Posts

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು. ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು. ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy... ತನ್ನೊಂದಿ...

ಪ್ರೀತಿ -ದೇವರು

ನೀನ್ಯಾಕೆ ನನ್ಮುಂದೆ ನಿನ್ನ ಪ್ರೀತಿ ತೋರಿಸುತ್ತಿಲ್ಲ? ಅವನೆಂದ ಪ್ರೀತಿ ದೇವರಂತೆ! ನಾನು ಪ್ರೀತಿ ತೋರಿಸದಿದ್ದರೂ ನೀನು ನನ್ನನ್ನೇ ಸದಾ ನೆನೆಯುತ್ತಿರುವಿಯಲ್ಲಾ?

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತ...

ವಾಸ್ತವ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗ ಅಮ್ಮ ಹೇಳುತ್ತಿದ್ದಳಾಗ, ಕೈ ಮುಗಿದು ಕಣ್ಮುಚ್ಚಿ ಬೇಡಿದರೆ ಈಶ ಒಲಿವನೆಂದು.. ಸಂಧ್ಯಾವಂದನೆ ವೇಳೆ ದೀಪ ಉರಿಸಿ ನನ್ನ ಅಜ್ಜಿ ರಾಮನಾಮ ಜಪಿಸುತಿರಲು ಕಣ್ಣೆರಡು ಮುಚ್ಚಿ ನಾನೂ ದನಿಗೂಡಿಸುತ್ತಿದ್ದೆ.. ಇರುಳ ಬಾನಂಗಳದಲ್ಲಿ ಕೋಟಿ ತಾರೆಗಳು ಮಿನುಗುವಾಗ ನಿದ್ದೆ ಬರುತ್ತಿಲ್ಲ ತಾತ, ಕತೆ ಹೇಳೆಂದು ಸತಾಯಿಸಿದಾಗ ಸುಮ್ಮನೆ ಕಣ್ಣು ಮುಚ್ಚಿರು ನಿದ್ದೆ ತಂತಾನೆ ಬರುವುದು ಎಂದು ಅಪ್ಪ ಗದರಿಸಿದಾಗ ಕಣ್ಣೆರಡು ಮುಚ್ಚಿ ಮಗ್ಗಲೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ ಬಾಲ್ಯವೆಷ್ಟು ಮಧುರವಾಗಿತ್ತು! ಕಣ್ತೆರೆದರೆ ಸುಂದರ ಲೋಕ ಮುಚ್ಚಿದರೆ ಸ್ವಪ್ನ ಲೋಕಕ್ಕೆ ಪಯಣ ಬೆಳೆಸುತಲಿದ್ದೆ ಕಾಲ ಚಕ್ರವು ತಿರುಗುತಿರಲು ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು, ಸುತ್ತ ಕಣ್ಣು ಹಾಯಿಸಿದರೆ... ಹಗೆ ಹೊಗೆಯಾಡುವ ಜಗದಲ್ಲಿ ನಗೆ ಮಾಸಿದ ಜೋಲು ಮುಖ! ಜೀವ ತೆಗೆಯಲು ಕತ್ತಿ ಮಸೆಯುವ ಜನ, ಇನ್ನೊಂದೆಡೆ, ಜೀವಕ್ಕಾಗಿ ಬೇಡುವ ಮನ ಹಣದಾಸೆಗಾಗಿ ಜೀವ ಹಿಂಡುವವರು, ಬೇಡುವವರು, ಮುಂದೆ ಕೈ ಚಾಚಿ ಜಗದಳುವಿನ ಮುಂದೆ ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ ದನಿಯೆತ್ತಲು ಚಡಪಡಿಸಿ ಸೋತಾಗ ಎರಡು ಹನಿ ಕಣ್ಣೀರೆರೆದು ಮತ್ತೆ, ನನಗಿದರ ಅರಿವೇ ಇಲ್ಲದವನಂತೆ ಕಣ್ಣು ಮುಚ್ಚಿಕೊಳ್ಳುತ್ತೇನೆ!

ದ್ವಂದ್ವ

ನಿರೀಕ್ಷೆಗಳೇ… ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ….. ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ… ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ ಗುರುತ ಮೂಡಿಸಿ ಮತ್ತೊಮ್ಮೆ ಛೇಡಿಸಿ, ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ ಹುಟ್ಟುಹಾಕುವಿರಿ ಅನುಭವದ ಒರತೆಯನು ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ ಜೀವನವ ತೇಯ್ದು ತೆವಳುವಾಗ… ಇದನೇನೆಂದು ಕೊಳ್ಳಲಿ ಶಿಕ್ಷೆಯೇ? ಅಥವಾ ಬದುಕಲಿರುವ ಅಪೇಕ್ಷೆಯೇ???

