ಶೀರ್ಷಿಕೆ ನೋಡಿದ ಕೂಡಲೇ ವಿಷಯ ಏನೂಂತಾ ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು.
ಪ್ರತೀವರ್ಷ ಫೆ.14 ಬಂತೆಂದರೆ ಸಾಕು...ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್್ಗಳಿಂದ ತುಂಬಿ ತುಳುಕುವ ಐನ್್ಬಾಕ್ಸ್, ಈ ಮೇಲ್, ಗಿಫ್ಟ್... ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ ಪ್ರೇಮಮಯ!
ಯಾರು ಎಷ್ಟೇ ಕೂಗಾಡಲಿ...ವ್ಯಾಲೆಂಟೈನ್ಸ್ ಡೇ ಆಚರಣೆ ಎಂದ ಕೂಡಲೇ ಮಾಧ್ಯಮಗಳೇನು ಸುಮ್ಮನೆ ಕೂರುವುದಿಲ್ಲ, ವ್ಯಾಲೆಂಟೈನ್ಸ್ ಡೇ ನಮಗೆ ಬೇಕೋ ಬೇಡವೆ? ಎಂದು ಸುದ್ದಿವಾಹಿನಿಗಳು ಚರ್ಚೆಗೆ ಆಹ್ವಾನಿಸಿದರೆ, ಪತ್ರಿಕೆಗಳು ಲವ್್ಲೆಟರ್್ಗಳ ಗುಚ್ಛವನ್ನೇ ಹೊತ್ತು ತರುತ್ತವೆ. ಇನ್ನು ಅದೇ ದಿನ ಹೊಸ ಚಿತ್ರಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರರಂಗವೂ 'ಪ್ರೀತಿ'ಯನ್ನು ಮೆರೆಯುತ್ತದೆ.
ಪ್ರೀತಿ ಎಂದಾಕ್ಷಣ 'ಸಿನಿಮಾ'ದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣವೇ. 'ಪ್ರೀತಿ' ಎಂಬ ಮಧುರವಾದ ಭಾವನೆಯನ್ನೇ ಬಂಡವಾಳವಾಗಿರಿಸಿಕೊಂಡು ದುಡ್ಡು ಮಾಡಿದ್ದು ಎಂದರೆ ಸಿನಿಮಾ ಮಾತ್ರ. ಪ್ರೀತಿ ಹೇಗಿರುತ್ತದೆ, ಅದನ್ನು ಗಳಿಸುವುದು ಹೇಗೆ? ಮುರಿಯುವುದು ಹೇಗೆ? ಪ್ರೀತಿಯ ನಾನಾ ರೂಪಗಳನ್ನು ಅನಾವರಣ ಮಾಡಿದ್ದೇ ಸಿನಿಮಾ. ಸಿನಿಮಾ ಮತ್ತು ಪ್ರೀತಿ ಒಂದೇ ನಾಣ್ಯದ ಮುಖಗಳಂತಿದ್ದು, ಇದರ ಪ್ರಭಾವ ಎಷ್ಟೆಂದರೆ ಲವ್್ಸ್ಟೋರಿ ಇದ್ದರೇನೆ ಅದು ಸಿನಿಮಾ ಎನ್ನುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಫ್ಲ್ಯಾಶ್್ಬ್ಯಾಕ್ ನೋಡಿದರೆ ಹಳೇ ಕಾಲದ ಸಿನಿಮಾಗಳಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದ ನಾಯಕಿ, ಕಷ್ಟಪಟ್ಟು ದುಡಿಯುತ್ತಿದ್ದ ನಾಯಕನನ್ನು ಲವ್ ಮಾಡ್ತಿದ್ದಳು. ಕಣ್ ಕಣ್ ಸನ್ನೆಗಳಿಂದಲೇ ಮಾತನಾಡುತ್ತಾ ಪ್ರೀತಿ ಮಾಡುತ್ತಿದ್ದರು. ಆದರೆ ಈಗ ತುಂಡು ಬಟ್ಟೆಯ ನಾಯಕಿಗೆ ಪ್ರೀತಿಸುವುದೊಂದೇ ಕಾಯಕ ಅವಳೊಂದಿಗೆ 24 ಗಂಟೆ ಸುತ್ತಾಡಲು ಒಬ್ಬ ಕೆಲಸವೇ ಇಲ್ಲದ ನಾಯಕ.
ಇನ್ನು ಹೇಳುವುದಾದರೆ ಸಿನಿಮಾದ ಒಂದೇ ಹಾಡಿನಲ್ಲೇ ನಾಯಕಿ ಪ್ರೀತಿಯಲ್ಲಿ 'ಬೀಳು'ತ್ತಾಳೆ. ಹೀಗೆ ಬಿದ್ದವಳು ಮುಂದಿನ ದೃಶ್ಯದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಡ್ರೆಸ್ ತಡಕಾಡಿಕೊಂಡು ನಾಯಕನ ಬೆಡ್್ನಿಂದ 'ಎದ್ದೇಳು'ತ್ತಾಳೆ. ನಾಯಕ ಲವ್ ಮಾಡಿದ್ದಾನೆ ಅಂದ್ರೆ ಆತ ನಾಯಕಿಗೆ ಲಿಪ್್ಲಾಕ್ ಮಾಡಲೇಬೇಕು. ಆಕೆ ಪಾರದರ್ಶಕ ಡ್ರೆಸ್ ಹಾಕಿ ಮಳೆಯಲ್ಲಿ ನೆನೆಯಲೇ ಬೇಕು..ಅವರಿಬ್ಬರದ್ದು ಅಗಾಧ ಪ್ರೀತಿ ಎಂದು ತೋರಿಸಲು ನಾಯಕ ನಾಯಕಿ ರಾತ್ರಿ 'ಕುಚ್್ಕುಚ್್' ಮಾಡಲೇ ಬೇಕು. ನಾಲ್ಕು ಸಾಂಗ್, ಒಂದು ಲಾಂಗ್, ಕೋಲ್ಡಾಗಿರುವ ವೆದರು, ಹಾಟ್ ಆಗಿರುವ ಫಿಗರು ಸಿನಿಮಾದಲ್ಲಿ ಇದ್ರೇನೆ ನೋಡೋಕೆ ಮಜಾ ಎಂದು ಈಗಿನ ಸಿನಿಮಾವನ್ನು ಬೆಂಗ್ಳೂರು ಭಾಷೆಯಲ್ಲಿ ವಿವರಿಸಿದರೆ ತಪ್ಪೇನಾಗಲ್ಲ ಬಿಡಿ.
ಪ್ರೀತಿಯ ಬಗ್ಗೆಯಿರುವ ಇಷ್ಟೊಂದು ಸಿನಿಮಾಗಳನ್ನು ನೋಡಿದರೂ ನಿಜವಾದ ಪ್ರೀತಿ ಏನೆಂಬುದು ಇಂದಿನ ಯುವ ಜನರಿಗೆ ಅರ್ಥವಾಗದ ಮಾತು. ಯಾಕೆಂದರೆ ನಿಜವಾದ ಪ್ರೀತಿ ಯಾವುದು ಎಂಬುದರ ಬಗ್ಗೆ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿದ್ದೇ ಸಿನಿಮಾಗಳು. ಪ್ರೀತಿಯ ಭಾವನೆ ಹೇಗಿರುತ್ತದೆ, ಅದರಲ್ಲಿ ಎದುರಿಸಬೇಕಾದ ಸವಾಲುಗಳು, ಕಷ್ಟ ನಷ್ಟ ಎಲ್ಲವನ್ನೂ ಹೇಳಿಕೊಟ್ಟದ್ದು ಕೂಡಾ ಸಿನಿಮಾ..ಇದು ಪ್ಲಸ್ ಪಾಯಿಂಟ್.
ಅದೇ ವೇಳೆ ಪ್ರೀತಿಸುವ ಹುಡುಗಿ ಸುಂದರಿಯಾಗಿರಲೇ ಬೇಕು, ಆಕೆಯನ್ನು ಒಲಿಸಿಕೊಳ್ಳಲು ದೊಡ್ಡ ಉಡುಗೊರೆ ಕೊಡಬೇಕು...ಆಕೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ನೀಟಾಗಿ ಡ್ರೆಸ್ ಮಾಡಿ ಬೈಕ್್ನಲ್ಲಿ ಸುತ್ತಾಡಬೇಕು, ಹುಡುಗನನ್ನು ಪಟಾಯಿಸುವುದು ಹೇಗೆ? ಅವನಿಗೆ ಕೈ ಕೊಡುವುದು ಹೇಗೆ ಎಂಬೆಲ್ಲಾ ವಿಷಯಗಳನ್ನು ಕೂಡಾ ಸಿನಿಮಾ ಜನರಿಗೆ ಹೇಳಿಕೊಟ್ಟಿದೆ. ಇದು ನೆಗೆಟಿವ್ ಪಾಯಿಂಟ್. ಒಟ್ಟಿನಲ್ಲಿ ಸಿನಿಮಾ ಮೂಲಕ ಇದನ್ನೆಲ್ಲಾ ನೋಡಿದ ಜನರು ಹೆಚ್ಚಾಗಿ ಸ್ವೀಕರಿಸಿದ್ದು ನೆಗೆಟಿವ್ ಪಾಯಿಂಟ್್ನ್ನೇ. ಇದರಿಂದಾಗಿಯೇ ಜನರು ಲವ್ ಯಾವುದು ಲಸ್ಟ್ ಯಾವುದು ಎಂಬುದರ ವ್ಯತ್ಯಾಸವನ್ನು ಅರಿಯುವಲ್ಲಿ ಎಡವಿದ್ದಾರೆ. ಪರಿಣಾಮ ಇಂತಹ ಪ್ರಣಯ ಸಂಬಂಧಗಳು ದೀರ್ಘ ಕಾಲ ಬಾಳ್ವಿಕೆ ಬರುವುದೇ ಇಲ್ಲ.
