇ ಪ್ರೊಡ್ಯೂಸರ್್ಗಳು, ಡೈರೆಕ್ಟರ್್ಗಳು ಎಲ್ಲಾ. ಇಂತಹಾ ಕ್ರಿಯೇಟಿವಿಟಿ ಐಡಿಯಾಗಳು ಹೊಳೆಯಬೇಕಾದರೆ ಲಾಸ್ಟ್ ಬೆಂಚೇ ಸೂಕ್ತವಾದ ಸ್ಥಳ. ನಾವು ತರ್ಲೆಗಳೆಂದು ನಮ್ಮನ್ನು ಯಾರೂ ದೂರುತ್ತಿರಲಿಲ್ಲ. ನಾವು ಮೂವರೂ  ಕ್ಲಾಸು ಬಂಕ್ ಮಾಡಿದ ದಿನ ಕ್ಲಾಸು ಭಣ ಭಣ ಅಂತಾ ಅನಿಸುತ್ತೆ, ಎಲ್ಲವೂ ಬೋರು ಬೋರು ಎಂದು ಕ್ಲಾಸಿನ ಬುದ್ಧಿಜೀವಿಗಳು ಹೇಳಿದ್ದು ನಮಗೆ ಸಿಕ್ಕಿದ ಕಾಂಪ್ಲಿಮೆಂಟು.&lt;br /&gt;&lt;br /&gt; ಅಂದ ಹಾಗೆ ನಾವು ಲಾಸ್ಟ್್ಬೆಂಚ್ ಮೆಂಬರ್ಸ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಈವಾಗ ಎಂಜಾಯ್ ಮಾಡಿ ಇಂಟರ್್ನಲ್ ಪರೀಕ್ಷೆ ಬಂದಾಗ ತಿಳಿಯುತ್ತೆ ಈ ಎಂಜಾಯ್್ಮೆಂಟಿನ ರಿಸಲ್ಟ್ ಎಂದು ಕೆಲವು ಟೀಚರ್್ಗಳು ಬೈಯ್ಯುತ್ತಿದ್ದರು. ಪರೀಕ್ಷೆ ಬಂದಾಗ ನಾವು ಹೇಗೋ ಕಷ್ಟ ಪಟ್ಟು ಕಲಿತು ನಮ್ಮ ಸ್ಥಾನ (ಮಾನ)ಉಳಿಸುತ್ತಿದ್ದೆವು. ಇದು ಮಾತ್ರವಲ್ಲದೆ ರಾಶಿ ರಾಶಿ ಅಸೈನ್್ಮೆಂಟ್್ಗಳು ಬೇರೆ. ಟೀಚರ್್ಗಳು ಏನೇ ಕೆಲಸ ಹೇಳಿದರೂ ಸರಿಯಾದ ಸಮಯಕ್ಕೆ ಅದನ್ನು ಮಾಡಿ ಮುಗಿಸುತ್ತಿದ್ದರಿಂದ ಸದ್ಯ ನಮ್ಮ ತರ್ಲೆಗಳ ಬಗ್ಗೆ ಮನೆಗೆ ದೂರು ಹೋಗುತ್ತಿರಲಿಲ್ಲ.. ನಾವು ಬಚಾವ್!. ಮೊದ ಮೊದಲು ನಾವು ಕ್ಲಾಸಿನಲ್ಲಿ ತರ್ಲೆ ಮಾಡಿದಾಗ ಸಿಕ್ಕಿ ಬಿದ್ದರೆ ಟೀಚರ್ ಮೊದಲು ಕೇಳುವ ಪ್ರಶ್ನೆ "ನೀನು ಮೆರಿಟ್ ಸೀಟಾ ಅಥವಾ ಪೇಮೆಂಟ್ ಸೀಟಾ? "ಮೆರಿಟ್ ಸೀಟ್ ಅಂದಾಗ 'ಓಕೆ ಸರಿ ಚೆನ್ನಾಗಿ ಕಲಿ' ಎಂದು ಹೇಳುತ್ತಾರೆ, ಪೇಮೆಂಟ್ ಅಂದ ಕೂಡಲೇ ನಿನಗೇನು ತಲೆ ಕೆಟ್ಟಿದಾ? ನಿನ್ನ ಅಪ್ಪ ಅಮ್ಮ ಅಷ್ಟೊಂದು ಹಣ ಖರ್ಚು ಮಾಡುವುದು ಸುಮ್ಮನೇನಾ? ಅಂತಾ ಬಾಯ್ತುಂಬ ಉಪದೇಶ ನೀಡುತ್ತಾರೆ. ಅಂತಿಮ ವರ್ಷ ತಲುಪಿದಾಗ ನಾವು ಏನು ಮಾಡಿದರೂ ಟೀಚರ್್ಗಳು ಯಾರೂ ಬೇಡ ಎನ್ನುತ್ತಿರಲಿಲ್ಲ. ಆದರೆ ಪ್ರೊಜೆಕ್ಟು, ಸೆಮಿನಾರು ಹೇಗೆ ಬ್ಯುಸಿಯಾಗಿರುವಾಗ ಹೆಚ್ಚಿನ ತುಂಟತನಗಳಿಗೆ ಸಮಯವೂ ಸಾಕಾಗುತ್ತಿರಲಿಲ್ಲ. ಅಂತೂ ಒಟ್ಟಿನಲ್ಲಿ ಆ ನಾಲ್ಕು ವರ್ಷಗಳು ಹೇಗೆ ಮುಗಿದವು ಅಂತಾ ಗೊತ್ತೇ ಆಗಲಿಲ್ಲ. ಕೊನೆಗೆ ಫೇರ್್ವೆಲ್ ಪಾರ್ಟಿ ಮುಗಿದು ಹಿಂತಿರುಗುವಾಗ ನಮ್ಮ ವಿಭಾಗದ ಮುಖ್ಯಸ್ಥರು ನಮ್ಮನ್ನು ಕರೆದು ಮಾತನಾಡಿಸಿ ನಿಮ್ಮ ಕ್ಲಾಸಿನ ಬಗ್ಗೆ ಚಿಂತಿಸುವಾಗ ಮೊದಲು ನನ್ನ ಮನಸ್ಸಲ್ಲಿ ಸುಳಿಯುವ ಚಿತ್ರ ನಿಮ್ಮದೇ 'Last bench Crakers...You Naughty Girls 'ಎಂದು ಹೇಳಿದಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5478609624820909513?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5478609624820909513/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5478609624820909513' title='6 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5478609624820909513'/><link rel='self' type='application/atom+xml' href='http://www.blogger.com/feeds/4320259625062903049/posts/default/5478609624820909513'/><link rel='alternate' type='text/html' href='http://anuraaga.blogspot.com/2009/11/blog-post.html' title='ಲಾಸ್ಟ್ ಬೆಂಚ್ ಲೀಲೆ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4320259625062903049.post-2232568000359339112</id><published>2009-10-12T05:01:00.001-07:00</published><updated>2009-10-12T05:05:23.036-07:00</updated><category scheme='http://www.blogger.com/atom/ns#' term='ಬ್ಲಾಗ್'/><category scheme='http://www.blogger.com/atom/ns#' term='ರಶ್ಮಿ'/><category scheme='http://www.blogger.com/atom/ns#' term='ಹೆಸರು'/><category scheme='http://www.blogger.com/atom/ns#' term='ಸುಮ್ಮನೆ ತರ್ಲೆ'/><title type='text'>ಹೆಸರಲ್ಲಿ ಏನು (ಎಲ್ಲಾ) ಇದೆ!</title><content type='html'>ಸುಮ್ಮನೆ ಕುಳಿತಿದ್ದರೆ ತಲೆಯಲ್ಲಿ ಹುಳು ಹೊಕ್ಕಂತೆ ಏನೆಲ್ಲಾ ಯೋಚನೆ ಬಂದುಬಿಡುತ್ತೆ. ಅದಕ್ಕೆ ಏನಾದರೊಂದು ಕೆಲಸ ಮಾಡುತ್ತಾ ಇರಬೇಕೆಂದು ನನ್ನಮ್ಮ ಹೇಳ್ತಾ ಇರುತ್ತಾರೆ. ಹುಂ ಅದರಂತೆಯೇ ನಾನು ಏನಾದರೂ (ಏನೆಲ್ಲಾ ಅಂತ ಮಾತ್ರ ಕೇಳ್ಬೇಡ್ಲಿ..ಪ್ಲೀಸ್) ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡು ಬ್ಯುಸಿಯಾಗಿರುತ್ತೇನೆ. ಅದಲ್ಲಾ ಪಕ್ಕಕ್ಕಿರಲಿ, ಸದ್ಯ ಏನಾದರೂ ಕೆಲಸ ಮಾಡಬೇಕಲ್ಲಾ ಎನ್ನುವಾಗಲೇ ನನ್ನ ಬಗ್ಗೆಯೇ ನಾನು ಶೋಧ ನಡೆಸಲು ತೊಡಗಿದ್ದೇನೆ. ಇದೇನು ಈ ತರ್ಲೆ ಹುಡುಗಿ ಆಧ್ಯಾತ್ಮದತ್ತ ತಿರುಗಿದಳೇನೋ ಎಂದು ಅಂದುಕೊಳ್ಬೇಡಿ. ನನ್ನ ಬಗ್ಗೆ ನಾನು ಶೋಧ ನಡೆಸುತ್ತಿರುವುದು ಗೂಗಲ್ ಎಂಬ ಸರ್ಚ್ ಇಂಜಿನ್್ನಲ್ಲಿ. ಯಾವಾಗ ಇಂಟರ್್ನೆಟ್ ನನಗೆ ಪರಿಚಿತವಾಯಿತೋ ಅಂದಿನಿಂದ ನನಗೂ ಗೂಗಲ್್ಗೂ ಬಿಟ್ಟಿರಲಾಗದ ನಂಟು. ಮೊದಲ ಬಾರಿ ಗೂಗಲ್ ಎಂಬ ಸರ್ಚ್ ಇಂಜಿನ್್ನ್ನು ಓಪನ್ ಮಾಡಿ ಅದರಲ್ಲಿ ಹುಡುಕಿದ್ದೇ ನನ್ನನ್ನು. ಅಂದ್ರೆ ನನ್ನ ಹೆಸರು. ರಶ್ಮಿ ಅಂತ ಟೈಪ್ ಮಾಡಿ ಎಷ್ಟು ಜನ ರಶ್ಮಿಯರು ಎಲ್ಲೆಲ್ಲಿ ಇದ್ದಾರೆ? ಯಾವ್ಯಾವ ಸರ್್ನೇಮ್್ಗಳಲ್ಲಿ ಇದ್ದಾರೆ ಎಂದೆಲ್ಲಾ ಕುತೂಹಲದಿಂದ ಗಮನಿಸಿದ್ದೆ. ಪ್ರತಿಯೊಬ್ಬರಿಗೂ ಅವರವರ ಹೆಸರಿನ ಬಗ್ಗೆ ಹೆಮ್ಮೆ ಇರುವಂತೆ ನನಗೂ ಇದೆ. ಎಲ್ಲಾ ಅಪ್ಪ ಅಮ್ಮಂದಿರಿಗೂ ಮಗು ಹುಟ್ಟಿದಾಗ ತಮ್ಮ ಮಕ್ಕಳಿಗೆ ವಿಶಿಷ್ಟ ಹೆಸರಿಡಬೇಕೆಂಬ ಹಂಬಲ ಇದ್ದೇ ಇರುತ್ತದಲ್ಲಾ ಅದೇ ಹಂಬಲ ನನ್ನ ಅಪ್ಪ ಅಮ್ಮನಿಗೂ ಇತ್ತು. ನನ್ನದು ಅಂತಾ ವಿಶಿಷ್ಟ ಹೆಸರೇನು ಅಲ್ಲ. ಆದ್ರೂ ನಾನು ಶಾಲೆಗೆ ಸೇರಿದಾಗ ಅಲ್ಲಿ ನನ್ನ ಹೆಸರಿನ ಬೇರೆ ಯಾರೂ ಆ ಶಾಲೆಯಲ್ಲಿರಲಿಲ್ಲ. ಹಾಗೇ ನನ್ನದು ವಿಶಿಷ್ಟ ಹೆಸರು, ಎರಡೇ ಅಕ್ಷರವಿರುವ ಅರ್ಥಗರ್ಭಿತವಾಗಿರುವ ಹೆಸರು ಎಂದು ಯಾರಾದರೂ ಹೊಗಳಿದರೆ ಸಾಕು..ಸಂತೋಷದಿಂದ ತೇಲಾಡುತ್ತಿದ್ದೆ.&lt;br /&gt;&lt;br /&gt;ಮತ್ತೆ ನಾನು ಹೈಸ್ಕೂಲ್್ಗೆ ಸೇರಿದಾಗ (ಗರ್ಲ್ಸ್ ಹೈಸ್ಕೂಲ್) ಅಲ್ಲಿ ಹಲವಾರು ರಶ್ಮಿಯರಿದ್ದರು. ಅಷ್ಟೊಂದು ಹೆಸರುಗಳಿದ್ದರೂ ನನ್ನದು ಮಾತ್ರ ವಿಶಿಷ್ಟವಾದದ್ದು. ಅಂದ ಹಾಗೆ ನನ್ನ ಹೆಸರನ್ನು ಇಂಗ್ಲಿಷ್್ನಲ್ಲಿ ಬರೆಯುವಾಗ ಒಂದು ಸ್ಪೆಲಿಂಗ್ ವ್ಯತ್ಯಾಸದಿಂದಾಗಿ ನಾನು ಅಲ್ಲಿ ಭಿನ್ನ ಹೆಸರಿನವಳಾಗಿದ್ದೆ. ಕನ್ನಡ ಮತ್ತು ಮಲಯಾಳಂ ಮಾಧ್ಯಮವಿರುವ ಆ ಶಾಲೆಯಲ್ಲಿ ಕನ್ನಡ ಮಾಧ್ಯಮದವರ ಸಂಖ್ಯೆ ತೀರಾ ಕಡಿಮೆ. ಮಲಯಾಳಿಗಳಾದ ರಶ್ಮಿ ಎಂಬ ಹೆಸರಿನವರು ತಮ್ಮ ಹೆಸರನ್ನು ರೆಶ್ಮಿ ಎಂದು ಬರೆಯುವಾಗ ನನ್ನದು ರಶ್ಮಿ. ಆವಾಗ ನಾನು ಎಲ್ಲರ ಬಾಯಲ್ಲೂ ರೆಶ್ಮಿ ಎಂದೇ ಕರೆಯಲ್ಪಡುತ್ತಿದ್ದೆ. ಕೆಲವರಂತೂ ರಸ್ಮಿ, ರಷಿಮಿ ಎಂದು ತಮಗೆ ಇಷ್ಟಬಂದಂತೆ ಕರೆಯುವರು. ಕೆಲವೊಮ್ಮೆ ನಾನು ನನ್ನ ಹೆಸರು ರಶ್ಮಿ ಅಂತ ಹೇಳಿ ಅದರ ಸ್ಪೆಲಿಂಗ್ ಕೂಡಾ ಹೇಳ್ತಾ ಇದ್ದೆ.  ಆ ಮೇಲೆ ಹೆಸರಲ್ಲೇನಿದೆ ಅಂತಾ ಸುಮ್ಮನಾಗಿಬಿಟ್ಟೆ. ಮತ್ತೆ ಸಮಸ್ಯೆ ಉದ್ಬವಿಸಿದ್ದು, ನನಗೆ ಸಿಗುವ ಬಹುಮಾನ ಪತ್ರಗಳಲ್ಲಿ. ಅಲ್ಲಿಯೂ ನಾನು ಮಲಯಾಳಿಗರಿಂದ ರೆಶ್ಮಿಯಾಗಿ ಬಿಡುತ್ತಿದ್ದೆ. ಇದನ್ನೆಲ್ಲಾ ಕಂಡಾಗ ನನ್ನ ಅಮ್ಮನಿಗಂತೂ ಭಾರೀ ಸಿಟ್ಟು ಬರುತ್ತಿತ್ತು. ರಶ್ಮಿ ಅಂತಾ ಒಳ್ಳೆಯ ಹೆಸರನ್ನು ರೆಶ್ಮಿ ಮಾಡಿಬಿಟ್ಟರಲ್ಲಾ ಅಂತಾ ಅಮ್ಮ ಚಿಂತೆ ಮಾಡುತ್ತಿದ್ದು ಇನ್ನು ಮುಂದೆ ಹೆಸರು ಹೇಳುವಾಗ "ಸರ್ ನನ್ನ ಹೆಸರು Reshmi ಅಲ್ಲ Rashmi ಅಂತಾ ಬರೆಯಬೇಕು ಎಂದು ಹೇಳ್ಬೇಕು ಎಂದು ಆದೇಶ  ನೀಡುತ್ತಿದ್ದರು.&lt;br /&gt;&lt;br /&gt;&lt;br /&gt;ಅಲ್ಲಿಗೇ ಮುಗಿಲಿಲ್ಲ ನನ್ನ ಹೆಸರಿನ ಸಮಸ್ಯೆ. ಮನೆಯಲ್ಲಿ ಅಪ್ಪ ಅಮ್ಮ ಮುದ್ದಿನಿಂದ ಕರೆಯುವ ಹೆಸರು ಹೇಗೋ ಇದೆ. ಶಾಲೆಯಲ್ಲಿ ಹೆಸರಿನ ಮೊದಲಕ್ಷರವಾದ ರ, ರೆ ಆಯಿತು. ಆಮೇಲೆ ಗೆಳತಿಯರ ಬಾಯಲ್ಲಿ ನಾನು ರಶು ಆದೇ. ಇರುವ ಎರಡೇ ಅಕ್ಷರದ ಹೆಸರಿಗೂ ಕತ್ತರಿ ಹಾಕಲಾಯಿತು. ಮಲಯಾಳಿಗಳು ಬಹುಸಂಖ್ಯಾತರಿರುವ ಪ್ರಸ್ತುತ ಶಾಲೆಯಲ್ಲಿ ನಾನು ಕನ್ನಡ ರಶ್ಮಿಯಾದೆ. ಮತ್ತೆ ಕೆಲವೊಮ್ಮೆ ನನ್ನ ಹೆಸರಿನ ಜೊತೆಗೆ ಕ್ಲಾಸು, ಡಿವಿಜನ್ ಸೇರಿಕೊಳ್ಳುತ್ತಿತ್ತು. ಪ್ಲಸ್ ಟು ಕೂಡಾ ಮಲಯಾಳಿ ಶಾಲೆಯಲ್ಲೇ. ಅಲ್ಲಿಯೂ ನನ್ನ ಹೆಸರು ಮಲಯಾಳದ ಉಚ್ಛಾರಕ್ಕೆ ಬಲಿಯಾಯಿತು. ಮತ್ತೆ ಇಂಜಿನಿಯರಿಂಗ್ ಕಾಲೇಜು ಮೆಟ್ಟಿಲು ಹತ್ತಿದಾಗ ನನ್ನ ಹೆಸರಿಗೆ ಐಟಿ ಸೇರಿಕೊಂಡಿತು (ನನ್ನ ಬ್ರಾಂಚ್ ಹೆಸರು). ಇನ್ನು ಫ್ರೆಂಡ್ಸ್್ಗಳ ಬಾಯಲ್ಲಿ ಸ್ಟೈಲಿಷ್ ಎಂಬಂತೆ ನನ್ನ ಹೆಸರು ರಶ್, ರ್ಯಾಶ್ ಅಂತಾ ಏನೆಲ್ಲಾ ಆಗಿ ಬಿಟ್ಟಿತು. ಜೊತೆಗೆ ಅರ್ಥವೂ ಬದಲಾಗಿ ಬಿಟ್ಟಿತು! ಇದು ಸಾಕಾಗದು ಎಂಬಂತೆ ಅಡ್ಡ ಹೆಸರುಗಳು ಬೇರೆ. (ಅದನ್ನೆಲ್ಲಾ ಇಲ್ಲಿ ಹೇಳಲಿಕ್ಕೆ ಹೋಗುವುದಿಲ್ಲ ಬಿಡಿ :)) ಆದ್ರೆ ಈವಾಗ ನನ್ನ ಗೆಳೆಯನೊಬ್ಬ ಕಳುಹಿಸಿದ ಎಸ್ಸೆಮ್ಮೆಸ್್ನ ಕೊನೆಗೆ ರಮ್ ಅಂತಾ ಬರೆಯಲಾಗಿತ್ತು. ಇದೇನು ರಮ್ ಅಂತಾ ಕೇಳಿದಾಗ ಬಂದ ಉತ್ತರ ನೋಡಿ ನನಗೇ ಶಾಕ್. ನನ್ನ ಹೆಸರನ್ನು ಶಾರ್ಟ್ ಮಾಡಿ ರಮ್ ಅಂತ ಬರೆಯಲಾಗಿತ್ತು. ಸೂರ್ಯನ ಕಿರಣ ಎಂಬ ಅರ್ಥ ಬರುತ್ತದೆ ಎಂದು ನನ್ನ ಅಮ್ಮ ನನಗಿಟ್ಟ ಹೆಸರು ಇದೀಗ ರಂ ಆಗಿ ಬಿಟ್ಟಿದೆ. ಇನ್ನು ನನ್ನ ಹೆಸರನ್ನು ಮತ್ತಷ್ಟು ಶಾರ್ಟ್ ಮಾಡಿ ಯಾರಾದರೂ ರ..ರಾ..ಅಂತಾ ಕರೆಯದಿದ್ದರೆ ಸಾಕಪ್ಪಾ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-2232568000359339112?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/2232568000359339112/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=2232568000359339112' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/2232568000359339112'/><link rel='self' type='application/atom+xml' href='http://www.blogger.com/feeds/4320259625062903049/posts/default/2232568000359339112'/><link rel='alternate' type='text/html' href='http://anuraaga.blogspot.com/2009/10/blog-post.html' title='ಹೆಸರಲ್ಲಿ ಏನು (ಎಲ್ಲಾ) ಇದೆ!'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-1322707418102807522</id><published>2009-09-18T09:40:00.000-07:00</published><updated>2009-09-18T09:54:43.866-07:00</updated><category scheme='http://www.blogger.com/atom/ns#' term='ಪ್ರೀತಿ ಹನಿ'/><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><category scheme='http://www.blogger.com/atom/ns#' term='ವಿರಹ'/><category scheme='http://www.blogger.com/atom/ns#' term='poem'/><category scheme='http://www.blogger.com/atom/ns#' term='ಪ್ರೀತಿ'/><category scheme='http://www.blogger.com/atom/ns#' term='ಸ್ಪರ್ಶ'/><title type='text'>ಪ್ರೀತಿ ಹನಿ</title><content type='html'>ಪ್ರೀತಿ ಹನಿಯೇ...ಇನ್ನೇನು&lt;br /&gt;ಜಾರಿ ಬಿಡಬೇಕೆಂದಿರುವೆಯಾ&lt;br /&gt;ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು&lt;br /&gt;&lt;br /&gt;ನಿನ್ನ ಕಣ್ಣೀರಿನೊಳು ತುಳುಕಲಿ&lt;br /&gt;ನನ್ನ ಪ್ರೀತಿಯ ನೆನಪು&lt;br /&gt;ಹರಿದು ಸೋಕಲಿ ನಿನ್ನ ಭಾವನೆಯನು...&lt;br /&gt;&lt;br /&gt;ದೂರವಾಗುವೆ ನೀನೀಗ ಇನ್ನೇನು&lt;br /&gt;ನನ್ ಕಣ್ಣು ಮಿಟುಕುವ ವೇಳೆಯಲಿ&lt;br /&gt;ಈ ವಿರಹವನು ನಾ ಹೇಗೆ ಸಹಿಸಲಿ?&lt;br /&gt;&lt;br /&gt;ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ&lt;br /&gt;ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ&lt;br /&gt;ಈ ಕ್ಷಣದ ಸ್ಪರ್ಶವನು ಮರೆಯಲೆಂತು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1322707418102807522?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1322707418102807522/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1322707418102807522' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1322707418102807522'/><link rel='self' type='application/atom+xml' href='http://www.blogger.com/feeds/4320259625062903049/posts/default/1322707418102807522'/><link rel='alternate' type='text/html' href='http://anuraaga.blogspot.com/2009/09/blog-post.html' title='ಪ್ರೀತಿ ಹನಿ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-4268527807851029152</id><published>2009-08-12T06:53:00.000-07:00</published><updated>2009-08-12T06:54:40.565-07:00</updated><category scheme='http://www.blogger.com/atom/ns#' term='ಕೇರಳ'/><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಮುಷ್ಕರ'/><category scheme='http://www.blogger.com/atom/ns#' term='ರಜೆ'/><category scheme='http://www.blogger.com/atom/ns#' term='ನೆನಪು'/><title type='text'>ರಜೆಗಾಗಿ ಪ್ರಾರ್ಥಿಸಿದ್ದ ದಿನಗಳಿವು...</title><content type='html'>ನಾವು ಚಿಕ್ಕವರಿರುವಾಗ ಮನೆಗೆ ಕ್ಯಾಲೆಂಡರ್ ತಂದರೆ ಮೊದಲು ಅದರಲ್ಲಿ ಎಷ್ಟು ಕೆಂಪು ಬಣ್ಣದ ದಿನಗಳಿವೆ ಎಂದು ಎಣಿಸುತ್ತಿದ್ದೆವು. ಈ ವರ್ಷ ಎಷ್ಟು ರಜೆ ಇದೆ? ಎಂದು ಎಣಿಸಲು ನಾನು ಮತ್ತು ನನ್ನ ತಮ್ಮ ಜಗಳವಾಡುತ್ತಿದ್ದೆವು. ಕೆಲವೊಂದು ಹಬ್ಬ, ಸರಕಾರೀ ರಜೆಗಳು ಆದಿತ್ಯವಾರ ಬಂದರೆ ಅಯ್ಯೋ ..ಒಂದು ರಜೆ ನಷ್ಟವಾಯಿತಲ್ಲಾ ಎಂಬ ಬೇಜಾರು ಬೇರೆ. 7ನೇ ಕ್ಲಾಸಿನವರೆಗೆ ಈ ಚಾಳಿ ಇರುತ್ತಿತ್ತು. ಹೈಸ್ಕೂಲ್್ಗೆ ತಲುಪಿದಾಗ ರಜೆ ದಿನದಲ್ಲೂ ಸ್ಪೆಷಲ್ ಕ್ಲಾಸ್ ಇರುತ್ತಿತ್ತು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಖುಷಿ ತಂದರೆ ಇನ್ನೊಮ್ಮೆ ಬಾರೀ ತಲೆನೋವು ಆಗಿ ಬಿಡುತ್ತಿತ್ತು. ನಮ್ಮ ಮನೆಯಿಂದ ಹೈಸ್ಕೂಲ್್ಗೆ ಹೋಗಬೇಕಾದರೆ ಕಾಸರಗೋಡು ನಗರಕ್ಕೆ ಬಸ್ಸಲ್ಲಿ  ಹೋಗಬೇಕು. ಆವಾಗ ಬಸ್ ಮುಷ್ಕರ ಬಂದರೆ ಬಾರೀ ಸಂತೋಷ. ಹಾಗೆ ಒಂದು ರಜೆ ನಮಗೆ ಸಿಗುತ್ತಿತ್ತು. ನಮ್ಮ ರಾಜ್ಯದಲ್ಲಂತೂ ಆಗಾಗ ಮುಷ್ಕರಗಳು ನಡೆಯುತ್ತಲೇ ಇರುವುದರಿಂದ ಒಂದಷ್ಟು 'ಮುಷ್ಕರ ರಜೆ'ಗಳೂ ನಮ್ಮ ಪಾಲಿಗೆ ಒದಗುತ್ತಿತ್ತು. ನಾನಂತೂ ಯಾವಾಗಲೂ ರಜೆಗಾಗಿಯೇ ಕಾಯುತ್ತಿದ್ದೆ. ಇದು ಮಾತ್ರವಲ್ಲದೆ ನಮ್ಮ ಮನೆಯಿಂದ ಕಾಸರಗೋಡಿಗೆ ಹೋಗಬೇಕಾದರೆ ಎರುದುಂಕಡವ್ ಎಂಬ ಹೊಳೆಯೊಂದನ್ನು ದಾಟಿ ಹೋಗಬೇಕು. ಆ ಹೊಳೆಗೆ ಸೇತುವೆಯೇನೋ ಇದೆ ನಿಜ ಆದರೆ ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುವುದರಿಂದಾಗಿ ಯಾವುದೇ ವಾಹನಗಳಿಗೆ ಅತ್ತ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದು ದಾರಿಯಿದ್ದರೂ ಅದರಲ್ಲಿ ಬಸ್್ಗಳಿಗೆ ಓಡಾಡಲು ಕಷ್ಟವಾಗಿರುತ್ತಿತ್ತು. ಕೇವಲ ಸಣ್ಣ ವಾಹನಗಳು ಮಾತ್ರ ಆ ದಾರಿಯನ್ನು ಬಳಸುತ್ತಿದ್ದವು. ಬಾರೀ ಮಳೆ ಬಂದರೆ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುವುದು ಪಕ್ಕಾ ಆಗಿತ್ತು. ಆವಾಗ ರಾತ್ರಿ ಬಾರೀ ಮಳೆ ಬಂದರೆ, ನಾಳೆ ಸೇತುವೆಯ ಮೇಲೆ ನೀರಿರುತ್ತದೆ ಎಂದು ಯಾರಾದರೂ ಅಂದರೆ ಸಾಕು ನಾಳೆ ರಜೆ ಎಂದು ತೀರ್ಮಾನಕ್ಕೆ ಬಂದು ಬಿಡುತ್ತಿದ್ದೆವು. ನಮ್ಮ ಹೈಸ್ಕೂಲ್್ಗೆ ನಮ್ಮ ಹಳ್ಳಿಯಿಂದ  ಹೋಗುವ ಹುಡುಗಿಯರೂ ಕಡಿಮೆಯಾಗಿದ್ದು, ಸೇತುವೆ ಮೇಲೆ ನೀರು ಬಂದರೆ ಯಾರೂ ಶಾಲೆಗೆ ಹೋಗಬೇಡಿರಿ ಎಂಬ ಒಳ ಒಪ್ಪಂದವನ್ನು ನಾವು ಮಾಡಿ ಬಿಡುತ್ತಿದ್ದೆವು. ಇದು ಮಾತ್ರವಲ್ಲದೆ ಮಗಳು ಈ  ಮಳೆಯಲ್ಲಿ ಹೇಗೆ ಮನೆಗೆ ಬರುತ್ತಾಳೋ ಎಂಬ ಗಾಬರಿಯೂ ಅಮ್ಮನಿಗೆ ಇರುವುದರಿಂದ ನನಗೆ ರಜೆ ಅಮ್ಮನಿಂದ ಮೊದಲೇ ಜ್ಯಾರಿಯಾಗುತ್ತಿತ್ತು. ಕೆಲವೊಮ್ಮೆ ಅಣ್ಣ ಇವತ್ತು ಶಾಲೆಗೆ ನಾನು ಬೈಕ್್ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದರೆ ಒಲ್ಲದ ಮನಸ್ಸಿನಿಂದ ಬೈಕ್ ಹತ್ತುತ್ತಿದ್ದೆ. &lt;br /&gt;&lt;br /&gt;ಅಬ್ಬಾ... ಈ ಗಣಿತ ಎಂದರೆ ನನಗೆ ಮೊದಲೇ ಕಬ್ಬಿಣದ ಕಡಲೆ ಕಾಯಿ. ಕೆಲವೊಂದು ದಿನ ಗಣಿತ ಕ್ಲಾಸು ಪರೀಕ್ಷೆ ಇದ್ದು, ನಾನೇನು ತಯಾರಿ ಮಾಡಿಕೊಂಡಿರದ ದಿನ ನಾಳೆ ಜೋರಾಗಿ ಮಳೆ ಬರಬೇಕು, ಸೇತುವೆ ಮೇಲೆ ನೀರು ತುಂಬಿ ಹರಿಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಹೀಗೆ ಬಾರೀ ಮಳೆ ಬಂದು ತೊಂದರೆ ಅನುಭವಿಸುವಾಗ ಕೆಲಸಕ್ಕೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಂಡ ಅಪ್ಪ ಇನ್ಯಾವಾಗ ಈ ಹೊಳೆಗೆ ಹೊಸತಾಗಿ ದೊಡ್ಡ ಸೇತುವೆಯೊಂದನ್ನು ನಿರ್ಮಿಸುತ್ತಾರೋ ಎಂದು ಹೇಳುವಾಗ, ಅಯ್ಯೋ....ಇನ್ಮೇಲೆ ಮಳೆ ರಜೆಗೂ ಕುತ್ತು ಬರುತ್ತದೆ ಎಂದು ಹಲುಬುತ್ತಿದ್ದೆ. ಆದ್ರೆ ನಂಗೇನೋ ಒಂದಿಷ್ಟು ಅದೃಷ್ಟವಿತ್ತು, ನಾನು ಪ್ಲಸ್ ಟು ಮುಗಿಸಿದ ನಂತರವೇ  ಆ ಹೊಳೆಗೆ ದೊಡ್ಡದಾದ ಸೇತುವೆ ನಿರ್ಮಾಣವಾಯಿತು. ಇದಾದನಂತರ ನಮ್ಮೂರಿನ ಮಕ್ಕಳಿಗೆ ಸೇತುವೆಯ ಮೇಲೆ ನೀರು ಬಂದಿದೆ ಎಂದು ರಜೆಗೆ ನೆಪ ಹೇಳುವುದಕ್ಕೆ ಪೂರ್ಣ ವಿರಾಮ ಬಿತ್ತು.&lt;br /&gt;&lt;br /&gt;&lt;br /&gt;ಮತ್ತೆ ಕಾಲೇಜು. ಅಲ್ಲಂತೂ ಶನಿವಾರ ಕೂಡಾ ಕ್ಲಾಸು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಆದಿತ್ಯವಾರವೂ ಇರುತ್ತಿತ್ತು. ಅದು ಇಂಜಿನಿಯರಿಂಗ್್ಗೆ ಸೇರಿದ ಮೊದಲ ವರ್ಷ. ಕ್ಲಾಸು ತಪ್ಪಿಸುವಂತಿಲ್ಲ. ಹಾಜರಾತಿ ಕಡಿಮೆಯಾದರೆ ಮಾರ್ಕ್ ಕೂಡಾ ಕಟ್. ಹಾಗೇ ಪದವಿಗೆ ಬಂದ ಮೇಲೆ ಸ್ಪಲ್ಪ ಸೀರಿಯಸ್ ಆಗ್ಬೇಕು. ಇನ್ನು ಅದು ಇದು ಅಂತಾ ರಜಾ ತೆಗೆದುಕೊಳ್ಳುವಂತಿಲ್ಲ ಎಂದು ಅಮ್ಮ ಉಸುರಿದ್ದರು.  ಒಂದು ದಿನ ರಜೆ ತೆಗೆದುಕೊಂಡರೆ ಸಾಕು ಮರು ದಿನ ಪಾಠ ಅರ್ಥವಾಗುತ್ತಿರಲಿಲ್ಲ. ನೋಟ್ಸ್ ಅಷ್ಟೇ ಇರುತ್ತಿತ್ತು. ಚಿಕ್ಕಂದಿನಲ್ಲಿ ನೋಟ್ಸ್ ಕಂಪ್ಲೀಟ್ ಮಾಡ್ಬೇಕಾದರೆ ಅಮ್ಮ, ಅಕ್ಕ, ಅಪ್ಪ ಎಲ್ಲರೂ ನನ್ನ ಸಹಾಯಕ್ಕೆ ಬರುತ್ತಿದ್ದರು. ಕಾಲೇಜು ಮೆಟ್ಟಲು ಹತ್ತಿದಾಗ ಅಮ್ಮ ಅಪ್ಪನಿಗಂತೂ ನನ್ನ ಸಬ್ಜೆಕ್ಟ್ ಅರ್ಥವಾಗುವುದಿಲ್ಲ. ಅಕ್ಕನಿಗೆ ಪುರುಸೋತ್ತಿಲ್ಲ. ಹಾಗಾಗಿ ನಾನೇ ನೋಟ್ಸ್ ಬರೀಬೇಕು. ಮಾತ್ರವಲ್ಲದೆ ಎಲ್ಲಾ ಟೀಚರ್ಸ್್ಗೆ ಯಾಕೆ ರಜಾ ತೆಗೆದುಕೊಂಡೆ? ಎಂಬ ಕಾರಣ ಹೇಳ್ಬೇಕು. ಸುಮ್ಮನೆ ಹಲ್ಲು ನೋವು, ಹೊಟ್ಟೆ ನೋವು ಅಂದರೆ ನೀನು ಆರಾಮವಾಗಿಯೇ ಇದ್ದಿಯಲ್ಲಾ...ಮುಖದಲ್ಲಿ ಒಂದಿಷ್ಟು ಸುಸ್ತಾಗಿದ್ದೇ ತಿಳಿಯುತ್ತಿಲ್ಲ ಎಂಬ ವಿವರಣೆಗಳು ಬೇರೆ. ಇಷ್ಟೆಲ್ಲಾ ಕಷ್ಟ ನೋಡಿದರೆ ರಜಾ ತೆಗೆದುಕೊಳ್ಳವುದೇ ಬೇಡ..ಕ್ಲಾಸಲ್ಲಿ ನಿದ್ದೆ ಮಾಡಿದ್ರೂ ಪರ್ವಾಗಿಲ್ಲ.. ಕ್ಲಾಸ್ ಮಿಸ್ ಮಾಡಿಕೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದೆ. (ನಾನೇನು ಸುಮ್ಮನೆ ನಿದ್ದೆ ಮಾಡುತ್ತಿರಲಿಲ್ಲ. ಆ ನಿದ್ದೆಯಲ್ಲಿ ಹಲವಾರು ಕನಸು ಕಾಣುತ್ತಿದ್ದೆ) :)&lt;br /&gt;&lt;br /&gt;ಆದ್ರೆ ನನಗೆ ಅಲ್ಲಿಯೂ ಅದೃಷ್ಟವಿತ್ತು. ಅಂದರೆ ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿಗಳು ಆಗಾಗ ಮುಷ್ಕರ ನಡೆಸುತ್ತಿದ್ದರು. ನಮ್ಮ ಕಾಲೇಜಿನಲ್ಲಿ ರಾಜಕೀಯ ಕಾರುಬಾರು ಬಾರೀ ಜೋರಾಗಿದ್ದರಿಂದ ಸಮರಗಳಿಗೇನೂ ಕಡಿಮೆಯಿರಲಿಲ್ಲ. ಮೊದಲ ವರ್ಷ ಆ್ಯಂಟಿ ರ್ಯಾಗಿಂಗ್, ನಂತರದ ವರ್ಷ ಫ್ಯಾಷನ್ ಶೋ ನಿಲ್ಲಿಸಿ, ಗುಂಪು ಘರ್ಷಣೆ, ಅಧ್ಯಾಪಕರ ಕೊರತೆ, ಕಾಲೇಜು ಶುಲ್ಕದ ಏರಿಕೆ, ಪರೀಕ್ಷಾ ಫಲಿತಾಂಶ ತಡವಾಗಿ ಬರುತ್ತಿದೆ, ಪ್ಲೇಸ್್ಮೆಂಟ್ ಸೆಲ್ ಸ್ಥಗಿತಗೊಂಡಿದೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಅಲ್ಲಿ ಮುಷ್ಕರಗಳು ನಡೆಯುತ್ತಿದ್ದವು. ಇನ್ನೊಮ್ಮೆ ಅಮೆರಿಕದ ಧೋರಣೆಯನ್ನು ಖಂಡಿಸಿ, ರಷ್ಯಾದಲ್ಲಿನ ರಾಜಕೀಯ ವಿಚಾರಗಳು, ಇರಾನ್, ಇರಾಕ್್ನ ಸಮಸ್ಯೆಗಳು ಇವೆಲ್ಲದಕ್ಕೂ ನಮ್ಮಲ್ಲಿ ಮುಷ್ಕರ ಇದ್ದೇ ಇರುತ್ತಿತ್ತು. ಹೀಗೇ ಅವರು ಮುಷ್ಕರ ನಡೆಸುತ್ತಿದ್ದರು, ನಮಗೆ ರಜೆ ಸಿಗುತ್ತಿತ್ತು. ಕೆಲವೊಂದು ವಿಷಯಗಳಿಗೆ, ಅಂದರೆ ಕಾಲೇಜಿಗೆ ಸಂಬಂಧಪಟ್ಟ ವಿಷಯವಾಗಿದ್ದರೆ ನಾವೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೆವು.&lt;br /&gt;&lt;br /&gt;&lt;br /&gt;ಹೀಗಿದ್ದರೂ ಕಾಲೇಜಿಗೆ ಹೊರಡುವ ಮುನ್ನ 'ದೇಶಾಭಿಮಾನಿ' ಪೇಪರ್್ನತ್ತ ಒಂದು ಸಾರಿ ಕಣ್ಣಾಡಿಸುತ್ತಿದೆ. ಯಾಕೆಂದರೆ 'ಇಂದು ಶಾಲಾ ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಷ್ಕರ ಹೂಡುವರು' ಅಥವಾ 'ಕಣ್ಣೂರ್ ಯುನಿವರ್ಸಿಟಿಯ ಕಾಲೇಜುಗಳಲ್ಲಿ ಇಂದು ಸಮರ 'ಎಂಬ ಸುದ್ದಿಯನ್ನು ಮಾತ್ರ ಯುನಿವರ್ಸಿಟಿ ಸುದ್ದಿ ವಿಭಾಗದಲ್ಲಿರುತ್ತಿದ್ದು ಇದನ್ನು ಮಾತ್ರ ನಾನು  ಹುಡುಕಿ ಓದುತ್ತಿದ್ದೆ. ಆವಾಗ ಮುಷ್ಕರ ಇದೆ ಅಂತಾ ಗೊತ್ತಾದರೆ ಮತ್ತೆ ಕಾಲೇಜಿಗೆ ಹೋಗಲು ರೆಡಿಯಾಗಬೇಕಾಗಿಲ್ಲ. ಕೆಲವೊಂದು ಬಾರಿ ಮುಷ್ಕರವಿದ್ದರೂ ಕಾಲೇಜಿಗೆ ಬಂದು ಹೋದರೆ ಒಂದು ಹಾಜರಿ ಸಿಗುತ್ತಿತ್ತು. ಆದ್ರೂ ಹಾಜರಿ ಸಿಗಬೇಕಲ್ಲಾ ಎಂದು ಅರೆ ಮನಸ್ಸಿನಿಂದ  ಕಾಲೇಜಿಗೆ ಹೊರಡಬೇಕು. ಕಾಲೇಜಿನ ವಿದ್ಯಾರ್ಥಿಗಳು ಮುಷ್ಕರ ಹೂಡುತ್ತಾರೆ ಎಂಬ ಸುದ್ದಿ ಸಿಕ್ಕಿದರೆ ಸಾಕು, ನಾನು ಕ್ಲಾಸಿನಲ್ಲಿ ಕುಳಿತಿದ್ದರೂ 'ಆನ್ ಸ್ಟ್ರೈಕ್ ಆನ್ ಸ್ಟ್ರೈಕ್್' ಎಂಬ ಕೂಗು ಎಲ್ಲಿಂದ ಕೇಳಿ ಬರುತ್ತದೋ ಎಂದು ಕಿವಿಯಗಲಿಸಿರುತ್ತಿದ್ದೆ. ಅದೂ ನಮ್ಮ ಕ್ಲಾಸ್ (ಐಟಿ ವಿಭಾಗ) ಕ್ಯಾಂಪಸ್್ನ ಮೂಲೆಯಲ್ಲಿತ್ತು. ಈ ಕಾರಣಕ್ಕಾಗಿ ಮುಷ್ಕರ ನಿರತರು ನಮ್ಮ ಕ್ಲಾಸಿನತ್ತ ತಲುಪುವಾಗ ಒಂದೋ ಎರಡೋ ಪೀರಿಯಡ್್ಗಳು ಮುಗಿದಿರುತ್ತಿತ್ತು. ಆವಾಗ ನಾನು ಮೆಕಾನಿಕಲ್ ಬ್ರಾಂಚ್್ನಲ್ಲಿದ್ದರೆ ಎಷ್ಟು ಒಳ್ಳೆಯದಿರುತ್ತಿತ್ತು ಎಂದು ಅನಿಸುತ್ತಿತ್ತು. ಯಾಕೆಂದರೆ ರಾಯಲ್ ಮೆಕ್ ಕ್ಲಾಸಿಗೆ ಮೊದಲು ಸಮರ ನಿರತರು ತಲುಪುತ್ತಿದ್ದು, ನಮ್ಮ ಗ್ಲೋಬಲ್ ಐಟಿ ಕ್ಲಾಸಿಗೆ ತಲುಪುವಾಗ ಒಂದಿಷ್ಟು ಕ್ಲಾಸು ಮುಗಿದಿರುತ್ತಿತ್ತು . :)&lt;br /&gt;&lt;br /&gt;ಅಂತೂ ಇಂತು ಕಾಲೇಜು ಮುಗಿಯಿತು. ಮತ್ತೆ ಹೊಟ್ಟೆ ಪಾಡಿಗೆ ಉದ್ಯೋಗ. ಒಂದಿಷ್ಟು ತಿಂಗಳು ಖಾಸಗಿ ಸಂಸ್ಥೆಯೊಂದಲ್ಲಿ ಪ್ರೋಗ್ರಾಂ ಕಲಿಸಲು ಸೇರಿಕೊಂಡಾಗ ಮಕ್ಕಳಿಂದ ಹೆಚ್ಚು ನಾನು ಕಲಿತುಕೊಳ್ಳಬೇಕಾಗಿ ಬಂದಾಗ, ಕೆಲವೊಮ್ಮೆ ಮಕ್ಕಳಿಂದ ಕಲಿತುಕೊಳ್ಳಬೇಕಾಗಿ ಬಂದಾಗ ಅಯ್ಯೋ ...ರಜೆ ರಜೆ ಅಂತ ತಿಪ್ಪರಲಾಗ ಹಾಕಿ ಕಲಿಯದೆ ಕುಳಿತು ಬಿಟ್ಟದ್ದು ತುಂಬಾ ನಷ್ಟವಾಗಿ ಬಿಟ್ಟಿತು ಅಂತಾ ಅನಿಸಿದ್ದೂ ಇದೆ. ಮತ್ತೆ ಇನ್ನೊಂದು ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇರಿದಾಗ ವಿದ್ಯಾರ್ಥಿಗಳು ಸ್ಟೈಕ್ ಮಾಡಿದರೆ ಬಾರೀ ಬೇಜಾರು ಯಾಕೆಂದರೆ ಕ್ಲಾಸಿಲ್ಲ ಎಂಬ ಕಾರಣಕ್ಕೆ ಸಂಬಳವೂ ಕಟ್. ವಿದ್ಯಾರ್ಥಿಯಾಗಿರುವಾಗ ಮುಷ್ಕರಕ್ಕಾಗಿ ಹಾತೊರೆಯುತ್ತಿದ್ದ ನಾನು ಅಧ್ಯಾಪಕಿಯಾದಾಗ 'ಸ್ಟ್ರೈಕ್ ಮಾಡಬೇಡಿ ಮಕ್ಕಳೇ' ಎಂದು ಉಪದೇಶ ಕೊಡುವ ಹಂತಕ್ಕೆ ತಲುಪಿದ್ದೆ .&lt;br /&gt;&lt;br /&gt;&lt;br /&gt;ಆಮೇಲೆ ಚೆನ್ನೈಯಲ್ಲಿ ಒಂದು ವರ್ಷದ ದುಡಿತ. ಅಲ್ಲಿಯಂತೂ ನಮ್ಮೂರಿನಂತೆ ಮುಷ್ಕರ ಎಂದಾಕ್ಷಣ ಜನ ಜೀವನ ಸ್ತಂಭಿತವಾಗುವುದಿಲ್ಲ. 'ಭಾರತ್ ಬಂದ್್' ಆದ ದಿನ ಅಲ್ಲಿ ರಸ್ತೆಯಲ್ಲಿ ವಾಹನಗಳು ಓಡುವುದನ್ನು ಕಂಡಾಗ ನನಗಂತೂ  ಅಚ್ಚರಿ. ಆವಾಗ ಅಲ್ಲಿರುವ ಗೆಳತಿಯೊಬ್ಬಳಲ್ಲಿ ಈ ಬಗ್ಗೆ ಕೇಳಿದಾಗ "ತಮಿಳುನಾಡು ಬಂದ್ ಆಗಬೇಕಾದರೆ ಕರುಣಾನಿಧಿ ಅಥವಾ ಜಯಲಲಿತಾ ಹೇಳಬೇಕು. ಬೇರೆ ಯಾರೇ ಹೇಳಿದರೂ ಇವರು ಕ್ಯಾರೇ ಅನ್ನಲ್ಲ" ಎಂದಿದ್ದಳು. ಅದು ನಿಜವೋ ಎಂದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಇನ್ನಷ್ಟು ರಿಸರ್ಚ್ ಮಾಡಲು ಇನ್ನೊಂದು ಬಂದ್ ಬರಲಿ ಎಂದು ಕಾಯುತ್ತಿರುವಾಗ ನಾನು ಚೆನ್ನೈಯಿಂದ ಬೆಂಗಳೂರಿಗೆ ಹಾರಿದೆ. ಮತ್ತೆ ಚೆನ್ನೈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. &lt;br /&gt;&lt;br /&gt;ಬೆಂಗಳೂರಿಗೆ ಬಂದ ನಂತರ ಮುಷ್ಕರವಿದೆ ಎಂದು ಕೇಳಿದ್ದೇ ಇತ್ತೀಚೆಗೆ.  ಅದೇ ತಿರುವಳ್ಳುವರ್ ಪ್ರತಿಮೆ ವಿವಾದವಾದಾಗ. ಅದೋ ಬಂತು ಬೆಂಗಳೂರಿಗೂ ಬಂದ್..ಬಸ್ಸು ಓಡಾಡಲಿಕ್ಕಿಲ್ಲ ಎಂದು ಅಂದು ಕೊಂಡಿದ್ದೆ. ಆದರೆ ಬಂದ್ ಇಲ್ಲ ಬರೀ ಬಂದೋಬಸ್ತು ಮಾತ್ರ ಎಂದು ಕೊನೆಗೆ ತಿಳಿದು ಬಂತು. ಮುಷ್ಕರ ಎಂದು ಹೇಳಿದ್ದರೂ ಎಲ್ಲವೂ ಎಂದಿನಂತೆಯೇ ಇತ್ತು. ಆಗ ನಮ್ಮೂರಿನ ಮುಷ್ಕರ ನೆನಪಿಗೆ ಬಂತು. 'ಮುಷ್ಕರ'  ಎಂದ ಕೂಡಲೇ ಏನು? ಯಾಕೆ? ಯಾರು ಮಾಡುತ್ತಾರೆ? ಎಂಬುದರ ಬಗ್ಗೆ ಕೇಳುವ ಮೊದಲೇ ಅಂಗಡಿಗಳನ್ನು ಮುಚ್ಚಿ, ವಾಹನಗಳನ್ನು ರಸ್ತೆಗಿಳಿಸದೆ ಹೆದರಿಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ, ಮತ್ತೊಮ್ಮೆ ಮುಷ್ಕರದಂದು ನಡೆಯುತ್ತಿರುವ ಗಲಾಟೆ, ಪ್ರತಿಭಟನೆ, ಬಂಧನ, ರಕ್ತದೋಕುಳಿ...ಹೀಗೆ ನಮ್ಮೂರಲ್ಲಿ ನಡೆಯುತ್ತಿರುವ 'ಮುಷ್ಕರ ಆಚರಣೆ'ಯ ಎಲ್ಲಾ ದೃಶ್ಯಗಳು ಮನಪಟಲದಲ್ಲೊಮ್ಮೆ ಹಾದು ಹೋದವು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4268527807851029152?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4268527807851029152/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4268527807851029152' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4268527807851029152'/><link rel='self' type='application/atom+xml' href='http://www.blogger.com/feeds/4320259625062903049/posts/default/4268527807851029152'/><link rel='alternate' type='text/html' href='http://anuraaga.blogspot.com/2009/08/blog-post.html' title='ರಜೆಗಾಗಿ ಪ್ರಾರ್ಥಿಸಿದ್ದ ದಿನಗಳಿವು...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-1031480241089072939</id><published>2009-07-24T13:35:00.000-07:00</published><updated>2009-07-24T13:36:31.932-07:00</updated><category scheme='http://www.blogger.com/atom/ns#' term='ಮಳೆ'/><category scheme='http://www.blogger.com/atom/ns#' term='ಕಾವ್ಯ ಮತ್ತು ಕವನ'/><category scheme='http://www.blogger.com/atom/ns#' term='ಮಧುರ ನೆನಪು'/><category scheme='http://www.blogger.com/atom/ns#' term='poem'/><category scheme='http://www.blogger.com/atom/ns#' term='ಪ್ರೀತಿ'/><category scheme='http://www.blogger.com/atom/ns#' term='love'/><title type='text'>ನಿನ್ನ ನೆನಪಿನ ಮಳೆಯಲಿ...</title><content type='html'>ಮಳೆ ಹನಿಯೊಂದು ನನ್ನ ಮೈ ತಾಕಿದಾಗ&lt;br /&gt;ಇನಿಯಾ, ನಿನ್ನ ನೆನಪು ಬಾರದಿರುವುದೇ?&lt;br /&gt;ಹೀಗೆ...&lt;br /&gt;ಸುರಿವ ಮಳೆಯಲ್ಲಿ ನನ್ನ ಕೈ ಹಿಡಿದು&lt;br /&gt;ನಡೆದಾಗ, ನಡುಕ ಮೈಯಲ್ಲಿ&lt;br /&gt;ಆದರೂ ಬೆಚ್ಚನೆಯ ಸುಖವಿತ್ತು ನಿನ್ನ ಜತೆಯಲ್ಲಿ&lt;br /&gt;&lt;br /&gt;ನೀ ಹಣೆಗೆ ಮುತ್ತಿಟ್ಟಂತೆ ಹರಿದ ಮೊದಲ &lt;br /&gt;ಮಳೆ ಹನಿಯು ಸುಖಸ್ಪರ್ಷವ ನೀಡಿರಲು&lt;br /&gt;ಮತ್ತೆ...&lt;br /&gt;ನೀನು ನನ್ನೊಂದಿಗೆ ಕಳೆದ ಮಧುರ&lt;br /&gt;ದಿನಗಳ ನೆನಪು ಮನದಲ್ಲಿ&lt;br /&gt;ಮೂಡಿ ಸಂತಸದ ಹೊನಲನ್ನು ಹರಿಸಿತ್ತು.&lt;br /&gt;&lt;br /&gt;ಸನಿಹ ನೀನಿಲ್ಲದ ಕ್ಷಣ ಕಣ್ಣೀರು&lt;br /&gt;ಹರಿಸಿ, ನಿನ್ನ ಕಾಯುತಿರಲು&lt;br /&gt;ಆಗೊಮ್ಮೆ...&lt;br /&gt;ಕನಸಲ್ಲಿ ಬಳಿ ಬಂದು ಪಿಸು ಮಾತು&lt;br /&gt;ನುಡಿದ ದಿನ, ಬಿಸಿಲೆಡೆಯ ಮಳೆಯಂತೆ&lt;br /&gt;ಸಂತಸದ ಕಣ್ಣೀರಲಿ ನೀ ಜೊತೆಯಾಗಿದ್ದೆ.&lt;br /&gt;&lt;br /&gt;&lt;br /&gt;ಜಡಿಮಳೆಯ ಜೊತೆಯಲ್ಲಿ ನಾನಿಂದು&lt;br /&gt;ನಡೆವಾಗ, ನನ್ನ ಕಂಬನಿಗಳ ಕಾಣುವುದೆ&lt;br /&gt;ನಿನಗೆ?&lt;br /&gt;ಗೆಳೆಯ...ನೀನೀಗ ನನ್ನೊಡನೆ ಇಲ್ಲವಾದರೂ.... &lt;br /&gt;ಆ ಮಳೆಯಲ್ಲಿ ನೆನೆದ ಸುಖ, ಈ ಪ್ರೀತಿಯ &lt;br /&gt;ನೆನಪು ಮರುಕಳಿಸದಿರುವುದೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1031480241089072939?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1031480241089072939/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1031480241089072939' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1031480241089072939'/><link rel='self' type='application/atom+xml' href='http://www.blogger.com/feeds/4320259625062903049/posts/default/1031480241089072939'/><link rel='alternate' type='text/html' href='http://anuraaga.blogspot.com/2009/07/blog-post.html' title='ನಿನ್ನ ನೆನಪಿನ ಮಳೆಯಲಿ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-6633746461382826954</id><published>2009-05-28T09:20:00.001-07:00</published><updated>2009-05-28T10:38:45.734-07:00</updated><category scheme='http://www.blogger.com/atom/ns#' term='ಹೃದಯ'/><category scheme='http://www.blogger.com/atom/ns#' term='ಸಲ್ಲಾಪ'/><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><category scheme='http://www.blogger.com/atom/ns#' term='ಪ್ರೀತಿ'/><category scheme='http://www.blogger.com/atom/ns#' term='love'/><title type='text'>ಹೃದಯದೊಂದಿಗೆ ಒಂದು ಸಲ್ಲಾಪ...</title><content type='html'>ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?&lt;br /&gt;&lt;br /&gt;ಹೃದಯ: ಹಾಗೇ ಸುಮ್ಮನೆ ಇದ್ದೇನೆ.&lt;br /&gt;&lt;br /&gt;ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?&lt;br /&gt;&lt;br /&gt;ಹೃದಯ: ಏನಿಲ್ಲಾ ಬಿಡು...&lt;br /&gt;&lt;br /&gt;ನಾನು: ಹೇಳೇ...&lt;br /&gt;&lt;br /&gt;ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..&lt;br /&gt;&lt;br /&gt;ನಾನು: ಹೌದು&lt;br /&gt;&lt;br /&gt;ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..&lt;br /&gt;&lt;br /&gt;ನಾನು: ಮತ್ತೆ (?)&lt;br /&gt;&lt;br /&gt;ಹೃದಯ: ಪ್ರೇಮಿಗಳು!&lt;br /&gt;&lt;br /&gt;ನಾನು: ಹೂಂ..&lt;br /&gt;&lt;br /&gt;ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ?&lt;br /&gt;&lt;br /&gt;ನಾನು: ಕೇಳು..&lt;br /&gt;&lt;br /&gt;ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ...&lt;br /&gt;&lt;br /&gt;ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ..&lt;br /&gt;&lt;br /&gt;ಹೃದಯ: ಅಷ್ಟೇನಾ...&lt;br /&gt;&lt;br /&gt;ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್&lt;br /&gt;&lt;br /&gt;ಹೃದಯ: ಮತ್ತೆ..&lt;br /&gt;&lt;br /&gt;ನಾನು: ಏನಿಲ್ಲಾ..&lt;br /&gt;&lt;br /&gt;ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ?&lt;br /&gt;&lt;br /&gt;ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ.&lt;br /&gt;&lt;br /&gt;ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ..&lt;br /&gt;&lt;br /&gt;ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್ತಾನೆ...ಮತ್ತೆ ಅಲ್ಲಿ ಮುತ್ತಿನ ಮಳೆ :)&lt;br /&gt;&lt;br /&gt;ಹೃದಯ: ಹಾಗೆ ಹೇಳಿದರೆ ಪ್ರೇಮಿಗಳೆಲ್ಲಾ ಖುಷಿಯಾಗಿದ್ದಾರೆ ಅಂತಾನಾ?&lt;br /&gt;&lt;br /&gt;ನಾನು: ಇಲ್ಲ..ನೋಡು ಆ ಹುಲ್ಲುಗಾವಲಿನಲ್ಲಿ ಕುಳಿತ ಈ ಪ್ರೇಮಿಗಳ ಕಣ್ಣಲ್ಲಿ ನೀರು ಕಂಡೆಯಾ? ಅವಳು ಅಳ್ತಾ ಇದ್ದಾಳೆ. ಅವ ಅವಳನ್ನು ಸಮಾಧಾನಿಸುತ್ತಿದ್ದಾನೆ..ಅವನ ಕಣ್ಣಂಚಿನಲ್ಲೂ ಹನಿಯಿದೆ. ಅವ ಅವಳಂತೆ ಜೋರಾಗಿ ಅಳಲಾಗದೆ ದುಃಖವನ್ನು ನುಂಗಿ ಚಡಪಡಿಸುತ್ತಿದ್ದಾನೆ.&lt;br /&gt;&lt;br /&gt;ಹೃದಯ: ತುಂಬಾ ಅಬ್ಸರ್ವ್ ಮಾಡ್ತಿದ್ದೀಯಾ..&lt;br /&gt;&lt;br /&gt;ನಾನು: ಇನ್ನು ಮುಗಿದಿರಲ್ಲ..ಅಲ್ಲೊಂದು ಯುವ ಜೋಡಿಗಳು ಪರಸ್ಪರ ಜಗಳವಾಡುವಂತೆ ಕಾಣುತ್ತಿದೆ. ಅವ ಕಠೋರನಂತೆ ವರ್ತಿಸುತ್ತಿದ್ದಾನೆ.&lt;br /&gt;&lt;br /&gt;ಹೃದಯ: ಅವ ಕೈ ಕೊಟ್ಟ ಅಂತಾ ಅನಿಸುತ್ತದೆ...ಇಲ್ಲದಿದ್ದರೆ ಹುಡ್ಗಿ ಯಾಕೆ ಅಷ್ಟೊಂದು ಕೂಗಾಡ್ಬೇಕು?&lt;br /&gt;&lt;br /&gt;ನಾನು:ಬೇರೆ ಯಾವುದೋ ಹುಡುಗಿ ಬಗ್ಗೆ ಮಾತಾಡ್ತಾ ಇದ್ದಾಳೆ ಅವಳು. ಅವರ ಪ್ರೇಮಲೋಕಕ್ಕೆ ಯಾವುದೋ ಹುಡುಗಿ ಎಂಬ ವೈರೆಸ್ ದಾಳಿಯಾಗಿದೆ ಅಂತಾ ಕಾಣುತ್ತೆ. &lt;br /&gt;&lt;br /&gt;ಹೃದಯ: ಹುಡುಗಿಯರಿಗೆ ಇಲ್ಲ ಸಲ್ಲದ ಸಂಶಯ ಬೇರೆ. ಪೊಸೆಸಿವ್್ನೆಸ್ ಜಾಸ್ತಿ. &lt;br /&gt;&lt;br /&gt;ನಾನು: ಹಾಗೇನಿಲ್ಲಾ..ಇಲ್ಲಿ ಹುಡುಗ ಹುಡುಗಿ ಸಮಾನರು. ಇಬ್ಬರೂ ಪ್ರೇಮಿಗಳೇ ಆಗಿದ್ದರೂ ಅವರ ಲವ್, ವೇ ಆಫ್ ಎಕ್ಸ್್ಪ್ರೆಶನ್ ಡಿಫರೆಂಟಾಗಿರುತ್ತದೆ. ಹುಡುಗಿಯರ ಮನಸ್ಸು ಹೂವಿನಂತೆ ಬೇಗ ಬೇಜಾರು ಮಾಡಿಕೊಳ್ಳುತ್ತಾರೆ.&lt;br /&gt;&lt;br /&gt;ಹೃದಯ: ಹೆಣ್ಣು ಅಂದ ಮಾತ್ರಕ್ಕೆ ಪಕ್ಷಪಾತ ಸರಿಯಲ್ಲ...&lt;br /&gt;&lt;br /&gt;ನಾನು: ಆದ್ರೂ ಹೆಣ್ಮನಸ್ಸು ಗಂಡಿನಷ್ಟು ಗಟ್ಟಿಯಾಗಿರಲ್ಲ..&lt;br /&gt;&lt;br /&gt;ಹೃದಯ: ವಾದ ಬೇಡ..ನಿನಗೇನೂ ಅನಿಸಲ್ವಾ..?&lt;br /&gt;&lt;br /&gt;ನಾನು: ಅರ್ಥ ಆಗಿಲ್ಲಾ..&lt;br /&gt;&lt;br /&gt;ಹೃದಯ: ಬಿಡಿಸಿ ಹೇಳ್ಬೇಕಾ?&lt;br /&gt;&lt;br /&gt;ನಾನು: ಹೇಳು..&lt;br /&gt;&lt;br /&gt;ಹೃದಯ: ಹದಿಹರೆಯದ ವಯಸ್ಸು ನಿನ್ನದು. ಪ್ರೀತಿ ಮಾಡ್ಬೇಕು ಅಂತಾ ಅನಿಸಲಿಲ್ಲವಾ?&lt;br /&gt;&lt;br /&gt;ನಾನು: ಸುಮ್ಮನಿರು..&lt;br /&gt;&lt;br /&gt;ಹೃದಯ: ಅಂದ್ರೆ ನಿನಗೂ ಲವ್ ಮಾಡ್ಬೇಕು ಅಂತಾ ಅನಿಸಿದೆ. (ತುಂಟ ನಗು)&lt;br /&gt;&lt;br /&gt;ನಾನು: ಹೂಂ..ಆದ್ರೆ ಏನೋ ಹೆದರಿಕೆ ಆಗ್ತಾ ಇದೆ.&lt;br /&gt;&lt;br /&gt;ಹೃದಯ: ಯಾಕೆ?&lt;br /&gt;&lt;br /&gt;ನಾನು: ನೀನು ಸಿನಿಮಾದಲ್ಲಿ ನೋಡಿಲ್ವಾ..ಎಷ್ಟು ರಿಸ್ಕ್ ತೆಗೊಳ್ಬೇಕು...ಅಬ್ಬಾ ನನ್ನಿಂದಂತೂ ಆಗಲ್ಲ..ಅದಕ್ಕೆ ಸುಮ್ಮನಾದೆ.&lt;br /&gt;&lt;br /&gt;ಹೃದಯ: ಅಂದ್ರೆ ನಿನ್ನ ಭಾವನೆಗಳನ್ನು ಒತ್ತಿ ಹಿಡಿದು ಅನ್ಯಾಯ ಮಾಡುತ್ತಿದ್ದೀಯಾ..&lt;br /&gt;&lt;br /&gt;ನಾನು: ಇಲ್ಲ...ನಾವು ಇನ್ನೊಬ್ಬರನ್ನು ಪ್ರೀತಿಸುವ ಮೊದಲು ನಮ್ಮನ್ನು ನಾವೇ ಅರಿತುಕೊಂಡಿರಬೇಕು ಎಂಬುದು ನನ್ನ ನಿಲುವು. ನಾನು ನನ್ನನ್ನು (ನನ್ನ ಹೃದಯವನ್ನು) ಸಂಪೂರ್ಣವಾಗಿ ಅರಿಯತೊಡಗಿದರೆ ನಾನು ಪ್ರೀತಿಸುವವನನ್ನೂ ಅರ್ಥ ಮಾಡಿಕೊಳ್ಳಬಲ್ಲೆ.&lt;br /&gt;&lt;br /&gt;ಹೃದಯ: ಹೂಂ...ಹಾಗಾದ್ರೆ ನೀನು ನಿನ್ನ ಬಗ್ಗೆ ಅರಿತಿದ್ದೀಯಾ..ಇನ್ನು ಪ್ರೀತಿಯಲ್ಲಿ ಬೀಳಬಾರದೇ?&lt;br /&gt;&lt;br /&gt;ನಾನು:ಮೌನ....&lt;br /&gt;&lt;br /&gt;ಹೃದಯ: ನನ್ನ ಪ್ರಶ್ನೆಗೆ ಉತ್ತರ?&lt;br /&gt;&lt;br /&gt;ನಾನು: ಸದ್ಯ ,ನೀನು ನನ್ನ ಜೊತೆಗಿದ್ದಿಯಲ್ಲಾ...ನನ್ನ ಈ ಪ್ರೀತಿಯ ಹೃದಯವನ್ನು ಇನ್ನೋರ್ವನಿಗೆ ಕೊಡಲು ಮನಸ್ಸು ಬರ್ತಾ ಇಲ್ಲ...ಐ ಲವ್ ಯು..&lt;br /&gt;&lt;br /&gt;ಹೃದಯ: ಐ ಟೂ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-6633746461382826954?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/6633746461382826954/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=6633746461382826954' title='6 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/6633746461382826954'/><link rel='self' type='application/atom+xml' href='http://www.blogger.com/feeds/4320259625062903049/posts/default/6633746461382826954'/><link rel='alternate' type='text/html' href='http://anuraaga.blogspot.com/2009/05/blog-post.html' title='ಹೃದಯದೊಂದಿಗೆ ಒಂದು ಸಲ್ಲಾಪ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4320259625062903049.post-8549114481431456494</id><published>2009-03-08T09:04:00.000-07:00</published><updated>2009-03-08T09:10:23.528-07:00</updated><category scheme='http://www.blogger.com/atom/ns#' term='ಕಾಸರಗೋಡು'/><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಜಲಕ್ಷಾಮ'/><category scheme='http://www.blogger.com/atom/ns#' term='ನೀರು'/><title type='text'>ನಳ್ಳಿಯಲ್ಲಿ ಇವತ್ತೂ ನೀರಿಲ್ಲ...</title><content type='html'>ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ. ಅಂತೂ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸಿ ಎಚ್ಚೆತ್ತು ಕೊಂಡೆ. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಮನೆಯಾಗಿದ್ದರಿಂದ ಅಣ್ಣಂದಿರು ಯಾರೋ ಬೆಳಗ್ಗಿನ ರೈಲಿಗೆ ಹೋಗುತ್ತಿರಬೇಕು ಅದಕ್ಕಾಗಿಯೇ ಇಷ್ಟೊಂದು ಗೌಜಿ ಅಂದುಕೊಂಡೆ. ಆದ್ರೆ ಅದಾಗಿರಲಿಲ್ಲ. ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು. ಆಗಲೇ ಗೊತ್ತಾದದ್ದು. ಮನೆಯ ಮುಂದಿರುವ ಸಾರ್ವಜನಿಕ ನಳ್ಳಿಯಲ್ಲಿ ನೀರು ಬಂದಿದೆ ಎಂದು. ಆ ಬೆಳಗ್ಗಿನ ಜಾವದಲ್ಲೇ ನಳ್ಳಿ ಮುಂದೆ ಪಾತ್ರೆಗಳ ಸಾಲು ಜೊತೆಗೆ ನಿದ್ದೆಗಣ್ಣಲ್ಲೇ ತಮ್ಮ ಸರದಿ ಯಾವಾಗ ಬರುವುದೋ ಎಂದು ಕಾದು ಕುಳಿತು ಕೊಂಡಿರುವ ಮಂದಿಯನ್ನು ಕಂಡರೆ ಅಯ್ಯೋ ಪಾಪ ಎನಿಸದಿರಲಾರದು.&lt;br /&gt;&lt;br /&gt;ಅಂತೂ ಈ ದಿನ ನೀರು ಸಿಕ್ಕಿತು ಎಂಬ ಸಮಾಧಾನದಲ್ಲಿ ಎಲ್ಲರೂ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮನೆಯತ್ತ ನಡೆದರು. ಇದೆಲ್ಲವೂ ನನಗೆ ಹೊಸತು ಎನಿಸಿದರೂ, ಇದು ಇಲ್ಲಿಯವರ ದಿನಚರಿ ಎಂದು ದೊಡ್ಡಮ್ಮ ಹೇಳಿದ್ದರು. ಈ ಬಗ್ಗೆ ಮಾತಾಡುತ್ತಿರುವಾಗ ಯಾವಾಗ ನೆರೆಹೊರೆಯವರ ಪಾತ್ರದ ಸದ್ದು ಕೇಳಿಸುತ್ತದೆ, ನೀರಿನ ಸದ್ದು ಕೇಳಿಸುತ್ತದೆ ಎಂಬ ಆಲೋಚನೆಯಲ್ಲೇ ದೊಡ್ಡಮ್ಮ ನಿದ್ದೆ ಹೋಗುತ್ತಾರೆ ಎಂದು ಅಣ್ಣ ಹೇಳಿ ನಕ್ಕಿದ್ದ. ಇದು ನಿಜವೂ ಹೌದು. ನೀರಿಲ್ಲದಿದ್ದರೆ ಏನು ಮಾಡಲು ಸಾಧ್ಯ? ಬೇಸಿಗೆ ಚುರುಕಾದರೆ ಇಲ್ಲಿ ವಾರಕ್ಕೊಂದು ಬಾರಿ ನೀರು ಬರುತ್ತದೆ. ಕೆಲವೊಮ್ಮೆ ಉಪ್ಪು ನೀರು.  