ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.
ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.
ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ
ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.
ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.
ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು. ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.
ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...
ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.
Friday, July 29, 2011
Saturday, July 16, 2011
ನನ್ನದೂ ಒಂದು
ನೂರು ರುಪಾಯಿಗೆ ಸಿಕ್ಕ
ಫ್ಯಾಷನ್ ಚಪ್ಪಲಿ ಮೆಟ್ಟಿ,
ಅದೇ ಜೀನ್ಸು, ಮೇಲೊಂದು ಟೀ ಶರ್ಟು
ಮತ್ತೊಂದು ಬ್ಯಾಗು, ಪರ್ಸ್...
ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ
ತುಳಿತಕ್ಕೆ ಚೀರಿ,
ನೂಕು ನುಗ್ಗಲಲ್ಲಿ ಚಡಪಡಿಸಿ
ಬಿದ್ದು ಏಳುತಿದೆ ಬದುಕು...
ಅವಸರದಲ್ಲಿ ಅರ್ಧಂಬರ್ಧ ತಿಂದ
ತಿಂಡಿ ಬಸ್ಸಲ್ಲೇ ಜೀರ್ಣವಾಗಿ
ಹೊಸ ಕನಸುಗಳು ಮತ್ತೆ
ಚಿಗುರುತ್ತಿವೆ ಮನಸ್ಸಲ್ಲಿ
ದಾರಿಯಂಗಡಿಗಳಲ್ಲಿ ತೂಗು ಹಾಕಿದ
ಟೀ ಶರ್ಟು, ಸಲ್ವಾರುಗಳು
ಕೈ ಬೀಸಿ ಕರೆಯುತ್ತಿವೆ...
ನೂರು ರುಪಾಯಿ ಇಡಿ ನೋಟು
ಬಸ್ ಪಾಸು, ಐಡಿ ಕಾರ್ಡಿನ ನಡುವೆ
ಬೆಚ್ಚನೆ ಕುಳಿತಿರಲು
ಹಳೇ ರಸೀದಿ ತುಂಡುಗಳು ನಡುಗ
ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ!
ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ
ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ
ಮನೆ ಬಾಡಿಗೆ, ಕ್ರೀಮು, ಪೌಡರು
ಒಂದಷ್ಟು ಮ್ಯಾರಿ ಬಿಸ್ಕತ್ತು!
ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ
ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು
ಕಳೆದು, ಉಳಿದದ್ದನ್ನು ಕೂಡಿಸಿ
ಹೇಗೋ 'ಅಡ್ಜೆಸ್ಟ್' ಮಾಡಿ
ಮುಂದಿನ ಪಗಾರಕ್ಕಾಗಿ ದಿನ ಎಣಿಕೆ
ಶುರುವಾಗಿದೆ...
ಫ್ಯಾಷನ್ ಚಪ್ಪಲಿ ಮೆಟ್ಟಿ,
ಅದೇ ಜೀನ್ಸು, ಮೇಲೊಂದು ಟೀ ಶರ್ಟು
ಮತ್ತೊಂದು ಬ್ಯಾಗು, ಪರ್ಸ್...
ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ
ತುಳಿತಕ್ಕೆ ಚೀರಿ,
ನೂಕು ನುಗ್ಗಲಲ್ಲಿ ಚಡಪಡಿಸಿ
ಬಿದ್ದು ಏಳುತಿದೆ ಬದುಕು...
ಅವಸರದಲ್ಲಿ ಅರ್ಧಂಬರ್ಧ ತಿಂದ
ತಿಂಡಿ ಬಸ್ಸಲ್ಲೇ ಜೀರ್ಣವಾಗಿ
ಹೊಸ ಕನಸುಗಳು ಮತ್ತೆ
ಚಿಗುರುತ್ತಿವೆ ಮನಸ್ಸಲ್ಲಿ
ದಾರಿಯಂಗಡಿಗಳಲ್ಲಿ ತೂಗು ಹಾಕಿದ
ಟೀ ಶರ್ಟು, ಸಲ್ವಾರುಗಳು
ಕೈ ಬೀಸಿ ಕರೆಯುತ್ತಿವೆ...