ಸಿನಿಮಾಗಳ ವಿಷ್ಯದಿಂದ ಸ್ವಲ್ಪ ಸರಿದು ಸೋಷ್ಯಲ್ ನೆಟ್್ವರ್ಕಿಂಗ್ ಸೈಟ್್ಗಳತ್ತ ಕಣ್ಣು ಹಾಯಿಸೋಣ. ಹಳೇ ಕಾಲದಲ್ಲಾದರೆ ಅಪರೂಪಕ್ಕೆ ಸಿಕ್ಕ ಗೆಳೆಯರಲ್ಲಿ ಏನು ಪತ್ತೆನೇ ಇಲ್ಲ? ಒಂದು ಲೆಟರ್ ಹಾಕ್ಬಾರ್ದಿತ್ತಾ? ಫೋನ್ ಮಾಡ್ಬಾರ್ದಿತ್ತಾ? ಎಂದೆಲ್ಲಾ ಕೇಳುತ್ತಿದ್ದರು. ಈಗ ಫೇಸ್್ಬುಕ್್ನಲ್ಲೋ, ಆರ್ಕುಟ್್ನಲ್ಲೋ ಹುಡುಕಿದರಾಯ್ತು. ನಮಗೆ ಪರಿಚಯ ಇರುವ ಇಲ್ಲದ ಎಲ್ಲ ಮನುಷ್ಯರನ್ನು ಗೆಳೆಯರಾಗುವಂತೆ ಮಾಡುವ ಈ ಸೋಷ್ಯಲ್್ಸೈಟ್್ಗಳು ಇಂದು ಪ್ರತಿಯೊಬ್ಬನ ಜೀವನದಲ್ಲಿ ಅವಿಭಾಜ್ಯ ಅಂಗ ಎಂಬಂತೆ ಹಾಸುಹೊಕ್ಕಾಗಿವೆ. ಬೆಳಗ್ಗೆದ್ದು
ಫೇಸ್ ತೊಳೆಯದಿದ್ದರೂ ಫೇಸ್್ಬುಕ್ ಓಪನ್ ಮಾಡಿ ಯಾರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ನೋಡುವ ತವಕ. ಲಾಗಿನ್ ಆದ ಕೂಡಲೇ ನಿಮ್ಮ ಮನಸ್ಸಲ್ಲಿ ಏನಿದೆ? ಎಂದು ಕೇಳುವ ಈ ಸೋಷ್ಯಲ್್ಸೈಟ್್ಗಳಿಂದಲೇ ಅದೆಷ್ಟೋ ಜನರ ಮಾನಸಿಕ ಸ್ಥಿತಿ ಹಾಳಾಗಿದೆ ಎಂಬುದು ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿತ್ತು. ಯಾಕೆಂದರೆ ಫೇಸ್್ಬುಕ್್ನಲ್ಲಿ ತಾವು ಹೇಗೆ ಎಂಜಾಯ್್ಮಮಾಡಿದೆವು? ಎಷ್ಟೊಂದು ಉಲ್ಲಾಸಕರವಾಗಿ ಜೀವನ ಸಾಗಿಸುತ್ತಿದ್ದೇವೆ? ಮೊದಲಾದ ಪೋಸ್ಟ್್ಗಳನ್ನು, ಫೋಟೋಗಳನ್ನು ನೋಡಿದರೆ ಕೆಲವರಲ್ಲಿ ಕೀಳರಿಮೆ ಆವರಿಸಿಬಿಡುತ್ತದೆ ಎಂಬುದನ್ನು ಈ ಸಮೀಕ್ಷೆ ಬಹಿರಂಗ ಪಡಿಸಿದೆ. ಆದಾಗ್ಯೂ, ಫೇಸ್್ಬುಕ್್ನಲ್ಲಿ ಸಿಕ್ಕಾಪಟ್ಟೆ ಗೆಳೆಯರಿದ್ದಾರೆ ಎಂದು ಬೀಗುವ ಅದೆಷ್ಟೋ ಮಂದಿಗಳಿದ್ದಾರೆ. ಆದರೆ ಒಮ್ಮೆ ಯೋಚಿಸಿ, ನೀವು ಸಂಕಷ್ಟಕ್ಕೀಡಾದಾಗ ನಿಮ್ಮ ಅಳಲನ್ನು ಫೇಸ್್ಬುಕ್್ನಲ್ಲಿ ತೋಡಿಕೊಂಡರೆ ಲೈಕ್ ಮಾಡುವ, ಕಾಮೆಂಟ್ ಮಾಡುವ ಗೆಳೆಯರಿಗಿಂತ ನಿಮ್ಮ ಫೇಸ್ ನೋಡಿದ ಕೂಡಲೇ 'ಚಿಂತೆ ಬಿಡು...ನಾನಿದ್ದೀನಿ ನಿನ್ನ ಜತೆ' ಎಂದು ಹೇಳುವ ಗೆಳೆಯನನ್ನು ನೀವು ಹೊಂದಿದ್ದರೆ ನೀವೇ ಪುಣ್ಯವಂತರು.
ಹಾಗೆಯೇ ಪ್ರೀತಿಯ ವಿಷ್ಯದಲ್ಲೂ ಸೋಷ್ಯಲ್ ನೆಟ್್ವರ್ಕಿಂಗ್ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಚಾಟ್, ಇಮೇಲ್, ಮೆಸೇಜ್ ಮೂಲಕ ಹುಟ್ಟುವ ಇ-ಪ್ರೀತಿಗೆ ಸೋಷ್ಯಲ್ ನೆಟ್್ವರ್ಕಿಂಗ್ ತಾಣವೂ ವೇದಿಕೆ ಕಲ್ಪಿಸಿದೆ. ಪ್ರೀತಿ ಮೂಡಿದ್ದರೆ, ಮುರಿದು ಬಿದ್ದಿದ್ದರೆ ಎಲ್ಲಾ ವಿಷಯವನ್ನು ಈ ತಾಣಗಳಲ್ಲಿ ಬಹಿರಂಗ ಪಡಿಸಬಹುದು. ಇಂತಹ ಬಹಿರಂಗ ಹೇಳಿಕೆಗಳು ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತವೆ ಎಂಬುದಕ್ಕೆ ಮಾಲಿನಿ ಮುರ್ಮು ಪ್ರಕರಣವೇ ಸಾಕ್ಷಿ. ತನ್ನ ಬಾಯ್್ಫ್ರೆಂಡ್ ಕೈಕೊಟ್ಟ ಕಾರಣ ಖಿನ್ನಳಾಗಿದ್ದ ಮಾಲಿನಿಗೆ ಆಕೆಯ ಬಾಯ್್ಫ್ರೆಂಡ್ ಫೇಸ್್ಬುಕ್್ನಲ್ಲಿ ಲವ್್ಬ್ರೇಕಪ್ ಬಗ್ಗೆ ಬರೆದದ್ದೇ ಆತ್ಮಹತ್ಯೆಗೆ ಪ್ರೇರಣೆಯಾಯಿತು. ಆತ ಮಾಡಿದ ಅಚಾತುರ್ಯ ಮುಗ್ದ ಬಾಲಕಿಯ ಜೀವನವನ್ನೇ ಕಬಳಿಸಿತು. ಆಕೆಯ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆ ಮಾಲಿನಿಯ ಬಾಯ್್ಫ್ರೆಂಡ್ ಫೇಸ್್ಬುಕ್ ಅಕೌಂಟ್ ಡಿಲೀಟ್ ಮಾಡಿಬಿಟ್ಟ. ಆದರೆ 22 ವರ್ಷದವರೆಗೆ ಆಕೆಯನ್ನು ಸಾಕಿ ಬೆಳೆಸಿದ ಪೋಷಕರಿಗೆ ಸಿಕ್ಕಿದ್ದಾದರೂ ಏನು? ಆತನೇನೋ ಅಕೌಂಟ್ ಡಿಲೀಟ್ ಮಾಡಿ ಹೊಸ ಅಕೌಂಟ್ ಓಪನ್ ಮಾಡಬಹುದು ಆದರೆ ಹೋದ ಜೀವ ವಾಪಾಸ್ ತರೋಕೆ ಆಗುತ್ತಾ?
ಇಂತಹ ಒಂದಲ್ಲ ಒಂದು ಅನಾಹುತಗಳು ಪ್ರೀತಿಯ ವಿಷಯದಲ್ಲಿ ಆಗೇ ಆಗುತ್ತದೆ. ಈ ಅನಾಹುತಗಳಲ್ಲಿ ಭ್ರೂಣ ಹತ್ಯೆಯ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ದುರದೃಷ್ಟಕರ. ಇದೆಲ್ಲದಕ್ಕೂ ಪ್ರೀತಿಯೇ ಕಾರಣ ಎಂದು ದೂರುವವರೇ ಹೆಚ್ಚು. ಹಳೇ ಕಾಲದಲ್ಲಿ ಪ್ರೀತಿ ಚೆನ್ನಾಗಿತ್ತು. ಈಗ ಚೆನ್ನಾಗಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಒಂದು ಮಾತು... ಪ್ರೀತಿ ಎಂಬುದು ನೀರಿನಂತೆ ಅದು ಯಾವ ಪಾತ್ರೆಯೊಳಗೆ ಸೇರಿಕೊಳ್ಳುತ್ತದೋ ಅದು ಅದೇ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಪ್ರೀತಿ ಯಾವತ್ತೂ ಹಾಳಾಗಿಲ್ಲ..ಮುಂದೆ ಹಾಳಾಗುವುದೂ ಇಲ್ಲ. ಆದರೆ ಪ್ರೀತಿಸುವ ರೀತಿ ಮಾತ್ರ ಬದಲಾಗಿದೆ. ಬದಲಾವಣೆಯೇ ಜಗದ ನಿಯಮ ಎಂಬ ಹಾಗೆ ಪ್ರೀತಿಯ ರೀತಿಯಲ್ಲಿ ಬದಲಾವಣೆಯಾಗುತ್ತಾ ಬಂದಿದೆ ಹೊರತು 'ಪ್ರೀತಿ' ಎಂಬ ಆ ಮಧುರ ಭಾವನೆ ಇದೆಯಲ್ವಾ ಅದು ಇಂದಿಗೂ ಕಣ್ಣ ಹನಿಯಂತೆ ನಿಷ್ಕಲ್ಮಷವಾಗಿಯೇ ಇದೆ.
