Posts

ಬಚ್ಚಿಡಲು ಬರುವುದಿಲ್ಲ...

ಬ ಚ್ಚಿಡಲು ಬರುವುದಿಲ್ಲ ನನಗೆ ಹಳೆಯ ಕಹಿ ನೆನಪುಗಳ ಮನದ ಕೋಣೆಗೆ ಸದ್ದಿಲ್ಲದೆ ಬರುವ ಆ ಕೆಟ್ಟ ಕನಸುಗಳ... ಮುಚ್ಚಿಡಲು ಬರುವುದಿಲ್ಲ ಒತ್ತರಿಸುವ ಕಂಬನಿಯ ಕಷ್ಟಗಳ ಸರಮಾಲೆಗಳ ನಡುವೆ ಬರುವ ಇಷ್ಟಗಳ ಸಿಂಚನವ.... ಸುಮ್ಮನಿರುವುದಿಲ್ಲ ಮನಸು ಇಂದು ನಾಳಿನ ಚಿಂತೆಯಲಿ ವರ್ತಮಾನದ ಬೇಗುದಿಯಿದೆ ಉಸಿರಾಡುವ ಜೀವದಲಿ ಮರೆಯಲಾಗುವುದಿಲ್ಲ ಅತ್ತರೂ ನೋವು ನಲಿವಿನ ದಿನಗಳ ತೊರೆದು ಹೋಗಲಾರೆನು ಬದುಕು ನಾನಷ್ಟು ಹೇಡಿಯಲ್ಲ! ಸೋಲುವುದಿಲ್ಲ...ದೂರುವುದಿಲ್ಲ ಯಾರು ಏನೇ ಬಗೆದರೂ ಈ ಕ್ಷಣವು ಕ್ಷಣಿಕ ಎನ್ನುತಿರೆ ಮನ ಮತ್ತೆ ನಡೆವೆನು ಹೊಸ ಛಲದಲಿ.

ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?

ಕ ರ್ನಾಟಕದಲ್ಲಿ 'ಪವರ್' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ ಆಯ್ತು. ಅದೂ ಬುರುಡೆ ಬಿಟ್ಟದ್ದೋ ಅಂತಾ ಗೊತ್ತಿಲ್ಲ :) ಅಲ್ಲಾ ಮಾರಾಯ್ರೆ ... ಏನೇ ಹೇಳಿ ಬುರುಡೆ ಅಥವಾ ಇನ್ಯಾವುದೇ ಬಲ್ಬ್ ಉರಿಯಲು ವಿದ್ಯುತ್ ಬೇಕಲ್ವಾ? ವಿದ್ಯುತ್ ಇಲ್ಲದಿದ್ದರೆ ಬಲ್ಬ್ ವಿಷ್ಯ ಯಾಕೆ ಬೇಕು? ಕರ್ನಾಟಕದಲ್ಲಿ ವಿದ್ಯುತ್್ನ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾಕೆ ವಿಫಲವಾಗುತ್ತಿದೆ? (ರಾಜ್ಯದ ರಾಜಕೀಯ ಡೊಂಬರಾಟ ವಿದ್ಯುತ್ತಿಗೇ 'ಶಾಕ್್' ನೀಡಿದೆಯೇ ಎಂಬುದು ನನ್ನ ಅನುಮಾನ) ಸದ್ಯ ಈ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೌರಶಕ್ತಿಯ ಮೊರೆ ಯಾಕೆ ಹೋಗಬಾರದು? ಇಲ್ಲಿ ಲಭ್ಯವಾಗುವಂತಹ ಸೌರಶಕ್ತಿಯನ್ನು ಸದುಪಯೋಗಿಸಿಕೊಂಡರೆ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ತನ್ನು ಪಡೆಯಬಹುದು ಎಂಬ ಯೋಚನೆ ಸರ್ಕಾರಕ್ಕೆ ಹೊಳೆದಿಲ್ಲವೇ? ಇಲ್ಲಿರುವ ಕಟ್ಟಡಗಳ ಮೇಲೆ ಸೋಲಾರ್ ಪೇನಲ್ ಹಾಕಿಸಿದ್ರೆ ಕನಿಷ್ಠ ನಿತ್ಯೋಪಯೋಗಿ ವಿದ್ಯುತ್ ಪಡೆಯಬಹುದು ಎಂಬುದರ ಬಗ್ಗೆ ಜನರು ಯಾಕೆ ಯೋಚನೆ ಮಾಡಲ್ಲ? ಇನ್ನು ನೀರಿನ ಸಮಸ್ಯೆ, ಮಳೆ ನೀರು ಅದೆಷ್ಟು ಪೋಲಾಗುತ್ತಿದೆ? ಇಲ್ಲಿ ಯಾರು ಮಳೆ ನೀರು ಸಂಗ್ರಹದತ್ತ...