ನಾನು- ನೀನು

ನಿನಗೆ, ನನ್ನೊಳಗಿನ ಪ್ರೀತಿ ಕಾಣುವುದಿಲ್ಲ ಭೂತ ಕನ್ನಡಿ ಹಿಡಿದು ಹುಡುಕಿದಾಗಲೂ ನನ್ನ ದನಿ ಕೇಳುವುದಿಲ್ಲ ಗಂಟಲು ಬಿರಿದು ನಾನೆಷ್ಟು ಕರೆದರೂ ಮೌನ ಆವರಿಸಿದೆ ಸುತ್ತ ಬರಡು ಜೀವನವೆಂಬ ವ್ಯಥೆಯಲಿ ಕ(ವಿ)ತೆಗಳಿಗೆ ಬರಗಾಲ ಬಂದಿದೆ, ಕೈ ಬಂಧಿ ತೊಡಿಸಿದಾಗ ಮನದಲ್ಲಿ ಬೆಂಕಿ ಉರಿದು ಉಕ್ಕುವವು ಕಣ್ಣ ಹನಿ ಕೊರಗಿ ಕರಗುವ ಚಿತ್ತದಲಿ ಜ್ವಾಲಾಮುಖಿಗಳಂತೆ! ಮತ್ತೊಮ್ಮೆ ಭರವಸೆಯ ಆಗಸದಿ ಭವಿಷ್ಯದ ಹೊಂಗನಸ ಬಿಳಿ ಮೇಘ ವರ್ಷಧಾರೆಯೆರೆದಾಗ ಕನಸ ದೋಣಿಯಲಿ ಸಾಗುವ ಈ ಬಾಳ ಪಯಣ ಪ್ರಕ್ಷುಬ್ದ ಬದುಕಿನಲಿ ನಿನ್ನ ನೆರಳಾಗಿ, ಇನಿಯಾ ಕನಸ ಮಗ್ಗುಲ ಸರಿಸಿ ಕವಲೊಡೆದ ಓಣಿಯಲಿ ಮೆಲ್ಲ ಹೆಜ್ಜೆಯನ್ನಿಡುವಾಗ... ಗಜ್ಜೆ ದನಿಗಳ ಕಂಪು ನಿನ್ನೊಡಲ ಸೇರಿ ದುಗುಡಗಳ ದನಿಯಾಗಿ ಮಾರ್ದನಿಸುವುದೇಕೆ?

ಬದುಕು ಪಯಣ

ಮನೆ ಮುಂದಿನ ಹಾದಿ ಬದಿಯಲಿ ಕೇಕೆ ಹಾಕಿ, ಗೋಲಿಯಾಡುವಾಗ ಹಾಲಿರದ ಎದೆಗಂಟಿದ ಅಳುವ ಕಂದನ ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ ಕಪ್ಪು ಕನ್ನಡಕ ಧರಿಸಿ, ಮನದಲ್ಲಿ ಅಹಂಕಾರ ತುಂಬಿರಲು ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು, ಕಸದ ತೊಟ್ಟಿಯಿಂದ ಕೂಳು ಹೆಕ್ಕಲು ನಾಯಿ, ದನಗಳನ್ನೋಡಿಸುವ ಮನುಜನ ನೋಡಿ ಕೋಲಾ ಕುಡಿದು ತೇಗು ಬಿಟ್ಟಿದ್ದೆ! ಗತ್ತು ಹೊತ್ತಿನಲಿ ಪಯಣ ಬೆಳೆಸುವಾಗ ಕಳ್ಳ ನಿದ್ದೆಯಾವರಿಸಿ, ಸೀಟು ಕಸಿದಿದ್ದೆ, ನಡುಕದಿಂದ ತಾತ ನನ್ನ ಪಕ್ಕ ಸರಿದಾಗ, ಟೈ ಬಿಗಿದು ಕೈ ಕಟ್ಟಿ ಕುಳಿತು, ಹಾಡು ಕೇಳಿದ್ದೆ ಬಾಳ ಪಯಣದಲಿ ತಿಂದು ಬೀಗುತ ಬಣ್ಣ ಬಣ್ಣದ ಬದುಕಿನಲಿ ತೇಲಾಡಿ ಒದ್ದೆ, ಕೊನೆಗೆ ಆಯಾಸದಲಿ ಎಡವಿ ಬಿದ್ದೆ ತುಳಿದರನೆನು ಜನ, ಹಣೆಗೆ ಕೈಯನು ಜಜ್ಜಿ ತಲೆ ಕೂದಲು ಉದುರಿವೆ, ಎಲ್ಲವೂ ಹಣ್ಣು ಹಣ್ಣು ಕಣ್ಣು ಮಂಜಾಗಿವೆ, ಇಲ್ಲ ನಿದ್ದೆ, ನೀರಡಿಕೆ ಬದುಕ ಬಂಜರು ಬಯಲಲಿ ಒಂಟಿ ಕಲ್ಲು ಕೈ ನಡುಗುತಿವೆ, ದೇಹ ಕಂಪಿಸುತಿದೆ ಒಣ ಬೀಡಿಯ ಧೂಮದಲಿ ಉಸಿರುಗಟ್ಟುತಿರುವಾಗ ತಡಕಾಡಿದೆ ಅಂಗಿಯ ಮೂಲೆ ಮೂಲೆಗಳಲ್ಲಿ ಅದಾಗಲೇ ನಿಜವರಿತದ್ದು, ಆಸೆಗಳ ಓಟದಲಿ ನಾನು ಜೇಬು ಹೊಲಿಸಿರಲಿಲ್ಲವೆಂದು!