ಅನುರಾಗ
Monday, February 13, 2012
Sunday, January 29, 2012
ಅತ್ತು ಬಿಡು ನೀನೊಮ್ಮೆ...
ಅತ್ತು ಬಿಡು ನೀನೊಮ್ಮೆ
ಕಣ್ಣೀರು ಹರಿದು ಬಿಡಲಿ
ಮುಗ್ದ ಕೆನ್ನೆಯನು ಸೋಕಿ
ಮೌನಿ ನಾನು ನಿನ್ನೊಲುಮೆಗೆ...
ಅತ್ತು ಬಿಡು ನೀನೊಮ್ಮೆ
ಚೂರಾದ ಹೃದಯವು
ಮತ್ತೊಮ್ಮೆ ಮಿಡಿಯಲಿ
ಮೌನಿ ನಾನು ನಿನ್ನ ಎದೆಬಡಿತಕೆ..
ಅತ್ತು ಬಿಡು ನೀನೊಮ್ಮೆ
ನಿನ್ನ ಕರಗಳ ಬೆಚ್ಚನೆಯ
ಸ್ಪರ್ಶದಲಿ ಬೆರೆವಾಗ
ಮೌನಿ ನಾನು ಬಿಸಿ ಅಪ್ಪುಗೆಯಲಿ
ಅತ್ತು ಬಿಡು ನೀನೊಮ್ಮೆ
ಮತ್ತದೇ ಪಿಸುಮಾತು
ಕಿವಿಯಲ್ಲಿ ಗುನುಗಲಿ
ಮೌನಿ ನಾನು ನಿನ್ನ ದನಿಗೆ...
ಅತ್ತು ಬಿಡು ನೀನೊಮ್ಮೆ
ಸದ್ದು ಮಾಡದೆ ನನ್ನ ಕಣ್ಗಳಲಿ
ಓ ನನ್ನ ಇನಿಯಾ...
ಮೌನಿ ನಾನು...ಅತ್ತು ಬಿಡಲೇ?
ಕಣ್ಣೀರು ಹರಿದು ಬಿಡಲಿ
ಮುಗ್ದ ಕೆನ್ನೆಯನು ಸೋಕಿ
ಮೌನಿ ನಾನು ನಿನ್ನೊಲುಮೆಗೆ...
ಅತ್ತು ಬಿಡು ನೀನೊಮ್ಮೆ
ಚೂರಾದ ಹೃದಯವು
ಮತ್ತೊಮ್ಮೆ ಮಿಡಿಯಲಿ
ಮೌನಿ ನಾನು ನಿನ್ನ ಎದೆಬಡಿತಕೆ..
ಅತ್ತು ಬಿಡು ನೀನೊಮ್ಮೆ
ನಿನ್ನ ಕರಗಳ ಬೆಚ್ಚನೆಯ
ಸ್ಪರ್ಶದಲಿ ಬೆರೆವಾಗ
ಮೌನಿ ನಾನು ಬಿಸಿ ಅಪ್ಪುಗೆಯಲಿ
ಅತ್ತು ಬಿಡು ನೀನೊಮ್ಮೆ
ಮತ್ತದೇ ಪಿಸುಮಾತು
ಕಿವಿಯಲ್ಲಿ ಗುನುಗಲಿ
ಮೌನಿ ನಾನು ನಿನ್ನ ದನಿಗೆ...
ಅತ್ತು ಬಿಡು ನೀನೊಮ್ಮೆ
ಸದ್ದು ಮಾಡದೆ ನನ್ನ ಕಣ್ಗಳಲಿ
ಓ ನನ್ನ ಇನಿಯಾ...
ಮೌನಿ ನಾನು...ಅತ್ತು ಬಿಡಲೇ?
Friday, December 30, 2011
ಮಣ್ಣು
ನಾನು ಸತ್ತ ಮೇಲೆ
ನಿಮ್ಮ ಅಪ್ಪನ ಗೋರಿ ಪಕ್ಕದಲ್ಲೇ
ನನ್ನನ್ನು ಮಣ್ಣು ಮಾಡಿ ಬಿಡಿ
ಎಂದಳಾ ಅಮ್ಮ...
ಅಮ್ಮನ ಇಚ್ಛೆ ನೆರವೇರಿಸಿದರು
ಮಕ್ಕಳು...
ಅಪ್ಪ ಅಮ್ಮ ಒಂದೇ ಕಡೆ
ನಿಶ್ಚಿಂತರಾಗಿ ಮಲಗಿದ್ದರು
ತಮ್ಮ ಗೋರಿಯೊಳಗೆ
ಕಾಲ ಉರುಳಿತು
ಕೊನೆಗೊಂದು ದಿನ
ಮಣ್ಣು ಮಾರಾಟವಾದಾಗ
ಅಮ್ಮ ಮಲಗಿದ್ದ ಮಣ್ಣು ಮಂಗಳೂರಿಗೂ
ಅಪ್ಪ ಮಲಗಿದ್ದ ಮಣ್ಣು ಕಣ್ಣೂರಿಗೂ
ಟಿಪ್ಪರ್ ಲಾರಿ ಮೂಲಕ ಸಾಗಿತ್ತು
ಗೋರಿಗಳು ಹೋಳಾಗಿ
ಕಲ್ಲು ಕೋರೆಯಲ್ಲಿ ಧೂಳು ಹಾರಿತ್ತು
ಕೆಂಪು ಕಲ್ಲುಗಳು
ಒಂದರ ಮೇಲೊಂದು ಏರುತಿತ್ತು.
ನಿಮ್ಮ ಅಪ್ಪನ ಗೋರಿ ಪಕ್ಕದಲ್ಲೇ
ನನ್ನನ್ನು ಮಣ್ಣು ಮಾಡಿ ಬಿಡಿ
ಎಂದಳಾ ಅಮ್ಮ...
ಅಮ್ಮನ ಇಚ್ಛೆ ನೆರವೇರಿಸಿದರು
ಮಕ್ಕಳು...
ಅಪ್ಪ ಅಮ್ಮ ಒಂದೇ ಕಡೆ
ನಿಶ್ಚಿಂತರಾಗಿ ಮಲಗಿದ್ದರು
ತಮ್ಮ ಗೋರಿಯೊಳಗೆ
ಕಾಲ ಉರುಳಿತು
ಕೊನೆಗೊಂದು ದಿನ
ಮಣ್ಣು ಮಾರಾಟವಾದಾಗ
ಅಮ್ಮ ಮಲಗಿದ್ದ ಮಣ್ಣು ಮಂಗಳೂರಿಗೂ
ಅಪ್ಪ ಮಲಗಿದ್ದ ಮಣ್ಣು ಕಣ್ಣೂರಿಗೂ
ಟಿಪ್ಪರ್ ಲಾರಿ ಮೂಲಕ ಸಾಗಿತ್ತು
ಗೋರಿಗಳು ಹೋಳಾಗಿ
ಕಲ್ಲು ಕೋರೆಯಲ್ಲಿ ಧೂಳು ಹಾರಿತ್ತು
ಕೆಂಪು ಕಲ್ಲುಗಳು
ಒಂದರ ಮೇಲೊಂದು ಏರುತಿತ್ತು.
Tuesday, November 8, 2011
ಬೆಂಗ್ಳೂರಲ್ಲಿ 'ಸ್ಲಟ್ ವಾಕ್' ಆವಶ್ಯಕತೆಯಿದೆಯಾ?
ಸಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.
'ಸ್ಲಟ್ ವಾಕ್ ' (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು "ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದು" ಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. 'ಸ್ಲಟ್ ' ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.
ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.
ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಎಲ್ಲಾ ಪ್ರಕರಣಗಳಿಗಿಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಮಹಿಳೆಯ ಪರಿಚಿತರೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ಮಾಹಿತಿಯಲ್ಲಿದೆ. ಅಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಮಹಿಳೆಯರು ತೊಡುವ ಉಡುಗೆ ಮಾತ್ರ ಕಾರಣವೆ?. ಯಾಕೆಂದರೆ ಮೈ ತುಂಬಾ ಬಟ್ಟೆ ಹಾಕಿದ ಹುಡುಗಿಯೂ ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಗುವಿನಿಂದ ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತದೆ. ಪ್ರಾಣಿಗಳನ್ನೂ ಬಿಡದ 'ಕಾಮುಕ' ಮನುಷ್ಯರ ಬಗ್ಗೆ ನಾವು ಕೇಳಿದ್ದೇವೆ. ಹೀಗಿರುವ ಅತ್ಯಾಚಾರಕ್ಕೆ ಇಂತದ್ದೇ ಕಾರಣ ಎಂದು ಹೇಳುವುದಾದರೂ ಹೇಗೆ?