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

ಮ ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು. ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು. ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ. ಅವುಗಳು... 1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ) 2. ಟ್ರಾಫಿಕ್ ಜಾಮ್್ನಲ್ಲಿ ಒದ್ದಾಡಿ ಸುಸ್ತಾದಾಗ ಫ್ಲ್ಲಾಟ್್ಫಾರಂನಲ್ಲಿ ಗಾಡಿ ಓಡಿಸಿಕೊಂಡು ಬಂದದ್ದು (ಇನ್ಯಾರೋ ಫ್ಲಾಟ್್ಫಾರಂ ಮೇಲೆ ಗಾಡಿ ಓಡಿಸಿದ್ರೆ ನಂಗೆ ಕೋಪ ಬರುತ್ತೆ) 3. ನಂದಿಬೆಟ್ಟದ 'ಡೇಂಜರ್್' ಎಂದು ಬರೆದಿರುವ ಪ್ರದೇಶದಲ್ಲಿ ಹೋಗಿ ಫೋಟೋ ತೆಗೆಸಿಕೊಂಡದ್ದು ( ಭಯ ಆದ್ರೂ ಚಾಲೆಂಜ್ ಹಾಕಿದ ಕಾರಣ ಮಾತ್ರ ಅಲ್ಲಿಗೆ ಹೋದದ್ದು) ...

ಇವತ್ತು 'ಗಂಡಸರ ದಿನ' ಗೊತ್ತಾ?

ದೃಶ್ಯ 1 ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ... ದೃಶ್ಯ -2 ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ. ದೃಶ್ಯ-3 ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ.... ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ತರ್ಜುಮೆ ಇದು) ದೃಶ್ಯ-4 ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ... ಈ ದೃಶ್ಯ ಮಿಂಚಿ ಮರೆಯಾಗುತ್ತದೆ. ಅಪ್ಪನ ಬಳಿಗೆ ಹಿಂತಿರುಗಿ ಬಂದ ಮಗಳು ವಿಶ್ವಾಸ ಉಳಿಸಿಕೊಂಡಳಲ್ವಾ ಎಂದು ನಿಟ್ಟುಸಿರು ಬಿಟ್ಟು, ಜಾಹೀರಾತು ತಂತ್ರಕ್ಕೆ ಭೇಷ್ ಎನ್ನುವಾಗ ಕೊನೆಯ ದೃಶ್ಯದಲ್ಲಿ ಕಂಡು ಬರುವ ಆ ಹುಡುಗನನ್ನು ಯಾರೂ ಕ್ಯಾರೇ ಅನ್ನಲ್ಲ ಅಲ್ವಾ? ಆಕೆ ಆತನೊಂದಿಗೆ ಮಾಡಿದದ್ದು 'ವಿಶ್ವಾಸ ವಂಚನೆ' ಅಲ್ವಾ ಎಂಬುದು ಹುಡುಗರ ಪ್ರಶ್ನೆ! ಇದೊಂದು ಉದಾಹರಣೆಯಷ್ಟೇ. ಜಾಹೀರಾತು ವಿಷಯ ಬಿಟ್ಹಾಕಿ...

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ. ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ. ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತ...

ದೊಡ್ಡವರಾಗುವುದೆಂದರೆ....?

" ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ. ಆವಾಗ ನನ್ನ ಇನ್ನೊಬ್ಬಳು ಕಸಿನ್, ನಾವೂ ದೊಡ್ಡವರಾದ್ರೆ ಇಷ್ಟೆಲ್ಲಾ ಗೌಜಿ ಮಾಡ್ತಾರಂತೆ, ತುಂಬಾ ಸ್ವೀಟ್ಸ್ ತಿನ್ಬಹುದಲ್ವಾ ಅಂದಿದ್ಳು. ಅದಕ್ಕೆ ಇನ್ನೊಬ್ಬಳು ನಿನ್ನ ಅಕ್ಕ ಮೊದಲು ದೊಡ್ಡವಳಗ್ತಾಳೆ ಮತ್ತೆ ನೀನು ಅಂದಾಗ ನನ್ನ ಅಕ್ಕ ಬೇಗ ದೊಡ್ಡವಳಾಗಲಿ ಆವಾಗ ನನಗೂ ತುಂಬಾ ಸ್ವೀಟ್ಸ್ ತಿನ್ನೋಕೆ ಸಿಗುತ್ತೆ ಅಂತಾ ಪುಟ್ಟ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದೆ. ಅದಿರಲಿ ಬಿಡಿ, ಮನೆಯಲ್ಲಿ ನಾನು ಏನು ಹೇಳಿದ್ರೂ 'ನೀನು ಚಿಕ್ಕವಳು' ಎಂಬ ಮಾತು by Default ಆಗಿ ಎಲ್ಲರ ಬಾಯಿಂದ ಬರುತ್ತಿತ್ತು. ಅದು ಮಾಡಿಕೊಡಲಾ? ಇದು ಮಾಡಬಹುದಾ? ಅಂತಾ ಕೇಳಿದರೂ ಇದೇ ಉತ್ತರ. ಏಳನೇ ಕ್ಲಾಸಿಗೆ ತಲುಪಿದ್ರೂ 'ಚಿಕ್ಕ...

ದೇವರು ಕಾಣೆಯಾಗಿದ್ದಾನೆ...

ಬ್ರೇಕಿಂಗ್ ನ್ಯೂಸ್... ದೇವರು ಕಾಣೆಯಾಗಿದ್ದಾನೆ. ಹೌದಾ? ಹೂಂ... ನಮ್ಮದ್ದಾ ಅವರದ್ದಾ? ಅವರದ್ದಾದರೆ ಬಿಡಿ, ನಮ್ಮದ್ದಾದರೆ ಕಷ್ಟ!! ಟೀವಿ ಪರದೆ ಮುಂದೆ ಕಣ್ಣಿಟ್ಟು ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ ತಡಕಾಡುತ್ತಾರೆ... ಸಿಕ್ಕಿದ್ರಾ? ಮೈಕ್, ಕ್ಯಾಮೆರ ರೆಡಿ... 'ದೇವರು ಕಾಣೆಯಾಗಿದ್ದಾರೆ...' ಯಾವಾಗ? ಬನ್ನಿ ನಮ್ಮ ಪ್ರತಿನಿಧಿಯಲ್ಲಿ ಕೇಳೋಣ.. ದೇವರು ಈವರೆಗೆ ಪತ್ತೆಯಾಗಿಲ್ಲ!! ಅವರಿಗಾಗಿ ಶೋಧ ನಡೆಯುತ್ತಿದ್ದೆ... ಅವರು ಸಿಗುವ ಸಾಧ್ಯತೆ ಇದೆಯೇ? ಬನ್ನಿ ನೋಡೋಣ... ಒಂದು ಪುಟ್ಟ ವಿರಾಮದ ನಂತರ... ದೇವರು ಕೊನೆ ಬಾರಿ ಕಂಡದ್ದು ಯಾರಿಗೆ?... ದೇವರು ಈಗ ಎಲ್ಲಿದ್ದಾರೆ? ನಮ್ಮ ಆಪ್ತರಾಗಿದ್ದರು ಅವರು...ಜನ ಹೇಳುತ್ತಾರೆ ಪುಟಗಟ್ಟಲೆ ಬರೆಯಿರಿ, ಅವರ ಆಪ್ತರ ಯಾರು? ಸಂದರ್ಶನ ನಡೆಸಿ, ಹಳೇ ಫೋಟೋ ಹುಡುಕಿ ಫೋಟೋ ಗ್ಯಾಲರಿ ಮಾಡಿ...ಕ್ಲಿಕ್ ಕಣ್ಣೀರು ಸುರಿಸಿದರು, ದೇವರು ಮುನಿಸಿಕೊಂಡಿದ್ದಾನೆ ಎಂದು ಬಗೆ ಬಗೆಯಾಗಿ ಅವನಲ್ಲಿ ಕ್ಷಮೆ ಕೇಳಿದರು ಅಡ್ಡ ಬಿದ್ದರು, ಸುತ್ತು ಬಂದರು... ಈ ಎಲ್ಲಾ ಕರಾಮತ್ತು ನೋಡಿ "ನಿನ್ನಲ್ಲಿಯೇ ನಾನಿರುವಾಗ ನನ್ನನ್ನು ಹುಡುಕುತ್ತಿಯಲಾ.್ಲ..." ಎಂದು ದೇವರು ನಗುತ್ತಾ ಸುಮ್ಮನಾದ.