ನೂರು ರುಪಾಯಿ ಇಡಿ ನೋಟು
ಬಸ್ ಪಾಸು, ಐಡಿ ಕಾರ್ಡಿನ ನಡುವೆ
ಬೆಚ್ಚನೆ ಕುಳಿತಿರಲು
ಹಳೇ ರಸೀದಿ ತುಂಡುಗಳು ನಡುಗ
ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ!
ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ
ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ
ಮನೆ ಬಾಡಿಗೆ, ಕ್ರೀಮು, ಪೌಡರು
ಒಂದಷ್ಟು ಮ್ಯಾರಿ ಬಿಸ್ಕತ್ತು!
ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ
ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು
ಕಳೆದು, ಉಳಿದದ್ದನ್ನು ಕೂಡಿಸಿ
ಹೇಗೋ 'ಅಡ್ಜೆಸ್ಟ್' ಮಾಡಿ
ಮುಂದಿನ ಪಗಾರಕ್ಕಾಗಿ ದಿನ ಎಣಿಕೆ
ಶುರುವಾಗಿದೆ...
Saturday, July 9, 2011
ನಮ್ಮೂರ ಗೋರ್ಮೆಂಟು ಬಾವಿ
"ಊರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು.
ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ .
ಸಂಜೆ ವೇಳೆಗೆ ನೋಡ್ಬೇಕಪ್ಪಾ...ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ...ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ 'ಗಂಡ' ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದು ಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ.
ಇತ್ತ, ತಲೆಯಲ್ಲೊಂದು ಪಾತ್ರೆ, ಸೊಂಟದಲ್ಲೊಂದು ಕೊಡ ಸಿಕ್ಕಿಸಿ ನಡೆಯುವಾಗ ಒದ್ದೆ ಲಂಗ ಕಾಲೆಡೆಯಲ್ಲಿ ಸಿಕ್ಕಿ ಬ್ಯಾಲೆನ್ಸ್ ಮಾಡುವ ಅಮ್ಮಂದಿರು...ನೈಟಿ ಹಾಕಿದ ಆಂಟಿಯರು, ಚೂಡಿದಾರದ ಹುಡ್ಗೀರು ಎಲ್ಲರೂ ಉಸ್ಸಪ್ಪಾ...ಎಂದು ನೀರು ಸೇದುತ್ತಿರುವುದು ಸಾಮಾನ್ಯ ದೃಶ್ಯ. ಸಂಜೆ ನಾಲ್ಕು ಗಂಟೆ ಆಯ್ತು ಎಂದರೆ ಇಲ್ಲಿ ಗೌಜಿಯೋ ಗೌಜಿ. ಸಂಜೆ ಕಾಫಿ ಆಯ್ತಾ? ರಾತ್ರಿ ಊಟಕ್ಕೆ ಮೀನು ಸಿಕ್ಕಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಂದ ಆರಂಭವಾಗಿ ಮೀನು ಮಾರುವ ಮೊಮ್ಮದ್ ಇಂದು ಬಂದಿಲ್ಲ ಯಾಕೆ? ಕಂತಿಗೆ ಬಟ್ಟೆ ಕೊಡುವ ಅಣ್ಣಾಚಿಯಿಂದ ಖರೀದಿಸಿದ ಹೊಸ ಸೀರೆ, ಧಾರವಾಹಿ, ಸಿನೆಮಾಗಳೂ ಇಲ್ಲಿ ಚರ್ಚೆಯಾಗುವುದುಂಟು.