ಕುಡಿಯಲು ನೀರು ಬೇಕಾದರೆ ಯಾವುದಾದರೂ ಬಾವಿ, ಬೋರ್್ವೆಲ್ ಹುಡುಕಿ ನೀರು ತಂದಿಡಬೇಕು. ಎಲ್ಲದಕ್ಕೂ ಮಿತವಾದ ಬಳಕೆ. ಎರಡು ಬಾರಿ ಸ್ನಾನ ಮಾಡುವುದು ಒಂದೇ ಬಾರಿಯಾಗುತ್ತದೆ. ನೀರಿನ ಅಭಾವದಿಂದಾಗಿ ಮನೆ ಮುಂದೆ ಕಾಲುತೊಳೆಯಲು ಇರಿಸಿದ ನೀರಿನ ಪಾತ್ರ ಮಾಯವಾಗುತ್ತದೆ...ಏನೆಲ್ಲಾ ನಿರ್ಬಂಧಗಳು! ಕೆಲವೊಮ್ಮೆ ಕಾದು ಕುಳಿತು ಕೊಂಡರೂ ನಳ್ಳಿಯಲ್ಲಿ ಒಂದು ತೊಟ್ಟು ನೀರು ಬರುವುದಿಲ್ಲ. ಈ ದಿನ ನೀರಿಲ್ಲ ಅಂತಾ ಪೆಚ್ಚು ಮೋರೆ ಹಾಕಿಕೊಂಡು ಖಾಲಿ ಬಿಂದಿಗೆಯಲ್ಲೇ ವಾಪಾಸಾಗುವ ಮನೆ ಮಂದಿ, ನಾಳೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಇದ್ದ ನೀರಿನಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳುತ್ತಾರೆ.&lt;br /&gt;&lt;br /&gt;ನಮ್ಮ ತರವಾಡು ಮನೆ (ಅಪ್ಪ ಹುಟ್ಟಿ ಬೆಳೆದ ಮನೆ) ಸಿಟಿಯಲ್ಲಿದ್ದು, ಅಲ್ಲಿಯೇ ಮನೆ ಕಟ್ಟಿ ವಾಸಿಸಬೇಕೆಂದು ಕರ್ನಾಟಕದ ಕಡು ಹಳ್ಳಿಯಲ್ಲಿ ಬೆಳೆದ ಅಮ್ಮನ ಆಗ್ರಹವಾಗಿತ್ತು. ಆದರೆ ನಗರ ಜೀವನದಿಂದ ಬೇಸತ್ತ ಅಪ್ಪ ಹಳ್ಳಿಯಲ್ಲೇ ವಾಸಿಸಲು ಆಶಿಸಿದ್ದರು. ಯಾವಾಗಲೂ ಅತ್ತಿಗೆಯವರಂತೆ ನಗರದಲ್ಲಿ ಇರುತ್ತಿದ್ದರೆ ಎಷ್ಟು ಚೆನ್ನ ಎಂದು ಅಮ್ಮ ರಾಗ ಎಳೆಯುತ್ತಿದ್ದರೂ, ನಗರವಾಸಿಗಳಿಗೇ ಗೊತ್ತು ಅವರ ಕಷ್ಟ ಎಂದು ನಾವು ಅಮ್ಮನಿಗೆ ಹೇಳುತ್ತಿದ್ದೆವು. ಅಲ್ಲಿಯ ಸದ್ದು ಗದ್ದಲಗಳಿಂದ ಮುಕ್ತವಾಗಿ ಸ್ವಚ್ಛಂದ ವಾತಾವರಣದ ಹಳ್ಳಿಯಲ್ಲಿ ಜೀವಿಸುವುದು ಭಾಗ್ಯವೆಂದೇ ನಾನು ತಿಳಿದುಕೊಂಡಿದ್ದೇನೆ. &lt;br /&gt;&lt;br /&gt;ನಮ್ಮ ಹಳ್ಳಿಯಲ್ಲಂತೂ ಈವರೆಗೆ ನೀರಿನ ಬರ ಅನುಭವಕ್ಕೆ ಬಂದಿರಲಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ಅಲ್ಪ ಸ್ವಲ್ಪ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಮೊದಲು ಬಾವಿ ತೋಡಿಸಿಕೊಳ್ಳುತ್ತಿದ್ದ ಮಂದಿ ಬೋರ್್ವೆಲ್್ಗೆ ಮೊರೆ ಹೋಗಿರುವುದೇ ಅಂತರ್ಜಲ ಮಟ್ಟ ಕುಸಿಯಲು ಕಾರಣ. ಮನೆಯ ಬಾವಿಯಲ್ಲಿ ನೀರು ಅಲ್ಪ ಕುಸಿದರೆ ಸಾಕು ನೀರೆತ್ತುವ ಮೋಟರ್್ಗೆ ತಾತ್ಕಾಲಿಕ ವಿರಾಮ. ನೀರು ಸೇದುವುದೇ ಗತಿ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ದನಗಳನ್ನು ಸ್ನಾನ ಮಾಡಿಸುವುದು ಎಲ್ಲಾ ಒಂದೊಂದು ದಿನ ಒಂದೊಂದು ತೆಂಗಿನ ಮರದ ಬುಡದಲ್ಲಿ..ಹೀಗೆ ಸಾಗುತ್ತದೆ ನಮ್ಮ ಮನೆಯ ನೀರು ಉಳಿಕೆ ಕಾರ್ಯಕ್ರಮ. ಮಳೆಗಾಲದಲ್ಲಿ ನೀರಿಂಗಿಸುವ ಪದ್ಧತಿಯೂ ನಮ್ಮನೆಯಲ್ಲಿರುವುದರಿಂದ ನೀರಿನ ಅಭಾವದಲ್ಲಿ ಕಂಗೆಡುವ ಸ್ಥಿತಿ ಇಲ್ಲಿಯವರೆಗೂ ನಮಗೆ ಬಂದಿಲ್ಲ.&lt;br /&gt;&lt;br /&gt;ಆದಷ್ಟು ಮನೆಯ ಬಾವಿ ನೀರನ್ನು ಉಳಿಸಿಕೊಳ್ಳುವುದಕ್ಕಾಗಿ ಇತರ ಖರ್ಚಿಗೆ ಬೋರ್್ವೆಲ್ ನೀರೇ ಬೇಕು. ಇದೀಗ ಪಂಚಾಯತ್ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಬೋರ್್ವೆಲ್ ಕೈ ಹಿಡಿದು ನೇತಾಡಬೇಕಾದ ಪರಿಸ್ಥಿತಿ ನಮ್ಮೂರಿನವರಿಗಿಲ್ಲ ಎಂಬುವುದೇ ಸಮಾಧಾನದ ವಿಷಯ. &lt;br /&gt;&lt;br /&gt;ಹಳ್ಳಿಯಲ್ಲಿ ಹೇಗೋ ಅಡ್ಜೆಸ್ಟ್ ಮಾಡಬಹುದು ಆದ್ರೆ ಪಟ್ಟಣದಲ್ಲಿರುವವರ ಅವಸ್ಥೆಯನ್ನು ನೋಡಿದರೆ ಮರುಕವುಂಟಾಗುತ್ತದೆ. ನೀರಿಲ್ಲದೆ ಏನು ಮಾಡಲಿಕ್ಕಾಗುತ್ತದೆ? ಈ ಮೊದಲು ಚೆನ್ನೈ ಮಹಾನಗರದಲ್ಲಿ ವಾಸಿಸುವಾಗ ಹಾಸ್ಟೆಲ್್ನಲ್ಲಿ ನೀರಿಗಾಗಿ ಕಾದು ಕುಳಿತದ್ದು, ನೀರು ಪೋಲು ಮಾಡಿದಾಗ ಹಾಸ್ಟೆಲ್ ವಾರ್ಡನ್್ನಿಂದ ಬೈಸಿಕೊಂಡದ್ದು ಹೀಗೆ ನೀರಿನ ಬಳಕೆಯ ಬಗ್ಗೆ ಬಹಳಷ್ಟು ಕಾಳಜಿ ವಹಿಸಲು ಕಲಿತುಕೊಂಡಿದ್ದೇನೆ. ಬೆಂಗಳೂರಿನಲ್ಲಿಯೂ ಜಲಕ್ಷಾಮವಿದೆ ಅಲ್ವಾ..ಆದ್ರೆ ನಾನು ವಾಸಿಸುವ ಪಿ.ಜಿಯಲ್ಲಿನ ಕತೆಯೇ ಬೇರೆ ಮಾರಾಯ್ರೆ. ಅಲ್ಲಿನ ಹುಡುಗೀರು ನೀರು ಕರೆಂಟ್ ಪೋಲು ಮಾಡುವುದನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ಹೀಗೆ ಪೋಲು ಮಾಡುವ ನೀರು ಕರೆಂಟ್್ನ ಬಗ್ಗೆ ಸ್ವಲ್ಪವಾದರೂ ಕಾಳಜಿ ನಮಗೆ ಇರುತ್ತಿದ್ದರೆ, ಬೆಂಗಳೂರಲ್ಲಿ ಜಲಕ್ಷಾಮ, ಪವರ್ ಕಟ್್ಗಳು ಕಂಡು ಬರುತ್ತಿಲ್ಲವೇನೋ ಎಂದು ಅನಿಸುತ್ತದೆ. ಇದನ್ನು ಕಂಡು ಸಹಿಸಲಾರದೆ ನಾನೊಮ್ಮೆ ಕೆಲವು ಹುಡುಗಿಯರಿಗೆ ಉಪದೇಶ ನೀಡಲು ಹೋಗಿದ್ದೆ (ಇದು ಅಧಿಕ ಪ್ರಸಂಗಿತನ ಅಂತಾ ಅವರಿಗೆ ಅನಿಸಿರಬೇಕು). ನನ್ನ ಮಾತು ಕೇಳಿದ ಅವರು ಹೇಳಿದ್ದೇನು ಗೊತ್ತೇ?&lt;br /&gt;&lt;br /&gt;"ಇಟ್ಸ್ ನೋಟ್ ಯುವರ್ ಹೋಮ್. ಇಟ್ಸ್ ಪಿ.ಜಿ. ಏಂಡ್ ವಿ ಆರ್ ಪೇಯಿಂಗ್ ರೆಂಟ್ ಫೋರ್ ದೇಟ್."&lt;br /&gt;&lt;br /&gt;ಹೌದು, ಅವರು ಹೇಳಿದ್ದೂ ಸರಿ, ಆದ್ರೆ ರೆಂಟ್ ಕೊಡುತ್ತೇವೆ ಅಂದ ಮಾತ್ರಕ್ಕೆ ಕರೆಂಟ್ ನೀರು ವೇಸ್ಟ್ ಮಾಡಬೇಕೆ? ಅಗತ್ಯವಿದ್ದಷ್ಟು ಬಳಸಿ, ನಾಳೆಗಾಗಿ ಉಳಿಸುವ ಬುದ್ಧಿಯನ್ನು  ನನ್ನ ಗೆಳತಿಯರಿಗೆ ಹೇಳಿಕೊಡುವರಾರು? ಸದ್ಯ ನನ್ನಲ್ಲಿ ಉತ್ತರವಿಲ್ಲ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8549114481431456494?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8549114481431456494/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8549114481431456494' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8549114481431456494'/><link rel='self' type='application/atom+xml' href='http://www.blogger.com/feeds/4320259625062903049/posts/default/8549114481431456494'/><link rel='alternate' type='text/html' href='http://anuraaga.blogspot.com/2009/03/blog-post.html' title='ನಳ್ಳಿಯಲ್ಲಿ ಇವತ್ತೂ ನೀರಿಲ್ಲ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-6411933654333213479</id><published>2009-02-22T13:29:00.000-08:00</published><updated>2009-02-22T13:31:25.780-08:00</updated><category scheme='http://www.blogger.com/atom/ns#' term='ಮರೀನಾ'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ನಗೀನಾಳ ಡೈರಿ'/><title type='text'>ನಗೀನಾಳ ಡೈರಿಯಿಂದ...</title><content type='html'>ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ ನಡೆದು ಮೂಡಿದ ಹೆಜ್ಜೆಗುರುತನ್ನು ಅಳಿಸಿ ಹಾಕುತ್ತಿರುವ ತೆರೆಗಳನ್ನು ನೋಡುತ್ತಾ ಅವಳು ನನ್ನೊಂದಿಗೆ ಅವನೂ ಇರುತ್ತಿದ್ದರೆ ಎಂದು ಭಾವಿಸಿರಬಹುದೇನೋ. ಅವಳ ಕಣ್ಣಾಲಿಗಳು ತುಂಬಿದ್ದವು. ಭೋರ್ಗರೆವ ಕಡಲಿನಂತೆ ಅವಳ ದುಃಖ ಹೃದಯದಲ್ಲಿ ಉಮ್ಮಳಿಸಿ ಬರುತ್ತಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ನಾನು ಬದುಕ ಬೇಕು...ಸೋಲೊಪ್ಪಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ನಿಟ್ಟುಸಿರು ಬಿಟ್ಟಳು.&lt;br /&gt;&lt;br /&gt;--------&lt;br /&gt;ಈ ಮೊದಲು ಬಣ್ಣದ ಚಿಟ್ಟೆಯಂತೆ ಹಾರಿ ಕುಣಿದಾಡಿದವಳಲ್ಲ ಅವಳು. ಅವನ ಪರಿಚಯವಾದ ನಂತರ ತನ್ನ ಜೀವನವೇ ಬದಲಾಯಿತು ಎಂದು ಆಕೆ ಪದೇ ಪದೇ ಹೇಳುತ್ತಿದ್ದಳು. ಇದು ನಿಜವೂ ಹೌದು. ಕಾಲೇಜು ದಿನಗಳಲ್ಲಿ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮುಗ್ದ ಮನಸ್ಸಿನ ಬಾಲೆಯಂತೆ ತನ್ನದೇ ಪ್ರಪಂಚವನ್ನು ಸೃಷ್ಠಿಸಿಕೊಂಡು ಬೆಳ್ಳಿ ಮೋಡದಂತೆ ತೇಲಾಡುತ್ತಿದ್ದ ಆ ಹುಡುಗಿ ತನ್ನ ಪ್ರೀತಿಗಾಗಿ, ಅವನಿಗಾಗಿ ಎಲ್ಲವನ್ನೂ ತೊರೆದಳು. ಅಂದಹಾಗೆ ಅವರಿಬ್ಬರೂ ಪ್ರೀತಿ ಪ್ರಣಯ ಅಂತಾ ಪಾರ್ಕು, ಹೋಟೆಲ್ ಸುತ್ತಿಲ್ಲ. ಮನಸ್ಸಿನಲ್ಲೇ ತಮ್ಮ ಪ್ರೀತಿಯನ್ನು ಬಚ್ಚಿಟ್ಟು, ಕಣ್ಣಲ್ಲೇ ಮಾತನಾಡಿ ಪ್ರಣಯ ಲೋಕದ ಸುಖ ಪಡೆದವರು. ಅವನಿಗೂ ಇವಳೆಂದರೆ ಬಹಳ ಅಚ್ಚುಮೆಚ್ಚು. ಕಂಡರೆ ಅವಳೇನೂ ಅಷ್ಟು ಸುಂದರಿಯಲ್ಲ. ಅದರೂ ಮುಖದಲ್ಲಿ ಒಂದು ರೀತಿಯ ಕಳೆ. ಸಾದಾ ಹಳ್ಳಿ ಹುಡುಗಿಯ ಮುಗ್ದತೆ, ಪ್ರೀತಿಸಲು ಮಾತ್ರ ತಿಳಿದಿರುವ ಮುಗ್ದ ಮನಸ್ಸಿನ ಆ ಕೃಷ್ಣ ಸುಂದರಿಯನ್ನು ಇಷ್ಟೊಂದು ಹ್ಯಾಂಡ್‌ಸಮ್ ಆಗಿರುವ ಹುಡುಗ ಮೆಚ್ಚಿದ್ದಾದರೂ ಹೇಗೆ? ಎಂದು ಹಲವರು ಹುಬ್ಬೇರಿಸಿದ್ದೂ ಉಂಟು. ಇವನೀಗೇನೂ ಸ್ಟೈಲ್ ಹೈ ಫೈ ಹುಡುಗಿ ಸಿಕ್ಕಿಲ್ಲವೇ? ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ. ಏತನ್ಮಧ್ಯೆ, ಅವರ ನಡುವೆ ಭೂಮಿ ಆಕಾಶದಷ್ಟು ಅಂತರವಿದೆಯಲ್ವಾ ಎಂದು ಕಾಲೇಜಿನ ಇತರ ಹುಡುಗಿಯರು ಗುಸು ಗುಸು ಹೇಳದೆ ಇರುತ್ತಿರಲಿಲ್ಲ. ಹೋಗಲಿ ಬಿಡಿ ಪ್ರೇಮಕ್ಕೆ ಕಣ್ಣಿಲ್ಲ, ಅದು ಕುರುಡು ಅನ್ನುವುದಕ್ಕೆ ತಕ್ಕುದಾದ ಪರ್ಯಾಯ ಇದು ಅಂತಲೇ ಹೇಳಬಹುದು.&lt;br /&gt;&lt;br /&gt;ವರ್ಷಗಳು ಕಳೆದವು. ಇದೀಗ ಅವಳು ಮತ್ತು ಅವನು ಕಾಲೇಜು ವಿದ್ಯಾರ್ಥಿಗಳಲ್ಲ. ತಮ್ಮ ಕಾಲಲ್ಲಿ ತಾವು ನಿಂತುಕೊಳ್ಳುವಷ್ಟರ ಮಟ್ಟಿಗೆ ಉದ್ಯೋಗ ದಕ್ಕಿದೆ. ಇದರೆಡೆಯಲ್ಲಿ ಹಿತ ಮಿತವಾದ ಪ್ರೇಮ. ತನ್ನ ಪ್ರೇಮವನ್ನು ತೋರ್ಪಡಿಸಲು ತನಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಚಡಪಡಿಕೆ ಅವನದ್ದಾದರೆ ತನ್ನ ಪ್ರೀತಿ ಅವನಿಗೆ ಸಾಕಾಗುತ್ತಿಲ್ಲವೇ ಎಂಬುದು ಅವಳ ಮನದ ತಳಮಳ.&lt;br /&gt;&lt;br /&gt;ಅವನ ಒಂದೊಂದು ಬಡಿತ, ಉಸಿರಿನ ಏರಿಳಿತಗಳು ಅವಳಿಗೆ ಗೊತ್ತು. ತನ್ನ ಪ್ರೀತಿಯಲ್ಲಿ ಅಪಾರ ವಿಶ್ವಾಸವಿದ್ದರೂ, ಕೆಲವೊಮ್ಮೆ ಅವ ನನ್ನಿಂದ ದೂರವಾದರೆ ಎಂಬ ಆತಂಕ ಅವಳನ್ನು ನಿದ್ದೆಗೆಡಿಸಿತ್ತು. ಈ ಪ್ರೀತಿ ಪ್ರಣಯ ಎಲ್ಲವೂ ಕಾಲ ಬದಲಾದಂತೆ ಬದಲಾಗುತ್ತದೆ. ಹೊಸ ಜೀವನಶೈಲಿಗೆ ಮಾರು ಹೋಗುತ್ತಿದ್ದ ತನ್ನ ಇನಿಯನಿಗೆ ಈ ಹಳ್ಳಿ ಹುಡುಗಿಯ ಪ್ರೀತಿ ಕೂಡಾ ಕೆಲವೊಮ್ಮೆ ಬೋರ್ ಎಂದು ಅನಿಸಿ ಬಿಟ್ಟರೆ... ಇಲ್ಲ ಎಲ್ಲವೂ ತನ್ನ ಭ್ರಮೆ ಅವಳ ಹೃದಯ ಬಡಿತ ಮತ್ತಷ್ಟು ವೇಗವಾಗಿತ್ತು. ಕೂಡಲೇ ಅವನಿಗೆ ಕರೆ ಮಾಡಿದಳು.&lt;br /&gt;"ಏನೋ...ಏನಾದರೂ ಕನಸು ಕಂಡಿದ್ದೀಯೇನೋ? ಯಾಕೆ ಹೀಗೆ ಗಾಬರಿಯಾಗಿದ್ದೀಯಾ?" ಎಂದು ಅವ ಕೇಳಿದ.&lt;br /&gt;"ಏನೂ ಇಲ್ಲ ಯಾಕೋ ನಾನು ಒಬ್ಬಂಟಿಗಳು ಎಂದು ಅನಿಸುತ್ತಿದೆ. ನಿನಗೆ ನನ್ನನ್ನು ಇಷ್ಟ ಅಲ್ವಾ? ನನ್ನನ್ನು ಬಿಟ್ಟು ಹೋಗಲಿಕ್ಕಿಲ್ಲವಲ್ಲಾ... ನೀನಿಲ್ಲದ ಬದುಕು ನನಗೆ ಬೇಡ...ಐ ಲವ್ ಯೂ..ನನ್ನನ್ನು ಬಿಟ್ಟು ಹೋಗ್ಬೇಡಾ...ಪ್ಲೀಸ್..."&lt;br /&gt;&lt;br /&gt;"ಯಾಕೆ ಈ ತರಹ ಯೋಚನೆ ಮಾಡ್ತಾ ಇದ್ದೀಯಾ..ಸುಮ್ಮನೆ ಯೋಚನೆ ಮಾಡಿಕೊಂಡು ತಲೆನೋವು ಬರಿಸಿಕೊಳ್ಬೇಡ. ನಾನು ನಿನ್ನವನೇ..ನೀನು ನನ್ನ ಸುಂದರಿ ಹುಡುಗಿ ಅಲ್ವಾ...ಯೋಚನೆ ಮಾಡದೆ ಸುಮ್ಮನೆ ಮಲಗಿಕೋ. ನೋಡು ನಾನಿಂದು ನಿನ್ನ ಕನಸಲ್ಲಿ ಬರುವೆ.."ಎಂದು ಒಂದು ಸಿಹಿ ಮುತ್ತ ನೀಡಿ ಅವ ಫೋನ್ ಕಟ್ ಮಾಡಿದ.&lt;br /&gt;&lt;br /&gt;ಸುಂದರಿ...ಇಷ್ಟರವರೆಗೆ ನನ್ನನ್ನು ಯಾರೂ ಈ ರೀತಿ ಹೊಗಳಿರಲಿಲ್ಲ. ಶಾಲೆಯ ದಿನಗಳಲ್ಲಿ ಈ ಕಪ್ಪು ಬಣ್ಣದಿಂದಾಗಿ ಅದೆಷ್ಟೋ ಬಾರಿಗೆ ಅವಮಾನಕ್ಕೊಳಗಾದವಳು ನಾನು. ಡ್ಯಾನ್ಸ್ ಗ್ರೂಪ್‌ನಲ್ಲಿ ಮೈ ಕಪ್ಪು ಎಂಬ ಕಾರಣಕ್ಕಾಗಿಯೇ ಕೊನೆಯ ಸಾಲಿನಲ್ಲಿ ನಿಂತು ಹೆಜ್ಜೆ ಹಾಕಿದ್ದು, ಮೇಕಪ್ ಮಾಡಿದರೂ ಚಂದ ಕಾಣಿಸದ ಮುಖ...ಮುಖಕ್ಕೆ ಬಣ್ಣ ಹಚ್ಚಿದರೂ ಕರ್ರಗಿನ ಸಣಕಲು ಕೈ ಕಾಲು..ನನ್ನ ದೇಹವೇ ನನಗೆ ಅಸಹ್ಯ ಹುಟ್ಟಿಸಿತ್ತು. ತನ್ನ ಸಹೋದರ ಸಹೋದರಿಯರೆಲ್ಲಾ ಬೆಳ್ಳಗಿರುವಾಗ, ಯಾವ ಜನ್ಮದ ಪಾಪವಿದು ಎಂಬಂತೆ ನಾನು ಮಾತ್ರ ನನ್ನ ಕಪ್ಪಗಿನ ಮೈಯನ್ನು ನೋಡಿ ಅತ್ತು ಬಿಡುತ್ತಿದೆ. ಈ ನಡುವೆ ನನಗೆ ಸಾಂತ್ವನ ನೀಡುತ್ತಿದ್ದವರು ನನ್ನ ಅಪ್ಪ. ಕಪ್ಪು ಕಸ್ತೂರಿ ಕಣಮ್ಮೀ...ಆ ನಮ್ಮ ದೇವರು ನೋಡು..ಕೃಷ್ಣ ಕಪ್ಪು ಅಲ್ಲವೇ? ಮೈ ಬಣ್ಣದಲ್ಲೇನಿದೆ..ಮನಸ್ಸು ತಿಳಿಯಾಗಿದ್ದರಷ್ಟೇ ಸಾಕು... ಎಂದು ನನ್ನನ್ನು ಎದೆಗೆ ತಬ್ಬಿಕೊಳ್ಳುತ್ತಿದ್ದರು. ಅಪ್ಪ ಏನೋ ನನ್ನ ಸಮಾಧಾನಕ್ಕಾಗಿ ಹೇಳುತ್ತಾರೆ.&lt;br /&gt;&lt;br /&gt;ಆದ್ರೆ ನಾನು ಬಾಲ್ಯದಲ್ಲಿ ಅನುಭವಿಸುತ್ತಿರುವ ಅವಮಾನದ ನೋವು ಈಗಲೂ ಹಸಿಯಾಗಿಯೇ ಇದೆ. ಅಲ್ಲಿಯೂ ನಾನು ಸೋಲೊಪ್ಪಿಕೊಡಲಿಲ್ಲ. ಸ್ಟೇಜ್ ಕಾರ್ಯಕ್ರಮದಲ್ಲಿ ನನಗೆ ಹಿಂದಿನ ಸಾಲಿನಲ್ಲೇ ಸ್ಥಾನಕೊಡುವ ಈ ಅಧ್ಯಾಪಕರ ಬಗ್ಗೆ ನನಗೆ ದ್ವೇಷವಿತ್ತು. ಹೇಗಾದರೂ ಮಾಡಿ ಮುಂದೆ ಬರಬೇಕು ಎಂಬುದೇ ನನ್ನ ಛಲವಾಗಿತ್ತು. ಆಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಅಂತೂ ಮೊದಲ ಬಾರಿಗೆ ಕವಿತೆ ಬರೆದೆ. ಅದಕ್ಕೆ ಪ್ರಥಮ ಸ್ಥಾನ ಬಂತು. ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಸ್ಟೇಜ್ ಬಿಟ್ಟು ಆಫ್ ಸ್ಟೇಜ್ ಐಟಂನಲ್ಲಿ ನನ್ನನ್ನು ತೊಡಗಿಸಿಕೊಂಡೆ. ಸ್ಟೇಜಿನಲ್ಲಿ ಅಂದದ ರೂಪವನ್ನು ಪ್ರದರ್ಶಿಸುವ ಸೌಂದರ್ಯವಂತೂ ನನ್ನಲ್ಲಿರಲಿಲ್ಲ ಆದ್ರೆ ನನ್ನ ದುಃಖ ಮನಸ್ಸಿನ ನೋವು ಕತೆಗಳಾಗಿ ಕವಿತೆಗಳಾಗಿ, ನನ್ನ ಕೋಪದ ದನಿ ಭಾಷಣದಲ್ಲಿನ ವಿಷಯಗಳಿಗೆ ಗಟ್ಟಿ ದನಿಯಾಗಿ ಹೊರ ಹೊಮ್ಮಿತು. ನಾನು ಸ್ಟೇಜಿನ ಮರೆಯಲ್ಲಿ ಅಕ್ಷರಗಳ ರೂಪದಲ್ಲಿ ಮಿಂಚಿದೆ, ನನ್ನ ಅನುಭವವೇ ನನಗೆ ಗುರುವಾಗಿತ್ತು.&lt;br /&gt;&lt;br /&gt;ಕಾಲೇಜು ಮೆಟ್ಟಿಲೇರಿದಾಗಲೂ ಅಷ್ಟೇ, ನನ್ನ ಕವನ, ಕತೆ, ಓದು ಸ್ವಪ್ನ ಇವಿಷ್ಟೇ ನನ್ನ ಗೆಳೆಯರು. ಆದರೆ ಅವ ನನ್ನ ಗೆಳೆಯನಾಗಿ ಸಿಕ್ಕಿದ್ದು ನನ್ನ ಪುಣ್ಯ ಎಂದೇ ಹೇಳಬೇಕು. ಓರ್ವ ಉತ್ತಮ ಗೆಳೆಯನಾಗಿ ನಾನು ಕಣ್ಣೀರಿಡುವಾಗ ಸಂತೈಸಿ ಮುಂದೆ ಬರಲು ಪ್ರೋತ್ಲಾಹ ನೀಡಿದ ಆ ಗೆಳೆಯ ಪ್ರೇಮಿಯಾಗಿ ನನ್ನ ಮನಸ್ಸಲ್ಲಿ ನೆಲೆವೂರಿದ್ದು ಯಾವಾಗ ಅಂತಾ ತಿಳಿದಿಲ್ಲ. ನನ್ನ ಅಪ್ಪನಂತಹ ಸ್ವಭಾವ, ಪ್ರೋತ್ಸಾಹಿಸುವ ಅವನ ಪರಿ ಎಲ್ಲವನ್ನು ಮೆಚ್ಚಿಕೊಂಡಾಗ ನಾನವನ ಪ್ರೇಯಸಿ, ಅವ ನನ್ನ ಪ್ರಿಯಕರನಾಗಿದ್ದ. ಅಂದೊಮ್ಮೆ ನನ್ನ ಬಾಲ್ಯದ ಕಹಿಗಳನ್ನು ಅವನಲ್ಲಿ ಹೇಳಿ ಅತ್ತು ಬಿಟ್ಟು, ನೀನು ಬೆಳ್ಳಗಿದ್ದೀಯಾ ನಿನಗೂ ಕಪ್ಪು ಬಿಳುಪು ಮೈ ಬಣ್ಣದಲ್ಲಿ ತಾರತಮ್ಯ ನೋಡುವ ಮೆಂಟಾಲಿಟಿ ಇರಬಹುದು ಎಂದು ರೇಗಾಡಿದ್ದೆ. ಅವ ಹೇಳಿದ್ದು ಇಷ್ಟೇ..ನೀನು ಸುಂದರಿ...ನಿನ್ನ ಮನಸ್ಸನ್ನು ನೋಡಿ ನಾ ಮೆಚ್ಚಿಕೊಂಡಿದ್ದೇನೆ..ಐ ಲವ್ ಯೂ..ಬಣ್ಣದಲ್ಲೇನಿದೇ? ಎಂದು ನನ್ನ ಕಣ್ಣಿಗೆ ಕಣ್ಣಿಟ್ಟು ಪ್ರಶ್ನೆ ಹಾಕಿದ್ದ.&lt;br /&gt;&lt;br /&gt;ನನಗೆ ಅಷ್ಟೇ ಸಾಕಾಗಿತ್ತು. ಬಾಲ್ಯದ ನೋವುಗಳಿಗೆ ಮುಲಾಮು ಹಚ್ಚಿದಂತಿತ್ತು ಅವನ ಆ ಮಾತು. ಆಮೇಲೆ ಸೌಂದರ್ಯ, ಬಣ್ಣ ಯಾವತ್ತೂ ನಮ್ಮ ಪ್ರೀತಿಯೆಡೆಯಲ್ಲಿ ಬಂದಿರಲಿಲ್ಲ. ಅಮರ ಪ್ರೇಮಿಗಳ ಕಥೆಯೋ, ದೇವದಾಸನ ವ್ಯಥೆಯೋ ಯಾವುದೂ ನಮ್ಮ ಪ್ರಣಯದಲ್ಲಿನ ವಿಷಯವಾಗಿರಲಿಲ್ಲ. &lt;br /&gt;&lt;br /&gt;ಆದರೆ ಇದೀಗ ಜೀವನದಲ್ಲಿನ ಮಹತ್ತರವಾದ ವಿಷಯಕ್ಕೆ ತೀರ್ಪ ಕಲ್ಪಿಸಬೇಕಾಗಿದೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ? ಮದುವೆ ಪ್ರಾಯ ಹತ್ತಿರವಾಗುತ್ತಿದೆ ಇನ್ನು ವಿವಾಹಲೋಚನೆ ಮಾಡದೆ ಇರುತ್ತಾರೆಯೇ ನಮ್ಮ ಹಿರಿಯರು? ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತೇನೆ ಎಂದು ತಿಳಿದರೆ ಮನೆಯಲ್ಲಿ ಪ್ರಳಯವೇ ಸಂಭವಿಸುತ್ತದೆ. ಪ್ರೀತಿಯ ಜಾಲದಲ್ಲಿ ಸಿಕ್ಕಿ ಬಿದ್ದಾಗಿದೆ ಮನೆಯಲ್ಲಿ ಹೇಳುವಂತ ಧೈರ್ಯ ನಮಗಿಲ್ಲ ಎಂಬ ಚಡಪಡಿಕೆ ನಮ್ಮಿಬ್ಬರಲ್ಲಿತ್ತು. ನಮ್ಮಿಬ್ಬರ ಕುಟುಂಬವೇ ಹಾಗೇ..ಜೀವಕ್ಕೆ ಜೀವ ಕೊಟ್ಟು ಅವರು ನಮ್ಮನ್ನು ಮುದ್ದಿಸುತ್ತಾರೆ. ಅವನಿಗೆಗೆ ಅಮ್ಮ ಎಂದರೆ ಪಂಚಪ್ರಾಣ. ಇತ್ತ ನನ್ನ ಅಪ್ಪ..ಈಗಲೂ ನನ್ನನ್ನು ಎಳೆಗೂಸು ಎಂದೇ ಪರಿಗಣಿಸುತ್ತಾರೆ. ನನ್ನ ಅಪ್ಪ ಅಮ್ಮನ ಮುದ್ದಿನ ಮಗಳು ನಾನೇ. ಈ ರೀತಿ ಮಾಡಿದರೆ ಅದನ್ನ ಸಹಿಸುವಷ್ಟು ಶಕ್ತಿ ಅವರಿಗಿಲ್ಲ ಎಂದು ನನಗೆ ಗೊತ್ತು. ನಮ್ಮಿಬ್ಬರ ಕುಟುಂಬಗಳು ನಮ್ಮ ಮೇಲಿರುವ ವಿಶ್ವಾಸ ಪ್ರೀತಿಗೆ ಮಣ್ಣೆರಚಿ ನಮ್ಮ ಪ್ರಣಯವನ್ನು ಮೆರೆಯಬೇಕೆ? ಬೇಡ..ನಮ್ಮಿಬ್ಬರ ಕುಟುಂಬದ ಕಣ್ಣೀರಿನ ಶಾಪ ನಮಗೆ ಬೇಡ. ಈ ಪ್ರಣಯಕ್ಕೆ ಇಂದೇ ತೆರೆಯೆಳೆಯಬೇಕು. ಎಷ್ಟೋ ಬಾರಿ ಆಲೋಚಿಸಿದಿದ್ದೆ. ಅದರೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಇದು ಸಾಧ್ಯವಾಗಲೇ ಬೇಕು ಎಂದು ನಾನು ನಿರ್ಧರಿಸಿದ್ದೇನೆ.&lt;br /&gt;&lt;br /&gt;ಈ ಸಮುದ್ರ ತೀರದ ಮನೋಹರ ಸಂಜೆಯಲ್ಲಿ ನಾನೊಬ್ಬಳೆ. ಅವ ನನ್ನೊಂದಿಗೆ ಇಲ್ಲ..ಅವನಿಲ್ಲದ ಜೀವನ ಯಾಕೆ? &lt;br /&gt;&lt;br /&gt;ಅವಳ ಡೈರಿಯ ಕೊನೆಯ ಪುಟದಲ್ಲಿ ನನ್ನ ಮರಣಕ್ಕೆ ಯಾರು ಹೊಣೆಯಲ್ಲ ಎಂದು ಬರೆಯಲಾಗಿತ್ತು. &lt;br /&gt;&lt;br /&gt;ಆ ಸಂಜೆ ತನ್ನ ದುಃಖವನ್ನೆಲ್ಲಾ ಮರೀನಾಳ ಮರಳಲ್ಲಿ ಹೂತು ಹಾಕಿ ಮರಳುತ್ತೇನೆ..&lt;br /&gt;&lt;br /&gt;ಕೊನೆಯ ಬಾರಿಗೆ ನಾನು ಅವನಲ್ಲಿ ಹೇಳಿದ್ದು.."ಮುಂದಿನ ಜನ್ಮದಲ್ಲಿ ನೀನು ನನ್ನವನಾಗಿರು. ನಾನು ನಿನ್ನವಳು ಮಾತ್ರ.."&lt;br /&gt;ಅವ ಹೇಳಿದ್ದು.... "ಈ ಕುಟುಂಬ, ಸಂಸಾರದ ಪ್ರೀತಿಗಾಗಿ ನಾವು ನಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದೇವೆ. ಮುಂದಿನ ಜನ್ಮದಲ್ಲಿ ನಾವಿಬ್ಬರೂ ಅನಾಥರಾಗಿ ಹುಟ್ಟೋಣ...."&lt;br /&gt;&lt;br /&gt;----------------&lt;br /&gt;ನಾನು ಇನ್ನು ಹೊರಡಬೇಕು. ಎಲ್ಲರೂ ಜೊತೆ ಜೊತೆಯಾಗಿ ಹೊರಡುವಾಗ ನಾನೊಬ್ಬಳೇ ಆ ಮರಳ ತಡಿಯಲ್ಲಿ ನಿಂತು ವಿಸ್ತಾರವಾಗಿ ಹರಡಿರುವ ಆ ಕಡಲನೊಮ್ಮೆ ದಿಟ್ಟಿಸಿದೆ. ಸೂರ್ಯ ಕೆಂಪಾಗಿ ಅದಾಗಲೇ ಜಾರಿದ್ದ. ಇದು ನನ್ನ ಜೀವನದ ಕೊನೆಯ ದಿನ..ಗುಡ್ ಬೈ ಮರೀನಾ..ಮತ್ತೊಮ್ಮೆ ತಿರುಗಿ ನೋಡಿದೆ. ದೂರದಲ್ಲಿ ಕಾಣುವ ಆ ನೀಲಿ ಅಂಚಿನಲ್ಲಿ ಏನೋ ಸೆಳೆತವಿದೆ. ಅಲ್ಲೇ ನಿಂತು ಮತ್ತೊಮ್ಮೆ ನೋಡಿದೆ. ಜೀವನದಲ್ಲಿ ಕಷ್ಟಗಳು ಕ್ಷಣಿಕ, ಅದಕ್ಕಂಜಿ ಜೀವನವೇ ಬೇಡ ಅಂದು ಕೊಂಡರೆ?. ಕಣ್ಣಿಗೆ ಕಾಣುವ ಸಾಗರದ ಆ ನೀಲಿಯಂಚನ್ನು ನೋಡಿ ಅದೇ ಕೊನೆ ಅಂದು ಕೊಂಡಿದ್ದೀಯೇನು? ಅಲ್ಲಿ ನಿಂತು ಒಮ್ಮೆ ನೋಡು ಈ ನೀಲಿಯಂಚಿನಾಚೆಗೂ ವಿಶಾಲವಾಗಿ ಹರಡಿಕೊಂಡಿರುವ ನೀರಿದೆ, ಹಾಗೆ ಮುಂದೆ ಮುಂದೆ ಹೋದಂತೆ ಮುಗಿಯಷ್ಟು ನೀರು, ಆಳ, ಎಲ್ಲವೂ ಇದೆ. ಕಷ್ಟಗಳು ನಮಗೆ ಬದುಕಲು ಕಲಿಸುತ್ತವೆ, ಈಸ ಬೇಕು ಜಯಿಸಬೇಕು..ಅದುವೇ ಜೀವನ..ಅವನಿಲ್ಲ ಎಂಬ ಕೊರಗಿನಲ್ಲಿ ಜೀವನವೇ ಬೇಡವೆಂದರೆ ನಿನ್ನ ಪ್ರೀತಿಗೂ ನೀನು ಕೊನೆ ಹಾಡಿದಂತೆ ಅಲ್ಲವೇ? ಪ್ರೀತಿಯನ್ನು ಕೊಲ್ಲಬೇಡವೋ...ಅದು ನಿನ್ನ ಹೃದಯದಲ್ಲಿ ಭದ್ರವಾಗಿರಲಿ ಎಂದೆಂದಿಗೂ..&lt;br /&gt;&lt;br /&gt;ಈ ಮಾತು ಯಾರೂ ಹೇಳಿದರು? ಯಾರೂ ಇಲ್ಲ.. ಮರೀನಾ ಹೇಳಿದ್ದಾಗಿರಬಹುದೇ? ಇಲ್ಲ...ಅದು ಸಾಧ್ಯವಿಲ್ಲ. ಇದು ಯಾರೂ ಹೇಳಿದ್ದಲ್ಲ. &lt;br /&gt;&lt;br /&gt;ನನ್ನ ಮನಸ್ಸು ನನ್ನಲ್ಲಿಯೇ ಹೇಳಿಕೊಂಡದ್ದು. ಸಾಯಬೇಕೆಂದಿರುವ ನನ್ನ ಮನಸ್ಸು ಥಟ್ಟನೆ ಇಂತಹ ನಿರ್ಧಾರ ಕೈಗೊಂಡಿತೇ? ಏನೇ ಆಗಲಿ..ಆತ್ಮಹತ್ಯೆ ಮಾಡಿ ಹೇಡಿ ಅನಿಸುವುದಕ್ಕಿಂತ ಧ್ಯೆರ್ಯದಿಂದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದ್ದೇನೆ. ಈವರೆಗೆ ನನ್ನ ಕ(ವ್ಯ)ಥೆಗಳನ್ನು ಈ ಡೈರಿಯಲ್ಲಿ ಬರೆದಿದ್ದೇನೆ. ಮನಸ್ಸು ನಿರಾಳವಾಗಿದೆ. ಹೊಸತೊಂದು ಜೀವನ...ಹೊಸ ಭಾವನೆಗಳನ್ನು ಸ್ವೀಕರಿಸಲು ನಾನು ಮನಸ್ಸು ಮಾಡಿದ್ದೇನೆ. ಹಳೆಯದೆಲ್ಲವನ್ನು ಮರೆತು ಹೊಸತಿಗೆ ಪ್ರವೇಶಿಸುತ್ತಿದ್ದೇನೆ.&lt;br /&gt;&lt;br /&gt;ಮರೀನಾ..ಈ ಡೈರಿ ನಿನ್ನ ತೆಕ್ಕೆಯಲ್ಲಿರಲಿ..ಎಂದು ನಗೀನಾ ತನ್ನ ಡೈರಿಯನ್ನು ಮರೀನಾಳ ಅಬ್ಬರದ ತೆರೆಯ ಮುಂದೆ ಬೀಸಿ ಎಸೆದಳು. ತೆರೆಮಾಲೆಗಳ ಬಡಿತಕ್ಕೆ ಸಿಕ್ಕಿ, ದಡಕ್ಕೆ ಅಪ್ಪಳಿಸುತ್ತಾ ಆ ಡೈರಿ ತೇಲಾಟವಾಡುವಾಗ, ನಗೀನಾ ಹೊಸ ಜನ್ಮ ಪಡೆದವಳಂತೆ ಉಲ್ಲಸಿತಳಾಗುತ್ತಿದ್ದಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-6411933654333213479?