ಇರಲಿ ಬಿಡಿ, ಬೀದಿಯಲ್ಲಿ ಅರ್ಧಂಬರ್ಧ ಡ್ರೆಸ್ ತೊಟ್ಟು ಹುಡುಗಿಯೊಬ್ಬಳು ನಡೆದರೆ ಹುಡುಗರು ನೋಡದೆಯೆ ಇರುತ್ತಾರೆಯೇ? 'ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ' ಎನ್ನುತ್ತಾ ಕೆಲವೊಮ್ಮೆ ಶಿಳ್ಳೆ ಹೊಡೆಯಬಹುದು, ಕಾಮೆಂಟ್ ಮಾಡಬಹುದು ಇನ್ನು ಏನೇನೋ ಅಸಭ್ಯ ವರ್ತನೆ ತೋರಬಹುದು. ಹುಡುಗರ ಈ ವರ್ತನೆಯನ್ನು ಆ ಹೆಣ್ಮಗಳು ಪ್ರಶ್ನಿಸುತ್ತಾಳೆ ಅಂದಿಟ್ಟುಕೊಳ್ಳಿ. ಅದಕ್ಕೆ ಹುಡುಗ ನಿನ್ನನ್ನು ನೋಡುವ ಹಕ್ಕು ನನಗಿದೆ ಅಂತಾ ಉತ್ತರ ಕೊಟ್ಟರೆ ಏನಾಗುತ್ತೆ ಹೇಳಿ?. ಹುಡುಗಿ ಮೈ ತೋರಿಸಿ ನಡೆವ ಹಕ್ಕನ್ನು ಹೊಂದಿದ್ದಾಳೆ ಎಂದಾದರೆ ಹುಡುಗನಿಗೆ ಆಕೆಯನ್ನು ನೋಡುವ ಹಕ್ಕು ಇರುವುದಿಲ್ಲವೇ?
ಇನ್ನು, ಗಂಡಸರು ತನಗೂ ಸ್ವಾತಂತ್ಯವಿದೆ ಎಂದು ಹೇಳಿ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ಓಡಾಡಲಿ. ಮಹಿಳೆಯರ ಗುಂಪಿನ ನಡುವೆ ಬಂದು ಅಂಗಿ ಬಿಚ್ಚಿ ಕುಳಿತುಕೊಳ್ಳಲಿ "ಛೀ..ಯಾವನು ಇವನು ಮಂಡೆ ಸಮ ಇಲ್ಲದವನು" ಎಂದು ಹೆಣ್ಮಕ್ಕಳು ಬೈಯ್ಯದೆ ಇರುತ್ತಾರೆಯೇ? ಆವಾಗ ಗಂಡು ತನಗೆ ಹೇಗೆ ಬೇಕಾದರು ಡ್ರೆಸ್ ಮಾಡುವ, ಬಿಚ್ಚುವ ಅಧಿಕಾರವಿದೆ ಎಂದು ಹೇಳಲಿ ನೋಡೋಣ. ಹೆಣ್ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ? ಒಟ್ಟಿನಲ್ಲಿ ಮಹಿಳೆಯರು ತಮಗಿಚ್ಛೆ ಬಂದಂತೆ ವರ್ತಿಸಲು ಹಕ್ಕುಳ್ಳವರು ಎಂದಾದರೆ ಅದೇ ಹಕ್ಕು ಗಂಡಸಿಗೂ ಅನ್ವಯಿಸುತ್ತದೆ ಅಲ್ಲವೇ?
ಇಂತಿರ್ಪ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಬೇಕಾದರೆ ಮಹಿಳೆಯರು ಅರ್ಧಬಂರ್ಧ ಡ್ರೆಸ್ ಹಾಕಿಕೊಂಡು ಸ್ತ್ರೀವಾದದ ಬಗ್ಗೆ ಬೊಬ್ಬೆ ಹಾಕುವುದು ಬೇಕಾ? ಅದೂ ಬೆಂಗಳೂರಲ್ಲಿ? ಆದಾಗ್ಯೂ, ಈ ಸ್ಲಟ್್ವಾಕ್್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸ್ವೇಚಾಚಾರ ಬಯಸುವ ಮಂದಿ ಅಲ್ಲವೇ? ಶ್ರೀಮಂತ ಕುಟಂಬದ ಇಲ್ಲವೇ ಫ್ಯಾಷನ್ ಲೋಕವನ್ನೇ ಮೆಚ್ಚಿಕೊಂಡಿರುವ ಹೈಫೈ ಎನ್ನುವಂತ ಮಂದಿ ಇಲ್ಲಿ ಹೆಜ್ಜೆ ಹಾಕಬಹುದು. ಸ್ತ್ರೀವಾದವನ್ನು ಪ್ರತಿಪಾದಿಸುವ ಇವರ ಈ ಹೆಜ್ಜೆ ಭಾರತದಲ್ಲಿರುವ ಸಾಮಾನ್ಯ ಹೆಣ್ಣು ಮಗಳ ಸಂಕಷ್ಟವನ್ನು ದೂರ ಮಾಡಬಲ್ಲುದೆ?
ನಮ್ಮ ದೇಶದಲ್ಲಿ ಅತ್ಯಾಚಾರವೊಂದನ್ನು ಬಿಟ್ಟರೆ ಇನ್ನಿತರ ಶೋಷಣೆ, ದೌರ್ಜನ್ಯಗಳು ಕಡಿಮೆ ಅಂತಾ ಹೇಳುವಂತಿಲ್ಲ. ಯಾಕೆಂದರೆ ಮನೆಯಿಂದ ಹಿಡಿದು ಆಫೀಸಿನವರೆಗೂ ಶಾರೀರಿಕ, ಮಾನಸಿಕ ದೌರ್ಜನ್ಯವನ್ನು ಮಹಿಳೆಯೊಬ್ಬಳು ಎದುರಿಸಲೇಬೇಕಾಗುತ್ತದೆ. ವಿಪರ್ಯಾಸ ಎಂದರೆ ಇದರಲ್ಲಿ ಬಹುತೇಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಮನಸ್ಸಲ್ಲೇ ನೊಂದುಕೊಂಡು ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿರುವ ಹೆಣ್ಮಗಳು ಒಂದೆಡೆಯಾದರೆ ಇದರ ವಿರುದ್ಧ ದನಿಯೆತ್ತುವ ಹೆಣ್ಮಕ್ಕಳು ಕಡಿಮೆಯೇ ಎಂದು ಹೇಳಬಹುದು. ಕೆಲವೊಮ್ಮೆ ಹೆಣ್ಮಗಳೊಬ್ಬಳು ಈ ಬಗ್ಗೆ ದನಿಯೆತ್ತಿದ್ದಾಳೆ ಅಂತಾನೆ ಇಟ್ಕೊಳ್ಳಿ, ಅವಳಿಗೆ ಯಾರೂ ಬೆಂಬಲ ನೀಡಲು ಮುಂದಾಗದಿದ್ದರೆ ಆ ಹುಡುಗಿ ಮಾಡುವುದಾದರೂ ಏನು? ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯವೆಸಗುವ ಪ್ರಕರಣಗಳ ಬಗ್ಗೆ ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಒಟ್ಟಿನಲ್ಲಿ ಲಿಂಗಭೇದವಿಲ್ಲದೆ ದೌರ್ಜನ್ಯಗಳು ನಡೆಯುತ್ತಲೇ ಇದೆ.
ಇದಕ್ಕೆಲ್ಲಾ ಕಡಿವಾಣ ಹಾಕಲು ಬಟ್ಟೆ ಬಿಚ್ಚಿ 'ಸ್ಲಟ್ ವಾಕ್' ಮಾಡಬೇಕಾ? ಜಾಗತೀಕರಣದ ಪ್ರಭಾವದಿಂದಾಗಿ ವಿದೇಶೀಯರು ಮಾಡಿದ್ದೆಲ್ಲಾ ನಾವು ನಕಲು ಹೊಡೆಯುತ್ತೇವೆಯೇ ಹೊರತು ಅದು ಭಾರತದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಲಟ್ ವಾಕ್ ಆಯೋಜಕರು ಚಿಂತಿಸಿದ್ದಾರೆಯೇ?
ಓರ್ವ ಹೆಣ್ಣು ಮಗಳಾಗಿಯೇ ಹೇಳುತ್ತಿದ್ದೇನೆ, ಪ್ರಜಾಪ್ರಭುತ್ವವಿರುವ ನಮ್ಮ ನಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಉಡುಗೆ ತೊಟ್ಟು, ಮನಸೋಇಚ್ಛೆ ವರ್ತಿಸಲಿ. ಈ ಸ್ವಾತಂತ್ರ್ಯದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಆದರೆ ಪ್ರಚೋದನಾಕಾರಿಯಾದಂತಹ ಉಡುಗೆಗಳನ್ನು ತೊಟ್ಟು ಕಾಮುಕ ಕಣ್ಣಿಗೆ ಗುರಿಯಾದೆವು ಎಂದು ಅವಲತ್ತುಕೊಳ್ಳಬಾರದು ಅಷ್ಟೇ. ಹೆಣ್ಣು ಯಾವುದೇ ಉಡುಗೆ ಧರಿಸಿದರು ಅದನ್ನು ಚೆನ್ನಾಗಿ ನಿರ್ವಹಿಸಿಕೊಳ್ಳಲು ಆಕೆಗೆ ಗೊತ್ತಿರಬೇಕು. ಮಾತ್ರವಲ್ಲದೆ ತೊಡುವ ಉಡುಗೆ ಸಂದರ್ಭಕ್ಕನುಸಾರವಾಗಿ ಇದ್ದರೇನೆ ಚೆನ್ನ. ಒಂದು ವೇಳೆ ಪುರುಷರನ್ನು ತನ್ನೆಡೆಗೆ ಆಕರ್ಷಿಸಲು ಬಯಸುವಂತಹ ಉಡುಗೆಯನ್ನೇ ಆಕೆ ತೊಡುತ್ತಿದ್ದರೆ, ಆ ಆಕರ್ಷಣೆಯನ್ನು ಎದುರಿಸಲು ಆಕೆ ಸಿದ್ಧಳಾಗಿರಬೇಕು. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎಂಬುದಕ್ಕೂ ಎಲ್ಲೆಯಿದೆ, ಅದು ನಮ್ಮ ಹೊಣೆಗಾರಿಕೆಯೂ ಹೌದು ಎಂಬುದನ್ನು ಮರೆಯಬಾರದು ಅಲ್ವಾ?.