ಇನ್ನು ಕೆಲವೊಮ್ಮೆ ಯಾವುದೋ ಮನೆಯ ಸಂಭ್ರಮದ ಬಗ್ಗೆ, ಕಳೆದ ರಾತ್ರಿ ಪಕ್ಕದ ಮನೆಯಲ್ಲಿ ಕೇಳಿಬಂದ ಬೆಕ್ಕಿನ ಸದ್ದಿನ ಬಗ್ಗೆ, ಯಾವುದೊ ಮುರಿದ ಸಂಬಂಧಗಳು, ಹೊಸ ಸಂಬಂಧಗಳು, ಓಡಿ ಹೋದವರ ಕಥೆ ಎಲ್ಲವೂ ಮಸಾಲೆ ಮಿಶ್ರಿತವಾಗಿ ಅವರಿವರ ಬಾಯಲ್ಲಿ ಸೇರಿ ಮೆಗಾ ಧಾರವಾಹಿಗಳಾಗಿ ಬಿಡುತ್ತವೆ.. ಕೆಲವರಂತೂ ಈ ಗಾಸಿಪ್್ಗಳನ್ನು ಕೇ(ಹೇ)ಳುವ ಸಲುವಾಗಿಯೇ ನೀರಿಗೆ ಬಂದಿರುತ್ತಾರೆ. ಅಮ್ಮನ ಜತೆ ಬಂದ ಮಗಳನ್ನು ಕಣ್ಣಲ್ಲೇ ಅಳೆದು ನೋಡಿ 'ದೊಡ್ಡವಳಾಗಿದ್ದಾಳಾ?' ಎಂದು ಕೇಳುವುದು ಮಾಮೂಲಿ. ಅಮ್ಮ ಹೇಳುತ್ತಿರುತ್ತಾರೆ, ಮೊದಲೆಲ್ಲಾ ಮೈಲಿಗೆಯಾದ ಹೆಂಗಸರು ಆ ನೀರು ಮುಟ್ಟವಂತಿರಲಿಲ್ಲವಂತೆ. ಆದ್ರೆ ಈವಾಗ ಮಡಿ ಮೈಲಿಗೆ ಅಂತಾ ಯಾರೂ ಹೇಳಿಕೊಳ್ಳೋದಕ್ಕೆ ಹೋಗಲ್ಲ...ಯಾರಿಗೂ ಈ ಬಗ್ಗೆ ತಕರಾರು ಇಲ್ಲ.
ಅದಿರಲಿ ಬಿಡಿ, ಊರಿಗೆ ಬಂದವಳು ನೀರಿಗೆ ಬಾರದಿರುವಳೇ? ಎಂಬಂತೆ ಮದುವೆಯಾಗಿ ಹೊಸ ಹೆಣ್ಣೊಂದು ಊರಿಗೆ ಬಂದರೆ ಬಾವಿ ಕಟ್ಟೆ ಬಳಿಯೇ ಅವಳ ಬಯೋಡಾಟಾ ಕೇಳಲಾಗುತ್ತದೆ. ಈ ಹುಡುಗಿಯಂತೂ ಎಲ್ಲರ ಪ್ರಶ್ನೆಗೆ ಉತ್ತರಿಸಲೇ ಬೇಕು. ಇಲ್ಲದಿದ್ದರೆ ಅವಳ ಅತ್ತೆಯಲ್ಲಿ ನಿಮ್ಮ ಸೊಸೆಗೆ ಅದೆಷ್ಟು ಸೊಕ್ಕು ಎಂದು ಯಾರಾದ್ರೂ ಹೇಳಿ ಬಿಟ್ಟರೆ!. ಅತ್ತೆಯ ಬಗೆಗಿನ ಗುಟ್ಟುಗಳನ್ನು ರಟ್ಟು ಮಾಡಲು ಸೊಸೆಯನ್ನೇ ಏಜೆಂಟ್ ಆಗಿ ಇಟ್ಟು ಕೊಳ್ಳುವ 'ಅತ್ತೆ ವಿರೋಧಿ' ಪಕ್ಷದವರೂ ಸುಮ್ಮನಿರುತ್ತಾರೆಯೇ?