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/6411933654333213479/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=6411933654333213479' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/6411933654333213479'/><link rel='self' type='application/atom+xml' href='http://www.blogger.com/feeds/4320259625062903049/posts/default/6411933654333213479'/><link rel='alternate' type='text/html' href='http://anuraaga.blogspot.com/2009/02/blog-post.html' title='ನಗೀನಾಳ ಡೈರಿಯಿಂದ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-4501434835242534400</id><published>2009-01-15T08:21:00.000-08:00</published><updated>2009-01-15T08:22:19.887-08:00</updated><category scheme='http://www.blogger.com/atom/ns#' term='ನನ್ನ ಗ್ರಾಮ'/><category scheme='http://www.blogger.com/atom/ns#' term='ಕವನ'/><category scheme='http://www.blogger.com/atom/ns#' term='ನನ್ನೂರಿನ ನೆನಪು'/><title type='text'>ನನ್ನ ಗ್ರಾಮ</title><content type='html'>ನಿತ್ಯ ಹಚ್ಚ ಹಸುರಾಗಿ&lt;br /&gt;ಕಂಗೊಳಿಸುವುದೀ ನನ್ನೂರು&lt;br /&gt;ತೆನೆ ತುಂಬಿ ನಿಂತ ಗದ್ದೆ,&lt;br /&gt;ಬಾಳೆ ತೆಂಗು ಕಂಗಿನ ತೋಟ&lt;br /&gt;ಇಕ್ಕೆಲಗಳಲಿ,&lt;br /&gt;ಸುತ್ತಲೂ ಹಬ್ಬಿದ ಬೇಲಿ ಹೂಗಳು..&lt;br /&gt;ಇದು ನನ್ನ ಗ್ರಾಮ...ಆಗಿತ್ತು!&lt;br /&gt;&lt;br /&gt;ದುಡಿದ ರೈತನಿಗೆ ಬೆಳೆಯು ದಕ್ಕದಿರಲು&lt;br /&gt;ಹಚ್ಚ ಹೊಲದಲ್ಲಿ ಕೆಂಬಾವುಟ&lt;br /&gt;ಹಾರಿಸಿದ್ದರಂತೆ ನಮ್ಮ ಹಿರಿಯರು,&lt;br /&gt;ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು...&lt;br /&gt;ಹೋರಾಟ ಮುಂದುವರಿಯಲು ಹೀಗೆ&lt;br /&gt;ದಣಿಯು ದಣಿದಿದ್ದ, ಬಡವ ಗೆದ್ದಿದ್ದ&lt;br /&gt;&lt;br /&gt;ನನ್ನೂರಿನ ಕೆಂಪು ವಿಪ್ಲವವು&lt;br /&gt;ಸಮಾನತೆಗೆ ಉಸಿರು&lt;br /&gt;ಭೂಮಿ ಹಸುರಾಗಲು ಕೊಂಚ&lt;br /&gt;ರಕ್ತವೂ ಚಿಮ್ಮಿತ್ತು, ಅಪ್ಪ ಹೇಳಿದ್ದ&lt;br /&gt;ಶಾಂತಿ ನೆಲೆಸಿದ ಈ ಸಮರದ ಜೊತೆಗೆ&lt;br /&gt;ಹುತಾತ್ಮರ ಮಂಟಪವೂ ಎದ್ದು ನಿಂತಿತ್ತು.&lt;br /&gt;&lt;br /&gt;ಇಂದು ಬರಡಾಗಿದೆ ನನ್ನ ಸುಂದರ ಗ್ರಾಮ,&lt;br /&gt;ಅಲ್ಲಲ್ಲಿ ಎರಡಂತಸ್ತಿನ ಮಹಲು,ಗೋಪುರ&lt;br /&gt;ಹಸಿರನುಳಿಸಲು ಹೋರಾಡಿದ ಜನರೆಲ್ಲಿ?&lt;br /&gt;ಅವರೆಂದೋ ಮಣ್ಣು ಪಾಲಾಗಿ,&lt;br /&gt;ಅವರ ಮಕ್ಕಳು ಲಾರಿಯಲಿ ತಂದ ಮಣ್ಣನು&lt;br /&gt;ಬರಡು ಭೂಮಿಗೆ ಸುರಿದು, ಕೆಂಪು ಇಟ್ಟಿಗೆಯಲಿ&lt;br /&gt;ಗೋಡೆ ಕಟ್ಟುತ್ತಿದ್ದಾರೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4501434835242534400?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4501434835242534400/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4501434835242534400' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4501434835242534400'/><link rel='self' type='application/atom+xml' href='http://www.blogger.com/feeds/4320259625062903049/posts/default/4501434835242534400'/><link rel='alternate' type='text/html' href='http://anuraaga.blogspot.com/2009/01/blog-post_8388.html' title='ನನ್ನ ಗ್ರಾಮ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-3681395142305721529</id><published>2009-01-15T08:20:00.000-08:00</published><updated>2009-01-15T08:21:30.350-08:00</updated><category scheme='http://www.blogger.com/atom/ns#' term='ಹಾಗೇ ಸುಮ್ಮನೆ'/><title type='text'>ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ</title><content type='html'>ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ..&lt;br /&gt;&lt;br /&gt;ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ?&lt;br /&gt;&lt;br /&gt;ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಹೇಳಲು ಯಾರಿಗೆ ತಾನೆ ಹೆಮ್ಮೆ ಇರುವುದಿಲ್ಲ? &lt;br /&gt;&lt;br /&gt;ಮೊದಮೊದಲು ಮಂಗಳೂರು, ಬೆಂಗಳೂರು, ಮದ್ರಾಸ್ ದೆಹಲಿ ಅಂತಾ ಗರ್ವದಲ್ಲಿ ಹೇಳುತ್ತಿದ್ದರೂ ಇದೀಗ ಎಲ್ಲರೂ ಖತಾರ್, ಕುವೈತ್, ಅಮೆರಿಕ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತಾರೆ. ಯಾಕೆಂದರೆ ನಮಗೆಲ್ಲರಿಗೂ ಸ್ವದೇಶಕ್ಕಿಂತ ವಿದೇಶ ಪ್ರೀತಿ ಹೆಚ್ಚು ಎಂದೇ ಹೇಳಬಹುದು. ನಮ್ಮೂರಿಗೆ ಸಂಬಂಧಿಸಿದಂತೆ ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳಿಗೇ ಡಿಮ್ಯಾಂಡು. ವರಾನ್ವೇಷಣಾ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹುಡುಗ ನಮ್ಮೂರಲ್ಲಿ ಅಥವಾ ಪಕ್ಕದ ಊರಲ್ಲೇ ಇರಬಹುದು. ಆದರೆ ಕಡಿಮೆ ವಿದ್ಯಾಭ್ಯಾಸ ಗಳಿಸಿದ್ದರೂ ಗಲ್ಫ್‌ನಲ್ಲಿ ದುಡಿಯುತ್ತಾನೆ ಎಂದು ಕೇಳಿದರೆ ಸಾಕು ಕನ್ಯಾಪಿತೃಗಳು ಬೇಗನೆ ಒಪ್ಪಿಕೊಳ್ಳುತ್ತಾರೆ. ಅದೇ ವೇಳೆ "ಮರಿಮೋನ್ ಅಂಞ ದೂರೆ..ಗಲ್ಫಿಲಾ" (ಅಳಿಯ ತುಂಬಾ ದೂರದ ಊರಾದ ಗಲ್ಫ್‌ನಲ್ಲಿದ್ದಾನೆ) ಎಂದು ಅತ್ತೆ ಮಾವಂದಿರು ಎದೆ ನೆಟ್ಟಗಾಗಿಸಿ ಹೇಳುತ್ತಾರೆ. ಯಾಕೆಂದರೆ ಸ್ವದೇಶದಲ್ಲಿನ ಸಂಪಾದನೆಗಿಂತ ವಿದೇಶದಲ್ಲಿನ ಸಂಪಾದನೆಗೇ ಹೆಚ್ಚು ಬೆಲೆಯಲ್ಲವೆ? ತನ್ನ ಮಗಳನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡಲು ಯಾವ ಮಾತಾಪಿತರು ತಾನೇ ಆಗ್ರಹಿಸುವುದಿಲ್ಲ? ಕೆಲವೊಮ್ಮೆ ಆತ ಗಲ್ಪ್‌ನಲ್ಲಿ ದುಡಿದು ಬಂದು ಊರಲ್ಲೇ ನೆಲೆಸಿದ್ದರೂ ಈ ಮೊದಲು ಗಲ್ಫ್‌ನಲ್ಲಿದ್ದೆ ಎಂದು ಹೇಳುವುದೂ ಹೆಮ್ಮೆಯೇ..ಹೀಗೆ ಸಾಗುತ್ತದೆ ಗಲ್ಪ್ ಪುರಾಣ...&lt;br /&gt;&lt;br /&gt;ಇನ್ನು, ದೂರದ ಊರಿನ ಉಡುಗೊರೆಯ ಬಗ್ಗೆ ಹೇಳಲೇ ಬೇಕಲ್ವಾ? ಇದು ನನ್ನ ಮಗ, ಅಪ್ಪ, ಅಣ್ಣ, ಪ್ರಿಯಕರ ಕೊಡಿಸಿದ್ದು ಎಂದು ಹೇಳಲೂ ಹೆಮ್ಮೆ ಅನಿಸುವುದಿಲ್ವಾ? ನಿಜ ಹೇಳಲಾ.. ನನಗಂತೂ ಹೆಮ್ಮೆಯಿದೆ. ನಾನು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದ ವೇಳೆ ನನ್ನಣ್ಣ ಬೆಂಗ್ಳೂರಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ. ಆವಾಗ ಅಣ್ಣ ನನಗೊಂದು ಜೀನ್ಸ್ ಶರ್ಟ್ ಕೊಡಿಸಿದ್ದ. ಅದೇನೋ ಸೈಜ್ ತುಂಬಾನೇ ದೊಡ್ಡದಾಗಿತ್ತು. ಅದನ್ನು ಹಾಕಿಕೊಂಡು ಶಾಲೆಗೆ ಹೋಗಬೇಡ ಎಂದು ಅಮ್ಮ ಹೇಳಿದ್ದರೂ, ಅದನ್ನು ಲೆಕ್ಕಿಸದೆಯೇ ನಾನದನ್ನು ಹಾಕಿಕೊಂಡು ಶಾಲೆಗೆ ಹೋಗಿದ್ದೆ. ದೊಡ್ಡ ಗಾತ್ರದ ಆ ಶರ್ಟ್ ಕಂಡು ಶಾಲೆಯಲ್ಲಿ ಇದೇನು ಅಣ್ಣನ ಶರ್ಟ್ ಹಾಕಿಕೊಂಡು ಬಂದಿದ್ದೀಯಾ? ಎಂದು ಎಲ್ಲರೂ ನಕ್ಕಿದ್ದರು. ಆದರೂ "ಇದು ನನ್ನ ಅಣ್ಣ ಬೆಂಗ್ಳೂರಿನಿಂದ ತಂದ ಶರ್ಟು, 'ಬೆಂಗ್ಳೂರಿನಿಂದ' ಅಂತ "ಇನ್ನೊಮ್ಮೆ ಒತ್ತಿ ಹೇಳಿದ್ದೆ. ಅಂದು ಬೆಂಗ್ಳೂರಿನಿಂದ ಅಣ್ಣ ತಂದಂತಹ ದೈತ್ಯ ಶರ್ಟ್ ಧರಿಸಿ ನಾನೂ ಕೂಡಾ ಜಂಭದಿಂದ ಉಬ್ಬಿ ಹೋಗಿದ್ದೆ. ಆದರೆ ಈಗ ನಾನು ಬೆಂಗ್ಳೂರಲ್ಲೇ ಇದ್ದುಕೊಂಡು ಬಾಲ್ಯದ ನನ್ನ "ಬೆಂಗ್ಳೂರು ಮಹಿಮೆ"ಯನ್ನು ನೆನೆಪಿಸಿಕೊಳ್ಳುವಾಗ ನಗು ಬರುತ್ತಿದೆ.&lt;br /&gt;&lt;br /&gt;ಅಂದ ಹಾಗೇ ನಾವು ಕೂಡಾ ರಜೆಯಲ್ಲಿ ಊರಿಗೆ ಮರಳುವಾಗ ಏನೇನು ತೆಗೆದುಕೊಂಡು ಹೋಗಲಿ? ಯಾರ್ಯಾರಿಗೆ ಏನೇನು ಕೊಡಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕೆಲವೊಮ್ಮೆ ತಲೆ ತಿನ್ನುವ ಸನ್ನಿವೇಶಗಳೂ ಒದಗಿಬರುವುದಿದೆ. ಯಾಕೆಂದರೆ ನಾವು ನೀಡಿದಂತಹ ಅಥವಾ ನೀಡುವಂತಹ ಆ ಉಡುಗೊರೆಗಳು ನಮ್ಮ ಸಂಬಂಧದ ಪ್ರೀತಿಯ ಪ್ರತೀಕಗಳು. ಅದನ್ನು ನೀಡುವಾಗ ಅಥವಾ ಪಡೆಯುವಾಗ ಅನುಭವಿಸುವ ಸಂತೋಷವಿದೆಯಲ್ಲಾ ಅದನ್ನು ವರ್ಣಿಸಲಸಾಧ್ಯ. ಅವರವರ ಪ್ರೀತಿಗೆ, ಸಂಬಂಧಕ್ಕೆ, ಭಾವನೆಗಳಿಗೆ ತಕ್ಕಂತೆ ಆ ಉಡುಗೊರೆಗಳು ಪ್ರತಿಯೊಬ್ಬನ ಮನದಲ್ಲಿಯೂ ಸ್ಥಾನವನ್ನು ಗಳಿಸುತ್ತವೆ ಎಂದರೆ ತಪ್ಪಾಗಲಾರದು. &lt;br /&gt;&lt;br /&gt;ಅಂತೂ ಒಟ್ಟಿನಲ್ಲಿ ದೂರದ ಊರಿನಿಂದ ನಮ್ಮ ಆಪ್ತರು ಊರಿಗೆ ಬರುತ್ತಿದ್ದಾರೆ ಎಂದ ಕೂಡಲೇ ದಿನಗಳನ್ನು ಎಣಿಸಲು ಆರಂಭಿಸುತ್ತೇವೆ. ಅವರ ಹಾದಿಯನ್ನೇ ನಿರೀಕ್ಷಿಸುತ್ತಿರುವ ನಮಗೆ ಮನೆಯ ಬಾಗಿಲ ಮುಂದೆ ಹೆಜ್ಜೆ ಸದ್ದು ಕೇಳಿಸಿದಂತೆ, ಅವರ ಪ್ರೀತಿಯ ಕರೆಗೆ ಓಗೊಡುವಂತೆ ಮನಸ್ಸು ಹಪಹಪಿಸುತ್ತದೆ. ಆ ಕಾತರದ ಘಳಿಗೆಯಲ್ಲಿ ದಿನಗಳನ್ನು ಹೇಗೆ ಕಳೆಯಬೇಕೆಂಬುದೇ ತಿಳಿಯುತ್ತಿಲ್ಲ. ತನ್ನ ಆಪ್ತರನ್ನು ಕಾಣುವ ಇಂತಹ ತೀವ್ರವಾದ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂಬುದು ನಿಜ.&lt;br /&gt;&lt;br /&gt;ದೂರದ ಊರಿನಿಂದ ಮರಳುತ್ತಿರುವ ಮಗನ ದಾರಿಯನ್ನೇ ನಿರೀಕ್ಷಿಸುತ್ತಿರುವ ಅಮ್ಮನ ಕಣ್ಣಲ್ಲಿ ಮಗನ ಬಾಲ್ಯದ ದಿನಗಳು ಮತ್ತೊಮ್ಮೆ ಜೀವ ಪಡೆಯುತ್ತದೆ. ತನ್ನ ಪತಿಯ ಬರುವಿಕೆಗಾಗಿ ಕಾದು ಕುಳಿತ ಪತ್ನಿ, ತನ್ನ ಪತಿಯ ಸಾನ್ನಿಧ್ಯದಲ್ಲಿ ಅನುಭವಿಸಿದ ಸುಖ, ಅವನ ವಿರಹದಲ್ಲಿ ಮಿಡಿದ ಹೃದಯ ಎಲ್ಲವನ್ನೂ ನೆನೆದು, ಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಾಳೆ. ಅದೇ ವೇಳೆ ತನ್ನಿಂದ ದೂರವಾಗಿದ್ದ ಪ್ರಿಯಕರನನ್ನು ಕಣ್ತುಂಬ ಕಾಣಬೇಕೆಂಬ ಹಂಬಲ, ಇಷ್ಟು ದಿನ ದೂರವಾಗಿದ್ದಾಗ ಹೇಳದ ಕೇಳಿಸದ ಪ್ರೀತಿಯ ಮಾತುಗಳನ್ನಾಡಲು ಬಯಸುವ ಆ ಕ್ಷಣ...ಹೀಗೆ ಮಮತೆ, ವಿಶ್ವಾಸ, ಪ್ರೀತಿ ಇವೆಲ್ಲವೂ ನಿರೀಕ್ಷೆಗಳ ರೂಪ ತಳೆದು ದೂರದೂರಿನಿಂದ ಬರುವ ನಮ್ಮವರ ಸ್ವಾಗತಕ್ಕೆ ನಿಂತಿರುತ್ತದೆ. ಇದಕ್ಕೆ ಪ್ರತಿಯಾಗಿ ಅವರೊಂದು ಕಾಣಿಕೆಯನ್ನು ನಮ್ಮ ಕೈಗೆ ನೀಡಿದರೆ....&lt;br /&gt;&lt;br /&gt;ಸದ್ಯ, ಈ ಅಪೂರ್ವ ಭಾವಾತ್ಮಕ ಕ್ಷಣಗಳನ್ನು ಬಣ್ಣಿಸಲು ಪದಗಳು ಸಾಕಾಗಲಿಕ್ಕಿಲ್ಲ ಅಂತ ಅನಿಸುತ್ತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3681395142305721529?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3681395142305721529/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3681395142305721529' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3681395142305721529'/><link rel='self' type='application/atom+xml' href='http://www.blogger.com/feeds/4320259625062903049/posts/default/3681395142305721529'/><link rel='alternate' type='text/html' href='http://anuraaga.blogspot.com/2009/01/blog-post_9545.html' title='ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-5920373096894552670</id><published>2009-01-15T08:19:00.000-08:00</published><updated>2009-01-15T08:20:25.327-08:00</updated><category scheme='http://www.blogger.com/atom/ns#' term='ಕವನ ನೆನಪು ಯಾತ್ರೆ'/><title type='text'>ಯಾತ್ರೆ</title><content type='html'>ಜೀವನದ ಅರ್ಥವನ್ನರಸಿ&lt;br /&gt;ಕವಲು ದಾರಿಯ ನಾಲ್ಕು ದಿನಗಳ&lt;br /&gt;ಯಾತ್ರೆ ಮುಗಿದಾಗ ಸುಖದ&lt;br /&gt;ಸೊನ್ನೆಯ ಜೊತೆಗೆ ಏಕಾಂಗಿ ನಾನು...&lt;br /&gt;&lt;br /&gt;ಕಳೆದ ಬಾಲ್ಯದ ನೆನಪುಗಳು&lt;br /&gt;ಮನದ ಕದ ತಟ್ಟುತಿರಲು&lt;br /&gt;ಮರಳಿ ಬಾರದ ನಿನ್ನೆಗಳಿಗೆ&lt;br /&gt;ವರ್ತಮಾನದೊಳು ಮರುಗಲೆಂತು?&lt;br /&gt;&lt;br /&gt;ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ&lt;br /&gt;ಮಧು ಹೀರಿ ಹಾರುವ ದುಂಬಿಯಂತೆ&lt;br /&gt;ಮನದೊಳಗೆ ಹೊಕ್ಕು, ಮುತ್ತನಿಟ್ಟವರು&lt;br /&gt;ಮುದುಡಿದಾಗ ತಿಪ್ಪೆಗೆಸೆದರು ಕಸದಂತೆ&lt;br /&gt;&lt;br /&gt;ಕಳೆದ ನೋವಿಗೆ ತೇಪೆಯನು ಹಚ್ಚಿ,&lt;br /&gt;ಸಪ್ತಪದಿ ತುಳಿದಾಗ, ಸಂಸಾರ ಸಾಗರದ&lt;br /&gt;ಅಲೆಗಳಿಗೆ ಮರಳ ದಂಡೆಯಾಗಿ&lt;br /&gt;ಕಣ್ಣೀರ ಒತ್ತಿ, ನಕ್ಕು ಬಿಟ್ಟಿದ್ದೆ ಮೌನವಾಗಿ&lt;br /&gt;&lt;br /&gt;ಇಂತು ನನ್ನ ಜೀವನದಿ ಅತಿಥಿಯಾಗಿ ಬಂದವರು,&lt;br /&gt;ಕೆಲ ಕಾಲ ನಕ್ಕು, ಮತ್ತೆ ಮಸಿಯೆರಚಿ&lt;br /&gt;ಬಂದಣಿಗೆಯಂತೆ ನನ್ನ ರಸ ಹೀರಿ ಚಿಗುರುವಾಗ&lt;br /&gt;ಒಣ ವೃಕ್ಷದಂತೆ ನಾ ಧರೆಗುರುಳುತಲಿರುವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5920373096894552670?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5920373096894552670/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5920373096894552670' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5920373096894552670'/><link rel='self' type='application/atom+xml' href='http://www.blogger.com/feeds/4320259625062903049/posts/default/5920373096894552670'/><link rel='alternate' type='text/html' href='http://anuraaga.blogspot.com/2009/01/blog-post_15.html' title='ಯಾತ್ರೆ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-2760865619558063371</id><published>2009-01-15T08:16:00.000-08:00</published><updated>2009-01-15T08:19:33.599-08:00</updated><category scheme='http://www.blogger.com/atom/ns#' term='ಭಾಷಾನುವಾದ ಸಣ್ಣ ಕಥೆ'/><title type='text'>ಸ್ಮಶಾನದತ್ತ...</title><content type='html'>ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.&lt;br /&gt;&lt;br /&gt;ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು.&lt;br /&gt;&lt;br /&gt;ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು, ನಿಮ್ಮ ಬೇಕು ಬೇಡಗಳಿಗೆ ಅಡ್ಡಿಯಾಗದೆ ಸಲಹಿದ್ದೇನೆ. ಅದರಲ್ಲಿ ನನಗೆ ತೃಪ್ತಿಯೂ ಇದೆ. ಇದೀಗ ನನ್ನ ಉಸಿರು ಇಂದೋ ನಾಳೆಯೋ ನಿಂತು ಹೋಗಬಹುದು. ಅದಕ್ಕಿಂತ ಮೊದಲೇ ನನ್ನ ಸೊತ್ತನ್ನು ಪಾಲು ಮಾಡಬೇಕೆಂದು ಬಯಸಿದ್ದೇನೆ. ಆ ಪೆಟ್ಟಿಗೆಯಲ್ಲಿ ಡಾಕ್ಯುಮೆಂಟ್ ಇದೆ. ನಿಮ್ಮ ನಿಮ್ಮ ಹೆಸರಿರುವ ದಾಖಲೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ ಕೂಡಲೇ ನಾಲ್ವರು ಮಕ್ಕಳು ತಮ್ಮ ತಮ್ಮ ದಾಖಲೆಗಳನ್ನು ಕೈಗೆ ತೆಗೆದುಕೊಂಡರು.&lt;br /&gt;&lt;br /&gt;ಎಲ್ಲರ ಮುಖ ಅರಳಿತು. ತಮಗೆ ಸಾಕಷ್ಟು ಸೊತ್ತನ್ನು ಸಮಪಾಲಾಗಿ ನೀಡಿದ್ದಾನೆ. ಯಾರಿಗೂ ತಕರಾರು ಇಲ್ಲ, ಎಲ್ಲರೂ ಫುಲ್ ಖುಷ್. ಇದೆಲ್ಲಾ ಮುಗಿದ ಮೇಲೆ ತನ್ನ ಮಕ್ಕಳೆಲ್ಲರೂ ಒಂದು ದಿನ ತನ್ನೊಂದಿಗೆ ಇರಬೇಕು. ಮೊಮ್ಮಕ್ಕಳ ಆಟವನ್ನು ನೋಡಿ ಆನಂದಿಸಬೇಕು. ಮುದಿ ಅಜ್ಜ ತನ್ನ ಆಶೆಯನ್ನು ತಿಳಿಸಿದ. ಎಲ್ಲರೂ ತಲೆಯಲ್ಲಾಡಿಸಿದರು. ಅಂದು ಮಧ್ಯಾಹ್ನಕ್ಕೆ ಭಾರೀ ಭೋಜನ. ಎಲ್ಲರಿಗೂ ಸಂತೋಷ. ಅಜ್ಜನಿಗೆ ತನ್ನ ಮಕ್ಕಳ ಮೊಮ್ಮಕ್ಕಳ ನಗು ಕಂಡಾಗ ಎನೋ ಸಮಾಧಾನ, ಸಂತಸ. &lt;br /&gt;&lt;br /&gt;ಸಂಜೆಯಾಯಿತು. ಅಜ್ಜನಿಗೆ ಮೈ ಕೈಯೆಲ್ಲಾ ನೋವಾಗ ತೊಡಗಿತು. ಮಕ್ಕಳನ್ನು ಕರೆದ. ಅಜ್ಜ ಮಲಗಿದ್ದ ಕೋಣೆಗೆ ಹೋಗಿ ಎಲ್ಲರೂ ಹೊರ ಬಂದರು. ನಾಲ್ಕು ಮಕ್ಕಳೂ ಹತ್ತಿರದ ಕೋಣೆಯಲ್ಲಿ ಚಿಕ್ಕದೊಂದು ಮೀಟಿಂಗ್ ನಡೆಸಿದರು. &lt;br /&gt;&lt;br /&gt;ಹಿರಿಯವ ಹೇಳಿದ ಅಪ್ಪನ ಅವಧಿ ಮುಗಿಯುತ್ತಾ ಬಂದಿದೆ. ಈಗಲೇ ಉಸಿರೆಳೆದು ಬಿಟ್ಟರೆ ಸ್ಮಶಾನಕ್ಕೆ ಒಯ್ಯುವವರು ಯಾರು? ಎರಡನೆಯವನೆಂದ ಇದೆಲ್ಲಾ ಜವಾಬ್ದಾರಿ ಚಿಕ್ಕವನಿಗೆ. ಅವನಿಗೆ ಅಪ್ಪಾ ಅಂದ್ರೆ ತುಂಬಾ ಇಷ್ಟ ಅಲ್ವಾ..ಅಪ್ಪನಿಗೂ ಹಾಗೆಯೇ..ಅವನೇ ಎಲ್ಲಾ ಮಾಡಿದ್ರೆ ಒಳ್ಳೆದು ಅಂತ ಹೇಳಿದ. ನೀವೆಲ್ಲಾ ನಿಮ್ಮ ನಿಮ್ಮ ಮನೆಯಲ್ಲಿ ಸುಖವಾಗಿ ಇದ್ದೀರಾ. ನಾನಿಲ್ಲಿ ಈ ಮುದಿಯನೊಂದಿಗೆ ಹೇಗೆ ಕಾಲ ಕಳೆಯುತ್ತಾ ಇದ್ದೆ ಅಂತಾ ನಿಮಗೆ ಗೊತ್ತಾ? ಈವರೆಗೆ ನಾನು ಅಪ್ಪನ ಚಾಕರಿ ಮಾಡಿದ್ದೇನೆ. ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನಾದರೂ ನಿಮಗೆ ಮಾಡಬಾರದಾ?ಎಂದು ಸಿಟ್ಟಿನಿಂದಲೇ ಕೇಳಿದ ಕಿರಿಯವ. ಈ ಮೂವರು ಅಣ್ಣದಿಂದ ನಡುವೆ ಪ್ರೀತಿ ಸುಮ್ಮನೇ ನಿಂತು ಬಿಟ್ಟಳು. ಸದ್ಯ ನಾನು ಮಗಳಾಗಿದ್ದು ಬಚಾವ್!ಇಲ್ಲದಿದ್ದರೆ ಗಂಡು ಮಕ್ಕಳಂತೆ ನಾನು ಕೂಡಾ ಈ ಹೆಣದ ಹೊಣೆಯನ್ನು ಹೊರಬೇಕಾದ ಸ್ಥಿತಿ ಬರುತ್ತಿತ್ತು ಎಂದು ಮನಸ್ಸಲ್ಲೇ ಅಂದು ಕೊಂಡಳು.&lt;br /&gt;&lt;br /&gt;ಇವರು ಇಲ್ಲಿ ಮಾತನಾಡುತ್ತಿದ್ದಂತಯೇ ಅಜ್ಜನ ಕೋಣೆಯಿಂದ ಏನೋ ಸದ್ದಾಯಿತು. "ಬುಡ್ಡ ಮರ್ ಗಯಾ" ಅನ್ನೋ ನಿಟ್ಟಿನಲ್ಲಿ ಎಲ್ಲರೂ ಅತ್ತ ಧಾವಿಸಿದರು. ಎಲ್ಲರೂ ನೋಡುತ್ತಿದ್ದರಂತೆ ಅಜ್ಜ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಕೊಂಡು ಹೊರಟು ನಿಂತಿದ್ದಾರೆ. ಅಪ್ಪಾ ನೀವೆಲ್ಲಿಗೇ? ಮಗಳು ಪ್ರೀತಿ ಗಾಬರಿಯಾಗಿ ಕೇಳಿದಳು.. ನಿಮಗೆ ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ. ಅದಕ್ಕೇ....ನಾನೇ ಸ್ಮಶಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮುದಿ ಜೀವ ಭಾರವಾದ ಹೆಜ್ಜೆಗಳನ್ನು ಹಾಕಿತು.&lt;br /&gt;&lt;br /&gt;(ಗೆಳೆಯರೇ, ಈ ಕಥೆ ಮೂಲ ಮಲಯಾಳಂನಲ್ಲಿದೆ. ಇದನ್ನು ಯಾರು ಬರೆದದ್ದು ಅಂತಾ ಗೊತ್ತಿಲ್ಲ. ಪ್ರಸ್ತುತ ಕಥೆ ಓದಿದಾಗ ಭಾಷಾನುವಾದ ಮಾಡಬೇಕೆಂದೆನಿಸಿತು. ಭಾಷಾನುವಾದವೆಂಬ ಸಾಹಸದ ಮೊದಲ ಹೆಜ್ಜೆಯನ್ನು ಈ ಕಥೆ ಮೂಲಕ ಮುಂದಿರಿಸಿದ್ದೇನೆ. ನಿಮಗೆ ಇದು ಚೆನ್ನಾಗಿದೆ ಎಂದು ಅನಿಸಿದರೆ ಅಥವಾ ತಪ್ಪುಗಳನೇದರೂ ಕಂಡು ಬಂದರೆ ದಯವಿಟ್ಟು ನನಗೆ ತಿಳಿಸಿ.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-2760865619558063371?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/2760865619558063371/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=2760865619558063371' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/2760865619558063371'/><link rel='self' type='application/atom+xml' href='http://www.blogger.com/feeds/4320259625062903049/posts/default/2760865619558063371'/><link rel='alternate' type='text/html' href='http://anuraaga.blogspot.com/2009/01/blog-post.html' title='ಸ್ಮಶಾನದತ್ತ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-3819640646294712615</id><published>2008-12-21T07:13:00.000-08:00</published><updated>2008-12-21T07:17:52.831-08:00</updated><title type='text'>ನಾನು ಮತ್ತು ಬದುಕು...</title><content type='html'>ಮನದ ಮೂಲೆಯಲ್ಲಡಗಿದ&lt;br /&gt;ಒಂದಷ್ಟು ದುಗುಡಗಳು&lt;br /&gt;ಇನ್ನೊಮ್ಮೆ ನನ್ನ ಮನವನ್ನರಳಿಸಿದ&lt;br /&gt;ಒಂದಿಷ್ಟು ಭಾವನೆಗಳನ್ನ&lt;br /&gt;ಹೆಕ್ಕಿ ಚಿತ್ತಾರ ಬಿಡಿಸಿದಾಗ&lt;br /&gt;ಅದನ್ನು ಕವನವೆಂದು ಗೀಚಿದ್ದೆ...&lt;br /&gt;&lt;br /&gt;ದುಗುಡ ದುಮ್ಮಾನಗಳು&lt;br /&gt;ಎದೆಯ ಕುಕ್ಕಿ &lt;br /&gt;ಕಣ್ಣೀರು ಹರಿಸಿದಾಗ&lt;br /&gt;ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು&lt;br /&gt;ಈ ಜೀವನವ ನಾನಂದು&lt;br /&gt;ನರಕವೆಂದು ಕರೆದಿದ್ದೆ....&lt;br /&gt;&lt;br /&gt;ಏಳು ಬೀಳುಗಳ ನಡುವೆ&lt;br /&gt;ಸಾಗುವುದೀ ಜೀವನವು&lt;br /&gt;ಸುಖ ದುಃಖಗಳು ಇವು, ಕ್ಷಣಿಕವೆಂದಾಗ&lt;br /&gt;ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ&lt;br /&gt;ಕಾಲ ಸರಿಯಲು ಹೀಗೆ.. ಜಗದ &lt;br /&gt;ನಿಯಮವಿದೆಂದು ನಾನಾಗ ಅರಿತಿದ್ದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3819640646294712615?