ಚಿತ್ರ ಕೃಪೆ: ಅಂತರ್ಜಾಲ
'ಸ್ಲಟ್ ವಾಕ್ ' (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು "ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದು" ಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. 'ಸ್ಲಟ್ ' ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.
ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.
ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಎಲ್ಲಾ ಪ್ರಕರಣಗಳಿಗಿಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಮಹಿಳೆಯ ಪರಿಚಿತರೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ಮಾಹಿತಿಯಲ್ಲಿದೆ. ಅಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಮಹಿಳೆಯರು ತೊಡುವ ಉಡುಗೆ ಮಾತ್ರ ಕಾರಣವೆ?. ಯಾಕೆಂದರೆ ಮೈ ತುಂಬಾ ಬಟ್ಟೆ ಹಾಕಿದ ಹುಡುಗಿಯೂ ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಗುವಿನಿಂದ ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತದೆ. ಪ್ರಾಣಿಗಳನ್ನೂ ಬಿಡದ 'ಕಾಮುಕ' ಮನುಷ್ಯರ ಬಗ್ಗೆ ನಾವು ಕೇಳಿದ್ದೇವೆ. ಹೀಗಿರುವ ಅತ್ಯಾಚಾರಕ್ಕೆ ಇಂತದ್ದೇ ಕಾರಣ ಎಂದು ಹೇಳುವುದಾದರೂ ಹೇಗೆ?
ಇರಲಿ ಬಿಡಿ, ಬೀದಿಯಲ್ಲಿ ಅರ್ಧಂಬರ್ಧ ಡ್ರೆಸ್ ತೊಟ್ಟು ಹುಡುಗಿಯೊಬ್ಬಳು ನಡೆದರೆ ಹುಡುಗರು ನೋಡದೆಯೆ ಇರುತ್ತಾರೆಯೇ? 'ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ' ಎನ್ನುತ್ತಾ ಕೆಲವೊಮ್ಮೆ ಶಿಳ್ಳೆ ಹೊಡೆಯಬಹುದು, ಕಾಮೆಂಟ್ ಮಾಡಬಹುದು ಇನ್ನು ಏನೇನೋ ಅಸಭ್ಯ ವರ್ತನೆ ತೋರಬಹುದು. ಹುಡುಗರ ಈ ವರ್ತನೆಯನ್ನು ಆ ಹೆಣ್ಮಗಳು ಪ್ರಶ್ನಿಸುತ್ತಾಳೆ ಅಂದಿಟ್ಟುಕೊಳ್ಳಿ. ಅದಕ್ಕೆ ಹುಡುಗ ನಿನ್ನನ್ನು ನೋಡುವ ಹಕ್ಕು ನನಗಿದೆ ಅಂತಾ ಉತ್ತರ ಕೊಟ್ಟರೆ ಏನಾಗುತ್ತೆ ಹೇಳಿ?. ಹುಡುಗಿ ಮೈ ತೋರಿಸಿ ನಡೆವ ಹಕ್ಕನ್ನು ಹೊಂದಿದ್ದಾಳೆ ಎಂದಾದರೆ ಹುಡುಗನಿಗೆ ಆಕೆಯನ್ನು ನೋಡುವ ಹಕ್ಕು ಇರುವುದಿಲ್ಲವೇ?
ಇನ್ನು, ಗಂಡಸರು ತನಗೂ ಸ್ವಾತಂತ್ಯವಿದೆ ಎಂದು ಹೇಳಿ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ಓಡಾಡಲಿ. ಮಹಿಳೆಯರ ಗುಂಪಿನ ನಡುವೆ ಬಂದು ಅಂಗಿ ಬಿಚ್ಚಿ ಕುಳಿತುಕೊಳ್ಳಲಿ "ಛೀ..ಯಾವನು ಇವನು ಮಂಡೆ ಸಮ ಇಲ್ಲದವನು" ಎಂದು ಹೆಣ್ಮಕ್ಕಳು ಬೈಯ್ಯದೆ ಇರುತ್ತಾರೆಯೇ? ಆವಾಗ ಗಂಡು ತನಗೆ ಹೇಗೆ ಬೇಕಾದರು ಡ್ರೆಸ್ ಮಾಡುವ, ಬಿಚ್ಚುವ ಅಧಿಕಾರವಿದೆ ಎಂದು ಹೇಳಲಿ ನೋಡೋಣ. ಹೆಣ್ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ? ಒಟ್ಟಿನಲ್ಲಿ ಮಹಿಳೆಯರು ತಮಗಿಚ್ಛೆ ಬಂದಂತೆ ವರ್ತಿಸಲು ಹಕ್ಕುಳ್ಳವರು ಎಂದಾದರೆ ಅದೇ ಹಕ್ಕು ಗಂಡಸಿಗೂ ಅನ್ವಯಿಸುತ್ತದೆ ಅಲ್ಲವೇ?
ಇಂತಿರ್ಪ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಬೇಕಾದರೆ ಮಹಿಳೆಯರು ಅರ್ಧಬಂರ್ಧ ಡ್ರೆಸ್ ಹಾಕಿಕೊಂಡು ಸ್ತ್ರೀವಾದದ ಬಗ್ಗೆ ಬೊಬ್ಬೆ ಹಾಕುವುದು ಬೇಕಾ? ಅದೂ ಬೆಂಗಳೂರಲ್ಲಿ? ಆದಾಗ್ಯೂ, ಈ ಸ್ಲಟ್್ವಾಕ್್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸ್ವೇಚಾಚಾರ ಬಯಸುವ ಮಂದಿ ಅಲ್ಲವೇ? ಶ್ರೀಮಂತ ಕುಟಂಬದ ಇಲ್ಲವೇ ಫ್ಯಾಷನ್ ಲೋಕವನ್ನೇ ಮೆಚ್ಚಿಕೊಂಡಿರುವ ಹೈಫೈ ಎನ್ನುವಂತ ಮಂದಿ ಇಲ್ಲಿ ಹೆಜ್ಜೆ ಹಾಕಬಹುದು. ಸ್ತ್ರೀವಾದವನ್ನು ಪ್ರತಿಪಾದಿಸುವ ಇವರ ಈ ಹೆಜ್ಜೆ ಭಾರತದಲ್ಲಿರುವ ಸಾಮಾನ್ಯ ಹೆಣ್ಣು ಮಗಳ ಸಂಕಷ್ಟವನ್ನು ದೂರ ಮಾಡಬಲ್ಲುದೆ?
ನಮ್ಮ ದೇಶದಲ್ಲಿ ಅತ್ಯಾಚಾರವೊಂದನ್ನು ಬಿಟ್ಟರೆ ಇನ್ನಿತರ ಶೋಷಣೆ, ದೌರ್ಜನ್ಯಗಳು ಕಡಿಮೆ ಅಂತಾ ಹೇಳುವಂತಿಲ್ಲ. ಯಾಕೆಂದರೆ ಮನೆಯಿಂದ ಹಿಡಿದು ಆಫೀಸಿನವರೆಗೂ ಶಾರೀರಿಕ, ಮಾನಸಿಕ ದೌರ್ಜನ್ಯವನ್ನು ಮಹಿಳೆಯೊಬ್ಬಳು ಎದುರಿಸಲೇಬೇಕಾಗುತ್ತದೆ. ವಿಪರ್ಯಾಸ ಎಂದರೆ ಇದರಲ್ಲಿ ಬಹುತೇಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಮನಸ್ಸಲ್ಲೇ ನೊಂದುಕೊಂಡು ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿರುವ ಹೆಣ್ಮಗಳು ಒಂದೆಡೆಯಾದರೆ ಇದರ ವಿರುದ್ಧ ದನಿಯೆತ್ತುವ ಹೆಣ್ಮಕ್ಕಳು ಕಡಿಮೆಯೇ ಎಂದು ಹೇಳಬಹುದು. ಕೆಲವೊಮ್ಮೆ ಹೆಣ್ಮಗಳೊಬ್ಬಳು ಈ ಬಗ್ಗೆ ದನಿಯೆತ್ತಿದ್ದಾಳೆ ಅಂತಾನೆ ಇಟ್ಕೊಳ್ಳಿ, ಅವಳಿಗೆ ಯಾರೂ ಬೆಂಬಲ ನೀಡಲು ಮುಂದಾಗದಿದ್ದರೆ ಆ ಹುಡುಗಿ ಮಾಡುವುದಾದರೂ ಏನು? ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯವೆಸಗುವ ಪ್ರಕರಣಗಳ ಬಗ್ಗೆ ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಒಟ್ಟಿನಲ್ಲಿ ಲಿಂಗಭೇದವಿಲ್ಲದೆ ದೌರ್ಜನ್ಯಗಳು ನಡೆಯುತ್ತಲೇ ಇದೆ.
ಇದಕ್ಕೆಲ್ಲಾ ಕಡಿವಾಣ ಹಾಕಲು ಬಟ್ಟೆ ಬಿಚ್ಚಿ 'ಸ್ಲಟ್ ವಾಕ್' ಮಾಡಬೇಕಾ? ಜಾಗತೀಕರಣದ ಪ್ರಭಾವದಿಂದಾಗಿ ವಿದೇಶೀಯರು ಮಾಡಿದ್ದೆಲ್ಲಾ ನಾವು ನಕಲು ಹೊಡೆಯುತ್ತೇವೆಯೇ ಹೊರತು ಅದು ಭಾರತದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಲಟ್ ವಾಕ್ ಆಯೋಜಕರು ಚಿಂತಿಸಿದ್ದಾರೆಯೇ?