ನೀರಿಗೆ ಬರುವ ನೀರೆಯರ ವಿಷಯಗಳ ಜತೆಗೆ ಗಂಡಸರ ವಿಷಯ ಹೇಳದಿದ್ದರೆ ಹೇಗಪ್ಪಾ? ಕೂಲಿ ಮಾಡುವ ಗಂಡಸರೇ ಜಾಸ್ತಿ ಇರುವ ಈ ಊರಲ್ಲಿ ಸಂಜೆ ವೇಳೆಗೆ ಮಾತ್ರ ಗಂಡಸರು ನೀರಿಗಾಗಿ, ಸ್ನಾನಕ್ಕಾಗಿ ಬಂದಿರುತ್ತಾರೆ. ಬಾವಿ ಕಟ್ಟೆಯ ಪಕ್ಕದಲ್ಲೇ ಪರಿಮಳಭರಿತವಾದ ಸೋಪುಗಳಿಂದ ನೊರೆ ಬರಿಸಿ, ಕೊಡಪಾನದಲ್ಲಿನ ನೀರನ್ನು 'ಧೋ' ಎಂದು ಸುರಿದು ಸ್ನಾನ ಮಾಡುವ ಜವ್ವನಿಗರೇ ಜಾಸ್ತಿ. ಬಾವಿಕಟ್ಟೆಯ ಮೇಲೇ ಸೋಪು ಇರಿಸಿ ಅದು ಜಾರಿ (ಕೆಲವೊಮ್ಮೆ ಒಳಚಡ್ಡಿ) ಬಾವಿಗೆ ಬಿದ್ದದ್ದೂ ಉಂಟು. ಆದ್ರೂ ಅವರ ಸ್ನಾನಕ್ಕಾಗಲೀ, ಬಾವಿ ನೀರಿಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ. ಸುಮಾರು 26 ಅಡಿಯಿರುವ ಈ ಬಾವಿಯ ತಳದಲ್ಲಿ ಅದೆಷ್ಟು ಕೊಡಪಾನಗಳು, ಚಡ್ಡಿಗಳು, ಸೋಪುಗಳು ಬಿದ್ದು ಮೀನು ಕಪ್ಪೆಯ ಜತೆಗೆ ಗುದ್ದಾಟ ನಡೆಸುತ್ತಿವೆಯೋ ಎಂಬುದನ್ನು ದೇವರೇ ಬಲ್ಲ!.
ಇರಲಿ, ಇಷ್ಟೊಂದು ಎಂಟರ್್ಟೈನ್್ಮೆಂಟ್ ಜತೆಗೆ ಫೈಟಿಂಗ್ ಇರದಿದ್ದರೆ ಬೋರ್ ಅನಿಸಲ್ವಾ? ಅದೂ ಇರುತ್ತೆ ಕಣ್ರೀ..ನಮಗೆ ಆಗದವರು (ಕುಟುಂಬದ ಜತೆ ಕೋಪ ಇದ್ದವರು) ನಮ್ಮ ಹಗ್ಗ ಮುಟ್ಟಿದರೆ ಇಲ್ಲಿ ಜಗಳ ಗ್ಯಾರೆಂಟಿ. ಇನ್ನು ನನ್ನ ಮಗಳನ್ನು ನಿನ್ನ ಮಗ ನೋಡಿದ, ನಿನ್ನ ಮಗಳು ಅವನತ್ತ ನೋಡ್ತಾನೆ ಇದ್ಳು, ಮಕ್ಕಳ ಜಗಳ, ಅವರಿವರ ಚಾಡಿ ಮಾತು ಕೇಳಿ ರಂಪಾಟ ಮಾಡಿ 'ಧುಮ್ಮಿಕ್ಕುವ ನೀರೆ'ಯರೂ ಈ ಬಾವಿಕಟ್ಟೆಯನ್ನೇ ರಣರಂಗವಾಗಿಸಿದ್ದೂ ಇದೆ. ಅದ್ರೂ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ? ಮತ್ತೆ ಅದೇ ಬಾವಿ... ಅದೇ ನೀರು... ಅವರಿಗೆ ಆಸರೆಯಾಗುತ್ತೆ. ಅಲ್ಲಿಗೆ ಬರುವ ಜನರು ಪರಸ್ಪರ ಕಚ್ಚಾದಿದ್ದರೂ ಎಲ್ಲರೂ ಕುಡಿಯುವ ನೀರೊಂದೇ ಎಂಬಂತೆ ಸಾಮರಸ್ಯ ಹಾಡುವ ನಮ್ಮೂರ ಗೋರ್ಮೆಂಟ್ ಬಾವಿ ಈವರೆಗೆ ಬತ್ತಿ ಹೋಗಿಲ್ಲ ಎಂಬುದೇ ನಮ್ಮ ಪಾಲಿಗೆ ಸಮಾಧಾನಕರ ಸಂಗತಿ.
ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ .
ಸಂಜೆ ವೇಳೆಗೆ ನೋಡ್ಬೇಕಪ್ಪಾ...ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ...ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ 'ಗಂಡ' ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದು ಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ.
ಇತ್ತ, ತಲೆಯಲ್ಲೊಂದು ಪಾತ್ರೆ, ಸೊಂಟದಲ್ಲೊಂದು ಕೊಡ ಸಿಕ್ಕಿಸಿ ನಡೆಯುವಾಗ ಒದ್ದೆ ಲಂಗ ಕಾಲೆಡೆಯಲ್ಲಿ ಸಿಕ್ಕಿ ಬ್ಯಾಲೆನ್ಸ್ ಮಾಡುವ ಅಮ್ಮಂದಿರು...ನೈಟಿ ಹಾಕಿದ ಆಂಟಿಯರು, ಚೂಡಿದಾರದ ಹುಡ್ಗೀರು ಎಲ್ಲರೂ ಉಸ್ಸಪ್ಪಾ...ಎಂದು ನೀರು ಸೇದುತ್ತಿರುವುದು ಸಾಮಾನ್ಯ ದೃಶ್ಯ. ಸಂಜೆ ನಾಲ್ಕು ಗಂಟೆ ಆಯ್ತು ಎಂದರೆ ಇಲ್ಲಿ ಗೌಜಿಯೋ ಗೌಜಿ. ಸಂಜೆ ಕಾಫಿ ಆಯ್ತಾ? ರಾತ್ರಿ ಊಟಕ್ಕೆ ಮೀನು ಸಿಕ್ಕಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಂದ ಆರಂಭವಾಗಿ ಮೀನು ಮಾರುವ ಮೊಮ್ಮದ್ ಇಂದು ಬಂದಿಲ್ಲ ಯಾಕೆ? ಕಂತಿಗೆ ಬಟ್ಟೆ ಕೊಡುವ ಅಣ್ಣಾಚಿಯಿಂದ ಖರೀದಿಸಿದ ಹೊಸ ಸೀರೆ, ಧಾರವಾಹಿ, ಸಿನೆಮಾಗಳೂ ಇಲ್ಲಿ ಚರ್ಚೆಯಾಗುವುದುಂಟು.