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3819640646294712615/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3819640646294712615' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3819640646294712615'/><link rel='self' type='application/atom+xml' href='http://www.blogger.com/feeds/4320259625062903049/posts/default/3819640646294712615'/><link rel='alternate' type='text/html' href='http://anuraaga.blogspot.com/2008/12/blog-post_21.html' title='ನಾನು ಮತ್ತು ಬದುಕು...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-1968605942304440871</id><published>2008-12-15T07:47:00.000-08:00</published><updated>2008-12-15T07:48:55.202-08:00</updated><title type='text'>ನೀನು ನನ್ನವನು...</title><content type='html'>ನನ್ನ &lt;br /&gt;ಸ್ವಪ್ನಲೋಕದ ಸುಪ್ತ ಕನಸುಗಳ&lt;br /&gt;ಸರಮಾಲೆ ನಿನ್ನನಾವರಿಸಿರಲು&lt;br /&gt;ನಿನ್ನ&lt;br /&gt;ಬೆಚ್ಚನೆಯ ನೆನಪುಗಳು&lt;br /&gt;ಮತ್ತೊಮ್ಮೆ ಕೆಣಕುತಿರಲು&lt;br /&gt;ಇನಿಯಾ ಇನ್ನೇಕೆ ತಡ?&lt;br /&gt;ಬಂದು ಬಿಡು ಈ ಹೃದಯದಲಿ&lt;br /&gt;ಪ್ರೀತಿ ಬಾಗಿಲು ಇದೋ&lt;br /&gt;ನಿನಗಾಗಿ ತೆರೆದಿಡುವೆ...&lt;br /&gt;&lt;br /&gt;ಮಂದ ಮಾರುತವೀಗ&lt;br /&gt;ಪ್ರಣಯರಾಗವ ನುಡಿಸಿರಲು&lt;br /&gt;ಸುಮಲತೆಯ ನಡುವೆ&lt;br /&gt;ದುಂಬಿಗಳ ಚುಂಬನದಿ&lt;br /&gt;ಬಿಸಿಯಪ್ಪುಗೆಯ ಸುಖ ನೀಡುವಿಯಂತೆ&lt;br /&gt;ಪ್ರೀತಿ ಲೋಕದ ಹಾದಿಯಲಿ ಇದೋ&lt;br /&gt;ನಿನಗಾಗಿ ಕಾದಿರುವೆ...&lt;br /&gt;&lt;br /&gt;ನಿನ್ನ ನಗೆಯಲ್ಲಿ ಲೋಕ ಮರೆಯುವೆನಾಗ&lt;br /&gt;ನಿನ್ನ ತೋಳಬಂಧನದಲ್ಲಿ&lt;br /&gt;ಒಮ್ಮೆ ಬಂಧಿಯಾಗುವ ಆಸೆ&lt;br /&gt;ನಿನ್ನ ಕೈ ಹಿಡಿದು ಮಳೆ ನೆನೆಯುವಾ ಬಯಕೆ&lt;br /&gt;ಎಂದೆಂದೂ ನೀ ನನ್ನವನಾಗಿ ಬಿಡು &lt;br /&gt;ನೀನು ನನ್ನವನು, ನನ್ನವನು ಮಾತ್ರ&lt;br /&gt;ನಾನೆಂದು ನಿನ್ನ ಪ್ರೀತಿಯಾಗಿರುವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1968605942304440871?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1968605942304440871/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1968605942304440871' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1968605942304440871'/><link rel='self' type='application/atom+xml' href='http://www.blogger.com/feeds/4320259625062903049/posts/default/1968605942304440871'/><link rel='alternate' type='text/html' href='http://anuraaga.blogspot.com/2008/12/blog-post.html' title='ನೀನು ನನ್ನವನು...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-4010116410025651209</id><published>2008-10-20T07:30:00.000-07:00</published><updated>2008-10-20T07:49:04.821-07:00</updated><category scheme='http://www.blogger.com/atom/ns#' term='ಪ್ರೇಮ'/><category scheme='http://www.blogger.com/atom/ns#' term='ಮೊಬೈಲ್'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ಸಣ್ಣ ಕಥೆ'/><title type='text'>ಮೊಬೈಲ್ ಪ್ರೇಮ...</title><content type='html'>ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು.&lt;br /&gt;&lt;br /&gt;ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು.&lt;br /&gt;&lt;br /&gt;ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy...&lt;br /&gt;&lt;br /&gt;ತನ್ನೊಂದಿಗೆ ಪ್ರೀತಿಯ ನಾಟಕವಾಡಿದ ಮೊಬೈಲ್ ಪ್ರೇಮಿಯ ಕುಡಿ ತನ್ನ ಗರ್ಭದಲ್ಲಿ ಬೆಳೆಯುತ್ತಿರುವುದು ಆಕೆಗೆ ಮನವರಿಕೆಯಾದಾಗ, ದಿನ ರಾತ್ರಿಯಿಡೀ ಆಕೆ ಕಾಲ್ ಮಾಡುತ್ತಲೇ ಇದ್ದಳು. ಅವ receive ಮಾಡಲಿಲ್ಲ. ಆಕೆ ನಿಮಿಷಕ್ಕೊಂದರಂತೆ ಮೆಸೇಜ್  ಕಳುಹಿಸಿದಳು.&lt;br /&gt;ಮುಂದೊಮ್ಮೆ This number is not existing ಅಂತ ಬಂತು. ಆತ number ಬದಲಿಸಿದ್ದ...&lt;br /&gt;&lt;br /&gt;ಆಕೆ Deliveryಗಾಗಿ wait ಮಾಡುತ್ತಾ ಕುಳಿತ್ತಿದ್ದಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4010116410025651209?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4010116410025651209/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4010116410025651209' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4010116410025651209'/><link rel='self' type='application/atom+xml' href='http://www.blogger.com/feeds/4320259625062903049/posts/default/4010116410025651209'/><link rel='alternate' type='text/html' href='http://anuraaga.blogspot.com/2008/10/blog-post.html' title='ಮೊಬೈಲ್ ಪ್ರೇಮ...'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-1240451976738656680</id><published>2008-09-20T06:08:00.000-07:00</published><updated>2008-09-20T06:10:01.994-07:00</updated><category scheme='http://www.blogger.com/atom/ns#' term='poem'/><title type='text'>ಪ್ರೀತಿ -ದೇವರು</title><content type='html'>ನೀನ್ಯಾಕೆ ನನ್ಮುಂದೆ&lt;br /&gt;&lt;br /&gt;ನಿನ್ನ ಪ್ರೀತಿ ತೋರಿಸುತ್ತಿಲ್ಲ?&lt;br /&gt;&lt;br /&gt;ಅವನೆಂದ&lt;br /&gt;&lt;br /&gt;ಪ್ರೀತಿ ದೇವರಂತೆ!&lt;br /&gt;&lt;br /&gt;ನಾನು ಪ್ರೀತಿ ತೋರಿಸದಿದ್ದರೂ&lt;br /&gt;&lt;br /&gt;ನೀನು ನನ್ನನ್ನೇ&lt;br /&gt;&lt;br /&gt;ಸದಾ ನೆನೆಯುತ್ತಿರುವಿಯಲ್ಲಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1240451976738656680?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1240451976738656680/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1240451976738656680' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1240451976738656680'/><link rel='self' type='application/atom+xml' href='http://www.blogger.com/feeds/4320259625062903049/posts/default/1240451976738656680'/><link rel='alternate' type='text/html' href='http://anuraaga.blogspot.com/2008/09/blog-post.html' title='ಪ್ರೀತಿ -ದೇವರು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-2695808045914574447</id><published>2008-07-11T00:22:00.000-07:00</published><updated>2008-07-11T00:24:45.421-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಅಮ್ಮನ ಪತ್ರ'/><title type='text'>ಅಮ್ಮನ ಒಲವಿನ ಓಲೆ.....</title><content type='html'>ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. &lt;br /&gt;&lt;br /&gt;ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತೆ ಅಮ್ಮನ ಪತ್ರ ನನ್ನ ಕೈಗೆ ಸಿಕ್ಕಿದಾಗ ಚೈತನ್ಯ ನೀಡುವ ಅಸ್ತ್ರದಂತೆ ಭಾಸವಾಗುತ್ತದೆ.&lt;br /&gt;&lt;br /&gt;ಚೆನ್ನೈ ಎಂಬ ಮಹಾನಗರಕ್ಕೆ ಬಂದು ವರುಷಗಳಾಗುತ್ತಾ ಬಂತು. ಅದರಲ್ಲಿ ಎಷ್ಟು ಏಳು ಬೀಳುಗಳು ಸಂಭವಿಸಿವೆಯೋ ಅಷ್ಟು ಬಾರಿ ಅಮ್ಮನ ಪತ್ರ ನನ್ನ ಕೈ ಸೇರಿದೆ. ನಿಜ ಹೇಳಬೇಕೇ? ಮೊಬೈಲ್ ಫೋನ್‌ನಲ್ಲಿ ಆಗಾಗ ಮಾತನಾಡುತ್ತಾ ಕಷ್ಟ ಸುಖ ಹೇಳುತ್ತಿದ್ದರೂ ಅಮ್ಮನ ಪತ್ರದಲ್ಲಿ ಸಿಗುವಂತಹ ತೃಪ್ತಿ ಎಲ್ಲಿಯೂ ಸಿಕ್ಕಿಲ್ಲ. ಆ ಪತ್ರ ಅಂತದ್ದು. ತನ್ನ ಮಕ್ಕಳು ಎಲ್ಲಿಯೇ ಇರಲಿ ಮನಸ್ಸಲ್ಲಿ ಮಕ್ಕಳದ್ದೇ ಚಿಂತೆ. ಮಾತೃ ಹೃದಯವಲ್ಲವೇ? ಮಕ್ಕಳ ಒಂದೊಂದು ಉಚ್ವಾಸ ನಿಶ್ವಾಸವೂ ಆ ಅಮ್ಮನಿಗೆ ತಿಳಿಯುವ ಶಕ್ತಿ ಇದೆ. ಅದಕ್ಕಾಗಿಯೇ ಬಲ್ಲವರು ಅಮ್ಮ ದೇವರ ರೂಪ ಅಂದದ್ದು?&lt;br /&gt;&lt;br /&gt;ಇನ್ನು, ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಕಾಳಜಿ ಇಲ್ಲದೆ ಇರುತ್ತದಾ?. ನೋಡು ಪುಟ್ಟಿ, ಅದು ಹಾಗೆ, ಇದು ಹೀಗೆ, ಜಾಗರೂಕತೆಯಿಂದಿರು ಎಂಬ ಉಪದೇಶಗಳೊಂದಿಗೆ ತುಂಬಾ ಮಮತೆ, ತಪ್ಪು ಮಾಡಿದಲ್ಲಿ ಅಷ್ಟೇ ಕಟುವಾದ ಟೀಕೆ ಎಲ್ಲವೂ ತುಂಬಿರುವ ಅದೆಷ್ಟೋ ಪತ್ರಗಳು ನನ್ನಲ್ಲಿ ಭದ್ರವಾಗಿವೆ. ಅವು ನೀಡುವಂತಹ ಮಾರ್ಗದರ್ಶನ, ಒಲವು, ಸಾಂತ್ವನ.. ನಾನು ಧೃತಿಗೆಟ್ಟಾಗ "ಏಕಾಂಗಿಯಲ್ಲ" ಎಂಬ ಅರಿವು ಮೂಡಿಸಿ ಯಾವುದೇ ಕಷ್ಟ ಬಂದರೂ ಸೆಟೆದು ನಿಲ್ಲುವ ತಾಕತ್ತನ್ನು ನೀಡಿದೆ. &lt;br /&gt;&lt;br /&gt;ಪತ್ರದ ಬಗ್ಗೆ ಹೇಳುವಾಗ ತಕ್ಷಣ ನೆನಪಿಗೆ ಬರುವುದೇ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್. ಈಗ ಅದು ಕಾಣಲಿಕ್ಕೇ ಅಪರೂಪ. ನಿಜ, ಕಾಲಬದಲಾಗಿದೆ. ತಾಂತ್ರಿಕತೆ ವರ್ಧಿಸುತ್ತಾ ಬಂದಂತೆ ಪತ್ರಗಳ ಸ್ಥಾನವನ್ನು ಮೊಬೈಲ್ ಎಸ್‌ಎಂಎಸ್‌ಗಳು ಇಮೇಲ್ ಕಸಿದುಕೊಂಡಿವೆ. ಏನೇ ಇರಲಿ ತಮ್ಮ ಕೈಯಕ್ಷರಗಳಲ್ಲಿ ಬರೆದ ಪತ್ರದಲ್ಲಿ "ನನ್ನೂರಿನ" ಮಣ್ಣಿನ ಸುಗಂಧವಿದೆ, ವಿವರವಾಗಿ ಬರೆದ ಮುದ್ದಾದ ಅಕ್ಷರಗಳಲ್ಲಿ ಮಮತೆಯ ಕೊಂಡಿಯಿದೆ. ಪ್ರೀತಿಯ...ಎಂದು ಆರಂಭವಾಗುವ ಪತ್ರಗಳಿಂದ ಇತೀ ನಿನ್ನ.. ಎಂದು ಕೊನೆಗೊಳ್ಳುವ ಈ ಪತ್ರಗಳು ಹೊತ್ತು ತರುವ ಅದೆಷ್ಟು ಸುದ್ದಿಗಳು, ಭಾವನೆಗಳು! ಎಲ್ಲವನ್ನೂ ಓದಿ ಮುಗಿಸುವಾಗ ಕಣ್ಣು ತೇವಗೊಂಡಿರುತ್ತದೆ. &lt;br /&gt;&lt;br /&gt;ನೆನಪುಗಳು ಮನಸ್ಸಿನ ಕದ ತಟ್ಟಿ ಒಮ್ಮೆ ನಗು ಮತ್ತೊಮ್ಮೆ ಅಳು ತರಿಸಿದರೂ ಪತ್ರದಲ್ಲಿನ ಅಕ್ಷರಗಳು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಓದಿದ ಪತ್ರವನ್ನು ಮತ್ತೆ ಮತ್ತೆ ಓದುವಾಗ ಹೊಸ ಉತ್ಸಾಹ, ಅಮ್ಮನ ನೆನಪು ಕಾಡುತ್ತದೆ. ಮರೆಯದೆ ಪತ್ರ ಬರಿ ಎಂದು ಕೊನೆಯ ಸಾಲಿನಲ್ಲಿ ಅಮ್ಮ ಬರೆದದ್ದು ನೋಡಿದಾಗ ನೆನಪಾದದ್ದು, ಅದೆಷ್ಟೋ ನನ್ನ ಉತ್ತರಗಳು ಅಮ್ಮನ ಕೈ ಸೇರಿವೆ ಎಂದು. ಸದ್ಯ, ನಾನು ನನ್ನವರನ್ನು ಮಿಸ್ ಮಾಡುವಾಗ ಪತ್ರವನ್ನು ಕೈಗೆತ್ತಿಕೊಂಡು ನೋವು ಮರೆಯುವಂತೆ, ಅವರೂ ಹಾಗೆ ಮಾಡುತ್ತಿರುತ್ತಾರಲ್ಲಾ..ಅದಕ್ಕೇ ಪತ್ರ ಬರೆಯುವುದನ್ನು ಮುಂದುವರಿಸುತ್ತಾ ಬಂದಿದ್ದೇನೆ. ಅದರಲ್ಲಿ ಏನೋ ಒಂಥಾರ ತೃಪ್ತಿಯಿದೆ, ಮನದಾಳದ ಮಾತನ್ನು ಹೇಳುವ ತಾಕತ್ತಿದೆ. ಸ್ನೇಹದ ಅಕ್ಷರಗಳು ಓಲೆ ರೂಪದಲ್ಲಿ ಕೈ ಸೇರುವಾಗ ಮನಸ್ಸಿನ ಮೂಲೆಯಲ್ಲಿರುವ ಪ್ರೀತಿಯ ಸೆಳೆತವು ಮುಂದಿನ ಪತ್ರವನ್ನು ನಿರೀಕ್ಷಿಸುತ್ತಿರುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-2695808045914574447?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/2695808045914574447/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=2695808045914574447' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/2695808045914574447'/><link rel='self' type='application/atom+xml' href='http://www.blogger.com/feeds/4320259625062903049/posts/default/2695808045914574447'/><link rel='alternate' type='text/html' href='http://anuraaga.blogspot.com/2008/07/blog-post.html' title='ಅಮ್ಮನ ಒಲವಿನ ಓಲೆ.....'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-6323325825925370178</id><published>2008-06-04T21:15:00.000-07:00</published><updated>2008-06-04T21:17:29.776-07:00</updated><category scheme='http://www.blogger.com/atom/ns#' term='ಕವನ'/><title type='text'>ವಾಸ್ತವ</title><content type='html'>ಮುಂಜಾನೆ ಮಿಂದು&lt;br /&gt;ದೇವರಿಗೆ ನಮಿಸುವಾಗ&lt;br /&gt;ಅಮ್ಮ ಹೇಳುತ್ತಿದ್ದಳಾಗ,&lt;br /&gt;ಕೈ ಮುಗಿದು ಕಣ್ಮುಚ್ಚಿ ಬೇಡಿದರೆ&lt;br /&gt;ಈಶ ಒಲಿವನೆಂದು..&lt;br /&gt;&lt;br /&gt;ಸಂಧ್ಯಾವಂದನೆ ವೇಳೆ&lt;br /&gt;ದೀಪ ಉರಿಸಿ ನನ್ನ ಅಜ್ಜಿ&lt;br /&gt;ರಾಮನಾಮ ಜಪಿಸುತಿರಲು&lt;br /&gt;ಕಣ್ಣೆರಡು ಮುಚ್ಚಿ ನಾನೂ&lt;br /&gt;ದನಿಗೂಡಿಸುತ್ತಿದ್ದೆ..&lt;br /&gt;&lt;br /&gt;ಇರುಳ ಬಾನಂಗಳದಲ್ಲಿ&lt;br /&gt;ಕೋಟಿ ತಾರೆಗಳು ಮಿನುಗುವಾಗ&lt;br /&gt;ನಿದ್ದೆ ಬರುತ್ತಿಲ್ಲ ತಾತ,&lt;br /&gt;ಕತೆ ಹೇಳೆಂದು ಸತಾಯಿಸಿದಾಗ&lt;br /&gt;ಸುಮ್ಮನೆ ಕಣ್ಣು ಮುಚ್ಚಿರು&lt;br /&gt;ನಿದ್ದೆ ತಂತಾನೆ ಬರುವುದು&lt;br /&gt;ಎಂದು ಅಪ್ಪ ಗದರಿಸಿದಾಗ&lt;br /&gt;ಕಣ್ಣೆರಡು ಮುಚ್ಚಿ ಮಗ್ಗಲೆಳೆದು&lt;br /&gt;ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ&lt;br /&gt;&lt;br /&gt;ಬಾಲ್ಯವೆಷ್ಟು ಮಧುರವಾಗಿತ್ತು!&lt;br /&gt;ಕಣ್ತೆರೆದರೆ ಸುಂದರ ಲೋಕ&lt;br /&gt;ಮುಚ್ಚಿದರೆ ಸ್ವಪ್ನ ಲೋಕಕ್ಕೆ&lt;br /&gt;ಪಯಣ ಬೆಳೆಸುತಲಿದ್ದೆ&lt;br /&gt;&lt;br /&gt;ಕಾಲ ಚಕ್ರವು ತಿರುಗುತಿರಲು&lt;br /&gt;ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,&lt;br /&gt;ಸುತ್ತ ಕಣ್ಣು ಹಾಯಿಸಿದರೆ...&lt;br /&gt;ಹಗೆ ಹೊಗೆಯಾಡುವ ಜಗದಲ್ಲಿ&lt;br /&gt;ನಗೆ ಮಾಸಿದ ಜೋಲು ಮುಖ!&lt;br /&gt;ಜೀವ ತೆಗೆಯಲು ಕತ್ತಿ ಮಸೆಯುವ ಜನ,&lt;br /&gt;ಇನ್ನೊಂದೆಡೆ,&lt;br /&gt;ಜೀವಕ್ಕಾಗಿ ಬೇಡುವ ಮನ&lt;br /&gt;ಹಣದಾಸೆಗಾಗಿ ಜೀವ ಹಿಂಡುವವರು,&lt;br /&gt;ಬೇಡುವವರು, ಮುಂದೆ ಕೈ ಚಾಚಿ&lt;br /&gt;&lt;br /&gt;ಜಗದಳುವಿನ ಮುಂದೆ&lt;br /&gt;ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು&lt;br /&gt;ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ&lt;br /&gt;ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ&lt;br /&gt;ದನಿಯೆತ್ತಲು ಚಡಪಡಿಸಿ ಸೋತಾಗ&lt;br /&gt;ಎರಡು ಹನಿ ಕಣ್ಣೀರೆರೆದು&lt;br /&gt;ಮತ್ತೆ,&lt;br /&gt;ನನಗಿದರ ಅರಿವೇ ಇಲ್ಲದವನಂತೆ&lt;br /&gt;ಕಣ್ಣು ಮುಚ್ಚಿಕೊಳ್ಳುತ್ತೇನೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-6323325825925370178?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/6323325825925370178/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=6323325825925370178' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/6323325825925370178'/><link rel='self' type='application/atom+xml' href='http://www.blogger.com/feeds/4320259625062903049/posts/default/6323325825925370178'/><link rel='alternate' type='text/html' href='http://anuraaga.blogspot.com/2008/06/blog-post.html' title='ವಾಸ್ತವ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-9152128672114171840</id><published>2008-04-23T09:13:00.001-07:00</published><updated>2008-04-23T09:14:16.638-07:00</updated><title type='text'>ದ್ವಂದ್ವ</title><content type='html'>ನಿರೀಕ್ಷೆಗಳೇ…&lt;br /&gt;ನನ್ನ&lt;br /&gt;ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ?&lt;br /&gt;ಅತೃಪ್ತ ಜೀವನದಿ&lt;br /&gt;ತೃಪ್ತಿಯ ಕೃತಕ ನಗುವನು ಚೆಲ್ಲಿ&lt;br /&gt;ಮುಸುಕೆಳೆದು ಮಲಗಿದರೂ&lt;br /&gt;ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು?&lt;br /&gt;&lt;br /&gt;ಪ್ರತೀಕ್ಷೆಗಳೇ…..&lt;br /&gt;ಬರಡು ಜೀವನವೆಂದು ಬಿಕ್ಕಿ,&lt;br /&gt;ಕಣ್ಣ ಹನಿ ಉಕ್ಕಿದಾಗ&lt;br /&gt;ಭೂತಕಾಲದ ನಗುವ ಸೆಲೆಯನು&lt;br /&gt;ವರ್ತಮಾನದ ತೀರಗಳಿಗಪ್ಪಳಿಸಿ&lt;br /&gt;ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ?&lt;br /&gt;&lt;br /&gt;ಪರೀಕ್ಷೆಗಳೇ…&lt;br /&gt;ನಾಲ್ಕು ದಿನದ ಜೀವನವು&lt;br /&gt;ಬೇವು ಬೆಲ್ಲ, ಹಾವು ಹೂವಿನ ಹಾದರವು&lt;br /&gt;ಇದುವೆಂದು ಕಲಿಸುವ ಗುರುಗಳೇ..&lt;br /&gt;&lt;br /&gt;ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ&lt;br /&gt;ಗುರುತ ಮೂಡಿಸಿ&lt;br /&gt;ಮತ್ತೊಮ್ಮೆ ಛೇಡಿಸಿ,&lt;br /&gt;ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ&lt;br /&gt;ಹುಟ್ಟುಹಾಕುವಿರಿ ಅನುಭವದ ಒರತೆಯನು&lt;br /&gt;ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ&lt;br /&gt;ಜೀವನವ ತೇಯ್ದು ತೆವಳುವಾಗ…&lt;br /&gt;ಇದನೇನೆಂದು ಕೊಳ್ಳಲಿ ಶಿಕ್ಷೆಯೇ?&lt;br /&gt;ಅಥವಾ ಬದುಕಲಿರುವ ಅಪೇಕ್ಷೆಯೇ???&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-9152128672114171840?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/9152128672114171840/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=9152128672114171840' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/9152128672114171840'/><link rel='self' type='application/atom+xml' href='http://www.blogger.com/feeds/4320259625062903049/posts/default/9152128672114171840'/><link rel='alternate' type='text/html' href='http://anuraaga.blogspot.com/2008/04/blog-post_2622.html' title='ದ್ವಂದ್ವ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-7524706113648369317</id><published>2008-04-23T09:11:00.000-07:00</published><updated>2008-04-23T09:12:21.435-07:00</updated><title type='text'>ನಾನು- ನೀನು</title><content type='html'>ನಿನಗೆ,&lt;br /&gt;ನನ್ನೊಳಗಿನ ಪ್ರೀತಿ ಕಾಣುವುದಿಲ್ಲ&lt;br /&gt;ಭೂತ ಕನ್ನಡಿ ಹಿಡಿದು&lt;br /&gt;ಹುಡುಕಿದಾಗಲೂ&lt;br /&gt;&lt;br /&gt;ನನ್ನ ದನಿ ಕೇಳುವುದಿಲ್ಲ&lt;br /&gt;ಗಂಟಲು ಬಿರಿದು&lt;br /&gt;ನಾನೆಷ್ಟು ಕರೆದರೂ&lt;br /&gt;&lt;br /&gt;ಮೌನ ಆವರಿಸಿದೆ ಸುತ್ತ&lt;br /&gt;ಬರಡು ಜೀವನವೆಂಬ ವ್ಯಥೆಯಲಿ&lt;br /&gt;ಕ(ವಿ)ತೆಗಳಿಗೆ ಬರಗಾಲ&lt;br /&gt;ಬಂದಿದೆ, ಕೈ ಬಂಧಿ ತೊಡಿಸಿದಾಗ&lt;br /&gt;ಮನದಲ್ಲಿ ಬೆಂಕಿ ಉರಿದು&lt;br /&gt;ಉಕ್ಕುವವು ಕಣ್ಣ ಹನಿ&lt;br /&gt;ಕೊರಗಿ ಕರಗುವ ಚಿತ್ತದಲಿ&lt;br /&gt;ಜ್ವಾಲಾಮುಖಿಗಳಂತೆ!