ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....

ಅಂತೂ ಮಳೆ ಬಂದಿದೆ,
ನಿರೀಕ್ಷೆಯೂ ಮುಗಿದಿದೆ...
ಕಾವ್ಯ ಕೃಷಿಯ ಮೊದಲ ಬೆಳೆ

ನೆನಪಿನ ಮಳೆಯಲ್ಲಿ
ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ.

ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್್ನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಹೂರ್ತ ಇಟ್ಟಾಗಿದೆ.

ನೀವು ಬರುವುದೊಂದು ಬಾಕಿ
ಮತ್ತೆಲ್ಲಾ ಕಾಲ ಮತ್ತು ನಿರೀಕ್ಷೆ....

ನಿಮ್ಮದೇ ನೆನವರಿಕೆಯಲ್ಲಿ,
ರಶ್ಮಿ.

Comments

ಬೆಳೆಸೆ.ಕಾಳು ತುಳುಕಾಡಲಿ
ಹಾರೈಕೆಯೊಂದಿಗೆ...
ಕುಮಾರ
Unknown said…
ರಶ್ಮಿ ನಿಮ್ಮ ಕಾವ್ಯ ಬೆಳೆಯಲಿ
ಎಲ್ಲರ ಮನಸ್ಸುಗಳನ್ನು ಬೆಳಗಲಿ
ನಮ್ಮಲ್ಲಿರುವ ಅ೦ಧಕಾರಗಳನ್ನು ಹೋಗಲಾಡಿಸಲಿ
ಸ೦ತೋಷ ನಮ್ಮಲ್ಲೆಲ್ಲ ಪಸರಿಸಲಿ
ಆತ್ಮಿಯತೆ ಪ್ರೀತಿ ಅನುಕ೦ಪ ಮಾನವಿಯತೆ ಮೆರೆಯಲಿ
ಆ ಸ್ರುಷ್ಟಿ ಕರ್ತನು ನಿಮನ್ನು ಹರಸಲಿ,,,,,,,,,

ಇಸ್ಮಾಯಿಲ್ ಶಿವಮೊಗ್ಗ
Congrats:)
'ಕಾಸರಗೋಡು' ಬರೆದಿದ್ದು ನೋಡಿ ಕುತೂಹಲದಿಂದ
ಇಣುಕಿ ನೋಡಿದೆ, ನಾನು ಕೂಡ ಆ ಊರಿನವಳೇ..ತುಂಬಾ ಚೆನ್ನಾಗಿ ಬರೀತೀರಿ.:)