ಇನ್ನು ಕೆಲವೊಮ್ಮೆ ಯಾವುದೋ ಮನೆಯ ಸಂಭ್ರಮದ ಬಗ್ಗೆ, ಕಳೆದ ರಾತ್ರಿ ಪಕ್ಕದ ಮನೆಯಲ್ಲಿ ಕೇಳಿಬಂದ ಬೆಕ್ಕಿನ ಸದ್ದಿನ ಬಗ್ಗೆ, ಯಾವುದೊ ಮುರಿದ ಸಂಬಂಧಗಳು, ಹೊಸ ಸಂಬಂಧಗಳು, ಓಡಿ ಹೋದವರ ಕಥೆ ಎಲ್ಲವೂ ಮಸಾಲೆ ಮಿಶ್ರಿತವಾಗಿ ಅವರಿವರ ಬಾಯಲ್ಲಿ ಸೇರಿ ಮೆಗಾ ಧಾರವಾಹಿಗಳಾಗಿ ಬಿಡುತ್ತವೆ.. ಕೆಲವರಂತೂ ಈ ಗಾಸಿಪ್್ಗಳನ್ನು ಕೇ(ಹೇ)ಳುವ ಸಲುವಾಗಿಯೇ ನೀರಿಗೆ ಬಂದಿರುತ್ತಾರೆ. ಅಮ್ಮನ ಜತೆ ಬಂದ ಮಗಳನ್ನು ಕಣ್ಣಲ್ಲೇ ಅಳೆದು ನೋಡಿ 'ದೊಡ್ಡವಳಾಗಿದ್ದಾಳಾ?' ಎಂದು ಕೇಳುವುದು ಮಾಮೂಲಿ. ಅಮ್ಮ ಹೇಳುತ್ತಿರುತ್ತಾರೆ, ಮೊದಲೆಲ್ಲಾ ಮೈಲಿಗೆಯಾದ ಹೆಂಗಸರು ಆ ನೀರು ಮುಟ್ಟವಂತಿರಲಿಲ್ಲವಂತೆ. ಆದ್ರೆ ಈವಾಗ ಮಡಿ ಮೈಲಿಗೆ ಅಂತಾ ಯಾರೂ ಹೇಳಿಕೊಳ್ಳೋದಕ್ಕೆ ಹೋಗಲ್ಲ...ಯಾರಿಗೂ ಈ ಬಗ್ಗೆ ತಕರಾರು ಇಲ್ಲ.
ಅದಿರಲಿ ಬಿಡಿ, ಊರಿಗೆ ಬಂದವಳು ನೀರಿಗೆ ಬಾರದಿರುವಳೇ? ಎಂಬಂತೆ ಮದುವೆಯಾಗಿ ಹೊಸ ಹೆಣ್ಣೊಂದು ಊರಿಗೆ ಬಂದರೆ ಬಾವಿ ಕಟ್ಟೆ ಬಳಿಯೇ ಅವಳ ಬಯೋಡಾಟಾ ಕೇಳಲಾಗುತ್ತದೆ. ಈ ಹುಡುಗಿಯಂತೂ ಎಲ್ಲರ ಪ್ರಶ್ನೆಗೆ ಉತ್ತರಿಸಲೇ ಬೇಕು. ಇಲ್ಲದಿದ್ದರೆ ಅವಳ ಅತ್ತೆಯಲ್ಲಿ ನಿಮ್ಮ ಸೊಸೆಗೆ ಅದೆಷ್ಟು ಸೊಕ್ಕು ಎಂದು ಯಾರಾದ್ರೂ ಹೇಳಿ ಬಿಟ್ಟರೆ!. ಅತ್ತೆಯ ಬಗೆಗಿನ ಗುಟ್ಟುಗಳನ್ನು ರಟ್ಟು ಮಾಡಲು ಸೊಸೆಯನ್ನೇ ಏಜೆಂಟ್ ಆಗಿ ಇಟ್ಟು ಕೊಳ್ಳುವ 'ಅತ್ತೆ ವಿರೋಧಿ' ಪಕ್ಷದವರೂ ಸುಮ್ಮನಿರುತ್ತಾರೆಯೇ?