ಓರ್ವ ಹೆಣ್ಣು ಮಗಳಾಗಿಯೇ ಹೇಳುತ್ತಿದ್ದೇನೆ, ಪ್ರಜಾಪ್ರಭುತ್ವವಿರುವ ನಮ್ಮ ನಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಉಡುಗೆ ತೊಟ್ಟು, ಮನಸೋಇಚ್ಛೆ ವರ್ತಿಸಲಿ. ಈ ಸ್ವಾತಂತ್ರ್ಯದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಆದರೆ ಪ್ರಚೋದನಾಕಾರಿಯಾದಂತಹ ಉಡುಗೆಗಳನ್ನು ತೊಟ್ಟು ಕಾಮುಕ ಕಣ್ಣಿಗೆ ಗುರಿಯಾದೆವು ಎಂದು ಅವಲತ್ತುಕೊಳ್ಳಬಾರದು ಅಷ್ಟೇ. ಹೆಣ್ಣು ಯಾವುದೇ ಉಡುಗೆ ಧರಿಸಿದರು ಅದನ್ನು ಚೆನ್ನಾಗಿ ನಿರ್ವಹಿಸಿಕೊಳ್ಳಲು ಆಕೆಗೆ ಗೊತ್ತಿರಬೇಕು. ಮಾತ್ರವಲ್ಲದೆ ತೊಡುವ ಉಡುಗೆ ಸಂದರ್ಭಕ್ಕನುಸಾರವಾಗಿ ಇದ್ದರೇನೆ ಚೆನ್ನ. ಒಂದು ವೇಳೆ ಪುರುಷರನ್ನು ತನ್ನೆಡೆಗೆ ಆಕರ್ಷಿಸಲು ಬಯಸುವಂತಹ ಉಡುಗೆಯನ್ನೇ ಆಕೆ ತೊಡುತ್ತಿದ್ದರೆ, ಆ ಆಕರ್ಷಣೆಯನ್ನು ಎದುರಿಸಲು ಆಕೆ ಸಿದ್ಧಳಾಗಿರಬೇಕು. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎಂಬುದಕ್ಕೂ ಎಲ್ಲೆಯಿದೆ, ಅದು ನಮ್ಮ ಹೊಣೆಗಾರಿಕೆಯೂ ಹೌದು ಎಂಬುದನ್ನು ಮರೆಯಬಾರದು ಅಲ್ವಾ?.
ಚಿತ್ರ ಕೃಪೆ: ಅಂತರ್ಜಾಲ
Sunday, October 23, 2011
ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?
ಐಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ ಓರ್ವ ಹೆಣ್ಣು ಮಗಳು. ಮಿಸ್್ವರ್ಲ್ಡ್ ಪಟ್ಟ ಧರಿಸಿ, ಬಾಲಿವುಡ್್ನಲ್ಲಿ ಮಿಂಚಿ, ಹಾಲಿವುಡ್್ಗೂ ಹಾರಿ, ಬಿಗ್ ಬಿ ಬಚ್ಚನ್್ನ ಪುತ್ರ ಅಭಿಷೇಕ್ ಬಚ್ಚನ್್ರನ್ನು ವರಿಸಿದ ಕರುನಾಡ ಕುವರಿ. ಆಕೆ ಸೀನಿದ್ದು, ಕೆಮ್ಮಿದ್ದು, ನಕ್ಕಿದ್ದು ಎಲ್ಲವೂ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್! ಯಾಕೆಂದರೆ ಆಕೆ ಸೆಲೆಬ್ರಿಟಿ. ಅದೇ ವೇಳೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಹೆರಿಗೆಯ ವೇಳೆ ಸಾವನ್ನಪ್ಪುತ್ತಿದ್ದರೂ, ಅದೊಂದು ಚಿಕ್ಕ ಸುದ್ದಿಯಾಗಿ ಮಾರನೇ ದಿನಕ್ಕೆ ರದ್ದಿಯಾಗಿ ಬಿಡುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್್ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್್ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.
ಅಂದು ನವಂಬರ್ 2, 2000 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬ ಸಾಮಾಜಿಕ ಕಾರ್ಯಕರ್ತೆ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕರ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.
ನವಂಬರ್ 2 ನೇ ತಾರೀಖು ಗುರುವಾರ. ಚಿಕ್ಕಂದಿನಿಂದಲೂ ಪ್ರತೀ ಗುರುವಾರ ಉಪವಾಸ ಕೈಗೊಳ್ಳುತ್ತಿದ್ದ ಶರ್ಮಿಳಾ ಮಾರನೇ ದಿನ ಶುಕ್ರವಾರ ರಾತ್ರಿ ಭೋಜನ ಮುಗಿಸಿ 2000 ನವಂಬರ್ 4ರಂದು ಉಪವಾಸ ಸತ್ಯಾಗ್ರಹ ಆರಂಭಿದ್ದರು. ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಅಂದಿನಿಂದ ಇಂದಿನ ವರೆಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಇಡೀ ಮಣಿಪುರ ಆಕೆಯ ಬೆಂಬಲಕ್ಕಿದೆ. ಹಲವಾರು ಪ್ರಶಸ್ತಿಗಳು ದಕ್ಕಿವೆ. ಏತನ್ಮಧ್ಯೆ, 11 ವರ್ಷಗಳ ಉಪವಾಸದಿಂದ ಶರ್ಮಿಳಾರ ದೇಹ ಸೊರಗಿದೆ, ಆದರೆ ನಿರ್ಧಾರ ಇನ್ನೂ ಅಚಲವಾಗಿದೆ.
ತನಗೆ ನ್ಯಾಯ ಸಿಗುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶರ್ಮಿಳಾ ತನ್ನ ಗಟ್ಟಿ ನಿಲುವು ತೆಗೆದು ಕೊಂಡಾಗ ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈಕೆಗೆ ಆಸ್ಪತ್ರೆಯೇ ಸೆರೆಮನೆ. ಪ್ರತೀ ಹದಿನೈದು ದಿನಕ್ಕೊಮ್ಮೆ ಶರ್ಮಿಳಾರನ್ನು ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಮೂಗಿಗೆ ನಳಿಕೆ ಸಿಕ್ಕಿಸಿಕೊಂಡು 'ನ್ಯಾಯ ಬೇಕೇ ಬೇಕು' ಎಂದು ಹಠ ಹಿಡಿದು ಕುಳಿತಿರುವ ಈ ಹೆಣ್ಮಗಳ ಧೈರ್ಯ ಮೆಚ್ಚಲೇಬೇಕು.
ಮಣಿಪುರದ 'ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಶರ್ಮಿಳಾ ದೀರ್ಘಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಪಂಚದ ಏಕೈಕ ವ್ಯಕ್ತಿ. ಸೆರೆಮನೆಯಲ್ಲಿ ಯೋಗಾಭ್ಯಾಸ, ಓದು ಹಾಗೂ ಕವಿತೆ ರಚನೆ ಮೂಲಕ ದಿನದೂಡುತ್ತಿರುವ ಶರ್ಮಿಳಾರಿಗೆ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲೂ ನಿರಾಕರಿಸಲಾಗಿದೆ. ತನ್ನ ಹೋರಾಟಕ್ಕೆ ಜಯ ಲಭಿಸಿದ ನಂತರವೇ ಪ್ರಿಯತಮ ಡೆಸ್ಮಂಡ್ ಕುಟ್ಹಿನೋ ಜತೆ ವಿವಾಹವಾಗುವ ನಿರ್ಧಾರ ಈಕೆಯದ್ದು. ಶರ್ಮಿಳಾ ತನ್ನ ಪ್ರಿಯತಮನನ್ನು ಭೇಟಿಯಾದದ್ದು ಕೇವಲ ಒಂದೇ ಒಂದು ಬಾರಿ. ಇವರ ನಡುವೆ ಇರುವುದು ಕೇವಲ ಪತ್ರ ವ್ಯವಹಾರವಷ್ಟೇ. ಅಭಿಮಾನಿಗಳು ಕಳುಹಿಸಿಕೊಡುವ ಪುಸ್ತಕವೇ ಬಂಧೀಖಾನೆಯಲ್ಲಿ ಈಕೆಯ ಸಂಗಾತಿ.
"ಮರಣಕ್ಕೆ ನಾನು ಅಂಜಲಾರೆ. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಾನು. ನನ್ನ ಹೋರಾಟಕ್ಕೆ ಉಪವಾಸ ಸತ್ಯಾಗ್ರಹವಲ್ಲದೆ ಬೇರೆ ಮಾರ್ಗವೇ ಇಲ್ಲ. ನನಗೂ ಇತರರಂತೆ ಬದುಕುವ ಹಂಬಲವಿದೆ" ಎಂದು ಹೇಳುವ ಶರ್ಮಿಳಾರ ಅಂತರಂಗದ ಮಾತಿನಲ್ಲಿ ನೋವಿದೆ. ದೇವರು ನನ್ನ ಹೋರಾಟಕ್ಕೆ ಶಕ್ತಿ ನೀಡುತ್ತಾನೆ. ಒಂದಲ್ಲ ಒಂದು ದಿನ ನನ್ನ ಜೀವನದಲ್ಲೂ ಸಂತೋಷದ ದಿನಗಳು ಬರಬಹುದು ಎಂಬ ಆಶಾವಾದ, ಗಾಂಧೀಜಿಯವರ ತತ್ವದಲ್ಲಿರುವ ಬಲವಾದ ನಂಬಿಕೆ ಈಕೆಯನ್ನು ಧೃತಿಗೆಡದಂತೆ ಕಾಪಾಡಿಕೊಂಡು ಬಂದಿದೆ.
ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು 11 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣುಮಗಳ ಯೌವನ, ಹೋರಾಟದಲ್ಲೇ ಸವೆದು ಹೋಗುತ್ತಿದೆ. ಆಕೆಗೂ ಒಂದು ಸುಂದರವಾದ ಬದುಕು ಇದೆ. ಎಲ್ಲಾ ಹೆಣ್ಮಕ್ಕಳಂತೆ ಮದುವೆಯಾಗಿ, ಸಂಸಾರ ನಡೆಸಿ ಬಾಳಬೇಕು ಎಂಬ ಕನಸಿದೆ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಜಯಗಳಿಸಲೇ ಬೇಕು ಎಂದು ಮರಣಕ್ಕೂ ಅಂಜದೆ, ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರ ದನಿ ಯಾರಿಗೂ ಕೇಳಿಸುತ್ತಿಲ್ಲವೇ? ಅಧಿಕಾರ ಮದದಿಂದ ಕಣ್ಣು ಮಂಜಾಗಿರುವ ನಮ್ಮ ರಾಜಕೀಯ ನಾಯಕರಿಗೆ ಈಕೆಯ ಹೋರಾಟ ಕಾಣಿಸುತ್ತಿಲ್ಲವೇ?
