Posts

ನನ್ನ ಗ್ರಾಮ

ನಿತ್ಯ ಹಚ್ಚ ಹಸುರಾಗಿ ಕಂಗೊಳಿಸುವುದೀ ನನ್ನೂರು ತೆನೆ ತುಂಬಿ ನಿಂತ ಗದ್ದೆ, ಬಾಳೆ ತೆಂಗು ಕಂಗಿನ ತೋಟ ಇಕ್ಕೆಲಗಳಲಿ, ಸುತ್ತಲೂ ಹಬ್ಬಿದ ಬೇಲಿ ಹೂಗಳು.. ಇದು ನನ್ನ ಗ್ರಾಮ...ಆಗಿತ್ತು! ದುಡಿದ ರೈತನಿಗೆ ಬೆಳೆಯು ದಕ್ಕದಿರಲು ಹಚ್ಚ ಹೊಲದಲ್ಲಿ ಕೆಂಬಾವುಟ ಹಾರಿಸಿದ್ದರಂತೆ ನಮ್ಮ ಹಿರಿಯರು, ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು... ಹೋರಾಟ ಮುಂದುವರಿಯಲು ಹೀಗೆ ದಣಿಯು ದಣಿದಿದ್ದ, ಬಡವ ಗೆದ್ದಿದ್ದ ನನ್ನೂರಿನ ಕೆಂಪು ವಿಪ್ಲವವು ಸಮಾನತೆಗೆ ಉಸಿರು ಭೂಮಿ ಹಸುರಾಗಲು ಕೊಂಚ ರಕ್ತವೂ ಚಿಮ್ಮಿತ್ತು, ಅಪ್ಪ ಹೇಳಿದ್ದ ಶಾಂತಿ ನೆಲೆಸಿದ ಈ ಸಮರದ ಜೊತೆಗೆ ಹುತಾತ್ಮರ ಮಂಟಪವೂ ಎದ್ದು ನಿಂತಿತ್ತು. ಇಂದು ಬರಡಾಗಿದೆ ನನ್ನ ಸುಂದರ ಗ್ರಾಮ, ಅಲ್ಲಲ್ಲಿ ಎರಡಂತಸ್ತಿನ ಮಹಲು,ಗೋಪುರ ಹಸಿರನುಳಿಸಲು ಹೋರಾಡಿದ ಜನರೆಲ್ಲಿ? ಅವರೆಂದೋ ಮಣ್ಣು ಪಾಲಾಗಿ, ಅವರ ಮಕ್ಕಳು ಲಾರಿಯಲಿ ತಂದ ಮಣ್ಣನು ಬರಡು ಭೂಮಿಗೆ ಸುರಿದು, ಕೆಂಪು ಇಟ್ಟಿಗೆಯಲಿ ಗೋಡೆ ಕಟ್ಟುತ್ತಿದ್ದಾರೆ...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ.. ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ? ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರ...

ಯಾತ್ರೆ

ಜೀವನದ ಅರ್ಥವನ್ನರಸಿ ಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು... ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲು ಮರಳಿ ಬಾರದ ನಿನ್ನೆಗಳಿಗೆ ವರ್ತಮಾನದೊಳು ಮರುಗಲೆಂತು? ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ ಮಧು ಹೀರಿ ಹಾರುವ ದುಂಬಿಯಂತೆ ಮನದೊಳಗೆ ಹೊಕ್ಕು, ಮುತ್ತನಿಟ್ಟವರು ಮುದುಡಿದಾಗ ತಿಪ್ಪೆಗೆಸೆದರು ಕಸದಂತೆ ಕಳೆದ ನೋವಿಗೆ ತೇಪೆಯನು ಹಚ್ಚಿ, ಸಪ್ತಪದಿ ತುಳಿದಾಗ, ಸಂಸಾರ ಸಾಗರದ ಅಲೆಗಳಿಗೆ ಮರಳ ದಂಡೆಯಾಗಿ ಕಣ್ಣೀರ ಒತ್ತಿ, ನಕ್ಕು ಬಿಟ್ಟಿದ್ದೆ ಮೌನವಾಗಿ ಇಂತು ನನ್ನ ಜೀವನದಿ ಅತಿಥಿಯಾಗಿ ಬಂದವರು, ಕೆಲ ಕಾಲ ನಕ್ಕು, ಮತ್ತೆ ಮಸಿಯೆರಚಿ ಬಂದಣಿಗೆಯಂತೆ ನನ್ನ ರಸ ಹೀರಿ ಚಿಗುರುವಾಗ ಒಣ ವೃಕ್ಷದಂತೆ ನಾ ಧರೆಗುರುಳುತಲಿರುವೆ.

ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ. ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು. ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿ...

ನಾನು ಮತ್ತು ಬದುಕು...

ಮನದ ಮೂಲೆಯಲ್ಲಡಗಿದ ಒಂದಷ್ಟು ದುಗುಡಗಳು ಇನ್ನೊಮ್ಮೆ ನನ್ನ ಮನವನ್ನರಳಿಸಿದ ಒಂದಿಷ್ಟು ಭಾವನೆಗಳನ್ನ ಹೆಕ್ಕಿ ಚಿತ್ತಾರ ಬಿಡಿಸಿದಾಗ ಅದನ್ನು ಕವನವೆಂದು ಗೀಚಿದ್ದೆ... ದುಗುಡ ದುಮ್ಮಾನಗಳು ಎದೆಯ ಕುಕ್ಕಿ ಕಣ್ಣೀರು ಹರಿಸಿದಾಗ ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು ಈ ಜೀವನವ ನಾನಂದು ನರಕವೆಂದು ಕರೆದಿದ್ದೆ.... ಏಳು ಬೀಳುಗಳ ನಡುವೆ ಸಾಗುವುದೀ ಜೀವನವು ಸುಖ ದುಃಖಗಳು ಇವು, ಕ್ಷಣಿಕವೆಂದಾಗ ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ ಕಾಲ ಸರಿಯಲು ಹೀಗೆ.. ಜಗದ ನಿಯಮವಿದೆಂದು ನಾನಾಗ ಅರಿತಿದ್ದೆ.

ನೀನು ನನ್ನವನು...

ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವೆ... ಮಂದ ಮಾರುತವೀಗ ಪ್ರಣಯರಾಗವ ನುಡಿಸಿರಲು ಸುಮಲತೆಯ ನಡುವೆ ದುಂಬಿಗಳ ಚುಂಬನದಿ ಬಿಸಿಯಪ್ಪುಗೆಯ ಸುಖ ನೀಡುವಿಯಂತೆ ಪ್ರೀತಿ ಲೋಕದ ಹಾದಿಯಲಿ ಇದೋ ನಿನಗಾಗಿ ಕಾದಿರುವೆ... ನಿನ್ನ ನಗೆಯಲ್ಲಿ ಲೋಕ ಮರೆಯುವೆನಾಗ ನಿನ್ನ ತೋಳಬಂಧನದಲ್ಲಿ ಒಮ್ಮೆ ಬಂಧಿಯಾಗುವ ಆಸೆ ನಿನ್ನ ಕೈ ಹಿಡಿದು ಮಳೆ ನೆನೆಯುವಾ ಬಯಕೆ ಎಂದೆಂದೂ ನೀ ನನ್ನವನಾಗಿ ಬಿಡು ನೀನು ನನ್ನವನು, ನನ್ನವನು ಮಾತ್ರ ನಾನೆಂದು ನಿನ್ನ ಪ್ರೀತಿಯಾಗಿರುವೆ.

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು. ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು. ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy... ತನ್ನೊಂದಿ...