ನೀರಿಗೆ ಬರುವ ನೀರೆಯರ ವಿಷಯಗಳ ಜತೆಗೆ ಗಂಡಸರ ವಿಷಯ ಹೇಳದಿದ್ದರೆ ಹೇಗಪ್ಪಾ? ಕೂಲಿ ಮಾಡುವ ಗಂಡಸರೇ ಜಾಸ್ತಿ ಇರುವ ಈ ಊರಲ್ಲಿ ಸಂಜೆ ವೇಳೆಗೆ ಮಾತ್ರ ಗಂಡಸರು ನೀರಿಗಾಗಿ, ಸ್ನಾನಕ್ಕಾಗಿ ಬಂದಿರುತ್ತಾರೆ. ಬಾವಿ ಕಟ್ಟೆಯ ಪಕ್ಕದಲ್ಲೇ ಪರಿಮಳಭರಿತವಾದ ಸೋಪುಗಳಿಂದ ನೊರೆ ಬರಿಸಿ, ಕೊಡಪಾನದಲ್ಲಿನ ನೀರನ್ನು 'ಧೋ' ಎಂದು ಸುರಿದು ಸ್ನಾನ ಮಾಡುವ ಜವ್ವನಿಗರೇ ಜಾಸ್ತಿ. ಬಾವಿಕಟ್ಟೆಯ ಮೇಲೇ ಸೋಪು ಇರಿಸಿ ಅದು ಜಾರಿ (ಕೆಲವೊಮ್ಮೆ ಒಳಚಡ್ಡಿ) ಬಾವಿಗೆ ಬಿದ್ದದ್ದೂ ಉಂಟು. ಆದ್ರೂ ಅವರ ಸ್ನಾನಕ್ಕಾಗಲೀ, ಬಾವಿ ನೀರಿಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ. ಸುಮಾರು 26 ಅಡಿಯಿರುವ ಈ ಬಾವಿಯ ತಳದಲ್ಲಿ ಅದೆಷ್ಟು ಕೊಡಪಾನಗಳು, ಚಡ್ಡಿಗಳು, ಸೋಪುಗಳು ಬಿದ್ದು ಮೀನು ಕಪ್ಪೆಯ ಜತೆಗೆ ಗುದ್ದಾಟ ನಡೆಸುತ್ತಿವೆಯೋ ಎಂಬುದನ್ನು ದೇವರೇ ಬಲ್ಲ!.
ಇರಲಿ, ಇಷ್ಟೊಂದು ಎಂಟರ್್ಟೈನ್್ಮೆಂಟ್ ಜತೆಗೆ ಫೈಟಿಂಗ್ ಇರದಿದ್ದರೆ ಬೋರ್ ಅನಿಸಲ್ವಾ? ಅದೂ ಇರುತ್ತೆ ಕಣ್ರೀ..ನಮಗೆ ಆಗದವರು (ಕುಟುಂಬದ ಜತೆ ಕೋಪ ಇದ್ದವರು) ನಮ್ಮ ಹಗ್ಗ ಮುಟ್ಟಿದರೆ ಇಲ್ಲಿ ಜಗಳ ಗ್ಯಾರೆಂಟಿ. ಇನ್ನು ನನ್ನ ಮಗಳನ್ನು ನಿನ್ನ ಮಗ ನೋಡಿದ, ನಿನ್ನ ಮಗಳು ಅವನತ್ತ ನೋಡ್ತಾನೆ ಇದ್ಳು, ಮಕ್ಕಳ ಜಗಳ, ಅವರಿವರ ಚಾಡಿ ಮಾತು ಕೇಳಿ ರಂಪಾಟ ಮಾಡಿ 'ಧುಮ್ಮಿಕ್ಕುವ ನೀರೆ'ಯರೂ ಈ ಬಾವಿಕಟ್ಟೆಯನ್ನೇ ರಣರಂಗವಾಗಿಸಿದ್ದೂ ಇದೆ. ಅದ್ರೂ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ? ಮತ್ತೆ ಅದೇ ಬಾವಿ... ಅದೇ ನೀರು... ಅವರಿಗೆ ಆಸರೆಯಾಗುತ್ತೆ. ಅಲ್ಲಿಗೆ ಬರುವ ಜನರು ಪರಸ್ಪರ ಕಚ್ಚಾದಿದ್ದರೂ ಎಲ್ಲರೂ ಕುಡಿಯುವ ನೀರೊಂದೇ ಎಂಬಂತೆ ಸಾಮರಸ್ಯ ಹಾಡುವ ನಮ್ಮೂರ ಗೋರ್ಮೆಂಟ್ ಬಾವಿ ಈವರೆಗೆ ಬತ್ತಿ ಹೋಗಿಲ್ಲ ಎಂಬುದೇ ನಮ್ಮ ಪಾಲಿಗೆ ಸಮಾಧಾನಕರ ಸಂಗತಿ.
Subscribe to:
Posts (Atom)