&lt;br /&gt;&lt;br /&gt;ಮತ್ತೊಮ್ಮೆ&lt;br /&gt;ಭರವಸೆಯ ಆಗಸದಿ&lt;br /&gt;ಭವಿಷ್ಯದ ಹೊಂಗನಸ ಬಿಳಿ ಮೇಘ&lt;br /&gt;ವರ್ಷಧಾರೆಯೆರೆದಾಗ&lt;br /&gt;ಕನಸ ದೋಣಿಯಲಿ ಸಾಗುವ &lt;br /&gt;ಈ ಬಾಳ ಪಯಣ&lt;br /&gt;&lt;br /&gt;ಪ್ರಕ್ಷುಬ್ದ ಬದುಕಿನಲಿ&lt;br /&gt;ನಿನ್ನ ನೆರಳಾಗಿ, ಇನಿಯಾ&lt;br /&gt;ಕನಸ ಮಗ್ಗುಲ ಸರಿಸಿ&lt;br /&gt;ಕವಲೊಡೆದ ಓಣಿಯಲಿ&lt;br /&gt;ಮೆಲ್ಲ ಹೆಜ್ಜೆಯನ್ನಿಡುವಾಗ...&lt;br /&gt;&lt;br /&gt;ಗಜ್ಜೆ ದನಿಗಳ ಕಂಪು&lt;br /&gt;ನಿನ್ನೊಡಲ ಸೇರಿ&lt;br /&gt;ದುಗುಡಗಳ ದನಿಯಾಗಿ&lt;br /&gt;ಮಾರ್ದನಿಸುವುದೇಕೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-7524706113648369317?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/7524706113648369317/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=7524706113648369317' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/7524706113648369317'/><link rel='self' type='application/atom+xml' href='http://www.blogger.com/feeds/4320259625062903049/posts/default/7524706113648369317'/><link rel='alternate' type='text/html' href='http://anuraaga.blogspot.com/2008/04/blog-post_23.html' title='ನಾನು- ನೀನು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-4530868243958031825</id><published>2008-04-23T09:10:00.000-07:00</published><updated>2008-04-23T09:11:08.961-07:00</updated><title type='text'>ಬದುಕು ಪಯಣ</title><content type='html'>ಮನೆ ಮುಂದಿನ ಹಾದಿ ಬದಿಯಲಿ&lt;br /&gt;ಕೇಕೆ ಹಾಕಿ, ಗೋಲಿಯಾಡುವಾಗ&lt;br /&gt;ಹಾಲಿರದ ಎದೆಗಂಟಿದ ಅಳುವ ಕಂದನ&lt;br /&gt;ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ&lt;br /&gt;&lt;br /&gt;ಕಪ್ಪು ಕನ್ನಡಕ ಧರಿಸಿ, ಮನದಲ್ಲಿ&lt;br /&gt;ಅಹಂಕಾರ ತುಂಬಿರಲು&lt;br /&gt;ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು&lt;br /&gt;ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ&lt;br /&gt;&lt;br /&gt;ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು,&lt;br /&gt;ಕಸದ ತೊಟ್ಟಿಯಿಂದ ಕೂಳು ಹೆಕ್ಕಲು&lt;br /&gt;ನಾಯಿ, ದನಗಳನ್ನೋಡಿಸುವ ಮನುಜನ ನೋಡಿ&lt;br /&gt;ಕೋಲಾ ಕುಡಿದು ತೇಗು ಬಿಟ್ಟಿದ್ದೆ!&lt;br /&gt;&lt;br /&gt;ಗತ್ತು ಹೊತ್ತಿನಲಿ ಪಯಣ ಬೆಳೆಸುವಾಗ&lt;br /&gt;ಕಳ್ಳ ನಿದ್ದೆಯಾವರಿಸಿ, &lt;br /&gt;ಸೀಟು ಕಸಿದಿದ್ದೆ, ನಡುಕದಿಂದ ತಾತ&lt;br /&gt;ನನ್ನ ಪಕ್ಕ ಸರಿದಾಗ, ಟೈ ಬಿಗಿದು&lt;br /&gt; ಕೈ ಕಟ್ಟಿ ಕುಳಿತು, ಹಾಡು ಕೇಳಿದ್ದೆ&lt;br /&gt;&lt;br /&gt;ಬಾಳ ಪಯಣದಲಿ ತಿಂದು ಬೀಗುತ&lt;br /&gt;ಬಣ್ಣ ಬಣ್ಣದ ಬದುಕಿನಲಿ ತೇಲಾಡಿ ಒದ್ದೆ, &lt;br /&gt;ಕೊನೆಗೆ ಆಯಾಸದಲಿ ಎಡವಿ ಬಿದ್ದೆ&lt;br /&gt;ತುಳಿದರನೆನು ಜನ, ಹಣೆಗೆ ಕೈಯನು ಜಜ್ಜಿ&lt;br /&gt;ತಲೆ ಕೂದಲು ಉದುರಿವೆ, ಎಲ್ಲವೂ ಹಣ್ಣು ಹಣ್ಣು&lt;br /&gt;&lt;br /&gt;ಕಣ್ಣು ಮಂಜಾಗಿವೆ, ಇಲ್ಲ ನಿದ್ದೆ, ನೀರಡಿಕೆ&lt;br /&gt;ಬದುಕ ಬಂಜರು ಬಯಲಲಿ ಒಂಟಿ ಕಲ್ಲು &lt;br /&gt;ಕೈ ನಡುಗುತಿವೆ, ದೇಹ ಕಂಪಿಸುತಿದೆ&lt;br /&gt;ಒಣ ಬೀಡಿಯ ಧೂಮದಲಿ ಉಸಿರುಗಟ್ಟುತಿರುವಾಗ&lt;br /&gt;ತಡಕಾಡಿದೆ ಅಂಗಿಯ ಮೂಲೆ ಮೂಲೆಗಳಲ್ಲಿ&lt;br /&gt;ಅದಾಗಲೇ ನಿಜವರಿತದ್ದು, &lt;br /&gt;ಆಸೆಗಳ ಓಟದಲಿ&lt;br /&gt;ನಾನು ಜೇಬು ಹೊಲಿಸಿರಲಿಲ್ಲವೆಂದು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-4530868243958031825?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/4530868243958031825/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=4530868243958031825' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/4530868243958031825'/><link rel='self' type='application/atom+xml' href='http://www.blogger.com/feeds/4320259625062903049/posts/default/4530868243958031825'/><link rel='alternate' type='text/html' href='http://anuraaga.blogspot.com/2008/04/blog-post.html' title='ಬದುಕು ಪಯಣ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-811872497677343219</id><published>2008-03-15T02:32:00.000-07:00</published><updated>2008-03-15T02:36:08.189-07:00</updated><title type='text'>ಅಲೆಮಾರಿ ಬದುಕು</title><content type='html'>ಕನಸುಗಳ ಮರಳದಂಡೆಯಲಿ&lt;br /&gt;ನೋವ ಹೊತ್ತು ನಡೆವೆವು&lt;br /&gt;ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು&lt;br /&gt;ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ&lt;br /&gt;ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು&lt;br /&gt;ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ&lt;br /&gt;&lt;br /&gt;ಅಲೆಮಾರಿಗಳು ನಾವು,&lt;br /&gt;ಬದುಕ ಅಲೆ ಸುಳಿಗೆ ಸಿಕ್ಕಿದರೂ&lt;br /&gt;ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ&lt;br /&gt;ಸಾಗುವೆವು ಇನ್ನೂ ಮುಂದೆ ಮುಂದೆ&lt;br /&gt;&lt;br /&gt;ಬರಿಗಾಲ ಪಾದ ಒಡೆದು ರಕ್ತ  ಚಿಮ್ಮುತಿರೆ&lt;br /&gt;ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು&lt;br /&gt;ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ&lt;br /&gt;ಎದೆಗೂಡಿನೊಳು ಚಿಗುರೊಡೆದ ನೆನಪುಗಳ&lt;br /&gt;ಒರೆಸಿಟ್ಟ ಮುಗ್ದ ಬೆರಳು&lt;br /&gt;ಬೆಳಕು ಸಾಯುವ ಮುನ್ನ ಬೀಡು ಸೇರುವ&lt;br /&gt;ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು&lt;br /&gt;&lt;br /&gt;ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು&lt;br /&gt;ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ&lt;br /&gt;ಉಸಿರ ಬಿಗಿ ಹಿಡಿದು ಬಿಕ್ಕಿ&lt;br /&gt;ಅತ್ತಾಗ, ಬಾಹು ಬಲವಿಲ್ಲದೆ&lt;br /&gt;ಬಾಹುಬಲಿಗಳಾದೆವು ಒಂದೆಡೆ&lt;br /&gt;ಇನ್ನೊಂದೆಡೆ ಭವಿಷ್ಯ ನುಡಿಯುವ&lt;br /&gt;ಮಂಡ ಕಪ್ಪೆಗಳಾಗಿ&lt;br /&gt;ಸುಖದ ರೂಪದ ಬಯಕೆ ದುಃಖದಲಿ&lt;br /&gt;ದಿನರಾತ್ರಿ ಹದವಾಗಿ ಹರಿಯುತಿರೆ&lt;br /&gt;ಗುರಿಯಿರದ ದಾರಿಯೊಳು ತೆವಳುವೆವು&lt;br /&gt;ನಿಡುಸುಯ್ವ ಕ್ಷಿತಿಜದಂಚಿಗೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-811872497677343219?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/811872497677343219/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=811872497677343219' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/811872497677343219'/><link rel='self' type='application/atom+xml' href='http://www.blogger.com/feeds/4320259625062903049/posts/default/811872497677343219'/><link rel='alternate' type='text/html' href='http://anuraaga.blogspot.com/2008/03/blog-post_15.html' title='ಅಲೆಮಾರಿ ಬದುಕು'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-9204764428025279909</id><published>2008-03-07T06:34:00.000-08:00</published><updated>2008-03-07T06:37:37.260-08:00</updated><category scheme='http://www.blogger.com/atom/ns#' term='ವೇಶ್ಯಾವಾಟಿಕೆ'/><category scheme='http://www.blogger.com/atom/ns#' term='ವೇಶ್ಯೆ'/><category scheme='http://www.blogger.com/atom/ns#' term='ಮಹಿಳೆ'/><category scheme='http://www.blogger.com/atom/ns#' term='ಶೋಷಣೆ'/><title type='text'>ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?</title><content type='html'>ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ  ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್ಯಾಚಾರಕ್ಕೊಳಗಾದ ಮಹಿಳೆಗೆ ಪರಿಹಾರ ಧನ ದೊರೆತರೆ ಹೋದ ಮಾನ ಹಿಂತಿರುಗಿ ಬರುವುದೇ? ಶೋಷಣೆಗೊಳಗಾದ ಮಹಿಳೆಯ ಮೇಲೆ ಅಯ್ಯೋ ! ಪಾಪ  ಎಂದು ಕನಿಕರ ತೋರಿಸುವ ಸಮಾಜವು, ಇದಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದೆಯೇ??&lt;br /&gt;&lt;br /&gt;ಒಂದೆಡೆ ದೇಶದಲ್ಲಿ ವೇಶ್ಯಾವಾಟಿಕೆ ದಿನೇ ದಿನೇ ಹೆಚ್ಚುತ್ತಾ ಬರುತ್ತಿರುವುದನ್ನು ನಾವು ಕಾಣಬಹುದು. ಇದಕ್ಕೆ ಪ್ರಧಾನ ಕಾರಣವೇನೆಂದು ನಾವು ಚಿಂತಿಸಿದ್ದೇವೆಯೇ ?ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮನೆಯ ಸಂಪಾದನೆ, ಮಕ್ಕಳ ಆರೈಕೆಗಾಗಿ ಮಾನ ಮಾರಬೇಕಾಗಿ ಬಂದ ಅದೆಷ್ಟೋ ಹೆಂಗಸರಿದ್ದಾರೆ. ಮನೆಯಲ್ಲಿನ ಕಷ್ಟಗಳನ್ನು ಪರಿಹರಿಸಲು ಮಗಳನ್ನು ಮಾರಿದ ಕಥೆಗಳನ್ನು ನಾವು ಕೇಳಿದ್ದೇವೆ, ಆಧುನಿಕತೆಯ ನಾಗಾಲೋಟದಲ್ಲಿ ಹಣ ಸಂಪಾದನೆಗಾಗಿ ಟಿವಿ, ಸಿನೆಮಾ, ಫ್ಯಾಷನ್ ಜಗತ್ತಿಗೆ ಕಾಲಿಡಲು ಬಯಸಿ ಮೋಸ ಹೋದ ಎಷ್ಟೋ ಹೆಣ್ಣು ಮಕ್ಕಳು ನಮ್ಮಡೆಯಲ್ಲಿಲ್ಲ?. ಪ್ರೇಮದ ನಾಟಕವಾಡಿ ಮೋಸದ ಬಲೆಗೆ ಬೀಳುವ ಅಬಲೆಯರು ಎಷ್ಟಿಲ್ಲ? ಕೆಲವೊಮ್ಮೆ ಸಂದೇಹಗಳ ಬಲೆಗೆ ಬಿದ್ದು ಸಾಮಾನ್ಯ ಹೆಂಗಸು ಕೂಡಾ ವೇಶ್ಯೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲ್ಪಡುತ್ತಾಳೆ.  ಹಣ ಸಂಪಾದನೆಗಾಗಿ ದುಡಿಯಲು ಹೋದರೆ ಶಾರೀರಕವಾಗಿ ಶೋಷಣೆಗೊಳಪಟ್ಟು ಆತ್ಮಹತ್ಯೆ ಮಾಡಿದ ಮಹಿಳೆಯರ ಬಗ್ಗೆ ನಮಗೆ ತಿಳಿದಿದೆ. ಅಂತೂ ಒಟ್ಟಿನಲ್ಲಿ ಶಾರೀರಿಕವಾಗಿ ಶೋಷಣೆಗೊಳಗಾದಂತಹ ಮಹಿಳೆಗೆ ಸಮಾಜದಲ್ಲಿರುವ ಸ್ಥಾನ ಮಾನವೇನೆಂಬುದು ಇಲ್ಲಿ ಮುಖ್ಯ.&lt;br /&gt;&lt;br /&gt;ಉದಾಹರಣೆಗೆ ಓರ್ವ ಹೆಣ್ಣು ಪ್ರೇಮದ ಬಲೆಯಲ್ಲಿ ಮೋಸ ಹೋದಳೆಂದೆನಿಸಿಕೊಳ್ಳಿ. ಇದರಲ್ಲಿ ಹೆಣ್ಣು ಮಾತ್ರ ತಪ್ಪುಗಾರಳೆಂದು ದೂಷಿಸಲಾಗುತ್ತದೆ. ಅಬಲೆಯಾದ ಹೆಣ್ಣು ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವಾಗ ಪುರುಷ ತಲೆಯೆತ್ತಿ ನಡೆಯುತ್ತಿರುತ್ತಾನೆ. ಕಾನೂನು ಮೆಟ್ಟಲು ಹತ್ತಿದರೆ ಮಾನ ಹರಾಜಾಗುತ್ತದೆ ಎಂದು ಹೇಳುವ ಕುಟುಂಬ ಒಂದೆಡೆಯಾದರೆ ಕಾನೂನು ಬಾಗಿಲು ತಟ್ಟಿಯೂ ಕೊನೆಗೆ ಪ್ರತಿಫಲ ಸಿಗುವುದಾದರೂ ಏನು? ಅತ್ಯಾಚಾರ ಮಾಡಿದವನೊಂದಿಗೆ ಜೀವನ ನಡೆಸುವುದು ಎಂದು ತೀರ್ಮಾನ ಜ್ಯಾರಿಯಾದರೆ ಇಲ್ಲಿ ಆರೋಪಿಯ ತಪ್ಪು ಮನ್ನಿಸಲ್ಪಡುತ್ತದೆ. ತದನಂತರ ಅವರ ದಾಂಪತ್ಯದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿಗೆ ಎಲ್ಲವೂ ಮುಗಿದಂತೆ! ಕೆಲವೊಮ್ಮೆ ಅಪರಾಧಿಯ ವಿರುದ್ದ ಕ್ರಮ ಕೈಗೊಂಡರೂ ಸಮಾಜವು ಅವಳನ್ನು ನಾಯಿ ಮಟ್ಟಿದ ಮಡಿಕೆಯಂತೆ ದೂರವಿರಿಸುವುದಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಶೋಷಣೆಯೊಂದಿಗೆ ಮಾನಸಿಕ ಶೋಷಣೆಯನ್ನು ಅನುಭವಿಸಬೇಕಾದ ಸ್ಥಿತಿ ಅವಳಿಗೆ ಬರುತ್ತದೆ. ಇಂತಹ ಸಂಕಟ ತಾಳಲಾರದೆ ಆತ್ಮಹತ್ಯೆಗೆ ಮೊರೆಹೋಗುವವರು ಅನೇಕ ಮಂದಿ ಇದ್ದಾರೆ. ಇಲ್ಲಿಗೆ ಕತೆ ಮುಗಿಯುವುದಿಲ್ಲ. ಆತ್ಮಹತ್ಯೆಯ ನಂತರವೂ ನಾನಾ ವಿಧದ ದೋಷಾರೋಪಗಳ ಪಟ್ಟಿಯೂ ಆಕೆಯನ್ನು ಅವಳ ಕುಟುಂಬವನ್ನೂ ಬೆನ್ನಟ್ಟುತ್ತದೆ. ಅಂತೂ ಶೋಷಣೆಯ ಕತೆ ಮೆಗಾ ಧಾರವಾಹಿಯಂತೆ ಮುಂದುವರಿಯುತ್ತದೆ.&lt;br /&gt;&lt;br /&gt;ಈ ಮೊದಲೇ ಉಲ್ಲೇಖಿಸಿದಂತೆ ಸಮಾಜದಲ್ಲಿ  ವೇಶ್ಯೆಯರ ಸಂಖ್ಯೆ ದಿನೇ ದಿನೇ ವರ್ಧಿಸುತ್ತಾ ಬರುತ್ತಿದ್ದು, ಇಂದು ದೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಹಿಳೆಯರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂಬ ಉದ್ದೇಶದಿಂದ ಕೆಲವರು ವೇಶ್ಯಾವಾಟಿಕೆ ದಂಧೆಗೆ ಇಳಿದರೆ, ಅಬಲೆಯಾದ ಸ್ತ್ರೀಯ ಮೇಲೆ ದೌರ್ಜನ್ಯವೆಸಗಿ, ತದನಂತರ ಸಮೂಹದಿಂದ ಅವಳನ್ನು ದೂರವಿಟ್ಟಾಗ ದಾರಿ ಕಾಣದೆ ಮೈ ಮಾರಬೇಕಾಗಿ ಬಂದ ಹೆಂಗಸರು, ತನ್ನ ಗಂಡನಿಂದಲೇ ಇತರರಿಗೆ ಹಾದರ ಹಂಚಲು ಪ್ರೇರಿತರಾದ ಮಹಿಳೆಯರು, ಬುದ್ದಿ ಬೆಳೆಯುವ ಮುನ್ನ ಗೋಮುಖ ವ್ಯಾಘ್ರನಂತಿರುವ ಗಂಡಸರ ಬಲೆಗೆ ಬಿದ್ದು ಮಾನ ಕಳೆದು ಕೊಂಡವರು  ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮಹಿಳೆ ಇಂತಹ ದಂಧೆಗೆ ಇಳಿಯಬೇಕಾಗಿ ಬರುತ್ತದೆ. ಇವುಗಳಿಗೆಲ್ಲಾ ಕಾರಣಕರ್ತರು ಯಾರು ? ವೇಶ್ಯೆಯಾಗಿ ಪರಿವರ್ತನೆಯಾಗಲು ಅವಳಿಗೆ ಕಾರಣವಾದವುಗಳಾವುವು ಎಂಬುದನ್ನು ನಾವು ಗಮನಿಸಿದ್ದೇವೆಯೇ ? ವೇಶ್ಯೆಯನ್ನು ಕಂಡು ಮೂಗು ಮುರಿಯುವ ಜನರೇ ಒಂದು ವೇಳೆ ಸಮೂಹದಲ್ಲಿ ವೇಶ್ಯೆಯರೇ ಇಲ್ಲ ಅಂದು ತಿಳಿದುಕೊಳ್ಳಿ. ಕಾಮತೃಷೆ ಮಿತಿ ಮೀರಿದ ಪುರುಷರು ಸಿಕ್ಕ ಸಿಕ್ಕ ಸ್ತ್ರೀಗಳ ಮೇಲೆ ಅತ್ಯಾಚಾರ ಮಾಡಲು ಮುಂದಾಗಲಿಕ್ಕಿಲ್ಲವೇ? ಆದುದರಿಂದ ಸಮಾಜದ ಸಮತೋಲನವನ್ನು ಕಾಪಾಡಲು ವೇಶ್ಯೆಯರು ಸಹಾಯವಾಗುವುದಿಲ್ಲವೇ?&lt;br /&gt;&lt;br /&gt;ಬಹಳ ಹಿಂದಿನ ಕಾಲದಿಂದಲೇ ವೇಶ್ಯೆಯರು ಕಂಡು ಬರುತ್ತಿದ್ದರು, ಆದರೆ ಇದೀಗ ಅವರ ಸಂಖ್ಯೆಯಲ್ಲಿ ವರ್ಧನೆ ಕಂಡು ಬಂದಿರುವುದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ನಾವು ಚಿಂತಿಸಲು ಮುಂದಾಗುತ್ತೇವೆಯೇ? ಬರೀ ವೇಶ್ಯೆಯರನ್ನು ಮಾತ್ರವಲ್ಲ ಅವರ ಮಕ್ಕಳನ್ನೂ ನಾವು ಕೆಟ್ಟ ದೃಷ್ಟಿಯಿಂದಲೇ ನೋಡುವುದಿಲ್ಲವೇ? ಸಂತ ಕವಿ ಕಬೀರ್ ದಾಸ್ ಮಾತಿನಂತೆ ಮದ್ಯ(ಶೇಂದಿ) ಮಾರುವ ಹೆಣ್ಣಿನ ಕೈಯಲ್ಲಿ ಹಾಲು ಕಂಡರೂ ಅದು ಶೇಂದಿಯೆಂದೇ ಎಂದೇ ಸಮಾಜವು ತಿಳಿದು ಕೊಳ್ಳುತ್ತದೆ. ಅಂತೆಯೇ ವೇಶ್ಯೆಯು ಮುಂದೆ ವೇಶ್ಯಾ ವೃತ್ತಿಗೆ ವಿದಾಯ ಹೇಳಲು ಬಯಸಿದರೂ ಸಮಾಜವು ಅವರ ಪೂರ್ವ ಜೀವನವನ್ನೇ ಬೊಟ್ಟು ಮಾಡಿ ತೋರಿಸುತ್ತದೆ. ಅವರನ್ನು ಅದೇ ದೃಷ್ಟಿಯಿಂದ ನೋಡಿಕೊಂಡು ಮೇಲೇಳದಂತೆ ಮಾಡುವ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕಾದರೆ ಅವರು ಪಡುವ ಪಾಡುಗಳು ಅಷ್ಟಿಷ್ಟಲ್ಲ. ವೇಶ್ಯೆ ಎಂದರೆ ಮೂಗು ತೂರಿಸಿಕೊಳ್ಳುವ  ಸಮಾಜದಲ್ಲಿ ಇವರಿಗೆ ಜೀವನ ನಡೆಸುವ ಹಕ್ಕಿಲ್ಲವೇ ? ಒಂದು ವೇಳೆ ಅವರ ಬದುಕಿನ ಬಂಡಿ ಸಾಗಿಸಿ ತಮ್ಮಷ್ಟಕ್ಕೆ ಜೀವನ ನಡೆಸುವ ವೇಶ್ಯೆಯರ ಮೇಲೆ ನಡೆಯುತ್ತಿರುವ ಶಾರೀರಿಕ, ಮಾನಸಿಕ ಪೀಡನೆಗಳಿಂದ ಮುಕ್ತಿ ನೀಡಲು ಸಮಾಜಕ್ಕೆ ಸಾಧ್ಯವೇ ????&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-9204764428025279909?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/9204764428025279909/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=9204764428025279909' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/9204764428025279909'/><link rel='self' type='application/atom+xml' href='http://www.blogger.com/feeds/4320259625062903049/posts/default/9204764428025279909'/><link rel='alternate' type='text/html' href='http://anuraaga.blogspot.com/2008/03/blog-post_07.html' title='ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-5663746132152098781</id><published>2008-03-07T06:26:00.000-08:00</published><updated>2008-03-07T06:34:15.935-08:00</updated><category scheme='http://www.blogger.com/atom/ns#' term='ಆರ್ಥಿಕ ಮತ್ತು ಲಿಂಗ ಸಮಾನತೆ'/><category scheme='http://www.blogger.com/atom/ns#' term='ಮಹಿಳಾ ದಿನಾಚರಣೆ'/><title type='text'>ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....</title><content type='html'>ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?&lt;br /&gt;&lt;br /&gt;&lt;br /&gt;ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.&lt;br /&gt;&lt;br /&gt;&lt;br /&gt;ಕಾರ್ಪೋರೇಟ್‌ಗಳ ಜೀವನ ಶೈಲಿಯಿಂದ ಒಂದು ಕ್ಷಣ ಹೊರಗೆ ಬಂದು ಮಧ್ಯಮ ವರ್ಗದ ಅಥವಾ ಗ್ರಾಮೀಣ ಜನರ ಬದುಕಿನ ಪುಟವನ್ನು ತಿರುವಿ ನೋಡಿದರೆ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿರುವ ಜನರೆಂದು ಬಣ್ಣಿಸಲ್ಪಡುವ ಗ್ರಾಮೀಣ ಜನರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರು ಹಗಲು ರಾತ್ರಿಗಳೆಂದು ದುಡಿಯುತ್ತಿರುತ್ತಾರೆ. ಆದರೆ ತಾವು ಮಾಡುವ ಕೆಲಸಕ್ಕೆ ದೊರೆಯುವ ವೇತನದಲ್ಲಿ ಸಮಾನತೆ ಇದೆಯೇ? ಉದಾಹರಣೆಗೆ ಗ್ರಾಮ ಪ್ರದೇಶದಲ್ಲಿ ತೋಟದ ಕೆಲಸ ಮಾಡುವ ಹೆಂಗಸರನ್ನು ಮತ್ತು ಗಂಡಸರ ವಿಷಯವನ್ನೇ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ಗಂಡಸರಿಗೆ ಅಧಿಕ ವೇತನ, ಹೆಣ್ಣು ಎಷ್ಟೇ ಕೆಲಸ ಮಾಡಿದರು ಹೆಣ್ಣೆಂಬ ನೆಪಕ್ಕೆ ಅವಳಿಗೆ ಕಡಿಮೆ ಸಂಬಳವೇಕೆ? ಹೆಣ್ಣು ಮತ್ತು ಗಂಡು ಇವರ ಕೆಲಸಗಳನ್ನು ಹೋಲಿಸಿದರೆ ಗಂಡು ಮಾಡುವಂತಹ ಕೆಲಸ ತುಸು ಕಠಿಣವಾಗಿದ್ದಿರಬಹುದು, ಹೆಣ್ಣಿಗೆ ಅಷ್ಟು ದೈಹಿಕ ಸಾಮರ್ಥ್ಯವಿಲ್ಲದೇ ಇರಬಹುದು ಆದರೆ ಗ್ರಾಮಗಳಲ್ಲಿ ಗಂಡು ಹೆಣ್ಣಿನ ವೇತನಗಳಿಗೇಕೆ ಸಮಾನತೆ ಕಂಡು ಬಂದಿಲ್ಲ?&lt;br /&gt;&lt;br /&gt;&lt;br /&gt;ನನಗೆ ತಿಳಿದಂತೆ ತೋಟದಲ್ಲಿ(ಗ್ರಾಮಗಳಲ್ಲಿ) ಕೆಲಸ ಮಾಡುವ ಪುರುಷರಿಗೆ ದಿನಕ್ಕೆ 120ರೂ. ಸಂಬಳ ನೀಡುತ್ತಿದ್ದರೆ, ಹೆಂಗಸರಿಗೆ 80 ರೂ. ನೀಡಲಾಗುತ್ತದೆ. ಇವರಿಬ್ಬರ ಕೆಲಸಗಳನ್ನು ತಾರತಮ್ಯ ಮಾಡಿದರೆ ಗಂಡಸರು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಹೆಂಗಸರು ಮಾಡುತ್ತಿದ್ದು, ಅದೂ ಮಾತ್ರವಲ್ಲ ಹೆಂಗೆಳೆಯರು ಮಾಡುವ ಕೆಲಸಗಳು ಹೆಚ್ಚು ನಿಖರ ಮತ್ತು ಅಚ್ಚುಕಟ್ಟಾಗಿರುತ್ತದೆ. ಎಷ್ಟೇ ಚುರುಕಿನಿಂದ ಕೆಲಸ ಮಾಡಿದರೂ ಮಹಿಳೆಗೆ ಸಿಗುವ ವೇತನ ಯಾವಾಗಲೂ ಕಡಿಮೆಯೇ. ಗಂಡಸರಿಗೆ ಕುಟಂಬದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ತನ್ನ ಮಡದಿ ಮಕ್ಕಳ ಜೀವನ ಸಾಗಿಸಲು ಅವರಿಗೆ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ ಎಂದು ವಾದಿಸಿದರೂ ಗಂಡನನ್ನು ಕಳೆದುಕೊಂಡು ಬೇರೆ ಯಾರನ್ನೂ ಅವಲಂಬಿಸದೆ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮವಾಗಿ ಜೀವನ ನಿರ್ವಹಿಸುವ ಒಂಟಿ ಮಹಿಳೆಯರು ನಮ್ಮಲ್ಲಿಲ್ಲವೇ ? ಕೃಷಿ ಕುಂಠಿತಗೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ವಿಧವೆಯರು ತನ್ನ ಗಂಡನ ಕಾಯಕವನ್ನೇ ಮುಂದುವರಿಸಿದರೂ ಪುರುಷ ಸಮಾನವಾದ ವೇತನವನ್ನು ನೀಡಲಾಗುತ್ತಿದೆಯೇ ? ಭಾರತದಲ್ಲಿ 30 ಮಿಲಿಯನ್ ವಿಧವೆಯರು ಗಂಡಿನ ಆಸರೆಯಿಲ್ಲದೆ ಬದುಕು ಸಾಗಿಸುತ್ತಿಲ್ಲವೇ ? ಕೃಷಿಕಾರ್ಯಗಳಲ್ಲಿ ಅತೀ ಹೆಚ್ಚು ತಾಳ್ಮೆಯನ್ನುಪಯೋಗಿಸಿ ಕೆಲಸ ಮಾಡುವವರು ಮಹಿಳೆಯರಲ್ಲವೇ ? ಕಳೆ ಕೀಳುವುದು, ಜೊಳ್ಳು ತೆಗೆಯುವುದು ಮೊದಲಾದ ಚಿಕ್ಕ ಕೆಲಸಗಳನ್ನು ಮಹಿಳೆಗೆ ವಹಿಸಿಕೊಡಲಾಗಿದ್ದರೂ ಅದನ್ನು ಅತೀ ತಾಳ್ಮೆಯಿಂದ ಚೊಕ್ಕಟವಾಗಿ ಕೆಲಸ ಮಾಡಲು ಸಾಧ್ಯವಿರುವುದು ಮಹಿಳೆಯರಿಗೆ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ.&lt;br /&gt;&lt;br /&gt;&lt;br /&gt;ಇನ್ನು ಕೈಗಾರಿಕಾ ಕ್ಷೇತ್ರದತ್ತ ಗಮನ ಹರಿಸಿದರೆ ಬಹುತೇಕ ಮಂದೆ ಕೈಗಾರಿಕಾ ಉದ್ಯಮಿಗಳು ಮಹಿಳೆಯರೇ ಆಗಿರುವುದನ್ನು ಕಾಣಬಹುದು. ಅದು ಗುಡಿ ಕೈಗಾರಿಕೆ ಇರಲಿ, ಕಾರ್ಖಾನೆಯಾಗಿರಲಿ ಅಲ್ಲಿ ಮಹಿಳೆಯರದ್ದೇ ಹೆಚ್ಚು ಪಾಲು. ನೇಯ್ಗೆಯಾಗಲಿ, ಕಸೂತಿ ಕೆಲಸವಿರಲಿ ಅಥವಾ ಮನೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆಯೇ ಆಗಿರಲಿ, ಅತೀ ತಾಳ್ಮೆಯಿಂದ ಮಾಡಬೇಕಾದಂತಹ ಏನೇ ಕೆಲಸವಿರಲಿ ಮಹಿಳೆಯರೇ ಅಂತಹ ಕಾರ್ಯಗಳಿಗೆ ನಿಯೋಜಿಸಲ್ಪಡುತ್ತಾರೆ. ಅವರು ಮಾಡುವ ಕಾರ್ಯದಲ್ಲಿ ಅಷ್ಟೇ ಪ್ರಾಮಾಣಿಕತೆ, ವಸ್ತು ನಿಷ್ಠೆಗಳು ಮೈಗೂಡಿಸಿಕೊಂಡಿರುವುದರಿಂದಲೇ ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೂ ವೇತನದಲ್ಲಿ ಸಮಾನತೆ ಎಂಬುದು ಇಂದಿಗೂ ಬಗೆಹರಿಯಲಾರದ ಪ್ರಶ್ನೆಯಾಗಿದೆ.&lt;br /&gt;&lt;br /&gt;ಗ್ರಾಮಗಳಿಂದ ನಗರಗಳತ್ತ ಮುಖ ಮಾಡಿದರೆ ಐಟಿ ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಂತೂ ಗಣನೀಯ ವರ್ಧನೆ ಕಂಡು ಬರುತ್ತಿರುವುದು ಕಾಣಬಹುದು. ರಾತ್ರಿ ಹಗಲು ದುಡಿಯುವುದರಲ್ಲೂ ಮಹಿಳೆ ಸೈ ಎಂದೆನಿಸಿಕೊಂಡಿದ್ದಾಳೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಕಾಲ್ ಸೆಂಟರ್‌ಗಳಲ್ಲಿ ಅತೀ ತಾಳ್ಮೆಯಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಕಂಪೆನಿಗಳಲ್ಲಿ ಹೆಚ್ ಆರ್( ಮಾನವ ಸಂಪನ್ಮೂಲ ಕಾರ್ಯನಿರ್ವಾಹಣಾಧಿಕಾರಿ) ಈ ಎಲ್ಲಾ ಹುದ್ದೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮಹಿಳೆಯರು ತಮ್ಮ ಜಾಣತನವನ್ನು ಮೆರೆದಿದ್ದಾರೆ. ಯಾವುದೇ ನೌಕರಿ ಆಗಿದ್ದರೂ ತಮಗೆ ದೊರೆಯುವ ಕನಿಷ್ಠ ಸಂಬಳದಿಂದ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿಯೂ ಮಹಿಳೆ ಪುರುಷ ವರ್ಗಕ್ಕಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎಂದು ಹೇಳಬಹುದು.&lt;br /&gt;&lt;br /&gt;&lt;br /&gt;ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತಿಸಿದರೆ ಜಗತ್ತಿನ ಆಹಾರೋತ್ಪಾದನೆಯಲ್ಲಿ ಬಹುಪಾಲು ಮಹಿಳೆಯೆರೇ ಶ್ರಮ ವಹಿಸುತ್ತಾರೆ. ಆಫ್ರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳಲ್ಲಿ 80% ಆಹಾರೋತ್ಪಾದನೆಯಲ್ಲಿ ಮಹಿಳೆಯರು ದುಡಿದರೆ, ಏಷ್ಯಾದಲ್ಲಿ 50% ಮಹಿಳೆಯರು ದುಡಿಯುತ್ತಾರೆ. ಲ್ಯಾಟಿನ್ ಅಮೆರಿಕದಲ್ಲಿ ಬಹುತೇಕ ಮಹಿಳೆಯರು ಕೃಷಿ, ಜೇನುಸಾಕಣೆ, ಪಶು ಪಾಲನೆ ಮೊದಲಾದ ಕಾರ್ಯಗಳಲ್ಲಿ ದುಡಿದು ದೇಶದ ಅಭಿವೃದ್ದಿಗೆ ಬೆನ್ನೆಲುಬಾಗಿದ್ದಾರೆ. ಯುನಿಸೆಫ್ ಸಂಘಟನೆಯು 2007ರಲ್ಲಿ ಪ್ರಕಟಿಸಿದ ವರದಿಯಲ್ಲಿ ವಿಶ್ವದ ಮಕ್ಕಳ ಸ್ಥಿತಿಗತಿಯು ಮಹಿಳೆಯರ ಸ್ಥಿತಿಗತಿಗಳಿಗೆ ಅನುರೂಪವಾಗಿದ್ದು, ಮಹಿಳೆಯ ಆರ್ಥಿಕ ಸ್ವಾವಲಂಬನೆಯು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ.&lt;br /&gt;&lt;br /&gt;&lt;br /&gt;ಯುನಿಸೆಫ್ ಸಂಘಟನೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆಂಬುದನ್ನು ಉಲ್ಲೇಖಿಸಿದ್ದು ಪ್ರಸ್ತುತ ಕೆಳಗೆ ನೀಡಿದಂತಹ ಅಂಕಿ ಅಂಶವು ಇದಕ್ಕೆ ಪೂರಕವಾಗಿದೆ.&lt;br /&gt;&lt;br /&gt;&lt;br /&gt;ರಾಷ್ಟ್ರಗಳು ಮತ್ತು ಅಲ್ಲಿನ ಸ್ತ್ರೀ- ಪುರುಷ ವಾರ್ಷಿಕ ವೇತನದ ಅಂಕಿ ಅಂಶ(ಅಮೆರಿಕನ್ ಡಾಲರ್‌ಗಳಲ್ಲಿ)&lt;br /&gt;&lt;br /&gt;&lt;br /&gt;ಕೈಗಾರಿಕಾ ಪ್ರಾಧಾನ್ಯವಿರುವ ರಾಷ್ಟ್ರಗಳು - ಸ್ತ್ರೀ - 21%, ಪುರುಷ - 37%&lt;br /&gt;&lt;br /&gt;ಲ್ಯಾಟಿನ್ ಅಮೆರಿಕ ಮತ್ತು ಕರೇಬಿಯನ್ - ಸ್ತ್ರೀ - 4.6%, ಪುರುಷ - 8%&lt;br /&gt;&lt;br /&gt;ಐರೋಪ್ಯ ಮತ್ತು ಕಾಮನ್‌ವೆಲ್ತ್ ಸ್ವತಂತ್ರ ರಾಷ್ಟ್ರಗಳು - ಸ್ತ್ರೀ - 4%, ಪುರುಷ - 10%&lt;br /&gt;&lt;br /&gt;ಪೂರ್ವ ಏಷ್ಯಾ ಮತ್ತು ಪೆಸಿಫಿಕ್ - ಸ್ತ್ರೀ - 4%, ಪುರುಷ - 6.5%&lt;br /&gt;&lt;br /&gt;ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ - ಸ್ತ್ರೀ - 2%, ಪುರುಷ - 7%&lt;br /&gt;&lt;br /&gt;ದಕ್ಷಿಣ ಏಷ್ಯಾ - ಸ್ತ್ರೀ - 1%, ಪುರುಷ - 2.5&lt;br /&gt;&lt;br /&gt;ಆಫ್ರಿಕಾ - ಸ್ತ್ರೀ - 1%, ಪುರುಷ - 2%&lt;br /&gt;&lt;br /&gt;&lt;br /&gt;ಇದು ಮಾತ್ರವಲ್ಲದೆ ಇತ್ತೀಚೆಗೆ ವೇತನ ಸಮಾನತೆಯ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಒಕ್ಕೂಟಗಳು ಪ್ರಕಟಿಸಿದ ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಉದ್ಯೋಗಿಗಳು ಪುರುಷ ಉದ್ಯೋಗಿಗಳಿಗಿಂತ 16 ಪ್ರತಿಶತ ಕಡಿಮೆ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿದಿದೆ. ಪ್ರಸ್ತುತ ವರದಿಯಲ್ಲಿ ಜಗತ್ತಿನ 63 ದೇಶಗಳಲ್ಲಿನ ವೇತನದ ಅಂತರವನ್ನು ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಸ್ತ್ರೀಯರ ವೇತನ ಮತ್ತು ಪುರುಷರ ವೇತನದಲ್ಲಿ 15.6 ಪ್ರತಿಶತ ಅಂತರ ಕಂಡು ಬಂದಿದೆ. ಯುರೋಪ್ ,ಒಸೇನಿಯಾ, ಲ್ಯಾಟಿನ್ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಅತ್ಯಧಿಕ ವೇತನಗಳಲ್ಲಿ ಅತ್ಯಧಿಕ ಅಂತರವಿರುವುದು ಕಂಡು ಬಂದಿದೆ. ಆದರೆ ಬಹರೈನ್‌ನ ಮಧ್ಯ ಪೂರ್ವ ದೇಶಗಳಲ್ಲಿ ಮಾತ್ರ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಮಹಿಳೆಯರ ಸಂಖ್ಯೆ ಅತೀ ಕಡಿಮೆಯಾಗಿದ್ದು, ಆದುದರಿಂದಲೇ ಮಹಿಳೆಯರ ವೇತನವು ಪುರುಷರ ವೇತನಕ್ಕಿಂತ 40 ಪ್ರತಿಶತ ಅಧಿಕವಾಗಿದೆ. ಪ್ರಸ್ತುತ ವರದಿಯಲ್ಲಿ ಇಂತಹ ಅಂತರಗಳು ಹೆಚ್ಚಾಗಿ ಸ್ತ್ರೀ ಪ್ರಾಬಲ್ಯವಿರುವ ಕ್ಷೇತ್ರಗಳಾದ ವಿದ್ಯಾಭ್ಯಾಸ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ ಎಂದು ಉಲ್ಲೇಖಿಸಿದ್ದು , ಸಾರ್ವಜನಿಕ ಕಾರ್ಯನಿರ್ವಹಣೆ, ಸಾಮಾಜಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಹೆಚ್ಚಿನ ಅಂತರಗಳು ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ. ಜಗತ್ತಿನ ಎಲ್ಲೆಡೆಗಳಲ್ಲೂ ಮಹಿಳೆಯರ ವೇತನದ ಸರಿ ಸಮಾನತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆದು ಬರುತ್ತಿದ್ದರೂ ಇಂದಿನ ವರೆಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಮುಂದೆ ಬರಬೇಕಾಗಿದೆ. ಪುರುಷ ಸ್ತ್ರೀ ವೇತನದ ನಡುವೆ ಇರುವ ಈ ಅಂತರಕ್ಕೆ ಪ್ರಧಾನ ಕಾರಣ ಏನೆಂಬುದರ ಬಗ್ಗೆ ಫ್ರೊಫೆಸರ್ ಲಿಂಡಾ ಸಿ.ಬಾಬ್‌ಕೋಕ್ ಅವರು ತಮ್ಮ ಪುಸ್ತಕವಾದ "ವುಮನ್ ಡೋಂಟ್ ಆಸ್ಕ್:ನೆಗೋಶಿಯೇಷನ್ ಏಂಡ್ ದ ಜೆಂಡರ್ ಡಿವೈಡ್ "ನಲ್ಲಿ "ಮಹಿಳೆಯರು ಹೆಚ್ಚಾಗಿ ತಮಗೆ ದೊರೆತ ಉದ್ಯೋಗದಲ್ಲಿ ತೃಪ್ತಿಕಾಣುವವರು ಅದರಂತೆಯೇ ಅವರು ತಮ್ಮ ವೇತನದ ಬಗ್ಗೆ ಸಂಧಾನ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ.ಇದರಿಂದಾಗಿಯೇ ಸಂಸ್ಥೆಗಳು ನೀಡಿದ ವೇತನದಲ್ಲಿಯೇ ತೃಪ್ತಿಕಂಡುಕೊಳ್ಳುತ್ತಾರೆ "ಎಂದು ಬರೆದಿದ್ದಾರೆ. ಇಲ್ಲಿ ಉಲ್ಲೇಖಿಸಿದಂತಹ ಲಿಂಡಾ ಅವರ ಮಾತು ಅಕ್ಷರಶ ಸತ್ಯ! ಅದಕ್ಕಾಗಿ ಮಹಿಳೆಯರು ತಮ್ಮ ಸಮಾನತೆಗೆ ಹೋರಾಟ ನಡೆಸುವಾಗ ಆರ್ಥಿಕ ಸಮಾನತೆಯ ಬಗ್ಗೆಯೂ ಮಾತೆತ್ತಬೇಕು. ಆಗ ಮಾತ್ರ ಸುದೃಢವಾದ ಆರ್ಥಿಕ ತಳಹದಿಯಲ್ಲಿ ಮಹಿಳೆಯು ಎದ್ದು ನಿಲ್ಲಲು ಸಾಧ್ಯ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5663746132152098781?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5663746132152098781/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5663746132152098781' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5663746132152098781'/><link rel='self' type='application/atom+xml' href='http://www.blogger.com/feeds/4320259625062903049/posts/default/5663746132152098781'/><link rel='alternate' type='text/html' href='http://anuraaga.blogspot.com/2008/03/blog-post.html' title='ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-146336740951194706</id><published>2008-02-12T20:01:00.000-08:00</published><updated>2008-02-12T20:04:08.838-08:00</updated><category scheme='http://www.blogger.com/atom/ns#' term='love'/><title type='text'>ಒಲವಿನ ಉಡುಗೊರೆ ಕೊಡಲೇನು..</title><content type='html'>ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ನಕ್ಕು ಅಪ್ಪಿಕೊಳ್ಳುತ್ತಿದ್ದ ತಲೆದಿಂಬು, ಒಂದು ಗಳಿಗೆ ಅವನಿಂದ ದೂರವಿರಲಾರದೆ ಚಡಪಡಿಸುವಾಗ ಕಣ್ಣೀರು ಸುರಿದು ಮುಸು ಮುಸು ಅತ್ತು ಮುಖ ಮರೆಸಿಕೊಂಡ ಆ ದಿಂಬು..ಅಬ್ಬಾ ಮನಸ್ಸಿನ ಎಷ್ಟು ಭಾವನೆಗಳನ್ನು ನಾವು ಆ ದಿಂಬಿನೊಂದಿಗೆ ಹಂಚಿಕೊಳ್ಳುವುದಿಲ್ಲ!!!.&lt;br /&gt;&lt;br /&gt;ಗಿಫ್ಟ್ ..ಗಿಫ್ಟ್ ಅದು ಮಾತ್ರವೇ ಇದೀಗ ಅವಳ ಕನಸು ಮನಸ್ಸಿನಲ್ಲಿತ್ತು. ಯಾವ ತರದ ಉಡುಗೊರೆ ನೀಡಿ ತನ್ನ ಪ್ರೀತಿಯನ್ನು ಪ್ರಕಟಿಸಲಿ? ಸಾಗರದಷ್ಟು ಆಳವೂ ಆಗಸದಂತೆ ವಿಶಾಲವಾಗಿರುವ ನನ್ನ ಪ್ರೀತಿಯನ್ನಳೆಯಲು ಈ ಒಂದು ಉಡುಗೊರೆಗೆ ಸಾಧ್ಯವೇ? ಪ್ರೇಮ ಲೋಕದಲ್ಲಿ ಹಲವು ಕಾಲ ವಿಹರಿಸಿದವರಿಗೆ ಕಳೆದ ವ್ಯಾಲೆಂಟೇನ್ಸ್ ಗಿಫ್ಟ್ ಗಿಂತ ಮಿಗಿಲಾದದ್ದು ಈ ಬಾರಿ ನೀಡ ಬೇಕೆನಿಸಿದರೆ, ಮೊದ ಮೊದಲು ಹೊಸ ಚಿಗುರ ಪ್ರೇಮಕ್ಕೆ ಯಾವ ಉಡುಗೊರೆ ಆರಿಸ ಬೇಕೆಂಬ ಗೊಂದಲ. ಇನ್ನು ಕೆಲವರಿಗೆ ಗಿಫ್ಟ್ ಆರಿಸಿ ಆಯ್ತು ಅದನ್ನು ಕೊಡುವುದೇಗೆ? ಪಡೆಯುವುದು ಹೇಗೆ? ಒಂದು ವೇಳೆ ಗಿಫ್ಟ್ ಸಿಕ್ಕಿದರೆ ಅದನ್ನು ಮನೆಯವರ ಮುಂದೆ ಹೇಗೆ ಬಚ್ಚಿಡ ಬೇಕೆಂಬ ಸಮಸ್ಯೆ. ಅದನ್ನು ಚಿರಕಾಲ ಕಾಪಾಡಿ ಕೊಂಡು ಬಂದು "ಯಹ್ ಪ್ಯಾರ್ ಕಿ ನಿಶಾನಿ ಹೆ" ಎಂದು ಕಾಲಗಳ ನಂತರ ಕುರುಹಾಗಿ ತೋರಿಸುವ ಹಂಬಲ. ಅಂತೂ ಒಟ್ಟಿನಲ್ಲಿ ಪ್ರೇಮದ ಲೋಕದಲಿ ಉಡುಗೊರೆಗೊಂದು ವಿಶಿಷ್ಟ ಸ್ಥಾನವಿದೆಯಲ್ಲಾ?&lt;br /&gt;&lt;br /&gt;ಇತ್ತ ಹುಡುಗನೂ ಅದೇ ರೀತಿ ಚಡ ಪಡಿಸುತ್ತಾನೆ, ತನ್ನ ಪ್ರಿಯತಮೆಯ ಪ್ರೀತಿ ನಗೆಯನ್ನು ಕಾಣಲು ಯಾವ ತರದ ಉಡುಗೊರೆ ಕೊಡಬೇಕೆಂದು ಯೋಚಿಸುತ್ತಾನೆ. ಅಂತೂ ಗಿಫ್ಟ್ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವವರೂ ಹೆಣ್ಣು ಮಕ್ಕಳೇ !&lt;br /&gt;&lt;br /&gt;ಸಂಪಾದನೆಗೆ ಕಾಲಿಡದವರು ಇಲ್ಲ ಸಲ್ಲದ ನೆಪ ಹೇಳಿ ಅಥವಾ ಕಂಜೂಸ್ ಬುದ್ದಿ ತೋರಿಸಿಯಾದರೂ ಹಣ ಕೂಡಿಸುತ್ತಾರೆ. ಆ ಹಣದಿಂದ ತಮ್ಮ ಪ್ರಿಯತಮನಿಗೆ ಉಡುಗೊರೆ ನೀಡುವುದರಲ್ಲಿಯೇ ಖುಷಿಯನ್ನು ಅನುಭವಿಸುತ್ತಾರೆ. ಆದರೆ ಬಹುತೇಕ ಹುಡುಗರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಕೈಲಾಗುವ ಉಡುಗೊರೆಯನ್ನು ಮಾತ್ರ ನೀಡುತ್ತಾರೆ, ಇಲ್ಲದಿದ್ದರೆ ಒಂದು ಚೆಂಗುಲಾಬಿಯನ್ನು ತಮ್ಮ ಪ್ರಿಯತಮೆಗಿತ್ತು " ಐ ಲವ್ ಯೂ" ಎಂದು ಹೇಳಿದರೆ ಹುಡುಗಿ ನಾಚಿ ನೀರಾಗಿ ಮೌನ ಸಮ್ಮತವೆಂಬಂತೆ ಸಂಭ್ರಮಿಸುತ್ತಾಳೆ. ಕೆಲವೊಮ್ಮೆ "ಐ ಲವ್ ಯು ಟೂ" ಎಂದು ದನಿಗೂಡಿಸ ಬಹುದು.&lt;br /&gt;&lt;br /&gt;ಅಂತೂ ಕೆಂಪು ಗುಲಾಬಿಯೇ ಎಲ್ಲ ಉಡುಗೊರೆಗಿಂತಲೂ ಮಿಗಿಲು. ಪ್ರೀತಿಯ ದ್ಯೋತಕವಾದ ಚೆಂಗುಲಾಬಿಗೆ ಮನ ಸೋಲದವರು ಯಾರಿದ್ದಾರೆ? ಟೆಡ್ಡಿ ಬೇರ್, ವಜ್ರದ ಉಂಗುರ, ಲವ್ ಯೂ ಎಂದು ಬರೆದ ಪಫೀ ರೆಡ್ ಹಾರ್ಟ್ ಇದ್ಯಾವುದೇ ಇರಲಿ ಎಲ್ಲದಕ್ಕಿಂತಲೂ ಚೆಂಗುಲಾಬಿಗೆ ಅಗ್ರ ಸ್ಥಾನ ಇಂತಿರುವಾಗ ಗುಲಾಬಿಯನ್ನು ಪ್ರೀತಿಯ ಕಾಣಿಕೆಯಾಗಿ ನೀಡುವುದಲ್ಲವೇ ಒಳ್ಳೆಯದು?&lt;br /&gt;&lt;br /&gt;ಇದೀಗ ವ್ಯಾಲೆಂಟೆನ್ಸ್ ಡೇ ಬಂದೇ ಬಿಟ್ಟಿದೆ. ಹೊಸ ಉಡುಗೊರೆ ನೀಡಲು ಮತ್ತು ಪಡೆಯಲು ಮನಸ್ಸು ಸಜ್ಜಾಗಿದೆ. ಕಳೆದ ವ್ಯಾಲೆಂಟೇನ್ಸ್ ಡೇಗೆ ಪ್ರೀತಿಯ ಕಾಣಿಕೆಯಾಗಿ ಪಡೆದುಕೊಂಡ ಆ "ಕೆಂಪು ಗುಲಾಬಿ" ದಪ್ಪ ಪುಸ್ತಕದ ಒಳಗಡೆ ಬೆಚ್ಚನೆ ಮಲಗಿದೆ. ಪುಸ್ತಕದ ಪುಟ ತಿರುವಿದಾಗ, ಪುಟದ ಇಕ್ಕೆಲಗಳಲ್ಲೂ ಹೂವಿನ ಕೆಂಪಾದ ಅಚ್ಚು ಮೂಡಿ ಬಂದಿತ್ತು. ಅದನ್ನು ನೋಡುತ್ತಾ ಹಳೆಯ ನೆನಪುಗಳು ಮನಸ್ಸಿನ ಪುಟದ ಪ್ರಣಯ ವೇದಿಕೆಯ ಮೇಲೆ ನಲಿದಾಡ ತೊಡಗಿದಾಗ ಹೊಸ ನಿರೀಕ್ಷೆಗಳಿಗೆ ಚಪ್ಪಾಳೆ ತಟ್ಟುವಂತೆ ಹೃದಯ ಮಿಡಿಯುತಿತ್ತು. ಈ ಪ್ರೀತಿಗೂ ಗುಲಾಬಿಗೂ ಇರುವ ನಂಟು ಇದೇನಾ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-146336740951194706?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/146336740951194706/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=146336740951194706' title='0 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/146336740951194706'/><link rel='self' type='application/atom+xml' href='http://www.blogger.com/feeds/4320259625062903049/posts/default/146336740951194706'/><link rel='alternate' type='text/html' href='http://anuraaga.blogspot.com/2008/02/blog-post.html' title='ಒಲವಿನ ಉಡುಗೊರೆ ಕೊಡಲೇನು..'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-4320259625062903049.post-7762448417958613161</id><published>2008-01-29T22:06:00.000-08:00</published><updated>2008-01-29T22:07:17.535-08:00</updated><category scheme='http://www.blogger.com/atom/ns#' term='ಹನಿಗವನ'/><category scheme='http://www.blogger.com/atom/ns#' term='poem'/><title type='text'>ಸಲ್ಲಾಪ</title><content type='html'>ಮುನಿದಾಗ ಸತಿ&lt;br /&gt;&lt;br /&gt;ಕೇಳಿದ ಪತಿ&lt;br /&gt;&lt;br /&gt;ನಿನಗಾಗಿ ತರಲಾ&lt;br /&gt;&lt;br /&gt;ಗಗನದಾ ತಾರೆ&lt;br /&gt;&lt;br /&gt;ಕಣ್ಣು ಕೆಂಪಾಗಿಸಿ&lt;br /&gt;&lt;br /&gt;ಎಂದಳಾಕೆ&lt;br /&gt;&lt;br /&gt;ತರಲಾರದವನು ಸೀರೆ&lt;br /&gt;&lt;br /&gt;ಕೊಂಡು ಬರುವನೇ ತಾರೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-7762448417958613161?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/7762448417958613161/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=7762448417958613161' title='8 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/7762448417958613161'/><link rel='self' type='application/atom+xml' href='http://www.blogger.com/feeds/4320259625062903049/posts/default/7762448417958613161'/><link rel='alternate' type='text/html' href='http://anuraaga.blogspot.com/2008/01/blog-post_3105.html' title='ಸಲ್ಲಾಪ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-4320259625062903049.post-3298574584526604014</id><published>2008-01-29T22:03:00.000-08:00</published><updated>2008-01-29T22:05:22.734-08:00</updated><category scheme='http://www.blogger.com/atom/ns#' term='ಹನಿಗವನ'/><category scheme='http://www.blogger.com/atom/ns#' term='poem'/><title type='text'>ವ್ಯಥೆ</title><content type='html'>ನನ್ನ ಪ್ರೇಯಸಿಗಾಗಿ&lt;br /&gt;&lt;br /&gt;ತೆರೆದಿಟ್ಟ&lt;br /&gt;&lt;br /&gt;ಹೃದಯದ ಬಾಗಿಲು&lt;br /&gt;&lt;br /&gt;ಚಿಲಕ ಹಾಕಿ&lt;br /&gt;&lt;br /&gt;ಬೀಗ ಜಡಿದಳು&lt;br /&gt;&lt;br /&gt;ನನ್ನ ಮಾವನ ಮಗಳು!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-3298574584526604014?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/3298574584526604014/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=3298574584526604014' title='4 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/3298574584526604014'/><link rel='self' type='application/atom+xml' href='http://www.blogger.com/feeds/4320259625062903049/posts/default/3298574584526604014'/><link rel='alternate' type='text/html' href='http://anuraaga.blogspot.com/2008/01/blog-post_29.html' title='ವ್ಯಥೆ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4320259625062903049.post-2532263358826233653</id><published>2008-01-28T19:04:00.000-08:00</published><updated>2008-01-28T19:05:18.371-08:00</updated><category scheme='http://www.blogger.com/atom/ns#' term='poem'/><title type='text'>ಕಿಂಡಿಗಳು ಮುಚ್ಚಿವೆ !</title><content type='html'>ನಾವು, &lt;br /&gt;&lt;br /&gt;ಬಳಲಿ ಬೆಂಡಾದವರು ಬೆವರು ನೀರ&lt;br /&gt;&lt;br /&gt;ಸುರಿಸಿ ಎದೆಗೂಡನುಬ್ಬಿಸಿ&lt;br /&gt;&lt;br /&gt;ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ&lt;br /&gt;&lt;br /&gt;ನಾವು ಕೂಲಿಯವರು || 1 ||&lt;br /&gt;&lt;br /&gt;&lt;br /&gt;ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ&lt;br /&gt;&lt;br /&gt;ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು&lt;br /&gt;&lt;br /&gt;ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ &lt;br /&gt;&lt;br /&gt;ನಾವು ಕೂಲಿಯವರು || 2 ||&lt;br /&gt;&lt;br /&gt;&lt;br /&gt;ಬದುಕು-ಬವಣೆಯ ನಡುವೆ &lt;br /&gt;&lt;br /&gt;ಹರಿದ-ಕರಿದ ಬೆಂದ ರೊಟ್ಟಿ&lt;br /&gt;&lt;br /&gt;ಗಳ ಒಳಗೆ ರಕ್ತ ಮಡುಗಟ್ಟಿ&lt;br /&gt;&lt;br /&gt;ಎದೆಗುಂದದೆ ಈಸಿ ಜೈಸುವ&lt;br /&gt;&lt;br /&gt;ನಾವು ಕೂಲಿಯವರು || 3 ||&lt;br /&gt;&lt;br /&gt;&lt;br /&gt;ಬಂದು, ಕೊಂದು, ತಿಂದ ಜನರೆಡೆಯಲಿ&lt;br /&gt;&lt;br /&gt;ರಕ್ತದೋಕುಳಿಯ ಮಾಸದಾ ಹೆಜ್ಜೆಯದು&lt;br /&gt;&lt;br /&gt;ನಾತ ಬೀರುವ ಕೊಳೆತ ಅಸ್ಥಿಮಜ್ಜೆ&lt;br /&gt;&lt;br /&gt;ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ&lt;br /&gt;&lt;br /&gt;ನಾವು ಕೂಲಿಯವರು || 4 ||&lt;br /&gt;&lt;br /&gt;&lt;br /&gt;ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ&lt;br /&gt;&lt;br /&gt;ಮುರುಕಲು ಗುಡಿಸಲ ಹಳೆ ಮಂಚದಲಿ&lt;br /&gt;&lt;br /&gt;ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ&lt;br /&gt;&lt;br /&gt;ಆದರೂ ಗಟ್ಟಿಯಿದೆ ನಮ್ಮ ರಟ್ಟೆ&lt;br /&gt;&lt;br /&gt;ನಾವು ಕೂಲಿಯವರು || 5 ||&lt;br /&gt;&lt;br /&gt;&lt;br /&gt;ಕನಸುಗಳ ಹೆಣೆಯುವೆವು ಆ&lt;br /&gt;&lt;br /&gt;ಒಣದೇಹದ ಬತ್ತಿದಾ ಹೃದಯದಲಿ&lt;br /&gt;&lt;br /&gt;ನಭವ ಚುಂಬಿಸಿ, ತಾರೆಗೀಳಲು ಸದಾ&lt;br /&gt;&lt;br /&gt;ಬಯಸುವೆವು ಮೇಲೆ ಬರಲೆಂದೂ&lt;br /&gt;&lt;br /&gt;ನಾವು ಕೂಲಿಯವರು || 6||&lt;br /&gt;&lt;br /&gt;&lt;br /&gt;ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ&lt;br /&gt;&lt;br /&gt;ಗಳ ದಮನ ತುಳಿತಗಳಡಿಯಿಂದ&lt;br /&gt;&lt;br /&gt;ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು&lt;br /&gt;&lt;br /&gt;ಚಂದಿರನ ಮಡಿಲಲ್ಲಿ ಜೋ ಹಾಡಲಿರುವ &lt;br /&gt;&lt;br /&gt;ನಾವು ಕೂಲಿಯವರು || 7||&lt;br /&gt;&lt;br /&gt;&lt;br /&gt;ನಾವು ಅಳುವುದಿಲ್ಲ ಅತ್ತಿಲ್ಲ&lt;br /&gt;&lt;br /&gt;ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?