ಮುಂಬರುವ ನವಂಬರ್ 4ನೇ ತಾರೀಖಿಗೆ ಶರ್ಮಿಳಾರ ಅಮರಣ ಉಪವಾಸ ಸತ್ಯಾಗ್ರಹಕ್ಕೆ 11 ವರ್ಷ ಪೂರ್ತಿಯಾಗುತ್ತದೆ. ಕಳೆದ 11 ವರ್ಷಗಳಿಂದ ಶರ್ಮಿಳಾ ಅನುಭವಿಸಿದ ನೋವು ಯಾರಿಗಾದರೂ ಅರ್ಥವಾಗುವುದೇ? ಶರ್ಮಿಳಾರ ಉಪವಾಸ ಸುಖಾಂತ್ಯ ಕಾಣುವುದೇ? ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್್ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್್ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.
ಅಂದು ನವಂಬರ್ 2, 2000 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬ ಸಾಮಾಜಿಕ ಕಾರ್ಯಕರ್ತೆ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕರ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.
ನವಂಬರ್ 2 ನೇ ತಾರೀಖು ಗುರುವಾರ. ಚಿಕ್ಕಂದಿನಿಂದಲೂ ಪ್ರತೀ ಗುರುವಾರ ಉಪವಾಸ ಕೈಗೊಳ್ಳುತ್ತಿದ್ದ ಶರ್ಮಿಳಾ ಮಾರನೇ ದಿನ ಶುಕ್ರವಾರ ರಾತ್ರಿ ಭೋಜನ ಮುಗಿಸಿ 2000 ನವಂಬರ್ 4ರಂದು ಉಪವಾಸ ಸತ್ಯಾಗ್ರಹ ಆರಂಭಿದ್ದರು. ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಅಂದಿನಿಂದ ಇಂದಿನ ವರೆಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಇಡೀ ಮಣಿಪುರ ಆಕೆಯ ಬೆಂಬಲಕ್ಕಿದೆ. ಹಲವಾರು ಪ್ರಶಸ್ತಿಗಳು ದಕ್ಕಿವೆ. ಏತನ್ಮಧ್ಯೆ, 11 ವರ್ಷಗಳ ಉಪವಾಸದಿಂದ ಶರ್ಮಿಳಾರ ದೇಹ ಸೊರಗಿದೆ, ಆದರೆ ನಿರ್ಧಾರ ಇನ್ನೂ ಅಚಲವಾಗಿದೆ.
ತನಗೆ ನ್ಯಾಯ ಸಿಗುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶರ್ಮಿಳಾ ತನ್ನ ಗಟ್ಟಿ ನಿಲುವು ತೆಗೆದು ಕೊಂಡಾಗ ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈಕೆಗೆ ಆಸ್ಪತ್ರೆಯೇ ಸೆರೆಮನೆ. ಪ್ರತೀ ಹದಿನೈದು ದಿನಕ್ಕೊಮ್ಮೆ ಶರ್ಮಿಳಾರನ್ನು ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಮೂಗಿಗೆ ನಳಿಕೆ ಸಿಕ್ಕಿಸಿಕೊಂಡು 'ನ್ಯಾಯ ಬೇಕೇ ಬೇಕು' ಎಂದು ಹಠ ಹಿಡಿದು ಕುಳಿತಿರುವ ಈ ಹೆಣ್ಮಗಳ ಧೈರ್ಯ ಮೆಚ್ಚಲೇಬೇಕು.
ಮಣಿಪುರದ 'ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಶರ್ಮಿಳಾ ದೀರ್ಘಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಪಂಚದ ಏಕೈಕ ವ್ಯಕ್ತಿ. ಸೆರೆಮನೆಯಲ್ಲಿ ಯೋಗಾಭ್ಯಾಸ, ಓದು ಹಾಗೂ ಕವಿತೆ ರಚನೆ ಮೂಲಕ ದಿನದೂಡುತ್ತಿರುವ ಶರ್ಮಿಳಾರಿಗೆ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲೂ ನಿರಾಕರಿಸಲಾಗಿದೆ. ತನ್ನ ಹೋರಾಟಕ್ಕೆ ಜಯ ಲಭಿಸಿದ ನಂತರವೇ ಪ್ರಿಯತಮ ಡೆಸ್ಮಂಡ್ ಕುಟ್ಹಿನೋ ಜತೆ ವಿವಾಹವಾಗುವ ನಿರ್ಧಾರ ಈಕೆಯದ್ದು. ಶರ್ಮಿಳಾ ತನ್ನ ಪ್ರಿಯತಮನನ್ನು ಭೇಟಿಯಾದದ್ದು ಕೇವಲ ಒಂದೇ ಒಂದು ಬಾರಿ. ಇವರ ನಡುವೆ ಇರುವುದು ಕೇವಲ ಪತ್ರ ವ್ಯವಹಾರವಷ್ಟೇ. ಅಭಿಮಾನಿಗಳು ಕಳುಹಿಸಿಕೊಡುವ ಪುಸ್ತಕವೇ ಬಂಧೀಖಾನೆಯಲ್ಲಿ ಈಕೆಯ ಸಂಗಾತಿ.
"ಮರಣಕ್ಕೆ ನಾನು ಅಂಜಲಾರೆ. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಾನು. ನನ್ನ ಹೋರಾಟಕ್ಕೆ ಉಪವಾಸ ಸತ್ಯಾಗ್ರಹವಲ್ಲದೆ ಬೇರೆ ಮಾರ್ಗವೇ ಇಲ್ಲ. ನನಗೂ ಇತರರಂತೆ ಬದುಕುವ ಹಂಬಲವಿದೆ" ಎಂದು ಹೇಳುವ ಶರ್ಮಿಳಾರ ಅಂತರಂಗದ ಮಾತಿನಲ್ಲಿ ನೋವಿದೆ. ದೇವರು ನನ್ನ ಹೋರಾಟಕ್ಕೆ ಶಕ್ತಿ ನೀಡುತ್ತಾನೆ. ಒಂದಲ್ಲ ಒಂದು ದಿನ ನನ್ನ ಜೀವನದಲ್ಲೂ ಸಂತೋಷದ ದಿನಗಳು ಬರಬಹುದು ಎಂಬ ಆಶಾವಾದ, ಗಾಂಧೀಜಿಯವರ ತತ್ವದಲ್ಲಿರುವ ಬಲವಾದ ನಂಬಿಕೆ ಈಕೆಯನ್ನು ಧೃತಿಗೆಡದಂತೆ ಕಾಪಾಡಿಕೊಂಡು ಬಂದಿದೆ.
ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು 11 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣುಮಗಳ ಯೌವನ, ಹೋರಾಟದಲ್ಲೇ ಸವೆದು ಹೋಗುತ್ತಿದೆ. ಆಕೆಗೂ ಒಂದು ಸುಂದರವಾದ ಬದುಕು ಇದೆ. ಎಲ್ಲಾ ಹೆಣ್ಮಕ್ಕಳಂತೆ ಮದುವೆಯಾಗಿ, ಸಂಸಾರ ನಡೆಸಿ ಬಾಳಬೇಕು ಎಂಬ ಕನಸಿದೆ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಜಯಗಳಿಸಲೇ ಬೇಕು ಎಂದು ಮರಣಕ್ಕೂ ಅಂಜದೆ, ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರ ದನಿ ಯಾರಿಗೂ ಕೇಳಿಸುತ್ತಿಲ್ಲವೇ? ಅಧಿಕಾರ ಮದದಿಂದ ಕಣ್ಣು ಮಂಜಾಗಿರುವ ನಮ್ಮ ರಾಜಕೀಯ ನಾಯಕರಿಗೆ ಈಕೆಯ ಹೋರಾಟ ಕಾಣಿಸುತ್ತಿಲ್ಲವೇ?
ಮುಂಬರುವ ನವಂಬರ್ 4ನೇ ತಾರೀಖಿಗೆ ಶರ್ಮಿಳಾರ ಅಮರಣ ಉಪವಾಸ ಸತ್ಯಾಗ್ರಹಕ್ಕೆ 11 ವರ್ಷ ಪೂರ್ತಿಯಾಗುತ್ತದೆ. ಕಳೆದ 11 ವರ್ಷಗಳಿಂದ ಶರ್ಮಿಳಾ ಅನುಭವಿಸಿದ ನೋವು ಯಾರಿಗಾದರೂ ಅರ್ಥವಾಗುವುದೇ? ಶರ್ಮಿಳಾರ ಉಪವಾಸ ಸುಖಾಂತ್ಯ ಕಾಣುವುದೇ? ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.
Labels:
ಅಮರಣ ಉಪವಾಸ ಸತ್ಯಾಗ್ರಹ,
ಇರೋಂ ಚಾನು ಶರ್ಮಿಳಾ,
ಐಶ್ವರ್ಯಾ ರೈ,
ನವಂಬರ್
Friday, September 23, 2011
"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ
ಚೆಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ ಮಲಯಾಳ ಮನೋರಮಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ಬರೆಯುತ್ತಿದ್ದೇನೆ.
ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ.
"ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡುವೆ 'ಹಣ' ನೀಡಲೇ ಬೇಕಾಗಿ ಬಂದ ಪರಿಸ್ಥಿತಿ ನಮ್ಮದಾದರೆ ಇಲ್ಲಿ 'ಅವರನ್ನು' ಕೇಳುವವರೇ ಇಲ್ಲ!
ಬತ್ತೇರಿಯಿಂದ ಒಂದೂವರೆ ಗಂಟೆ ಪ್ರಯಾಣಿಸಿದರೆ ಗುಂಡ್ಲುಪೇಟೆಗೆ ತಲುಪಬಹುದು. ಗಡಿ ಪ್ರದೇಶದಲ್ಲಿ ಮೊದಲು ಸಿಗುವುದೇ ಕೇರಳ ಚೆಕ್ ಪೋಸ್ಟ್. ನಂತರ ಆರ್ ಟಿ ಓ ಚೆಕ್ ಪೋಸ್ಟ್. ಇದಾದ ನಂತರ ಸಿಗುವ ಕನಾ೯ಟಕ ಚೆಕ್ ಪೋಸ್ಟ್ ದಾಟಬೇಕಾದರೆ 'ಮಾಮೂಲು' ನೀಡಲೇಬೇಕು.
ಲೊಕೇಶನ್ ನಿಂದ ಕಾರಿನಲ್ಲಿ ಮರಳುತ್ತಿದ್ದರೆ ನನ್ನಲ್ಲಿ ಅವರು ಹಣ ಕೇಳಲಿಲ್ಲ. ಆದರೆ ಇನ್ನಿತರ ವಾಹನ ಚಾಲಕರಲ್ಲಿ ಅವರು ದುಡ್ಡು ಇಸ್ಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ದಿನ ನಾವು ಹಣ ನೀಡಲು ನಿರಾಕರಿಸಿದಾಗ ಶೂಟಿಂಗ್ ಗಾಗಿ ನಾವು ಒಯ್ಯುತ್ತಿದ್ದ ಪೊಲೀಸ್ ಯುನಿಫಾಮ್೯, ಲಾಠಿ, ಟೋಪಿ ಎಲ್ಲವನ್ನೂ ತೆಗೆದುಕೊಂಡು ಹೋದರು. ಹಣ ಕೊಟ್ಟ ನಂತರವೇ ಅವರು ನಮಗದನ್ನು ಹಿಂತಿರುಗಿಸಿದ್ದು.
ಈ ರೀತಿ ಮಾಮೂಲು ಕೇಳುವ ಕನಾ೯ಟಕ ಪೊಲೀಸರ 'ಧನದಾಹ'ಕ್ಕೆ ಬಲಿಯುವಾಗುವವರಲ್ಲಿ ಕೇರಳಿಗರೇ ಹೆಚ್ಚು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಿಳಿಯದಾಗಿದೆ.
ಈ ಬಗ್ಗೆ ಕೇರಳ ಮತ್ತು ಕನಾ೯ಟಕ ಸಕಾ೯ರಗಳು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ, ಕೇರಳ ಸಕಾ೯ರ ಇದನ್ನು ಕನಾ೯ಟಕ ಸಕಾ೯ರದ ಗಮನಕ್ಕೆ ತರಬೇಕು. ದೆಹಲಿಯಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವಾಗ ನಮ್ಮ ಸಿನಿಮಾ ಟ್ರೂಪ್ 'ಮಾಮೂಲು' ನೀಡಿ ಗಡಿ ದಾಟುತ್ತಿರುವುದು ಖೇದಕರ.
ಪ್ರಿಯ ಓದುಗ, ಇದಿಷ್ಟು ಪೃಥ್ವಿರಾಜ್ ರ ಅನುಭವದ ಮಾತುಗಳು.
ಇದೇ ರೀತಿ ನೀವೂ ರಾಜ್ಯದ ಗಡಿ ದಾಟುವಾಗ ಚೆಕ್ ಪೋಸ್ಟ್ ಗಳಲ್ಲಿ 'ಮಾಮೂಲು' ಕೊಟ್ಟಿರುತ್ತೀರಿ ಅಲ್ಲವೇ? ನಿಮಗೂ ಈ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ಈ ಅನ್ಯಾಯದ ಬಗ್ಗೆ ದನಿಯೆತ್ತಿ. ಈ ಮೂಲಕ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು ನೀವೂ ಸಹಕರಿಸಿ.
ಗುಂಡ್ಲುಪೇಟೆಯಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಿನಿಮಾ ಟ್ರೂಪ್ ಸೆರೆಹಿಡಿದಿದೆ. ಈ ಸುದ್ದಿ ಕನಾ೯ಟಕ ಸಕಾ೯ರದ ಗಮನಕ್ಕೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಶಿಸೋಣ.
ಕೃಪೆ : ಮನೋರಮಾ ಆನ್ಲೈನ್
ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ.
"ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡುವೆ 'ಹಣ' ನೀಡಲೇ ಬೇಕಾಗಿ ಬಂದ ಪರಿಸ್ಥಿತಿ ನಮ್ಮದಾದರೆ ಇಲ್ಲಿ 'ಅವರನ್ನು' ಕೇಳುವವರೇ ಇಲ್ಲ!
ಬತ್ತೇರಿಯಿಂದ ಒಂದೂವರೆ ಗಂಟೆ ಪ್ರಯಾಣಿಸಿದರೆ ಗುಂಡ್ಲುಪೇಟೆಗೆ ತಲುಪಬಹುದು. ಗಡಿ ಪ್ರದೇಶದಲ್ಲಿ ಮೊದಲು ಸಿಗುವುದೇ ಕೇರಳ ಚೆಕ್ ಪೋಸ್ಟ್. ನಂತರ ಆರ್ ಟಿ ಓ ಚೆಕ್ ಪೋಸ್ಟ್. ಇದಾದ ನಂತರ ಸಿಗುವ ಕನಾ೯ಟಕ ಚೆಕ್ ಪೋಸ್ಟ್ ದಾಟಬೇಕಾದರೆ 'ಮಾಮೂಲು' ನೀಡಲೇಬೇಕು.
ಲೊಕೇಶನ್ ನಿಂದ ಕಾರಿನಲ್ಲಿ ಮರಳುತ್ತಿದ್ದರೆ ನನ್ನಲ್ಲಿ ಅವರು ಹಣ ಕೇಳಲಿಲ್ಲ. ಆದರೆ ಇನ್ನಿತರ ವಾಹನ ಚಾಲಕರಲ್ಲಿ ಅವರು ದುಡ್ಡು ಇಸ್ಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ದಿನ ನಾವು ಹಣ ನೀಡಲು ನಿರಾಕರಿಸಿದಾಗ ಶೂಟಿಂಗ್ ಗಾಗಿ ನಾವು ಒಯ್ಯುತ್ತಿದ್ದ ಪೊಲೀಸ್ ಯುನಿಫಾಮ್೯, ಲಾಠಿ, ಟೋಪಿ ಎಲ್ಲವನ್ನೂ ತೆಗೆದುಕೊಂಡು ಹೋದರು. ಹಣ ಕೊಟ್ಟ ನಂತರವೇ ಅವರು ನಮಗದನ್ನು ಹಿಂತಿರುಗಿಸಿದ್ದು.
ಈ ರೀತಿ ಮಾಮೂಲು ಕೇಳುವ ಕನಾ೯ಟಕ ಪೊಲೀಸರ 'ಧನದಾಹ'ಕ್ಕೆ ಬಲಿಯುವಾಗುವವರಲ್ಲಿ ಕೇರಳಿಗರೇ ಹೆಚ್ಚು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಿಳಿಯದಾಗಿದೆ.
ಈ ಬಗ್ಗೆ ಕೇರಳ ಮತ್ತು ಕನಾ೯ಟಕ ಸಕಾ೯ರಗಳು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ, ಕೇರಳ ಸಕಾ೯ರ ಇದನ್ನು ಕನಾ೯ಟಕ ಸಕಾ೯ರದ ಗಮನಕ್ಕೆ ತರಬೇಕು. ದೆಹಲಿಯಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವಾಗ ನಮ್ಮ ಸಿನಿಮಾ ಟ್ರೂಪ್ 'ಮಾಮೂಲು' ನೀಡಿ ಗಡಿ ದಾಟುತ್ತಿರುವುದು ಖೇದಕರ.
ಪ್ರಿಯ ಓದುಗ, ಇದಿಷ್ಟು ಪೃಥ್ವಿರಾಜ್ ರ ಅನುಭವದ ಮಾತುಗಳು.
ಇದೇ ರೀತಿ ನೀವೂ ರಾಜ್ಯದ ಗಡಿ ದಾಟುವಾಗ ಚೆಕ್ ಪೋಸ್ಟ್ ಗಳಲ್ಲಿ 'ಮಾಮೂಲು' ಕೊಟ್ಟಿರುತ್ತೀರಿ ಅಲ್ಲವೇ? ನಿಮಗೂ ಈ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ಈ ಅನ್ಯಾಯದ ಬಗ್ಗೆ ದನಿಯೆತ್ತಿ. ಈ ಮೂಲಕ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು ನೀವೂ ಸಹಕರಿಸಿ.
ಗುಂಡ್ಲುಪೇಟೆಯಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಿನಿಮಾ ಟ್ರೂಪ್ ಸೆರೆಹಿಡಿದಿದೆ. ಈ ಸುದ್ದಿ ಕನಾ೯ಟಕ ಸಕಾ೯ರದ ಗಮನಕ್ಕೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಶಿಸೋಣ.
ಕೃಪೆ : ಮನೋರಮಾ ಆನ್ಲೈನ್
Labels:
ಕನಾ೯ಟಕ,
ಕನಾ೯ಟಕ ಪೊಲೀಸರು,
ಚೆಕ್ ಪೋಸ್ಟ್,
ಪೃಥ್ವೀರಾಜ್,
ಮಲಯಾಳ ಮನೋರಮಾ,
ಲಂಚ
Friday, July 29, 2011
ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...
ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.
ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.
ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ
ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.
ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.
ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು. ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.
ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...
ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.
ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.
ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ
ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.
ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.
ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು. ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.
ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...
ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.
Subscribe to:
Posts (Atom)