&lt;br /&gt;&lt;br /&gt;ರಕ್ತ ಹಿಂಡಿದರೆ ರಕ್ತವೂ ಖಾಲಿ&lt;br /&gt;&lt;br /&gt;ಜೀವನದ ಗೋಳೇ ನಮ್ಮ ಈದ್, ಹೋಳಿ !&lt;br /&gt;&lt;br /&gt;ನಾವು ಕೂಲಿಯವರು || 8 ||&lt;br /&gt;&lt;br /&gt;&lt;br /&gt;ಎಂದೆನಿತು ಬಾಯ್ತೆರೆದರೆ, ಪ್ರತಿದನಿ ಇಲ್ಲ&lt;br /&gt;&lt;br /&gt;ಹಣತೆ ಬೆಳಕ ಹೊರ ಸೂಸುವುದೂ ಇಲ್ಲ&lt;br /&gt;&lt;br /&gt;ಕಣ್ತೆರೆದ ಜನರಾವರಿಸಿದೆ ದರ್ಪದಾ ಪೊರೆ&lt;br /&gt;&lt;br /&gt;ಭೋರ್ಗರೆವ ದುಃಖದಲ್ಲಡಗಿದೆ ನಮ್ಮ ಕರೆ&lt;br /&gt;&lt;br /&gt;ಇದೇನು ಮಹಾ? ಕಿಂಡಿಗಳು ಮುಚ್ಚಿವೆಯಲ್ಲಾ!!!! || 9 ||&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-2532263358826233653?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/2532263358826233653/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=2532263358826233653' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/2532263358826233653'/><link rel='self' type='application/atom+xml' href='http://www.blogger.com/feeds/4320259625062903049/posts/default/2532263358826233653'/><link rel='alternate' type='text/html' href='http://anuraaga.blogspot.com/2008/01/blog-post_2223.html' title='ಕಿಂಡಿಗಳು ಮುಚ್ಚಿವೆ !'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-5314436801102725982</id><published>2008-01-28T02:32:00.000-08:00</published><updated>2008-01-28T02:34:20.520-08:00</updated><category scheme='http://www.blogger.com/atom/ns#' term='poem'/><title type='text'>ನಿರೀಕ್ಷೆ....</title><content type='html'>ಕಾದು ಕುಳಿತಿರುವೆ ಕವಿತೆಗಾಗಿ&lt;br /&gt;&lt;br /&gt;ಮುಂಜಾನೆಯ ಇಬ್ಬನಿಯಲಿ&lt;br /&gt;&lt;br /&gt;ಮೈನೆನೆವ ಹಸಿರು ಹುಲ್ಲುಗಳ ನೋಡಿ...&lt;br /&gt;&lt;br /&gt;ಕವಿತೆ ಬರೆಯ ಬೇಕೆಂದೆನಿಸಿತು&lt;br /&gt;&lt;br /&gt;ಆದರೆ ಅವು, ನನಗೆ ಕಂಬನಿಗಳಂತೆ ಕಂಡವು&lt;br /&gt;&lt;br /&gt;ಮನಸ್ಸಿನಲ್ಲಿ ದುಗುಡ, ಕೈ ನಡುಗಿತು&lt;br /&gt;&lt;br /&gt;ಬರೆಯಲಾಗದು ನನ್ನಿಂದ ಕವಿತೆ....&lt;br /&gt;&lt;br /&gt;&lt;br /&gt;ಎಳ ಬಿಸಿಲ ಹೊಂಗಿರಣದಿ&lt;br /&gt;&lt;br /&gt;ನಗುವ ಸೂರ್ಯಕಾಂತಿಯ ನೋಡಿ&lt;br /&gt;&lt;br /&gt;ಬರೆಯ ಬೇಕೆನಿಸಿತು ಕವಿತೆ...&lt;br /&gt;&lt;br /&gt;ಮತ್ತೊಮ್ಮೆ, ಅದೇ ಯೋಚನೆ&lt;br /&gt;&lt;br /&gt;ಮುಸ್ಸಂಜೆಗೆ ಮುದುಡಿ ಹೋಗುವ &lt;br /&gt;&lt;br /&gt;ಈ ಸುಮದ ಬದುಕು, ಅದೇ ನಡುಕ&lt;br /&gt;&lt;br /&gt;ಎಂದೆನಿತು ಕವಿತೆ ಬರೆಯಲೇನು?&lt;br /&gt;&lt;br /&gt;&lt;br /&gt;ಉರಿಯುವ ಮಧ್ಯಾಹ್ನದ ಬೇಗೆಯಂತೆ&lt;br /&gt;&lt;br /&gt;ಮನದಾಳದ ಯಾತನೆ...&lt;br /&gt;&lt;br /&gt;ಮುಸ್ಸಂಜೆಯಲಿ ಬಿರಿಯುವ &lt;br /&gt;&lt;br /&gt;ಬಯ್ಯ ಮಲ್ಲಿಗೆ, ಗೂಡು ಸೇರುವ ಹಕ್ಕಿ&lt;br /&gt;&lt;br /&gt;ಚುಕ್ಕಿಯಂತೆ ನಭದಲ್ಲಿ ತೋರುತಿರಲು&lt;br /&gt;&lt;br /&gt;ಕವಿತೆಗಾಗಿ ಹುಡುಕಿದರೆ ಪದ ಪುಂಚಗಳು&lt;br /&gt;&lt;br /&gt;ಸಿಗಲೇ ಇಲ್ಲ....ಏನ ಬರೆಯಲಿ ನಾ?&lt;br /&gt;&lt;br /&gt;&lt;br /&gt;ಬಿರಿದ ಬಾನಂಗಳದಿ ನಸುನಗುವ &lt;br /&gt;&lt;br /&gt;ಚಂದಿರ, ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ &lt;br /&gt;&lt;br /&gt;ತಾರೆಗಳತ್ತ ದೃಷ್ಟಿ ಹಾಯಿಸಿರೆ...&lt;br /&gt;&lt;br /&gt;ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ&lt;br /&gt;&lt;br /&gt;ಜೀವನದಿ ಕಷ್ಟ ಸುಖಗಳ ದ್ವಂದ್ವ..&lt;br /&gt;&lt;br /&gt;ಒಂದೆರಡು ಸಾಲು ಬರೆಯಲು ತಡಕಾಡಿದರೆ&lt;br /&gt;&lt;br /&gt;ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-5314436801102725982?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/5314436801102725982/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=5314436801102725982' title='2 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/5314436801102725982'/><link rel='self' type='application/atom+xml' href='http://www.blogger.com/feeds/4320259625062903049/posts/default/5314436801102725982'/><link rel='alternate' type='text/html' href='http://anuraaga.blogspot.com/2008/01/blog-post_6426.html' title='ನಿರೀಕ್ಷೆ....'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4320259625062903049.post-8558827209585663769</id><published>2008-01-28T02:26:00.000-08:00</published><updated>2008-01-28T02:32:30.327-08:00</updated><category scheme='http://www.blogger.com/atom/ns#' term='poem'/><title type='text'>ಅಪ್ರಕಟಿತ</title><content type='html'>ಆಕೆ,&lt;br /&gt;&lt;br /&gt;ಹದಿನೇಳರ ಬೊಗಸೆ ಕಂಗಳ ಚೆಲುವೆ&lt;br /&gt;&lt;br /&gt;ಮೈಮನದಿ ಪುಟಿದೆದ್ದ ಯೌವನ&lt;br /&gt;&lt;br /&gt;ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ&lt;br /&gt;&lt;br /&gt;ಕೇಳಿದನಿನಿತು ಅವಳ ಪ್ರೇಮಭಿಕ್ಷೆ&lt;br /&gt;&lt;br /&gt;&lt;br /&gt;ನಾಚಿ ಕೆಂಪಾದ ಕೆನ್ನೆ, ಹೃದಯದಲಿ&lt;br /&gt;&lt;br /&gt;ತುಡಿತ ಮಿಡಿತದೊಳು ಅವನೆಂದ&lt;br /&gt;&lt;br /&gt;"ಎಲೆ ಚೆಲುವಿ, ನೀನೇ ನನ್ನ ಮನದನ್ನೆ&lt;br /&gt;&lt;br /&gt;ನೀನು ಒಂದು ನಾನು ಬರೀ ಸೊನ್ನೆ!"&lt;br /&gt;&lt;br /&gt;&lt;br /&gt;ಪ್ರೇಮಪಾಶದೊಳು ಜಾರಿ ಬಿದ್ದಳಾಕೆ&lt;br /&gt;&lt;br /&gt;ಬಂಧಿಯಾದಳು ಅವನ ಬಿಸಿ ಅಪ್ಪುಗೆಯಲಿ&lt;br /&gt;&lt;br /&gt;ತುಟಿಯಂಚಿನ ಸಿಹಿ ಚುಂಬನದಿ&lt;br /&gt;&lt;br /&gt;ಮೈ ಮರೆತಳು ಪ್ರೇಮ- ಪ್ರೇಮಿಗಾಗಿ&lt;br /&gt;&lt;br /&gt;&lt;br /&gt;ಪ್ರೇಮಸಾಗರದೆಡೆಯಲ್ಲಿ ಕಾಮ&lt;br /&gt;&lt;br /&gt;ಸುಳಿಗೆ ಸಿಕ್ಕ ಹೆಣ್ಣು- ಬದುಕು&lt;br /&gt;&lt;br /&gt;ವ್ಯರ್ಥವಾಯಿತು ಮೋಹ ನಾಟಕ&lt;br /&gt;&lt;br /&gt;-ದಲ್ಲಿ ವೇಷ ಕಳಚಿದಾಗ ಆಕೆ ಬಸುರಿ&lt;br /&gt;&lt;br /&gt;&lt;br /&gt;ಹೊಸ ಜೀವ ಗರ್ಭದೊಳು ಚಿಗುರೊಡೆ&lt;br /&gt;&lt;br /&gt;ದಿರಲು ಒಲ್ಲೆನೆಂದನು ನಲ್ಲ&lt;br /&gt;&lt;br /&gt;ಬಸುರಿಯನು ವರಿಸುವುದೇ?&lt;br /&gt;&lt;br /&gt;ಛೀ... ಇದು ನನ್ನದಲ್ಲ!&lt;br /&gt;&lt;br /&gt;&lt;br /&gt;ಕೆಟ್ಟು ಹೋಯಿತು ಮಾನ-ಮೌನ&lt;br /&gt;&lt;br /&gt;ತಳೆಯಿತು ಮನ, ತುಂಬಿ ದುಃಖ ದುಮ್ಮಾನ&lt;br /&gt;&lt;br /&gt;ಬಂಧಿಯಾದಳಾಕೆ ಮನೆ, ಮನಗಳಂತಿರಲು&lt;br /&gt;&lt;br /&gt;ನವಮಾಸ ತುಂಬದೆ ಕಾಣಿಸಿದ ಹೆರಿಗೆ ಬೇನೆ&lt;br /&gt;&lt;br /&gt;&lt;br /&gt;ನೋವು ಸಹಿಸಿದಳಾ ಮಾತೆ ಕಂದನ&lt;br /&gt;&lt;br /&gt;ಮುಖಕಂಡು ನೋವ ಮರೆಯುವೆನೆಂದು&lt;br /&gt;&lt;br /&gt;ಆದರೆ ಕಂಡಿಲ್ಲ ಆಕೆ ಮಗುವಿನ ಹೊಸರೂಪ&lt;br /&gt;&lt;br /&gt;ಆಗಲೇ ನಡೆದಿತ್ತು ಆಕೆಯ ಗರ್ಭಪಾತ!!!&lt;br /&gt;&lt;br /&gt;&lt;br /&gt;ಇತ್ತ ಕನಸುಗಳ ಗಾಳಿ ಗೋಪುರದಿ&lt;br /&gt;&lt;br /&gt;ದುಃಖ ಮಡುಗಟ್ಟಿದ ಹೃದಯ, ಕೃಶ ದೇಹ&lt;br /&gt;&lt;br /&gt;ತುಡಿವುದು ನಿಶ್ಕಲ್ಮಷ ಸ್ನೇಹ -ಕರುಣೆಗಾಗಿ&lt;br /&gt;&lt;br /&gt;ಅವಳ ಆಸೆ ಆಕಾಂಶೆಗಳು ರಚಿತವಾದರೂ&lt;br /&gt;&lt;br /&gt;ಅಸ್ಪಷ್ಟ ಅಪ್ರಕಟಿತ !!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-8558827209585663769?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/8558827209585663769/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=8558827209585663769' title='1 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/8558827209585663769'/><link rel='self' type='application/atom+xml' href='http://www.blogger.com/feeds/4320259625062903049/posts/default/8558827209585663769'/><link rel='alternate' type='text/html' href='http://anuraaga.blogspot.com/2008/01/blog-post_28.html' title='ಅಪ್ರಕಟಿತ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4320259625062903049.post-1278115306018977741</id><published>2008-01-17T02:02:00.000-08:00</published><updated>2008-01-17T02:06:42.618-08:00</updated><category scheme='http://www.blogger.com/atom/ns#' term='ಕವನ'/><title type='text'>ವರ್ತಮಾನ</title><content type='html'>ಎದೆಯ ತಲ್ಪದಲವಿತ&lt;br /&gt;&lt;br /&gt;ಕಲ್ಪನೆಗಳ ನಗ್ನಶಿಲೆಯನು ಕೆತ್ತಿ&lt;br /&gt;&lt;br /&gt;ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ&lt;br /&gt;&lt;br /&gt;ಬಣ್ಣ ಜಾಲದಲಿ ಸಿಕ್ಕಿ, ರೂಪ&lt;br /&gt;&lt;br /&gt;ತಳೆದ ಕನಸುಗಳ ಕರಡು ರೇಖಾಚಿತ್ರ&lt;br /&gt;&lt;br /&gt;&lt;br /&gt;ಹೊಸ ದಿನದ ಹೊಂಗಿರಣ&lt;br /&gt;&lt;br /&gt;ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ&lt;br /&gt;&lt;br /&gt;ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ&lt;br /&gt;&lt;br /&gt;ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ&lt;br /&gt;&lt;br /&gt;ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು&lt;br /&gt;&lt;br /&gt;&lt;br /&gt;ಮಂಜುಮುಸುಕಿದ ಓಣಿಯಲಿ ನಡೆದು&lt;br /&gt;&lt;br /&gt;ನಗ್ನ ಪಾದದ ಗುರುತು ಮೂಡಿರೆ&lt;br /&gt;&lt;br /&gt;ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ&lt;br /&gt;&lt;br /&gt;ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ&lt;br /&gt;&lt;br /&gt;ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ&lt;br /&gt;&lt;br /&gt;&lt;br /&gt;ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ&lt;br /&gt;&lt;br /&gt;ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ&lt;br /&gt;&lt;br /&gt;ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ,&lt;br /&gt;&lt;br /&gt;ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ&lt;br /&gt;&lt;br /&gt;ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4320259625062903049-1278115306018977741?l=anuraaga.blogspot.com' alt='' /&gt;&lt;/div&gt;</content><link rel='replies' type='application/atom+xml' href='http://anuraaga.blogspot.com/feeds/1278115306018977741/comments/default' title='Post Comments'/><link rel='replies' type='text/html' href='http://www.blogger.com/comment.g?blogID=4320259625062903049&amp;postID=1278115306018977741' title='5 Comments'/><link rel='edit' type='application/atom+xml' href='http://www.blogger.com/feeds/4320259625062903049/posts/default/1278115306018977741'/><link rel='self' type='application/atom+xml' href='http://www.blogger.com/feeds/4320259625062903049/posts/default/1278115306018977741'/><link rel='alternate' type='text/html' href='http://anuraaga.blogspot.com/2008/01/blog-post_17.html' title='ವರ್ತಮಾನ'/><author><name>ಅನುರಾಗ</name><uri>http://www.blogger.com/profile/13411740540409360931</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4320259625062903049.post-8413964341094703701</id><published>2008-01-17T01:56:00.000-08:00</published><updated>2008-01-17T02:01:13.658-08:00</updated><category scheme='http://www.blogger.com/atom/ns#' term='love'/><title type='text'>ನೆನಪಾಗಿದೆ... ಆ ದಿನಗಳು ಆ ಕ್ಷಣಗಳು</title><content type='html'>ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ಎಷ್ಟು ಸುಂದರವಾದ ಸಾಲುಗಳು..ನಮ್ಮ ಕಾಲೇಜ್ ಡೇ ಸೆಲೆಬ್ರೇಶನ್ ಹಾಗೇ ಅಲ್ವಾ. ಐದು ರುಪಾಯಿ ಕೊಟ್ಟು ಡೆಡಿಕೇಶನ್ ಕೌಂಟರ್‌ಗೆ ಹೋಗಿ ಕಂಪ್ಯೂಟರ್‌ನಲ್ಲಿ ನಮ್ಮವರಿಗೊಂದು ಹಾಡು ಡೆಡಿಕೇಟ್ ಮಾಡುವುದೇ ಒಂದು ಥ್ರಿಲ್. ಅನು, ಅಂದು ಮೊದಲ ಬಾರಿಗೆ ಮೈಕ್‌ನಲ್ಲಿ "ದ ನೆಕ್ಟ್ಸ್ ಸೋಂಗ್ ಈಸ್ ಡೆಡಿಕೇಟೆಡ್ ಫ್ರಮ್ ಅನು, ಟು..." ಎಂದು ನನ್ನ ಹೆಸರು ಕರೆದು ಹೇಳಿದಾಗ ನಾನು ಒಮ್ಮೆ ಲೆ ಶಾಕ್ ಆಗಿ ಬಿಟ್ಟೆ ಮಾರಾಯ್ರೆ. ಆ ಹಾಡು ಕೇಳಿದಾಗ ಎಂದೂ ನನಗೆ ನೀನು ನೆನಪಾಗುತ್ತೀಯೆ. ಅಂದು ನನಗೆ ಎಷ್ಟು ಖುಷಿಯಾಗಿತ್ತು ಗೊತ್ತಾ? ಅದಕ್ಕಾಗಿಯೇ ನಾನು ಅದನ್ನು ಕಾಲರ್ ಟ್ಯೂನ್ ಆಗಿ ಸೆಲೆಕ್ಟ್ ಮಾಡಿದ್ದು. ಖಂಡಿತವಾಗಿಯೂ ನಾವು ಕಾಲೇಜ್‌ನಲ್ಲಿ ಕಳೆದ ಅದೆಷ್ಟು ಸುಮಧುರ ಗಳಿಗೆಗಳು ಇಂದಿಗೂ ಹಸುರಾಗಿಯೇ ಇವೆ. ನೀನು ನನ್ನ ಗೆಳೆಯನಾಗಿ ದೊರೆತದ್ದೇ ನನ್ನ ಭಾಗ್ಯ. ನಮ್ಮಿಬ್ಬರ ಗೆಳೆತನ ನಂತರ ಅದು ಪ್ರೇಮವಾಗಿ ಬದಲಾದದ್ದು...ಎಲ್ಲಾ ಕಾಲದ ಲೀಲೆಯಲ್ಲದೆ ಮತ್ತೇನು? ಅನು, ನೀನು ನನ್ನನ್ನು ಪ್ರೊಪೋಸ್ ಮಾಡುವುದಕ್ಕಿಂತ ಮೊದಲೇ ನಾನು ನಿನ್ನನ್ನು ಎಷ್ಟು ಮೆಚ್ಚಿಕೊಂಡಿದ್ದೆ ಎಂದು ನಿನಗೆ ಗೊತ್ತಾ ? ನಾನು ಮಂಕಾಗಿ ಕುಳಿತಿರುವಾಗಲ್ಲೇ ನಿನ್ನ ಹಾಸ್ಯ ಭರಿತ ಚೂಟಿ ಮಾತುಗಳಿಂದ ನನ್ನನ್ನು ನಗಿಸುತ್ತಿದ್ದವನು ನೀನಲ್ಲವೇ? ನಾನು ಪರೀಕ್ಷೆ ಅಂತ ಟೆನ್ಶನ್ ಮಾಡ್ತಿರುವಾಗ ನೀನು ಅದೆಷ್ಟು ಬಾರಿ ನನಗೆ ನೋಟ್ ರೆಫರ್ ಮಾಡಲು ಸಹಾಯ ಮಾಡಿದ್ದೆ. ಕಾಲೇಜಿನ ಬ್ರಿಲ್ಲಿಯಂಟ್ ಸ್ಟೂಡೆಂಟ್ ಎಂದೆನಿಸಿದ್ದ ನಿನ್ನನ್ನು ಕಾಣಬೇಕಾದರೆ ಲೈಬ್ರರಿಗೇ ಬರಬೇಕಾಗಿತ್ತು. ನಿನ್ನ ಗೆಳೆತನವಾದಂದಿನಿಂದ ನಾನು ಲೈಬ್ರರಿಯನನ್ನು ಮೆಚ್ಚಿಕೊಂಡೆ. ನಿನ್ನ ಗೆಳೆತನದಿಂದಲೇ ನನಗೆ ಉತ್ತಮ ಅಂಕಗಳು ಬರತೊಡಗಿದ್ದವು ಅದೇ ರೀತಿ ನಿನ್ನತ್ತ ನನ್ನ ಸ್ನೇಹವು ಚಿಗುರೊಡೆಯುತ್ತಾ ಬಂದಿತ್ತು. ಅದೇ ಕ್ಷಣ ನಿನ್ನಲ್ಲಿ ನನ್ನ ಮನಸ್ಸನ್ನು ಬಿಚ್ಚಿಡಬೇಕೆಂದಿದ್ದೆ, ಆದರೆ ನೀನದನ್ನ ನಿರಾಕರಿಸಿದರೆ ಅಂತ ನನಗೇನೋ ಭಯ ಆಗ್ತಾ ಇತ್ತು. ಆದುದರಿಂದಲೇ ಪ್ರೇಮಿಯಲ್ಲದಿದ್ದರೂ ನೀನು ನನ್ನ ಉತ್ತಮ ಗೆಳೆಯಾಗಿದ್ದರೆ ಸಾಕು ಎಂದು ನಾನೇ ನಿರ್ಧರಿಸಿಕೊಂಡಿದ್ದೆ. ಅದೊಂದು ದಿನ ನೀನು ನಿನ್ನ ಮನಸ್ಸನ್ನು ನನ್ನ ಮುಂದೆ ತೆರೆದಿಟ್ಟಾಗ ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದಂತಾಯಿತು. ಆದರೆ ಕಾಲೇಜಿನಲ್ಲಿ ಇದು ಯಾರಿಗೂ ಗೊತ್ತಾಗ ಬಾರದೆಂದು ನಾವೆಂದೂ ಗೆಳೆಯರಂತೆಯೇ ನಡೆದುಕೊಂಡಿದ್ದೆವು. ಗೆಳೆಯರೆಲ್ಲರೂ ಸೇರಿ ಚೂಟಿ ಮಾಡುವಾಗ "ವಿ ಆರ್ ಜಸ್ಟ್ ಫ್ರೆಂಡ್ಸ್, ಅಲ್ಲದಿದ್ದರೂ ಈ (ಮಂದ ಬುದ್ದಿ) ಹುಡುಗಿಯನ್ನು ನಾನು ಪ್ರೀತಿಸುವುದೇ?" ಎಂದು ನಿನ್ನ ಗೆಳೆಯರಲ್ಲಿ ನೀನು ಹೇಳಿಲ್ಲವೇ? ಆದರೆ ಅದೇ ಮಂದ ಬುದ್ದಿಯಾದ ನನ್ನನ್ನು ನೀನು ಪ್ರೀತಿಸುತ್ತಾ ತಮಾಷೆಯಾಡುತ್ತಿದ್ದೆ. ಕಾಲೇಜಿನ ಲೈಬ್ರರಿಯಲ್ಲಿ ಕುಳಿತು ಕಂಬೈನ್‌ಡ್ ಸ್ಟಡಿ ಎಂಬ ನೆಪವೊಡ್ಡಿ ನಾವೆಷ್ಟು ಕಾಲ ಕಳೆದಿದ್ದೀವಿ! ಕಾಲೇಜಿನ ಸ್ಟೈಲ್ ಬಾಯ್,ಚಾಕ್ಲೆಟಿ ಬಾಯ್ ಎಂದು ಹೆಸರು ಪಡೆದಿದ್ದ ನೀನು ನನ್ನ ಮನಸ್ಸನ್ನು ಗೆ(ಕ)ದ್ದಿದ್ದೆ ಎಂದು ಯಾರೂ ತಿಳಿದಿರಲಿಕ್ಕಿಲ್ಲ. ಕಾಲೇಜಿನ ಜೋಡಿ ಹಕ್ಕಿಗಳು ಕೈ ಕೈ ಹಿಡಿದು ಸುತ್ತಾಡುವಾಗ ನೀನೂ ನನ್ನ ಕೈ ಹಿಡಿದು ಸುತ್ತಾಡ ಬೇಕೆಂದು ನಾನೂ ಮನಸ್ಸಿನಲ್ಲಿ ಅಂದು ಕೊಂಡಿದ್ದೆ. ಆದರೆ ನೀನು, ನಮ್ಮ ಪ್ರೀತಿ ಮನಸ್ಸಲ್ಲೇ ಇದ್ದು ಇತರರಿಗೆ ಪ್ರದರ್ಶಿಸದೇ ಇರುವುದು ಒಳಿತೆಂದು ಹೇಳಿದವನು. ನಿಜಕ್ಕೂ ಅದು ಒಳ್ಳೆಯದೇ ಎಂದು ಅನಿಸಿತ್ತು ಯಾಕೆಂದರೆ ನನ್ನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು ' ಲವ್ ' ಮಾಡುವವರಿಗೆ ಉಪದೇಶ ಕೊಟ್ಟು ಕಂಗಾಲಾಗಿಸುವ ಮತ್ತು ಇಂಟರ್ನೆಲ್ ಮಾರ್ಕ್ ಕಡಿಮೆ ಮಾಡುವ ಜಾಯಮಾನದವರಾಗಿದ್ದರಿಂದ ಸದ್ಯಕ್ಕೆ ನಾನಂತೂ ಬಚಾವ್. ಆದರೂ ಅದೇಕೋ ನಿನ್ನ ಕೈ ಹಿಡಿದು ಸುತ್ತಾಡ ಬೇಕು, ನಿನ್ನ ಅಂದದ ಕಂದುಗಣ್ಣಿಗೆ ಕಣ್ಣಿಟ್ಟು ಸುಮ್ಮನೆ ಕುಳಿತುಕೊಂಡು ನಿನ್ನ ಕಣ್ಣಲ್ಲಿ ನನ್ನ ಪ್ರತಿಬಿಂಬವನ್ನ ನೋಡ ಬೇಕು ಎಂದು ಅದೆಷ್ಟೋ ಬಾರಿ ನಾನು ಆಸೆ ಪಟ್ಟಿದ್ದೆ. ಅಂತೂ ಇಂಟರ್ನೆಲ್, ಯುನಿವರ್ಸಿಟಿ ಪರೀಕ್ಷೆ,ಲ್ಯಾಬ್ ,ಲೈಬ್ರರಿ,ಸೆಮಿನಾರ್ ಎಂದು ಸದಾ ಬ್ಯುಸಿಯಾಗಿರುವ ನಿನ್ನಲ್ಲಿ, ನನ್ನ ಪ್ರೀತಿಯನ್ನು ಪ್ರಕಟಿಸಲು ನನಗೆ ಅವಕಾಶವೇ ಸಿಗುತ್ತಿರಲಿಲ್ಲ. ನನ್ನ ಅನು, ಈ ಕದ್ದು ಮುಚ್ಚಿ ಪ್ರೀತಿಸುವುದರಲ್ಲಿ ಒಂದು ಪ್ರತ್ಯೇಕ ರೀತಿಯ ಆನಂದ ವಿದೆಯಲ್ಲಾ... ಅದರ ಅನುಭವ ಪ್ರೇಮಿಗಳಿಗೇ ಗೊತ್ತು. ಅದ್ಯಾಕೊ ಸ್ವಪ್ನಲೋಕದಲ್ಲಿ ವಿಹರಿಸುತ್ತಿದ್ದ ನನಗೆ ನೀನು ಗೆಳೆಯನಾಗಿ ಸಿಕ್ಕಿದ್ದು ಪುಣ್ಯ ಕಾಣೋ..ನಿನ್ನ ಆ ಮುಗ್ಧ ನಗು ಯಾವಾಗೂ ಗಾಳಿಯಲ್ಲಿ ಜಿಗಿಯುವ ನಸುಕಂದು ಕೂದಲು,ಮಿಂಚುಗಣ್ಣು ,ಬಾಲಿವುಡ್ ಹೀರೋ ತರಹ ಕ್ಲೀನ್ ಶೇವ್ ,ಯಾವಾಗಲೂ ಟಿಪ್ ಟಾಪ್ ಆಗಿ ಕಾಲೇಜಿ
